Tag: AIADMK

  • ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗೋಲಿಬಾರ್: 9 ಸಾವು

    ಚೆನೈ: ಸ್ಟೆರ್‍ಲೈಟ್ ತಾಮ್ರದ ಕುಲುಮೆ ಘಟಕ ಮುಚ್ಚುವಂತೆ ತಮಿಳುನಾಡಿನ ಟ್ಯುಟಿಕಾರಿನ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದಾಗಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.

    ಸುಮಾರು 20 ಸಾವಿರ ಜನರು ಜಿಲ್ಲಾಧಿಕಾರಿ ಕಚೇರಿ ಬಳಿ ಜನರು ಪ್ರತಿಭಟನೆಗೆ ಇಳಿದಿದ್ದರು. ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದರಿಂದ ಪೊಲೀಸರಿಗೆ ಗೋಲಿಬಾರ್ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಸಚಿವ ಜಯಕುಮಾರ್ ಹೇಳಿದ್ದಾರೆ.

    ಸ್ಥಳೀಯರು ಕಳೆದ ಮೂರು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರದ ಗಮನಕ್ಕೆ ಸುಮಾರು ಬಾರಿ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. ಕಂಪೆನಿಯ 25 ವರ್ಷಗಳ ಪರವಾನಗಿ ಮುಗಿಯುವ ಹಂತದಲ್ಲಿದ್ದು, ನವೀಕರಣಕ್ಕೆ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದು ತಿಳಿದ ಪ್ರತಿಭಟನಾಕಾರರು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದ್ದಾರೆ. ಉದ್ರೇಕಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

    ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮಾತನಾಡಿ, ಕೆಲವು ತಿಂಗಳಿನಿಂದ ಸ್ಟೆರ್‍ಲೈಟ್ ಕಂಪೆನಿಯನ್ನು ಮುಚ್ಚಿಸುವಂತೆ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಎಐಎಡಿಎಂಕೆ ಆಡಳಿತಾರೂಢ ಸರ್ಕಾರ ಜನರ ಅಹವಾಲನ್ನು ಪೂರೈಸುವಲ್ಲಿ ನಿರ್ಲಕ್ಷ ವಹಿಸಿದೆ. ಘಟಕವನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸದ್ದ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರು ಕ್ರಿಮಿನಲ್ ಗಳಲ್ಲ. ಇದು ಸರ್ಕಾರದ ನಿರ್ಲಕ್ಷ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಬೆಲೆ ಕೊಡಲಿಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ.

    2013ರಲ್ಲಿ ನೂರಾರು ಜನ ಉಸಿರಾಟದ ತೊಂದರೆಗೀಡಾಗಿದ್ದರು. ಅನಿಲ ಸೋರಿಕೆಯಿಂದ ಬಹಳಷ್ಟು ಮಂದಿ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲಿದ್ದಾರೆ. ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಕಂಪೆನಿ ಪಾಲಿಸುತ್ತಿಲ್ಲ ಹಾಗಾಗಿ ಘಟಕವನ್ನು ಮುಚ್ಚುವಂತೆ ಜನರು ಆಗ್ರಹಿಸಿದ್ದರು.

    ಇದೇ ವರ್ಷ ಎಂಡಿಎಂಕೆ ಮುಖ್ಯಸ್ಥ ವೈಕೋ, ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದರು. ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಕಂಪೆನಿ ಪಾಲಿಸದೆ ಹಲವಾರು ವರ್ಷಗಳಿಂದ ಪರಿಸರವನ್ನು ಹಾಳುಮಾಡಿರುವುದಕ್ಕೆ 100 ಕೋಟಿ ದಂಡವನ್ನು ಕೋರ್ಟ್ ವಿಧಿಸಿತು. ಆ ಸಮಯದಲ್ಲಿ ವೇದಾಂತ ಸಂಸ್ಥೆಗಳ ಅಡಿಯಲ್ಲಿ ಸ್ಟೆರ್‍ಲೈಟ್ ನಡೆಯುತ್ತಿತ್ತು. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಪಾಲಿಸುತ್ತಿದ್ದೇವೆ ಎಂದು ಕಂಪೆನಿ ವಾದಿಸಿತ್ತು.

    1996ರಲ್ಲಿ ಸ್ಟೆರ್‍ಲೈಟ್ ಕಾರ್ಯವನ್ನು ಆರಂಭಿಸಿದೆ. 1000 ಪೂರ್ಣ ಪ್ರಮಾಣದ ನೌಕರರನ್ನು, 2000 ಗುತ್ತಿಗೆ ನೌಕರರನ್ನು ಹೊಂದಿದೆ. 25 ಸಾವಿರ ಪರೋಕ್ಷ ಉದ್ಯೋಗವನ್ನು ಸೃಷ್ಟಿಸಿದೆ.

     

     

     

     

  • ಪೆರೋಲ್ ಅವಧಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

    ಪೆರೋಲ್ ಅವಧಿಗೂ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಮರಳಿದ ಶಶಿಕಲಾ

    ಬೆಂಗಳೂರು: ಪತಿಯ ನಿಧನದ ಹಿನ್ನೆಲೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಸಲುವಾಗಿ 15 ದಿನಗಳ ಪೆರೋಲ್ ಪಡೆದಿದ್ದ ಎಐಎಂಡಿಕೆ ನಾಯಕಿ ಶಶಿಕಲಾ ಮೂರು ದಿನಗಳ ಮುಂಚೆಯೇ ಜೈಲಿಗೆ ವಾಪಸ್ ಆಗಿದ್ದಾರೆ.

    ಇದೇ ಮಾರ್ಚ್ 20 ರ ಮಧ್ಯರಾತ್ರಿ ಶಶಿಕಲಾ ಪತಿ ನಟರಾಜನ್ ಅನಾರೋಗ್ಯದ ಹಿನ್ನೆಲೆ ಮೃತಪಟ್ಟಿದ್ದರು. ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಹಿನ್ನೆಲೆ 15 ದಿನಗಳ ತುರ್ತು ಪೆರೋಲ್ ಪಡೆದು ಮಾರ್ಚ್ 21 ರಂದು ತಂಜಾವೂರಿಗೆ ತೆರಳಿದ್ದರು. ಆದರೆ ಇನ್ನೂ 5 ದಿನಗಳ ಪೆರೋಲ್ ಅವಧಿ ಇರುವಂತೆಯೇ ಶಶಿಕಲಾ ಪರಪ್ಪನ ಆಗ್ರಹಾರಕ್ಕೆ ಅಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

    ಮೂಲಗಳ ಪ್ರಕಾರ ಶಶಿಕಲಾ ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೈಮಸ್ಸು ಮೂಡಿದ್ದು, ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಶಶಿಕಲಾ ಜೈಲಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶಶಿಕಲಾ ಜೈಲಿಗೆ ವಾಪಸ್ಸಾಗುವ ವೇಳೆ ತಂಜಾವೂರಿನಿಂದ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್, ಶಶಿಕಲಾ ಅವರಿಗೆ ಕಳೆದ ಹತ್ತು ದಿನಗಳಿಂದಲೂ ಡೆಂಗ್ಯು ಜ್ವರ ಬಾಧಿಸಿದ್ದು, ಮನೆಯಲ್ಲೆ ವೈದ್ಯರಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿಸಿದರು. ಶಶಿಕಲಾರ ಪತಿಯ ಎಲ್ಲಾ ಅಂತಿಮ ಕಾರ್ಯಗಳು ಶುಕ್ರವಾರವೇ ಮುಗಿದ ಕಾರಣ ಇಂದು ಪರಪ್ಪನ ಅಗ್ರಹಾರಕ್ಕೆ ಮರಳಿದರು ಎಂದರು.

  • ತಮಿಳುನಾಡು ಪೊಲೀಸರಿಂದ 20 ಕೋಟಿ ರೂ. ಆಮಿಷ: ಶಾಸಕ ಬಾಲಾಜಿ

    ತಮಿಳುನಾಡು ಪೊಲೀಸರಿಂದ 20 ಕೋಟಿ ರೂ. ಆಮಿಷ: ಶಾಸಕ ಬಾಲಾಜಿ

    ಮಡಿಕೇರಿ: ತಮಿಳುನಾಡು ಪೊಲೀಸರು ಪಳನಿಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಹೇಳಿದ್ದು ಮಾತ್ರವಲ್ಲದೇ 20 ಕೋಟಿ ರೂ. ಹಣವನ್ನು ನೀಡುವ ಆಮಿಷ ಒಡ್ಡಿದ್ದಾರೆ ಎಂದು ಶಾಸಕ ಬಾಲಾಜಿ ಹೇಳಿದ್ದಾರೆ.

    ಒಂದು ವಾರದ ಬಳಿಕ ಸೋಮವಾರಪೇಟೆಯಲ್ಲಿರುವ ಪ್ಯಾಂಡಿಟನ್ ರೆಸಾರ್ಟ್ ನಿಂದ ಹೊರಬಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ ಕರೂರು ಅರವಕುರುಚ್ಚಿ ಶಾಸಕ ಬಾಲಾಜಿ ಸೆಂದಿಲ್, ಪಳನಿಸ್ವಾಮಿ ಅವರನ್ನು ನಾವೆಲ್ಲರೂ ಸೇರಿ ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಈಗ ಪನ್ನೀರ್ ಸೆಲ್ವಂ ಜೊತೆ ಸೇರಿ ಟಿಟಿಡಿ ದಿನಕರನ್ ಹಾಗೂ ಶಶಿಕಲಾ ಅವರಿಗೆ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     

    ನಾವು 18 ಜನ ಶಾಸಕರು ಬದ್ಧರಾಗಿದ್ದೇವೆ. ಅಲ್ಲದೇ ಮಂಗಳವಾರ ಏಕಾಏಕಿ ದಿಢೀರ್ ಅಗಿ ರೆಸಾರ್ಟ್ ಗೆ ಭೇಟಿ ನೀಡಿದ ತಮಿಳುನಾಡು ಪೊಲೀಸ್ ಅಧಿಕಾರಿಗಳು ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಡಿವೈಎಸ್‍ಪಿ ಮಟ್ಟದ ಅಧಿಕಾರಿಗಳು ಮೊಬೈಲ್ ಫೋನ್ ನೀಡಿ ಮಾತನಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ 20 ಕೋಟಿ ರೂ. ಹಣ ಕೊಡಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದರು.

    ಪೊಲೀಸ್ ಅಧಿಕಾರಿಗಳು ಹೀಗೆ ಮಾಡುವುದು ಎಷ್ಟು ಸರಿ? ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆ ನೇರವಾಗಿ ಕರೆ ಮಾಡಿ ಮಾತನಾಡುವಂತೆ ಹೇಳುತ್ತಿದ್ದಾರೆ. 30ಕ್ಕೂ ಅಧಿಕ ತಮಿಳುನಾಡಿನ ಪೊಲೀಸ್ ಅಧಿಕಾರಿಗಳಿಂದ ನಮಗೆ ಅಭದ್ರತೆ ಉಂಟಾಗಿದೆ. ಸರ್ಕಾರಕ್ಕೆ ಬೆಂಬಲ ನೀಡದೇ ಇದ್ದರೆ ಬಂಧಿಸಿ ಕೇಸು ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.

    ರೆಸಾರ್ಟ್‍ನಲ್ಲಿ ಇರುವ ನಮಗೆ ಭದ್ರತೆ ಬೇಕು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಭದ್ರತೆ ನೀಡುವಂತೆ ಮನವಿ ಮಾಡುತ್ತೇವೆ. ಸ್ಥಳೀಯ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಡಿವೈಎಸ್ಪಿ ಅವರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ಬಾಲಾಜಿ ಹೇಳಿದರು.

  • ಹೋಳಾಗಿದ್ದ ಎಐಎಡಿಎಂಕೆ ವಿಲೀನ: ಪ್ರಕಟಣೆಯಷ್ಟೇ ಬಾಕಿ

    ಹೋಳಾಗಿದ್ದ ಎಐಎಡಿಎಂಕೆ ವಿಲೀನ: ಪ್ರಕಟಣೆಯಷ್ಟೇ ಬಾಕಿ

    ಚೆನ್ನೈ: ಜಯಲಲಿತಾ ಸಾವಿನ ನಂತರ ಎರಡು ಬಣಗಳಾಗಿ ಹೋಳಾಗಿದ್ದ ಎಐಎಡಿಎಂಕೆ ಪಕ್ಷದ ವಿಲೀನವಾಗುತ್ತಿದ್ದು ಬಹಿರಂಗ ಪ್ರಕಟಣೆಯಷ್ಟೇ ಬಾಕಿ. ಪನ್ನೀರ್ ಸೆಲ್ವಂ ಷರತ್ತಿನ ಪ್ರಕಾರ ಜಯಾ ಅವರ ಸಾವಿನ ಕುರಿತು ಪಳನಿಸ್ವಾಮಿ ಸರಕಾರ ನ್ಯಾಯಾಂಗ ತನಿಖೆಗೆ ಸಮಿತಿ ರಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

    ಯಾವುದೇ ಕ್ಷಣದಲ್ಲೂ ಭಿನ್ನ ಬಣಗಳ ವಿಲೀನ ಘೋಷಣೆಯಾಗುವ ಸಾಧ್ಯತೆ ಇದೆ. ಹೊಸ ವಿಲೀನ ಒಪ್ಪಂದದಂತೆ ಪಳನಿಸ್ವಾಮಿ ಸರಕಾರದಲ್ಲಿ ಪನ್ನೀರ್‍ಸೆಲ್ವಂಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗಲಿದೆ ಎನ್ನಲಾಗಿದೆ.

    ಈ ನಡುವೆ ಜಯಾ ನಿವಾಸ ಪೋಯೆಸ್ ಗಾರ್ಡನ್ ಅನ್ನು ಸ್ಮಾರಕವಾಗಿ ಪರಿವರ್ತಿಸಲು ಜಯಲಲಿತಾರ ಸೋದರ ಸೊಸೆ ದೀಪಾ ಜಯಕುಮಾರ್ ವಿರೋಧಿಸಿದ್ದಾರೆ. ಜಯಲಲಿತಾ ನಿವಾಸದ ಮೇಲೆ ನಮಗೂ ಹಕ್ಕಿದೆ, ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಣೆ ಹಿಂದೆ ದುರುದ್ದೇಶ ಅಡಗಿದೆ ಎಂದು ಗುಡುಗಿದ್ದಾರೆ. ಈ ಎಲ್ಲಾ ವಿಷಯವನ್ನೂ ಪರಪ್ಪನ ಅಗ್ರಹಾರ ಜೈಲಲ್ಲಿರೋ ಶಶಿಕಲಾಗೆ ದಿನಕರನ್ ವರದಿ ಒಪ್ಪಿಸಿದ್ದಾರೆ.

    ಜಯಲಲಿತಾ ಸಾವಿನ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಪೋಯೆಸ್ ಗಾರ್ಡನ್ ಅನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಪನ್ನೀರ್ ಸೆಲ್ವಂ ಬಣ ಷರತ್ತು ವಿಧಿಸಿತ್ತು. ಈ ಷರತ್ತಿಗೆ ಪಳನಿಸ್ವಾಮಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪನ್ನೀರ್‍ಸೆಲ್ವ ಬಣ ವಿಲೀನಕ್ಕೆ ಒಪ್ಪಿಗೆ ನೀಡಿದೆ.

  • ಎಐಎಡಿಎಂಕೆಯ ಚಿಹ್ನೆಗಾಗಿ ಲಂಚ ಆರೋಪ- ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ಕೇಸ್

    ಎಐಎಡಿಎಂಕೆಯ ಚಿಹ್ನೆಗಾಗಿ ಲಂಚ ಆರೋಪ- ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ಕೇಸ್

    ನವದೆಹಲಿ: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.3 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ವರದಿಯಾಗಿದೆ. ಆದ್ರೆ ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ಪಾತ್ರ ಇದೆಯೋ ಇಲ್ಲವೋ ಎಂದು ಹೇಳಲು ಯಾವುದೇ ಸಾಕ್ಷಿಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿಹಾಕಿದ್ದು, ಸುಖೇಶ್ ಚಂದ್ರಶೇಖರ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡ್ಬ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.

  • ಶಶಿಕಲಾ, ಸೆಲ್ವಂ ಬಣಗಳಿಗೆ ಶಾಕ್ – ಎಐಎಡಿಎಂಕೆಯ ಚಿನ್ಹೆ ತಡೆ ಹಿಡಿದ ಚುನಾವಣಾ ಆಯೋಗ

    ಶಶಿಕಲಾ, ಸೆಲ್ವಂ ಬಣಗಳಿಗೆ ಶಾಕ್ – ಎಐಎಡಿಎಂಕೆಯ ಚಿನ್ಹೆ ತಡೆ ಹಿಡಿದ ಚುನಾವಣಾ ಆಯೋಗ

    – ಜಯಲಲಿತಾ ಕ್ಷೇತ್ರದ ಉಪಸಮರಕ್ಕೆ ಎರಡೆಲೆ ಇಲ್ಲ

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರವಾಗಿರೋ ಚೆನ್ನೈನ ಆರ್‍ಕೆ ನಗರದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಮಾನ್ಯತೆಯನ್ನೇ ಕಳೆದುಕೊಂಡಿದೆ.

    ಎಐಎಡಿಎಂಕೆ ಪಕ್ಷದ ಚಿಹ್ನೆ ತಮಗೆ ನೀಡುವಂತೆ ಶಶಿಕಲಾ ಬಣ ಹಾಗೂ ಪನ್ನೀರ್ ಸೆಲ್ವಂ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆದ್ರೆ ಆರ್‍ಕೆ ನಗರದ ಉಪಚುನಾವಣೆಯಲ್ಲಿ ಎರಡೂ ಬಣಕ್ಕೂ ಎಐಎಡಿಎಂಕೆ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ಕೊಡಲು ಚುನಾವಣಾ ಆಯೋಗ ನಿರಾಕರಿಸಿದೆ. ಅಲ್ಲದೆ ಎಐಎಡಿಎಂಕೆ ಪಕ್ಷದ ವಿಸ್ತøತ ಹೆಸರನ್ನು ಚುನಾವಣೆಯಲ್ಲಿ ಬಳಸುವಂತಿಲ್ಲ ಎಂದು ಹೇಳಿದೆ.

    ಸದ್ಯ ಪಕ್ಷದ ಚಿಹ್ನೆಯನ್ನ ಚುನಾವಣಾ ಆಯೋಗ ತಡೆ ಹಿಡಿದಿದೆ. ಹೀಗಾಗಿ ಆರ್‍ಕೆ ನಗರ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಹಾಗೂ ಸೆಲ್ವಂ ಬಣದ ಅಭ್ಯರ್ಥಿ ಮಧುಸೂದನನ್ ಬೇರೆ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಏಪ್ರಿಲ್ 12ರಂದು ಆರ್‍ಕೆ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.

  • ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

    ಚೆನ್ನೈ: ಗದ್ದಲ, ಕೋಲಾಹಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಕೊನೆಗೂ ಶಶಿಕಲಾ ಬಣ ಗೆದ್ದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

    ಕಾಂಗ್ರೆಸ್, ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ 122 ಶಾಸಕರು ಮತವನ್ನು ಚಲಾಯಿಸಿದ್ದರೆ ವಿರುದ್ಧವಾಗಿ 11 ಮತಗಳು ಬಿದ್ದಿದೆ. ಈ ಮೂಲಕ ಅಧಿಕೃತವಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ.

    ಭಾರೀ ಹೈಡ್ರಾಮ: ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ತಮಿಳುನಾಡಿನಲ್ಲಿ ಮರುಕಳಿಸಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ರಹಸ್ಯ ಮತದಾನ ನಡೆಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ಹೈಡ್ರಾಮ ಹೀಗಿತ್ತು: ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಡಿಎಂಕೆಯ ಕೆಲ ಶಾಸಕರು ಸ್ಪೀಕರ್ ಧನ್‍ಪಾಲ್ ಶರ್ಟ್ ಎಳೆದ ಪ್ರಸಂಗ ನಡೆಯಿತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಸದನ ಮತ್ತೆ ಆರಂಭವಾದ ಕೂಡಲೇ ಡಿಎಂಕೆ ಶಾಸಕರ ಮತ್ತೆ ಪ್ರತಿಭಟನೆ ನಡೆಸಿದರು. ಈ ವೇಳೆ ಶರ್ಟ್ ಹಿಡಿದು ಎಳೆದಾಡಿದಕ್ಕೆ ಡಿಎಂಕೆಯ ಎಲ್ಲ ಶಾಸಕರನ್ನು ಸ್ಪೀಕರ್ ಸದನದಿಂದ ಹೊರಗಡೆ ಹಾಕುವಂತೆ ಮಾರ್ಷಲ್‍ಗಳಿಗೆ ಸೂಚಿಸಿದರು. ಮಾರ್ಷಲ್‍ಗಳು ಬಲವಂತವಾಗಿ ಶಾಸಕರನ್ನು ಹೊರಕ್ಕೆ ಹಾಕಿದರು. ಸ್ಪೀಕರ್ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಶಾಸಕರು ಸಭಾ ತ್ಯಾಗ ಮಾಡಿದರು. ಈ ಎಲ್ಲ ಹೈಡ್ರಾಮದ ಬಳಿಕ ಕೊನೆಗೆ ಮೂರು ಗಂಟೆಗೆ ನಡೆದ ಕಲಾಪದಲ್ಲಿ ಒಟ್ಟು 123 ಮತಗಳನ್ನು ಪಡೆಯುವ ಮೂಲಕ ಪಳನಿಸ್ವಾಮಿ ಬಹುಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾದರು.

    ರಾಜ್ಯಪಾಲರಿಗೆ ದೂರು: ಹರಿದ ಬಟ್ಟೆಯಲ್ಲಿ ವಿಧಾನಸಭೆಯಿಂದ ಹೊರಬಂದ ಡಿಎಂಕೆ ನಾಯಕ ಸ್ಟಾಲಿನ್ ಅದೇ ಬಟ್ಟೆಯಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.

    ಸಮಾಧಿಗೆ ಭೇಟಿ: ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಬಳಿಕ ಸಿಎಂ ಪಳನಿಸ್ವಾಮಿ ಚೆನ್ನೈನ ಮರೀನಾ ಬೀಚ್ ಸಮೀಪ  ಇರುವ ಜಯಾ ಸಮಾಧಿಗೆ ತಮ್ಮ ಶಾಸಕರ ಜೊತೆ ತೆರಳಿ ನಮನ ಸಲ್ಲಿಸಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕಾರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ತಮಿಳುನಾಡು ಅಸೆಂಬ್ಲಿಯಲ್ಲಿ ಹೈಡ್ರಾಮ: ಮೈಕ್, ಟೇಬಲ್ ಕುರ್ಚಿ ಒಡೆದು ಹಾಕಿದ ಶಾಸಕರು

    ಚೆನ್ನೈ:ಕರ್ನಾಟಕದ ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಇತಿಹಾಸ ಈಗ ತಮಿಳುನಾಡಿನಲ್ಲಿ ಮರುಕಳಿಸಿದೆ. ಪಳನಿಸ್ವಾಮಿ ವಿಶ್ವಾಸ ಮತಯಾಚನೆ ವೇಳೆ ಡಿಎಂಕೆ ಶಾಸಕರು ಫೈಲ್‍ಗಳನ್ನು ಸ್ಪೀಕರ್ ಮೇಲೆ ಎಸೆದು ಕೋಲಾಹಲ ಸೃಷ್ಟಿಸಿದ್ದಾರೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಆರಂಭವಾದ ಕೂಡಲೇ ಸಿಎಂ ಪಳನಿ ಸ್ವಾಮಿ ವಿಶ್ವಾಸಮತಯಾಚನೆ ನಿರ್ಣಯ ಮಂಡಿಸಿದ ಬಳಿಕ ಡಿಎಂಕೆ ನಾಯಕ ಸ್ಟಾಲಿನ್ ರಹಸ್ಯ ಮತದಾನಕ್ಕೆ ಆಗ್ರಹಿಸಿದರು. ಸ್ಟಾಲಿನ್‍ಗೆ ಪನ್ನೀರ್ ಸೆಲ್ವಂ ಬಣದ ಶಾಸಕರು ಬೆಂಬಲ ವ್ಯಕ್ತಪಡಿಸಿದರು.

    ಕಲಾಪದಲ್ಲಿ ಮಾತನಾಡಿದ ಸ್ಟಾಲಿನ್, ವಿಶ್ವಾಸಮತಯಾಚನೆಗೆ ಪೊಲೀಸ್ ರಕ್ಷಣೆಯಲ್ಲಿ ಶಾಸಕರನ್ನು ಕರೆ ತರಲಾಗಿದೆ. ಇದರಿಂದಾಗಿ ಶಾಸಕರಿಗೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಹಸ್ಯ ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಪನ್ನೀರ್ ಸೆಲ್ವಂ ಬಣದ ಮುಖ್ಯ ಸಚೇತಕ ಮತ್ತು ಶಾಸಕ ಸೆಮ್ಮೈಲೈ ಮಾತನಾಡಿ, ಎಐಎಡಿಎಂಕೆ ಶಾಸಕರಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಅವರನ್ನು ರಕ್ಷಿಸಿ ಎಂದು ಹೇಳಿದರು. ಆದರೆ ಸ್ಪೀಕರ್ ಧನ್‍ಪಾಲ್ ಅವರು, ವಿಶ್ವಾಸಮತಯಾಚನೆ ಹೇಗೆ ನಡೆಸಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಮತದಾನ ಹೇಗೆ ನಡೆಸಬೇಕು ಎನ್ನುವುದು ನನಗೆ ತಿಳಿದಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಮತದಾನಕ್ಕೆ ಅವಕಾಶ ನೀಡಿದರು.

    ರಹಸ್ಯ ಮತದಾನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಡಿಎಂಎಕೆ, ಕಾಂಗ್ರೆಸ್, ಪನ್ನೀರ್ ಸೆಲ್ವಂ ಬಣದ ಶಾಸಕರು ಸದನದ ಭಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ ಶಾಸಕರು ಸ್ಪೀಕರ್ ಮುಂದುಗಡೆ ಇರುವ ಮೈಕ್ ಮತ್ತು ಟೇಬಲ್ ಕುರ್ಚಿಗಳು ಒಡೆದು ಹಾಕಿದರು. ಅಷ್ಟೇ ಅಲ್ಲದೇ ಸ್ಪೀಕರ್ ಧನ್ ಪಾಲ್ ಮೇಲೆ ಫೈಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಸದನದವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.

    ಶರ್ಟ್ ಬಿಚ್ಚಿದ್ದ ಗೂಳಿಹಟ್ಟಿ ಚಂದ್ರಶೇಖರ್: 2010ರ ಅಕ್ಟೋಬರ್‍ನಲ್ಲಿ ಬಿಎಸ್‍ಯಡಿಯೂರಪ್ಪ ವಿಶ್ವಾಸ ಮತಯಾಚನೆ ವೇಳೆ ಶಾಸಕರ ಮಾರಾಮಾರಿ ನಡೆದಿತ್ತು. ಈ ವೇಳೆ ಮಾರ್ಷಲ್‍ಗಳು ಗೂಳಿಹಟ್ಟಿ ಚಂದ್ರಶೇಖರ್ ಅವರನ್ನು ಹೊರಹಾಕಲು ಮುಂದಾದಾಗ ಅವರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು.

  • ಇಂದು ಚೆನ್ನೈಗೆ ರಾಜ್ಯಪಾಲ: ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್‍ಗೆ ಸೆಲ್ವಂ ಪತ್ರ

    ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಇವತ್ತು ಸ್ವಲ್ಪ ಶಾಂತವಾಗೋ ಸಾಧ್ಯತೆಯಿದೆ. ರಾಜ್ಯದಲ್ಲಿ ಅಸ್ಥಿರತೆ ಉಂಟಾಗಿದ್ರೂ ಮುಂಬೈನಲ್ಲಿದ್ದ ತಮಿಳುನಾಡಿನ ಹೆಚ್ಚುವರಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ಚೆನ್ನೈಗೆ ಆಗಮಿಸಲಿದ್ದಾರೆ.

    ಶಶಿಕಲಾ ಹಾಗೂ ಬೆಂಬಲಿಗ ಶಾಸಕರು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ. ರಾಜ್ಯಪಾಲರು ಕೂಡ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗ್ರೀನ್ ಸಿಗ್ನಲ್ ನೀಡೋ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳಕ್ಕೆ ಹೋಗಿರೋ ಎಐಎಡಿಎಂಕೆಯ 130 ಶಾಸಕರು ರಾಷ್ಟ್ರಪತಿ ಮುಂದೆ ನಡೆಸಲು ಉದ್ದೇಶಿಸಿದ್ದ ಪರೇಡ್‍ನ್ನ ಕೈಬಿಟ್ಟಿದ್ದಾರೆ.

    ಇದಕ್ಕೂ ಮುನ್ನ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಪ್ರಮಾಣ ವಚನ ಕಾರ್ಯಕ್ರಮವನ್ನ ಮುಂದೂಡ್ತಿದ್ದಾರೆ ಅಂತ ಶಶಿಕಲಾ ಆರೋಪಿಸಿದ್ರು. ಪಕ್ಷದ ಖಜಾಂಚಿ ಹುದ್ದೆಯಿಂದ ವಜಾಗೊಂಡಿರೋ ಪನ್ನೀರ್ ಸೆಲ್ವಂ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್‍ಗೆ ಪತ್ರ ಬರೆದಿದ್ದು, ಚಾಲ್ತಿ ಖಾತೆಯಲ್ಲಿರೋ ಪಕ್ಷದ ನಿಧಿಯನ್ನು ಹಿಡಿದಿಟ್ಟುಕೊಳ್ಳಬೇಕು. ನನ್ನ ಲಿಖಿತ ಅನುಮತಿ ಇಲ್ಲದೆ ಬೇರೆಯವ್ರಿಗೆ ಪಾರ್ಟಿ ಫಂಡ್ ಅನ್ನು ಆಪರೇಟ್ ಮಾಡೋಕೆ ಅವಕಾಶ ನೀಡಬಾರದು ಅಂತ ಮನವಿ ಮಾಡಿದ್ದಾರೆ.

  • ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ

    ಚೆನ್ನೈ: ತಮಿಳುನಾಡಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕ್ಷಿಪ್ರ ರಾಜಕೀಯ ಕ್ರಾಂತಿ ಆಗ್ತಿದೆ. ಮಂಗಳವಾರ ರಾತ್ರಿ ಜಯಯಲಿತಾ ಸಮಾಧಿ ಮುಂದೆ ಪನ್ನೀರ್ ಸೆಲ್ವಂ ಧ್ಯಾನಕ್ಕೆ ಇಳಿದು ನಂತರ ನೀಡಿದ ಹೇಳಿಕೆ ಬಳಿಕ ರಾಜಕೀಯದ ಚದುರಂಗದಾಟ ಶುರುವಾಗಿದೆ.

    ನಾನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ. ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತೇನೆ. ಜನ ಬಯಸಿದ್ದರೆ ಮತ್ತೆ ರಾಜೀನಾಮೆ ವಾಪಾಸ್ ಪಡೆಯುತ್ತೇನೆ. ಶಶಿಕಲಾರನ್ನ ಸಿಎಂ ಆಗೋಕೆ ಬಿಡಲ್ಲ ಅಂತಾ ಪನ್ನೀರ್ ಸೆಲ್ವಂ ರಣಕಹಳೆ ಊದಿದ್ದಾರೆ. ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ದಾರೆ.

    ಆದರೆ ಯಾವುದೇ ಕಾರಣಕ್ಕೂ ಕುರ್ಚಿ ಬಿಡಲು ಶಶಿಕಲಾ ನಟರಾಜನ್ ಕೂಡಾ ರೆಡಿಯಿಲ್ಲ. ಶಶಿಕಲಾ ಶಾಸಕಾಂಗ ಪಕ್ಷದ ಸಭೆ ಕೂಡಾ ನಡೆಸಿದ್ದಾರೆ. ನಾನು ಕದ್ದುಮುಚ್ಚಿ ಶಾಸಕಾಂಗ ಸಭೆ ನಡೆಸಿಲ್ಲ. ಪನ್ನೀರ್ ಸೆಲ್ವಂ ಒಬ್ಬ ನಯವಂಚಕ. ಜಯಲಲಿತಾ ವಿರೋಧಿಗಳ ಜೊತೆಯೇ ಸೇರಿಕೊಂಡಿದ್ದಾರೆ ಅಂತಾ ಆರೋಪಿಸಿದ್ರು. ಪಕ್ಷದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ. ಅಮ್ಮನನ್ನು ಪ್ರೀತಿಸುವವರೆಲ್ಲರೂ ನನಗೆ ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಈಗಾಗಲೇ 134 ಶಾಸಕರಲ್ಲಿ 131 ಮಂದಿ ಶಾಸಕರನ್ನು ಒಟ್ಟುಮಾಡಿಕೊಂಡಿರುವ ಶಶಿಕಲಾ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾಳೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಅಲ್ಲದೇ ಪ್ರಮಾಣ ವಚನಕ್ಕೆ ಬಾರದ ರಾಜ್ಯಪಾಲರ ವಿರುದ್ಧವೂ ದೂರು ನೀಡಲಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಇನ್ನೂ ಚೆನ್ನೈಗೆ ಬಂದಿಲ್ಲ. ರಾಜ್ಯಪಾಲರು ಎಲ್ಲಿಯವರೆಗೆ ವಿಳಂಬ ಮಾಡುತ್ತಾರೋ ಅಲ್ಲಿಯವರೆಗೆ ಪನ್ನೀರ್ ಸೆಲ್ವಂಗೆ ಶಶಿಕಲಾ ವಿರುದ್ಧ ರಣತಂತ್ರ ಹೆಣೆಯಲು ಅವಕಾಶವಿದೆ.

    ನಿನ್ನೆ ರಾತ್ರಿಯಿಂದ ಏನಾಯ್ತು?
    * ರಾತ್ರಿ 9.09 – ಚೆನ್ನೈನ ಮರೀನಾ ಬೀಚ್‍ನ ಜಯಾ ಸಮಾಧಿಗೆ ಸೆಲ್ವಂ ಭೇಟಿ
    * ರಾತ್ರಿ 9.10 – ಜಯಾ ಸಮಾಧಿ ಮುಂದೆ ಸೆಲ್ವಂ ಧ್ಯಾನ ಆರಂಭ (ಧ್ಯಾನದ ಮಧ್ಯೆ ಕಣ್ಣೀರು ಹಾಕಿದ ಓಪಿಎಸ್)
    * ರಾತ್ರಿ 9.45 – ಸಮಾಧಿ ಮುಂದೆ ಧ್ಯಾನ ಅಂತ್ಯ
    * ರಾತ್ರಿ 9.54 – ಮಾಧ್ಯಮಗಳಿಗೆ ಸೆಲ್ವಂ ಪ್ರತಿಕ್ರಿಯೆ

    * ರಾತ್ರಿ 9.57 – ಶಶಿಕಲಾ ವಿರುದ್ಧ ಬಂಡಾಯದ ಕಹಳೆ
    * ರಾತ್ರಿ 10 ಗಂಟೆ – ಜಯಾ ಸ್ಮಾರಕದ ಬಳಿ ಪನ್ನೀರ್ ಸೆಲ್ವಂಗೆ ಜನಬೆಂಬಲ
    * ರಾತ್ರಿ 10.30 – ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂ
    * ರಾತ್ರಿ 10.45 – ಸೆಲ್ವಂ ನಿವಾಸದ ಮುಂದೆ ಜನಸ್ತೋಮ

    * ರಾತ್ರಿ 10.45 – ಅತ್ತ ಪೋಯಸ್ ಗಾರ್ಡನ್ ಮುಂದೆ ಶಶಿಕಲಾ ಅಭಿಮಾನಿಗಳ ಜಮಾವಣೆ
    * ರಾತ್ರಿ 11 – ಎಐಎಡಿಎಂಕೆ ಶಾಸಕರು, ಸಚಿವರಿಗೆ ಶಶಿಕಲಾ ತುರ್ತು ಬುಲಾವ್
    * ಮಧ್ಯರಾತ್ರಿ 11.30 – ಶಶಿಕಲಾ ಮನೆಯಲ್ಲಿ 20 ಸಚಿವರು 80 ಶಾಸಕರು ಹಾಜರು
    * ಮಧ್ಯರಾತ್ರಿ 12 – ಪೋಯಸ್ ಗಾರ್ಡನ್ ನಿವಾಸದಲ್ಲಿ ಅಣ್ಣಾಡಿಎಂಕೆ ಪಕ್ಷದ ಸಭೆ
    * ಮಧ್ಯರಾತ್ರಿ 12.45 – ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂ ಔಟ್

    * ಮಧ್ಯರಾತ್ರಿ 1 ಗಂಟೆ – ಶಶಿಕಲಾ ನಾಯಕತ್ವದಲ್ಲಿ ಪಕ್ಷ ಅಧಿಕಾರ ನಡೆಸುತ್ತೆ – ಎಐಎಡಿಎಂಕೆ
    * ಮಧ್ಯರಾತ್ರಿ 1.13 – ಪೋಯಸ್ ಗಾರ್ಡನ್ ನಿವಾಸದಿಂದ ಹೊರಬಂದ ಶಶಿಕಲಾ
    * ಮಧ್ಯರಾತ್ರಿ 1.16 – ನಾವೆಲ್ಲಾ ಒಂದೇ ಕುಟುಂಬ. ಎಲ್ಲಾ 134 ಶಾಸಕರು ಒಗ್ಗಟ್ಟಾಗಿದ್ದೇವೆ – ಶಶಿಕಲಾ
    * ಮಧ್ಯರಾತ್ರಿ 1.17 – ಇದರ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂರನ್ನ ಪಕ್ಷದಿಂದ ಉಚ್ಚಾಟಿಸ್ತೇವೆ -ಶಶಿಕಲಾ
    * ಮಧ್ಯರಾತ್ರಿ 1.20 – ಶಶಿಕಲಾ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು – ತಂಬಿದೊರೈ
    * ಮಧ್ಯರಾತ್ರಿ 1.40 – ನಾನು ಪಕ್ಷದ ನಿಷ್ಠಾವಂತ. ನನ್ನನ್ನ ಯಾರೂ ಹೊರಹಾಕೋಕೆ ಆಗಲ್ಲ – ಸೆಲ್ವಂ

    * ಬೆಳಗ್ಗೆ 9.08 – ಡಿಎಂಕೆಗೂ ಇದಕ್ಕೂ ಸಂಬಂಧವಿಲ್ಲ – ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿಕೆ
    * ಬೆಳಗ್ಗೆ 9.17 – ತಮಿಳುನಾಡು ರಾಜಕೀಯ ಅಸ್ಥಿರತೆಗೆ ಕೇಂದ್ರ ಕಾರಣ – ಕಾಂಗ್ರೆಸ್ ಆರೋಪ
    * ಬೆಳಗ್ಗೆ 9.27 – ಅಮ್ಮಾ ಭೇಟಿ ಮಾಡಲು ಶಶಿಕಲಾ ಅವಕಾಶ ಕೊಡಲಿಲ್ಲ – ಸೆಲ್ವಂ ಆರೋಪ
    * ಬೆಳಗ್ಗೆ 10.15 – ಶಶಿಕಲಾ ಪರ ಸುಬ್ರಮಣಿಯನ್ ಸ್ವಾಮಿ ಬ್ಯಾಟಿಂಗ್
    * ಬೆಳಗ್ಗೆ 10.16 – ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ರಾಜ್ಯಪಾಲರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ ವೆಂಕಯ್ಯ ನಾಯ್ಡು

    * ಬೆಳಗ್ಗೆ 10.36 – ಸೆಲ್ವಂಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ರಾಜ್ಯಸಭಾ ಸದಸ್ಯ ಮೈತ್ರೆಯನ್
    * ಬೆಳಗ್ಗೆ 10.47 – ಪನ್ನೀರ್ ಸೆಲ್ವಂ – ಪಾಂಡಿಯನ್ ಸುದ್ದಿಗೋಷ್ಠಿ – ವಿಧಾನಸಭೆಯಲ್ಲಿ ನನ್ನ ಬಲ ಏನೆಂದು ತೋರಿಸುವೆ. ಜಯಾ ಸಾವಿನ ಬಗ್ಗೆ ತನಿಖೆಗೆ ಆದೇಶ
    * ಬೆಳಗ್ಗೆ 11.37 – ಅಣ್ಣಾಡಿಎಂಕೆ ಕಚೇರಿಯಲ್ಲಿ ಶಶಿಕಲಾ ನೇತೃತ್ವದಲ್ಲಿ ಶಾಸಕರ ಸಭೆ. 130 ಶಾಸಕರು ಹಾಜರು
    * ಬೆಳಗ್ಗೆ 11.44 – ಇವತ್ತು ಮುಂಬೈನಲ್ಲೇ ಉಳಿಯಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನಿರ್ಧಾರ

    * ಮಧ್ಯಾಹ್ನ 12.10 – ಶಶಿಕಲಾಗೆ ಚುನಾವಣಾ ಆಯೋಗಕ್ಕೆ ಶಾಕ್. ಜನೆರಲ್ ಸೆಕ್ರೆಟರಿಯಾಗಿ ಆಯ್ಕೆಯಾದ ಬಗ್ಗೆ ವಿವರ ಕೋರಿ ನೋಟೀಸ್
    * ಮಧ್ಯಾಹ್ನ 1.10 – ಶಾಸಕರ ಸಭೆ ಬಳಿಕ ಶಶಿಕಲಾ ಸುದ್ದಿಗೋಷ್ಠಿ. ಪನ್ನೀರ್ ಸೆಲ್ವಂ ಒಬ್ಬ ವಂಚಕ. ಡಿಎಂಕೆ ಜೊತೆ ಸೇರಿದ್ದಾರೆ ಎಂದು ವಾಗ್ದಾಳಿ
    * ಮಧ್ಯಾಹ್ನ 1.37 – ಶಶಿಕಲಾ ಆರೋಪ ತಳ್ಳಿಹಾಕಿದ ಎಂ ಕೆ ಸ್ಟಾಲಿನ್
    * ಮಧ್ಯಾಹ್ನ 2.15 – ರಾಷ್ಟ್ರಪತಿಗಳ ಮುಂದೆ ಬಲಪ್ರದರ್ಶನ ಮಾಡಲು ಶಶಿಕಲಾ ಅಂಡ್ ಟೀಂ ಚಿಂತನೆ
    * ಮಧ್ಯಾಹ್ನ 3.20 – 130 ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಶಶಿಕಲಾ