Tag: actress

  • ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ!

    ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ!

    ಮುಂಬೈ: ಕಿರುತೆರೆಯ ನಟಿಯೊಬ್ಬರು ತನ್ನ ಗೆಳತಿಯರೊಂದಿಗೆ ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ಹಿಂದಿಯ ಖಾಸಗಿ ಚಾನೆಲ್ ನ ಧಾರಾವಾಹಿಯ ಪ್ರಮುಖ ನಟಿಯಾಗಿರುವ ಶ್ರದ್ಧಾ ಆರ್ಯಳ ಸೆಕ್ಸಿ ಡ್ಯಾನ್ಸ್ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಧಾರಾವಾಹಿಯಲ್ಲಿ ಪ್ರೀತಾ ಪಾತ್ರದಲ್ಲಿ ಸರಳ ಹುಡುಗಿಯಾಗಿ ಕಾಣಿಸಿಕೊಂಡ ಶ್ರದ್ಧಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಏನದು ಎಡವಟ್ಟು?: ತನ್ನಿಬ್ಬರ ಗೆಳತಿಯರೊಂದಿಗೆ ಟವಲ್ ಸುತ್ತಿಕೊಂಡು ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅಭಿನಯದ `ಹರ್ ದಿಲ್ ಜೋ ಪ್ಯಾರ್ ಕರೇಗಾ’ ಸಿನಿಮಾದ ಪಿಯಾ..ಪಿಯಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಗೆಳತಿಯರ ಮಧ್ಯದಲ್ಲಿ ನಿಂತು ಡ್ಯಾನ್ಸ್ ಮಾಡ್ತಿದ್ದರು. ಈ ವೇಳೆ ಮುಂದೆ ನಿಂತಿದ್ದ ಗೆಳತಿಯ ಕೈ ಶ್ರದ್ಧಾಳ ಕಣ್ಣಿಗೆ ತಾಗಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

    ಇದೇ ವಿಡಿಯೋವನ್ನು ಶ್ರದ್ಧಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ. ಪ್ಲ್ಯಾನ್ ಮಾಡದೇ ಡ್ಯಾನ್ಸ್ ಮಾಡಲು ಹೋಗಿ ಈ ರೀತಿಯ ಎಡವಟ್ಟು ಆಗಿದೆ ಅಂತಾ ಶ್ರದ್ಧಾ ಬರೆದುಕೊಂಡಿದ್ದಾರೆ.

    https://www.instagram.com/p/BgiHn3eBAjE/?taken-by=sarya12

  • ಬಿಕಿನಿ ಫೋಟೋ ಬಗ್ಗೆ ಟ್ರೋಲ್ ಮಾಡ್ದವರಿಗೆ ಖಡಕ್ ಉತ್ತರ ಕೊಟ್ಟ ನಟಿ ರಾಧಿಕಾ ಆಪ್ಟೆ

    ಬಿಕಿನಿ ಫೋಟೋ ಬಗ್ಗೆ ಟ್ರೋಲ್ ಮಾಡ್ದವರಿಗೆ ಖಡಕ್ ಉತ್ತರ ಕೊಟ್ಟ ನಟಿ ರಾಧಿಕಾ ಆಪ್ಟೆ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಏನೇ ಮಾಡಿದ್ರೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಅಂತೆಯೇ ಇದೀಗ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಕೂಡ ಟ್ರೋಲ್ ಆಗಿದ್ದಾರೆ.

    ರಾಧಿಕಾ ಅವರು ಇತ್ತೀಚೆಗೆ ಬಿಕಿನಿ ಧರಿಸಿ ತಮ್ಮ ಗೆಳೆಯನ ಜೊತೆ ಗೋವಾ ಬೀಚ್ ನಲ್ಲಿ ಕುಳಿತುಕೊಂಡಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗಳಿಗೆ ಗ್ರಾಸರಾಗಿದ್ದಾರೆ.

    ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಧಿಕಾ, ನಾನು ಟ್ರೋಲ್ ಆಗಿರೋ ವಿಚಾರ ನನಗೆ ತಿಳಿದಿಲ್ಲ. ನನ್ನ ಸಹಪಾಠಿಗಳು ಹೇಳಿದ ಬಳಿಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಬೀಚ್ ನಲ್ಲಿ ನಾನು ಸೀರೆ ಉಟ್ಕೊಂಡು ನಡೆದಾಡಬೇಕು ಅಂತಾ ಜನ ನಿರೀಕ್ಷಿಸುತ್ತಿದ್ದಾರೆಯೇ ಅಂತ ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡೋರ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಉತ್ತರ ಕೊಡುವ ಅವಶ್ಯಕತೆಯೂ ನನಗಿಲ್ಲ ಅಂತ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.

    ರಾಧಿಕಾ ಮಾತ್ರವಲ್ಲ ಈ ಹಿಂದೆ ಪ್ರಿಯಾಂಕಾ ಚೋಪ್ರಾ, ಈಶಾ ಗುಪ್ತಾ, ದೀಪಿಕಾ ಪಡುಕೋಣೆ, ಪರಿಣಿತಿ ಚೋಪ್ರಾ ಮೊದಲಾದವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು.

    https://www.instagram.com/p/BflPW8VHDI9/?utm_source=ig_embed&utm_campaign=embed_profile_upsell_control

  • ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

    ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ವರ್ಕೌಟ್ ಮಾಡಲೆಂದು ಜಿಮ್‍ಗೆ ಹೋಗಿದ್ದ ವೇಳೆ ಹೊರಗೆ ನಿಂತಿದ್ದ ಕತ್ರಿನಾ ಕೈಫ್ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡು ವಾಪಸ್ ಬಂದಿದ್ದಾರೆ.

    ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಜಿಮ್‍ನ ತರಬೇತಿ ಪಡೆಯಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಫಿಟ್ನೆಸ್ ಕ್ಲಾಸ್‍ಗೆ ಹೋಗಿದ್ದಾರೆ. ಜಿಮ್ ಹತ್ತಿರ ಹೋಗುತ್ತಿದ್ದಂತೆ ಅಲ್ಲಿ ಕತ್ರಿನಾ ಕೈಫ್ ಅವರ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ.

     

    ದೀಪಿಕಾ ಹಾಗೂ ಕತ್ರಿನಾ ಇಬ್ಬರೂ ರಣ್‍ಬೀರ್ ಕಪೂರ್ ನ ಮಾಜಿ ಪ್ರೇಯಸಿಯಾಗಿದ್ದು, ಇಬ್ಬರು ಎದುರು-ಬದರು ಬರಲು ಇಷ್ಟಪಡುವುದಿಲ್ಲ. ದೀಪಿಕಾಗೆ ಕತ್ರಿನಾ ಕಾರ್ ನಂಬರ್ ತಿಳಿದಿದ್ದು, ಆ ಕಾರನ್ನು ಜಿಮ್ ಹೊರಗಡೆ ನೋಡುತ್ತಿದ್ದಂತೆ ಕತ್ರಿನಾ ಮುಂದೆ ಬರಲು ಬಯಸದೇ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಈ ಹಿಂದೆ ದೀಪಿಕಾ ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ನಿಮ್ಮ ಮದುವೆಗೆ ಯಾರಿಗೆ ಆಹ್ವಾನ ನೀಡುವುದಿಲ್ಲ ಎಂದು ದೀಪಿಕಾ ಅವರಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಗುಳಿ ಕೆನ್ನೆಯ ಸುಂದರಿ ಕತ್ರಿನಾ ಕೈಫ್ ಗೆ ಆಹ್ವಾನ ನೀಡುವುದಿಲ್ಲ ಖಡಕ್ ಆಗಿ ಉತ್ತರಿಸಿದ್ದರು.

    ದೀಪಿಕಾ ಬಾಲಿವುಡ್‍ಗೆ ಎಂಟ್ರಿಯಾದ ಬಳಿಕ ರಣ್ ಬಿರ್ ಕಪೂರ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಈ ಪ್ರೇಮ ಸಂಬಂಧ ಬ್ರೇಕಪ್ ಆಗಲು ಕ್ರತಿನಾ ಕಾರಣ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತಿತ್ತು. ಈ ಕಾರಣಕ್ಕೆ ದೀಪಿಕಾ ಕತ್ರಿನಾಗೆ ಮದುವೆ ಆಹ್ವಾನ ನೀಡುತ್ತಿಲ್ಲ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇದನ್ನೂ ಓದಿ:  ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!

  • `ಹೆಬ್ಬುಲಿ’ ನಾಯಕಿ ಅಮಲಾ ಪೌಲ್‍ರಿಂದ ನೇತ್ರದಾನ

    `ಹೆಬ್ಬುಲಿ’ ನಾಯಕಿ ಅಮಲಾ ಪೌಲ್‍ರಿಂದ ನೇತ್ರದಾನ

    ಪುದುಚೇರಿ: ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

    ಮಂಗಳವಾರ ನಗರದ ರಾಜೀವ್ ಗಾಂಧಿ ಸಿಗ್ನಲ್ ನಲ್ಲಿರೋ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: `ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ವಿರುದ್ಧ FIR ದಾಖಲು

    “ಪಾಂಡಿಚೇರಿಯಲ್ಲಿ ಹೊಸ ಆಸ್ಪತ್ರೆ ಉದ್ಘಾಟನೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ಈ ಮೂಲಕ ಭಾರತದಲ್ಲಿ ಕುರುಡತನವನ್ನು ನಿರ್ಮೂಲನೆ ಮಾಡಲಾಗುತ್ತಿರುವುದು ಸಂತಸದ ಸಂಗತಿ. ಈ ಸೌಲಭ್ಯ ಎಲ್ಲರಿಗೂ ತಲುಪುತ್ತದೆ ಎಬುವುದಾಗಿ ನಾನು ನಂಬಿದ್ದೇನೆ. ಅಲ್ಲದೇ 50ಕ್ಕೂ ಹೆಚ್ಚು ಮಂದಿಗೆ ಉಚಿತ ಕಣ್ಣಿನ ಸರ್ಜರಿ ಮಾಡಿದ ಈ ಆಸ್ಪತ್ರೆಗೆ ಧನ್ಯವಾದ ಹೇಳಲು ಬಯಸುತ್ತೇನೆ” ಅಂತಾ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅಮಿರ್ ಖಾನ್, ಪ್ರಿಯಾಂಕ ಚೋಪ್ರಾ, ಐಶ್ವರ್ಯ ರೈ ಸೇರಿದಂತೆ ಹಲವು ನಟ-ನಟಿಯರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು

    ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾ ಮಾಡಿದ್ದ ಅಮಲಾ ಪೌಲ್ ಅವರು `ಹೆಬ್ಬುಲಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಹೆಬ್ಬುಲಿಯಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು.

  • ಶ್ರೀದೇವಿ ಸಾವಿನ 30 ನಿಮಿಷ ಮೊದ್ಲು ಸರ್ಪ್ರೈಸ್ ನೀಡಲು ಮುಂದಾಗಿದ್ದ ಪತಿ ಬೋನಿ ಕಪೂರ್

    ಶ್ರೀದೇವಿ ಸಾವಿನ 30 ನಿಮಿಷ ಮೊದ್ಲು ಸರ್ಪ್ರೈಸ್ ನೀಡಲು ಮುಂದಾಗಿದ್ದ ಪತಿ ಬೋನಿ ಕಪೂರ್

    ನವದೆಹಲಿ: ಹಿರಿಯ ನಟಿ ಶ್ರೀದೇವಿ ಅವರ ಅಕಾಲಿಕ ಮರಣ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇವರ ಮರಣದ ಬಳಿಕ ದುಬೈನ ಪತ್ರಿಕೆಯೊಂದು ಶ್ರೀದೇವಿ ಅವರ ಸಾವಿನ 30 ನಿಮಿಷದ ಮೊದಲು ನಡೆದಿರುವ ಸ್ಟೋರಿಯೊಂದನ್ನು ಬಿಚ್ಚಿಟ್ಟಿದೆ.

    ಪತ್ರಿಕೆಯ ವರದಿ ಪ್ರಕಾರ, ಪತಿ ಬೋನಿ ಕಪೂರ್ ಜೊತೆ ಸಂಬಂಧಿಕರ ಮದುವೆಗೆ ತೆರಳಿದ್ದ ಬಳಿಕ ಶ್ರೀದೇವಿ ಒಬ್ಬರನ್ನೇ ಹೊಟೇಲ್ ರೂಮ್ ನಲ್ಲಿ ಬಿಟ್ಟು ಪತಿ ಮುಂಬೈಗೆ ತೆರಳಿದ್ದರು. ಬಳಿಕ ಶ್ರೀದೇವಿಯವರಿಗೆ ಸರ್ಪ್ರೈಸ್  ನೀಡಲೆಂದು ಬೋನಿ ಕಪೂರ್ ಮತ್ತೆ ದುಬೈಗೆ ವಾಪಸ್ಸಾಗಿದ್ದರು.

    ದುಬೈಗೆ ವಾಪಸ್ ಬಂದ ಬೋನಿ ಕಪೂರ್ ಪತ್ನಿ ಶ್ರೀದೇವಿ ಜೊತೆ ಸುಮಾರು 15 ನಿಮಿಷ ಮಾತಾಡಿದ್ದಾರೆ. ನಂತರ ಹೊರಗಡೆ ಊಟಕ್ಕೆ ಹೋಗಲು ರೆಡಿಯಾಗುವಂತೆ ಪತ್ನಿಗೆ ಬೋನಿ ಕಪೂರ್ ಹೇಳಿದ್ದಾರೆ.

    ಪತಿ ಜೊತೆ ಡಿನ್ನರ್ ಗೆ ಹೋಗಲು ರೆಡಿಯಾಗಲೆಂದು ಶ್ರೀದೇವಿ ಸ್ನಾನದ ಮನೆಗೆ ತೆರಳಿದ್ದಾರೆ. ಹೀಗೆ ಹೋದವರು ಸುಮಾರು 15 ನಿಮಿಷವಾದ್ರೂ ಹಿಂದಿರುಗಲೇ ಇಲ್ಲ. ಈ ವೇಳೆ ಬೋನಿಕಪೂರ್ ಬಾತ್ ರೂಮ್ ಬಾಗಿಲು ಬಡಿದಿದ್ದಾರೆ. ಆದ್ರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಆತಂಕಗೊಂಡ ಪತಿ ಬಾತ್ ರೂಮ್ ಬಾಗಿಲು ಒಡೆದಿದ್ದಾರೆ. ಒಳಗಡೆ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿಯನ್ನು ಕಂಡು ಪತಿ ಬೋನಿಕಪೂರ್ ಶಾಕ್ ಆಗಿದ್ದಾರೆ.

    ಕೂಡಲೇ ಅವರನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದು, ತನ್ನ ಗೆಳೆಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಅದಾಗಲೇ ಶ್ರೀದೇವಿ ಇಹಲೋಕ ತ್ಯಜಿಸಿದ್ದರು.

    54 ವರ್ಷದ ಶ್ರೀದೇವಿ ಅವರ ಅಕಾಲಿಕ ಮರಣಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.

    https://www.youtube.com/watch?v=_KNZgFFSYj4

    https://www.youtube.com/watch?v=AKpA8kTgC6o

    https://www.youtube.com/watch?v=A3Eg5WQxYY4

    https://www.youtube.com/watch?v=TMaN009AkTc

    https://www.youtube.com/watch?v=P5i7pF4Xhxc

    https://www.youtube.com/watch?v=7-t7NbVkcJQ

    https://www.youtube.com/watch?v=NTm7FXx_s-A

  • ಚಿತ್ರ ನಟಿಗೆ ಡ್ರಾಪ್ ನೀಡುವದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ

    ಚಿತ್ರ ನಟಿಗೆ ಡ್ರಾಪ್ ನೀಡುವದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ

    ಮುಂಬೈ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ತಿಂಗಳು ಚಿತ್ರ ನಟಿಯೊಬ್ಬರನ್ನ ಅತ್ಯಾಚಾರ ಎಸಗಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    31 ವರ್ಷದ ನಟಿ ಜನವರಿ 12 ರಂದು ರಾತ್ರಿ ತನ್ನ ಫೊಟೋ ಶೂಟ್ ಮುಗಿಸಿಕೊಂಡು ವಾಸೈನಲ್ಲಿ ಆಟೋ ರಿಕ್ಷಾಗೆ ಕಾಯುತಿದ್ದರು. ಅದೇ ಸಮಯಕ್ಕೆ ಬೈಕ್‍ನಲ್ಲಿ ಬಂದ ಪ್ರದೀಪ್ ತಿವಾರಿ (27) ಅಲಿಯಾಸ್ ಚಿಂಟು ನಟಿಯನ್ನು ದಹಿಸಾರ್ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೊಗುತ್ತೇನೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

    ನಟಿ ಜನವರಿ 12 ರಂದು ವಾಸೈನಲ್ಲಿ ಫೊಟೋ ಶೂಟ್ ಮುಗಿಸುಕೊಂಡು ದಹಿಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಲು ಆಟೋ ರಿಕ್ಷಾಗೆ ಕಾಯುತ್ತಿದ್ದರು. ಈ ಸಮಯಕ್ಕೆ ಕಾಯುತ್ತಿದ್ದ ಕಾಮುಕ ತಿವಾರಿ ನಟಿಗೆ ಡ್ರಾಪ್ ಕೊಡುತ್ತೇನೆ ಎಂದು ಪುಸಲಾಯಿಸಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಪೊಲೀಸರ ಪ್ರಕಾರ ಆರೋಪಿ ತಿವಾರಿಯ ವಿರುದ್ಧ 2003 ರಿಂದ 9 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

    ಘಟನೆ ನಂತರ ನಟಿಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ನಟಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ನಟಿ ಜನವರಿ 14ರಂದು ತಿವಾರಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾರಿಯನ್ನ ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

  • ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

    ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

    ಮುಂಬೈ: ದಂಗಲ್ ನಟಿ ಫಾತಿಮಾ ಸನಾ ಶೇಕ್ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಬಾಲಿವುಡ್‍ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

     

    ಇತ್ತೀಚೆಗೆ ಫಾತಿಮಾ ಮುಂಬೈನಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ತೆಗೆಯಲಾಗಿದ್ದು, ನಟಿಯ ಕಣ್ಣಿನ ಹುಬ್ಬು ಭಾಹಶಃ ಶೇವ್ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಫಾತಿಮಾ ಸಹನಟರಾದ ಆಮಿರ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ಜೊತೆ ಫೋಟೋಗಳಿಗೆ ಪೋಸ್ ನೀಡಿದ್ದು, ಇದರಲ್ಲಿಯೂ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿರೋದನ್ನ ಕಾಣಬಹುದು. ಚಿತ್ರದ ಸೆಟ್‍ನಲ್ಲಿ ತೆಗೆಯಲಾದ ಫೋಟೋಗಳನ್ನ ಫಾತಿಮಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಫಾತಿಮಾ ಹುಬ್ಬನ್ನು ಶೇವ್ ಮಾಡಿಸಿರಬಹುದು ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ.

    https://www.instagram.com/p/Be2XgWVnkRs/?utm_source=ig_embed

    ಕೆಲವು ದಿನಗಳ ಹಿಂದೆ ಫಾತಿಮಾ, ಕತ್ರೀನಾ ಹಾಗೂ ಆಮಿರ್ ಹಾಡೊಂದರ ಚಿತ್ರೀಕರಣದ ವೇಳೆ ತೆಗೆದ ಫೋಟೋ ಲೀಕ್ ಆಗಿತ್ತು. ಈ ಹಿಂದೆ ಚಿತ್ರದಲ್ಲಿನ ಆಮಿರ್ ಖಾನ್ ಲುಕ್ ನ ಫೋಟೋ ಕೂಡ ಲೀಕ್ ಆಗಿತ್ತು. ಚಿತ್ರದ ಬಗ್ಗೆ ಗುಟ್ಟು ಬಿಟ್ಟು ಕೊಡದ ಚಿತ್ರತಂಡ ಫೋಟೋಗಳು ಲೀಕ್ ಆದ ಬಳಿಕ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಸೆಟ್‍ನಲ್ಲಿ ಫೋನ್ ನಿಷೇಧಿಸಲಾಗಿತ್ತು. ಹಾಗೂ ಸೆಟ್‍ಗೆ ಭೇಟಿ ನೀಡುವವರಿಗೂ ನಿರ್ಬಂಧವಿತ್ತು.

    https://www.instagram.com/p/Be2bPc4Hai_/?taken-by=fatimasanashaikh

     ಥಗ್ಸ್ ಆಫ್ ಹೊಂದೊಸ್ತಾನ್ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು, ಇದೇ ವರ್ಷ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಧೂಮ್ 3 ನಿರ್ದೇಶಕ ವಿಜಯ್ ಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್‍ನಲ್ಲಿ ಚಿತ್ರ ಮೂಡಿಬಂದಿದೆ. 1839ರ ‘ಕನ್ಫೆಷನ್ಸ್ ಆಫ್ ಎ ಥಗ್’ ಎಂಬ ಕಾದಂಬರಿಯನ್ನ ಆಧರಿಸಿದ ಚಿತ್ರವಾಗಿದೆ.

  • ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

    ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!

    ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮೋದಿ ಭಾಷಣದ ಬಳಿಕ ಟ್ವಿಟ್ಟರ್‍ನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಮೋದಿ ಕಾಲೆಳೆದಿದ್ದು, ಇದಕ್ಕೆ ಶಾಸಕ ಜಮೀರ್ ಅಹಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಧಾನ ಮಂತ್ರಿಗಳಿಗೆ ಯಾರೇ ಆದರೂ ಗೌರವ ಕೊಡಬೇಕು. ಈ ರೀತಿ ಮಾತನಾಡಬಾರದು ಅಂತ ಶಾಸಕರು, ರಮ್ಯಾ ಟ್ವೀಟ್ ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ

    ಮೋದಿ ಕೇವಲ ರಾಜಕೀಯ ಭಾಷಣ ಮಾಡಿ ಹೋಗಿದ್ದಾರೆ. ಮಹದಾಯಿ ಬಗ್ಗೆ ಒಂದೇ ಒಂದು ಶಬ್ಧ ಮಾತನಾಡಿಲ್ಲ. ಯಾರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಭ್ರಷ್ಟಾಚಾರ ಮಾಡಿ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ನಮ್ಮ ಸಿಎಂ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಆದ್ರೆ ಮೋದಿ ಮಾಡಿದ ಆರೋಪಕ್ಕೆ ಒಂದೇ ಒಂದು ದಾಖಲೆ ಕೊಡಲಿ ಅಂತ ಅವರು ಸವಾಲೆಸೆದ್ರು. ಇದನ್ನೂ ಓದಿ: ಮೋದಿ ಭಾಷಣವನ್ನ ಮೂರು ಅಕ್ಷರಗಳಲ್ಲಿ ಟೀಕಿಸಿದ ರಮ್ಯಾ  

    ರಮ್ಯಾ ಹೇಳಿದ್ದೇನು?: ಮೋದಿ ಭಾಷಣದ ಬಳಿಕ ಟ್ವಿಟ್ವರ್‍ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾರ್ ತೀವ್ರಗೊಂಡಿತ್ತು. ನಶೆಯಲ್ಲಿದ್ದಾಗ ಹೀಗೆಲ್ಲಾ ಆಗುತ್ತೆ ಎಂದು ಹೇಳುವ ಮೂಲಕ ನಟಿ, ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿಯ ಕಾಲೆಳೆದಿದ್ದರು.  ಇದನ್ನೂ ಓದಿ: ಕನ್ನಡಿಗ ರಾಹುಲ್ ದ್ರಾವಿಡ್‍ ಬಗ್ಗೆ ಮೋದಿ ಪ್ರಶಂಸೆ

    ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್(TOP) ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್(POT) ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ. ಇದನ್ನೂ ಓದಿ: ಮೋದಿ ರ‍್ಯಾಲಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಲಾಭ

    ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ, ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ ಸರ್ಕಾರ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು. ರಮ್ಯಾ ಅವರ ಟ್ವೀಟ್ ಗೆ ನವರಸ ನಾಯಕ ಜಗ್ಗೇಶ್ ಕೂಡ ತಿರುಗೇಟು ನೀಡುವ ಮೂಲಕ ಕಿಡಿಕಾರಿದ್ದರು. ಇದನ್ನೂ ಓದಿ: ಬಿಜೆಪಿ ಪರಿವರ್ತನಾ ಸಮಾರೋಪ ಸಮಾರಂಭ ಮುಕ್ತಾಯ- ಮಹದಾಯಿ ಕುರಿತು ತುಟಿಬಿಚ್ಚದ ಮೋದಿ!

  • ಹಾರರ್ ಸಿನಿಮಾ ಶೂಟಿಂಗ್ ವೇಳೆ ಸಹನಟಿಯ ಮೇಲೆ ದಾಳಿ ಮಾಡಿದ್ಳು ದೆವ್ವ ಪಾತ್ರಧಾರಿ ನಟಿ- ವಿಡಿಯೋ ವೈರಲ್

    ಹಾರರ್ ಸಿನಿಮಾ ಶೂಟಿಂಗ್ ವೇಳೆ ಸಹನಟಿಯ ಮೇಲೆ ದಾಳಿ ಮಾಡಿದ್ಳು ದೆವ್ವ ಪಾತ್ರಧಾರಿ ನಟಿ- ವಿಡಿಯೋ ವೈರಲ್

    ನೋಮ್ ಪೆನ್: ಸಿನಿಮಾ ಚಿತ್ರೀಕರಣದ ವೇಳೆ ದೆವ್ವದ ವೇಷ ಧರಿಸಿದ್ದ ನಟಿಯೊಬ್ಬಳು ತನ್ನ ಸಹನಟಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕಾಂಬೋಡಿಯಾದಲ್ಲಿ ಹಾರರ್ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ದೆವ್ವದ ಪಾತ್ರ ನಿರ್ವಹಿಸುತ್ತಿದ್ದ ನಟಿ ಕಪ್ಪು ಸೀರೆಯುಟ್ಟಿದ್ದು, ವಿಕಾರವಾಗಿ ಮೇಕಪ್ ಮಾಡಲಾಗಿತ್ತು.

    ಸಿನಿಮಾ ಸೆಟ್‍ನಲ್ಲಿ ಇದ್ದಕ್ಕಿದ್ದಂತೆ ಆಕೆ ವಿಚಿತ್ರವಾಗಿ ವರ್ತಿಸಿದ್ದು, ತೆಳುವಾದ ವೈರ್‍ನಿಂದ ಬೇರೊಬ್ಬ ನಟಿಯ ಕತ್ತು ಬಿಗಿದಿದ್ದಾಳೆ. ದಾಳಿಗೊಳಗಾದ ನಟಿಗೆ ಕತ್ತಿನ ಭಾಗದಲ್ಲಿ ಗಾಯವಾಗಿದೆ.

    ವಿಡಿಯೋದಲ್ಲಿ ಚಿತ್ರತಂಡ ನಟಿಯ ಮೈಮೇಲೆ ದೆವ್ವ ಬಂದಿದೆ ಎಂಬಂತೆ ಬಿಂಬಿಸಿದ್ದು, ಆಕೆಯ ಜೊತೆ ಮಾತನಾಡಿ ನಟಿಯ ದೇಹವನ್ನು ಬಿಟ್ಟುಹೋಗುವಂತೆ ಕೇಳಿಕೊಳ್ತಿರೋದನ್ನ ಕಾಣಬಹುದು. ಘಟನೆಯ ಫೋಟೋ ಹಾಗೂ ವಿಡಿಯೋವನ್ನ ಫೇಸ್‍ಬುಕ್ ಬಳಕೆದಾರರಾದ ಖೋಮ್ ಸೊಖ್ಖಾಯ್‍ತಿಟ್ ಎಂಬವರು ಹಂಚಿಕೊಂಡಿದ್ದಾರೆ.

    ಹಲ್ಲೆಗೊಳಗಾದ ನಟಿ ಫೋನಿನಲ್ಲಿ ಮಾತನಾಡುತ್ತಾ ಅಳುತ್ತಿರೋದನ್ನ ಕಾಣಬಹುದು. ಘಟನೆಯಿಂದಾಗಿ ಆಕೆ ತುಂಬಾ ಭಯಭೀತಳಾಗಿದ್ದಳು ಎಂದು ವರದಿಯಾಗಿದೆ. ವಿಡಿಯೋ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಈ ಬಗ್ಗೆ ತಮಾಷೆ ಮಾಡಿದ್ರೆ, ಇನ್ನೂ ಕೆಲವರು ಇದು ನಿಜಾನಾ ಅಂತ ಹುಬ್ಬೇರಿಸಿದ್ದಾರೆ.

    ಆದ್ರೆ ನಟಿ ಬೇಕಂತಲೇ ಹೀಗೆಲ್ಲಾ ಮಾಡಿದಳಾ? ಇದೆಲ್ಲಾ ಸಿನಿಮಾ ಪ್ರಮೋಷನ್‍ಗಾಗಿ ನಡೆದ ಗಿಮಿಕ್ಕಾ ಎಂಬ ಪ್ರಶ್ನೆಗಳು ಮೂಡಿವೆ.

    https://www.facebook.com/visalsak.ratanak/videos/pcb.1410207952441699/1410207595775068/?type=3&theater

  • ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಟಿ ಸನುಷಾ ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ

    ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಟಿ ಸನುಷಾ ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ

    ತಿರುವನಂತಪುರಂ: ಇತ್ತೀಚಿಗೆ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರದ ನಟಿ ಸನುಷ ಸಂತೋಷ್ ಗೆ ರೈಲಿನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

    23 ವರ್ಷದ ನಟಿ ಸನುಷಾ ಸಂತೋಷ್ ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್‍ನ 2 ಟೈರ್ ಎಸಿ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದರು. ಸನುಷಾ ಮೇಲಿನ ಬರ್ತ್‍ನಲ್ಲಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರೈಲಿನಲ್ಲಿ ನಾನು ನಿದ್ದೆ ಮಾಡುವಾಗ ಯಾರೋ ನನ್ನ ತುಟಿಯ ಮೇಲೆ ಕೈ ಸವರುತ್ತಿದ್ದ. ಕಣ್ಣು ಬಿಟ್ಟು ನೋಡಿದಾಗ ಶಾಕ್ ಆಯ್ತು. ತಕ್ಷಣ ನಾನು ಆತನ ಕೈಯನ್ನು ಬಿಗಿಯಾಗಿ ಹಿಡಿದು, ಆತನ ಬೆರಳುಗಳನ್ನು ತಿರುಚಿದೆ ಎಂದು ಸನುಷಾ ತಿಳಿಸಿದ್ದಾರೆ.

    ನಂತರ ಆತನ ಕೈ ಹಿಡಿದು ಕೆಳಗೆ ಮಲಗಿದ ವ್ಯಕ್ತಿಯ ಸಹಾಯ ಕೇಳಿದೆ. ಆದರೆ ಅವರು ಯಾವುದೇ ಸಹಾಯ ಮಾಡಲಿಲ್ಲ. ನಾನು ಕಿರುಚುತ್ತಿದ್ದರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಈ ಘಟನೆ ಮಧ್ಯರಾತ್ರಿ ಸುಮಾರು 1.10ಕ್ಕೆ ನಡೆದಿದ್ದು, ಸ್ಕ್ರಿಪ್ಟ್ ರೈಟರ್ ಉನ್ನಿ ಹಾಗೂ ರಂಜಿತ್ ಎಂಬ ಮತ್ತೊಬ್ಬ ಪ್ರಯಾಣಿಕರು ಮಾತ್ರ ನನ್ನ ಸಹಾಯಕ್ಕೆ ಬಂದರು ಎಂದು ಸನುಷಾ ಹೇಳಿದ್ದಾರೆ.

    ಸಹಾಯಕ್ಕೆ ಬಂದ ಇಬ್ಬರು ಟಿಟಿಇ (ಟ್ರೈನ್ ಟಿಕೆಟ್ ಎಕ್ಸಾಮಿನರ್)ನನ್ನು ಕರೆಯಲು ಹೋದರು. ನಾನು ಆ ವ್ಯಕ್ತಿಯನ್ನು ಎಲ್ಲಿಯೂ ಹೋಗಲು ಬಿಡಲಿಲ್ಲ. ಟಿಟಿಇ ಬಂದು ಮಾಹಿತಿ ಪಡೆದ ನಂತರ ಮುಂದಿನ ರೈಲ್ವೇ ಸ್ಟೇಷನ್‍ನ ಪೊಲೀಸರಿಗೆ ಮಾಹಿತಿ ತಿಳಿಸಿದರು. ಅರ್ಧ ಗಂಟೆ ಆದ ಮೇಲೆ ನಾವು ತ್ರಿಶೂರ್ ತಲುಪಿದಾಗ ಪೊಲೀಸರು ಆತನನ್ನು ಬಂಧಿಸಿದರು. ಪೊಲೀಸರಿಗೆ ನಾನು ನನ್ನ ಹೇಳಿಕೆ ಕೊಟ್ಟು, ಅದೇ ರೈಲಿನಲ್ಲಿ ನನ್ನ ಪ್ರಯಾಣ ಮುಂದುವರೆಸಿದೆ ಎಂದು ಸನುಷಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆನ್ಟೋ ಬೋಸ್ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಹೆಬ್ಬುಲಿ ನಾಯಕಿಯ ಮೇಲೆ ಲೈಂಗಿಕ ಕಿರುಕುಳ