Tag: Aero India 2019

  • ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

    ಏರ್ ಶೋ ಅಗ್ನಿ ದುರಂತಕ್ಕೆ ವಿಮೆಗಾಗಿ ಯಲಹಂಕ ಆರ್​ಟಿಓ ಓಪನ್

    -ಸ್ಥಳದಲ್ಲೇ ಕೌಂಟರ್ ತೆಗೆದ ವಿಮೆ ಕಂಪನಿಗಳು

    ಬೆಂಗಳೂರು: ಬೆಂಗಳೂರಿನ ಯಲಹಂಕದ ಬಳಿಯ ಏರ್ ಶೋನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿವೆ. ಇದೀಗ ವಾಹನ ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಸಾಲ ಸೋಲ ಮಾಡಿ, ಇಎಂಐಗಳನ್ನ ಕಟ್ಟಿಕೊಂಡು ಬರ್ತಿದ್ದವರು ಅಯ್ಯೋ… ಹೀಗಾಗೋಯ್ತಲ್ಲ ಅಂತ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

    ಏರ್ ಶೋನಲ್ಲಿ ಧಗಧಗಿಸಿ ಹೋದ ಕಾರ್ ಗಳು ಮಾಲೀಕರು ಇದೀಗ ಇನ್ಸುರೆನ್ಸ್ ಪಡೆಯೋಕೆ ಪರದಾಡುತ್ತಿದ್ದಾರೆ. ಆದ್ರೆ, ನ್ಯಾಚುರಲ್ ಡಿಸಾಸ್ಟರ್ ಅಂತ ಈ ಘಟನೆಯನ್ನು ಘೋಷಣೆ ಮಾಡಿದ್ರೆ ಬಹುತೇಕ ಎಲ್ಲಾ ವಾಹನಗಳಿಗೆ ಹಂಡ್ರೆಡ್ ಪರ್ಸೆಂಟ್ ವಿಮೆ ಸಿಗಲಿದೆ. ಹೀಗಾಗಿ, ವಿಮಾ ಕಂಪನಿಗಳು ಸಹ ಘಟನಾ ಸ್ಥಳದಲ್ಲೇ ಕೌಂಟರ್ ತೆಗೆದಿವೆ. ಸುಟ್ಟು ಹೋಗಿರುವ ಕಾರ್‍ಗಳನ್ನು ಪತ್ತೆ ಹಚ್ಚಿದ ಮಾಲೀಕರು ರಿಜಿಸ್ಟ್ರೇಷನ್ ನಂಬರ್ ಬರೆದಿದ್ದಾರೆ.

    ಇವತ್ತೂ ಸಹ ಯಲಹಂಕ ಆರ್ ಟಿಒ ಕಚೇರಿ ಓಪನ್ ಇರುತ್ತೆ. ವಾಹನ ನೊಂದಣಿ, ಚಾಲನಾ ಪತ್ರಗಳ ವಿವರಗಳನ್ನ ಪಡೆಯಲು ಸಾರಿಗೆ ಇಲಾಖೆ ಯಲಹಂಕದಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದೆ. ಸಹಾಯ ಕೇಂದ್ರದ ದೂರವಾಣಿ ಸಂಖ್ಯೆ 080-29729908, ಮೊ. 9449864050 ಕಾರು ಮಾಲೀಕರು ಸಹಾಯ ಕೇಂದ್ರದ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

    ಇನ್ಸುರೆನ್ಸ್ ಗಾಗಿ ಏನೇನು ಮಾಡಬೇಕು..?
    * ವಾಹನ ಮಾಲೀಕರು ಮೊದಲು ಕಂಪ್ಲೆಂಟ್ ಕೊಡಬೇಕು.
    * ಆ ಕಂಪ್ಲೆಂಟ್ ಕಾಪಿಯನ್ನು ಇಟ್ಕೊಂಡು ವಿಮೆಗೆ ಅಪ್ಲೈ ಮಾಡಬೇಕು.
    * ಇನ್ಶುರೆನ್ಸ್ ಕಚೇರಿಗೆ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
    * ಮೂಲ ದಾಖಲಾತಿ ಇಲ್ಲದಿದ್ದರೆ ನಕಲು ಪ್ರತಿಗಳನ್ನು ಸಲ್ಲಿಸಿ ಇನ್ಸುರೆನ್ಸ್ ಗೆ ಅರ್ಜಿ ಸಲ್ಲಿಸಿ.
    * ಮೂಲ ದಾಖಲಾತಿ ಕಳೆದುಹೋಗಿದ್ದರೆ ಆರ್ ಟಿಒ ಕಚೇರಿಗೆ ಭೇಟಿ ನೀಡಿ ನಕಲು ದಾಖಲಾತಿಗಳನ್ನು ಪಡೆದುಕೊಳ್ಳಿ.

    * ನಂತರ ಎಲ್ಲಾ ದಾಖಲಾತಿ ಸಮೇತ ಕಂಪ್ಲೆಂಟ್ ಕಾಪಿಯನ್ನು ಇನ್ಸುರೆನ್ಸ್ ಆಫೀಸ್ ಗೆ ಸಲ್ಲಿಸಿ.
    * ಆಗ ಇನ್ಸುರೆನ್ಸ್ ಕಂಪನಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತದೆ.
    * ಒಂದು ವೇಳೆ ಹೊರ ರಾಜ್ಯದಲ್ಲಿ ನೋಂದಣಿಯಾಗಿದ್ದರೆ ಎಲ್ಲಿ ನೋಂದಣಿಯಾಗಿದೆ, ಕೊನೆಗೆ ಯಾರು ರಿಜಿಸ್ಟ್ರರ್ ಮಾಡಿದ್ರು ಅನ್ನೋ ದಾಖಲೆಯೊಂದಿಗೆ ಕಂಪ್ಲೆಂಟ್ ಕಾಪಿ ಸಮೇತ ವಿಮೆಗೆ ಅರ್ಜಿ ಸಲ್ಲಿಸಿ.
    * ಮೊದಲನೆಯದಾಗಿ ನಿಮ್ಮ ಇನ್ಸುರೆನ್ಸ್ ಕೊನೆಯಾಗಿರಬಾರದು. ಮಾನ್ಯವಾಗಿರಬೇಕು.
    * ಇನ್ಸುರೆನ್ಸ್ ನವೀಕರಣ ಆಗಿರಬೇಕು
    * ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ಆರ್ ಟಿಒ ಕಚೇರಿಯಿಂದ ಒಂದೇ ಬಾರಿಗೆ ಅಪ್ರೂವಲ್ ಮಾಡೋ ಕ್ರಮದ ಭರವಸೆ.

    ಏರ್‍ಶೋ ಎಂದಿನ ವೇಳಾಪಟ್ಟಿಯಂತೆ ಇವತ್ತೂ ಮುಂದುವರಿಯಲಿದೆ. ಊಹಾಪೋಹಗಳಿಗೆ ಕಿವಿಕೊಡಬೇಡಿ ಅಂತಾ ಡಿಫೆನ್ಸ್ ಅಧಿಕಾರಿಗಳು ಹೇಳಿದ್ದಾರೆ. ದುರಂತರದ ಬಳಿಕ ಆಯೋಜಕರು ಎಚ್ಚೆತ್ತುಕೊಂಡಿದ್ದು, ಕಾರ್ ಪಾರ್ಕಿಂಗ್‍ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೀಕೆಂಡ್ ಆಗಿರೋ ಕಾರಣ ಸಾವಿರಾರು ಮಂದಿ ಆಗಮಿಸಬಹುದು. ಆದರೆ ಘಟನೆಯಿಂದ ವೀಕ್ಷಕರ ಸಂಖ್ಯೆ ಕಡಿಮೆಯೂ ಆಗಬಹುದು. ಯಾವುದೇ ಕಾರಣಕ್ಕೂ ಏರ್ ಶೋ ರದ್ದಾಗಲ್ಲ. ಎಂದಿನಂತೆ ನಡೆಯಲಿದೆ.

    https://www.youtube.com/watch?v=ISKqdrigZd0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರೋ ಇಂಡಿಯಾ ಏರ್ ಶೋ ವೇಳೆ ಅಗ್ನಿ ಅವಘಡ

    ಏರೋ ಇಂಡಿಯಾ ಏರ್ ಶೋ ವೇಳೆ ಅಗ್ನಿ ಅವಘಡ

    ಬೆಂಗಳೂರು: ಏರೋ ಇಂಡಿಯಾ 2019ರ ಏರ್ ಶೋ ವೇಳೆ ಮತ್ತೆ ಅಗ್ನಿ ಅವಘಢ ಸಂಭವಿಸಿದೆ.

    ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದ್ದು, ಏರ್ ಪೋರ್ಸ್ ರಸ್ತೆಯ ಗೇಟ್ ನಂಬರ್ 5ರ ಬಳಿ ಬೆಂಕಿ ಕಾಣಿಸಿಕೊಂಡಿದೆ. ಐದು ಕಾರು ಮತ್ತು ಒಂದು ಬೈಕಿಗೆ ಬೆಂಕಿ ಹತ್ತಿಕೊಂಡಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

    ಮೊದಲನೇ ಹಂತದ ವಿಮಾನ ಹಾರಾಟ ಮುಕ್ತಾಯಗೊಂಡಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಹುಲ್ಲಿಗೆ ಕೆಲ ಕಿಡಿಗೇಡಿಗಳು ಸಿಗರೇಟ್ ಹಾಕಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯಲಹಂಕದ ಮೈದಾನದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದ್ದು, ಈಗಾಗಲೇ ಅಗ್ನಿಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

    ಇತ್ತೀಚೆಗಷ್ಟೇ ಏರ್ ಶೋದ ಅಂಗವಾಗಿ ನಡೆದ ತಾಲೀಮು ವೇಳೆ ಸೂರ್ಯ ಕಿರಣ್ ಎಂಬ ಎರಡು ವಿನಾನಗಳು ಹಾರಾಡುತ್ತಿದ್ದಾಗಲೇ ಪರಸ್ಪರ ಡಿಕ್ಕಿಯಾಗಿ ನೆಲಕ್ಕುರುಳಿತ್ತು. ಈ ಘಟನೆಯಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದರು.

    https://www.youtube.com/watch?v=S8anwX84c_8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv