Tag: Ahmedabad

  • Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

    Ahmedabad Tragedy | ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಏರ್‌ ಇಂಡಿಯಾ

    ಅಹಮದಾಬಾದ್‌: ಇಲ್ಲಿನ ಮೇಘನಿನಗರದ ಬಳಿ ನಡೆದ ವಿಮಾನ ದುರಂತದಲ್ಲಿ (Plane Crash) ಮೃತಪಟ್ಟವರ ಕುಟುಂಬಕ್ಕೆ ಏರ್‌ ಇಂಡಿಯಾ (Air India) ವಿಮಾನಯಾನ ಸಂಸ್ಥೆ ತಲಾ 25 ಲಕ್ಷ ರೂ. ಮಧ್ಯಂತರ ಪರಿಹಾರ ಘೋಷಿಸಿದೆ.

    ಈಗಾಗಲೇ ಟಾಟಾ ಸಮೂಹ (Tata Group) ತಲಾ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಏರ್‌ ಇಂಡಿಯಾ ಸಂಸ್ಥೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಈ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಗಳೊಂದಿಗೆ ಏರ್‌ ಇಂಡಿಯಾ ಒಟ್ಟಾಗಿ ನಿಲ್ಲುತ್ತದೆ. ಊಹಿಸಲೂ ಸಾಧ್ಯವಾಗದ ಈ ಪರಿಸ್ಥಿತಿಯಲ್ಲಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸಂಸ್ಥೆ ಒದಗಿಸಲಿದೆ. ಹೀಗಾಗಿ ಸಂತ್ರಸ್ತ ಕುಟುಂಬಗಳು ತಕ್ಷಣದ ಆರ್ಥಿಕತೆಗಳನ್ನು ಪೂರೈಸಲು ತಲಾ 25 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

    ಏನಾಗಿತ್ತು?
    ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಪರಿಣಾಮ ವಿಮಾನ ನಿಲ್ದಾಣದ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು 12 ಸಿಬ್ಬಂದಿ ಇದ್ದರು. ಇದನ್ನೂ ಓದಿ: Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

    ವಿಮಾನದಲ್ಲಿದ್ದ 242 ಜನರಲ್ಲಿ ವಿಮಾನ ಸಿಬ್ಬಂದಿ ಸೇರಿ 241 ಮಂದಿ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದರು. ಜೊತೆಗೆ ಬಿಜೆ ಮೆಡಿಕಲ್ ಕಾಲೇಜಿನ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನೂ ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ ಅಲ್ಲಿದ್ದ 19 ಸ್ಥಳೀಯರು ಸಾವಿಗೀಡಾಗಿದ್ದರು. ಸದ್ಯ ಸಾವಿನ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು 

  • ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

    ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

    ನವದೆಹಲಿ: ಅಹಮದಾಬಾದ್‌ನಲ್ಲಿ (Ahmedabad) ಪತನಗೊಂಡ ಏರ್ ಇಂಡಿಯಾ (Air India) ವಿಮಾನ ಅಪಘಾತಕ್ಕೂ ಮುನ್ನ ಪ್ಯಾರಿಸ್‌ನಿಂದ ದೆಹಲಿಗೆ (Delhi) ಹಾರಾಟ ನಡೆಸಿತ್ತು ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ (Samir Kumar Sinha) ಮಾಹಿತಿ ನೀಡಿದ್ದಾರೆ.

    ಏರ್ ಇಂಡಿಯಾ ವಿಮಾನ ದುರಂತ ನಡೆದ 48 ಗಂಟೆ ಬಳಿಕ ಮೊದಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 12ರಂದು ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗುವ ಮುನ್ನ ಇದೇ ವಿಮಾನವು ಪ್ಯಾರಿಸ್‌ನಿಂದ (Paris) ದೆಹಲಿಗೆ ಹಾಗೂ ದೆಹಲಿಯಿಂದ ಅಹಮದಾಬಾದ್‌ಗೆ ಯಾವುದೇ ಸಮಸ್ಯೆಗಳಿಲ್ಲದೆ ಹಾರಾಟ ನಡೆಸಿತ್ತು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಇದೇ ವೇಳೆ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಮಾತನಾಡಿ, ಸದ್ಯ ಬ್ಲ್ಯಾಕ್‌ಬಾಕ್ಸ್‌ನ್ನು ಡಿಕೋಡ್ ಮಾಡಲಾಗುತ್ತಿದ್ದು, ದುರಂತಕ್ಕೂ ಮುನ್ನ ವಿಮಾನದಲ್ಲಿ ಆಗಿದ್ದಾದರೂ ಏನು ಎನ್ನುವ ಮಾಹಿತಿ ತಿಳಿದುಬರಲಿದೆ. ಶುಕ್ರವಾರ ಸಂಜೆ ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದ್ದು. ಅಪಘಾತಕ್ಕೆ ನಿಖರವಾದ ಕಾರಣ ಇದರಿಂದ ತಿಳಿದುಬರಲಿದೆ. ಎಎಐಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ವರದಿ ನೀಡಲಿದ್ದು, ಏನಾಗಿದೆ ಎಂಬುದು ಗೊತ್ತಾಗಲಿದೆ. ಘಟನೆ ಬಗ್ಗೆ ಬ್ರಿಟನ್, ಅಮೆರಿಕ ಸೇರಿದಂತೆ ಕೇಂದ್ರದ ಉನ್ನತ ಮಟ್ಟದ ಸಮಿತಿ ಸಹ ತನಿಖೆ ನಡೆಸುತ್ತಿದೆ ಎಂದರು.

    ಜೂನ್ 12ರಂದು ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಪರಿಣಾಮ ವಿಮಾನ ನಿಲ್ದಾಣದ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, ಒಬ್ಬ ಕೆನಡಾ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು 12 ಸಿಬ್ಬಂದಿ ಇದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ್ಯ ಪಾರಾಗಿದ್ದಾರೆ. ಜೊತೆಗೆ ಬಿಜೆ ಮೆಡಿಕಲ್ ಕಾಲೇಜಿನ 5 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಇನ್ನೂ ಭಾರೀ ಬೆಂಕಿ ಹೊತ್ತಿಕೊಂಡ ಪರಿಣಾಮ ಅಲ್ಲಿದ್ದ 19 ಸ್ಥಳೀಯರು ಸಾವಿಗೀಡಾಗಿದ್ದರು.ಇದನ್ನೂ ಓದಿ: Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

  • Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

    Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

    – ಶಿಕ್ಷಣಕ್ಕಾಗಿ ಮಾಡಿದ ಸಾಲ ತೀರಿಸೋಕೆ ದಿಕ್ಕು ತೋಚ್ತಿಲ್ಲ – ತಂದೆಯ ಕಣ್ಣೀರು

    ಅಹಮದಾಬಾದ್‌: ಗುಜರಾತ್‌ನ ಹಿಮತ್‌ನಗರದ ಗೂಡ್ಸ್ ಆಟೋ ಚಾಲಕನ ಮಗಳಾದ ಪಾಯಲ್‌ ಖಾಟಿಕ್ (Payal Khatik) ಎಂಟೆಕ್‌ ಪದವಿಯ ಕನಸು ಹೊತ್ತು ಲಂಡನ್‌ಗೆ ಹೊರಟಿದ್ದಳು. ಆದರೆ ಅವಳ ಹಾಗೂ ಕುಟುಂಬದ ಕನಸು ಆಗಸದಲ್ಲಿ ಛಿದ್ರವಾಗಿದೆ. ಹೌದು, ಅಹಮದಾಬಾದ್‌ನಲ್ಲಿ (Ahmedabad)‌ ನಡೆದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ (Plane Crash) ಅವಳು ಸಾವನ್ನಪ್ಪಿದ್ದಾಳೆ.

    ಪಾಯಲ್‌ ತಂದೆ ರಿಕ್ಷಾ ಚಾಲಕರಾಗಿದ್ದು, ಗುರುವಾರ ಮಗಳನ್ನು ವಿಮಾನ ಹತ್ತಿಸಿ ಉತ್ಸಾಹದಿಂದ ಕಳುಹಿಸಿದ್ದರು. ಅವಳು ಸುರಕ್ಷಿತವಾಗಿ ಲಂಡನ್‌ ತಲುಪುತ್ತಾಳೆ. ಅಲ್ಲಿ ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೇರುತ್ತಾಳೆ ಎಂದು ಕುಂಟುಂಬಸ್ಥರು ಸಹ ಕನಸು ಕಂಡಿದ್ದರು. ಆದರೆ ವಿಧಿಯ ಆಟ ಮಾತ್ರ ಬೇರೆಯದೇ ಆಗಿತ್ತು. ಪಾಯಲ್‌ ಸಾವು ದೃಢಪಟ್ಟಿದ್ದು, ಡಿಎನ್‌ಎ ಪರೀಕ್ಷೆಯಿಂದ ಮೃತದೇಹ ಗುರುತಿಸಲಾಗಿದೆ. ಇದನ್ನೂ ಓದಿ: ಕನಸಿನ ಕೋರ್ಸ್‌ಗಾಗಿ ಲಂಡನ್‌ಗೆ ಹೊರಟಿದ್ದ ಯುವತಿಯ ದುರಂತ ಅಂತ್ಯ!

    ಮಗಳ ಕನಸಿನ ಬಗ್ಗೆ ಮಾತಾಡಿರುವ ತಂದೆ ಸುರೇಶ್ ಖಾಟಿಕ್, ಕಾಲೇಜು ಮುಗಿಸಿದ ನಂತರ ಪಾಯಲ್ ನಮ್ಮೊಂದಿಗೆ ಇದ್ದಳು. ಅವಳು ಲಂಡನ್‌ನಲ್ಲಿ‌ ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಳು. ಅವಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದೆವು. ಅವಳಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಇದರಿಂದ ನಮ್ಮ ಬಡತನ ನೀಗುತ್ತದೆ ಎಂದು ಭಾವಿಸಿದ್ದೆವು. ಆದರೆ ಈಗ ಸಾಲ ಮರುಪಾವತಿಸಲು ಯಾವುದೇ ದಾರಿ ಇಲ್ಲ ಎಂದು ಕಣ್ಣೀರಿಟ್ಟದ್ದಾರೆ.

    ಪಾಯಲ್ ಲಂಡನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಹೋಗುತ್ತಿದ್ದಳು. ಸ್ಥಳೀಯರು, ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

    ಗುರುವಾರ ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ (Air India) ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

  • ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

    ಅಹಮದಾಬಾದ್: ನಾನು ವಿಮಾನದಿಂದ ಜಂಪ್ ಮಾಡಲಿಲ್ಲ, ಬದಲಾಗಿ ಮುರಿದ ವಿಮಾನದ ಬಾಗಿಲಿನಿಂದ ನಡೆದುಕೊಂಡೇ ಬಂದೆ ಎಂದು ವಿಮಾನ ದುರಂತದಿಂದ (Air India Plane Crash) ಪಾರಾದ ಏಕೈಕ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ಕುತೂಹಲಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಮರ್ಜೆನ್ಸಿ ಡೋರ್ ಒಡೆದು ಹೋಗಿತ್ತು, ನನ್ನ ಸೀಟ್ ಕೂಡ ಒಡೆದು ಹೋಗಿತ್ತು. ಎಮರ್ಜೆನ್ಸಿ ಡೋರ್ ಮುರಿದಿತ್ತು. ಅದರಿಂದ ನಾನು ಹೊರಬಂದೆ. ನಾನು ಹೊರಬರುವಾಗ ಅಲ್ಪಸ್ವಲ್ಪ ಬೆಂಕಿ ಹೊತ್ತಿಕೊಂಡಿತ್ತು. ನಂತರ ಇಡೀ ವಿಮಾನ ಸುಟ್ಟು ಹೋಯಿತು. ನಾನು ನೆಲಮಹಡಿಯಲ್ಲಿ ಬಿದ್ದಿದ್ದೆ, ಅಲ್ಲಿಂದ ಪಾರಾದೆ ಎಂದರು. ಇದನ್ನೂ ಓದಿ:  ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಅರ್ಧ ವಿಮಾನ ಕಟ್ಟಡದ ನೆಲಮಹಡಿಯಲ್ಲಿ ಇತ್ತು. ನಾನು ಹೊರಗಡೆ ಬಂದಾಗ ಅಲ್ಪ ಸ್ವಲ್ಪ ಬೆಂಕಿ ಹೊತ್ತಿಕೊಂಡಿತ್ತು. ತದನಂತರ ಬ್ಲಾಸ್ಟ್ ಆಯಿತು. ನೆಲಮಹಡಿಯಿಂದ ನಾನು ವಾಕ್ ಮಾಡಿಕೊಂಡೇ ಬಂದೆ. ಪ್ರಧಾನಮಂತ್ರಿ ಅವರು ಎಲ್ಲಾ ಓಕೆ ನಾ ಎಂದು ಮಾತನಾಡಿಸಿದರು. ನನ್ನ ಕುಟುಂಬ ಲಂಡನ್‌ನಲ್ಲಿ ಇದೆ. ನನ್ನ ಅಣ್ಣ ಭಾರತದಲ್ಲಿ ಇದ್ದಾನೆ ಎಂದು ಹೇಳಿದರು. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

  • ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಏರ್ ಇಂಡಿಯಾ ವಿಮಾನ ದುರಂತ – ಅವಶೇಷಗಳ ತೆರವು ಕಾರ್ಯ ಆರಂಭ

    ಅಹಮದಾಬಾದ್: ಏರ್ ಇಂಡಿಯಾ ವಿಮಾನ (Air India Flight) ದುರಂತದಲ್ಲಿ ಸಾವಿನ ಸಂಖ್ಯೆ 274ಕ್ಕೇರಿದ್ದು, ಪತನವಾದ ಸ್ಥಳದಲ್ಲಿ ಅವಶೇಷಗಳ ತೆರವು ಕಾರ್ಯ ಆರಂಭಗೊಂಡಿದೆ.

