Tag: Aditi Prabhudev

  • ನೀವ್ಯಾರು ಮಕ್ಕಳು ಮಾಡಲ್ವಾ?: ತೋತಾಪುರಿ ಚಿತ್ರದ ಡಬಲ್ ಮೀನಿಂಗ್ ಡೈಲಾಗ್ ಸಮರ್ಥಿಸಿಕೊಂಡ ಜಗ್ಗೇಶ್

    ನೀವ್ಯಾರು ಮಕ್ಕಳು ಮಾಡಲ್ವಾ?: ತೋತಾಪುರಿ ಚಿತ್ರದ ಡಬಲ್ ಮೀನಿಂಗ್ ಡೈಲಾಗ್ ಸಮರ್ಥಿಸಿಕೊಂಡ ಜಗ್ಗೇಶ್

    ನಿನ್ನೆಯಷ್ಟೇ ಜಗ್ಗೇಶ್ ನಟನೆಯ ‘ತೋತಾಪುರಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ತುಂಬಾ ಬರೀ ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿಕೊಂಡಿವೆ. ಇಂತಹ ಸಿನಿಮಾವನ್ನು ಕುಟುಂಬ ಸಮೇತ ನೋಡುವುದಕ್ಕೆ ಆಗುತ್ತಾ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ನಿರ್ದೇಶಕ ವಿಜಯ್ ಪ್ರಸಾದ್ ಅವರ ಬಹುತೇಕ ಸಿನಿಮಾಗಳ ಡೈಲಾಗ್ ಹಾಗೆಯೇ ಏಕೆ ಎನ್ನುವ ಪ್ರಶ್ನೆಯೂ ಪತ್ರಿಕಾಗೋಷ್ಠಿಯಲ್ಲಿ ತೂರಿ ಬಂತು. ಅದಕ್ಕೆ ಜಗ್ಗೇಶ್ ಮಾರ್ಮಿಕವಾಗಿಯೇ ಸಮರ್ಥನೆ ನೀಡಿರು. ಇದನ್ನೂ ಓದಿ : ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರ

    ತೋತಾಪುರಿ ಒಂದೊಳ್ಳೆ ಸಿನಿಮಾ. ಆ ಡೈಲಾಗ್ ಕೇಳಿದಾಗ ಸಹಜವಾಗಿ ಡಬಲ್ ಮೀನಿಂಗ್ ಅನಿಸತ್ತೆ. ನಾವ್ಯಾರು ಆ ರೀತಿ ಮಾತೇ ಆಡಲ್ಲವಾ? ಮಾಯಮಂತ್ರದಿಂದ ಹೆಂಡತಿ ನೋಡಿದ್ರೆ ಮಕ್ಕಳ ಆಗತ್ತಾ? ನಾವ್ಯಾರು ಮಕ್ಕಳ ಮಾಡಲ್ವಾ?’ ಎಂದು ಡಬಲ್ ಮೀನಿಂಗ್ ನಲ್ಲೇ ಉತ್ತರಿಸಿದರು ಜಗ್ಗೇಶ್. ಈ ಸಿನಿಮಾದಲ್ಲಿ ಅದ್ಭುತವಾದ ಸಂದೇಶವಿದೆ. ಅದನ್ನು ಮನರಂಜನೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದರು ಜಗ್ಗೇಶ್. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಎರಡನೇ ಸಿನಿಮಾವಿದು. ಈ ಹಿಂದೆ ರಿಲೀಸ್ ಆಗಿದ್ದ ನೀರ್ ದೋಸೆ ಕೂಡ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಮತ್ತೇ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾ ಕೊಡಲಿದ್ದಾರೆ ಎನ್ನುವ ಸೂಚನೆ ಕೊಡುವಂತಿದೆ ರಿಲೀಸ್ ಆಗಿರುವ ಟ್ರೈಲರ್. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಹಿಂದೂ ಮುಸ್ಲಿಂ ಕಥೆಯನ್ನು ಸಿನಿಮಾಗಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದು, ಭಾವಕ್ಯತೆಗೆ ಹೇಳಿ ಮಾಡಿಸಿದ ಸಿನಿಮಾ ಎನ್ನಲಾಗುತ್ತಿದೆ. ಎಲ್ಲಿಯೂ ಕೋಮಗಲಭೆ ಆಗುವಂತಹ ಒಂದೇ ಒಂದು ದೃಶ್ಯವನ್ನೂ ಸಿನಿಮಾದಲ್ಲಿ ಬಳಸಿಲ್ಲವಂತೆ. ಇಡೀ ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಿದೆ ಎನ್ನುತ್ತಾರೆ ನಿರ್ದೇಶಕರು. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಕೆ.ಎ.ಸುರೇಶ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಜಗ್ಗೇಶ್ ಜತೆ ಡಾಲಿ ಧನಂಜಯ್, ಹೇಮಾ ದತ್ತ್, ಅದಿತಿ ಪ್ರಭುದೇವ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಈ ಸಿನಿಮಾ ಎರಡು ಪಾರ್ಟ್ ನಲ್ಲಿ ಮೂಡಿ ಬಂದಿದೆ. ಮೊದಲನೇ ಭಾಗ ಅತೀ ಶೀಘ್ರದಲ್ಲೇ ರಿಲೀಸ್ ಮಾಡಲಿದ್ದಾರಂತೆ ನಿರ್ಮಾಪಕರು.

