Tag: Ahmedabad

  • ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ಗಾಂಧಿನಗರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ಗೆ ಭೇಟಿ ನೀಡಲಿದ್ದಾರೆ.

    ಗುಜರಾತ್, ಮುಂಬೈ, ಕರ್ನಾಟಕದ ಕೆಲವು ಭಾಗಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದ ಹಾನಿಗೊಂಡ ಪ್ರದೇಶಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿಯವರು ಡಿಯುಗೆ ಭೇಟಿ ನೀಡಲಿದ್ದಾರೆ.

    ಬೆಳಗ್ಗೆ 9.30ರ ಸುಮಾರಿಗೆ ಮೋದಿಯವರು ದೆಹಲಿಯಿಂದ ಹೊರಡಲಿದ್ದು ಭಾವನಗರದಲ್ಲಿ ತಲುಪಿ, ಅಲ್ಲಿಂದ ಉನಾ, ಡಿಯು, ಜಫರಾಬಾದ್ ಮತ್ತು ಮಾಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಲಿದ್ದಾರೆ. ಸಮೀಕ್ಷೆಯ ನಂತರ ಮೋದಿಯವರು ಅಹಮದಾಬಾದ್ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

    ತೌಕ್ತೆ ಚಂಡಮಾರುತದಿಂದ ಸೋಮವಾರ ರಾತ್ರಿ ಡಿಯು ಮತ್ತು ಉನಾ ನಡುವಿನ ಸೌರಾಷ್ಟ್ರ ಪ್ರದೇಶದ ಗುಜರಾತ್ ಕರಾವಳಿಯಲ್ಲಿ ಭೂ ಕುಸಿತ ಉಂಟಾಗಿದೆ ಹಾಗೂ ಚಂಡಮಾರುತದಿಂದ 13 ಜನರು ಮೃತಪಟ್ಟಿದ್ದಾರೆ.

  • ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ತಂದೆ ಕೊರೊನಾಗೆ ಬಲಿ

    ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ತಂದೆ ಕೊರೊನಾಗೆ ಬಲಿ

    ಅಹಮದಾಬಾದ್: ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರ ತಂದೆ ಭಾನುವಾರ ಮೃತಪಟ್ಟಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

    ಮುಖ್ಯಮಂತ್ರಿ ವಿಜಯ್ ರೂಪಾನಿ ಪಟೇಲ್ ಜೊತೆಗೆ ಫೋನ್‍ನಲ್ಲಿ ಮಾತನಾಡಿ ಸಂತಾಪ ಸೂಚಿಸಿದ್ದಾರೆ ಎಂದು ಸರ್ಕಾರದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

    ಅಹಮದಾಬಾದಿನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಕೋವಿಡ್-19 ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಹಾರ್ದಿಕ್ ಪಟೇಲ್ ಅವರ ತಂದೆ ಭರತ್ ಪಟೇಲ್ ಇಂದು ಬೆಳಗ್ಗೆ ಮೃತಪಟ್ಟಿರುವುದಾಗಿ ಭಾರತೀಯ ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ನಿಖಿಲ್ ಸವಾನಿ ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

  • ರಿಷಭ್‍ಗೆ ಮೈದಾನದಲ್ಲೇ ಸಮಾಧಾನ ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

    ರಿಷಭ್‍ಗೆ ಮೈದಾನದಲ್ಲೇ ಸಮಾಧಾನ ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

    ಅಹಮದಾಬಾದ್: ಡೆಲ್ಲಿ ತಂಡದ ನಾಯಕ ರಿಷಭ್‍ ಪಂತ್ ಮೈದಾನದಲ್ಲೇ ಹತಾಶೆಯಾಗಿದ್ದನ್ನು ನೋಡಿದ ಕೊಹ್ಲಿ ಅವರನ್ನು ಸಮಾಧಾನ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.

    ಬೆಂಗಳೂರು ಹಾಗೂ ಡೆಲ್ಲಿ ತಂಡಗಳ ನಡುವೆ ಮಂಗಳವಾರ ನಡೆದ ಪಂದ್ಯ ರೋಚಕತೆಯಿಂದ ಸಾಗಿ ಅಂತಿಮವಾಗಿ ಬೆಂಗಳೂರು ತಂಡ 1 ರನ್‍ನಿಂದ ಜಯ ಗಳಿಸಿತ್ತು. ಇತ್ತ ಗೆಲುವಿಗಾಗಿ ಅಂತಿಮ ಕ್ಷಣದ ವರೆಗೆ ಹೋರಾಡಿ ಗೆಲುವು ದಕ್ಕಿಸಿಕೊಳ್ಳಲಾಗದೆ ಡೆಲ್ಲಿ ತಂಡದ ನಾಯಕ ರಿಷಭ್‍ ಪಂತ್ ಮೈದಾನದಲ್ಲೇ ಹತಾಶೆಗೊಳಗಾದರು. ಇವರನ್ನು ಕಂಡ ಎದುರಾಳಿ ತಂಡದ ನಾಯಕ ವಿರಾಟ್ ಕೊಹ್ಲಿ, ಪಂತ್‍ರನ್ನು ಸಮಾಧಾನ ಮಾಡಿದ್ದಾರೆ.

    ಐಪಿಎಲ್‍ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ತಂಡ ಸೆಣಸಾಡಿದೆ. ಐಪಿಎಲ್‍ನ ಮೊದಲ ಸುತ್ತಿನ ಲೀಗ್ ಪಂದ್ಯದ ಬಳಿಕ ಇದೀಗ ಎರಡನೇ ಸುತ್ತಿನ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದೆ. ಕೊರೊನಾ ಮಧ್ಯೆ ನಡೆಯುತ್ತಿರುವ ಪಂದ್ಯಗಳು ಬಹಳ ರೋಚಕತೆಯಿಂದ ಸಾಗುತ್ತಿದ್ದು ಹಲವು ಪಂದ್ಯಗಳು ಕೊನೆಯ ಬಾಲ್ ವರೆಗೂ ಪಂದ್ಯದ ರೋಚಕತೆಯನ್ನು ಕಾಪಾಡಿಕೊಳ್ಳುತ್ತಿದೆ.

    ಡೆಲ್ಲಿ ತಂಡದ ಖಾಯಂ ನಾಯಕ ಶ್ರೇಯಸ್ಸ್ ಅಯ್ಯರ್ ಗಾಯದಿಂದಾಗಿ ಈ ಬಾರಿ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಪಂತ್. ತಂಡದ ಗೆಲುವಿಗಾಗಿ ಬಹಳ ಹೋರಾಟ ನಡೆಸುತ್ತಿದ್ದಾರೆ. ಡೆಲ್ಲಿ ಮತ್ತು ಬೆಂಗಳೂರು ನಡುವಿನ ಪಂದ್ಯಾಟದಲ್ಲಿ ಡೆಲ್ಲಿ ತಂಡ ಬಹಳ ಪೈಪೋಟಿ ನೀಡಿ ಕೊನೆಯಲ್ಲಿ ಒಂದು ರನ್‍ನಿಂದ ವಿರೋಚಿತ ಸೋಲು ಕಾಣಬೇಕಾಯಿತು.

    ಕೊನೆಯ ಬಾಲ್‍ನಲ್ಲಿ ಡೆಲ್ಲಿ ತಂಡಕ್ಕೆ 6 ರನ್‍ಗಳ ಅವಶ್ಯಕತೆ ಇತ್ತು. ಬ್ಯಾಟಿಂಗ್‍ನಲ್ಲಿ ಪಂತ್ ಮತ್ತು ಶಿಮ್ರಾನ್ ಹೆಟ್ಮಿಯರ್ ಇದ್ದರು. ಪಂತ್ ಸ್ಟೈಕ್‍ನಲ್ಲಿದ್ದರೂ ಕೂಡ ಅವರಿಂದ ಕೊನೆಯ ಬಾಲ್‍ನಲ್ಲಿ ಬೌಂಡರಿ ಹೊಡೆಯಲು ಮಾತ್ರ ಸಾಧ್ಯವಾಯಿತು. ಈ ಮೂಲಕ 1 ರನ್‍ಗಳ ಸೋಲು ಕಂಡಿತು.

    ಇದರಿಂದ ತುಂಬಾ ಬೇಸರಗೊಳಗಾದ ಪಂತ್‍ರನ್ನು ಕಂಡ ಕೊಹ್ಲಿ ಕೂಡಲೇ ಅವರ ಬಳಿ ಬಂದು ಅವರ ಬ್ಯಾಟಿಂಗ್ ಬಗ್ಗೆ ಹೊಗಳಿ ಅವರನ್ನು ಸಮಾಧಾನ ಪಡಿಸಿದರು. ಅದೇ ರೀತಿ ಇನ್ನೊಂದು ಬದಿಯಲ್ಲಿ ಕುಸಿದು ಕುಳಿತಿದ್ದ ಹೆಟ್ಮಿಯರ್ ಅವರ ಬಳಿ ಬಂದು ಅವರ ತಲೆ ಸವರಿ ಕೊಹ್ಲಿ ಸಮಾಧಾನ ಪಡಿಸಲು ಮುಂದಾದರು ಇದನ್ನು ಕಂಡ ಕ್ರೀಡಾಭಿಮಾನಿಗಳು ಕೊಹ್ಲಿಯ ಕ್ರೀಡಾ ಸ್ಪೂರ್ತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಪಂದ್ಯದ ಬಳಿಕ ಕೊಹ್ಲಿ ಹಾಗೂ ಪಂತ್ ಪಂದ್ಯದ ಕುರಿತು ಚರ್ಚೆನಡೆಸುತ್ತಿದ್ದರು. ಈ ವೀಡಿಯೋವನ್ನು ತಮ್ಮ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿ ಹಾಗೂ ಬೆಂಗಳೂರು ಫ್ರಾಂಚೈಸಿಗಳು ಹಂಚಿಕೊಂಡಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಪಂದ್ಯದಲ್ಲಿ ಬೆಂಗಳೂರು ಗೆದ್ದಿರಬಹುದು. ಆದರೆ ಅಂತಿಮವಾಗಿ ಈ ವೀಡಿಯೋ ನೋಡಿದಾಗ ಇಲ್ಲಿ ಕ್ರಿಕೆಟ್ ಗೆದ್ದಿದೆ ಎಂದು ಅನಿಸುತ್ತಿದೆ ಎಂಬುದಾಗಿ ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.

    ಐಪಿಎಲ್‍ನಲ್ಲಿ ಬೇರೆ ಬೇರೆ ತಂಡದಲ್ಲಿ ಆಟಗಾರ ಕಾಣಿಸಿಕೊಂಡರೂ ಕೂಡ ಸೋಲು ಗೆಲುವು ಸಿಕ್ಕೊಡನೆ ಎದುರಾಳಿ ತಂಡದೊಂದಿಗೆ ಉತ್ತಮವಾಗಿ ಬೆರೆಯುವ ಮನೋಭಾವವನ್ನು ಕಂಡು ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.

  • ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ – ಭಾರತಕ್ಕೆ 7 ವಿಕೆಟ್‍ಗಳ ಜಯ

    ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ – ಭಾರತಕ್ಕೆ 7 ವಿಕೆಟ್‍ಗಳ ಜಯ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು 13 ಬಾಲ್ ಇರುವಂತೆ 7 ವಿಕೆಟ್ ನಿಂದ ಗೆದ್ದು ಬೀಗಿದೆ.

    ಈ ಮೂಲಕ ಮೊದಲ ಟಿ20 ಸೋಲಿನ ಸೇಡನ್ನು ಭಾರತ ತಂಡ ಇಂಗ್ಲೆಂಡ್ ವಿರುದ್ಧ ತೀರಿಸಿಕೊಂಡಿದೆ. ಗುಜಾರಾತ್‍ನ ಮೋದಿ ಕ್ರೀಡಾಂಗಣದಲ್ಲಿ ಭಾರತದ ಯುವ ಆಟಗಾರ ಇಶಾನ್ ಕಿಶನ್ ತನ್ನ ಪಾದಾರ್ಪಣ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬರಿದ್ದಾರೆ. ಈ ಮೂಲಕ ಇಂಗ್ಲೆಂಡ್ ನೀಡಿದ 165 ರನ್‍ಗಳ ಗುರಿಯನ್ನು ಭಾರತ 17.5 ಓವರ್‌ನಲ್ಲಿ ಚೇಸ್ ಮಾಡಿ ಗೆದ್ದಿದೆ.

    ರಾಹುಲ್ ಜೊತೆ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕಿಶನ್ 56 ರನ್ ( 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಿಡಿಸಿ ತನ್ನ ಬ್ಯಾಟಿಂಗ್ ವೈಭವ ತೋರಿಸಿದರು. ಆದರೆ ಇತ್ತ ಕನ್ನಡಿಗ ಕೆಎಲ್ ರಾಹುಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.

    ರಾಹುಲ್ ಔಟ್ ಆಗುತ್ತಿದ್ದಂತೆ ಕ್ರೀಸ್ ಗಿಳಿದ ವಿರಾಟ್ ಕೊಹ್ಲಿ 73 ರನ್(49 ಎಸೆತ, 5 ಬೌಡಂರಿ, 3 ಸಿಕ್ಸರ್) ಸಿಡಿಸಿ ತಮ್ಮ ರನ್ ಬರ ತೀರಿಸಿಕೊಂಡರು. ಕಡೆಯವರೆಗೆ ಬ್ಯಾಟ್ ಬೀಸಿದ ಕೊಹ್ಲಿ ಭರ್ಜರಿ ಸಿಕ್ಸರ್ ಮೂಲಕ ಮ್ಯಾಚ್ ಗೆಲ್ಲಿಸಿಕೊಟ್ಟರು. ಕೊಹ್ಲಿಗೆ ಪಂತ್ 26 ರನ್(13 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ 8 ರನ್(8 ಎಸೆತ) ಮಾಡಿ ಉತ್ತಮ ಸಾತ್ ನೀಡಿದರು.

    ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡ ಜೇಸನ್ ರಾಯ್ 46 ರನ್(35 ಎಸೆತ, 4 ಬೌಂಡರಿ, 2 ಸಿಕ್ಸರ್), ಡೇವಿಡ್ ಮಲಾನ್ 24 ರನ್(23 ಎಸೆತ, 4 ಬೌಂಡರಿ), ಜಾನಿ ಬ್ಯೈರೊಸ್ಟೊ 20 ರನ್(15 ಎಸೆತ 1 ಬೌಂಡರಿ, 1 ಸಿಕ್ಸರ್) ಮೋರ್ಗನ್ 28 ರನ್( 20 ಎಸೆತ, 4 ಬೌಂಡರಿ) ಮತ್ತು ಬೇನ್ ಸ್ಟೋಕ್ 24 ರನ್ (21 ಎಸೆತ, 1 ಬೌಂಡರಿ) ನೆರವಿನಿಂದ ನಿಗದಿತ 20 ಓವರ್ ಗೆ 6 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು ಭಾರತದ ಪರ ಚಹಲ್ 2 ವಿಕೆಟ್ ಕಿತ್ತು ಮಿಂಚಿದರೆ, ಭುವನೇಶ್ವರ್ ಕಮಾರ್, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಕಿತ್ತು ಮಿಂಚಿದರು.

  • ವೀಡಿಯೋ: ಗೋ ಪೂಜೆ ಮಾಡಿ ಹಸುಗಳಿಗೆ ಚಿನ್ನದ ಸರ ತೊಡಿಸಿದ ಮನೆಮಂದಿ

    ವೀಡಿಯೋ: ಗೋ ಪೂಜೆ ಮಾಡಿ ಹಸುಗಳಿಗೆ ಚಿನ್ನದ ಸರ ತೊಡಿಸಿದ ಮನೆಮಂದಿ

    ಅಹಮದಾಬಾದ್: ಮನೆಯ ಹಸುವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದ್ದರಿಂದಾಗಿ ಸಂತೋಷಗೊಂಡ ಕುಟುಂಬವೊಂದು ಕರುವಿಗೆ ಚಿನ್ನ ಮತ್ತು ಬೆಳ್ಳಿಯ ಸರವನ್ನು ತೊಡಿಸಿ ವಿಶಿಷ್ಟವಾಗಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.

    ಗುಜರಾತ್‍ನ ನಿವಾಸಿಯಾಗಿರುವ ವಿಜಯ್ ಪ್ರಸನ್ನ ಎಂಬವರ ಮನೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಹಸು ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ಇದರಿಂದ ಸಂತೋಷಗೊಂಡ ವಿಜಯ್ ಕುಟುಂಬದವರು ಮನೆಗೆ ಗೃಹಲಕ್ಷ್ಮಿಯ ಆಗಮನವಾಗಿದೆ ಎಂದು ಸಮಾರಂಭವನ್ನು ಮಾಡಿ ಕರುವಿಗೆ ಪೂಜೆ ಮಾಡಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಉಡುಗೊರೆಯಾಗಿ ತೊಡಿಸಿ ಸಂಭ್ರಮಪಟ್ಟಿದ್ದಾರೆ.

    ವಿನಯ್ ಪ್ರಸನ್ನ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿಯಂತೆ. ಹಾಗಾಗಿ ತಮ್ಮ ಮನೆಯಲ್ಲಿ ಹಸು ಹೆಣ್ಣು ಕರು ಹಾಕುತ್ತಿದ್ದಂತೆ. ಸಮಾರಂಭವನ್ನು ಮಾಡಿ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಯಾವ ರೀತಿ ಸಂಭ್ರಮಪಡುತ್ತಾರೋ ಅದೇ ರೀತಿ ಹಸು ಮತ್ತು ಕರುವಿಗೆ ಹೊಸ ಬಟ್ಟೆಯನ್ನು ತೊಡಿಸಿ ಪೂಜೆ ಮಾಡಿ ಮನೆಮಂದಿ ಖುಷಿ ಪಟ್ಟಿದ್ದಾರೆ.

    ಕರುವಿಗೆ ಉಡುಗೊರೆ ನೀಡುವ ಸಮಾರಂಭದ ವೀಡಿಯೋದಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರೂ ಕೂಡ ಸಾಲಾಗಿ ನಿಂತಿದ್ದಾರೆ. ಕುಟುಂಬ ಸದಸ್ಯರು ಗೋವುಗಳಿಗೆ ಹೊಸ ಬಟ್ಟೆಯನ್ನು ಹೊದಿಸಿದ್ದಾರೆ. ಹಣ್ಣು ಹಂಪಲನ್ನು ನೀಡಿದ ಮೇಲೆ ಬಾಕ್ಸ್ ನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮನೆಯ ಮಹಿಳಾ ಸದಸ್ಯರು ಕರುವಿಗೆ ಹಾಕುತ್ತಿರುವ ದೃಶ್ಯವನ್ನು ಗಮನಿಸಬಹುದಾಗಿದೆ.

  • ಮನುಷ್ಯರ ಮುಖಗಳನ್ನು ಇನ್ನೆಂದೂ ತೋರಿಸ್ಬೇಡ ಅಲ್ಲಾ- ನಗುತ್ತಲೇ ನದಿಗೆ ಜಿಗಿದು ಮಹಿಳೆ ಆತ್ಮಹತ್ಯೆ

    ಮನುಷ್ಯರ ಮುಖಗಳನ್ನು ಇನ್ನೆಂದೂ ತೋರಿಸ್ಬೇಡ ಅಲ್ಲಾ- ನಗುತ್ತಲೇ ನದಿಗೆ ಜಿಗಿದು ಮಹಿಳೆ ಆತ್ಮಹತ್ಯೆ

    ಅಹ್ಮದಾಬಾದ್: ಬಹುತೇಕರು ಸಪ್ಪೆ ಮುಖದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮುಖದ ತುಂಬ ನಗುವಿನೊಂದಿಗೆ ತೆರಳಿ, ಸಿಕ್ಕಾಪಟ್ಟೆ ನಗುತ್ತಲೇ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಗುಜರಾತ್‍ನ ಅಹ್ಮದಾಬಾದ್‍ನಲ್ಲಿರುವ ಶಬರಮತಿ ನದಿಗೆ ಜಿಗಿದು ಆಯೇಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನದಿಗೆ ಹಾರುವುದಕ್ಕೂ ಮುನ್ನ ಮಹಿಳೆ ವೀಡಿಯೋ ಮೂಲಕ ಜಗತ್ತಿಗೆ ಕಡೆಯ ಸಂದೇಶ ನೀಡಿದ್ದು, ನಾನು ಒತ್ತಡದಿಂದಾಗಿ ಈ ರೀತಿ ಮಾಡುತ್ತಿಲ್ಲ, ಅಲ್ಲಾನೆಡೆಗೆ ತೆರಳಲು ಸಂತೋಷದಿಂದ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ. ರೆಕಾರ್ಡ್ ಮಾಡಿದ ವೀಡಿಯೋವನ್ನು ಅವರ ಕುಟುಂಬಸ್ಥರಿಗೆ ಕಳುಹಿಸಿದ್ದಾಳೆ. ಬಳಿಕ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾಳೆ.

    ತಕ್ಷಣವೇ ಈ ವಿಡಿಯೋವನ್ನು ಕುಟುಂಬಸ್ಥರು ಗಮನಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗಾಗಲೇ ಮಹಿಳೆ ನದಿಗೆ ಹಾರಿದ್ದಳು. ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿ ಆಯೇಶಾಳ ದೇಹವನ್ನು ನದಿಯಿಂದ ತೆಗೆದಿದ್ದಾರೆ.

    ವೀಡಿಯೋದಲ್ಲಿ ಏನು ಹೇಳಿದ್ದಾಳೆ?
    ನಮಸ್ಕಾರ, ನನ್ನ ಹೆಸರು ಆಯೇಶಾ ಆರಿಫ್ ಖಾನ್, ನಾನೂ ಸ್ವ ಇಚ್ಛೆಯಿಂದಲೇ ಈ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಈಗ ನಾನು ಏನು ಹೇಳುತ್ತಿದ್ದೇನೆ ಎಂದರೆ, ಅಲ್ಲಾ ನೀಡಿದ ಜೀವನವು ದೀರ್ಘಾವಧಿಯದ್ದಾಗಿದೆ. ಈ ಸಣ್ಣ ಜೀವವನ್ನು ನಾನು ತುಂಬಾ ಶಾಂತಿಯುತವಾಗಿ ಕಳೆದಿದ್ದೇನೆ ಎಂದು ತಿಳಿಯಿರಿ. ಅಪ್ಪಾ ನೀವು ಎಲ್ಲಿಯವರೆಗೆ ಹೋರಾಡುತ್ತೀರಿ, ಪ್ರಕರಣವನ್ನು ಹಿಂಪಡೆಯಿರಿ ಎಂದು ಕೇಳಿಕೊಂಡಿದ್ದಾಳೆ.

    ನಾನು ಇದನ್ನು ಮತ್ತೆಂದೂ ಮಾಡಲ್ಲ, ಆಯೇಶಾ ಯುದ್ಧಗಳನ್ನು ಮಾಡಿಲ್ಲ, ನಾನು ಆರಿಫ್‍ನನ್ನು ಪ್ರೀತಿಸುತ್ತೇನೆ. ಹೀಗಾಗಿ ಯಾಕೆ ತೊಂದರೆ ನೀಡಲಿ, ಅವನು ಸ್ವಾತಂತ್ರ್ಯ ಬಯಸಿದ್ದಾನೆ, ಸ್ವತಂತ್ರನಾಗಿರಬೇಕು. ಹೇಗೂ ನನ್ನ ಜೀವನ ಇಲ್ಲಿ ಕೊನೆಗೊಳ್ಳುತ್ತಿದೆ. ನಾನು ಅಲ್ಲಾನನ್ನು ಭೇಟಿಯಾಗುತ್ತಿರುವುದಕ್ಕೆ ಸಂತೋಷವಿದೆ. ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂದು ಅವನನ್ನು ಕೇಳುತ್ತೇನೆ. ನನ್ನ ತಪ್ಪಾದರೂ ಏನು? ನನ್ನ ಹೆತ್ತವರು ತುಂಬಾ ಒಳ್ಳೆಯವರು, ಸ್ನೇಹಿತರು ತುಂಬಾ ಒಳ್ಳೆಯವರು. ಆದರೆ ನನ್ನಲ್ಲೇ ಏನೋ ಕೊರತೆ ಇದೆ, ಅದೃಷ್ಟ ಸರಿ ಇಲ್ಲ. ನಾನು ಸಂತೋಷವಾಗಿದ್ದೇನೆ. ಶಾಂತಿಯುತವಾಗಿ ಹೋಗುತ್ತೇನೆ. ಮನುಷ್ಯರ ಮುಖಗಳನ್ನು ಇನ್ನೆಂದೂ ನನಗೆ ತೋರಿಸದಂತೆ ಅಲ್ಲಾನನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿ ಜಿಗಿದ್ದಾಳೆ.

  • ಪಿಚ್ ಬಳಿ ಬಂದ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ವಿರಾಟ್ ಕೊಹ್ಲಿ

    ಪಿಚ್ ಬಳಿ ಬಂದ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ವಿರಾಟ್ ಕೊಹ್ಲಿ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಅಭಿಮಾನಿಯೋರ್ವ ಪಿಚ್ ಬಳಿ ಓಡಿ ಬರುತ್ತಿದ್ದಂತೆ ಕೊಹ್ಲಿ ಅಭಿಮಾನಿಯಿಂದ ಅಂತರ ಕಾಯ್ದುಕೊಂಡು ಹತ್ತಿರ ಬರದಂತೆ ಕೇಳಿಕೊಂಡಿದ್ದಾರೆ.

    ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನ ಮೊದಲ ದಿನದಾಟದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಂತೆ ಅಭಿಮಾನಿಯೋರ್ವ ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ಓಡಿಕೊಂಡು ಪಿಚ್ ಬಳಿ ಬರುತ್ತಾನೆ. ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಎಚ್ಚೆತ್ತುಕೊಂಡು ಅಭಿಮಾನಿಯನ್ನು ಅಂತರ ಕಾಪಾಡುವಂತೆ ಕೇಳಿಕೊಂಡು ಹಿಂದೆ ಸರಿದು ಮರಳಿ ತೆರಳುವಂತೆ ಸೂಚಿಸುತ್ತಾರೆ. ಅಭಿಮಾನಿಯು ಕೊಹ್ಲಿಯ ಸೂಚನೆಯಂತೆ ಹಿಂದೆ ಸರಿಯುತ್ತಾನೆ ಇದನ್ನು ಕಂಡ ಪ್ರೇಕ್ಷಕರೆಲ್ಲರೂ ಹರ್ಷೋದ್ಗಾರ ಹಾಕಿ ಸಂಭ್ರಮಿಸಿದರು.

    ಕೋವಿಡ್-19 ನಿಂದಾಗಿ ಬಯೋ ಬಬಲ್‍ನಲ್ಲಿರುವ ಕ್ರಿಕೆಟ್‍ಗರು ಯಾರನ್ನು ಕೂಡ ಭೇಟಿಯಾಗಲು ಅವಕಾಶ ಇಲ್ಲ. ಹಾಗಾಗಿ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಪಂದ್ಯವು ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತ ಮುಂದುವರಿಯುತ್ತಿದೆ. ಕ್ರೀಡಾಂಗಣಕ್ಕೆ ಕೇವಲ ಶೇ.50 ಮಾತ್ರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್‍ನ ಮೊದಲ ದಿನದಾಟದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 13 ರನ್‍ಗಳ ಹಿನ್ನಡೆ ಪಡೆದಿದ್ದರು, ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. ಇನ್ನೂ ನಾಲ್ಕು ದಿನ ಬಾಕಿಯಿದ್ದು ಬಾರಿ ಕೂತುಹಲ ಕೆರಳಿಸಿದೆ.

  • ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ನಾಮಕರಣ

    ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ನಾಮಕರಣ

    ಅಹಮದಾಬಾದ್‌: ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ʼನರೇಂದ್ರ ಮೋದಿ ಸ್ಟೇಡಿಯಂʼ ಎಂದು ಹೆಸರಿಡಲಾಗಿದೆ.

    ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಈ ಕ್ರೀಡಾಂಗಣವನ್ನು ಇಂದು ಅಧಿಕೃತವಾಗಿ ಉದ್ಘಾಟಿಸಿದರು. ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯ ಇಂದಿನಿಂದ ಈ ಕ್ರೀಡಾಂಗಣದಲ್ಲಿ ಆರಂಭವಾಗಿದೆ.

    ಟೆಸ್ಟ್‌ ಪಂದ್ಯ ಆರಂಭಕ್ಕೂ ಮೊದಲು ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್‌ ಶಾ, ಗುಜರಾತ್‌ ರಾಜ್ಯಪಾಲರು, ಕೇಂದ್ರ ಕ್ರೀಡಾ ಮಂತ್ರಿ ಕಿರಣ್‌ ರಿಜಿಜು, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಅಮಿತ್‌ ಶಾ, ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗುಜರಾತಿಗಳು ಕ್ರೀಡೆ ಮತ್ತು ಸಶಸ್ತ್ರ ಪಡೆ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಬೇಕು ಎಂದು ಅವರು ಹೇಳುತ್ತಿದ್ದರು. ಅವರು ನನ್ನ ಕೋರಿಕೆಯ ಮೇರೆಗೆ ಗುಜರಾತ್‌ ಕ್ರಿಕೆಟ್‌ ಅಸೋಸಿಯೇಸನ್‌(ಜಿಸಿಎ) ಉಸ್ತುವಾರಿ ವಹಿಸಿಕೊಂಡರು ಮತ್ತು ಇಲ್ಲಿ ಕ್ರೀಡೆಗಳನ್ನು ಆಯೋಜಿಸಲು ಪ್ರೋತ್ಸಾಹಿಸಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಇಲ್ಲಿ ನಿರ್ಮಿಸಬೇಕು ಎಂದು ಅವರು ಕನಸು ಕಂಡಿದ್ದರು. ಈ ಕನಸು ನನಸಾಗಿದ್ದು 1,32,000 ಆಸನಗಳಿರುವ ಈ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

    ಮೊಟೆರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಪೋರ್ಟ್ಸ್‌ ಎನ್‍ಕ್ಲೇವ್ ಹಾಗೂ ನರೇಂದ್ರ ಮೋದಿ ಕ್ರೀಡಾಂಗಣದೊಂದಿಗೆ ನಾರನ್‍ಪುರದಲ್ಲಿಯೂ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುವುದು. ಈ ಮೂರರಲ್ಲಿ ಯಾವುದೇ ಅಂತರಾಷ್ಟ್ರೀಯ ಕ್ರೀಡಾಕೂಟವನ್ನು ನಡೆಸಬಹುದಾಗಿದೆ. ಈ ಮೂಲಕ ಅಹಮದಾಬಾದ್‌ ನಗರವನ್ನು ಭಾರತದ ಕ್ರೀಡಾ ನಗರವನ್ನಾಗಿ ರೂಪಿಸಲಾಗುತ್ತದೆ ಎಂದು ತಿಳಿಸಿದರು.

    ರಾಷ್ಟ್ರಪತಿ ಕೋವಿಂದ್‌ ಅವರು ಮಾತನಾಡಿ, 2018ರ ನವೆಂಬರ್‌ನಲ್ಲಿ ನಾನು ಆಸ್ಟ್ರೇಲಿಯಾಗೆ ತೆರಳಿದಾಗ 90 ಸಾವಿರ ಆಸನಗಳು ಇರುವ ಮೆಲ್ಬರ್ನ್‌ ಕ್ರಿಕೆಟ್‌ ಅಂಗಳ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಆಗಿದೆ ಎಂಬುದನ್ನು ನಾನು ಕೇಳಲ್ಪಟ್ಟೆ. ಆದರೆ ಈಗ ಇಲ್ಲಿ 1.32 ಲಕ್ಷ ಆಸನಗಳು ಇರುವ ವಿಶ್ವದ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಿ ಹೊರಹೊಮ್ಮಿದ್ದು ಭಾರತಕ್ಕೆ ಹೆಮ್ಮೆ ತರುವ ವಿಚಾರ ಎಂದು ಹೇಳಿದರು.

    ಕ್ರೀಡಾಂಗಣದ ವಿಶೇಷತೆ ಏನು?
    ಒಟ್ಟು 63 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕ್ರೀಡಾಂಗಣದ ಒಳಭಾಗದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ಮೂರು ಅಭ್ಯಾಸ ಮೈದಾನಗಳು ಮತ್ತು ಸುಸಜ್ಜಿತ ನಾಲ್ಕು ಡ್ರೆಸ್ಸಿಂಗ್ ರೂಂ ಇದೆ. ಹೊನಲು ಬೆಳಕಿನಲ್ಲಿ ಪಂದ್ಯ ನಡೆಯುವ ಕಾರಣ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್‍ಇಡಿ ಬಲ್ಬ್ ಗಳನ್ನು ಹಾಕಲಾಗಿದೆ.

    ಮಳೆ ಬಂದರೆ ಪರಿಹಾರವಾಗಿ ಮೈದಾನವನ್ನು ಒಣಗಿಸಲು ಸಬ್ ಏರ್ ಸಿಸ್ಟಂ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮಳೆ ನಿಂತು ಅರ್ಧ ಗಂಟೆಗೆ ಮೈದಾನ ಒಣಗುತ್ತದೆ.

    ಮೂರನೇ ಟೆಸ್ಟ್ ಪಂದ್ಯ ಹಲವು ವಿಶೇಷಗಳಿಂದ ಕೂಡಿದ್ದು, ಈಗಾಗಲೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಶೇ.50 ರಷ್ಟು ಟೆಕೆಟ್ ಕೂಡ ಸೇಲ್ ಆಗಿದೆ. ಒಟ್ಟು 1.10 ಲಕ್ಷ ಪ್ರೇಕ್ಷಕ ಗ್ಯಾಲರಿ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೊರೊನಾ ಕಾರಣದಿಂದಾಗಿ ಶೇ.50 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

  • ಡ್ರಗ್ಸ್ ನೀಡಿ ಅಸಹಜ ಲೈಂಗಿಕ ಕ್ರಿಯೆ – ವರ್ಷ ತುಂಬುದರೊಳಗೆ ಗೃಹಿಣಿ ಸೂಸೈಡ್

    ಡ್ರಗ್ಸ್ ನೀಡಿ ಅಸಹಜ ಲೈಂಗಿಕ ಕ್ರಿಯೆ – ವರ್ಷ ತುಂಬುದರೊಳಗೆ ಗೃಹಿಣಿ ಸೂಸೈಡ್

    – 18 ಪುಟದಲ್ಲಿ ಕಾಮುಕ ಪತಿಯ ರಹಸ್ಯ
    – ಪತ್ನಿಗೆ ಇಂಜೆಕ್ಷನ್ ನೀಡಿ ಪ್ರತಿನಿತ್ಯ ಸೆಕ್ಸ್ ಗೆ ಕಿರುಕುಳ

    ಅಹಮದಾಬಾದ್: ಮದುವೆಯಾಗಿ ವರ್ಷ ತುಂಬುವದರೊಳಗೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತಿನ ಘಟ್ಲೋಡಿಯಾದಲ್ಲಿ ನಡೆದಿದೆ.

    39 ವರ್ಷದ ಹರ್ಷಾ ಪಟೇಲ್ ಪತಿ ಹಾಗೂ ಆತನ ಕುಟುಂಬಸ್ಥರ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. 2020 ಆಗಸ್ಟ್ 28ರಂದು ಮೂಳೆ ವೈದ್ಯನಾಗಿರುವ ಹಿತೇಂದ್ರ ಪಟೇಲ್ ಜೊತೆ ಹರ್ಷಾ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮ್ಯಾಟ್ರಿಮೋನಿಯಲ್ ವೈಬ್‍ಸೈಟ್ ನಲ್ಲಿ ಪರಿಚಯವಾಗಿದ್ದರು.

    ಮದುವೆಯಾದ ಕೆಲವೇ ದಿನಗಳಲ್ಲಿ ಹಿತೇಂದ್ರ ತಾಯಿ ಮತ್ತು ತಂದೆ ವರದಕ್ಷಿಣೆ ತರುವಂತೆ ಸೊಸೆಗೆ ಕಿರುಕುಳ ನೀಡಲಾರಂಬಿಸಿದ್ದಾರೆ. ಹಗಲು ಅತ್ತೆ-ಮಾವ ವರದಕ್ಷಿಣೆಯ ಕಿರುಕುಳ ನೀಡಿದ್ರೆ, ರಾತ್ರಿ ಸೆಕ್ಸ್ ಹೆಸರಲ್ಲಿ ಹಿತೇಂದ್ರ ಪತ್ನಿಗೆ ನರಕ ದರ್ಶನ ಮಾಡಿಸುತ್ತಿದ್ದನು. ಹಿತೇಂದ್ರ ವೈದ್ಯನಾಗಿದ್ದರಿಂದ ಮತ್ತು ಬರುವ ಔಷಧಿ, ಇಂಜೆಕ್ಷನ್ ನೀಡಿ ಅಸಹಜವಾಗಿ ವಿವಿಧ ಭಂಗಿಗಳಲ್ಲಿ ಸೆಕ್ಸ್ ನಡೆಸುತ್ತಿದ್ದನು ಎಂದು ಹರ್ಷಾ ಡೆತ್ ನೋಟ್ ನಲ್ಲಿ ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ

    ತವರು ಮನೆ ಸೇರಿದ ಪತ್ನಿ: ಪತಿಯ ಕಿರುಕುಳದಿಂದ ನೊಂದಿದ್ದ ಹರ್ಷಾ ಡಿಸೆಂಬರ್ ನಲ್ಲಿ ತವರು ಸೇರಿದ್ದರು. ಅಂದಿನಿಂದ ತವರು ಮನೆಯಲ್ಲಿ ಉಳಿದುಕೊಂಡಿದ್ದ ಹರ್ಷಾ, ಮಂಗಳವಾರ 18 ಪುಟದ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ಪತಿ ಹಿತೇಂದ್ರ, ಆತನ ತಂದೆ, ತಾಯಿ ಮತ್ತು ಸೋದರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನಸಿಕ ಮತ್ತು ದೈಹಿಕ ಕಿರುಕುಳ, ಅಸಹಜ ಲೈಂಗಿಕ ಕ್ರಿಯೆ, ಡ್ರಗ್ಸ್ ಬಳಕೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರು ಸೈಲೆನ್ಸರ್ ಕದ್ದು 21 ಲಕ್ಷ ಗಳಿಸಿದ ಚೋರರು ಪೊಲೀಸರ ಬಲೆಗೆ

    ಕಾರು ಸೈಲೆನ್ಸರ್ ಕದ್ದು 21 ಲಕ್ಷ ಗಳಿಸಿದ ಚೋರರು ಪೊಲೀಸರ ಬಲೆಗೆ

    ಅಹಮದಾಬಾದ್: ಇಕೋ ಕಾರುಗಳ ಸೈಲೆನ್ಸ್ ರ್ ಗಳನ್ನು ಕದಿಯುವ ಮೂಲಕ ಲಕ್ಷಾಂತರ ರೂಪಾಯಿ ಹಣಗಳಿಸುತ್ತಿದ್ದ ಕಳ್ಳರನನ್ನು ಪೊಲೀಸರು ಬಂಧಿಸಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಕೇವಲ ಒಂದು ವಾರದೊಳಗೆ ಕಳ್ಳರು 21 ಲಕ್ಷ ರೂಪಾಯಿ ಮೌಲ್ಯದ ಸೈಲೆನ್ಸರ್ ಗಳನ್ನು ಕದ್ದಿದ್ದಾರೆ. ಅದರಲ್ಲೂ ಮಾರುತಿ ಸುಜುಕಿ ತಯಾರಿಸಿದ ಇಕೋ ವ್ಯಾನ್‍ಗಳೇ ಇವರ ಮುಖ್ಯ ಟಾರ್ಗೆಟ್. ಒಂದು ಸೈಲೆನ್ಸರ್ ಬೆಲೆ 57,272ರೂ ಆಗಿದ್ದು, ಈ ಚಲಾಕಿ ಕಳ್ಳರು ಕೇವಲ ಒಂದೆರಡು ನಿಮಿಷಗಳಲ್ಲಿ ವಾಹನದ ಕೆಳಗೆ ಇರುವ ಸೈಲೆನ್ಸರ್ ತೆಗೆದು ಹಾಕಿ ಕದಿಯುತ್ತಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

    ಸನಾಥಲ್‍ನ ಕಿರಣ್ ಮೋಟಾರ್ಸ್ ಮತ್ತು ಬಕ್ರೋಲ್‍ನಲ್ಲಿರು ಸ್ಟಾಕ್‍ಯಾರ್ಡ್‍ನಲ್ಲಿ ನಿಲ್ಲಿಸಿದ್ದ ಸುಮಾರು 33 ವಾಹನಗಳ ಸೈಲೆನ್ಸರ್ ಗಳನ್ನು ಖದೀಮರು ಕದ್ದಿದ್ದಾರೆ. ಈ ಕಳ್ಳರು ಈ ವರೆಗೂ ಸುಮಾರು 20.59 ರೂ. ಮೌಲ್ಯದ ಸೈಲೆನ್ಸರ್ ಗಳನ್ನು ಕದಿದ್ದಾರೆ. ಕಳೆದ ವರ್ಷ ಇದೇ ರೀತಿ 30 ಇಕೋ ವ್ಯಾನ್‍ಗಳ ಸೈಲೆನ್ಸರ್‍ಗಳನ್ನು ಕದಿಯುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದರು.