Tag: airshow

  • ರಕ್ಷಣಾ ವಲಯದಲ್ಲಿ ಭಾರತ ಸುಭದ್ರವಾಗಿದೆ

    ರಕ್ಷಣಾ ವಲಯದಲ್ಲಿ ಭಾರತ ಸುಭದ್ರವಾಗಿದೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    ಬೆಂಗಳೂರು: ಚುನಾವಣಾ ರಾಜ್ಯ ಕರ್ನಾಟಕಕ್ಕೆ ಪದೇ ಪದೇ ಕೇಂದ್ರದ ನಾಯಕರು ಬಂದು ಹೋಗ್ತಿದ್ದಾರೆ. ಅಮಿತ್ ಶಾ (Amitshah) ಮತ್ತು ಮೋದಿ (Narendra Modi) ಅಂತು ವಾರದಲ್ಲಿ ಎರಡೆರಡು ಬಾರಿ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಬಿಜೆಪಿ ಅಲೆ ಸೃಷ್ಟಿಗೆ ಮುಂದಾಗಿದ್ದಾರೆ. ಇದೇ ವೇಳೆ ಇಂದು ಬೆಂಗಳೂರು ಏರ್ ಶೋ (Bengaluru AirShow) ಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭಾನುವಾರವೇ ಬೆಂಗಳೂರಿಗೆ ಆಗಮಿಸಿದ್ದಾರೆ.

    ಭಾನುವಾರ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಮೋದಿ ಇಂದು ಯಲಹಂಕ ವಾಯುನೆಲೆಯಲ್ಲಿ ಏರ್ ಶೋಗೆ ಚಾಲನೆ ನೀಡಲಿದ್ದಾರೆ. ವಾರದಲ್ಲಿ 2ನೇ ಬಾರಿಗೆ ಬೆಂಗಳೂರಿಗೆ ಮೋದಿ ಭೇಟಿ ನೀಡ್ತಿದ್ದ ಈ ಮೂಲಕ ಬೆಂಗಳೂರು ಮತದಾರರ ಮನಗೆಲ್ಲಲು ದಾಳ ಹೂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮೋದಿ: ನಾಡಿನ ಗಣ್ಯರ ಜೊತೆ ಸಂವಾದ

    ಬಿಗಿ ಪೊಲೀಸ್ ಭದ್ರತೆ: ನರೇಂದ್ರ ಮೋದಿ ಇಂದು ಏರೋ ಶೋ ಉದ್ಘಾಟನೆಗೆ ಹೋಗುವ ರಸ್ತೆಯ ಉದ್ದಗಲಕ್ಕೂ ಖಾಕಿ ಸರ್ಪಗಾವಲು ಮಾಡಲಾಗಿದೆ. ರಾಜಭವನ (Rajabhavana) ದಿಂದ ಮೇಕ್ರಿ ಸರ್ಕಲ್‍ವರೆಗೂ 300 ಸಂಚಾರಿ ಪೊಲೀಸರು, 500ಕ್ಕೂ ಹೆಚ್ಚು ಲಾ ಅಂಡ್ ಅರ್ಡರ್ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಏರೋ ಶೋ (Air Show) ನಡೆಯುವ ಸ್ಥಳದಲ್ಲಿ ಕೆಎಆರ್‍ಪಿ ತುಕಡಿ ಹಾಗೂ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಧಾನಿ ರಾಜಭವನದಿಂದ ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಮೆಕ್ರಿ ಸರ್ಕಲ್ ಹೆಚ್‍ಕ್ಯೂಟಿಸಿಗೆ ಹೋಗಿ ಅಲ್ಲಿಂದ ಏರೋ ಶೋ ನಡೆಯುತ್ತಿರೋ ಸ್ಥಳಕ್ಕೆ ಹೆಲಿಕಾಪ್ಟರ್‍ನಲ್ಲಿ ತಲುಪಲಿದ್ದಾರೆ. ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಬೊಮ್ಮಾಯಿ

    ಎಲ್ಲೆಲ್ಲಿ ಸಂಚಾರ ನಿರ್ಬಂಧ: ಇತ್ತ ಏರ್‌ ಪೋರ್ಟ್ ರಸ್ತೆ (Airport Road) ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹೇರಲಾಗಿದೆ. ಹೆಬ್ಬಾಳದ ಎಸ್ಟಿಮ್ ಮಾಲ್‍ನಿಂದ ಯಲಹಂಕವರೆಗೆ ನಿಷೇಧ ಹೇರಲಾಗಿದೆ. ಏರ್ ಶೋಗೆ ತೆರಳುವ ವಾಹನ ಸವಾರರು ನಿಗದಿತ ಪಾಸ್ ತೋರಿಸಿ ಫ್ಲೈ ಓವರ್ ಮೇಲೆ ತೆರಳಬಹುದು. ಯಲಹಂಕ, ಕೊಡಿಗೆಹಳ್ಳಿ, ಬ್ಯಾಟರಾಯನಪುರ ಸುತ್ತಮುತ್ತಲಿನ ಸಾರ್ವಜನಿಕರು ಫ್ಲೈ ಓವರ್ ಕೆಳಭಾಗದ ಸರ್ವಿಸ್ ರಸ್ತೆ ಬಳಸಲು ಸೂಚನೆ ನೀಡಲಾಗಿದೆ. ಕೆಐಎಎಲ್‍ಗೆ ತೆರಳುವ ಪ್ರಯಾಣಿಕರು ಹೆಣ್ಣೂರು ಜಂಕ್ಷನ್ ಮುಖಾಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಏರ್‌ ಪೋರ್ಟ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕ ವಾಹನಗಳಿಗೆ ನಿಷೇಧ ಹೇರಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

    ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

    ವಾಷಿಂಗ್ಟನ್: ಏರ್‌ಪೋರ್ಟ್‍ನಲ್ಲಿ (Airport) ನಡೆದ ಏರ್ ಶೋನಲ್ಲಿ (Airshow) ಪರಸ್ಪರ 2 ವಿಮಾನಗಳು (Fighter Plane) ಡಿಕ್ಕಿ ಹೊಡೆದು ಸ್ಪೋಟಗೊಂಡು 6 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಟೆಕ್ಸಾಸ್‍ನ ಡಲ್ಲಾಸ್‍ನಲ್ಲಿ ನಡೆದಿದೆ.

    ಏರ್ ಶೋ ಪ್ರದರ್ಶನದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ 2 ವಿಮಾನಗಳು ಸ್ಫೋಟಗೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏರ್ ಶೋದಲ್ಲಿ ಭಾಗವಹಿಸಿರುವ ಜನರು ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ.

    2 ವಿಮಾನಗಳಾದ ಬಿ -17 ಬೊಂಬರ್ ಹಾಗೂ ಬೆಲ್ ಪಿ-63 ಕಿಂಗ್ ಕೋಬ್ರಾ ವಿಮಾನಗಳು ಏರ್‌ ಶೋನಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಬಿ – 17 ಬೊಂಬರ್ ವಿಮಾನಕ್ಕೆ ಬೆಲ್ ಪಿ -63 ವಿಮಾನ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಈ ವೇಳೆ ವಿಮಾನವೆರಡಕ್ಕೂ ಬೆಂಕಿ ಹೊತ್ತಿಕೊಂಡು ಛಿದ್ರವಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೋದಿ ಹಾದಿಯಲ್ಲೆ ಸಿದ್ದರಾಮಯ್ಯ – ಜಾತಿ, ಧರ್ಮ ಸಮೀಕರಣಕ್ಕೆ ರಣತಂತ್ರ

    ಘಟನೆ ಬಳಿಕ ತುರ್ತು ಘಟಕ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು ಘಟನೆ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಯುದ್ಧವಿಮಾನ ಅವಘಡಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಎರಡು ವಿಮಾನಗಳು ಯುದ್ಧ ಕಾಲದ ವಿಮಾನಗಳಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ಬೆಂಗಳೂರು: ಏರ್ ಶೋ ಆರಂಭಗೊಳ್ಳುವ ಮುನ್ನ ದಿನವೇ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿವೆ.

    ನಗರದ ಯಲಹಂಕದಲ್ಲಿ ಎರಡು ಸೂರ್ಯ ಕಿರಣ್ ವಿಮಾನಗಳು ಹಾರಾಟ ನಡೆಸುತ್ತಿದ್ದಾಗ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದು ಬಳಿಕ ನೆಲಕ್ಕೆ ವಿಮಾನಗಳು ಬಿದ್ದಿದ್ದು, ವಿಮಾನದಲ್ಲಿದ್ದ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಳೆದ 1 ವಾರದಿಂದ ವಿಮಾನಗಳು ತಾಲೀಮುಗಳನ್ನು ನಡೆಸುತ್ತಿದ್ದು, ನಾಳೆ ಏರೋ ಇಂಡಿಯಾ ಶೋ ಅಧಿಕೃತವಾಗಿ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋದಿಂದಾಗಿ ನಡೆಯಿತು ನಾಗರಹಾವುಗಳ ಮಾರಣ ಹೋಮ..!

    ಏರ್ ಶೋದಿಂದಾಗಿ ನಡೆಯಿತು ನಾಗರಹಾವುಗಳ ಮಾರಣ ಹೋಮ..!

    ಬೆಂಗಳೂರು: ಇಲ್ಲಿನ ಯಲಹಂಕದ ವಾಯನೆಲೆಯಲ್ಲಿ ಏರ್ ಶೋ ಕಾರ್ಯಕ್ರಮವೇನು ಅದ್ಧೂರಿಯಾಗಿ ನಡೆಯಿತು. ಆದ್ರೆ ಏರ್ ಶೋನಿಂದಾಗಿ ನಾಗರಹಾವುಗಳ ಮಾರಣ ಹೋಮವೇ ನಡೆದು ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಹೌದು. ಏರ್ ಶೋ ನಡೆಯುವ ಸ್ಥಳ ಹಾವಿನ ವಾಸಸ್ಥಳವಾಗಿದೆ. ಏರ್ ಶೋ ಸಂದರ್ಭದಲ್ಲಿ ಭೂಮಿ ಕಂಪಿಸುತ್ತಿತ್ತು. ಈ ವೇಳೆ ಬೆದರಿ ಹಾವುಗಳು ಹೊರಬಂದಿದ್ದವು. ಜನಸಂದಣಿ ಹೆಚ್ಚಿದ್ರಿಂದ ಭೀತಿಗೊಂಡ ಜನ ಹಾವಿಗೆ ಕಲ್ಲು ಎಸೆದು ಕೊಂದಿದ್ದರು. ಕೊನೆಗೆ ವಿಷಯ ತಿಳಿದ ಸ್ನೇಕ್ ಶಿವಪ್ಪ, ಬರೋಬ್ಬರಿ ಬರೋಬ್ಬರಿ 27 ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಮಾತ್ರವಲ್ಲದೇ ಹಾವುಗಳ ಮಾರಣಹೋಮದಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    3 ವರ್ಷದ ಏರ್ ಶೋನಲ್ಲಿ ಐವತ್ತು ಹಾವನ್ನು ಕೊಂದು ಹಾಕಿದ್ದಾರೆ ಎಂದು ಆರೋಪ ಮಾಡಿದ ಶಿವಪ್ಪ, ನಾಗರಹಾವು ಕೊಂದ ಪಾಪ ಅವರಿಗೆ ಅಂಟಿಕೊಳ್ಳುತ್ತೆ. ಏರ್ ಶೋ ನಡೆಯೋ ಜಾಗಕ್ಕೂ ಕಂಟಕವಾಗಲಿದೆ. ಹಾವಿಗೆ ಸಂಸ್ಕಾರ ಮಾಡದೇ ಬೇಲಿ ಬದಿಯಲ್ಲಿ ಎಸೆದಿದ್ದಾರೆ. ಆ ಪಾಪ ಸುಮ್ಮನೆ ಬಿಡಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=GXmywmnY7vE&feature=youtu.be

  • ಏರೋ ಇಂಡಿಯಾಗೆ ತೆರೆ: ಫೋಟೋಗಳಲ್ಲಿ ವಿಮಾನಗಳ ಕಸರತ್ತು ನೋಡಿ

    ಏರೋ ಇಂಡಿಯಾಗೆ ತೆರೆ: ಫೋಟೋಗಳಲ್ಲಿ ವಿಮಾನಗಳ ಕಸರತ್ತು ನೋಡಿ

    ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆ.14ರಿಂದ ನಡೆಯುತ್ತಿದ್ದ ಏರೋ ಇಂಡಿಯಾ-2017 ವೈಮಾನಿಕ ಪ್ರದರ್ಶನ ಮುಕ್ತಾಯವಾಗಿದೆ. ವೀಕೆಂಡ್ ಆದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಲೋಹದ ಹಕ್ಕಿಗಳ ಕಸರತ್ತನ್ನು ವೀಕ್ಷಿಸಿದ್ದಾರೆ.

    600 ರೂಪಾಯಿ, 1500 ರೂಪಾಯಿ ಹಾಗೂ 2500 ರೂಪಾಯಿ ಟಿಕೆಟ್ ದರ ನಿಗಧಿಯಾಗಿದ್ದರೂ ಎರಡು ವರ್ಷಕ್ಕೊಮ್ಮೆ ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ನೋಡಲು ಉತ್ಸಾಹದಿಂದ ಭಾಗಿಯಾಗಿದ್ದರು. ಸುಡು ಬಿಸಿಲು ಇದ್ದರೂ ಹತ್ತಿರದಿಂದ ವಿಮಾನ ಹಾರಾಟವನ್ನು ಕಂಡು ಪುಳಕಿತರಾದರು.

    ಏರ್ ಶೋ ನೋಡಲು ಬರೋ ಸಾರ್ವಜನಿಕರಿಗೆ ಹೊರಗಡೆಯಿಂದ ಅಹಾರ ನೀರು ತರುವುದನ್ನು ನಿಷೇಧಿಸಲಾಗಿತ್ತು. ಪ್ರದರ್ಶನ ನಡೆಯುತ್ತಿರುವ ಸ್ಥಳಗಳಲ್ಲೇ ದುಪ್ಪಟ್ಟು ಹಣ ನೀಡಿ ಊಟ-ತಿಂಡಿ ನೀರು ಕೊಂಡುಕೊಳ್ಳಬೇಕಾದ ಸ್ಥಿತಿ ಅನಿವಾರ್ಯವಾಗಿತ್ತು. ಇದೆಲ್ಲವನ್ನ ಹೊರತುಪಡಿಸಿದರೆ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿದ್ದ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತ್ತು.