Tag: afghanistan

  • 32 ವರ್ಷಗಳ ಬಳಿಕ ಟೀಂ ಇಂಡಿಯಾ ಪರ ಹ್ಯಾಟ್ರಿಕ್ ಗಳಿಸಿದ ಶಮಿ

    32 ವರ್ಷಗಳ ಬಳಿಕ ಟೀಂ ಇಂಡಿಯಾ ಪರ ಹ್ಯಾಟ್ರಿಕ್ ಗಳಿಸಿದ ಶಮಿ

    ಸೌತಾಂಪ್ಟನ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಹ್ಯಾಟ್ರಿಕ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    1987 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಚೇತನ್ ಶರ್ಮಾ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನ್ಯೂಜಿಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಶರ್ಮಾ ಹ್ಯಾಟ್ರಿಕ್ ಪಡೆದಿದ್ದರು. ಸದ್ಯ 32 ವರ್ಷಗಳ ಬಳಿಕ ಮತ್ತೆ ಮೊಹಮ್ಮದ್ ಶಮಿ ಹ್ಯಾಟ್ರಿಕ್ ಪಡೆದಿದ್ದಾರೆ. ಅಲ್ಲದೇ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿದ 10ನೇ ಬೌಲರ್ ಕೂಡ ಆಗಿದ್ದಾರೆ.

    ವಿಶೇಷ ಎಂದರೆ ಶ್ರೀಲಂಕಾದ ಲಸಿತ್ ಮಾಲಿಂಗ ವಿಶ್ವಕಪ್ ಕ್ರಿಕೆಟ್‍ನಲ್ಲಿ 2 ಬಾರಿ ಹ್ಯಾಟ್ರಿಕ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. 2007ರ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧ ಹಾಗೂ 2011 ರಲ್ಲಿ ಕೀನ್ಯಾ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

    ಶಮಿ ಪಡೆದ ಹ್ಯಾಟ್ರಿಕ್ ವಿಕೆಟ್ ನಿನ್ನೆಯ ಪಂದ್ಯದಲ್ಲಿ ಅಫ್ಘಾನ್ ವಿರುದ್ಧ 11 ರನ್ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಪಂದ್ಯದ 7ನೇ ಓವರಿನಲ್ಲಿ ಹಜರತ್ ಉಲ್ಲಾ ವಿಕೆಟ್ ಪಡೆದಿದ್ದ ಶಮಿ, ಅಂತಿಮ ಓವರಿನ 3ನೇ ಎಸೆತದಲ್ಲಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾಗೆ ತಲೆನೋವಾಗಿದ್ದ ನಬಿ ವಿಕೆಟ್ ಪಡೆದು ಪಂದ್ಯ ಗತಿಯನ್ನೇ ಬದಲಿಸಿದ್ದರು. ಆ ಬಳಿಕ 4 ಮತ್ತು 5ನೇ ಎಸೆತಗಳಲ್ಲಿ ಅಫ್ತಾಬ್ ಆಲಮ್, ಮುಜೀರ್ ಉರ್ ರೆಹಮಾನ್ ವಿಕೆಟ್ ಪಡೆದರು. ಪಂದ್ಯದಲ್ಲಿ 9.5 ಓವರ್ ಬೌಲ್ ಮಾಡಿರುವ ಶಮಿ 40 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.

    ಅಂದಹಾಗೇ ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗಡೆ ಇದ್ದ ಪರಿಣಾಮ ಶಮಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯದ ಆಡುವ 11 ಬಳಗದಲ್ಲಿ ಸ್ಥಾನ ಪಡೆದಿದ್ದರು. 2019ನೇ ವಿಶ್ವಕಪ್ ನಲ್ಲಿ ಅಫ್ಘಾನ್ ತಂಡ ಪಡೆಯುತ್ತಿರುವ 6ನೇ ಸೋಲು ಇದಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬುಮ್ರಾ ಕಮಾಲ್, ಶಮಿ ಹ್ಯಾಟ್ರಿಕ್ – ಭಾರತಕ್ಕೆ 11 ರನ್ ರೋಚಕ ಜಯ

    ಬುಮ್ರಾ ಕಮಾಲ್, ಶಮಿ ಹ್ಯಾಟ್ರಿಕ್ – ಭಾರತಕ್ಕೆ 11 ರನ್ ರೋಚಕ ಜಯ

    ಸೌತಾಂಪ್ಟನ್: ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ 11 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಜಯ ಸಾಧಿಸಿದೆ.

    ಟಾಸ್ ಗೆದ್ದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. 225 ರನ್ ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಕನಸು ಕೈ ತಪ್ಪಿಸಿಕೊಂಡಿದೆ.

    ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 16 ರನ್ ಬೇಕಿತ್ತು. ಈ ಓವರ್ ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಈ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡರು.

    46ನೇ ಓವರ್ ನಲ್ಲಿ ಬುಮ್ರಾ 7 ರನ್ ನೀಡಿದರೆ, 49 ನೇ ಓವರ್ ನಲ್ಲಿ 5 ರನ್ ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 10 ಓವರ್ ಎಸೆದ ಬುಮ್ರಾ 1 ಮೇಡನ್ ಓವರ್ 39 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಅಫ್ಘಾನ್‍ನ ಮೊಹಮ್ಮದ್ ನಬಿ 52 ರನ್ (55 ಎಸೆತ, 4 ಬೌಂಡರಿ,1 ಸಿಕ್ಸರ್), ರಹ್ಮತ್ ಶಾಹ 36 ರನ್ (63 ಎಸೆತ, 3 ಬೌಂಡರಿ) ನಾಯಕ ನೈಬ್ 27 ರನ್ (42 ಎಸೆತ, 2 ಬೌಂಡರಿ) ಗಳಿಸಿ ಔಟಾದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಅಫ್ಘಾನ್ ಯುವ ಬೌಲರ್ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಬೌಲಿಂಗ್ ಎದುರು ರನ್ ಗಳಿಸಿಲು ಪರದಾಡಿತ್ತು. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪರಿಣಾಮ ಯಾವುದೇ ಹಂತದಲ್ಲಿ ಟೀಂ ಇಂಡಿಯಾ ರನ್ ರೇಟ್ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ.

    53 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ಆ ಬಳಿಕ ಬಂದ ವಿಜಯ್ ಶಂಕರ್ ಕೂಡ 41 ಎಸೆತಗಳಲ್ಲಿ 21 ರನ್ ಗಳಿಸಿ ನಿರ್ಗಮಿಸಿದ್ದರು. ಕೊಹ್ಲಿ, ರಾಹುಲ್ ಜೋಡಿ 52 ರನ್ ಜೊತೆಯಾಟ ನೀಡಿದರೆ, ಕೊಹ್ಲಿ ಮತ್ತು ವಿಜಯ್ ಶಂಕರ್ 58 ರನ್ ಜೊತೆಯಾಟವಾಡಿದ್ದರು. 5 ಬೌಂಡರಿ ಸಹಾಯದಿಂದ 63 ಎಸೆತಗಳಲ್ಲಿ 67 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮೊಹಮ್ಮದ್ ನಬಿ ಭಾರತಕ್ಕೆ ರನ್ ವೇಗ ಹೆಚ್ಚಿಸಿಕೊಳ್ಳದಂತೆ ನೋಡಿಕೊಂಡಿದ್ದರು.

    ಈ ಹಂತದಲ್ಲಿ ಒಂದಾದ ಧೋನಿ, ಕೇದಾರ್ ಜಾಧವ್ ಕುಸಿಯುತ್ತಿದ್ದ ಟೀಂ ಇಂಡಿಯಾಗೆ ಚೇತರಿಕೆ ನೀಡಲು ಮುಂದಾಗಿದ್ದರು. ಈ ಜೋಡಿ 5ನೇ ವಿಕೆಟ್‍ಗೆ 57 ರನ್ ಜೊತೆಯಾಟ ನೀಡಿತ್ತು. ಭಾರತ 40 ಓವರ್ ಗಳ ಅಂತ್ಯಕ್ಕೆ ಕೇವಲ 157 ರನ್ ಗಳಷ್ಟೇ ಪೇರಿಸಿತ್ತು. ಇತ್ತ ಕೇದಾರ್ ಜಾಧವ್ 68 ಎಸೆತಗಳಲ್ಲಿ 52 ರನ್ ಗಳಿಸಿ ತಂಡ ಮೊತ್ತ 200 ರನ್ ಗಡಿ ದಾಟುವಂತೆ ಮಾಡಿದ್ದರು. ಅಂತಿಮ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 41 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.

    ಅಫ್ಘಾನಿಸ್ತಾನ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ, ಗುನ್ಬದೀನ್ ನೈಬ್ ತಲಾ 2 ವಿಕೆಟ್ ಪಡೆದರೆ ರಶಿದ್ ಖಾನ್, ರಹಮಾತ್ ಶಾ, ರೆಹಮಾನ್, ಅಲಮ್ ತಲಾ ಒಂದು ವಿಕೆಟ್ ಪಡೆದಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕ್ರಿಕೆಟ್ ಶಿಶುಗಳ ಎದುರು ರನ್‍ಗಾಗಿ ತಿಣುಕಾಡಿದ ಕೊಹ್ಲಿ ಪಡೆ

    ಕ್ರಿಕೆಟ್ ಶಿಶುಗಳ ಎದುರು ರನ್‍ಗಾಗಿ ತಿಣುಕಾಡಿದ ಕೊಹ್ಲಿ ಪಡೆ

    ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ್ದ ಟೀಂ ಇಂಡಿಯಾ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ರನ್ ಗಳಿಸಲು ಪರದಾಡಿದೆ. ನಾಯಕ ಕೊಹ್ಲಿಯ ಅರ್ಧ ಶತಕದ ಬಳಿವೂ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಲಷ್ಟೇ ಶಕ್ತವಾಯಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಅಫ್ಘಾನ್ ಯುವ ಬೌಲರ್ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಬೌಲಿಂಗ್ ಎದುರು ರನ್ ಗಳಿಸಿಲು ಪರದಾಡಿತು. ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಾಯಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಪರಿಣಾಮ ಯಾವುದೇ ಹಂತದಲ್ಲಿ ಟೀಂ ಇಂಡಿಯಾ ರನ್ ರೇಟ್ ಹೆಚ್ಚಿಸಲು ಸಾಧ್ಯವಾಗಲೇ ಇಲ್ಲ.

    53 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಆ ಬಳಿಕ ಬಂದ ವಿಜಯ್ ಶಂಕರ್ ಕೂಡ 41 ಎಸೆತಗಳಲ್ಲಿ 29 ರನ್ ಗಳಿಸಿ ನಿರ್ಗಮಿಸಿದರು. ಕೊಹ್ಲಿ, ರಾಹುಲ್ ಜೋಡಿ 52 ರನ್ ಜೊತೆಯಾಟ ನೀಡಿದರೆ, ಕೊಹ್ಲಿ ಮತ್ತು ವಿಜಯ್ ಶಂಕರ್ 58 ರನ್ ಜೊತೆಯಾಟವಾಡಿದರು. 5 ಬೌಂಡರಿ ಸಹಾಯದಿಂದ 63 ಎಸೆತಗಳಲ್ಲಿ 67 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮೊಹಮ್ಮದ್ ನಬಿ ಭಾರತಕ್ಕೆ ರನ್ ವೇಗ ಹೆಚ್ಚಿಸಿಕೊಳ್ಳದಂತೆ ನೋಡಿಕೊಂಡರು.

    ಈ ಹಂತದಲ್ಲಿ ಒಂದಾದ ಧೋನಿ, ಕೇದಾರ್ ಜಾಧವ್ ಕುಸಿಯುತ್ತಿದ್ದ ಟೀಂ ಇಂಡಿಯಾಗೆ ಚೇತರಿಕೆ ನೀಡಲು ಮುಂದಾದರು. ಈ ಜೋಡಿ 5ನೇ ವಿಕೆಟ್‍ಗೆ 57 ರನ್ ಜೊತೆಯಾಟ ನೀಡಿತು. ಭಾರತ 40 ಓವರ್ ಗಳ ಅಂತ್ಯಕ್ಕೆ ಕೇವಲ 157 ರನ್ ಗಳಷ್ಟೇ ಪೇರಿಸಿತ್ತು. ಇತ್ತ ಕೇದಾರ್ ಜಾಧವ್ 68 ಎಸೆತಗಳಲ್ಲಿ 52 ರನ್ ಗಳಿಸಿ ತಂಡ ಮೊತ್ತ 200 ರನ್ ಗಡಿ ದಾಟುವಂತೆ ಮಾಡಿದರು. ಅಂತಿಮ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾಗಿ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 41 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು.

    ಅಫ್ಘಾನಿಸ್ತಾನ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ, ಗುನ್ಬದೀನ್ ನೈಬ್ ತಲಾ 2 ವಿಕೆಟ್ ಪಡೆದರೆ ರಶಿದ್ ಖಾನ್, ರಹಮಾತ್ ಶಾ, ರೆಹಮಾನ್, ಅಲಮ್ ತಲಾ ಒಂದು ವಿಕೆಟ್ ಪಡೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಇಂದು ಇಂಡೋ, ಅಫ್ಘಾನ್ ಸಮರ – ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

    ಇಂದು ಇಂಡೋ, ಅಫ್ಘಾನ್ ಸಮರ – ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

    ಸೌತಾಂಪ್ಟನ್: ಹರಿಣಗಳ ಬೇಟೆಯಾಡಿ, ಕಾಂಗರೂಗಳ ಹುಟ್ಟಡಗಿಸಿ, ಪಾಕ್ ತಂಡವನ್ನ ಬಡಿದಟ್ಟಿದ ಟೀಂ ಇಂಡಿಯಾ ವಿಶ್ವಕಪ್‍ನಲ್ಲಿ ವಿರಾಜಮಾನವಾಗಿದೆ. ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ವಿಶ್ವಕಪ್‍ನಲ್ಲಿ ವಿಜಯಿಶಾಲಿಯಾಗಿ ಮುನ್ನುಗ್ಗುತ್ತಿರುವ ಕೊಹ್ಲಿ ಸೈನ್ಯಕ್ಕೆ ಕ್ರಿಕೆಟ್ ಶಿಶು ಅಪ್ಘಾನಿಸ್ತಾನ್ ಪಡೆ ಇಂದು ಸವಾಲೊಡ್ಡಲಿದೆ.

    ಸೌತಾಂಪ್ಟನ್‍ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ನಡೆಯಲಿದೆ. ವಿಶ್ವಕಪ್‍ನಲ್ಲಿ ಅಫ್ಘಾನಿಸ್ತಾನ ಈವರೆಗೆ 5 ಪಂದ್ಯಗಳನ್ನಾಡಿದ್ದು, ಒಂದೇ ಒಂದು ಪಂದ್ಯವನ್ನ ಗೆದ್ದಿಲ್ಲ. ಸದ್ಯ ಅಪ್ಘಾನ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಈ ಹಿಂದೆ ಆಡಿದ ತಂಡವೇ ಕಣಕ್ಕಿಳಿಯಲಿದೆ.

    ಆದರೆ ಭಾರತದ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಶಿಖರ್ ಧವನ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಭುವನೇಶ್ವರ್ ಸಹ ಗಾಯಗೊಂಡು ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಭುವಿ ಸ್ಥಾನವನ್ನು ಮೊಹಮದ್ ಶಮಿ ತುಂಬಲಿದ್ದಾರೆ. ಅಭ್ಯಾಸದ ವೇಳೆ ಗಾಯಗೊಂಡಿದ್ದ ಆಲ್‍ರೌಂಡರ್ ವಿಜಯ್ ಶಂಕರ್ ಫಿಟ್ ಆಗಿದ್ದು, ಇಂದು ಕಣಕ್ಕಿಳಿಯಲಿದ್ದಾರೆ.

    ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದ್ದು ಗೆಲುವಿನ ವಿಶ್ವಾಸದಲ್ಲಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಫ್ಘಾನ್ ಪಡೆ, ಬ್ಯಾಟಿಂಗ್ ಬೌಲಿಂಗ್‍ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದೆ. ಸದ್ಯ ಪಂದ್ಯಕ್ಕೆ ಮಳೆಯ ಭೀತಿಯಲ್ಲ. ಪಿಚ್ ಬ್ಯಾಟಿಂಗ್‍ಗೆ ಹೆಚ್ಚು ಸಹಕಾರಿಯಾಗಲಿದ್ದು, ರನ್ ಹೊಳೆಯೇ ಹರಿಯಲಿದೆ.

    ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆದ್ದು 3ನೇ ಸ್ಥಾನಕ್ಕೆ ಜಿಗಿಯಲು ತಂತ್ರ ರೂಪಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಂಪೈರ್ ಕೆಟ್ಟ ತೀರ್ಪಿಗೆ ಧೋನಿ ಔಟ್- ಕೆಎಲ್ ರಾಹುಲ್ ಟ್ರೋಲ್ ಮಾಡಿದ ಟ್ವಿಟ್ಟಿಗರು

    ಅಂಪೈರ್ ಕೆಟ್ಟ ತೀರ್ಪಿಗೆ ಧೋನಿ ಔಟ್- ಕೆಎಲ್ ರಾಹುಲ್ ಟ್ರೋಲ್ ಮಾಡಿದ ಟ್ವಿಟ್ಟಿಗರು

    ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡೋ ಅಫ್ಘಾನ್ ಕದನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಕಂಡಿದ್ದು, ಕ್ರಿಕೆಟ್ ಶಿಶು ಅಫ್ಘಾನ್ ಹೋರಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಈ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಧೋನಿ ಅಂಪೈರ್ ಕೆಟ್ಟ ತೀರ್ಪಿಗೆ ಔಟಾಗಿದ್ದರು. ಆದರೆ ಇದನ್ನು ಕಂಡ ಅಭಿಮಾನಿಗಳು ಕೆಎಲ್ ರಾಹುಲ್‍ರನ್ನು ಟ್ರೋಲ್ ಮಾಡಿದ್ದಾರೆ.

    ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಕೆಎಲ್ ರಾಹುಲ್ ಆರಂಭಿಕರಾಗಿ ಕಣ್ಣಕ್ಕೆ ಇಳಿದು ಅರ್ಧ ಶತಕ ಪೂರೈಸಿದ್ದರು. ಆದರೆ ಪಂದ್ಯದ 21 ಓವರ್ ಎಸೆದ ರಶೀದ್ ಖಾನ್ ಬೌಲಿಂಗ್‍ನಲ್ಲಿ ಎಲ್‍ಬಿ ಡಬ್ಲ್ಯೂ ಆಗಿದ್ದರು. ಈ ವೇಳೆ ರಾಹುಲ್ ಅಂಪೈರ್ ತೀರ್ಪು ಪರಾಮರ್ಶೆ (ಡಿಆರ್‍ಎಸ್) ಪಡೆದರು. ಮೂರನೇ ಅಂಪೈರ್ ಪರಿಶೀಲನೆ ವೇಳೆಯೂ ರಾಹುಲ್ ಔಟಾಗಿದ್ದರು. ಇದರೊಂದಿಗೆ ಟೀಂ ಇಂಡಿಯಾ ಡಿಆರ್‍ಎಸ್ ಅವಕಾಶವನ್ನು ಕಳೆದುಕೊಂಡಿತ್ತು. ಬಳಿಕ ಬಂದ ಧೋನಿ ಕೂಡ ಜಾವೇದ್ ಅಹಮ್ಮದಿ ಬೌಲಿಂಗ್‍ನಲ್ಲಿ ಎಲ್‍ಬಿ ಡಬ್ಲ್ಯೂ ಆಗದಿದ್ದರು ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಇದನ್ನು ಅಂಪೈರ್ ತೀರ್ಪು ಮರುಪರಿಶೀಲನೆ ಮಾಡಲು ಅವಕಾಶವಿಲ್ಲದೇ 8 ರನ್ ಗಳಿಸಿದ್ದ ಧೋನಿ ಪೆವಿಲಿಯನತ್ತ ಸಾಗಿದ್ದರು. ಇದರಿಂದ ಅಭಿಮಾನಿಗಳು ಸದ್ಯ ರಾಹುಲ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ರಾಹುಲ್, ಪಂದ್ಯದಲ್ಲಿ ಒಂದೇ ಬಾರಿ ಡಿಆರ್‍ಎಸ್ ಪಡೆಯುವ ಅವಕಾಶ ಇದ್ದಾಗ ಕಷ್ಟವಾಗುತ್ತದೆ. ಆದರೆ ನಾನು ಆಡುವ ವೇಳೆ ಔಟ್ ಸೈಡ್ ನಲ್ಲಿದ್ದೆ ಎನಿಸಿತ್ತು. ಅದ್ದರಿಂದ ಡಿಆರ್‍ಎಸ್ ಅವಕಾಶ ಪಡೆದೆ ಎಂದು ತಿಳಿಸಿದ್ದಾರೆ. ಎಲ್ಲದರ ನಡುವೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಹುಲ್ 66 ಎಸೆತಗಳಲ್ಲಿ 60 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ ಆರಂಭಿಕ ರಾಯುಡು, ರಾಹುಲ್ ಜೋಡಿ 110 ರನ್ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಆರಂಭ ನೀಡಿತ್ತು.

    ಅಘ್ಘಾನ್ ವಿರುದ್ಧ ಪಂದ್ಯದಲ್ಲಿ ಅಂಪೈರ್ ಗಳ ಕೆಟ್ಟ ತೀರ್ಪಿನಿಂದ ಭಾರೀ ಬೆಲೆ ಪಡೆದ ಟೀಂ ಇಂಡಿಯಾ ಮೊದಲು ಎಂಎಸ್ ಧೋನಿರನ್ನು ಕಳೆದು ಕೊಂಡರೆ, ಬಳಿಕ 44 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ದಿನೇಶ್ ಕಾರ್ತಿಕ್ ರನ್ನು ಕಳೆದುಕೊಂಡಿತ್ತು. ಅಂತಿಮವಾಗಿ ಅಫ್ಘಾನ್ ತಂಡ ನೀಡಿದ್ದ 252 ರನ್ ಗುರಿಯನ್ನು ಬೆನ್ನತ್ತಿದ್ದ ಟೀಂ ಇಂಡಿಯಾ 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಅಲೌಟ್ ಆಗುವ ಮೂಲಕ ಡ್ರಾ ಮಾಡಿಕೊಂಡಿತ್ತು.

    ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಓವರ್ ನಲ್ಲಿ ಗೆಲ್ಲಲು 7 ರನ್ ಗಳಿಸಬೇಕಿತ್ತು. ಈ ವೇಳೆ ಮೊದಲ 4 ಎಸೆತಗಳಲ್ಲಿ 6 ರನ್ ಗಳಿಸಿದ್ದ ವೇಳೆ ಮೋಡಿ ಮಾಡಿದ ರಷಿದ್ ಖಾನ್ ಜಡೇಜಾ ವಿಕೆಟ್ ಪಡೆಯುವ ಮೂಲಕ ಪಂದ್ಯ ಡ್ರಾ ಆಗುವಂತೆ ಮಾಡಿದ್ದರು. ಇದರೊಂದಿಗೆ ವಿಶ್ವ ಕ್ರಿಕೆಟ್‍ನಲ್ಲಿ ಇದುವರೆಗೂ ಆಡಿರುವ 4,046 ಏಕದಿನ ಪಂದ್ಯಗಳಲ್ಲಿ 36ನೇ ಪಂದ್ಯ ಡ್ರಾ ಆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/royji7306/status/1044772744330719237?

  • ಪಾಕ್‍ಗಿಂತಲೂ ಅಫ್ಘಾನ್ ತಂಡ ಅಪಾಯಕಾರಿ – ರಾಹುಲ್ ದ್ರಾವಿಡ್

    ಪಾಕ್‍ಗಿಂತಲೂ ಅಫ್ಘಾನ್ ತಂಡ ಅಪಾಯಕಾರಿ – ರಾಹುಲ್ ದ್ರಾವಿಡ್

    ನವದೆಹಲಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕಿಂತಲೂ ಅಫ್ಘಾನಿಸ್ತಾನ ತಂಡ ಹೆಚ್ಚು ಅಪಾಯಕಾರಿ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

    ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಿ ಗುಂಪಿನ 2 ಪಂದ್ಯಗಳಲ್ಲಿ ಜಯ ಪಡೆದಿದೆ. ಟೀಂ ಇಂಡಿಯಾ ಕೇವಲ ಪಾಕ್ ಕುರಿತು ಮಾತ್ರ ಫೋಕಸ್ ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಬಾಂಗ್ಲಾ ಕ್ರಿಕೆಟ್ ತಂಡವೂ ಉತ್ತಮ ಪ್ರದರ್ಶವನ್ನೇ ನೀಡಿದೆ ಎಂದ ದ್ರಾವಿಡ್, ಟೀಂ ಇಂಡಿಯಾ ಎಚ್ಚರಿಕೆ ನಡೆ ಹೊಂದಿರಬೇಕು ತಿಳಿಸಿದರು.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ದ್ರಾವಿಡ್, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಹೆಚ್ಚಿನ ತಯಾರಿ ಅಗತ್ಯವಿತ್ತು. ಮುಂದಿನ ಬಾರಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ತಂಡದ ಬ್ಯಾಟ್ಸ್ ಮನ್‍ಗಳು ಹೆಚ್ಚಿನ ಪೂರ್ವ ತಯಾರಿ ನಡೆಸಬೇಕು. ಇಂಗ್ಲೆಂಡ್ ವಾತಾವರಣ ಬ್ಯಾಟಿಂಗ್ ಮಾಡಲು ಅನುಕೂಲವಾಗಿರುವುದಿಲ್ಲ. ಅದ್ದರಿಂದಲೇ ಎರಡು ತಂಡಗಳ ಬ್ಯಾಟ್ಸ್ ಮನ್‍ಗಳು ಸರಣಿಯಲ್ಲಿ ಸಂಕಷ್ಟವನ್ನು ಎದುರಿಸಿದ್ದಾರೆ. ಇಂಗ್ಲೆಂಡ್‍ನಲ್ಲಿ ಆಡಿದ ಅನುಭವದಿಂದ ಈ ಮಾತು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

    ಇಂದು ಭಾರತ ಹಾಗೂ ಪಾಕ್ ಕದನ ನಡೆಯುತ್ತಿದೆ. ಇತ್ತ ಬಾಂಗ್ಲಾ ದೇಶ ಹಾಗೂ ಅಫ್ಘಾನ್ ತಂಡಗಳು ಮುಖಾಮುಖಿ ಆಗಲಿದೆ. ಭಾರತ ಆಟಗಾರರ ಗಾಯದ ಸಮಸ್ಯೆಯ ನಡುವೆಯೂ ಉತ್ತಮ ಪ್ರದರ್ಶನವನ್ನ ನೀಡಿದ್ದು, ಪಾಕ್ ವಿರುದ್ಧ ಗೆಲ್ಲುವ ವಿಶ್ವಾಸ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

     

  • ಅಫ್ಘಾನಿಸ್ತಾನದಲ್ಲಿ ಕನ್ನಡಿಗನ ಹತ್ಯೆ – ಕಾರವಾರದ ಬಾಣಸಿಗನನ್ನ ಗುಂಡಿಟ್ಟು ಕೊಂದ ಉಗ್ರರು

    ಅಫ್ಘಾನಿಸ್ತಾನದಲ್ಲಿ ಕನ್ನಡಿಗನ ಹತ್ಯೆ – ಕಾರವಾರದ ಬಾಣಸಿಗನನ್ನ ಗುಂಡಿಟ್ಟು ಕೊಂದ ಉಗ್ರರು

    ಕಾರವಾರ: ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಪ್ರತ್ಯೇಕತಾವಾದಿಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಮೂಲದ ವ್ಯಕ್ತಿ ಸೇರಿ ಮೂವರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ.

    ಭಾರತದ ಪಾಟ್ಸನ್ (34), 64 ವರ್ಷದ ಮಲೇಶಿಯಾದ ವ್ಯಕ್ತಿ, 37 ವರ್ಷದ ಮ್ಯಾಸಿಡೋನಿಯಾದ ವ್ಯಕ್ತಿಯನ್ನು ಗುರುವಾರ ಅಪಹರಿಸಿದ ಪ್ರತ್ಯೇಕತಾವಾದಿಗಳು ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ.

    ಕೊಲೆಯಾದ ಮೂವರು ಕಾಬೂಲಿನಲ್ಲಿರುವ ಸಾಡೆಕ್ಸೋ ಎಂಬ ವಿಶ್ವದ 2ನೇ ಅತಿದೊಡ್ಡ ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕಂಪನಿಯಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಸಾಡೆಕ್ಸೋ ಕಂಪನಿಯು ಕಚೇರಿ, ಮಿಲಿಟರಿ, ಶಾಲೆ, ಆಸ್ಪತ್ರೆ ಹೀಗೆ ಮಹತ್ವದ ಸ್ಥಳಗಳಿಗೆ ಆಹಾರವನ್ನು ಸರಬರಾಜು ಮಾಡುತ್ತಿದೆ.

    ಕಾರವಾರದ ಪಾಡ್ಸನ್ ಅವರು ಕಳೆದ 10 ವರ್ಷಗಳಿಂದ ಸಾಡೆಕ್ಸೋ ಕಂಪನಿಯಲ್ಲಿ ಬಾಣಸಿಗನಾಗಿ ಕಾರ್ಯನಿರ್ವಹಿಸುತಿದ್ದರು. ಗುರುವಾರ ಕೆಲಸದ ನಿಮಿತ್ತ ವಾಹನದಲ್ಲಿ ಸಹೋದ್ಯೋಗಿಗಳ ಜೊತೆ ಹೋಗುತ್ತಿದ್ದಾಗ ಉಗ್ರರು ಅವರನ್ನು ಕಾರಿನ ಸಮೇತ ಅಪಹರಿಸಿದ್ದರು. ಬಳಿಕ ಪಾರ್ಕಿಂಗ್ ಏರಿಯಾಗೆ ಕೆರೆದೊಯ್ದು ಕಾರಿನಲ್ಲಿಯೇ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು.

    ಮೃತರ ದೇಹಗಳು ಕಾರಿನೊಳಗೆ ಪತ್ತೆಯಾಗಿವೆ. ಆದರೆ ಕಾರು ಚಾಲಕನನ್ನು ಹಾಗೇ ಬಿಟ್ಟು ಹೋಗಿದ್ದು, ಆತನನ್ನು ಅಪ್ಘಾನ್ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದಾಗಿ ಈ ಮೂವರನ್ನು ಗುರುತಿಸಲಾಗಿದೆ ಎಂದು ಅಫ್ಘಾನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೆರಡು ದಿನದಲ್ಲಿ ಮೃತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

  • ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆದರಿದ ಕ್ರಿಕೆಟ್ ಶಿಶು – ಐತಿಹಾಸಿಕ ಗೆಲುವು ಪಡೆದ ರಹಾನೆ ಬಳಗ

    ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆದರಿದ ಕ್ರಿಕೆಟ್ ಶಿಶು – ಐತಿಹಾಸಿಕ ಗೆಲುವು ಪಡೆದ ರಹಾನೆ ಬಳಗ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಐತಿಹಾಸಿಕ ಏಕೈಕ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 262 ರನ್ ಗಳಿಂದ ಗೆದ್ದುಕೊಂಡಿದೆ.

    ಒಂದೇ ದಿನದಲ್ಲಿ ಅಫ್ಘಾನ್ ತಂಡವನ್ನು ಎರಡು ಬಾರಿ ಅಲೌಟ್ ಮಾಡಿದ ಟೀಂ ಇಂಡಿಯಾ, ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಆಘ್ಘಾನ್‍ಗೆ ಸೋಲಿನ ರುಚಿ ತೋರಿಸಿದ್ದು, ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾ ವಿರುದ್ಧ ತಿರುಗಿ ಬಿದ್ದ ಅಫ್ಘಾನ್ ಬೌಲರ್ ಗಳು 474 ರನ್ ಗಳಿಗೆ ತಂಡವನ್ನು ಕಟ್ಟಿ ಹಾಕಲು ಯಶಸ್ವಿಯಾದರು. ಆದರೆ ಬೃಹತ್ ಮೊತ್ತ ಬೆನ್ನತ್ತಿದ್ದ ಅಫ್ಘಾನ್ ಪಡೆ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 27.5 ಓವರ್‍ಗಳಲ್ಲಿ ಕೇವಲ 109 ರನ್‍ಗಳಿಗೆ ಆಲೌಟಾಗಿತ್ತು. ಈ ವೇಳೆ ಅಫ್ಘಾನ್ ವಿರುದ್ಧ ಫಾಲೋವನ್ ಎದುರಿಸಿದ ಟೀಂ ಇಂಡಿಯಾ ಮತ್ತೆ ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲೂ ಯಾವುದೇ ಪ್ರತಿರೋಧವನ್ನು ತೋರದ ಅಫ್ಘಾನ್ ಮತ್ತೆ 38.4 ಓವರ್‍ಗಳಲ್ಲಿ 103 ರನ್‍ಗಳಿಗೆ ತನ್ನ ಎಲ್ಲಾ ಟಿಕೆಟ್ ಕಳೆದುಕೊಂಡಿತು.

    ಅಫ್ಘಾನ ಪರ ಮೊದಲ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಹ್ಜಾದ್ (13), ರಹ್ಮತ್ ಶಾಹ (14), ಹಶ್ಮತುಲ್ಲಾಹ್ ಶಹೀದಿ (11), ನಾಯಕ ಅಸ್ಗರ್ ಸ್ಟಾನಿಕ್‍ಜಾಯಿ (11), ರಶೀದ್ ಖಾನ್ (12) ಎರಡಂಕಿ ದಾಟಿಲು ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್ ನಲ್ಲಿ ಅಸ್ಗರ್ ಸ್ಟಾನಿಕ್‍ಜಾಯಿ (25) ಹಾಗೂ ಹಶ್ಮತ್‍ತುಲ್ಲಾ ಶಾಹಿದಿ (36 ಅಜೇಯ) ಅಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇತರ ಆಟಗಾರರು ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು.

    ಇನ್ನು ಭಾರತ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಜಡೇಜಾ ಮೊದಲ ಇನ್ನಿಂಗ್ಸ್ ನಲ್ಲಿ 4, ಎರಡನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಎರಡು ಇನ್ನಿಂಗ್ಸ್ ಗಳಿಂದ ಅಶ್ವಿನ್ 5, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ವೇಳೆ ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‍ನಲ್ಲಿ 100 ವಿಕೆಟ್‍ಗಳ ಸಾಧನೆ ಮಾಡಿದರು.

    ಇದಕ್ಕೂ ಮುನ್ನ ಟೀಂ ಇಂಡಿಯಾ ಪರ ಎರಡನೇ ದಿನದಾಟದಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ 71 ರನ್ ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಇನ್ನು ಅಫ್ಘಾನ್ ಪರ ಯಮಿನ್ ಅಹ್ಮದ್‍ಜಾಯ್ 3, ವಫಾದಾರ್ ಮತ್ತು ರಶೀದ್ ಖಾನ್ ತಲಾ 2, ಮುಜೀಬ್ ಉರ್ ರೆಹ್ಮಾನ್ ಹಾಗೂ ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು.

  • ಬೆಂಗಳೂರು ಟೆಸ್ಟ್ ವೇಳೆ ದ್ರಾವಿಡ್ ನೆನಪು ಮಾಡ್ಕೊಂಡ ಸೆಹ್ವಾಗ್

    ಬೆಂಗಳೂರು ಟೆಸ್ಟ್ ವೇಳೆ ದ್ರಾವಿಡ್ ನೆನಪು ಮಾಡ್ಕೊಂಡ ಸೆಹ್ವಾಗ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಕೆಎಲ್ ರಾಹುಲ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಯುತ್ತಿದಂತೆ ಸೆಹ್ವಾಗ್ ತಮ್ಮ ಆತ್ಮೀಯ ಗೆಳೆಯ ದ್ರಾವಿಡ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ದ್ರಾವಿಡ್ ನಿವೃತ್ತಿಯ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ನಂ.3 ರ ಬ್ಯಾಟಿಂಗ್ ಕ್ರಮದಲ್ಲಿ ರಾಹುಲ್ ಹೆಸರನ್ನು ಕಾಣುತ್ತಿರುವುದಾಗಿ ಹೇಳಿದ್ದಾರೆ. ಅಫ್ಘಾನ್ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ ಧವನ್ ಸ್ಫೋಟಕ ಶತಕ ಸಿಡಿಸಿ ಔಟಾಗುತ್ತಿದಂತೆ ರಾಹುಲ್ ಬ್ಯಾಟಿಂಗ್ ನಡೆಸಿ ಅರ್ಧಶತಕ (54) ಪೂರೈಸಿದರು.

    ಪಂದ್ಯದಲ್ಲಿ ಸೆಹ್ವಾಗ್ ದಾಖಲೆ ಮುರಿದ ಧವನ್ ಮೊದಲ ದಿನ ಭೋಜನ ವಿರಾಮಕ್ಕೂ ಮುನ್ನ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಸೆಹ್ವಾಗ್ 2006 ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ 99 ರನ್, 1967 ರಲ್ಲಿ ಫಾರುಖ್ ಎಂಜಿನಿಯರ್ 94 ರನ್ ಗಳಿಸಿದ್ದರು. ಅಲ್ಲದೇ ಪಂದ್ಯದ ವಿರಾಮದ ವೇಳೆ ಶತಕ ಸಿಡಿಸಿದ 6ನೇ ಆಟಗಾರ ಎಂಬ ವಿಶೇಷ ಸಾಧನೆ ಮಾಡಿದರು. ಈ ಹಿಂದೆ ಆಸೀಸ್ ನ ವಿಕ್ಟರ್ ಟ್ರಂಪರ್, ಚಾರ್ಲ್ಸ್ ಮ್ಯಾಕಾರ್ಟ್‍ನಿ, ಡಾನ್ ಬ್ರಾಡ್ ಮನ್, ಡೇವಿಡ್ ವಾರ್ನರ್ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಮಜೀದ್ ಖಾನ್ ಈ ಸಾಧನೆ ಮಾಡಿದ್ದರು.

  • ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಬೆಂಗಳೂರು: ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡುತ್ತಿರುವ ಅಫ್ಘಾನಿಸ್ಥಾನ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

    ಬುಧವಾರ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಅಫ್ಘಾನಿಸ್ಥಾನ ತಂಡವು ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಭಿನಂದನೆ. ಇದೊಂದು ಐತಿಹಾಸಿಕ ಪಂದ್ಯವಾಗಿದ್ದು, ನಮ್ಮ ನೆಲವನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಉಭಯ ತಂಡಗಳಿಗೆ ಶುಭವಾಗಲಿ. ಕ್ರೀಡೆ ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರಗೊಳಿಸುತ್ತಿದೆ ಹಾಗೂ ಸಂಬಂಧ ಬಲಪಡಿಸುತ್ತದೆ ಎಂದು ಬರೆದಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ನಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತೀಚಿನ ವರದಿ ಬಂದಾಗ 45.1 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿದೆ.

    ಶಿಖರ್ ಧವನ್ 107 ರನ್(96 ಎಸೆತ, 19 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಮುರಳಿ ವಿಜಯ್ ಔಟಾಗದೇ 94 ರನ್(128 ಎಸೆತ, 14 ಬೌಂಡರಿ, 1 ಸಿಕ್ಸ್), ಕೆಎಲ್ ರಾಹುಲ್ ರಾಹುಲ್ ಔಟಾಗದೇ 33 ರನ್(48 ಎಸೆತ, 4 ಬೌಂಡರಿ) ಹೊಡೆದಿದ್ದಾರೆ.