Tag: agra

  • ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ – ಪ್ರೇಮಸೌಧದ ಅಂದಕ್ಕೆ ಟ್ರಂಪ್ ದಂಪತಿ ಫಿದಾ

    ಆಗ್ರಾ: 2 ದಿನ ಭಾರತ ಪ್ರವಾಸ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ಐತಿಹಾಸಿಕ ಪ್ರೇಮಸೌಧ ತಾಜ್‍ಮಹಲ್‍ಗೆ ಭೇಟಿಕೊಟ್ಟಿದ್ದು, ತಾಜ್‍ಮಹಲ್ ಭಾರತದ ವೈವಿಧ್ಯತೆ, ಅನಂತತೆಯ ವಿಸ್ಮಯ ಎಂದು ಹಾಡಿ ಹೊಗಳಿದ್ದಾರೆ.

    ಕುಟುಂಬದೊಂದಿಗೆ ಆಗ್ರಾಕ್ಕೆ ಬಂದ ಟ್ರಂಪ್ ಅವರಿಗೆ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯ್ತು. ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕ ಹಾಗೂ ಅಳಿಯ ಜ್ಯಾರಿದ್‍ನೊಂದಿಗೆ ತಾಜ್‍ಮಹಲ್ ವೀಕ್ಷಿಸಿ ಪ್ರೇಮಸೌಧದ ಅಂದವನ್ನು ಕಣ್ತುಂಬಿಕೊಂಡರು.

    ಈ ವೇಳೆ ಸಂದರ್ಶಕ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದ ಟ್ರಂಪ್ ತಾಜ್‍ಮಹಲ್ ಅಂದವನ್ನು ಹೊಗಳಿದ್ದಾರೆ. ತಾಜ್‍ಮಹಲ್ ಪ್ರೇರಣೆಯ ವಿಸ್ಮಯ, ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಹಾಗೂ ಅನಂತತೆಯ ವಿಸ್ಮಯ ಎಂದು ಬರೆದಿದ್ದಾರೆ.

    ತಾಜ್‍ಮಹಲ್ ಇತಿಹಾಸ, ಭವ್ಯತೆಯ ಬಗ್ಗೆ ಟ್ರಂಪ್ ಕುಟುಂಬಕ್ಕೆ ಮಾರ್ಗದರ್ಶಕರು ಮಾಹಿತಿ ನೀಡಿದರು. ಅಲ್ಲದೆ ತಾಜ್‍ಮಹಲ್ ಆವರಣದಲ್ಲಿ ಟ್ರಂಪ್ ದಂಪತಿ ನಡೆದುಕೊಂಡು ಹೋಗಿಯೇ ಅದರ ಅಂದವನ್ನು ಕಣ್ತುಂಬಿಕೊಂಡರು. ಜೊತೆಗೆ ಪ್ರೇಮಸೌಧದ ಮುಂದೆ ಫೋಟೋವನ್ನು ತೆಗೆಸಿಕೊಂಡು ಖುಷಿಪಟ್ಟರು.

    ತಾಜ್ ಮಹಲ್ ಗೇಟಿನ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಸಂಚಾರಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿ ಎಕೋ ಫ್ರೆಂಡ್ಲಿ ಗಾಲ್ಫ್ ಕಾರ್ಟ್ ಮೂಲಕ ಸ್ಥಳಕ್ಕೆ ಬಂದು ನಂತರ ತಾಜ್ ಮಹಲ್ ಬಳಿ ನಡೆದುಕೊಂಡು ಹೋದರು.

  • ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂತ್ರಸ್ತೆಯ ಶವಕ್ಕೆ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್

    ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂತ್ರಸ್ತೆಯ ಶವಕ್ಕೆ ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್

    – ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಆಗ್ರಾ: ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಅನಾಥ ಮಹಿಳೆಯ ಶವಕ್ಕೆ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಅತ್ಯಾಚಾರಕ್ಕೊಳಗಾಗಿ ಆಗ್ರಾದ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟ ಮಹಿಳೆಯ ಶವವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಹೀಗಾಗಿ ಆಗ್ರಾ ಪೊಲೀಸರು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದರು. ಅಷ್ಟೇ ಅಲ್ಲದೆ ತಿಥಿ ಕೂಡ ಮಾಡಿ, ಅನೇಕರಿಗೆ ಊಟ ಬಡಿಸಿದ್ದಾರೆ. ಆಗ್ರಾ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ರೋಹನ್ ಬಾಟ್ರೆ ಅವರು, ಅತ್ಯಾಚಾರ ಸಂತ್ರಸ್ತೆ ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆದರೆ ಆಕೆಯ ದೇಹವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿಯೇ ಅಂತ್ಯಕ್ರಿಯೆ ನೆರವೇರಿ, ತಿಥಿ ಕೂಡ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಕಾರ್ಯಕ್ಕೆ ಸ್ಥಳೀಯರು ಕೂಡ ಪೊಲೀಸರನ್ನು ಶ್ಲಾಘಿಸಿದ್ದಾರೆ. ಜೊತೆಗೆ ಇದು ಉತ್ತಮ ಉಪಕ್ರಮ ಎಂದು ಬಣ್ಣಿಸಿದ್ದಾರೆ. ಇಂತಹ ಪ್ರಯತ್ನಗಳು ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂಬಂಧವನ್ನು ಸೃಷ್ಟಿಸುತ್ತದೆ ಹಾಗೂ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

    ಆತ್ಮಹತ್ಯೆಗೆ ಶರಣಾಗಿ ಪ್ರೀತಿ ನಿರೂಪಿಸೆಂದ – ನಿರಾಕರಿಸಿದ ಪ್ರೇಯಸಿಯ ಕತ್ತು ಸೀಳಿದ

    – ಪ್ರೇಯಸಿ ಕತ್ತು ಸೀಳಿ ತಾನೂ ವಿಷಕುಡಿದ
    – ಕೊನೆಗೆ ತಪ್ಪೊಪ್ಪಿಕೊಂಡು ಪೊಲೀಸರ ಮುಂದೆ ಜೀವಬಿಟ್ಟ

    ಲಕ್ನೋ: ನನ್ನೊಂದಿಗೆ ಆತ್ಮಹತ್ಯೆಗೆ ಶರಣಾಗಿ ನಿನ್ನ ಪ್ರೀತಿ ನಿರೂಪಿಸು ಎಂದು ಪಾಗಲ್ ಪ್ರೇಮಿಯೋರ್ವ ತನ್ನ ಪ್ರೇಯಸಿಗೆ ಹೇಳಿದಾಗ ಆಕೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ, ಕೊನೆಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಖಾಕೇಗಢದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಛಿಚ್ಚವಾಲಿ ಗ್ರಾಮದ ನಿವಾಸಿ ಹೇತ್ ಸಿಂಗ್ ಥೋಮರ್(21) ತನ್ನ 19 ವರ್ಷದ ಪ್ರೇಯಸಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೆಂಬರ್ 30ರಂದು ಯುವಕ ತನ್ನ ಪ್ರೇಯಸಿಯನ್ನು ಕತ್ತು ಸೀಳಿ ಕೊಲೆಗೈದು ತಲೆಮರಿಸಿಕೊಂಡಿದ್ದನು. ಆದರೆ ಸೋಮವಾರ ಆಗ್ರಾಕ್ಕೆ ವಾಪಸ್ ಬಂದ ಯುವಕ ಕ್ರಿಮಿನಾಶಕವನ್ನು ನೀರಿನಲ್ಲಿ ಬೆರೆಸಿ ಸೇವಿಸಿ, ಖಾಕೇಗಢ ಪೊಲೀಸ್ ಠಾಣೆಗೆ ಬಂದು ತಾನೇ ಪ್ರೇಯಸಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೇರೆ ವ್ಯಕ್ತಿ ಜೊತೆ ಮಾತನಾಡಿದ್ದಕ್ಕೆ ಪ್ರಿಯಕರನಿಂದ ಕಪಾಳಮೋಕ್ಷ- ಯುವತಿ ಸಾವು

    ಅಲ್ಲದೆ ತಾನೂ ವಿಷ ಸೇವಿಸಿದ್ದೇನೆ ಎಂದು ಪೊಲೀಸರ ಬಳಿ ಹೇಳಿದಾಗ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಠಾಣೆಗೆ ಬಂದ ಯುವಕ ಮೊದಲು ತಾನು ಯಾಕೆ ಪ್ರೇಯಸಿಯನ್ನು ಕೊಲೆ ಮಾಡಿದೆ? ಹೇಗೆ ಕೊಲೆ ಮಾಡಿದೆ? ನಡೆದಿದ್ದೇನು ಎಂಬ ಎಲ್ಲಾ ವಿಚಾರವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಇದನ್ನು ಪೊಲೀಸರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಸತ್ಯಾಂಶವನ್ನು ಹೇಳಿದ ಬಳಿಕ ಕೊನೆಯಲ್ಲಿ ನಾನು ಕೂಡ ವಿಷ ತೆಗೆದುಕೊಂಡಿದ್ದೇನೆ ಎಂದಿದ್ದಾನೆ.

    ಯುವತಿ ಖಾಕೇಗಢ ನಿವಾಸಿಯಾಗಿದ್ದು, ಆಕೆಯ ಪಕ್ಕದ ಮನೆಯ ಯುವಕನೊಂದಿಗೆ ಥೋಮರ್ ಸಹೋದರಿ ವಿವಾಹವಾಗಿತ್ತು. ಆಗ ಥೋಮರ್ ಗೆ ಯುವತಿ ಪರಿಚಯವಾಗಿತ್ತು. ಬಳಿಕ ಅವರಿಬ್ಬರು ಪ್ರೀತಿಸಲು ಆರಂಭಿಸಿದ್ದರು. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಯುವತಿಗೆ ತನ್ನ ಊರಿನ ಮತ್ತೊಬ್ಬ ಯುವಕನ ಪರಿಚಯವಾಗಿತ್ತು. ಆತನೊಂದಿಗೆ ಯುವತಿ ಚೆನ್ನಾಗಿ ಮಾತನಾಡಿಕೊಂಡಿದ್ದಳು. ಇದು ಥೋಮರ್ ಕೋಪಕ್ಕೆ ಕಾರಣವಾಗಿದ್ದು, ನ.30ರಂದು ತನ್ನ ಪ್ರೇಯಸಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಜಗಳವಾಡಿದ್ದನು. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

    ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ನನ್ನೊಡನೆ ಆತ್ಮಹತ್ಯೆ ಮಾಡಿಕೋ, ಆಗ ನಿನ್ನ ಪ್ರೀತಿ ನಿಜ ಎಂದು ಸಾಬೀತಾಗುತ್ತೆ ಎಂದು ಥೋಮರ್ ಹೇಳಿದನು. ಆದರೆ ಪ್ರೇಮಿಯ ಹುಚ್ಚು ನಿರ್ಧಾರಕ್ಕೆ ಯುವತಿ ಒಪ್ಪಿರಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಥೋಮರ್ ಹಿಂದೆ ಮುಂದೆ ಯೋಚಿಸದೆ ಚಾಕುವಿನಿಂದ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದನು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ಎರಡು ದಿನಗಳ ಬಳಿಕ ಆತನಿಗೆ ಏನಾಯಿತೋ ಗೊತ್ತಿಲ್ಲ. ಆತನೇ ಖಾಕೇಗಢ ಪೊಲೀಸ್ ಠಾಣೆಗೆ ಬಂದು ಶರಣಾಗಿ, ತಪ್ಪೊಪ್ಪಿಕೊಂಡಿದ್ದ. ಆದರೆ ಠಾಣೆಗೆ ಬರುವ ಮುನ್ನವೇ ಥೋಮರ್ ತನ್ನ ನೀರಿನ ಬಾಟಲಿಯಲ್ಲಿ ಕ್ರಿಮಿನಾಶ ಬೆರೆಸಿ ಕುಡಿದಿದ್ದನು. ಪೊಲೀಸರ ಮುಂದೆ ನಡೆದಿದ್ದ ವಿಷಯವನ್ನೆಲ್ಲಾ ಹೇಳಿ ಕೊನೆಗೆ ಜೀವಬಿಟ್ಟಿದ್ದಾನೆ.

    ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕ ಠಾಣೆಗೆ ಬಂದ ಸಮಯದಲ್ಲಿ ಆತನೊಂದಿಗೆ ಯಾರಾದರು ಬಂದಿದ್ದರಾ ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

  • ಆಗ್ರಾ ಹೆಸರನ್ನು ಬದಲಿಸಲು ಮುಂದಾದ ಯೋಗಿ ಸರ್ಕಾರ

    ಆಗ್ರಾ ಹೆಸರನ್ನು ಬದಲಿಸಲು ಮುಂದಾದ ಯೋಗಿ ಸರ್ಕಾರ

    ಲಕ್ನೋ: ಅಲಹಬಾದ್, ಫೈಜಾಬಾದ್ ನಂತರ ಇದೀಗ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಗ್ರಾ ಹೆಸರನ್ನು ಬದಲಿಸಲು ಚಿಂತನೆ ನಡೆಸಿದೆ.

    ಈ ಹಿಂದೆ ರಾಜ್ಯ ಸರ್ಕಾರ ಅಲಹಬಾದ್ ಹೆಸರನ್ನು ಪ್ರಯಾಗ್‍ರಾಜ್, ಫೈಜಾಬಾದನ್ನು ಅಯೋಧ್ಯೆ ಹಾಗೂ ಮೊಘಲ್ಸರಾಯ್ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಬದಲಿಸಿತ್ತು. ಹೆಸರು ಬದಲಾಯಿಸುವ ಪರ್ವ ಮತ್ತೆ ಮುಂದುವರಿದಿದ್ದು, ಇದೀಗ ಆಗ್ರಾ ಹೆಸರನ್ನು ಅಗ್ರವಾನ್ ಎಂದು ಬದಲಿಸಲು ಮುಂದಾಗಿದೆ.

    ಈ ಕುರಿತು ಅಂಬೇಡ್ಕರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಸಂಶೋಧನೆ ನಡೆಸಲು ತಿಳಿಸಿದ್ದು, ಹೆಸರಿನ ಐತಿಹಾಸಿಕ ಅಂಶವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಪ್ರಸ್ತಾಪ ಬರುತ್ತಿದ್ದಂತೆ ಸಂಶೋಧನೆ ನಡೆಸಲು ಪ್ರಾರಂಭಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

    ಆಗ್ರಾ ನಗರವನ್ನು ಬೇರೆ ಹೆಸರಿನಿಂದ ಕರೆಯಲಾಗುತಿತ್ತೆ ಈ ಕುರಿತು ಪುರಾವೆಗಳನ್ನು ಸಂಗ್ರಹಿಸಿ ಎಂದು ರಾಜ್ಯ ಸರ್ಕಾರ ನಮಗೆ ಪತ್ರ ಬರೆದಿದೆ. ಈ ಕುರಿತು ನಾವು ಸಂಶೋಧನೆ ಪ್ರಾರಂಭಿಸಿದ್ದೇವೆ. ಸಂಶೋಧನೆ ನಂತರ ಉತ್ತರಿಸುತ್ತೇವೆ ಎಂದು ವಿಭಾಗದ ಮುಖ್ಯಸ್ಥ ಪ್ರೊ.ಸುಗಮ್ ಆನಂದ್ ತಿಳಿಸಿದ್ದಾರೆ.

    ತಾಜ್‍ಮಹಲ್ ಇರುವ ನಗರದ ಮೂಲ ಹೆಸರು ಅಗ್ರವಾನ್ ಎಂದು ಕೆಲವು ಇತಿಹಾಸಕಾರರು ನಂಬಿದ್ದರಿಂದ ಹೆಸರು ಬದಲಾಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅಗ್ರವಾನ್ ಎಂಬ ಹೆಸರು ಆಗ್ರಾ ಎಂದು ಹೇಗೆ ಬದಲಾಯಿತು, ಯಾವ ಸಂದರ್ಭದಲ್ಲಿ ಆಯಿತು ಎಂಬುದನ್ನು ಅಧ್ಯಯನದಿಂದ ಪತ್ತೆ ಮಾಡುವಂತೆ ಸರ್ಕಾರ ಇತಿಹಾಸಕಾರರು ಹಾಗೂ ತಜ್ಞರನ್ನು ಕೇಳಿದೆ.

    ಈ ಹಿಂದೆ ನಿಧನರಾದ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಅವರು ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಆಗ್ರಾ ಎಂಬ ಹೆಸರನ್ನು ಅಗ್ರವಾನ್ ಎಂದು ಮರುನಾಮಕರಣ ಮಾಡುವಂತೆ ಕೋರಿದ್ದರು.

    ತಾಜ್ ಮಹಲ್ ನಗರವಾಗಿ ಆಗ್ರಾ ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಕಾರಣ ಹೆಸರು ಬದಲಾಯಿಸುವುದನ್ನು ಅನೇಕರು ವಿರೋಧಿಸಿದ್ದಾರೆ. ಪ್ರವಾಸೋದ್ಯಮ ಹಾಗೂ ವ್ಯಾಪಾರ ತಜ್ಞರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗ್ರಾವನ್ನು ತಾಜ್‍ಮಹಲ್ ನಗರವೆಂದು ವಿಶ್ವಾದ್ಯಂತ ಕರೆಯಲಾಗುತ್ತದೆ. ಹೆಸರು ಬದಲಾಯಿಸುವುದರಿಂದ ಗೊಂದಲ ಉಂಟಾಗುತ್ತದೆ ಎಂದು ಟ್ರಾವೆಲ್ ಮತ್ತು ಟೂರ್ ಆಪರೇಟರ್ ರಾಕೇಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

  • 22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

    22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

    ಲಕ್ನೋ: ಉತ್ತರಪ್ರದೇಶದ ಆಗ್ರಾದಲ್ಲಿ ಮರ್ಯಾದಾ ಹತ್ಯೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಪಕ್ಕದ ಮನೆಯ ಯುವಕನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ತನ್ನ 22 ವರ್ಷದ ಮಗಳನ್ನು ತಂದೆಯೇ ಕ್ರೂರವಾಗಿ ಕೊಂದಿದ್ದಾನೆ.

    ಆರೋಪಿ ಹರಿವಾನ್ಶ್ ಕುಮಾರ್ ತನ್ನ ಮಗಳು ಪೂಜಾ ಸಿಂಗ್ ಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಮಧ್ಯರಾತ್ರಿ 1.15ರ ಸುಮಾರಿಗೆ ಸಲೇಂಪುರ್ ಖುಟಿಯಾನಾ ಗ್ರಾಮದಲ್ಲಿ ನಡೆದಿದೆ. ಪೂಜಾ ಸ್ನಾತಕೋತ್ತರ ಪದವೀಧರೆಯಾಗಿದ್ದು, ಐವರು ಮಕ್ಕಳಲ್ಲಿ ಮೊದಲನೇ ಹಾಗೂ ಒಬ್ಬಳೇ ಮಗಳಾಗಿದ್ದಳು.

    ತನ್ನ ಮಗಳು ಪಕ್ಕದ ಮನೆಯ ಯುವಕನ ಜೊತೆ ಶನಿವಾರ ಹಾಗೂ ಭಾನುವಾರದ ಮಧ್ಯರಾತ್ರಿ ಮಾತನಾಡುತ್ತಿರುವುದನ್ನು ತಂದೆ ನೋಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆತ, ಮಗಳಿಗೆ ಮೊದಲು ವಿದ್ಯುತ್ ಶಾಕ್ ನೀಡಿ ಬಳಿಕ ಹರಿತವಾದ ಆಯುಧದಿಂದ ಆಕೆಯ ಕತ್ತು ಸೀಳಿದ್ದಾನೆ. ಬಳಿಕ ಪೊಲೀಸರಿಗೆ ತಾನೇ ಮಾಹಿತಿ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಹರಿವಾನ್ಶ್ 100 ನಂಬರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದ ತಕ್ಷಣವೇ ಗ್ರಾಮೀಣ ಎಸ್ ಪಿ ರಾಜೇಶ್ ಕುಮಾರ್, ಓಂ ಪ್ರಕಾಶ್ ಸಿಂಗ್ ಹಾಗೂ ಗಿರೀಶ್ ಚಂದ್ರ ಗೌತಮ್ ಪೊಲೀಸರ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಮಗ ಯೋಗೇಶ್ ತಂದೆಯ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹರಿವಾನ್ಶ್ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಂಡು ಪೊಲೀಸರು ಜೈಲಿಗಟ್ಟಿದ್ದಾರೆ. ಇತ್ತ ಪೂಜಾಳ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

    ಈ ಬಗ್ಗೆ ಮಾತನಾಡಿದ ಪೊಲೀಸರು, ಇದೊಂದು ಮರ್ಯಾದಾ ಹತ್ಯೆಯಾಗಿದೆ. ಯುವಕನ ಜೊತೆ ಸಂಬಂಧ ಹೊಂದಿದ್ದಕ್ಕಾಗಿ ಸಿಟ್ಟಿನಿಂದ ಮಗಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಮನೆಯ ಪಕ್ಕದಲ್ಲೇ ಯುವಕ ವಾಸವಾಗಿದ್ದಾನೆ ಎಂದು ತಿಳಿಸಿದ್ದಾರೆ.

    ಗಿರೀಶ್ ಚಂದ್ರ ಗೌತಮ್ ಮಾತನಾಡಿ, ತನಿಖೆಯ ವೇಳೆ ಆರೋಪಿ ಕೊಲೆಯ ಬಗ್ಗೆ ವಿವರಿಸಿದ್ದಾನೆ. ಮೊದಲು ಮಗಳಿಗೆ ವಿದ್ಯುತ್ ಶಾಕ್ ನೀಡಿ ನಂತರ ಹರಿತವಾದ ಆಯುಧದಿಂದ ಆಕೆಯ ಕತ್ತು ಸೀಳಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಪೊಲೀಸ್ ಮೂಲಗಳ ಪ್ರಕಾರ, ಯುವತಿಯ ತಾಯಿ ಹಾಗೂ ಮೂವರು ಸಹೋದರರು ಹರಿಯಾಣದ ಗುರುಗ್ರಾಮದಲ್ಲಿ ನೆಲೆಸಿದ್ದಾರೆ. ಮತ್ತೋರ್ವ ಸಹೋದರ ಕೂಡ ಬೇರೆ ಮನೆ ಮಾಡಿ ಸಮೀಪದಲ್ಲಿಯೇ ವಾಸವಾಗಿದ್ದಾನೆ. ತಂದೆ ಹಾಗೂ ಮಗಳು ಒಟ್ಟಿಗೆ ಇದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಯುವತಿ ನೆಲೆಸಿರುವ ಮನೆಯ ಹತ್ತಿರ ಯುವಕ ಬಂದು ಆಕೆಯನ್ನು ಭೇಟಿಯಾಗುತ್ತಿದ್ದನು. ಹೀಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದನ್ನು ಯುವತಿಯ ತಂದೆ ಗಮನಿಸಿದ್ದಾನೆ. ಅಲ್ಲದೆ ಯುವಕ ಜೊತೆ ಮಾತನಾಡಿ ಮನೆಗೆ ವಾಪಸ್ ಬಂದು ತನ್ನ ಕೋಣೆಗೆ ಹೋಗುತ್ತಿದ್ದಾಗ ಆಕೆಯನ್ನು ಹಿಡಿದೆಳೆದ ತಂದೆ ಮೊದಲು ವಿದ್ಯುತ್ ಶಾಕ್ ನೀಡಿದ್ದಾನೆ. ನಂತರ ಆಕೆಯ ಕತ್ತು ಸೀಳಿದ್ದಾನೆ ಎಂದು ತಿಳಿದುಬಂದಿದೆ.

    ಯುವತಿ ಮತ್ತು ಯುವಕ ಒಂದೇ ಜಾತಿಯವರಾಗಿದ್ದರು. ಒಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಕಳೆದ 18 ತಿಂಗಳಲ್ಲಿ ನಡೆದ ಮರ್ಯಾದಾ ಹತ್ಯೆಯಲ್ಲಿ ಪೂಜಾ 23ನೇ ಸಂತ್ರಸ್ತೆಯಾಗಿದ್ದಾಳೆ ಎಂಬುದಾಗಿ ವರದಿಯಾಗಿದೆ.

  • ಕುಡಿಯುವಾಗ ತಡೆದಿದ್ದಕ್ಕೆ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ತಂದ

    ಕುಡಿಯುವಾಗ ತಡೆದಿದ್ದಕ್ಕೆ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ತಂದ

    – ಪಾತ್ರೆಯಲ್ಲಿ ರುಂಡ ಇಟ್ಟುಕೊಂಡು ಪೊಲೀಸರಿಗೆ ಶರಣಾದ
    – ಹತ್ಯೆಗೈದು ಮನೆ ಬಿಟ್ಟು ಪರಾರಿಯಾಗಿದ್ದ ಪತಿ

    ಲಕ್ನೋ: ಮದ್ಯ ಕುಡಿಯುವಾಗ ತಡೆದಿದ್ದಕ್ಕೆ ಪತಿಯೊಬ್ಬ ಪತ್ನಿಯ ರುಂಡವನ್ನೇ ಕತ್ತರಿಸಿ ಕೊಲೆ ಗೈದು, ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಆರೋಪಿ ಪತ್ನಿಯ ರುಂಡವನ್ನು ಹಿಡಿದು ತಂದು ಪೊಲೀಸರಿಗೆ ಶರಣಾಗಿದ್ದಾನೆ. ಆಗ್ರಾದ ಕಚ್ಪುರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಚ್ಪುರ ನಿವಾಸಿ ನರೇಶ್(30) ಪತ್ನಿ ಶಾಂತಿ(30) ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಮೆಕ್ಯಾನಿಕ್ ಆಗಿರುವ ನರೇಶ್ ಸದಾ ಪತ್ನಿ ಬಳಿ ಒಂದಲ್ಲಾ ಒಂದು ಕಾರಣಕ್ಕೆ ಜಗಳವಾಡುತ್ತಲೇ ಇರುತ್ತಿದ್ದನು. ದಶಕಗಳ ಹಿಂದೆ ಮದುವೆಯಾದ ದಂಪತಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಇದನ್ನೂ ಓದಿ:ಹೃತಿಕ್ ರೋಶನ್ ಮೇಲೆ ಕ್ರಶ್ – ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

    ಆದರೆ ಭಾನುವಾರ ರಾತ್ರಿ ಮಕ್ಕಳು ಮಲಗಿದ್ದ ವೇಳೆ ನರೇಶ್ ಮದ್ಯ ಕುಡಿಯುತ್ತಿದ್ದನು. ಆಗ ಶಾಂತಿ ಆತನನ್ನು ಕುಡಿಯಬೇಡಿ ಎಂದು ತಡೆದಿದ್ದಳು. ಮೊದಲೇ ಕುಡಿದ ನಶೆಯಲ್ಲಿದ್ದ ನರೇಶ್ ಪತ್ನಿ ಮಾತಿಗೆ ಕೋಪಗೊಂಡು, ಆಕೆಯನ್ನು ಎಳೆದುಕೊಂಡು ಕೋಣೆಗೆ ಹೋಗಿದ್ದಾನೆ. ಅಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ, ನಂತರ ಹರಿತವಾದ ವಸ್ತುವಿನಿಂದ ಆಕೆ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಪಾತ್ರೆಯೊಂದರಲ್ಲಿ ಇಟ್ಟುಕೊಂಡು ಕೋಣೆಗೆ ಬೀಗ ಹಾಕಿ ಮನೆಬಿಟ್ಟು ಪರಾರಿಯಾಗಿದ್ದ.

    ಮರುದಿನ ಬೆಳಗ್ಗೆ ಮಕ್ಕಳು ಎದ್ದು ತಾಯಿ ಕಾಣಲಿಲ್ಲ ಎಂದು ಹುಡುಕಲು ಆರಂಭಿಸಿದರು. ಈ ವೇಳೆ ಬೀಗ ಒಡೆದು ಕೋಣೆಯನ್ನು ತೆರೆದಾಗ ರಕ್ತದ ಮಡುವಿನ ಮಧ್ಯೆ ತಲೆ ಇಲ್ಲದ ಸ್ಥಿತಿಯಲ್ಲಿ ಹೆಣವಾಗಿ ಅಮ್ಮ ಬಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮನೆಗೆ ಬಂದ ಸಂಬಂಧಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನೂ ಓದಿ:ಕಾಮದಾಸೆಯಿಂದ ಸೊಸೆಯನ್ನೇ ಚುಚ್ಚಿ ಕೊಂದ ಮಾವ

    ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಆರೋಪಿ ಕೊಲೆ ಮಾಡಿದ ಬಳಿಕ ನೆಲದ ಮೇಲೆ ಬಿದ್ದ ರಕ್ತದ ಕಲೆಗಳನ್ನು ಒರೆಸಲು ಯತ್ನಿಸಿದ್ದನು ಎಂಬುದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ನರೇಶ್ ಪತ್ನಿಯ ರುಂಡ ಹಿಡಿದು ತಂದು ಠಾಣೆಗೆ ಶರಣಾಗಿದ್ದಾನೆ. ತಕ್ಷಣ ಆತನ್ನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಮದ್ವೆಯಾಗಲು ಒಪ್ಪದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ್ಳು

    ಮದ್ವೆಯಾಗಲು ಒಪ್ಪದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ್ಳು

    – ಕಣ್ಣುಗಳಿಗೆ ಗಂಭೀರ ಗಾಯ

    ಲಕ್ನೋ: ಪ್ರೀತಿಸಿ ಮದುವೆಯಾಗಲು ಒಪ್ಪದ ಪ್ರಿಯಕರನ ಮೇಲೆ 19 ವರ್ಷದ ಯುವತಿ ಆ್ಯಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಜೀವಂಗರ್ ಪ್ರದೇಶದಲ್ಲಿ ನಡೆದಿದೆ.

    ಯುವಕನನ್ನು ಫಯಾಜ್ ಎಂದು ಗುರುತಿಸಲಾಗಿದೆ. ಈತ ಮತ್ತು ಯುವತಿ ಕಳೆದ 6 ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಘಟನೆ ಸಂಬಂಧಿಸಿದಂತೆ ಯುವಕನ ಕುಟುಂಬಂಸ್ಥರು ಯುವತಿಯ ವಿರುದ್ಧ ಐಪಿಸಿ ಸೆಕ್ಷನ್ 326 ಎ(ಆರೋಪಿಗೆ ಕನಿಷ್ಠ 10ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ಹಾಗೂ ನೊಂದವರ ವೈದ್ಯಕೀಯ ವೆಚ್ಚವನ್ನು ಭರಿಸಲು ದಂಡ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ನನ್ನ ಮಗನ ಜೊತೆ ಯುವತಿ ಸಂಬಂಧ ಹೊಂದಿದ್ದಳು. ಆದರೆ ಕೆಲ ತಿಂಗಳ ಹಿಂದೆಯಷ್ಟೇ ಆತ ಆಕೆಯ ಜೊತೆ ಮಾತು ಬಿಟ್ಟಿದ್ದನು. ಆ ಬಳಿಕ ಆಕೆ ಮದುವೆಯಾಗುವಂತೆ ಮಗನ ಬೆನ್ನು ಬಿದ್ದಿದ್ದಳು. ಮಾತ್ರವಲ್ಲದೆ ಆತನಿಗೆ ಪದೇ ಪದೇ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಳು. ಕಳೆದ ಗುರುವಾರ ಬೆಳಗ್ಗೆಯೂ ಆಕೆ ಮಗನಿಗೆ ಕರೆ ಮಾಡಿದ್ದಳು. ಆಗಲೂ ಆತ ಪ್ರತಿಕ್ರಿಯೆ ನೀಡದಿದ್ದರಿಂದ ಯುವತಿ ಸಿಟ್ಟುಗೊಂಡಿದ್ದಳು. ಹೀಗಾಗಿ ಮನೆಯ ಸಮೀಪದ ಅಂಗಡಿ ಬಳಿ ನಿಂತಿದ್ದ ನನ್ನ ಮಗನ ಮೇಲೆ ಆಕೆ ಆ್ಯಸಿಡ್ ಎರಚಿದ್ದಾಳೆ ಎಂದು ಯುವಕನ ತಾಯಿ ದೂರಿದ್ದಾರೆ.

    ನೀನು ನನ್ನ ಮದುವೆಯಾಗದಿದ್ದರೆ ನಿನ್ನ ಅಶ್ಲೀಲ ಪೋಟೋಗಳನ್ನು ಸಾಮಾಜಿಕ ಜಾಲತಣಾಗಳಲ್ಲಿ ಹರಿಯಬಿಡುವುದಾಗಿ ಯುವಕ ನನಗೆ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

    ಆ್ಯಸಿಡ್ ಎರಚಿದ್ದರಿಂದ ಯುವಕನ ಕಣ್ಣುಗಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜಿನ ವೈದ್ಯ ಡಾ. ಎಸ್ ಎಸ್ ಝೈದಿ ತಿಳಿಸಿದ್ದಾರೆ.

  • ಗುಟ್ಕಾದ 5 ರೂ. ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡಿಟ್ಟರು

    ಗುಟ್ಕಾದ 5 ರೂ. ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡಿಟ್ಟರು

    ಆಗ್ರಾ: 4 ಮಂದಿ ಯುವಕರು ಅಂಗಡಿಯೊಂದರಲ್ಲಿ 5 ರೂ. ಗುಟ್ಕಾ ಖರೀದಿಸಿ ಹಾಗೇಯೇ ಹೋಗುತ್ತಿದ್ದರು. ಆಗ ಅವರನ್ನು ತಡೆದು ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ, ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗಳನ್ನು ದೀಪಕ್, ಟಿಕನ್ನಾ, ಫೌಜ್ದಾರ್, ಪೋಟಾ ಎಂದು ಗುರುತಿಸಲಾಗಿದೆ. ಮಾಧೋಪುರದ ಚೋಟು ಅಗರ್ವಾಲ್ ಗುಂಡೇಟು ತಿಂದ ಅಂಗಡಿ ಮಾಲೀಕ. ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ರಾತ್ರಿ ಸುಮಾರು 9:30ರ ಹೊತ್ತಿಗೆ ಈ ಘಟನೆ ನಡೆದಿದೆ. ಚೋಟು ಅಂಗಡಿಗೆ ಬಂದ ಆರೋಪಿಗಳು 5 ರೂ. ಬೆಲೆಯ ಗುಟ್ಕಾವನ್ನು ಖರೀದಿಸಿದ್ದರು. ಆದರೆ ಹಣ ಕೊಡದೆ ವಾಪಾಸ್ ಆಗುತ್ತಿದ್ದ ವೇಳೆ ಅವರನ್ನು ತಡೆದ ಚೋಟು ಹಣ ಕೊಟ್ಟು ಹೋಗಿ ಎಂದನು. ಕೇವಲ 5 ರೂ. ವಿಚಾರಕ್ಕೆ ಸಿಟ್ಟಿಗೆದ್ದ ಯುವಕರು ಚೋಟುಗೆ ಹಿಗ್ಗಾಮುಗ್ಗ ಹೊಡೆದು, ಆತನ ಅಂಗಡಿಯ ಪೆಟ್ಟಿಗೆಯಲ್ಲಿದ್ದ 250 ರೂ. ಹಣವನ್ನು ದೋಚಿದ್ದರು.

    ಈ ವೇಳೆ ಗಲಾಟೆ ಗಮನಿಸಿದ ಸ್ಥಳೀಯ ಅಮಿತ್ ಚೋಟು ಸಹಾಯಕ್ಕೆ ಬಂದಾಗ, ಯುವಕರು ಮನಬಂದಂತೆ ಗುಂಡು ಹಾರಿಸಿದ್ದಾರೆ. ಜೊತೆಗೆ ಚೋಟುಗೂ ಗುಂಡಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ನಿನ್ನನ್ನು ಸಾಯಿಸುತ್ತೇವೆ. ನಿನ್ನ ಕುಟುಂಬವನ್ನೂ ಕೊಲೆ ಮಾಡುತ್ತೇವೆ ಎಂದು ಅಮಿತ್‍ಗೆ ಬೆದರಿಕೆವೊಡ್ಡಿ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಆರೋಪಿಗಳು ಹೋದ ಬಳಿಕ ಗಂಭೀರ ಗಾಯಗೊಂಡಿದ್ದ ಚೋಟುವನ್ನು ಅಮಿತ್ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಗಂಭಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಲು ಪೊಲೀಸರಿಗೆ ದೂರು ಕೊಡಲು ಹೆದರಿದ ಅಮಿತ್ ಬುಧವಾರ ಧೈರ್ಯ ಮಾಡಿ ಈ ಬಗ್ಗೆ ತಾಪ್ಪಲ್ ಪೊಲೀಸರ ಮುಂದೆ ಘಟನೆ ವಿವರಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307, ಸೆಕ್ಷನ್ 394 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಶಿವಸೇನೆಯಿಂದ ತಾಜ್‍ಮಹಲ್‍ನಲ್ಲಿ ಪೂಜೆ-ಭದ್ರತೆ ಹೆಚ್ಚಿಸಿದ ಜಿಲ್ಲಾಡಳಿತ

    ಶಿವಸೇನೆಯಿಂದ ತಾಜ್‍ಮಹಲ್‍ನಲ್ಲಿ ಪೂಜೆ-ಭದ್ರತೆ ಹೆಚ್ಚಿಸಿದ ಜಿಲ್ಲಾಡಳಿತ

    ಆಗ್ರಾ: ಶಿವಸೇನೆಯಿಂದ ತಾಜ್ ಮಹಲ್‍ನಲ್ಲಿ ಪೂಜೆ ನಡೆಸಲಾಗುವುದು ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭದ್ರತೆಯನ್ನು ಹೆಚ್ಚಿಸಿದೆ. ಪವಿತ್ರ ‘ಶ್ರಾವಣ’ ತಿಂಗಳ ಪ್ರತಿ ಸೋಮವಾರ ತಾಜ್ ಮಹಲ್‍ನಲ್ಲಿ ಆರತಿ ಮಾಡುವುದಾಗಿ ಶಿವಸೇನೆ ಬೆದರಿಕೆ ಹಾಕಿತ್ತು. ಈ ಹಿನ್ನೆಲೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿ(ಎಎಸ್‍ಐ)ಯ ಮನವಿ ಮೇರೆಗೆ ತಾಜ್‍ಮಹಲ್ ಹೊರಗಡೆ ಭದ್ರತೆ ಹೆಚ್ಚಿಸಲು ಆಗ್ರಾ ಜಿಲ್ಲಾಡಳಿತ ಒಪ್ಪಿಕೊಂಡಿದೆ.

    ಎಎಸ್‍ಐ ಅಧಿಕಾರಿಗಳು ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಪ್ರಾಚೀನ ಸ್ಮಾರಕ, ಪುರಾತತ್ವ ತಾಣ ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆ ಮತ್ತು ಸಂರಕ್ಷಿತ ಸ್ಮಾರಕಗಳಲ್ಲಿ ಹೊಸ ಸಂಪ್ರದಾಯ ಪ್ರಾರಂಭಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ನಮ್ಮ ಕಾರ್ಯಕರ್ತರು ತಾಜ್‍ಮಹಲ್‍ನಲ್ಲಿ ಆರತಿ ಮಾಡುತ್ತಾರೆ. ಪೊಲೀಸರು ಇದನ್ನು ತಡೆಯಲಿ ಎಂದು ಜು.17ರಂದು ಶಿವಸೇನೆ ಅಧ್ಯಕ್ಷ ಮೀನು ಲವಾನಿಯಾ ಆಗ್ರಾದ ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದರು.

    ತಾಜ್‍ಮಹಲ್ ಮುಸ್ಲಿಂ ಅವರದ್ದಲ್ಲ, ಅದು ತಾಜ್ ಮಹಲ್ ಅಲ್ಲವೇ ಅಲ್ಲ. ಅದು ತೇಜೋ ಮಹಾಲಯ. ಇದು ಭಗವಾನ್ ಶಿವನ ದೇವಸ್ಥಾನ. ಹೀಗಾಗಿ ತೇಜೋ ಮಹಾಲಯದಲ್ಲಿ ಪವಿತ್ರ ಶ್ರಾವಣ ತಿಂಗಳ ಪ್ರತಿ ಸೋಮವಾರ ನಾವು ಆರತಿಯನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದರು.

    ಆಗ್ರಾದ ಪುರಾತತ್ವಶಾಸ್ತ್ರಜ್ಞ ಎಎಸ್‍ಐ ಅಧೀಕ್ಷಕ ವಸಂತ್ ಸ್ವಾರಣಕರ್ ಈ ಕುರಿತು ಪ್ರತಿಕ್ರಿಯಿಸಿ, ತಾಜ್ ಮಹಲ್‍ನಲ್ಲಿ ಯಾವುದೇ ರೀತಿಯ ಆರತಿ ಹಾಗೂ ಪೂಜೆಯನ್ನು ಮಾಡಕೂಡದು. ಆಗ್ರಾ ಪೊಲೀಸರು ತಾಜ್ ಮಹಲ್ ಹೊರಗಡೆ ಹಾಗೂ ಸುತ್ತ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಅಡಿಶನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕೆ.ಪಿ.ಸಿಂಗ್ ಅವರು ಈ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಲಾ ಆಂಡ್ ಆರ್ಡರ್ ಹದಗೆಡಲು ಯಾರೊಬ್ಬರು ಅವಕಾಶ ನೀಡಬಾರದು. ಎಎಸ್‍ಐ ಮನವಿ ಮಾಡಿದಂತೆ ಪರ್ಯಾಯ ಭದತಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ತಾಜ್ ಮಹಲ್ ವಿವಾದ ಇದೇ ಮೊದಲಲ್ಲ ಈ ಹಿಂದೆಯೂ ಸಹ ತಾಜ್‍ಮಹಲ್‍ನಲ್ಲಿ ಪೂಜೆ ಮಾಡುವ ಕುರಿತು ವಿವಾದ ಸೃಷ್ಟಿಯಾಗಿತ್ತು. ತಾಜ್ ಮಹಲ್ ಮೂಲತಃ ಶಿವನ ದೇವಾಲಯ ಎಂದು ನಿರೂಪಿಸಲು ಬಲಪಂಥೀಯ ಸಂಘಟನೆಗಳ ಮಹಿಳೆಯರು ತಾಜ್‍ಮಹಲ್‍ನ ಮಸೀದಿಯೊಳಗೆ ಪೂಜೆ ಮಾಡಿದ್ದರು.

    2008ರಲ್ಲಿ ಶಿವಸೇನೆ ಸಂಘಟನೆಯ ಗುಂಪೊಂದು ತಾಜ್‍ಮಹಲ್ ಒಳಗೆ ನುಗ್ಗಿ, ಕೈ ಮುಗಿದು ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದ್ದರು. ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದಾಗ ಗಲಾಟೆ ಮಾಡಿದ್ದರು. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 17ನೇ ಶತಮಾನದಲ್ಲಿ ರಾಜ ಶಹಜಾನ್ ಶಿವನ ದೇವಾಲಯ ತೇಜೋ ಮಹಾಲಯವನ್ನು ಕೆಡವಿ ತಾಜ್ ಮಹಲ್ ಕಟ್ಟಿದ್ದಾನೆ ಎಂಬುದು ಶಿವಸೇನೆ ವಾದವಾಗಿದೆ.

  • ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಆಗ್ರಾ: 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಸಂಬಂಧಿಕನೇ ಮದುವೆ ಸಮಾರಂಭದಲ್ಲಿ ಅತ್ಯಾಚಾರ ಮಾಡಿದ್ದಾನೆ. ಮಗುವನ್ನು ಯಾರಿಗೂ ತಿಳಿಯದಂತೆ ಪೊದೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೋಹಿಯಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೆಲ ದಿನಗಳ ಹಿಂದೆ ಪೋಹಿಯಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಮದುವೆಗೆ ಬಂದಿದ್ದ ಮಗುವನ್ನು ಸಂಬಂಧಿಕನೊಬ್ಬ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಿಂದ ಯಾರಿಗೂ ತಿಳಿಯದಂತೆ ಎತ್ತುಕೊಂಡು ಹೋಗಿ, ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ತುಸು ದೂರದಲ್ಲಿದ್ದ ಪೊದೆಯೊಂದರಲ್ಲಿ ರಕ್ತಸಿಕ್ತವಾಗಿದ್ದ ಮಗುವನ್ನು ಎಸೆದು ಹೋಗಿದ್ದಾನೆ.

    ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಮಗು ಕಾಣದಿದ್ದಾಗ, ತಾಯಿ ಹಾಗೂ ಕೆಲವರು ಮಗುವನ್ನು ಸುತ್ತಮುತ್ತ ಹುಡುಕಿದ್ದಾರೆ. ಆಗ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಸುಮಾರು 400 ಮೀ. ದೂರದಲ್ಲಿದ್ದ ಪೊದೆಯೊಂದರ ನಡುವೆ ಮಗು ಜ್ಞಾನ ತಪ್ಪಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಈ ವೇಳೆ ನಡೆದಿರುವ ವಿಷಯದ ಬಗ್ಗೆ ತಾಯಿ ಬಹಿರಂಗಪಡಿಸಲು ಮುಂದಾದಾಗ ಆಕೆಯ ಸಂಬಂಧಿಕರು ಯಾರಿಗೂ ತಿಳಿಸಿದಂತೆ ಹೇಳಿ ತಾಯಿ ಮಗುವನ್ನು ಸ್ಥಳದಿಂದ ಕಳುಹಿಸಿದ್ದಾರೆ.

    ಬಳಿಕ ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ. ಅಲ್ಲದೆ ಮಗುವಿನ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.