  • ಕನ್ನಡಕ್ಕೆ ಮತ್ತೊಮ್ಮೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್

    ಕನ್ನಡಕ್ಕೆ ಮತ್ತೊಮ್ಮೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್

    ಮಾದಕ ಬೆಡಗಿ ಸನ್ನಿಲಿಯೋನ್ ಈಗಾಗಲೇ ಕನ್ನಡದ ಎರಡು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಪ್ರೇಮ್ ನಟಿಸಿದ್ದ ‘ಡಿಕೆ’ ಸಿನಿಮಾದ ‘ಶೇಷಮ್ಮ ಶೇಷಮ್ಮ ಬಾಗ್ಲು ತೆಗೆಯಮ್ಮ’ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದ ಸನ್ನಿ, ಆನಂತರ ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲೂ ಸನ್ನಿ ಕಾಣಿಸಿಕೊಂಡಿದ್ದರು. ಇದೀಗ ಸದ್ದಿಲ್ಲದೇ ಮತ್ತೊಂದು ಸಿನಿಮಾದ ಸ್ಪೆಷಲ್ ಹಾಡಿಗೆ ಕುಣಿದು ಹೋಗಿದ್ದಾರೆ ಸನ್ನಿ ಲಿಯೋನ್. ಈಗಾಗಲೇ ಆ ಹಾಡಿನ ಚಿತ್ರೀಕರಣ ಕೂಡ ಆಗಿದೆ. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

    ಸಚಿನ್ ಧನಪಾಲ್ ನಟನೆಯ ‘ಚಾಂಪಿಯನ್’ ಸಿನಿಮಾದಲ್ಲಿ ವಿಶೇಷವಾದ ಹಾಡೊಂದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಸ್ಪೋರ್ಟ್ಸ್ ಆಧರಿಸಿದ ಸಿನಿಮಾ ಇದಾಗಿದ್ದು, ಒಂದು ಸನ್ನಿವೇಶದಲ್ಲಿ ಬರುವ ಹಾಡಿಗೆ ಸನ್ನಿ ಕುಣಿದಿರುವುದು ವಿಶೇಷ. ಸಚಿನ್ ಅವರ ಚೊಚ್ಚಲು ಸಿನಿಮಾ ಇದಾಗಿದ್ದು, ಶಾಹುರಾಜ ಶಿಂಧೆ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಡಿಂಗರ್ ಬಿಲ್ಲಿ ಎಂಬ ಸಾಹಿತ್ಯದಿಂದ ಶುರುವಾಗುವ ಈ ಗೀತೆಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಈ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ ಶಿವು ಬೊರಗಿ. ಅಂದಹಾಗೆ ಈ ಸಿನಿಮಾದಲ್ಲಿ ಸಚಿನ್ ನಾಯಕನಾದರೆ, ಅದಿತಿ ಪ್ರಭುದೇವ ನಾಯಕಿ. ಚಿಕ್ಕಣ್ಣ, ಪ್ರಶಾಂತ್ ಸಿದ್ದಿ, ಹಿರಿಯ ನಟರಾದ ದೇವರಾಜ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

  • ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್

    ಬಾಗ್ಲು ತೆಗಿ ಮೇರಿ ಜಾನ್ ಹಾಡಿಗೆ ಗಲ್ಫ್ ಕನ್ನಡಿಗರ ಬಹುಪರಾಕ್: ಹಾಡೂ ಬೊಂಬಾಟ್ ಹಿಟ್

    ರೀಲ್ಸ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನದ್ದೇ ಸದ್ದು. ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಚಿತ್ರದ ಈ ಹಾಡಿಗೆ ದೇಶ-ವಿದೇಶದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಬಿಡುಗಡೆಯಾದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ. ದೇಶ ಮಾತ್ರವಲ್ಲದೇ ವಿದೇಶದಿಂದಲೂ ಈ ಹಾಡನ್ನು ಮೆಚ್ಚಿಕೊಂಡಿದ್ದು ‘ತೋತಾಪುರಿ’ ಹೆಚ್ಚುಗಾರಿಕೆ. ಇದನ್ನೂ ಓದಿ : ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    `ಬಾಗ್ಲು ತೆಗಿ ಮೇರಿ ಜಾನ್‌’ ಹಾಡು 100 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ.  ಈ ಹಾಡಿಗೆ ಪ್ರಸ್ತುತ ಚಾನಲ್‌ವೊಂದರಲ್ಲೇ 15 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ 85 ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಾಗಿರುವುದು `ತೋತಾಪುರಿ’ ಹೆಚ್ಚುಗಾರಿಕೆ. ಇತ್ತೀಚೆಗೆ ಬಂದ ಹಾಡುಗಳ ಪೈಕಿ ದೊಡ್ಡ ಮಟ್ಟದಲ್ಲಿ ಜನರನ್ನು ಸೆಳೆದ ಹಾಡು ಇದಾಗಿದ್ದು, ದಿನದಿಂದ ದಿನಕ್ಕೆ ಕ್ರೇಜ್‌ ಹೆಚ್ಚಿಸುತ್ತಲೇ ಇದೆ. ಯೂ ಟ್ಯೂಬ್‌ ರೀಲ್ಸ್, ಶಾರ್ಟ್ಸ್ ಹಾಗೂ ಸ್ಟೋರಿಸ್‌ಗಳಲ್ಲಿ ಈ ಹಾಡಿನ ತುಣುಕಿಗೆ ಡಾನ್ಸ್ ಮಾಡಿ ಅಪ್ಲೋಡ್‌ ಮಾಡಿರುವುದು ವಿಶೇಷ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೂ ಈ ಹಾಡು ಇಷ್ಟವಾಗಿರುವುದು `ತೋತಾಪುರಿ’ ಹಾಡಿನ ವಿಶೇಷ.

    ತೋತಾಪುರಿ ಚಿತ್ರದ ಹಾಡು, ಮೇಕಿಂಗ್ ಹಾಗೂ ತಂಡದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿರುವ ಜಗ್ಗೇಶ್, ಈ ಸಿನಿಮಾಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಇನ್ನು ‘ಬಾಗ್ಲು ತೆಗಿ ಮೇರಿ ಜಾನ್’ಗೆ ದುಬೈ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದು ಈ ಕಾರ್ಯಕ್ರಮದ ವಿಶೇಷ. ಇದನ್ನೂ ಓದಿ : ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ಇತ್ತೀಚೆಗಷ್ಟೇ ಅಮೆರಿಕಾ ನೆರೆಹೊರೆಯ ರಾಷ್ಟ್ರದ ಅನಿವಾಸಿ ಕನ್ನಡಿಗರೊಂದಿಗೆ ವರ್ಚುವಲ್ ಮಾತುಕತೆ ನಡೆಸಿದ್ದ ಜಗ್ಗೇಶ್, ಇದೀಗ ಗಲ್ಫ್ ಕನ್ನಡಿಗರೊಂದಿಗೂ ‘ತೋತಾಪುರಿ’ ಬಗ್ಗೆ ವಿಶೇಷವಾಗಿ ವಿಷಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಈಗಾಗಲೇ ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿರುವ ಈ ಚಿತ್ರದ ಹಾಡಿಗೆ ಎಲ್ಲರೂ ತಲೆದೂಗಿಸುತ್ತಿದ್ದಾರೆ. ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶಿಸಿರುವ ತೋತಾಪುರಿ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎರಡು ಭಾಗಗಳಲ್ಲಿ ತೋತಾಪುರಿ ತೆರೆಕಾಣಲಿರುವುದು ವಿಶೇಷ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ಡಾಲಿ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ಅದಿತಿ ಪ್ರಭುದೇವ, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

  • ನನ್ನ ಮದ್ವೆಯಾಗುವ ಹುಡುಗ 40 ಸಾವಿರ ಆದ್ರೂ ದುಡಿಯಬೇಕು: ಅದಿತಿ

    ನನ್ನ ಮದ್ವೆಯಾಗುವ ಹುಡುಗ 40 ಸಾವಿರ ಆದ್ರೂ ದುಡಿಯಬೇಕು: ಅದಿತಿ

    – ಎಂಜಿನಿಯರ್ ಓಕೆ, ಹೊಲದಲ್ಲಿ ಕೆಲಸ ಮಾಡೋನಾದ್ರೂ ಓಕೆ

    ಬೆಂಗಳೂರು: ನನ್ನ ಮದುವೆಯಾಗುವ ಹುಡುಗ 40,000 ರೂ. ಆದ್ರೂ ದುಡಿಯಬೇಕು ಎಂದು ಚಂದನವನದ ಬೆಡಗಿ ಅದಿತಿ ಪ್ರಭುದೇವ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ಮಾತನಾಡುತ್ತಾ ನಟಿ, ತಾವು ಮದುವೆಯಾಗುವ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮನಸ್ಸನ್ನು ಅರ್ಥ ಮಾಡಿಕೊಂಡು ಹೋಗುವಂತೆ ಇರಬೇಕು. 30,000 ಅಥವಾ 40,000 ದುಡಿಯುತ್ತಾ ಇರಬೇಕು. ಮನೆ ನಡೆಸಲು ಎಷ್ಟು ಬೇಕೋ ಅದನ್ನು ದುಡಿಯಬೇಕು ಎಂದಿದ್ದಾರೆ.

    ಅಲ್ಲದೆ ತಾನು ಮದುವೆಯಾಗುವ ಹುಡುಗ ಆತ ಅಪ್ಪ-ಅಮ್ಮ ಜೊತೆ ಇರಲೇ ಬೇಕು. ಆಗ ನಮ್ಮ ಅಪ್ಪ-ಅಮ್ಮನನ್ನು ಜೊತೆಗೆ ಆಗಾಗ ಅವರ ಮನೆಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿ ನಕ್ಕರು.

    ನನಗೆ ಯಾವುದೇ ರೀತಿಯ ಹುಡುಗನನ್ನು ಹುಡುಕಿದರು ನಾನು ಅವರಿಗೆ ಸೆಟ್ ಆಗುತ್ತೇನೆ. ಎಂಜಿನಿಯರ್ ಹುಡುಗನೂ ಓಕೆ, ಹೊಲದಲ್ಲಿ ಕೆಲಸ ಮಾಡುವ ಹುಡುಗನೂ ಓಕೆ ಎಂದಿದ್ದಾರೆ. ಅದಕ್ಕೆ ನಮ್ಮ ಅಪ್ಪ-ಅಮ್ಮಗೆ ಫುಲ್ ಆಯ್ಕೆ ಇದೆ. ಅವರು ಯಾರನ್ನು ಹುಡುಕಿದರು ನಾನು ಅವರಿಗೆ ಸೆಟ್ ಆಗುತ್ತೇನೆ. ನಮ್ಮ ಮನೆಯಲ್ಲಿ ಯಾವಾಗ ಮದುವೆಯಾಗು ಅನ್ನುತ್ತಾರೆಯೋ ಅಂದೇ ಆಗುತ್ತೇನೆ. ಹೆತ್ತವರ ವಿರುದ್ಧ ನಾನು ಎಂದೂ ಮಾತನಾಡುವುದಿಲ್ಲ ಎಂದಿದ್ದಾರೆ.

    ತನ್ನ ಜರ್ನಿ ಬಗ್ಗೆ ನೆನೆದ ಅದಿತಿ!

    ನನ್ನ ಜರ್ನಿ ಬಗ್ಗೆ ನೆನೆಪಿಸಿಕೊಂಡರೆ ನನಗೆ ಇಷ್ಟು ದೂರ ಬಂದ್ನಾ ಅನ್ಸುತ್ತೆ. ನಮ್ಮ ಮನೆಯಲ್ಲಿ ಇಂಜಿನಿಯರ್ ಮಾಡಿಸಿದ್ದೆ ಮದುವೆ ಮಾಡಬೇಕು ಎಂಬ ಉದ್ದೇಶದಿಂದ. ಅವಳು ಚೆನ್ನಾಗಿ ಓದಿ, ಅವಳ ಕಾಲ ಮೇಲೆ ಅವಳು ನಿಲ್ಲಬೇಕು ಎಂಬ ಉದ್ದೇಶದಿಂದ ನಮ್ಮ ಅಪ್ಪ-ಅಮ್ಮ ಓದಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕು ಎಂದು ಯೋಚಿಸಿದ್ದರು. ನನಗೂ ಅಷ್ಟೇ ಇತ್ತು. ಆದರೆ ನನಗೆ ಇದ್ದ ಸಾಮರ್ಥ್ಯಕ್ಕೆ ನಮ್ಮ ಮನೆಯವರು ಬೆಂಬಲ ನೀಡಿದರು. ಅದಕ್ಕೆ ದೇವರು ಬೆಂಬಲ ಮತ್ತೆ ಆಶೀರ್ವಾದದಿಂದ ಇಲ್ಲಿವರೆಗೂ ಬಂದೆ ಎಂದಿದ್ದಾರೆ. ನಾನು ಯಾವುದನ್ನು ಬಯಸಿ ಪಡೆದುಕೊಂಡಿಲ್ಲ. ಆದರೆ ಬಂದ ಅವಕಾಶಕ್ಕೆ ಪರಿಶ್ರಮ ಹಾಕಿ ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಮದು ತಿಳಿಸಿದರು.

    ಇದೇ ವೇಳೆ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ ನಟಿ, ತುಂಬಾ ಪ್ರಾಜೆಕ್ಟ್ ಇದೆ. ಆದರೆ ಪ್ರಸ್ತುತ 5ಡಿ, ಓಲ್ಡ್‍ಮಂಕ್ ಮತ್ತು ತೊತಪುರಿ ಇದೆ ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ನಮಗೆ ಒಳ್ಳೆದು ಕೆಟ್ಟದ್ದು ಎಂಬುದು ಗೊತ್ತಿಲ್ಲ. ಆದರೆ ಗಣೇಶನಿಗೆ ಎಲ್ಲ ತಿಳಿದಿರುತ್ತೆ. ನಮಗೆ ಏನು ಕೊಡಬೇಕು, ಏನು ಕೊಡಬಾರದು ಅಂತ ಅದಕ್ಕೆ ಅವನಿಗೆ ಬಿಟ್ಟಿದ್ದೇನೆ ಎಂದರು.

    ಈ ಕೊರೊನಾ ಪರಿಸ್ಥಿತಿಯಲ್ಲಿ ಹಬ್ಬದ ಆಚರಣೆ ತುಂಬಾ ಕಷ್ಟ ಆಯ್ತು. ನನಗೆ ಮಾತ್ರವಲ್ಲ ಎಲ್ಲ ಜನರಿಗೂ ಹಬ್ಬ ಮಾಡುವಾಗ ಈ ಪರಿಸ್ಥಿತಿಯಲ್ಲಿ ಭಯ ಇದ್ದೇ ಇರುತ್ತೆ. ಎಲ್ಲರ ಮನೆಯಲ್ಲಿ ಖುಷಿಯಿಂದ ಯಾರು ಹಬ್ಬವನ್ನು ಆಚರಣೆಯನ್ನು ಮಾಡಿಲ್ಲ. ಎಷ್ಟೊ ಜನರ ಮನೆಯಲ್ಲಿ ಸಾವುಗಳು ಸಂಭವಿಸಿತು. ಈ ಪರಿಸ್ಥಿತಿಯಲ್ಲಿ ಯಾರು ಖುಷಿಯಿಂದ ಹಬ್ಬವನ್ನು ಆಚರಣೆ ಮಾಡುಲಾಗುವುದಿಲ್ಲ. ಆದರೆ ಭೂಮಿ ಮೇಲೆ ಎಲ್ಲದಕ್ಕೂ ಕೊನೆ ಎಂಬುದು ಇರುತ್ತೆ. ಇದಕ್ಕೂ ಕೊನೆ ಇದೆ ಎಂದು ಆಶಿಸಿದರು. ಏನೇ ಅದರೂ ಜೀವನ ಹೋಗುತ್ತ್ತಾ ಎಂದಿದ್ದಾರೆ.

    ಚಂದನವನದಲ್ಲಿ ದೊಡ್ಡಮಟ್ಟದ ಪೆಟ್ಟು!

    ಕೊರೊನಾ ಕಾರಣದಿಂದ ನಮ್ಮ ಚಂದನವನದಲ್ಲಿ ದೊಡ್ಡಮಟ್ಟದ ಪೆಟ್ಟು ಬಿದಿದ್ದೆ. ಅದರಲ್ಲಿ ನಟ, ನಟಿ, ಕಲಾವಿದರನ್ನು ಬಿಡಿ ತಂತ್ರಜ್ಞಾನರು, ಸಹಕಲಾವಿದರು ಇನ್ನೂ ಹಲವು ವಿಭಾಗದ ಜನರಿಗೆ ತುಂಬಾ ಕಷ್ಟವಾಗುತ್ತಿದೆ. ಒಂದು ಸಿನಿಮಾದಲ್ಲಿ 5- 10 ಜನರು ಪ್ರಮುಖ ಕಲಾವಿದರಿದ್ದರೆ ನೂರಾರು ಜನರು ತೆರೆ ಹಿಂದೆ ಮತ್ತು ಸಹಕಲಾವಿದರಾಗಿ ನಟಿಸುವವರು ಇರುತ್ತಾರೆ. ಅವರಿಗೆ ತುಂಬಾ ಪೆಟ್ಟು ಬಿದ್ದಿದೆ. ಅವರಿಗೆ ಕೆಲಸ ಮಾಡಿದರೆ ತಿನ್ನಲು ಊಟ ಸಿಗುತ್ತೆ ಅಂತಹವರಿಗೆ ತುಂಬಾ ಕಷ್ಟವಾಗಿದೆ ಎಮದು ಇದೇ ವೇಳೆ ಅದಿತಿ ಬೆಸರ ವ್ಯಕ್ತಪಡಿಸಿದರು.