Tag: Air Gun

  • ಶಿರಸಿ | ಏರ್ ಗನ್ ಮಿಸ್ ಫೈರ್ ಕೇಸ್‌ಗೆ ಬಿಗ್ ಟ್ಟಿಸ್ಟ್ – ಬಾಲಕನ ಸಾವಿಗೆ ತಮ್ಮ ಕಾರಣನಲ್ಲ!

    ಶಿರಸಿ | ಏರ್ ಗನ್ ಮಿಸ್ ಫೈರ್ ಕೇಸ್‌ಗೆ ಬಿಗ್ ಟ್ಟಿಸ್ಟ್ – ಬಾಲಕನ ಸಾವಿಗೆ ತಮ್ಮ ಕಾರಣನಲ್ಲ!

    ಕಾರವಾರ: ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಘಟನೆಗೆ ಬಿಗ್ ಟ್ಟಿಸ್ಟ್ ಸಿಕ್ಕಿದೆ. ಬಾಲಕ ತನ್ನ ಅಣ್ಣನಿಗೆ ಗುಂಡು ಹಾರಿಸಿಲ್ಲ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ಏರ್ ಗನ್ ಫೈರ್ ಆಗಿ ದುರ್ಘಟನೆ ನಡೆದಿತ್ತು ಎನ್ನಲಾಗಿತ್ತು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮ ಆಕಸ್ಮಿಕವಾಗಿ ಗುಂಡು ಹಾರಿಸಿದ್ದ. ಇದರಿಂದ ಅಣ್ಣ ಕರಿಯಪ್ಪ ( 9 ) ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ಆದರೆ ಶಿರಸಿ ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಅಸಲಿ ವಿಷಯ ಹೊರಬಂದಿದೆ.ಇದನ್ನೂ ಓದಿ: ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಮೃತ ಬಾಲಕನ ಸಹೋದರನ ಕೈನಿಂದ ಫೈರ್ ಆಗಿದ್ದಲ್ಲ, ಕೆಲಸಗಾರ ನಿತೀಶ್ ಗೌಡನ ಕೈನಿಂದ ಮಿಸ್ ಫೈರ್ ಆಗಿ ಬಾಲಕ ಸಾವು ಕಂಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ಆಟವಾಡುತ್ತಾ ಏರ್ ಗನ್ ಹಿಡಿದಿದ್ದ ನಿತೀಶ್ ಗೌಡ ಬಳಿ ಬಂದಿದ್ದರು. ಅಂಗವಿಕಲನಾಗಿದ್ದ ನಿತೀಶ್ ಗೌಡನಿಗೆ ಎಡಗೈ ಊನವಾಗಿದ್ದು ಮಕ್ಕಳು ಬಂದ ಹಿನ್ನಲೆಯಲ್ಲಿ ಗನ್ ಸರಿಸುವಾಗ ಎಡ ಕೈ ತಾಗಿ ಎದುರಿಗಿದ್ದ ಬಾಲಕ ಕರಿಯಪ್ಪನ ಎದೆಗೆ ಗುಂಡು ತಾಗಿದೆ. ಅತೀ ಸಮೀಪದಲ್ಲೇ ಇದ್ದುದರಿಂದ ಎದೆಗೆ ನೇರವಾಗಿ ಗುಂಡು ಹೊಕ್ಕು ಹೃದಯ ಸೀಳಿ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.

    ಇನ್ನು ನಿತೀಶ್ ಗೌಡನಿಗೆ ಏರ್ ಗನ್ ಬಳಸಲು ಬರುವುದಿಲ್ಲ, ತರಬೇತಿಯೂ ಇಲ್ಲ. ಹೀಗಾಗಿ ಆತನ ಅಚಾತುರ್ಯದಲ್ಲಿ ಫೈರ್ ಆಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಿತೀಶ್ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮಂಡ್ಯ | ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬೆಂಗ್ಳೂರಿನ ಇಬ್ಬರು ಬಿಬಿಎಂ ವಿದ್ಯಾರ್ಥಿಗಳ ದುರ್ಮರಣ

  • ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಕಾರವಾರ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌

    ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ-ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಅಣ್ಣ-ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇದರಿಂದ ಅಣ್ಣ ಕರಿಯಪ್ಪ (9) ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ವಿಡಿಯೋ ದಾಖಲಾಗಿದೆ.

    ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಶಿವಮೊಗ್ಗದಲ್ಲಿ ರಾಬರಿಗೆ ಯತ್ನ- ಮಾಲೀಕ ಗನ್ ತೋರಿಸ್ತಿದ್ದಂತೆ ದರೋಡೆಕೋರರು ಪರಾರಿ

    ಶಿವಮೊಗ್ಗದಲ್ಲಿ ರಾಬರಿಗೆ ಯತ್ನ- ಮಾಲೀಕ ಗನ್ ತೋರಿಸ್ತಿದ್ದಂತೆ ದರೋಡೆಕೋರರು ಪರಾರಿ

    – ಏರ್ ಗನ್ ನೋಡಿ ಭಯಬಿದ್ದ ಕಳ್ಳರು

    ಶಿವಮೊಗ್ಗ: ಮಲೆನಾಡಿನಲ್ಲಿ ಇತ್ತಿಚೇಗೆ ಕೊಲೆ, ಸುಲಿಗೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಎರಡು ಜೋಡಿ ಕೊಲೆಗಳು ನಡೆದಿವೆ.

    ಈ ಘಟನೆ ಮಾಸುವ ಮುನ್ನವೇ ನಿನ್ನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ರಾಬರಿಗೆ ಬಂದ ತಂಡ ಮನೆಯ ಮಾಲೀಕ ಏರ್ ಗನ್ ಕೈಗೆತ್ತಿಕೊಳ್ಳುತ್ತಿದ್ದಂತೆ ಗನ್ ಎಂದು ಭಾವಿಸಿ ಹಾಗೂ ತಕ್ಷಣ ಗ್ರಾಮಸ್ಥರನ್ನು ಮನೆ ಬಳಿ ಬಂದ್ದಿದ್ದನ್ನು ಕಂಡು ಪರಾರಿಯಾಗಿದ್ದಾರೆ.

    ನಿನ್ನೆ ರಾತ್ರಿ ಮೇಗರವಳ್ಳಿಯ ಪುರುಷೋತ್ತಮ್ ಹೆಗಡೆ, ಗಣೇಶ್ ಹೆಗಡೆ ಹಾಗೂ ರೇವಂತ್ ಹೆಗಡೆ ಅವರ ಮನೆ ಬಾಗಿಲು ಬಡಿದು ಮಚ್ಚು, ಲಾಂಗ್ ತೋರಿಸಿ ದರೋರೆಗೆ ಯತ್ನ ಮಾಡಿದ್ದಾರೆ. ಈ ವೇಳೆ ಮನೆಯವರ ಕೂಗಾಟ ಕೇಳಿ ಗ್ರಾಮಸ್ಥರು ಹೆಗಡೆ ಮನೆಯವರ ಬಳಿ ಬರುವಷ್ಟರಲ್ಲಿ ಇನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರು ಪರಾರಿಯಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಆಂತಕದ ವಾತಾವರಣ ಸೃಷ್ಟಿಯಾಗಿದೆ.

    ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಬರಿ ಯತ್ನ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮೇಗರವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹೆಗಡೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.