Tag: Advertising

  • ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ಹೈದರಾಬಾದ್: ನಟಿ ಸಾಯಿ ಪಲ್ಲವಿ ಅವರು ಬರೋಬ್ಬರಿ 2 ಕೋಟಿ ಪ್ರಾಜೆಕ್ಟ್ ತಿರಸ್ಕರಿಸಿದ್ದಾರೆ.

    ಸಾಯಿ ಪಲ್ಲವಿ ಅವರಿಗೆ ಖ್ಯಾತ ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ.

    ಕಂಪನಿ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಉತ್ಪಾದಿಸಿದ್ದು, ಅದನ್ನು ಪ್ರೇಕ್ಷರಿಗೆ ಪರಿಚಯಿಸಬೇಕಿತ್ತು. ಈ ಫೇಸ್ ಕ್ರೀಮ್ ಜಾಹೀರಾತಿಗೆ ಸಾಯಿ ಪಲ್ಲವಿ ಸೂಕ್ತ ಎಂದು ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಅದರಂತೆಯೇ ಅವರ ಬಳಿ ಸಂಸ್ಥೆ ಬೇಡಿಕೆ ಇಟ್ಟಿದೆ. ಆದರೆ ಜಾಹೀರಾತಿನ ಆಫರನ್ನು ಸಾಯಿ ಪಲ್ಲವಿ ಅವರು ತಾವು ಮಾಡುವುದಿಲ್ಲ ಎಂದು ಹೇಳಿ ತಿರಸ್ಕರಿಸಿದ್ದಾರೆ.

    ಇದು ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಸಾಯಿ ಪಲ್ಲವಿ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಬಳಸುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡುತ್ತಾರೆ. ಈ ಮೂಲಕವೇ ಅವರು ಅಪಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಕಾರಣದಿಂದ ಅವರು ಫೇಸ್ ಕ್ರೀಮ್ ಆಫರ್ ರಿಜೆಕ್ಟ್ ಮಾಡಿದ್ದಾರೆ.

  • ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್‍ನಿಂದ ದೂರು

    ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್‍ನಿಂದ ದೂರು

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‍ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.

    ಜೆಡಿಎಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಂಬವರು ಸುಮಲತಾ ವಿರುದ್ಧ ದೂರು ನೀಡಿದ್ದಾರೆ. ಸುಮಲತಾ ನಟಿಸಿರುವ ಜಾಹೀರಾತು ಟಿ.ವಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಅವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳ ಬಳಿಕ ಮನವಿ ಮಾಡಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ಲೋಕಸಭಾ ಚುನಾವಣೆಯು ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 18 ಹಾಗೂ 23 ರಂದು ಎರಡು ಹಂತದಲ್ಲಿ ಜರುಗಲಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎ.ಸುಮಲತಾ ಅವರು ನಟಿಸಿರುವ ಜಾಹಿರಾತು ಹಲವು ಖಾಸಗಿ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

    ಇದರ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಿಸುತ್ತಿರುವುದರಿಂದ ಇದು ಪರೋಕ್ಷವಾಗಿ ಪ್ರತಿ ಸ್ಪರ್ಧಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಇದರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನತಾದಳ ಪಕ್ಷದ ಪರವಾಗಿ ಕೋರುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಕಾಂಡೋಮ್ ಜಾಹೀರಾತಿನಲ್ಲಿ ನಟಿಸಲ್ಲ: ರಣ್‍ವೀರ್ ಸಿಂಗ್

    ಕಾಂಡೋಮ್ ಜಾಹೀರಾತಿನಲ್ಲಿ ನಟಿಸಲ್ಲ: ರಣ್‍ವೀರ್ ಸಿಂಗ್

    ಮುಂಬೈ: ಬಾಲಿವುಡ್ ಬಾಜೀರಾವ್ ರಣ್‍ವೀರ್ ಸಿಂಗ್ ತಾವು ಇನ್ನ್ಮುಂದೆ ಕಾಂಡೋಮ್ ಜಾಹೀರಾತುಗಳಲ್ಲಿ ನಟಿಸಲ್ಲ ಎಂದು ಹೇಳಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಕಾಂಡೋಮ್ ಕಂಪನಿಯ ರಾಯಭಾರಿಯಾದಗ ಬಾಲಿವುಡ್ ಅಂಗಳದ ಬಹುತೇಕರು ಹುಬ್ಬೇರಿಸಿದ್ದರು.

    ಐದು ವರ್ಷದ ಹಿಂದೆ ರಣ್‍ವೀರ್ ಕಂಪನಿಯ ಒಪ್ಪಂದ ಈ ವರ್ಷ ಅಂತ್ಯವಾಗಲಿದೆ. ಕಂಪನಿ ಒಪ್ಪಂದವನ್ನು ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರೂ, ರಣ್‍ವೀರ್ ‘ನೋ’ ಎಂದಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ರಣ್‍ವೀರ್ ನಟನೆಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿವೆ. ಇತ್ತೀಚೆಗೆ ತೆರೆಕಂಡ ಸಿಂಬಾ, ಗಲ್ಲಿ ಬಾಯ್ ಪ್ರೇಕ್ಷಕರ ನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದವು. ಸಿನಿಮಾಗಳ ಯಶಸ್ಸಿನ ಬಳಿಕ ರಣ್‍ವೀರ್ ಸಂಭಾವನೆ ಹೆಚ್ಚಿಸಿಕೊಂಡಿದ್ದರಿಂದ ಕಾಂಡೋಮ್ ಕಂಪನಿಯ ಜೊತೆಗೆ ಒಪ್ಪಂದ ಮುಂದುವರಿಸಲು ಹಿಂದೇಟು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಸಿನಿಮಾದ ಸ್ಟಾರ್ ನಟರು ಕಾಂಡೋಮ್ ಜಾಹೀರಾತಿನಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ರಣ್‍ವೀರ್ ಯಾವುದನ್ನು ಲೆಕ್ಕಿಸದೇ ಕಾಂಡೋಮ್ ಜಾಹಿರಾತಿನಲ್ಲಿ ಮಿಂಚಿದ್ದರು. ರಣ್‍ವೀರ್ ಜಾಹಿರಾತಿನಿಂದ ಕಂಪನಿಯ ಉತ್ಪನ್ನಗಳ ಮಾರಾಟ ಸಹ ಏರಿಕೆ ಕಂಡಿತ್ತು. ಗುಳಿ ಕೆನ್ನೆ ಗೆಳತಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ರಣ್‍ವೀರ್ ಗೆ ಕಾಂಡೋಮ್ ಕಂಪನಿಯೊಂದು ತನ್ನದೇ ಶೈಲಿಯಲ್ಲಿ ವಿಶ್ ಮಾಡಿತ್ತು.

    ಸದ್ಯ ರಣ್‍ವೀರ್ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕಥೆಯನ್ನು ಸಿನಿಮಾ ಒಳಗೊಂಡಿದೆ. ಇದೀಗ ರಣ್‍ವೀರ್ ಸಂಸಾರಿಯಾಗಿದ್ದರಿಂದ ಈ ರೀತಿಯ ಜಾಹೀರಾತುಗಳನ್ನು ತಿರಸ್ಕರಿಸುತ್ತಿದ್ದಾರೆ ಎನ್ನಲಾಗಿದೆ.

  • ಆನ್ ಲೈನ್ ಮೂಲಕ ಮೊಬೈಲ್ ಕೊಳ್ಳಲು ಹೋದ ವ್ಯಕ್ತಿಗೆ ಮೋಸ

    ಆನ್ ಲೈನ್ ಮೂಲಕ ಮೊಬೈಲ್ ಕೊಳ್ಳಲು ಹೋದ ವ್ಯಕ್ತಿಗೆ ಮೋಸ

    ಬೆಂಗಳೂರು: ಪ್ರತಿಷ್ಠಿತ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತನ್ನು ನೋಡಿ ಕಡಿಮೆ ದರದಲ್ಲಿ ಆನ್ ಲೈನ್ ಮೂಲಕ, ಮೊಬೈಲ್ ಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಮೋಸಹೋದ ಘಟನೆ ನಗರದ ನೆಲಮಂಗಲದಲ್ಲಿ ವರದಿಯಾಗಿದೆ.

    ನೆಲಮಂಗಲ ಪಟ್ಟಣದ ಸಮೀಪದ ರಾಯನ್‍ನಗರ ನಿವಾಸಿ, ಶಿವಕುಮಾರ್ ಆನ್ ಲೈನ್ ಮೂಲಕ ಮೋಸ ಹೋದ ವ್ಯಕ್ತಿ. ಕೇವಲ 2,800 ರೂ. ಗೆ ಒಂದು ಸ್ಯಾಮ್ ಸಂಗ್ ಮೊಬೈಲ್ ಕೊಂಡರೆ ಮತ್ತೊಂದು ಮೊಬೈಲ್ ಉಚಿತ. ಜೊತೆಗೆ ಚಾರ್ಜರ್, ಹೆಡ್ ಸೆಟ್ ನೀಡುವುದಾಗಿ ಜಾಹೀರಾತು ಪ್ರಕಟವಾಗಿತ್ತು. ಹೀಗೆ ಕಡಿಮೆ ದರದಲ್ಲಿ ಫೋನ್ ಸಿಗುತ್ತದೆ ಎಂದು ಜಾಹೀರಾತು ನೋಡಿ ಬೆರಗಾದ ಶಿವಕುಮಾರ್, ಆನ್ ಲೈನ್ ಮೂಲಕ ಮೊಬೈಲ್ ಬುಕ್ ಮಾಡಿದ್ದಾರೆ. ಆದ್ರೆ ಅಂಚೆ ಮೂಲಕ ಬಂದತಂಹ ಕವರ್ ಓಪನ್ ಮಾಡಿದಾಗ ಅದರೊಳಗೆ ಕಳಪೆ ಗುಣಮಟ್ಟದ ಬೇರೆ ಕಂಪೆನಿಯ ಮೊಬೈಲ್ ನೀಡಿದ್ದಾರೆ ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ.

    ನನಗೆ ಆದ ಮೋಸ ಬೇರೆ ಯಾರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಶಿವಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆನ್ ಲೈನ್ ಮುಖಾಂತರ ವ್ಯವಹರಿಸುವಾಗ ಎಚ್ಚರವಿದ್ದರೆ ಮಾತ್ರ, ಇಂತಹ ವಂಚನೆಗಳನ್ನು ತಡೆಯಬಹುದು ಎಂದು ಶಿವಕುಮಾರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಫಸ್ಟ್ ನೈಟ್ ರೆಕಾರ್ಡ್ ಮಾಡಲು ದಂಪತಿಯಿಂದ ವಿಡಿಯೋ ಗ್ರಾಫರ್ ಸರ್ಚ್

    ಫಸ್ಟ್ ನೈಟ್ ರೆಕಾರ್ಡ್ ಮಾಡಲು ದಂಪತಿಯಿಂದ ವಿಡಿಯೋ ಗ್ರಾಫರ್ ಸರ್ಚ್

    -ರಾತ್ರಿ 1 ರಿಂದ 3 ಗಂಟೆವರೆಗೆ ಮಾತ್ರ

    ಲಂಡನ್: ಮದುವೆಯಾದ ಜೋಡಿಯೂ ತಮ್ಮ ಮೊದಲ ರಾತ್ರಿಯಂದು ಯಾವುದೇ ಭಂಗ ಬರಬಾರದು ಎಂದು ಇಷ್ಟಪಡುತ್ತಾರೆ. ಆದರೆ ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯನ್ನು ರೆಕಾರ್ಡ್ ಮಾಡಲು ವಿಡಿಯೋ ಗ್ರಾಫರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟಂಬರ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಆದರೆ ಈ ದಂಪತಿ ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸಲು ವೃತ್ತಿಪರ ವಿಡಿಯೋ ಗ್ರಾಫರ್ ಬೇಕಾಗಿದ್ದಾನೆ ಅಂತ ಮೂರನೇ ವ್ಯಕ್ತಿಗಾಗಿ ಜಾಹೀರಾತನ್ನು ನೀಡಿದ್ದಾರೆ.

    ಅಪರಿಚಿತ ದಂಪತಿ ಈ ಬಗ್ಗೆ ಜಾಹೀರಾತು ನೀಡಿದ್ದಾರೆ. ಜೊತೆಗೆ ರಾತ್ರಿ 1 ರಿಂದ 3 ಗಂಟೆಯವರೆ ಮಾತ್ರ ಮೊದಲ ರಾತ್ರಿಯನ್ನ ಚಿತ್ರೀಕರಣ ಮಾಡಬೇಕಿದೆ. ಆತನಿಗೆ 2000 ಡಾಲರ್ ಸುಮಾರು 2 ಲಕ್ಷ ಹಣವನ್ನು ನೀಡುವುದಾಗಿ ಜಾಹೀರಾತಿನಲ್ಲಿ ತಿಳಿಸಿದ್ದಾರೆ.

    ಈ ದಂಪತಿ, ನಾವಿಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದೇವೆ. ನಮ್ಮ ಮದುವೆಯ ಸಂಭ್ರಮ ಕೇವಲ ದಿನಕ್ಕಷ್ಟೆ ಸೀಮಿತವಾಗಿರಬಾದರು. ನಮ್ಮ ಪ್ರೀತಿಯ ಪ್ರತಿ ಘಳಿಗೆಯೂ ಮುಖ್ಯವಾಗಿದೆ. ಆದ್ದರಿಂದ ನಮ್ಮ ಮೊದಲ ರಾತ್ರಿ ತುಂಬಾ ಮಹತ್ವವಾದದ್ದು, ಅದಕ್ಕಾಗಿ ವಿಡಿಯೋ ಗ್ರಾಫರ್ ಹುಡುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ನಾವಿಬ್ಬರು ಮದುವೆಯ ಮೊದಲ ರಾತ್ರಿಯ ಚಿತ್ರೀಕರಣ ಮಾಡಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ದುರದೃಷ್ಟವಶಾತ್ ನಮಗೆ ಇನ್ನು ವಿಡಿಯೋ ಗ್ರಾಫರ್ ಸಿಕ್ಕಿಲ್ಲ. ನಮ್ಮಿಂದ ಹುಡುಕಲು ಸಾಧ್ಯವಾಗಲಿಲ್ಲ. ತುಂಬಾ ಕಡೆ ಸಾಕಷ್ಟು ಸುತ್ತಾಡಿದ್ದೇವೆ. ಆದರೆ ವಿಡಿಯೋ ಗ್ರಾಫರ್ ಸಿಗುತ್ತಿಲ್ಲ.

    ನಾನು ತುಂಬಾ ವಿಡಿಯೋ ಗ್ರಾಫರ್ ನ್ನು ಕೇಳಿದೆವು. ಆದರೆ ಯಾರು ಇದಕ್ಕೆ ಒಪ್ಪಲಿಲ್ಲ. ಇದು ತಪ್ಪು ಎಂದು ನಮಗೆ ತಿಳಿದಿದೆ. ಆದರೆ ಆ ದಿನದ ಕ್ಷಣಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ, ಅದಕ್ಕಾಗಿ ನಾವು ಹುಡುಕುತ್ತಿದ್ದೇವೆ ಎಂದು ದಂಪತಿ ಸ್ಪಷ್ಟಪಡಿಸಿದ್ದಾರೆ.

  • ಟಿವಿಯಲ್ಲಿ ಈ ಸಮಯದಲ್ಲಿ ಮಾತ್ರ ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಅವಕಾಶ- ಕೇಂದ್ರ ಸರ್ಕಾರ

    ಟಿವಿಯಲ್ಲಿ ಈ ಸಮಯದಲ್ಲಿ ಮಾತ್ರ ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ಅವಕಾಶ- ಕೇಂದ್ರ ಸರ್ಕಾರ

    ನವದೆಹಲಿ: ಟಿವಿಯಲ್ಲಿ ಕಾಂಡೋಮ್ ಜಾಹೀರಾತುಗಳ ಪ್ರಸಾರಕ್ಕೆ ಕೇಂದ್ರ ಸರ್ಕಾರ ಹೊಸ ನಿಯಮವನ್ನ ರೂಪಿಸಿದೆ.

    ಅಸಭ್ಯ ಕಾಂಡೋಮ್ ಜಾಹೀರಾತುಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಜಾಹೀರಾತುಗಳನ್ನು ಕೇವಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಾತ್ರವೇ ಪ್ರಸಾರ ಮಾಡಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.

    ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ನಿರ್ದಿಷ್ಟ ವಯೋಮಿತಿಯವರಿಗೆ ಸೀಮಿತವಾದ್ದರಿಂದ ಮಕ್ಕಳು ಇದನ್ನು ವೀಕ್ಷಿಸುವುದರಿಂದ ಅವರ ಮೇಲೆ ಪರಿಣಾಮ ಬೀರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. 1994ರ ಕೋಡ್ ಆಫ್ ದಿ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ರೂಲ್ಸ್ ಅನ್ವಯ ಮಕ್ಕಳ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುವುದು ಅಥವಾ ಅನಾರೋಗ್ಯಕರವಾದ ಅಭ್ಯಾಸಗಳಲ್ಲಿ ಆಸಕ್ತಿಯನ್ನು ಸೃಷ್ಟಿಸುವಂತಹ ಯಾವುದೇ ಜಾಹೀರಾತಿಗೆ ಅವಕಾಶವಿಲ್ಲ ಎಂಬುದನ್ನ ಸರ್ಕಾರ ಉಲ್ಲೇಖಿಸಿದೆ.

    ಕೆಲವು ವಾಹಿನಿಗಳು ಪದೇ ಪದೇ ಕಾಂಡೋಮ್ ಜಾಹೀರಾತುಗಳನ್ನ ಪ್ರಸಾರ ಮಾಡುತ್ತಿದ್ದು, ಇವು ಅಸಭ್ಯವಾಗಿವೆ. ಅದರಲ್ಲೂ ಮಕ್ಕಳ ದೃಷ್ಟಿಯಿಂದ ಇದು ಅಸಭ್ಯ ಎಂದು ಅನೇಕ ದೂರುಗಳು ಬಂದಿರುವುದಾಗಿ ಸಚಿವಾಲಯ ತಿಳಿಸಿದೆ. ದೂರುಗಳ ಆಧಾರದ ಮೇಲೆ ಇಂತಹ ಜಾಹೀರಾತುಗಳ ಸಮಯವನ್ನು ನಿಯಂತ್ರಿಸಲು ಆಗುವುದಿಲ್ಲ. ಸಚಿವಾಲಯವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್  ಕೌನ್ಸಿಲ್ ಆಫ್ ಇಂಡಿಯಾ ಕೆಲವು ತಿಂಗಳ ಹಿಂದಷ್ಟೇ ಸಚಿವಾಲಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೊಸ ಆದೇಶವನ್ನ ನೀಡಿದೆ.

    ಇಂದಿನಿಂದಲೇ ಹೊಸ ಆದೇಶ ಜಾರಿಯಾಗಲಿದ್ದು, ಕಾಂಡೋಮ್ ಜಾಹೀರಾತುಗಳು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ನಡುವೆ ಮಾತ್ರ ಪ್ರಸಾರಗೊಳ್ಳುವಂತೆ ಸೂಚನೆ ನೀಡಿದೆ. ಜೊತೆಗೆ ಪ್ರೈಮ್ ಟೈಮ್‍ನಲ್ಲಿ ಯಾವುದೇ ಕಾಂಡೋಮ್ ಜಾಹೀರಾತು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.

    Condoms

  • ಮೋದಿ ಹುಲಿ, ಸಿದ್ದರಾಮಯ್ಯ ಇಲಿ: ಸಂಸದೆ ಶೋಭಾ ಕರಂದ್ಲಾಜೆ

    ಮೋದಿ ಹುಲಿ, ಸಿದ್ದರಾಮಯ್ಯ ಇಲಿ: ಸಂಸದೆ ಶೋಭಾ ಕರಂದ್ಲಾಜೆ

    ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ, ಪ್ರಧಾನಿ ಮೋದಿ ಸಂವಿಧಾನದ ಬಗ್ಗೆ ಕೇಂದ್ರದಿಂದ ಜಾಹೀರಾತು ಹಾಕಿದರೆ ಅವರ ಫೋಟೋ ಚಿಕ್ಕದಾಗಿ ಬಳಕೆ ಮಾಡುತ್ತಾರೆ. ಇದರಿಂದ ಯಾರು ಏನು ಎಂಬುದು ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ.

    ಆದರೆ ಸಿದ್ದರಾಮಯ್ಯ ಸರ್ಕಾರದ ಜಾಹೀರಾತು ಹಾಕಿದರೆ ಅವರ ಫೋಟೋನೇ ದೊಡ್ಡದಾಗಿರುತ್ತದೆ. ಡಾ. ಅಂಬೇಡ್ಕರ್ ಗೆ ಸಿಎಂ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಇಂದು ದೇಶಕ್ಕೆ ಸಂವಿಧಾನ ಕೊಟ್ಟ ದಿನವಾಗಿದೆ. ಆದರೆ ಅವರ ಫೋಟೋ ಇಲ್ಲದೆ ಜಾಹಿರಾತು ಮುದ್ರಣವಾಗಿದೆ. ಜಾಹೀರಾತಿನಲ್ಲಿ ಸಿಎಂ ಫೋಟೋವನ್ನು ಫುಲ್ ಪೇಜ್ ಬಳಸಿದ್ದು, ಅಂಬೇಡ್ಕರ್ ಫೋಟೋ ಒಂದನ್ನು ಬಳಕೆ ಮಾಡಲಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಸಿಎಂ ತಾನೊಬ್ಬ ಅಹಿಂದ ಲೀಡರ್ ಅಂತ ಫೋಸ್ ಕೊಟ್ಟಿದ್ದಾರೆ. ಅಂಬೇಡ್ಕರ್ ಗಿಂತ ಅವರು ದೊಡ್ಡವರಾ?. ಕಾಂಗ್ರೆಸ್ ನಿಂದ ಅಂಬೇಡ್ಕರ್ ಗೆ ನಿರಂತರವಾಗಿ ಅವಮಾನವಾಗುತ್ತಿದೆ. ಆದ್ದರಿಂದ ಕೂಡಲೇ ಸಿಎಂ ರಾಜ್ಯದ ಜನತೆಯ ಕ್ಷಮೆಯನ್ನು ಯಾಚಿಸಬೇಕು ಎಂದು ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಾರಿದರು.

  • ಈಕೆಗೆ ಸೌಂದರ್ಯವೇ ಬಂಡವಾಳ: ಕಂಪೆನಿಗೆಂದು ಹಣ ಪಡೆದು ಟೋಪಿ ಹಾಕಿದ್ದ ಸುಂದರಿ ಅರೆಸ್ಟ್

    ಈಕೆಗೆ ಸೌಂದರ್ಯವೇ ಬಂಡವಾಳ: ಕಂಪೆನಿಗೆಂದು ಹಣ ಪಡೆದು ಟೋಪಿ ಹಾಕಿದ್ದ ಸುಂದರಿ ಅರೆಸ್ಟ್

    ಬೆಂಗಳೂರು: ಸೌಂದರ್ಯವನ್ನೇ ಬಂಡವಾಳ ಮಾಡಿ ನನ್ನ ಕಂಪೆನಿಗೆ ಹಣ ಹೂಡಿ ಎಂದು ಹೇಳಿ ವಂಚನೆ ಎಸಗುತ್ತಿದ್ದ ಯುವತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಒಂಡ್ರಿಲಾ ದಾಸ್‍ಗುಪ್ತಾ ಬಂಧಿತ ಆರೋಪಿ. ವಂಚನೆಗೊಳಗಾದ ವ್ಯಕ್ತಿಗಳು ನೀಡಿದ ದೂರಿನ ಆಧಾರದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಈಕೆಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

    ವಂಚನೆ ಹೇಗೆ?
    ಫ್ಯಾಶನ್, ಬ್ರಾಂಡಿಂಗ್, ಜಾಹೀರಾತು ಕ್ಷೇತ್ರದಲ್ಲಿ ನಾನು ಕಂಪೆನಿಗಳನ್ನು ತೆರೆದಿದ್ದು, ಇದಕ್ಕೆ ಬಂಡವಾಳ ಹೂಡುವಂತೆ ಸಾಮಾಜಿಕ ಜಾಲತಾಣದಲ್ಲಿ ಜನರ ಬಳಿ ಒಂಡ್ರಿಲಾ ಮನವಿ ಮಾಡುತ್ತಿದ್ದಳು. ಈಕೆ ಇಂಗ್ಲಿಷ್ ಭಾಷೆಯ ಹಿಡಿತ, ಸಂವಹನ ಕಲೆಗೆ ಮನಸೋತ ಜನ, ಈಕೆ ನೀಡಿದ್ದ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುತ್ತಿದ್ದರು.

    ಈಕೆ ಜನರಿಂದ ಲಕ್ಷಗಟ್ಟಲೇ ಹಣವನ್ನು ಪಡೆದು ವಂಚಿಸಿದ್ದು, ವಂಚನೆಗೊಳಗಾದ ಮಂದಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದು, ಈಗ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

    ಯಾರು ಈ ಒಂಡ್ರಿಲಾ ದಾಸ್ ಗುಪ್ತಾ?
    ಜಾರ್ಖಂಡ್‍ನ ಜೆಮ್ಶೆಡ್‍ಪುರದಲ್ಲಿ ಜನಿಸಿದ ಈಕೆ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಭಾರತದ ಹೆಸರಾಂತ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಇದಾದ ಬಳಿಕ ದೇಶದ ಪ್ರಸಿದ್ಧ ಫ್ಯಾಶನ್ ಮ್ಯಾಗಜಿನ್ ನಲ್ಲಿ ಉದ್ಯೋಗ ಆರಂಭಿಸಿದ್ದಳು. ಇಲ್ಲಿ ಈಕೆಗೆ ಫ್ಯಾಶನ್ ಜಗತ್ತಿನ ಪರಿಚಯವಾಗಿತ್ತು. ಇದಾದ ಬಳಿಕ eatshoplove.in ಹೆಸರಿನ ಕಂಪೆನಿಯನ್ನು ತೆರೆದಿದ್ದಳು.

    ವಿಶೇಷ ಏನೆಂದರೆ ವ್ಯಕ್ತಿಗಳ ಸಾಧನೆಗಳ ಕುರಿತಾಗಿ ಸುದ್ದಿ ಮಾಡುವ ವೆಬ್‍ಸೈಟ್ ಒಂದು ಒಂಡ್ರಿಲಾ ದಾಸ್ ಗುಪ್ತಾಳ ಸಾಧನೆಯನ್ನು ವಿವರಿಸಿತ್ತು. ಇದರಲ್ಲಿ ಬಂದಿರುವ ಸುದ್ದಿಯನ್ನು ಇಟ್ಟುಕೊಂಡು ಈಕೆ ತನ್ನ ಸಾಧನೆಯನ್ನು ಜನರಿಗೆ ತಿಳಿಸಿ ಅವರ ಮನವೊಲಿಸಲು ಯಶಸ್ವಿಯಾಗುತ್ತಿದ್ದಳು.

    https://youtu.be/2HQ3ZrQMlc4

     

  • ಕಾಂಡೋಮ್ ನಂತ್ರ ಈ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ ಸನ್ನಿ ಲಿಯೋನ್!

    ಕಾಂಡೋಮ್ ನಂತ್ರ ಈ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ ಸನ್ನಿ ಲಿಯೋನ್!

    ಮುಂಬೈ: ನವರಾತ್ರಿ ಕಾಂಡೋಮ್ ಜಾಹೀರಾತು ಬಳಿಕ ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ತುಪ್ಪದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವದಕ್ಕಾಗಿ ಸಾಕಷ್ಟು ಕಂಪನಿಗಳು ಸನ್ನಿ ಲಿಯೋನ್ ಗೆ ಆಫರ್‍ಗಳು ನೀಡುತ್ತವೆ. ಆದರೆ ಸನ್ನಿ ಮಾತ್ರ ಜಾಹೀರಾತುಗಳ ಆಯ್ಕೆ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ತಮಗೆ ಸೂಕ್ತ ಮತ್ತು ಸರಿ ಅನ್ನಿಸುವಂತಹ ಜಾಹೀರಾತುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.

    ಇತ್ತೀಚಿಗೆ ಸನ್ನಿ ರಾಯಭಾರಿಯಾಗಿದ್ದ ಕಾಂಡೋಮ್ ಜಾಹೀರಾತು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಕಾಂಡೋಮ್ ಜಾಹೀರಾತಿಗೂ ಮೊದಲು ಸನ್ನಿ ಲಿಯೋನ್ ಕಾರ್, ಕೆಲ ಬಟ್ಟೆ ಉತ್ಪನ್ನಗಳ ರಾಯಭಾರಿಯಾಗಿದ್ದರು.

    2016ರಲ್ಲಿ ದೆಹಲಿ ಸರ್ಕಾರ ಸನ್ನಿ ಅವರಿಗೆ ಪಾನ್ ಮಸಾಲ ಮತ್ತು ಗುಟ್ಕಾ ಸೇರಿದಂತಹ ಉತ್ಪನ್ನಗಳಿಗೆ ರಾಯಭಾರಿ ಆಗಬೇಡಿ ಎಂದು ಕೇಳಿಕೊಂಡಿತ್ತು. ದೆಹಲಿ ಸರ್ಕಾರದ ಕೋರಿಕೆಯಂತೆ ಸನ್ನಿ ಇನ್ನು ಮುಂದೆ ಆ ತರಹದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.

    ಸದ್ಯ ಕೇರಳ, ಪ್ರೀಮಿಯರ್ ಫುಸ್ಟಲ್ ಫ್ರಾಂಚಿಸಿ ಕೋಬ್ರಾ ತಂಡದ ರಾಯಭಾರಿಯಾಗಿಯೂ ಮತ್ತು ಸಹ ಮಾಲೀಕತ್ವವನ್ನು ಸನ್ನಿ ಲಿಯೋನ್ ಹೊಂದಿದ್ದಾರೆ.

  • ಭಾರೀ ವಿವಾದ ಸೃಷ್ಟಿಸಿದೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತು

    ಭಾರೀ ವಿವಾದ ಸೃಷ್ಟಿಸಿದೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತು

    ಜೈಪುರ: ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ರಾಯಭಾರಿಯಾಗಿರುವ ಮ್ಯಾನ್ ಪೋರ್ಸ್ ಕಾಂಡೋಮ್ ಜಾಹೀರಾತು ತನ್ನ ಬರಹದ ಮೂಲಕ ಗುಜರಾತಿನಲ್ಲಿ ಭಾರೀ ವಿವಾದಕ್ಕೊಳಗಾಗಿದೆ.

    ಜೈಪುರ ರಸ್ತೆಯ ಬದಿಗಳಲ್ಲಿ ದೊಡ್ಡ ಬ್ಯಾನರ್ ಗಳಲ್ಲಿ ಸನ್ನಿಯ ಮ್ಯಾನ್ ಪೋರ್ಸ್ ಕಾಂಡೋಮ್ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ಜಾಹೀರಾತಿನಲ್ಲಿ `ಈ ಬಾರಿ ನವರಾತ್ರಿಗೆ ಪ್ರೀತಿಯಿಂದ ಆಟವಾಡಿ’ (ಇಸ್ ನವರಾತ್ರಿ ಮೇ ಖೇಲೋ ಮಗರ್ ಪ್ಯಾರ್ ಸೇ) ಎಂಬ ಬರಹದಿಂದಾಗಿ ಭಾರೀ ಟೀಕೆಗೆ ಒಳಪಟ್ಟಿದೆ. ಈ ಸಂಬಂಧ ಕಾನ್ಫಿಡರೇಷನ್ ಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಸಂಸ್ಥೆಯು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪತ್ರವನ್ನು ಬರೆದಿದೆ.

    ಇದು ನಮ್ಮ ಸಮಾಜ ಸಾಂಸ್ಕೃತಿಕ ಮೌಲ್ಯವನ್ನು ಹಾಳು ಮಾಡುತ್ತದೆ. ತನ್ನ ಕಂಪನಿಯ ಉತ್ಪನ್ನದ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬೇಜವಾಬ್ದಾರಿಯ ಬರಹಗಳನ್ನು ಪ್ರಕಟಿಸುತ್ತಿದೆ. ಹೀಗಾಗಿ ಈ ಜಾಹೀರಾತನ್ನು ಬ್ಯಾನ್ ಮಾಡಬೇಕು. ಮ್ಯಾನ್ ಪೋರ್ಸ್ ಕಾಂಡೋಮ್ ಉತ್ಪಾದಕರು ಮತ್ತು ಉತ್ಪನ್ನದ ರಾಯಭಾರಿಯಾಗಿರುವ ಸನ್ನಿ ಲಿಯೋನ್ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಐಟಿ ಯ ರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಖಂಡೆಲ್ ವಾಲ್ ಆಗ್ರಹಿಸಿದ್ದಾರೆ.

    ಜಾಹೀರಾತು ಪೋಸ್ಟರ್‍ಗಳನ್ನು ನೋಡಿದ ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನವರಾತ್ರಿ ನಂತರ ರಾಜ್ಯದಲ್ಲಿ ಹೆಚ್ಚಿನ ಗರ್ಭಪಾತ ಪ್ರಕರಣಗಳು ಹೆಚ್ಚಾಗುತ್ತವೆ. ಹೀಗಾಗಿ ಉತ್ಪಾದಕರಿಗೆ ಈ ಸಮಯ ಒಳ್ಳೆಯ ವ್ಯಾಪಾರ ತರಲಿದೆ ಎಂದು ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್, ನವರಾತ್ರಿ ಬಳಿಕ ಎರಡೂ-ಮೂರು ತಿಂಗಳಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದೆ ಎಂದು ಹೇಳಿದ್ದರು.

    https://twitter.com/HatindersinghR/status/909734761848913921

    https://twitter.com/1GopalSingh/status/909790600915861505