    ವಿಮಾನದ ಒಳಭಾಗವನ್ನು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಳಗಡೆ ಮೃತ ದೇಹಗಳಿವೆಯೇ ಎಂದು ಪರಿಶೀಲಿಸಿ ತೆರವು ಕಾರ್ಯ ನಡೆಸಲಾಗುತ್ತಿದ್ದು, ಇಂದು ಇಡೀ ದಿನ ವಿಮಾನ ಟೇಲ್ ಭಾಗ (ವಿಮಾನದ ಹಿಂಭಾಗ) ತೆರವು ಕಾರ್ಯ ನಡೆಯಲಿದೆ.ವಿಮಾನ ತೆರವಿಗೆ ಮತ್ತೊಂದು ಕ್ರೇನ್ ಕೂಡ ಆಗಮಿಸಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಎರಡು ಕ್ರೇನ್ ಮೂಲಕ ವಿಮಾನ ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದ್ದು, ಬಳಿಕ ಅದನ್ನು ನೆಲಕ್ಕಿಳಿಸಿ ಹಾಸ್ಟೆಲ್ ಪ್ರದೇಶದಿಂದ ಸ್ಥಳಾಂತರ ಮಾಡಲಾಗುತ್ತದೆ. ಇಂದು ಸಂಜೆ ತನಕ ಕಾರ್ಯಚರಣೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

    ವಿಮಾನ ಪತನಗೊಂಡ ಪರಿಣಾಮ ವಿಮಾನದ ಹಿಂಭಾಗ ಟೇಲ್ ಹೊರತುಪಡಿಸಿ ಇನ್ನೇನು ಉಳಿದಿಲ್ಲ. ಇಡೀ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದ 90% ಭಾಗ ಸುಟ್ಟು ಕರಕಲಾಗಿದ್ದು, ಹಿಂಬದಿಯ ಟೇಲ್ ಅವಶೇಷಗಳು ಮಾತ್ರ ಹಾಗೇ ಉಳಿದಿದೆ. ಬಾಕಿ ಉಳಿದ ವಿಮಾನ ಸಂಪೂರ್ಣ ನಾಶವಾಗಿದೆ. ವಿಮಾನದಲ್ಲಿದ್ದ ಇಂಧನ ಒಮ್ಮೆಲೇ ದಹಿಸಿದ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶ ಎಲ್ಲವೂ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

  • ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

    ಅಹಮದಾಬಾದ್: ತಾಂತ್ರಿಕ ದೋಷದಿಂದ ಅಹಮದಾಬಾದ್‌ನ (Ahmedabad) ಮೇಘಾನಿಯಲ್ಲಿ ಏರ್ ಇಂಡಿಯಾ ವಿಮಾನ (Air India Flight) ಪತನಗೊಂಡ ಪರಿಣಾಮ 12 ಸಿಬ್ಬಂದಿ ಹಾಗೂ 230 ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತಪಟ್ಟ 12 ಸಿಬ್ಬಂದಿ ಪೈಕಿ 9 ಮಂದಿ ಸಿಬ್ಬಂದಿ ಮುಂಬೈ (Mumbai) ವಾಸಿಗಳಾಗಿದ್ದಾರೆ.

    ಮೃತಪಟ್ಟ 12 ಸಿಬ್ಬಂದಿ ಪೈಕಿ 9 ಸಿಬ್ಬಂದಿ ಮುಂಬೈವಾಸಿಗಳಾಗಿದ್ದು, ಮುಂಬೈನಲ್ಲೇ ನೆಲೆಸಿದ್ದರು. ಇನ್ನುಳಿದ ಮೂವರು ಮಹಾರಾಷ್ಟ್ರ, ಬಿಹಾರ ಹಾಗೂ ಮಣಿಪುರದವರಾಗಿದ್ದಾರೆ. ಘಟನೆಯಲ್ಲಿ ಬಿಜೆ ಮೆಡಿಕಲ್ ಹಾಸ್ಪಿಟಲ್ ಎಂಬಿಬಿಎಸ್‌ನ 10 ವಿದ್ಯಾರ್ಥಿಗಳು ಸೇರಿದಂತೆ 274 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇದನ್ನೂ ಓದಿ: 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

    ಮುಂಬೈನ 9 ಸಿಬ್ಬಂದಿ ಯಾರು?
    ಕ್ಯಾಪ್ಟನ್ ಸುಮೀತ್ ಸಭರ್ವಾಲ್, ಜಲವಾಯು ವಿಹಾರ್, ಪೋವೈ
    ಕ್ಲೈವ್ ಕುಂದರ್, ಮಂಗಳೂರು ಮೂಲದವರಾದರೂ ಬೊರಿವಲಿಯಲ್ಲಿ ವಾಸ
    ಅಪರ್ಣಾ ಮಹಾಡಿಕ್, ಗೋರೆಗಾಂವ್ ಈಸ್ಟ್
    ಸೈನೀತಾ ಚಕ್ರವರ್ತಿ, ಜುಹು ಕೋಲಿವಾಡ
    ದೀಪಕ್ ಪಾಠಕ್, ಬದ್ಲಾಪುರ್
    ರೋಷನಿ ಸೋಂಘಾರೆ, ಡೊಂಬಿವಿಲಿ
    ಶ್ರದ್ಧಾ ಧವನ್, ಮುಲುಂದ್
    ಮೈಥಿಲಿ ಪಾಟೀಲ್, ಪನ್ವೇಲ್
    ಎಂಗಂಥೋಯ್ ಶರ್ಮಾ, ಮಣಿಪುರದವರಾದರೂ ಮುಂಬೈನಲ್ಲಿ ವಾಸ

    ಉಳಿದ ಮೂವರು ಸಿಬ್ಬಂದಿ ಎಲ್ಲಿಯವರು?
    ಇರ್ಫಾನ್ ಶೇಖ್, ಸಂತ ತುಕಾರಾಂ ನಗರ, ಪಿಂಪ್ರಿ ಚಿಂಚ್ವಾಡ, ಮಹಾರಾಷ್ಟ್ರ
    ಮನೀಷಾ ಥಾಪಾ, ಪಾಟ್ನಾ, ಬಿಹಾರ
    ಲಮ್ನುಂಥೆಮ್ ಸಿಂಗ್ಸನ್, ಮಣಿಪುರ

  • ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಸಂಭವಿಸಿದ ಏರ್‌ ಇಂಡಿಯಾ (Air India) ಬೋಯಿಂಗ್‌ ಡ್ರೀಮ್‌ಲೈನರ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.

    ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್‌ ಹಾಗೂ ಸಿಬ್ಬಂದಿ, ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಜನರು ಸೇರಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು.

    ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನದಲ್ಲಿದ್ದ ಎರಡು ಬ್ಲ್ಯಾಕ್‌ಬಾಕ್ಸ್‌ಗಳ ಪೈಕಿ ಒಂದು ಪತ್ತೆಯಾಗಿದೆ. ಅದನ್ನು ಅಧಿಕಾರಿಗಳ ತಂಡ ಕೊಂಡೊಯ್ದಿದೆ. ಮತ್ತೊಂದು ಬ್ಲ್ಯಾಕ್‌ಬಾಕ್ಸ್‌ಗಾಗಿ ಹುಡುಕಾಟ ನಡೆದಿದೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಅಪಘಾತ ಸಂಭವಿಸಿದ ಮಾರನೇ ದಿನ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

  • ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಅಹಮದಾಬಾದ್: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಅಹಮದಾಬಾದ್‌ನ (Ahmedabad) ವಿಮಾನ ನಿಲ್ದಾಣದ ಬಳಿಯ ಮೇಘಾನಿ ಜನವಸತಿ ಪ್ರದೇಶದಲ್ಲಿ ಏರ್ ಇಂಡಿಯಾ (Air India) ವಿಮಾನ ಪತನಗೊಂಡ (Plane Crash) ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 274 ಮಂದಿ ಮೃತಪಟ್ಟಿದ್ದಾರೆ. 100 ಕೋಟಿ ಪ್ರಯಾಣಿಕರನ್ನು ಸೇಫ್ ಲ್ಯಾಂಡ್ ಮಾಡಿ ಬ್ರ‍್ಯಾಂಡ್ ಸೃಷ್ಟಿಸಿದ್ದ ಏರ್ ಲೈನ್ಸ್‌ನಲ್ಲಿ ಏನು ತಾಂತ್ರಿಕದೋಷ ಉಂಟಾಯಿತು ಎಂಬ ಕುರಿತು ತನಿಖೆ ಆರಂಭಗೊಂಅಡಿದೆ.

    ಸುರಕ್ಷತೆ, ದಕ್ಷತೆ, ಆರಾಮದಾಯಕ ಬೋಯಿಂಗ್ 787 ವಿಮಾನಕ್ಕೆ ಏನಾಯಿತು? ಸೇಫ್ ಲ್ಯಾಂಡ್‌ಗೆ ಹೆಸರುವಾಸಿಯಾಗಿದ್ದ ವಿಮಾನ ಪತನ ಆಗಿದ್ದು ಹೇಗೆ ಎಂಬ ಕುರಿತು ತನಿಖೆ ತೀವ್ರಗೊಂಡಿದೆ. ವಿಮಾನ ಪತನಕ್ಕೆ ಕಾರಣ ಏನು ಎಂಬ ಕುರಿತು ಐದು ತಂಡಗಳು ತನಿಖೆ ಆರಂಭಿಸಿವೆ.

    ಎಎಐಬಿ (ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ):
    ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಎಐಬಿ ದೇಶದಲ್ಲಿ ನಡೆಯುವ ವಿಮಾನ ದುರಂತಗಳ ಅಧಿಕೃತ ತನಿಖಾ ಸಂಸ್ಥೆಯಾಗಿದೆ.

    ಉನ್ನತ ಮಟ್ಟದ ಸಮಿತಿ:
    ಅಪಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ವಿಮಾನಯಾನ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ತಂಡ ತನಿಖಾ ತಂಡಗಳ ಸಹಯೋಗದೊಂದಿದೆ ಕಾರ್ಯ ನಿರ್ವಹಿಸಲಿದೆ.

    ಅಮೆರಿಕ ಮತ್ತು ಬ್ರಿಟನ್ ತಂಡಗಳು:
    ಅಮೆರಿಕ ಮತ್ತು ಬ್ರಿಟನ್ ತಂಡಗಳನ್ನು ಏರ್ ಇಂಡಿಯಾ ವಿಮಾನ ಪತನದ ತನಿಖೆಗೆ ನಿಯೋಜಿಸಲಾಗಿದೆ. ಅಮೆರಿಕ ಮೂಲದ ಬೋಯಿಂಗ್ ತಜ್ಞರು ಈ ತಂಡದಲ್ಲಿ ಇರಲಿದ್ದಾರೆ.

    ಎನ್‌ಐಎ:
    ಮತ್ತೊಂದಡೆ ರಾಷ್ಟ್ರೀಯ ತನಿಖಾ ದಳ ಕೂಡ ತನಿಖೆಗೆ ಇಳಿದಿದೆ. ವಿದ್ವಾಂಸಕ ಕೃತ್ಯ ದೃಷ್ಟಿಕೋನದಿಂದಲೂ ತನಿಖೆ ಆರಂಭಿಸಿದೆ.

    ಗುಜರಾತ್ ಪೊಲೀಸ್:
    ಗುಜರಾತ್ ಸರ್ಕಾರ 40 ಸದಸ್ಯರ ವಿಶೇಷ ತಂಡ ರಚಿಸಿದೆ. ಈ ತಂಡವು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ತಂಡಕ್ಕೆ ನೆರವು ನೀಡಲಿದೆ.

  • ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಅಹಮದಾಬಾದ್: ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಮಾನ ದುರಂತ (Ahmedabad Plane Crash) ನಡೆದೋಗಿದೆ. ಪ್ರಯಾಣಿಕರು, ಸ್ಥಳೀಯರು ಸೇರಿ 260ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ದುರಂತಕ್ಕೆ ಅಸಲಿ ಕಾರಣ ಏನು ಎಂಬುದು ಇಂದು ಅಥವಾ ನಾಳೆ ಗೊತ್ತಾಗುವ ಸಾಧ್ಯತೆಯಿದೆ.

    ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ವಿಮಾನ ಪತನ ದುರಂತದ ತನಿಖೆ ಚುರುಕುಗೊಂಡಿದೆ. ಟೇಕಾಫ್ ಆದ 25 ಸೆಕೆಂಡ್‌ಗಳಲ್ಲಿ ಪತನಗೊಂಡ ಜಾಗದಲ್ಲೀಗ ಬ್ಲ್ಯಾಕ್‌ಬಾಕ್ಸ್ (Black Box) ಹಾಗೂ ಡಿವಿಆರ್ ಪತ್ತೆಯಾಗಿದ್ದು, ದುರಂತಕ್ಕೆ ಅಸಲಿ ಕಾರಣ ಗೊತ್ತಾಗಲಿದೆ. ಬ್ಲ್ಯಾಕ್‌ಬಾಕ್ಸ್ ಸಿಕ್ಕ 48 ಘಂಟೆಗಳಲ್ಲಿಯೇ ರಿಪೋರ್ಟ್ ಸಿಗಲಿದೆ. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

    ಬ್ಲ್ಯಾಕ್‌ಬಾಕ್ಸ್‌ನಲ್ಲಿ ಎರಡು ವಿಧ ಇರುತ್ತದೆ. ಒಂದು ಕಾಕ್ ಪಿಟ್‌ನಲ್ಲಿರುವ ಬ್ಲ್ಯಾಕ್‌ಬಾಕ್ಸ್. ಇನ್ನೊಂದು ಡೆಟಾ ರೆಕಾರ್ಡ್ ಬಾಕ್ಸ್. ಒಂದು ಕಾಕ್ ಪಿಟ್‌ನಲ್ಲಿ ಎಟಿಸಿ, ಪೈಲಟ್‌ನೊಂದಿಗಿನ ಸಂಭಾಷಣೆಯ ಆಡಿಯೋ ರೆಕಾರ್ಡ್ ಆಗಿರುತ್ತದೆ. ಮತ್ತೊಂದು ಫ್ಲೈಟ್ ಡೆಟಾ ರೆಕಾರ್ಡರ್. ಇದರಲ್ಲಿ ಇಂಜಿನ್‌ನ ಕ್ಷಮತೆ, ವೇಗ, ಎತ್ತರ ಇತರೆ ತಾಂತ್ರಿಕ ಸಮಸ್ಯೆಗಳು ಏನೇ ಇದ್ದರೂ ಫ್ಲೈಟ್ ಡೆಟಾ ರೆಕಾರ್ಡರ್‌ನಲ್ಲಿ ಸೆರೆಯಾಗಿರುತ್ತದೆ. ಈ ಬ್ಲ್ಯಾಕ್ ಬಾಕ್ಸ್ 1 ಸಾವಿರ ಡಿಗ್ರಿ ಉಷ್ಣಾಂಶವಿದ್ದರೂ ಇದಕ್ಕೆ ಹಾನಿಯಾಗಲ್ಲ. ಸಮುದ್ರದ ಆಳಕ್ಕೆ ಬಿದ್ದರೂ 30 ದಿನಗಳವರೆಗೆ ಏನು ಹಾನಿಯಾಗಲಾರದ ಹಾಗೆ ವಿನ್ಯಾಸ ಮಾಡಿರಲಾಗುತ್ತದೆ. ಇದನ್ನೂ ಓದಿ: ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

    ಬ್ಲ್ಯಾಕ್ ಬಾಕ್ಸ್‌ಗೆ ಅತಿಯಾದ ಹೊಡೆತ, ಉಷ್ಣಾಂಶವಿದ್ದರೆ ಸೆನ್ಸಾರ್, ಚಿಪ್, ಕೇಬಲ್ ಇತರೆ ಎಲೆಕ್ಟ್ರಿಕ್ ಸಾಧನಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಹಾನಿಯಾದರೂ ಅವುಗಳನ್ನು ಮರು ಜೋಡಿಸಿ ಡೇಟಾವನ್ನ ಪಡೆಯಬಹುದು. ಡಿಜಿಸಿಎ ಕೂಡ ತನಿಖೆಯನ್ನು ಚುರುಕುಗೊಳಿಸಿದ್ದು, ಇನ್ನೆರೆಡು ದಿನದಲ್ಲಿ ಈ ಅತಿದೊಡ್ಡ ದುರಂತಕ್ಕೆ ಕಾರಣ ಸಿಗಲಿದೆ. ಇದನ್ನೂ ಓದಿ: ಬೆಳಗಾವಿ | ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ – ಚಾಲಕ ದುರ್ಮರಣ

  • ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

    ಬೆಂಗಳೂರು ಕಾಲ್ತುಳಿತ ಬೆನ್ನಲ್ಲೇ ಎಚ್ಚೆತ್ತ ಗುಜರಾತ್‌; ರಥಯಾತ್ರೆಯಲ್ಲಿ ಕಾಲ್ತುಳಿತ ತಪ್ಪಿಸಲು ನಯಾ ಪ್ಲ್ಯಾನ್‌ – AI ಟೆಕ್ನಾಲಜಿ ಮೊರೆ

    ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಕಾಲ್ತುಳಿತ ಪ್ರಕರಣಗಳು ವರದಿಯಾಗುತ್ತಿವೆ. ಮಹಾಕುಂಭಮೇಳ, ತಿರುಪತಿ ದೇವಸ್ಥಾನ, ಅಲ್ಲು ಅರ್ಜುನ್ ಅಭಿನಯದ ಪುಷ್ಪಾ-2 ಸೆಲೆಬ್ರೇಷನ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಹತ್ತಾರು ಮಂದಿ ಉಸಿರು ಚೆಲ್ಲಿದರು. ಈ ದುರಂತಗಳು ಆಡಳಿತ ಸರ್ಕಾರಗಳು ಹಾಗೂ ಭದ್ರತಾ ವ್ಯವಸ್ಥೆಗಳಿಗೆ ಎಚ್ಚರಿಕೆ ಕರೆಗಂಟೆಯಾಗಿದೆ. ಲಕ್ಷಾಂತರ ಮಂದಿ ಸೇರುವಂತಹ ಸಮಾರಂಭ, ಜಾತ್ರೆ, ಸಂಭ್ರಮೋತ್ಸವಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗಳು ಚಿಂತನೆ ನಡೆಸಿವೆ. ಈ ಹೊತ್ತಿನಲ್ಲೇ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಐತಿಹಾಸಿಕ ಜಗನ್ನಾಥ ರಥ ಯಾತ್ರೆಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನಲ್ಲಾದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ, ಅಹಮದಾಬಾದ್ ಪೊಲೀಸರು ನಯಾ ಪ್ಲ್ಯಾನ್‌ವೊಂದನ್ನು ರೂಪಿಸಿದ್ದಾರೆ. ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಲು ಎಐ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

    ಜಗನ್ನಾಥ ರಥಯಾತ್ರೆ
    ಅಹಮದಾಬಾದ್‌ನಲ್ಲಿ ನಡೆಯುವ ರಥಯಾತ್ರೆ ಅದೊಂದು ಐತಿಹಾಸಿಕ ಹಿಂದೂ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆಯನ್ನು ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಈಗ ಮತ್ತೆ 148ನೇ ಜಗನ್ನಾಥ ರಥಯಾತ್ರೆಗೆ ವೇದಿಕೆ ಸಿದ್ಧವಾಗಿದೆ. ಇದೇ ಜೂ.27 ರಂದು ರಥೋತ್ಸವ ನಡೆಯಲಿದೆ. ಪವಿತ್ರ ಮೆರವಣಿಗೆಯನ್ನು ವೀಕ್ಷಿಸಲು 15 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ.

    ಕರ್ನಾಟಕದ ಬೆಂಗಳೂರಿನಲ್ಲಿ ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ 11 ಜನರು ಸಾವನ್ನಪ್ಪಿ, ಹತ್ತಾರು ಜನರು ಗಾಯಗೊಂಡ ದುರ್ಘಟನೆ ನಡೆಯಿತು. ಪರಿಣಾಮವಾಗಿ ಅಹಮದಾಬಾದ್‌ನಲ್ಲಿ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಲಕ್ಷಾಂತರ ಮಂದಿ ಸೇರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಸೂಕ್ತ ಭದ್ರತಾ ವ್ಯವಸ್ಥೆಗೆ ಮುಂದಾಗಿವೆ.

    ಕಾಲ್ತುಳಿತ ತಪ್ಪಿಸಲು ಎಐ ಮೊರೆ!
    ಅತಿಹೆಚ್ಚು ಜನಸಂದಣಿಯ ಮಾರ್ಗದುದ್ದಕ್ಕೂ ಅತ್ಯಾಧುನಿಕ ಸಾಫ್ಟ್‌ವೇರ್‌ ವ್ಯವಸ್ಥೆ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಸಂಭವನೀಯ ಕಾಲ್ತುಳಿತ ತಪ್ಪಿಸಲು ಕೃತಕ ಬುದ್ಧಿಮತ್ತೆ (AI) ಹೊಂದಿರುವ ಡ್ರೋನ್ ಬಳಸಲು ಅಹಮದಾಬಾದ್ ಪೊಲೀಸರು ಕ್ರಮವಹಿಸಿದ್ದಾರೆ. ಈ ವ್ಯವಸ್ಥೆಯು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ‘ಕಳೆದ ವರ್ಷ ಜಗನ್ನಾಥ ದೇವಸ್ಥಾನದಿಂದ ಆರಂಭವಾಗಿ ಸರಸ್ಪುರದ ವರೆಗೆ ಸಾಗಿ ಅದೇ ದೇವಸ್ಥಾನದಲ್ಲಿ ಕೊನೆಗೊಳ್ಳುವ ರಥಯಾತ್ರೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ನಾವು ಸಾಕಷ್ಟು ತಂತ್ರಜ್ಞಾನವನ್ನು ಬಳಸಿದ್ದೇವೆ. ಈ ಬಾರಿ ವಿಶೇಷವಾಗಿ ಯಾತ್ರೆಯ ಮಾರ್ಗದಲ್ಲಿ ಅತ್ಯಂತ ಜನದಟ್ಟಣೆಯ ಸ್ಥಳಗಳಲ್ಲಿ ಎಐ ಆಧಾರಿತ ಕಾಲ್ತುಳಿತ ತಪ್ಪಿಸುವ ವ್ಯವಸ್ಥೆಯನ್ನು ಬಳಸಲು ನಾವು ಯೋಜಿಸುತ್ತಿದ್ದೇವೆ ಎಂದು ಅಪರಾಧ ವಿಭಾಗದ ಎಸಿಪಿ ಭರತ್ ಪಟೇಲ್ ತಿಳಿಸಿದ್ದಾರೆ.

    ಹೊಸ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತೆ?
    ನಿರ್ದಿಷ್ಟ ಚದರ ಮೀಟರ್‌ಗಳ ವ್ಯಾಪ್ತಿಯಲ್ಲಿ ಜನರ ಸಾಂದ್ರತೆಯನ್ನು ಈ ತಂತ್ರಜ್ಞಾನ ಲೆಕ್ಕಹಾಕುತ್ತದೆ. ಈ ಭಾಗದಲ್ಲಿ ಕಾಲ್ತುಳಿತದ ಅಪಾಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಕಾಲ್ತುಳಿತ ತಪ್ಪಿಸಲು ಜನಸಂದಣಿಯನ್ನು ಚದುರಿಸಲು ಅಧಿಕಾರಿಗಳಿಗೆ ಸಿಗ್ನಲ್ ರವಾನಿಸುತ್ತದೆ. ಈ ಟೆಕ್ನಾಲಜಿ ಫಲಿತಾಂಶಗಳ ಆಧಾರದ ಮೇಲೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಅಪರಾಧ ಪತ್ತೆ ದಳ (ಡಿಸಿಬಿ) ಹಂಚಿಕೊಂಡ ಮಾಹಿತಿಯ ಪ್ರಕಾರ, ‘ಸಿಸಿಟಿವಿ ಕ್ಯಾಮೆರಾಗಳಲ್ಲಿನ ಕಾಲ್ತುಳಿತ ವಿರೋಧಿ ಅಲ್ಗಾರಿದಮ್‌ಗಳು ಜನಸಂದಣಿ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಜನನಿಬಿಡ ಪ್ರದೇಶಗಳಲ್ಲಿ ಅಪಾಯಕಾರಿ ಸಂದರ್ಭಗಳನ್ನು ತಡೆಗಟ್ಟಲು ಎಐ ಮತ್ತು ಇಮೇಜ್ ಸಂಸ್ಕರಣೆಯನ್ನು ಬಳಸಿಕೊಳ್ಳುತ್ತವೆ’.

    ರಥಯಾತ್ರೆಯ ಮಾರ್ಗದಲ್ಲಿ ಅತ್ಯಂತ ಜನದಟ್ಟಣೆಯ ಸ್ಥಳಗಳೆಂದರೆ ಜಗನ್ನಾಥ ದೇವಸ್ಥಾನ, ಧಲ್ ನಿ ಪೋಲ್ ಬಳಿಯ ಕಿರಿದಾದ ಮಾರ್ಗ, ಚಕಲೇಶ್ವರ ಮಹಾದೇವ ದೇವಸ್ಥಾನದ ಬಳಿಯ ಪ್ರದೇಶ, ಭಾಗವಹಿಸುವವರು ಊಟಕ್ಕೆ ನಿಲ್ಲುವ ಸರಸ್ಪುರ ನಿಲ್ದಾಣ ಮತ್ತು ಜಗನ್ನಾಥ ದೇವಸ್ಥಾನಕ್ಕೆ ಹಿಂತಿರುಗುವ ಮಾರ್ಗದಲ್ಲಿ ಶಹಪುರ ಪ್ರದೇಶದಲ್ಲಿ ಕಿರಿದಾದ ಮಾರ್ಗ. ತಂತ್ರಜ್ಞಾನದ ಕುರಿತು ಮಾತನಾಡಿರುವ ಎಸಿಪಿ ಪಟೇಲ್, ಈ ಸಿಸ್ಟಮ್ ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳನ್ನು ಎಣಿಸಲು ಥರ್ಮಲ್ ಇಮೇಜಿಂಗ್ ಮತ್ತು ಪಿಕ್ಸೆಲ್-ಕೌಂಟಿಗ್‌ನ್ನು ಬಳಸುತ್ತದೆ. ಪೊಲೀಸ್ ನಿಯಂತ್ರಣ ಕೊಠಡಿ ಹಾಗೂ ಕ್ಷೇತ್ರ ಘಟಕಗಳಲ್ಲಿ ಇರಿಸಲಾಗುವ ಪರದೆಗಳಿಗೆ ಈ ಮಾಹಿತಿಯನ್ನು ನಿರಂತರವಾಗಿ ರವಾನಿಸುತ್ತದೆ. ಇದರಿಂದಾಗಿ ನಿರ್ದಿಷ್ಟ ಜಾಗದಲ್ಲಿ ಜನರ ಸಂಖ್ಯೆಯು ಮಿತಿಯನ್ನು ಮೀರಿದರೆ ಕ್ರಮ ಕೈಗೊಳ್ಳಲು ಸ್ಥಳದಲ್ಲಿ ನಿಯೋಜನೆಗೊಳ್ಳುವ ಪಡೆಗಳಿಗೆ ತಕ್ಷಣ ಸೂಚನೆ ನೀಡಬಹುದು.

    ರಥಯಾತ್ರೆಯು ಮೆರವಣಿಗೆಯಾಗಿರುವುದರಿಂದ ಜನಸಂದಣಿಯು ಸಾಗುತ್ತಾ ಅಂತಿಮವಾಗಿ ಒಂದು ಪ್ರದೇಶದಲ್ಲಿ ಜಮಾಯಿಸುವ ಸಾಧ್ಯತೆ ಇರುತ್ತದೆ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿ, ಒಂದೆಡೆ ಸೇರುವ ಜನಸಮೂಹಕ್ಕೆ ಸ್ಥಳಾವಕಾಶ ಕಲ್ಪಿಸಲು ಪೊಲೀಸ್ ಸಿಬ್ಬಂದಿಯನ್ನು ನಿರ್ದಿಷ್ಟ ಪ್ರದೇಶದಲ್ಲಿ ನಿಯೋಜನೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಯಾತ್ರೆಯಲ್ಲಿ ಯಾವುದೇ ಕಾಲ್ತುಳಿತ ಸಂಭವಿಸಿಲ್ಲ. ಸುಧಾರಿತ ತಂತ್ರಜ್ಞಾನವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಳಸಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಸೇರಿದಂತೆ ಇತರೆ ಅವಘಡಗಳನ್ನು ಮನನ ಮಾಡಿಕೊಂಡು ಇಲ್ಲಿನ ಪೊಲೀಸ್ ಇಲಾಖೆ ಎಚ್ಚರಿಕೆ ಹೆಜ್ಜೆಯನ್ನಿಟ್ಟಿದೆ.

    ಏನಿದು ಹೊಸ ತಂತ್ರಜ್ಞಾನ?
    * ಮೇಲ್ವಿಚಾರಣೆ: ಎಐ-ಚಾಲಿತ ಸಿಸಿಟಿವಿ ಕ್ಯಾಮೆರಾಗಳು ನೈಜ ಸಮಯದಲ್ಲಿ ವೀಡಿಯೊ ಸ್ಟ್ರೀಮ್‌ಗಳನ್ನು ನಿರಂತರವಾಗಿ ವಿಶ್ಲೇಷಿಸುತ್ತವೆ.

    * ಜನಸಂದಣಿ ಸಾಂದ್ರತೆಯ ಅಂದಾಜು: ಅಲ್ಗಾರಿದಮ್‌ಗಳು ನಿರ್ದಿಷ್ಟ ಪ್ರದೇಶದಲ್ಲಿನ ಜನರ ಸಂಖ್ಯೆಯನ್ನು ಲೆಕ್ಕಾಚಾರ ಮಾಡುತ್ತದೆ. ಇದು ಪಿಕ್ಸೆಲ್-ಆಧಾರಿತ ವಿಶ್ಲೇಷಣೆ ಮಾಡುತ್ತದೆ. ತಲೆಗಳ ಮೂಲಕ ವ್ಯಕ್ತಿಗಳನ್ನು ಗುರುತಿಸಲು ಮತ್ತು ಎಣಿಸಲು ಯಂತ್ರ ಕಲಿಕೆ ಮಾದರಿಗಳನ್ನು ಬಳಸುವುದು.

    * ಮಿತಿ: ಜನಸಂದಣಿ ಸಾಂದ್ರತೆಗಾಗಿ ಮೌಲ್ಯಮಾಪನ ಮಾಡುತ್ತದೆ. ಪತ್ತೆಯಾದ ಸಾಂದ್ರತೆಯು ಮಿತಿಗಳನ್ನು ದಾಟಿದರೆ, ಎಚ್ಚರಿಕೆ ಸಂದೇಶ ರವಾನಿಸುತ್ತದೆ.

    * ಅವಘಡಗಳ ಪತ್ತೆ: ಈ ಅಲ್ಗಾರಿದಮ್‌ಗಳು ಚಲನೆಯಲ್ಲಿ ಹಠಾತ್ ಉಲ್ಬಣಗಳು, ಅಸಾಮಾನ್ಯ ಕ್ಲಸ್ಟರಿಂಗ್ ಮಾದರಿಗಳು, ಬಿದ್ದ ವ್ಯಕ್ತಿಗಳು ಮತ್ತು ಆಕ್ರಮಣಕಾರಿ ಚಲನೆಯಂತಹ ಅಸಾಮಾನ್ಯ ಜನಸಂದಣಿಯ ನಡವಳಿಕೆಯನ್ನು ಗುರುತಿಸಬಹುದು.

    * ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ: ಸಂಭಾವ್ಯ ಕಾಲ್ತುಳಿತದ ಅಪಾಯವನ್ನು ಪತ್ತೆಹಚ್ಚಿದ ನಂತರ, ವ್ಯವಸ್ಥೆಯು LCD ಡಿಸ್ಪ್ಲೇಗಳು, GSM ಸಂದೇಶಗಳು ಅಥವಾ ಇತರ ಸಂವಹನ ಮಾರ್ಗಗಳ ಮೂಲಕ ಭದ್ರತಾ ಸಿಬ್ಬಂದಿ ಅಥವಾ ನಿಯಂತ್ರಣ ಕೊಠಡಿಗಳಿಗೆ ತಕ್ಷಣದ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

    ಟೆಕ್ನಾಲಜಿ ಪ್ರಯೋಜನಗಳೇನು?
    * ಪೂರ್ವಭಾವಿ ತಡೆಗಟ್ಟುವಿಕೆ: ಕಾಲ್ತುಳಿತಗಳು ಸಂಭವಿಸುವ ಮೊದಲೇ ಪತ್ತೆಹಚ್ಚುವ ಮತ್ತು ಎಚ್ಚರಿಕೆ ನೀಡುವ ಸಾಮರ್ಥ್ಯ. ಇದು ಅಧಿಕಾರಿಗಳಿಗೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

    * ನಿಖರ ಡೇಟಾ: ಜನಸಂದಣಿ ಸಾಂದ್ರತೆ ಮತ್ತು ಚಲನೆಯ ಕುರಿತು ತಕ್ಷಣದ & ನಿಖರವಾದ ಡೇಟಾವನ್ನು ಒದಗಿಸುತ್ತದೆ.

    * ಸುರಕ್ಷತೆ: ಮಾನವ ದೋಷಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಅಪಾಯಗಳಿಗೆ ತ್ವರಿತ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

    * ಮುನ್ನೆಚ್ಚರಿಕೆ ಕ್ರಮಕ್ಕೆ ಸಹಕಾರಿ: ಹೆಚ್ಚಿನ ಜನಸಂದಣಿ ಸಾಂದ್ರತೆಯಿರುವ ಪ್ರದೇಶಗಳಿಗೆ ಭದ್ರತಾ ಸಿಬ್ಬಂದಿ ಮತ್ತು ಸಂಪನ್ಮೂಲಗಳ ಉತ್ತಮ ನಿಯೋಜನೆಗೆ ಸಹಾಯ ಮಾಡುತ್ತದೆ.

    * ಭವಿಷ್ಯದ ಯೋಜನೆಗಾಗಿ ಡೇಟಾ: ಭವಿಷ್ಯದ ಕಾರ್ಯಕ್ರಮಗಳಿಗಾಗಿ ಜನಸಂದಣಿ ನಿರ್ವಹಣಾ ತಂತ್ರಗಳನ್ನು ಸುಧಾರಿಸಲು ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಬಹುದು.

    ಸವಾಲುಗಳೇನು?
    * ಸೀಮಿತ ನಿಖರತೆ: ಎಐ ಅಲ್ಗಾರಿದಮ್‌ಗಳು ಮುಚ್ಚುವಿಕೆ (ಜನರು ಪರಸ್ಪರ ನಿರ್ಬಂಧಿಸುವುದು), ವಿಭಿನ್ನ ಪರಿಸ್ಥಿತಿಗಳು (ಬೆಳಕು, ಹವಾಮಾನ ಮತ್ತು ಕ್ಯಾಮೆರಾ ಕೋನಗಳಲ್ಲಿನ ಬದಲಾವಣೆಗಳು) ಮತ್ತು ತರಬೇತಿ ಡೇಟಾದಲ್ಲಿನ ಪಕ್ಷಪಾತ (ತಪ್ಪು ಧನಾತ್ಮಕತೆಗೆ ಕಾರಣವಾಗುತ್ತದೆ) ಸಮಸ್ಯೆಗಳು ಎದುರಾಗಬಹುದು.

    * ಕಂಪ್ಯೂಟೇಶನಲ್ ಸಂಕೀರ್ಣತೆ ಮತ್ತು ವೆಚ್ಚ: ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು, ಶಕ್ತಿಯುತ ಸಂಸ್ಕರಣಾ ಘಟಕಗಳು ಮತ್ತು ಅತ್ಯಾಧುನಿಕ ಅಲ್ಗಾರಿದಮ್‌ಗಳ ಅಗತ್ಯತೆಯಿಂದಾಗಿ ಅಂತಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಯೋಜಿಸುವುದು ದುಬಾರಿಯಾಗಬಹುದು.

    * ಡೇಟಾ ಗೌಪ್ಯತೆ ಮತ್ತು ನೈತಿಕ ಕಾಳಜಿ: CCTV ಮತ್ತು AIನ ವ್ಯಾಪಕ ಬಳಕೆಯು ಗೌಪ್ಯತೆ ಮತ್ತು ಡೇಟಾದ ಸಂಭಾವ್ಯ ದುರುಪಯೋಗದ ಬಗ್ಗೆ ಕಳವಳ ಹುಟ್ಟುಹಾಕುತ್ತದೆ.

    * ಅಸ್ತಿತ್ವದಲ್ಲಿರುವ ಮೂಲಸೌಕರ್ಯದೊಂದಿಗೆ ಏಕೀಕರಣ: ಹಳೆಯ ಸಿಸಿಟಿವಿ ನೆಟ್‌ವರ್ಕ್ಗಳೊಂದಿಗೆ ಹೊಸ AI-ಚಾಲಿತ ವ್ಯವಸ್ಥೆಗಳನ್ನು ಸಂಯೋಜಿಸುವುದು ಸಂಕೀರ್ಣವಾಗಬಹುದು.

    * ಮಿತಿಗಳನ್ನು ವ್ಯಾಖ್ಯಾನಿಸುವುದು: ವಿಭಿನ್ನ ಪರಿಸರ ಮತ್ತು ಸಾಂಸ್ಕೃತಿಕ ಸಂದರ್ಭಗಳಿಗೆ ಸೂಕ್ತವಾದ ಜನಸಂದಣಿ ಸಾಂದ್ರತೆಯ ಮಿತಿಗಳನ್ನು ನಿರ್ಧರಿಸುವುದು ಸವಾಲಿನದ್ದಾಗಿರಬಹುದು.