Tag: actress

  • ಸಾಹುಕಾರ್ ಜಾನಕಿ ಸಹೋದರಿ, 60-80ರ ದಶಕದ ಖ್ಯಾತ ನಟಿ ಕೃಷ್ಣಕುಮಾರಿ ಇನ್ನಿಲ್ಲ

    ಸಾಹುಕಾರ್ ಜಾನಕಿ ಸಹೋದರಿ, 60-80ರ ದಶಕದ ಖ್ಯಾತ ನಟಿ ಕೃಷ್ಣಕುಮಾರಿ ಇನ್ನಿಲ್ಲ

    ಬೆಂಗಳೂರು: ಬಹುಭಾಷಾ ನಟಿ ಕೃಷ್ಣಕುಮಾರಿ ವಿಧಿವಶರಾಗಿದ್ದಾರೆ. 60-80 ರ ದಶಕದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕೃಷ್ಣಕುಮಾರಿ ಇಂದು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

    ಕೃಷ್ಣಕುಮಾರಿ ನೈಹಾತಿಯ ತೆಲಗು ಬ್ರಾಹ್ಮಾಣ ಕುಟುಂಬದಲ್ಲಿ ಜನಿಸಿದ್ದರು. ನಂತರ ಅಜಯ್ ಮೋಹನ್ ಕೈತಾನ್ ಎಂಬುವರ ಜೊತೆ ಮದುವೆಯಾಗಿ ಸಿನಿಲೋಕದಿಂದ ದೂರ ಉಳಿದಿದ್ದರು. ಅವರಿಗೆ ಒಂದು ಹೆಣ್ಣು ಮಗಳಿದ್ದು, ಸುಮಾರು ವರ್ಷಗಳಿಂದ ಮಗಳ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರ ಸಹೋದರಿ ಸಾಹುಕರ್ ಜಾನಕಿ ಕೂಡ ಸ್ಟಾರ್ ನಟಿಯಾಗಿ ಮಿಂಚಿದ್ದರು.

    ತೆಲುಗು, ತಮಿಳು, ಕನ್ನಡ ಮಲಯಾಳಂ ಹಾಗು ಹಿಂದಿ ಸೇರಿದಂತೆ ಸುಮಾರು 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು. 1951ರಲ್ಲಿ ನವ್ವಿತೆ ನವರತ್ನುಲು ಎಂಬ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೃಷ್ಣ ಕುಮಾರಿ, ಡಾ.ರಾಜ್ ಕುಮಾರ್, ಎನ್‍ಟಿಆರ್, ಎಎನ್‍ಆರ್, ಶಿವಾಜಿ ಗಣೇಶನ್ ರಂತಹ ಸ್ಟಾರ್ ನಟರ ಜೊತೆ ನಟಿಸಿದ್ದರು.

    ಭಕ್ತ ಕನಕದಾಸ, ಆಶಾ ಸುಂದರಿ, ಶ್ರೀಶೈಲಾ ಮಹಾತ್ಮೆ, ಸ್ವರ್ಣಗೌರಿ ದಶಾವತಾರ, ಭಕ್ತ ಕಬೀರಾ, ಚಂದ್ರಕುಮಾರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಕೃಷ್ಣಕುಮಾರಿ ಅಭಿನಯಿಸಿದ್ದಾರೆ.

  • ಚಿತ್ರದುರ್ಗದಲ್ಲಿ ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ ನಟಿ ಭಾವನಾ

    ಚಿತ್ರದುರ್ಗದಲ್ಲಿ ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ ನಟಿ ಭಾವನಾ

    ಚಿತ್ರದುರ್ಗ: ಮರವಣಿಗೆಯೊಂದರಲ್ಲಿನ ತಮಟೆ ಸದ್ದಿಗೆ ನಟಿ ಭಾವನಾ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    ನಗರದಲ್ಲಿಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವದ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ನಟಿ ಭಾವನಾ ಕೂಡ ಭಾಗಿಯಾಗಿದ್ದು, ಕರುವಿನಕಟ್ಟೆ ವೃತ್ತದಲ್ಲಿ ಸಮುದಾಯದ ಮಹಿಳೆಯರೊಂದಿಗೆ ತಾವೂ ಕೂಡ ಹೆಜ್ಜೆ ಹಾಕುವ ಮೂಲಕ ಮನರಂಜಿಸಿದ್ರು. ಜಿಲ್ಲೆಯ ಬುರುಜನಹಟ್ಟಿ ಬಡವಾವಣೆಯ ನಿವಾಸಿಯಾಗಿರೋ ಇವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಇತ್ತೀಚೆಗಷ್ಟೇ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಭಾವನಾ ಹೇಳಿದ್ದರು. ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲರ ರಕ್ತ ಬಿಸಿಯಾಗಿದೆ. ಹಾಗೆಯೇ ನನ್ನ ಎದೆ ಬಡಿತ ಹೆಚ್ಚಾಗಿದೆ. ಕಾಂಗ್ರೆಸ್ ವರಿಷ್ಠರು ಹಾಗು ಕಾರ್ಯಕರ್ತರ ಸಹಕಾರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದೇನೆ. ಅಲ್ಲದೇ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿರುವುದಾಗಿ ಕೂಡ ತಿಳಿಸಿದ್ದರು.

    ಆದರೆ ಪಕ್ಷದ ಹಿರಿಯರು, ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗು ವರಿಷ್ಠರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದದ ಅಗತ್ಯವಿದ್ದು, ಎಲ್ಲರ ಬೆಂಬಲದೊಂದಿಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮುಂದೆ ಬರಲು ಇಷ್ಟಪಡುತ್ತೆನೆ ಅಂತ ಹೇಳಿದ್ದರು. ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಟಿ ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿದ್ದಾರೆ.

    https://www.youtube.com/watch?v=Uh0ycSeeXFI&feature=youtu.be

  • ಬರೋಬ್ಬರಿ 300 ಜಾಹಿರಾತು, ಅಹಂ ಪ್ರೇಮಾಸ್ಮಿಯಲ್ಲಿ ನಟಿಸಿದ್ದ ನಟಿ ಇಂದು ನಿರುದ್ಯೋಗಿ

    ಬರೋಬ್ಬರಿ 300 ಜಾಹಿರಾತು, ಅಹಂ ಪ್ರೇಮಾಸ್ಮಿಯಲ್ಲಿ ನಟಿಸಿದ್ದ ನಟಿ ಇಂದು ನಿರುದ್ಯೋಗಿ

    ಮುಂಬೈ: ಸಿನಿಮಾ ರಂಗದಲ್ಲಿ ಉಳಿದುಕೊಳ್ಳವುದು ಸರಳವಲ್ಲ. ಕೆಲವೊಮ್ಮೆ ಅದ್ಧೂರಿಯಾಗಿ ಬರಮಾಡಿಕೊಳ್ಳಲುವ ಚಿತ್ರರಂಗ, ಮತ್ತೊಮ್ಮೆ ಅಷ್ಟೇ ಕಲಾವಿದರಿಂದ ದೂರವಾಗುತ್ತಾ ಹೋಗುತ್ತದೆ. ಸಿನಿಮಾದಲ್ಲಿ ನಟಿಯರು ಹಾಗೆ ತಮ್ಮ ಚಾರ್ಮ ಕಳೆದುಕೊಳ್ಳುತ್ತಲೇ ತೆರೆಯಿಂದ ಸದ್ದಿಲ್ಲದೇ ಮಾಯವಾಗುತ್ತಾರೆ.

    ಆರತಿ ಚಾಬ್ರಿಯಾ ಬರೋಬ್ಬರಿ 300ಕ್ಕೂ ಅಧಿಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡ ನಟಿ. ಜಾಹಿರಾತಿನ ಜೊತೆ ಬಾಲಿವುಡ್, ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್‍ನಲ್ಲಿಯೂ ನಟಿಸಿದ ಕಲಾವಿದೆ. ಸುಮಾರು 35 ಸಿನಿಮಾಗಳಲ್ಲಿ ನಟಿಸಿದೆ ಆರತಿ ಇಂದು ಅವಕಾಶ ವಂಚಿತತಾಗಿದ್ದಾರೆ.

    ತಮ್ಮ ಮೂರನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡ ಆರತಿ, ಮುಂದೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಮಾಡೆಲಿಂಗ್‍ನಲ್ಲಿ ಗುರುತಿಸಿಕೊಂಡ ಆರತಿ ಚಾಬ್ರಿಯಾಗೆ ಅಂದು ಎಲ್ಲಡೆಯಿಂದ ಅವಕಾಶಗಳ ಸುರಿಮಳೆ ಸಿಕ್ಕಿತ್ತು. 1999ರಲ್ಲಿ ಮಿಸ್ ಇಂಡಿಯಾ ವಲ್ರ್ಡ್ ವೈಡ್ 2000ರ ಪ್ರಶಸ್ತಿಯನ್ನು ಸಹ ಆರತಿ ತಮ್ಮ ಮಡಿಗೇರಿಸಿಕೊಂಡಿದ್ದರು. ಮ್ಯಾಗಿ, ಪೆಪ್ಸೊಡೆಂಟ್, ಕ್ಲೀನ್ ಆ್ಯಂಡ್ ಕ್ಲಿಯರ್, ಅಮೂಲ್ ಐಸ್‍ಕ್ರೀಮ್, ಕಲ್ಯಾಣ್ ಜ್ಯುವೆಲ್ಲರ್ಸ್ ಸೇರಿದಂತೆ ಹಲವು ಕಮರ್ಷಿಯಲ್ ಜಾಹಿರಾತುಗಳಲ್ಲಿ ಆರತಿ ನಟಿಸಿದ್ದಾರೆ. ಇದನ್ನೂ ಓದಿ: 2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!

    2001ರಲ್ಲಿ ಸಿನಿ ಕೆರಿಯರ್: 2001ರಲ್ಲಿ ತೆರೆಕಂಡ ಹಿಂದಿಯ ‘ಲಜ್ಜಾ’ ಸಿನಿಮಾದ ಮೂಲಕ ಆರತಿ ತಮ್ಮ ಸಿನಿ ಕೆರಿಯರ್ ಆರಂಭಿಸಿದರು. ಮುಂದೆ 2006ರಲ್ಲಿ ಸಲ್ಮಾನ್ ಖಾನ್ ನಟನೆ ‘ಪಾರ್ಟ್ ನರ್’ ಚಿತ್ರದಲ್ಲಿ ಸಹನಟಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ತುಮಸೆ ಅಚ್ಚಾ ಕೌನ್ ಹೈ, ರಾಜಾ ಬೈಯಾ, ಅನಾಮಿಕಾ, ಶೂಟ್‍ಔಟ್ ಆ್ಯಟ್ ವಡಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆರತಿ ನಟಿಸಿದ್ದಾರೆ.

    ಕನ್ನಡದಲ್ಲೂ ನಟನೆ: ಆರತಿ ಚಾಬ್ರಿಯಾ ಕೇವಲ ಹಿಂದಿ ಸಿನಿಮಾಗಳಿಗೆ ಸೀಮಿತವಾಗಿರದೇ ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನಟನೆಯ ‘ಅಹಂ ಪ್ರೇಮಾಸ್ಮಿ’ಯಲ್ಲಿ ಅಪ್ಸರಾ ಪಾತ್ರದಲ್ಲಿ ನಟಿಸಿ ವಿಮರ್ಶಕರಿಂದಲೂ ಸೈ ಅನ್ನಿಸಿಕೊಂಡಿದ್ರು. ಮುಂದೆ ಉಪೇಂದ್ರ ಅಭಿನಯದ `ರಜಿನಿ’ಯಲ್ಲೂ ಆರತಿಗೆ ನಟಿಸುವ ಅವಕಾಶ ಸಿಕ್ಕಿತ್ತು.

    ಹೀಗೆ ಸಿಕ್ಕ ಒಳ್ಳೆಯ ಅವಕಾಶಗಳನ್ನು ಮಿಸ್ ಮಾಡದೇ ಎಲ್ಲವನ್ನು ಬಳಸಿಕೊಂಡ ಆರತಿ ಚಾಬ್ರಿಯಾ ಖಾಸಗಿ ಚಾನೆಲ್‍ವೊಂದರ ‘ಖತರೋಂಕಿ ಕಿಲಾಡಿ’ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದರು. ಇಷ್ಟೆಲ್ಲಾ ಸಿನಿಮಾ, ರಿಯಾಲಿಟಿ ಶೋ, ಜಾಹಿರಾತು, ಶಾರ್ಟ್ ಫಿಲ್ಮ್‍ಗಳಲ್ಲಿ ನಟಿಸಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡ ನಟಿಗೆ ಇಂದು ಅವಕಾಶಗಳು ಇಲ್ಲದಾಗಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  • 2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!

    2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!

    ಮುಂಬೈ: ಬಾಲಿವುಡ್‍ನಲ್ಲಿ ದೊಡ್ಡ ದೊಡ್ಡ ಬ್ಯಾನರ್‍ನ ಸಿನಿಮಾಗಳು 2018ರಲ್ಲಿ ಬಿಡುಗಡೆಗೆ ಕ್ಯೂನಲ್ಲಿವೆ. ಆದ್ರೆ ಕೆಲವು ಹೆಸರಾಂತ ಬಾಲಿವುಡ್ ನಟ ನಟಿಯರ ಒಂದು ಸಿನಿಮಾವೂ ಕೂಡ ಈ ವರ್ಷ ರಿಲೀಸ್ ಆಗ್ತಿಲ್ಲ. ಒಂದು ಅವರಿಗೆ ಕಲಸ ಇಲ್ಲ ಅಥವಾ ಅವರ ಸಿನಿಮಾಗಳ ಬಿಡುಗಡೆ 2019ಕ್ಕೆ ಆಗಲಿದೆ.

    ಪ್ರಿಯಾಂಕಾ ಚೋಪ್ರಾ, ವಿದ್ಯಾ ಬಾಲನ್, ಬಿಪಾಶಾ ಬಸು ಸೇರಿದಂತೆ ಹಲವು ಸ್ಟಾರ್ ನಟಿಯರ ಕೈಯಲ್ಲೂ ಈ ವರ್ಷ ಯಾವುದೇ ಸಿನಿಮಾಗಳಿಲ್ಲ. ಪ್ರಿಯಾಂಕಾ ಚೋಪ್ರಾ ‘ನೆಕ್ಷ್ಟ್ ಸೂಪರ್‍ಸ್ಟಾರ್’ ಎಂಬ ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವಕಾಶಗಳಿಂದ ವಂಚಿತರಾಗಿರುವ ಆ 10 ಕಲಾವಿದರ ಪಟ್ಟಿ ಈ ಕೆಳಗಿನಂತಿದೆ.

    1. ವಿದ್ಯಾ ಬಾಲನ್: 2005ರಲ್ಲಿ ‘ಪರಿಣೀತಾ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ವಿದ್ಯಾಗೆ ಆರಂಭದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಆದ್ರೆ ತಮ್ಮ ಮನೋಜ್ಞ ಅಭಿನಯದ ಮೂಲಕವೇ ತಮ್ಮನ್ನು ತಾವು ಗುರುತಿಸಿಕೊಂಡವರು ವಿದ್ಯಾಬಾಲನ್. 2011ರಲ್ಲಿ ತೆರೆಕಂಡ ‘ದಿ ಡರ್ಟಿ ಪಿಕ್ಚರ್’ ವಿದ್ಯಾ ಸಿನಿಕೆರಿಯರ್ ನಲ್ಲಿ ಬ್ರೇಕ್ ನೀಡಿದ ಸಿನಿಮಾ. 2017ರಲ್ಲಿ ತೆರೆಕಂಡ ‘ತುಮಾರಿ ಸುಲು’ ವಿದ್ಯಾ ಬಾಲನ್ ನಟನೆಯ ಕೊನೆಯ ಚಿತ್ರವಾಗಿದೆ.

    2. ವಿವೇಕ್ ಓಬೇರಾಯ್: 2002ರಲ್ಲಿ ತೆರೆಕಂಡ ‘ಕಂಪನಿ’ ಚಿತ್ರದ ಮೂಲಕ ವಿವೇಕ್ ಓಬೇರಾಯ್ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ರೋಡ್, ಸಾಥಿಯಾ, ದಮ್, ಮಸ್ತಿ, ಕಾಲ್, ಕಿಸನಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರುವಾಸಿಯಾದ್ರು. ಕ್ರಿಶ್-3 ವಿವೇಕ್ ಓಬೇರಾಯ್ ಸಿನಿ ಜೀವನಕ್ಕೆ ಹೊಸ ತಿರುವು ನೀಡಿತು. 2017ರಲ್ಲಿ ತೆರೆಕಂಡ ಕಾಮಿಡಿ ಸಿನಿಮಾ ‘ಬ್ಯಾಂಕ್ ಚೋರ್’ ವಿವೇಕ್ ಅಭಿನಯದ ಕೊನೆಯ ಸಿನಿಮಾ.

    3. ನಿಮ್ರತ್ ಕೌರ್: 2005ರಲ್ಲಿ ತೆರೆಕಂಡ ‘ಯಹಾ’ ನಿಮ್ರತ್ ಅಭಿನಯದ ಮೊದಲ ಚಿತ್ರ. ಒನ್ ನೈಟ್ ವಿಥ್ ದಿ ಕಿಂಗ್, ದಿ ಲಂಚ್ ಬಾಕ್ಸ್ ನಂತಹ ಯಶಸ್ವಿ ಚಿತ್ರಗಳಲ್ಲಿ ನಿಮ್ರತ್ ನಟಿಸಿದ್ದು, 2016ರಲ್ಲಿ ನಟಿಸಿದ ಏರ್‍ಲಿಫ್ಟ್ ಇವರ ಕೊನೆಯ ಫಿಲ್ಮ್.

    4. ಆದಿತ್ಯಾ ರಾಯ್ ಕಪೂರ್: 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಆದಿತ್ಯಾ ಅಭಿನಯದ ಮೊದಲ ಸಿನಿಮಾ. ನಂತರ ಸಹನಟನಾಗಿ ಆ್ಯಕ್ಷನ್ ರಿಪ್ಲೈ ಮತ್ತು ಗುಝಾರಿಶ್ ಚಿತ್ರಗಳಿಗೆ ಬಣ್ಣ ಹಚ್ಚಿದರು. 2013ರಲ್ಲಿ ತೆರೆಕಂಡ ‘ಆಶೀಕಿ 2’ ಸಿನಿಮಾ ಆದಿತ್ಯಾಗೆ ಲವರ್ ಬಾಯ್ ಇಮೇಜ್ ತಂದುಕೊಟ್ಟಿತು. 2017ರಲ್ಲಿ ತೆರೆಕಂಡ ‘ಓಕೆ ಜಾನು’ ಕೊನೆಯ ಸಿನಿಮಾ.

    5. ಆಥಿಯಾ ಶೆಟ್ಟಿ: ಸಲ್ಮಾನ್ ಖಾನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ಹೀರೋ’ ಚಿತ್ರದ ಮೂಲಕ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಸಿನಿರಂಗಕ್ಕೆ ಪರಿಚಿತವಾದ್ರು. 2017ರಲ್ಲಿ ತೆರೆಕಂಡ ಅಜೇಯ್ ದೇವಗನ್ ಮುಖ್ಯಭೂಮಿಕೆಯ ‘ಮುಬಾರಕಾಂ’ ಆಥಿಯಾ ಶೆಟ್ಟಿಯ ಕೊನೆಯ ಚಿತ್ರ.

    6. ಶೃತಿ ಹಾಸನ್: ಲಕ್ಕಿ (2009) ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ರು. ತೆಲಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸರುವ ಶೃತಿಗೆ 2017ರಲ್ಲಿ ತೆರೆಕಂಡ ‘ಬೆಹನ್ ಹೋಗಿ ತೇರಿ’ ಬಾಲಿವುಡ್‍ನ ಕೊನೆಯ ಚಿತ್ರ. 2018ಕ್ಕೆ ಶೃತಿ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ ಅಂತಾ ಹೇಳಲಾಗುತ್ತಿದೆ.

    7. ವಾಣಿ ಕಪೂರ್: ಶುದ್ಧ್ ದೇಸಿ ರೊಮ್ಯಾನ್ಸ್ (2013) ಚಿತ್ರದ ಮೂಲಕ ಸಹ ನಟಿಯಾಗಿ ಕಾಣಿಸಿಕೊಂಡ ವಾಣಿ ಕಪೂರ್‍ಗೆ ನಂತರ ಯಾವುದೇ ಚಿತ್ರದ ಅವಕಾಶಗಳು ಬರಲಿಲ್ಲ. 2016ರಲ್ಲಿ ತೆರೆಕಂಡ ‘ಬೇಫಿಕ್ರೆ’ ಸಿನಿಮಾ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡ ಮೊದಲ ಮತ್ತು ಕೊನೆಯ ಸಿನಿಮಾ.

    8. ಕೊಂಕಣ ಸೇನ್ ಶರ್ಮಾ: ತಮ್ಮ ಮನೋಜ್ಞ ಅಭಿನಯದ ಮೂಲಕವೇ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ನಟಿ ಕೊಂಕಣ ಸೇನ್ ಶರ್ಮಾ. 2005ರಲ್ಲಿ ‘ಮಿಕ್ಸಡ್ ಡಬಲ್ಸ್’ ಚಿತ್ರದ ಮೂಲಕ ತಮ್ಮನ್ನು ತಾವು ಗುರತಿಸಿಕೊಂಡವರು. ಒಂದು ಮಗುವಿನ ತಾಯಿಯಾದ ಬಳಿಕವೂ ತಮ್ಮ ಗ್ಲಾಮರ್ ಉಳಿಸಿಕೊಂಡಿರುವ ಕೊಂಕಣ ಸೇನ್ ಶರ್ಮಾ ನಟಿಸಿರುವ 2017ರಲ್ಲಿ ತೆರಕಂಡ ‘ಲಿಪ್‍ಸ್ಟಿಕ್ ಅಂಡರ್ ಮೈ ಬುರ್ಕಾ’ ಕೊನೆಯ ಚಿತ್ರವಾಗಿದೆ.

    9. ಬಿಪಾಶಾ ಬಸು: ಬಂಗಾಳಿ ಕೃಷ್ಣ ಸುಂದರಿ ಬಿಪಾಶಾ ಬಸು ಹಾರರ್ ಸಿನಿಮಾಗಳ ಮೂಲಕವೇ ತಮ್ಮನ್ನು ತಾವು ಪರಿಚಯಿಸಿಕೊಂಡ ನಟಿ. 2001ರಲ್ಲಿ ‘ಅಜನಬೀ’ ಮೊದಲ ಸಿನಿಮಾ ಮತ್ತು 2015ರಲ್ಲಿಯ ‘ಅಲೋನ್’ ಕೊನೆಯ ಫಿಲ್ಮ್. ಮದುವೆಯ ಬಳಿಕ ಬಿಪಾಶಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಅಂತಾ ಹೇಳಲಾಗುತ್ತಿದೆ.

    10. ಪ್ರಿಯಾಂಕಾ ಚೋಪ್ರಾ: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಕೂಡ ಈ ವರ್ಷ ಬಾಲಿವುಡ್ ಸಿನಿಮಾಗಳಿಂದ ವಂಚಿತರಾಗಿದ್ದಾರೆ. 2001ರ ‘ಅಜನಬಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದ ಪ್ರಿಯಾಂಕಾ, 2016ರಲ್ಲಿ ತೆರೆಕಂಡ ‘ಗಂಗಾಜಲ್’ ಹಿಂದಿಯ ಕೊನೆಯ ಸಿನಿಮಾವಾಗಿದೆ. ಆದರೂ ಹಾಲಿವುಡ್ ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳುತ್ತಿದ್ದಾರೆ.

  • ಸ್ಯಾಂಡಲ್‍ ವುಡ್‍ನಲ್ಲಿ ಲವ್ ಸೆಕ್ಸ್ ದೋಖಾ – ಸಹ ನಟನ ವಿರುದ್ಧ ಸಹನಟಿ ದೂರು

    ಸ್ಯಾಂಡಲ್‍ ವುಡ್‍ನಲ್ಲಿ ಲವ್ ಸೆಕ್ಸ್ ದೋಖಾ – ಸಹ ನಟನ ವಿರುದ್ಧ ಸಹನಟಿ ದೂರು

    ಬೆಂಗಳೂರು: ಮದುವೆಯಾಗಿ ನಂತರ ವಂಚಿಸಿದ್ದಾಗಿ ಸಹ ನಟನ ವಿರುದ್ಧ ಆರೋಪಿಸಿ ನಟಿಯೊಬ್ಬರು ದೂರು ನೀಡಿದ್ದಾರೆ.

    ನಟ ಅಮಿತ್ ವಿರುದ್ಧ 39 ವರ್ಷದ ನಟಿ ರಾಧಿಕಾ ಶೆಟ್ಟಿ ಆರೋಪಿಸಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ರಾಧಿಕಾ ಶೆಟ್ಟಿ ಈ ಆರೋಪ ಸುಳ್ಳು, ಹಣಕ್ಕಾಗಿ ನನ್ನ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಅಮಿತ್ ತಾಯಿ ತಿಳಿಸಿದ್ದಾರೆ.

    ರಾಧಿಕಾ ಶೆಟ್ಟಿಗೆ ಈ ಹಿಂದೆ ಮದುವೆಯಾಗಿದ್ದು, 17 ವರ್ಷದ ಮಗ, 14 ವರ್ಷದ ಮಗಳಿದ್ದಾಳೆ. ಸಂಸಾರದಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ರಾಧಿಕಾ ಶೆಟ್ಟಿ ಅಮಿತ್ ಜೊತೆ ಪರಿಚಯವಾಗಿ ಮದುವೆಯಾಗಿದ್ದರು. ಆದರೆ ಈಗ ಅಮಿತ್ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾರೆ ಎಂದು ರಾಧಿಕಾ ಆರೋಪಿಸಿದ್ದಾರೆ.

    ರಾಧಿಕಾ ಶೆಟ್ಟಿ ಹೇಳೋದು ಏನು?
    ನಮಿತಾ ಐ ಲವ್ ಯೂ ಚಿತ್ರದ ಶೂಟಿಂಗ್ ವೇಳೆ ನಮಗೆ ಪರಿಚಯವಾಗಿದೆ. ನಂತರ ಅಮಿತ್ ನನಗೆ ಪ್ರಪೋಸ್ ಮಾಡಿದ್ದರು. ಈ ವೇಳೆ ನನಗೆ ಮದುವೆಯಾಗಿದೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ನಮ್ಮ ಮನೆಯಲ್ಲಿ ನನಗೆ ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದಾರೆ. ಡಿವೋರ್ಸ್ ಆಗಿರುವ ಅಥವಾ ಪತ್ನಿ ಮೃತಪಟ್ಟಿರುವ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದೆ.

    ಆರಂಭದಲ್ಲಿ ಅಮಿತ್ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ. ಈ ರೀತಿ ಮದುವೆಯಾದರೆ ಮುಂದೆ ತೊಂದರೆಯಾಗಬಹುದು ಎಂದು ನನ್ನ ಕುಟುಂಬದವರು ಅವರಿಗೆ ತಿಳಿ ಹೇಳಿದ್ದರು. ಆದರೆ ಅಮಿತ್ ಒಪ್ಪಲಿಲ್ಲ. ಈ ವೇಳೆ ಅಮಿತ್, ಜೀವನದಲ್ಲಿ ಒಬ್ಬರಿಗೆ ಲೈಫ್ ಕೊಡುತ್ತೇನೆ. ಆಗ ಈ ಸಮಾಜದಲ್ಲಿ ನನಗೆ ಕೂಡ ಒಳ್ಳೆಯ ಹೆಸರು ಸಿಗುತ್ತದೆ. ನಿನಗೆ ಮಕ್ಕಳಿದ್ದರು ಪರವಾಗಿಲ್ಲ, ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ತನ್ನ ನಿರ್ಧಾರವನ್ನು ಸಮರ್ಥಿಕೊಂಡಿದ್ದರು.

    ಸಿಗಂದೂರಿನಲ್ಲಿ ಮದುವೆ: ಮೇ 21, 2013ರಲ್ಲಿ ಸಿಗಂದೂರಿನಲ್ಲಿ ನನ್ನ ಮದುವೆಯಾಗಿತ್ತು. ಸಿಗಂದೂರಿನಲ್ಲೇ ನನ್ನ ಮದುವೆ ನಡೆಯಬೇಕು ಎಂದು ನನ್ನ ತಾಯಿ ಬಯಸಿದ್ದರು. ಮದುವೆ ನಂತರ ಅಮಿತ್ ನನ್ನ ಜೊತೆ ಚೆನ್ನಾಗಿಯೇ ಇದ್ದರು. ನನ್ನ ತಂಗಿ ಮದುವೆಯಲ್ಲಿ ಓಡಾಡಿ, ಆಮಂತ್ರಣ ಪತ್ರಿಕೆ ಎಲ್ಲ ಅವರೇ ಹಂಚುತ್ತಿದ್ದರು. ನನ್ನ ಗಂಡನ ಸ್ಥಾನದಲ್ಲಿ ನಿಂತು ಎಲ್ಲ ಕೆಲಸ ಮಾಡಿದ್ದರು. ನವೆಂಬರ್ 5 ವರೆಗೂ ನನ್ನ ಜೊತೆಯಲ್ಲಿ ಚೆನ್ನಾಗಿಯೇ ಇದ್ದರು.

    ಸಿಗಂದೂರಲ್ಲಿ ಮದುವೆಯಾದಾಗ ನನ್ನ ಕುಟುಂಬದವರು ಮಾತ್ರ ಹಾಜರಿದ್ದರು. ಅಮಿತ್ ಪೋಷಕರಿಗೆ ಇಷ್ಟವಿಲ್ಲದ ಕಾರಣ ಆತನ ಕುಟುಂಬದಿಂದ ಯಾರೂ ಮದುವೆಗೆ ಬಂದಿರಲಿಲ್ಲ. ನಂತರ ತನ್ನ ತಾಯಿಯನ್ನು ಅವರು ಒಪ್ಪಿಸುವುದಾಗಿ ಅಮಿತ್ ಹೇಳಿದ್ದರು. ಇದು ನನ್ನ ಎರಡನೇ ಮದುವೆಯಾದ ಕಾರಣ ನಾವು ಸರಳವಾಗಿ ಮದುವೆಯಾದೆವು. ಅಷ್ಟೇ ಅಲ್ಲದೇ ರಿಜಿಸ್ಟ್ರಾರ್ ಆಫೀಸ್ ನಲ್ಲಿ ನಮ್ಮ ಮದುವೆಯನ್ನು ನೊಂದಣಿ ಮಾಡಿಸಿದ್ದೆವು. ಅಲ್ಲಿನ ಸಿಸಿಟಿವಿಯಲ್ಲಿ ನಮ್ಮ ನಾವು ನೊಂದಣಿ ಮಾಡಿಸಿಕೊಳ್ಳುವ ದೃಶ್ಯ ಸೆರೆಯಾಗಿದೆ ಎಂದು ರಾಧಿಕಾ ತಿಳಿಸಿದ್ದಾರೆ.

    ಸಂಬಂಧ ಬ್ರೇಕಪ್ ಆಗಿದ್ದು ಯಾಕೆ?
    ಅಮಿತ್ 1 ವರ್ಷದಿಂದ ನೆಲಮಂಗಲದ ಬೇರೆ ಹುಡುಗಿಯನ್ನು ಇಷ್ಟಪಡುತ್ತಿದ್ದಾರೆ ಎನ್ನುವ ವಿಷಯ ನನ್ನ ಕಿವಿಗೆ ಬಿತ್ತು. ಆ ಯುವತಿಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡಿದ್ದು ಮಾತ್ರವಲ್ಲದೇ ಆಕೆಯ ಜೊತೆ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎಂಬುದು ತಿಳಿದುಬಂತು. ಈ ವಿಷಯ ನನಗೆ ತಿಳಿದಾಗ ಅಮಿತ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಹಾಗೂ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಬೇರೆ ಯುವತಿಯ ಪ್ರವೇಶದಿಂದ ನಮ್ಮ ಜೀವನ ಹಾಳಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

    ಡಿಸೆಂಬರ್ 10 ರಂದು ಏನಾಯ್ತು?
    ಆರ್‍ಆರ್ ನಗರದಲ್ಲಿ ಡಿಸೆಂಬರ್ 10 ರಂದು ನನ್ನ ಮಗ ಪಾರ್ಟಿಗೆ ಹೋದಾಗ ಅಮಿತ್ ಗೆ ಸಿಕ್ಕಿದ್ದಾನೆ. ಈ ವೇಳೆ ಅಮಿತ್ ತನ್ನ ತಾಯಿ ಹಾಗೂ ಸಹೋದರಿಯನ್ನು ಕರೆಸಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಮಗನ ಫೋನ್ ಎಸೆದು ಅವರು ಎಳೆದುಕೊಂಡು ಹೋಗಿದ್ದಾರೆ. ನಂತರ ಮಗ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದ.

    ವಿಚಾರ ತಿಳಿದು ನಾನು, ನನ್ನ ಸ್ನೇಹಿತೆ ಮತ್ತು ಆಕೆಯ ಪತಿ ಜೊತೆ ಸ್ಥಳಕ್ಕೆ ಹೋದೆ. ಆರ್‍ಆರ್ ನಗರಕ್ಕೆ ಹೋದಾಗ ನನ್ನ ಮಗ ಅಲ್ಲಿ ಇರಲಿಲ್ಲ ಹಾಗೂ ಅವನು ಫೋನ್ ಕೂಡ ಎತ್ತುತ್ತಿರಲ್ಲಿಲ್ಲ. ನಂತರ ನಾನು ಅಮಿತ್ ಮನೆಗೆ ಹೋಗಿ ನನ್ನ ಮಗ ಎಲ್ಲಿ ಎಂದು ಕೇಳಿದ್ದಕ್ಕೆ ನನಗೆ ಹೊಡೆಯಲು ಅಮಿತ್ ಬಂದಿದ್ದಾರೆ. ಈ ವೇಳೆ ನನ್ನ ಸ್ನೇಹಿತೆಯ ಪತಿ ಬಂದಾಗ ಅವರ ಮೇಲೆ ನಾಯಿಯನ್ನು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಮೇಲೆ ಅಮಿತ್, ಆತನ ತಾಯಿ, ಮತ್ತು ಮನೆಯಲ್ಲಿದ್ದ ಅಮಿತ್ ಸ್ನೇಹಿತೆ ಹಲ್ಲೆ ನಡೆಸಿದ್ದಾರೆ ಎಂದು ರಾಧಿಕಾ ಘಟನೆಯನ್ನು ವಿವರಿಸಿದ್ದಾರೆ.

    ಆರೋಪ ಸುಳ್ಳು:
    ಅಮಿತ್ ತಾಯಿ ಹೇಳುವ ಪ್ರಕಾರ ಇಬ್ಬರ ನಡುವೆ ಯಾವುದೇ ಮದುವೆ ಆಗಿಲ್ಲ. ಹಣಕ್ಕಾಗಿ ನನ್ನ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ. ರಾಧಿಕಾ ಶೆಟ್ಟಿ ಕಿರುಕುಳದಿಂದ ಅಮಿತ್ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದ. ಯುವಕರ ಜೊತೆ ಫೋಟೋ ತೆಗೆಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡ್ತಾಳೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ವಿಚಾರದ ಬಗ್ಗೆ ಅಮಿತ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಆಡಿ ಕಾರ್ ಒಡತಿಯಾದ ಕಿರಿಕ್ ಹುಡ್ಗಿ ರಶ್ಮಿಕಾ- ಭಾವಿ ಪತಿ ಜೊತೆ ಫಸ್ಟ್ ರೌಂಡ್

    ಆಡಿ ಕಾರ್ ಒಡತಿಯಾದ ಕಿರಿಕ್ ಹುಡ್ಗಿ ರಶ್ಮಿಕಾ- ಭಾವಿ ಪತಿ ಜೊತೆ ಫಸ್ಟ್ ರೌಂಡ್

    ಬೆಂಗಳೂರು: ಸ್ಯಾಂಡಲ್ ವುಡ್ ಫೇಮಸ್ ನಟಿ ರಶ್ಮಿಕಾ ಮಂದಣ್ಣ ಅವರ `ಚಮಕ್’ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಹೊಸ ಕಾರೊಂದರ ಒಡತಿಯಾಗಿದ್ದಾರೆ.

    ಹೌದು. ನಟಿ ರಶ್ಮಿಕಾ ಮಂದಣ್ಣ ಆಡಿ ಕಾರೊಂದನ್ನು ಖರೀದಿಸಿದ್ದಾರೆ. ಶುಕ್ರವಾರವಷ್ಟೇ ಚಮಕ್ ಚಿತ್ರ ರಿಲೀಸ್ ಆಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಈ ಖುಷಿಯ ಬೆನ್ನಲ್ಲೇ ನಿನ್ನೆಯೇ ಕೆಂಪು ಬಣ್ಣದ ಹೊಸ ಆಡಿ ಕಾರೊಂದನ್ನು ಖರೀದಿ ಮಾಡೋ ಮೂಲಕ ತನ್ನ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ಇದನ್ನೂ ಓದಿ: ರೈತರಿಗಾಗಿ ಬಿಎಂಡಬ್ಲ್ಯೂ ಕಾರನ್ನೇ ಮಾರಾಟ ಮಾಡ್ತೀನಿ ಎಂದ ಕಿಚ್ಚ

    ತಮ್ಮ ಕನಸಿನ ಕಾರು ಖರೀದಿ ಮಾಡಿರುವ ರಶ್ಮಿಕಾ ಭಾವಿ ಪತಿ ನಟ ರಕ್ಷಿತ್ ಶೆಟ್ಟಿ ಜೊತೆ ಫಸ್ಟ್ ರೌಂಡ್ ಹೋಗಿದ್ದಾರೆ. ಅಲ್ಲದೇ ಕಾರು ಖರೀದಿ ಮಾಡಿ ಖುಷಿಯಲ್ಲಿರೋ ರಶ್ಮಿಕಾ, ರಕ್ಷಿತ್ ಜೊತೆ ತಮ್ಮ ಹೊಸ ಕಾರಿನೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ಅವುಗಳನ್ನು ಇನ್‍ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಜಾಗ್ವಾರ್’ ಒಡತಿಯಾದ ನಟಿ ಹರಿಪ್ರಿಯಾ!

    ನಟ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಚಮಕ್’ ಸಿನಿಮಾ ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಜೊತೆಯಾಗಿ ನಿನ್ನೆಯೇ ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ನಟನೆಯನ್ನು ಕಂಡ ರಕ್ಷಿತ್ ಶೆಟ್ಟಿ ಹೊಗಳಿದ್ದಾರೆ. ಅಲ್ಲದೇ ಚಿತ್ರಮಂದಿರದಲ್ಲೇ ತನ್ನ ಭಾವಿ ಪತ್ನಿಯನ್ನು ತಬ್ಬಿಕೊಂಡು ಮುದ್ದಾಡಿದ್ದಾರೆ. ಇದನ್ನೂ ಓದಿ: ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್

  • ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

    ಹೈದರಾಬಾದ್: ಎರಡು ದಿನಗಳ ಹಿಂದೆ ನಗರದಲ್ಲಿ ಪೊಲೀಸರು ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

    ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಇಬ್ಬರೂ ತೆಲಗು ಮತ್ತು ಬಂಗಾಳಿ ಸಿನಿಮಾಗಳ ನಟಿಯರಾಗಿದ್ದು, ಹೈದರಾಬಾದ್ ನ ತಾಜ್ ಡೆಕ್ಕನ್ ಹೋಟೆಲ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು. ಪಿಂಪ್ (ದಲ್ಲಾಳಿ) ಒಬ್ಬ ಆನ್‍ಲೈನ್ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ ಇವರತ್ತ ಕಳುಹಿಸುತ್ತಿದ್ದನು. ಪೊಲೀಸರು ಐಪಿ ಅಡ್ರೆಸ್ ಮೂಲಕ ಪಿಂಪ್ ವಿಳಾಸವನ್ನು ಪತ್ತೆ ಹಚ್ಚಿ, ಸಿವಿಲ್ ಡ್ರೆಸ್ ನಲ್ಲಿ ಬಂದು ನಟಿಯರನ್ನು ಬಂಧಿಸಿದ್ದಾರೆ.

    ದಾಳಿ ವೇಳೆ ಪೊಲೀಸರಿಗೆ ಹೋಟೆಲ್ ನಲ್ಲಿ 50 ಸಾವಿರ ನಗದು, ಮೊಬೈಲ್ ಫೋನ್ ಮತ್ತು ಕೆಲವು ಕಾಂಡೋಮ್ ಗಳು ಸಿಕ್ಕಿವೆ. ಬಂಧಿತರಲ್ಲಿ ಇಬ್ಬರು ನಟಿಯರಾದ್ರೆ, ದಂಧೆಯ ಸಂಘಟಕ, ಮತ್ತೊಬ್ಬ ಬಾಲಿವುಡ್ ಸಿನಿಮಾ ನಿರ್ದೇಶಕ ಮೊನಿಶಾ ಕಾಡಕೈ, ಇನ್ನೊಬ್ಬ ಆಂಧ್ರ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೆಂಕಟ್ ರಾವ್ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ನ ಇಬ್ಬರೂ ಮ್ಯಾನೇಜರ್ ಗಳನ್ನು ಸಹ ಬಂಧಿಸಿದ್ದಾರೆ. ನಟಿಯರ ರೂಮಿಗೆ ಪುರುಷರನ್ನು ಕಳುಹಿಸುತ್ತಿದ್ದ ಪಿಂಪ್ ನಾಪತ್ತೆಯಾಗಿದ್ದಾನೆ.

    ಇಬ್ಬರೂ ನಟಿಯರು ಹೋಟೆಲ್ ನ ಎರಡು ಬೇರೆ ರೂಮಿನಲ್ಲಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಇಬ್ಬರೂ ನಟಿಯರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ಫೋನ್, ಹಣ, ಅಶ್ಲೀಲ ಫೋಟೋಗಳು, ನಟಿಯರ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಸೆಕ್ಸ್ ರ‍್ಯಾಕೆಟ್ ಪಿಂಪ್ ಗಳು ನಗರದ ಶ್ರೀಮಂತ ವ್ಯಕ್ತಿಗಳಿಗೆ ಬಲೆಯನ್ನು ಬೀಸುತ್ತಿದ್ದರು. ಒಂದು ರಾತ್ರಿಗೆ ಒಂದು ಲಕ್ಷ ರೂ. ರೇಟ್ ಫಿಕ್ಸ್ ಮಾಡಿದ್ದರು. ಆದರೆ ವೇಶ್ಯಾವಾಟಿಕೆಯ ಮುಖ್ಯಸ್ಥ ಮಾತ್ರ ಗಿರಾಕಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆದುಕೊಂಡು, ನಟಿಯರಿಗೆ ಕಡಿಮೆ ಹಣವನ್ನು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಪಿಂಪ್ ಗಳು ನಟಿಯರಿಗೆ ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನ ಹಣವನ್ನು ಗಳಿಸಬಹುದು ಎಂದು ನಂಬಿಸಿದ್ದರು.

  • ನಟಿ ಕಾವ್ಯಾ ಆಚಾರ್ಯ ಸಹೋದರನ ಮೇಲೆ ಕೊಲೆ ಯತ್ನ

    ನಟಿ ಕಾವ್ಯಾ ಆಚಾರ್ಯ ಸಹೋದರನ ಮೇಲೆ ಕೊಲೆ ಯತ್ನ

    ಶಿವಮೊಗ್ಗ: ಸ್ವಾಮೀಜಿ ಜೊತೆ ರಾಸಲೀಲೆ ಪ್ರಕರಣದಿಂದ ಸುದ್ದಿಯಾಗಿದ್ದ ನಟಿ ಕಾವ್ಯಾ ಆಚಾರ್ಯ ಸಹೋದರ ಕೃಷ್ಣ ಆಚಾರ್ಯ ಮೇಲೆ ಕೊಲೆ ಯತ್ನ ಹಾಗೂ ಅಮ್ಮ ನಾಗರತ್ನ ಅವರಿಗೆ ಅಪರಿಚಿತರು ಜೀವ ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಇವರಿಬ್ಬರೂ ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ತೀರ್ಥಹಳ್ಳಿ ಸಮೀಪ ಶಿವರಾಜಪುರದ ಬಳಿ ಓಮ್ನಿಯಲ್ಲಿ ಬಂದಿದ್ದ ಐದು ಜನ ಅಪರಿಚಿತ ವ್ಯಕ್ತಿಗಳು ಇವರ ಕಾರು ಅಡ್ಡ ಹಾಕಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

    ಬಳಿಕ ಈ ಕುರಿತು ಕೇಸು, ಕಂಪ್ಲೇಂಟ್ ಎಂದು ಹೋದಲ್ಲಿ ಇಡೀ ಕುಟುಂಬದ ಎಲ್ಲರನ್ನೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಕೃಷ್ಣ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಕೂಡ ಯತ್ನಿಸಿದ್ದಾರೆ. ಈ ವೇಳೆ ಕೃಷ್ಣ ಅವರ ತಾಯಿ ಕೂಗಿಕೊಂಡಿದ್ದರಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಸದ್ಯ ಗಾಯಾಳು ಕೃಷ್ಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=jzvC69jzdBg

    https://www.youtube.com/watch?v=s_FMyEPUKf4

    https://www.youtube.com/watch?v=9JvRzC7ZT_g

    https://www.youtube.com/watch?v=4hUdbxqu6qw

    https://www.youtube.com/watch?v=Ro8s_y6UJHE

    https://www.youtube.com/watch?v=Wju-SCH4x1s

  • `ಜಾಗ್ವಾರ್’ ಒಡತಿಯಾದ ನಟಿ ಹರಿಪ್ರಿಯಾ!

    `ಜಾಗ್ವಾರ್’ ಒಡತಿಯಾದ ನಟಿ ಹರಿಪ್ರಿಯಾ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಂಗದಲ್ಲಿ ಕಾರುಗಳದ್ದೇ ಸುದ್ದಿ. ಮೊನ್ನೆ ಮೊನ್ನೆಯಷ್ಟೇ ನಟ ಯಶ್ ಮೂರು ಬೆಂಜ್ ಕಾರು ಖರೀದಿ ಮಾಡೋ ಮೂಲಕ ಸುದ್ದಿಯಾಗಿದ್ದು, ಇದೀಗ ನಟಿ ಹರಿಪ್ರಿಯಾ ಕೂಡ ಹೊಸ ಕಾರೊಂದರ ಒಡತಿಯಾಗಿದ್ದಾರೆ.

    ಹೌದು. ತನ್ನ ಹೊಸ ಜಾಗ್ವಾರ್ ಕಾರ್ ಜೊತೆ ತೆಗೆದುಕೊಂಡ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಜಾಗ್ವಾರ್ ಕಾರಿನ ಒಡತಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಅಂತ ಬರೆದುಕೊಂಡಿದ್ದಾರೆ.

    ನಟ ಯಶ್ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ಮುದ್ದಿನ ಮಡದಿ ರಾಧಿಕಾ ಪಂಡಿತ್ ಹಾಗೂ ಹೆತ್ತವರಿಗೆ ಅಂತ ಒಟ್ಟು ಮೂರು ಬೆನ್ಜ್ ಕಾರ್ ಖರೀದಿ ಮಾಡೋ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದು ಅಚ್ಚರಿ ಮೂಡಿಸಿದ್ದರು. ಈ ಬೆನ್ನಲ್ಲೇ ನಟಿ ಹರಿಪ್ರಿಯಾ ಕೂಡ ಕಾರು ಖರೀದಿಸಿದ್ದಾರೆ.

    ಈ ಹಿಂದೆ ನಟ ಚೇತನ್ ಚಂದ್ರ ಕೂಡ ಹೊಸ ಕಾರಿನೊಂದಿಗೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ತಾಳ್ಮೆ ಹಾಗೂ ಪರಿಶ್ರಮಕ್ಕೆ ಸಿಕ್ಕ ಫಲ. ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಆಡಿ ಕಾರ್ ಕೊಂಡುಕೊಂಡಿರುವುದಾಗಿ ಸ್ಟೇಟಸ್ ಕೂಡ ಹಾಕಿದ್ದರು. ಇದನ್ನೂ ಓದಿ: ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್

  • ನಿಶ್ಚಿತಾರ್ಥದ ಸಂಭ್ರಮದಲ್ಲಿ `ಗೂಗ್ಲಿ’ ನಿರ್ದೇಶಕ ಪವನ್ ಒಡೆಯರ್

    ನಿಶ್ಚಿತಾರ್ಥದ ಸಂಭ್ರಮದಲ್ಲಿ `ಗೂಗ್ಲಿ’ ನಿರ್ದೇಶಕ ಪವನ್ ಒಡೆಯರ್

    ಬೆಂಗಳೂರು: ಮೊನ್ನೆ ತಾನೇ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಾವು ಮೆಚ್ಚಿದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮತ್ತೊಬ್ಬ ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ.

    ಕುಟುಂಬದ ಹಿರಿಯರು ನೋಡಿ ಮೆಚ್ಚಿರುವ ಅಪೇಕ್ಷಾ ಪುರೋಹಿತ್ ಜೊತೆಗೆ ವಿವಾಹ ಬಂಧನಕ್ಕೆ ಪವನ್ ಒಳಗಾಗಲಿದ್ದಾರೆ. ಡಿಸೆಂಬರ್ 7 ರಂದು ಪವನ್-ಅಪೇಕ್ಷಾ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

    ಅಂದಹಾಗೇ ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಬಿಡುಗಡೆಗೊಂಡ ಟಿಎನ್ ಸೀತಾರಾಮ್ ಅವರ `ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

    ಅಪೇಕ್ಷಾ ಓದಿದ್ದು ಫ್ಯಾಷನ್ ಡಿಸೈನಿಂಗ್. ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಮೂಡಿ ಬರುತ್ತಿದ್ದ `ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು. ನಂತರ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬರಲು ಟಿ.ಎನ್. ಸೀತಾರಾಮ್ ನಿರ್ದೇಶನದ `ಕಾಫೀ ತೋಟ’ ಸಿನಿಮಾ ಇವರಿಗೆ ಉತ್ತಮ ಅವಕಾಶವನ್ನು ನೀಡಿತ್ತು. ಸಿನಿಮಾ ರಂಗಕ್ಕೆ ಅಚ್ಚರಿಯಾಗಿ ಬಂದ ಇವರು `ಕಿನಾರೆ’ ಮತ್ತು `ಕಾಣದ ಕಡಲಿಗೆ’ ಎಂಬ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

    ಗುರು-ಹಿರಿಯರು ನಿಶ್ಚಯಿಸಿದಂತೆ ಡಿಸೆಂಬರ್ 7ರಂದು ನಿಶ್ಚಿತಾರ್ಥ ನಡೆಯಲಿದ್ದು, ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    https://www.instagram.com/p/BcEJevTHxjs/?hl=en&taken-by=apekshapurohit

    https://www.instagram.com/p/BcAh6hBHv5I/?hl=en&taken-by=apekshapurohit

    https://www.instagram.com/p/Bb844uJnvfR/?hl=en&taken-by=apekshapurohit

    https://www.instagram.com/p/Bb4VLnQnNhz/?hl=en&taken-by=apekshapurohit

    https://www.instagram.com/p/Bbm88Z0H0vf/?hl=en&taken-by=apekshapurohit

    https://www.instagram.com/p/BbV0gyOHayZ/?hl=en&taken-by=apekshapurohit

    https://www.instagram.com/p/BbQ4HCFHSxL/?hl=en&taken-by=apekshapurohit

    https://www.instagram.com/p/BbGxb3snjuE/?hl=en&taken-by=apekshapurohit

    https://www.instagram.com/p/Ba3oegIn0It/?hl=en&taken-by=apekshapurohit

    https://www.instagram.com/p/BacLgr4HiO6/?hl=en&taken-by=apekshapurohit

    https://www.instagram.com/p/Bax1pY3n4f7/?hl=en&taken-by=apekshapurohit

    https://www.instagram.com/p/BaOONhjnUOd/?hl=en&taken-by=apekshapurohit

    https://www.instagram.com/p/BaCSo6NnMXj/?hl=en&taken-by=apekshapurohit

    https://www.instagram.com/p/BZ8XjWknc5l/?hl=en&taken-by=apekshapurohit

    https://www.instagram.com/p/BZndgkXnQWu/?hl=en&taken-by=apekshapurohit

    https://www.instagram.com/p/BZKqxp7HgLr/?hl=en&taken-by=apekshapurohit

    https://www.instagram.com/p/BYsSBuEnEsJ/?hl=en&taken-by=apekshapurohit

    https://www.instagram.com/p/BYAxNuJn5v3/?hl=en&taken-by=apekshapurohit

    https://www.instagram.com/p/BX23uvAnbPl/?hl=en&taken-by=apekshapurohit

    https://www.instagram.com/p/BXO0fkunN1y/?hl=en&taken-by=apekshapurohit

    https://www.instagram.com/p/BWkGyimHL1L/?hl=en&taken-by=apekshapurohit

    https://www.instagram.com/p/BVmFzs2n_X1/?hl=en&taken-by=apekshapurohit

    https://www.instagram.com/p/BVT5oDXHiGo/?hl=en&taken-by=apekshapurohit

    https://www.instagram.com/p/BU6E8RdBWFE/?hl=en&taken-by=apekshapurohit

    https://www.instagram.com/p/BUjVoKiB-tw/?hl=en&taken-by=apekshapurohit

    https://www.instagram.com/p/BTqBQoZBf8e/?hl=en&taken-by=apekshapurohit

    https://www.instagram.com/p/BSu1NoRh0uz/?hl=en&taken-by=apekshapurohit

    https://www.instagram.com/p/BRx7UDkhdRN/?hl=en&taken-by=apekshapurohit

    https://www.instagram.com/p/BQlXQb6B35z/?hl=en&taken-by=apekshapurohit

    https://www.instagram.com/p/_yAVUUvTDg/?taken-by=pavanwadeyar