Tag: Adamaru Shree

  • ಹಾಲು, ನೀರು ಅರ್ಪಿಸಿ ಕಂದ ಕೃಷ್ಣನಿಗೆ ಸ್ವಾಗತ ಕೋರಿದ ಉಡುಪಿಯ ಅದಮಾರು ಶ್ರೀ

    ಹಾಲು, ನೀರು ಅರ್ಪಿಸಿ ಕಂದ ಕೃಷ್ಣನಿಗೆ ಸ್ವಾಗತ ಕೋರಿದ ಉಡುಪಿಯ ಅದಮಾರು ಶ್ರೀ

    – ಕೃಷ್ಣನರಲ್ಲಿ ಅರ್ಘ್ಯ ನೀಡಿ ಪುಳಕಗೊಂಡ ಮುರಾರಿ ಭಕ್ತರು

    ಉಡುಪಿ: ಭಗವಾನ್ ಶ್ರೀಕೃಷ್ಣನ ಜನ್ಮವಾಗಿದೆ. ದೇವರರ ಹುಟ್ಟಿಗಾಗಿ ಉಪವಾಸವಿದ್ದು ಕಾಯುತ್ತಿದ್ದ ಭಗವದ್ಭಕ್ತರು ಮುದ್ದುಕೃಷ್ಣನಿಗೆ ಅರ್ಘ್ಯ ಕೊಟ್ಟು ಭೂಮಿಗೆ ಬರಮಾಡಿಕೊಂಡಿದ್ದಾರೆ.

    ಅಘ್ರ್ಯ ಅಂದ್ರೆ ಹಾಲು ಮತ್ತು ನೀರನ್ನು ಅರ್ಪಿಸಿ ಶ್ರೀಕೃಷ್ಣ ದೇವರನ್ನು ಭೂಮಿಗೆ ಬರಮಾಡಿಕೊಳ್ಳುವುದು ಎಂದು ಅರ್ಥ. ಕೃಷ್ಣನೂರು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ನಡೆಯುತ್ತಿದೆ. ಸಾಂಕ್ರಾಮಿಕ ಕೊರೊನಾ ಇದ್ದರೂ ಸಂಪ್ರದಾಯ ಸಹಜವಾಗಿ ನಡೆಯುತ್ತಿದೆ.

    ಕೃಷ್ಣ ಜನ್ಮಾಷ್ಟಮಿಯ ಬಹುಮುಖ್ಯ ಧಾರ್ಮಿಕ ವಿಧಿ ಕೃಷ್ಣನಿಗೆ ಅಘ್ರ್ಯ ಪ್ರಧಾನ. ಶ್ರೀ ಕೃಷ್ಣನ ಜನ್ಮಾಷ್ಟಮಿಯ ದಿನವಿಡೀ ಅಷ್ಟ ಮಠಾಧೀಶರು, ಭಕ್ತರು ಉಪವಾಸದಲ್ಲಿದ್ದರು. ಪರ್ಯಾಯ ಅದಮಾರ ಶ್ರೀಗಳು ರಾತ್ರಿ 12.16ಕ್ಕೆ ಶ್ರೀಕೃಷ್ಣ ದೇವರಿಗೆ ಅಘ್ರ್ಯ ಸಲ್ಲಿಸಿದರು.

    ಕೃಷ್ಣನ ಗರ್ಭ ಗುಡಿಯ ಪಕ್ಕದಲ್ಲಿ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಸಮರ್ಪಿಸುವ ಮೂಲಕ ಚಂದ್ರನಿಗೆ ಅರ್ಘ್ಯ ಸಮರ್ಪಿಸಿದರು. ಚಂದ್ರನಿಗೆ ಅಘ್ರ್ಯ ಸಮರ್ಪಿಸಿದ ಬಳಿಕ ಕೃಷ್ಣನ ಮೂರ್ತಿಗೆ ಹಾಲು, ನೀರಿನ ಮೂಲಕ ಅರ್ಘ್ಯ ಸಮರ್ಪಿಸಿ, ಉಂಡೆ ಚಕ್ಕುಲಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಯ್ತು.

    ಕೊರೊನಾ ಇರುವುದರಿಂದ ಕೃಷ್ಣ ಮಠದ ಒಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ದಿನವಿಡೀ ಉಪವಾಸದಲ್ಲಿದ್ದ ಭಕ್ತ ಸಮೂಹ ತಮ್ಮ ತಮ್ಮ ಮನೆಗಳಲ್ಲಿ ಅರ್ಘ್ಯ ಪ್ರಧಾನ ಮಾಡಿ ಪುನೀತರಾದರು. ಈ ಮೂಲಕ ಉಪವಾಸವನ್ನು ತೊರೆದರು. ಉಡುಪಿಯಲ್ಲಿ ಸೌರಮಾನ ಪಂಚಾಂಗವನ್ನು ಅನುಸರಿಸುವುದರಿಂದ ಈಗ ಅಷ್ಟಮಿ ಆಚರಿಸಲಾಗುತ್ತಿದೆ. ಕೃಷ್ಣಪಕ್ಷ ಚಂದ್ರೋದಯದ ಕಾಲ, ರೋಹಿಣಿ ನಕ್ಷತ್ರ ಬಾನಲ್ಲಿ ಬೆಳಗುವ ಸಂದರ್ಭದಲ್ಲಿ ಶ್ರೀಕೃಷ್ಣ ದೇವರು ಹುಟ್ಟಿದರು ಎಂಬ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉಡುಪಿಯಲ್ಲಿ ಈ ಹೊತ್ತಿನಲ್ಲಿ ಆಚರಿಸಲಾಗುತ್ತದೆ.

    ಮುಂಜಾನೆ ಶ್ರೀಕೃಷ್ಣನಿಗೆ ಅಭಿಷೇಕಗಳು, ವಿಶೇಷ ಅಲಂಕಾರ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 3:00 ಗಂಟೆಯಿಂದ 6 ಗಂಟೆ ತನಕ ರಥಬೀದಿಯಲ್ಲಿ, ಕೃಷ್ಣ ಮಠದ ಒಳಗೆ ಮತ್ತು ಮಧ್ವಸರೋವರದಲ್ಲಿ ಶ್ರೀಕೃಷ್ಣನಲ್ಲಿ ಉತ್ಸವದ ಕಾರ್ಯಕ್ರಮಗಳು ನಡೆಯಲಿದೆ. ಸಾರ್ವಜನಿಕರಿಗೆ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ.

  • ಉಡುಪಿ ಪರ್ಯಾಯಕ್ಕೂ ಮೊದಲು ಕದಳಿ ಮುಹೂರ್ತ: ಬಾಳೆ ಗಿಡ ನೆಡೋದು ಯಾಕೆ?

    ಉಡುಪಿ ಪರ್ಯಾಯಕ್ಕೂ ಮೊದಲು ಕದಳಿ ಮುಹೂರ್ತ: ಬಾಳೆ ಗಿಡ ನೆಡೋದು ಯಾಕೆ?

    ಉಡುಪಿ: 2020 ರಿಂದ ಎರಡು ವರ್ಷ ಶ್ರೀಕೃಷ್ಣನ ಪೂಜಾಧಿಕಾರಕ್ಕೆ ಅದಮಾರು ಮಠ ಸಿದ್ಧತೆ ಶುರುಮಾಡಿದೆ. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕದಳಿ ಮುಹೂರ್ತ ನಡೆಯಿತು. ಸಂಪ್ರದಾಯದಂತೆ ನೂರಾರು ಬಾಳೆಗಿಡಗಳಿಗೆ ಪೂಜೆ ನೆರವೇರಿಸಿ, ತೋಟದಲ್ಲಿ ಗಿಡ ನೆಡಲಾಯ್ತು.

    ಶ್ರೀಕೃಷ್ಣ ಮಠದಲ್ಲಿ ಈಗ ಪಲಿಮಾರು ಮಠದ ಪರ್ಯಾಯ ನಡೆಯುತ್ತಿದೆ. ಮುಂದಿನ 2020ರ ಜನವರಿಯಿಂದ ಶ್ರೀಕೃಷ್ಣನ ಪೂಜಾಧಿಕಾರ ಅದಮಾರು ಮಠದ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಕದಳಿ ಮುಹೂರ್ತ ನೆರವೇರಿತು. ಬಾಳೆಗಿಡಗಳಿಗೆ ಪೂಜೆ ಸಲ್ಲಿಸಿ ಮಠದ ತೋಟದಲ್ಲಿ ಗಿಡವನ್ನು ನೆಡುವ ಪ್ರಕ್ರಿಯೆಯೇ ಬಾಳೆ ಮಹೂರ್ತ. ಕೃಷ್ಣ ಮಠ- ಅನಂತೇಶ್ವರ- ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ಬಾಳೆ ಗಿಡಗಳಿಗೆ ಪೂಜೆ ಸಲ್ಲಿಸಿ ನಂತರ ಮಠದ ತೋಟದಲ್ಲಿ ಬಾಳೆಗಿಡವನ್ನು ನೆಡಲಾಯಿತು. ಬಾಳೆಗಿಡ ಫಲ ಬಿಡುವ ಸಂದರ್ಭ ಅದಮಾರುಮಠದ ಪರ್ಯಾಯ ಪೀಠದಲ್ಲಿ ಇರಲಿದ್ದಾರೆ.

    ಈ ಕುರಿತು ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಮುಂದಿನ ಪರ್ಯಾಯ ಸಂದರ್ಭ ಭಕ್ತರಿಗೆ ನೆಮ್ಮದಿಯಿಂದ ಕೃಷ್ಣನ ದರ್ಶನ ಸಿಗುವಂತೆ ಮಾಡಲಾಗುವುದು. ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟು ಮಾಡಲಾಗುವುದು ಎಂದರು.

    ಬಾಳೆ ಮುಹೂರ್ತ ನೆರವೇರಿದ್ದು ಮುಂದೆ ಭತ್ತ, ಅಕ್ಕಿ, ಕಟ್ಟಿಗೆ ಮತ್ತು ಚಪ್ಪರ ಮುಹೂರ್ತಗಳು ನೆರವೇರಲಿದೆ. ಅದಮಾರು ಪರ್ಯಾಯ ಸಂದರ್ಭ ಭಕ್ತರು ಎರಡು ವರ್ಷ ಮಠಕ್ಕೆ ಬಂದು ನೆಮ್ಮದಿಯಿಂದ ದೇವರನ್ನು ಕಂಡುಕೊಳ್ಳುವ ಬಗ್ಗೆ ಈ ಬಾರಿ ಚಿಂತಿಸುವುದಾಗಿ ಮಠ ಚಿಂತನೆ ನಡೆಸಿದೆ. ಪರ್ಯಾಯ ಪೀಠದಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಸದ್ಯ ಗೌಪ್ಯವಾಗಿತ್ತು. ಇದೇ ಕುತೂಹಲವನ್ನು ಜನ ಮತ್ತು ಮಾಧ್ಯಮ 2020ರವರೆಗೂ ಉಳಿಸಿಕೊಳ್ಳಿ. ಪೀಠ ಏರುವ ಮುಹೂರ್ತದಲ್ಲೇ ಇದು ನಿರ್ಧಾರ ಆಗಲಿದೆ ಎಂದು ಹಿರಿಯ ಶ್ರೀಗಳು ಹೇಳಿದರು.

    ಪರ್ಯಾಯ ಸಂದರ್ಭ ನಮ್ಮ ಊರಿನ ರೈತರು ಬೆಳೆದ ಬಾಳೆ, ಬಾಳೆ ಎಲೆ ಉಪಯೋಗಿಸ್ತೇವೆ. ಸಾವಯವ ಕೃಷಿಗೆ ಒತ್ತು ನೀಡುತ್ತೆವೆ ಎಂದು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

    ಶಿಕ್ಷಣ, ಅಧ್ಯಯನ ಮತ್ತು ಆಧ್ಯಾತ್ಮಿಕತೆಗೆ ಅದಮಾರು ಮಠ ಹೆಚ್ಚು ಒತ್ತುಕೊಡುತ್ತಾ ಬಂದಿದೆ. ಎರಡು ವರ್ಷಗಳ ಪರ್ಯಾಯದಲ್ಲೂ ಇಂತದ್ದೇ ಕಾರ್ಯ ಮುಂದುವರೆಯುವ ನಿರೀಕ್ಷೆ ಜನರಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv