Tag: actress

  • ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿದುಕೊಳ್ಳುತ್ತೀರಾ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ ಸುದೀಪ್

    ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿದುಕೊಳ್ಳುತ್ತೀರಾ ಎಂದು ದಿವ್ಯಾ ಉರುಡುಗ ಕಾಲೆಳೆದ ಕಿಚ್ಚ ಸುದೀಪ್

    ಪ್ರೇಕ್ಷಕರ ಬಾಯಲ್ಲಿ ಸದ್ಯ ಮನೆಮಾತರಾಗಿರುವ ಶೋ ಅಂದ್ರೆ ಬಿಗ್ ಬಾಸ್, ಕಳೆದ ಒಂಭತ್ತು ಸೀಸನ್‌ನಿಂದ ಬಿಗ್ ಬಾಸ್ ಸಖತ್ ಮೋಡಿ ಮಾಡುತ್ತಲೇ ಬರುತ್ತಿದೆ. ಇದೀಗ ಟಿವಿ ಬಿಗ್ ಬಾಸ್(Bigg Boss) ಹೊಸ ಸೀಸನ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಇದೀಗ ಒಂದು ವಾರ ಕಳೆದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ದಿವ್ಯಾ ಉರುಡುಗ (Divya Uruduga) ಕಾಲೆಳೆದಿದ್ದಾರೆ ಕಿಚ್ಚ ಸುದೀಪ್.

     

    View this post on Instagram

     

    A post shared by DU✨ (@divya_uruduga)

    ಸ್ಯಾಂಡಲ್‌ವುಡ್ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8ರಲ್ಲಿ ಮೋಡಿ ಮಾಡಿದ್ದರು. ಎರಡನೇ ಬಾರಿ ಸ್ಪರ್ಧಿಯಾಗಿ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೆಟ್ ಆಗುತ್ತಿದ್ದಾರೆ. ಕಳೆದ ಬಾರಿ ಬೈಕ್ ರೇಸರ್ ಅರವಿಂದ್ ಜೊತೆ ದಿವ್ಯಾ ಹೆಸರು ಸಖತ್ ಸುದ್ದಿ ಮಾಡಿತ್ತು. ಬಳಿಕ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಮದುವೆಯ ಹಂತಕ್ಕೂ ಹೋಗಿದೆ ಎನ್ನಲಾಗಿತ್ತು. ಇದೀಗ ಈ ಸೀಸನ್ ದಿವ್ಯಾ ತಮ್ಮ ಪಾರ್ಟರ್ ಆಗಿ ಬೈಕ್ ರೇಸರ್ ಐಶ್ವರ್ಯಾ(Aishwarya) ಅವರನ್ನೇ ಸೆಲೆಕ್ಟ್ ಮಾಡಿರೋದನ್ನ ನೋಡಿ ಸುದೀಪ್ (Sudeep), ದಿವ್ಯಾ ಉರುಡುಗ ಅವರ ಕಾಲೆಳೆದಿದ್ದಾರೆ. ಇದನ್ನೂ ಓದಿ:ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

    ನಿಮಗೆ ಬೈಕರ್ ಸಿಗಲ್ಲಾ, ನೀವು ಅವರನ್ನೇ ಹಿಡಿಕೊತ್ತೀರಾ. ನೀವು ಬೈಕರ್‌ನ್ನೇ ಹುಡುಕುತ್ತೀರಾ ಹಂಗೆ ಅದು. ನೀವು ತಾನೇ ಐಶ್ವರ್ಯ ಅವರನ್ನ ಆಯ್ಕೆ ಮಾಡಿದ್ದು, ನೀವು ಕಳೆದ ಸೀಸನ್ ಯಾರನ್ನು ಬೈಕರ್ ಅಂತಾ ಅಂದುಕೊಂಡಿಲ್ಲಾ ಅಲ್ವಾ. ಅವರು ಬೈಕರ್ ಆದರು ಎಂದು ಪರೋಕ್ಷವಾಗಿ ಅರವಿಂದ್ ಹೆಸರು ಹೇಳದೇ ಕಿಚ್ಚ ಸುದೀಪ್ ದಿವ್ಯಾಗೆ ತಮಾಷೆ ಮಾಡಿದ್ದಾರೆ. ಕಿಚ್ಚ ಮತ್ತು ದಿವ್ಯಾ ಮಾತುಕಥೆ ನೋಡಿ ಮನೆ ಮಂದಿಯೆಲ್ಲಾ ನಕ್ಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಸೆಟ್ ಆಯ್ತು ಅನುಷ್ಕಾ ಶೆಟ್ಟಿ ಕಲ್ಯಾಣ

    ಕೊನೆಗೂ ಸೆಟ್ ಆಯ್ತು ಅನುಷ್ಕಾ ಶೆಟ್ಟಿ ಕಲ್ಯಾಣ

    ಸೌತ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಚೆಲುವೆ ಅನುಷ್ಕಾ ಶೆಟ್ಟಿಗೆ (Anushka Shetty) ನಲವತ್ತು ವರ್ಷವಾಗಿದ್ದರೂ ಆಕೆಯ ಮೇಲಿರುವ ಕ್ರೇಜ್ ಒಂದು ಚೂರು ಕಮ್ಮಿಯಾಗಿಲ್ಲ. ಸ್ವೀಟಿ ಹಸೆಮಣೆ ಏರಲಿದ್ದಾರೆ ಅಂದ್ರೆ ಅನುಷ್ಕಾ ಅಭಿಮಾನಿಗಳು ನಂಬಲು ಸಿದ್ಧರಿಲ್ಲ. ಕರಾವಳಿ ಬ್ಯೂಟಿಗೆ ತೆರೆಮರೆಯಲ್ಲಿ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

    ಅರುಂಧತಿ, ಭಾಗಮತಿ, ಬಾಹುಬಲಿ ಅಂತಾ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿರುವ ಪ್ರತಿಭಾನ್ವಿತ ನಟಿ ಅನುಷ್ಕಾ, ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಕರಾವಳಿ ನಟಿಯ ಮದುವೆ ವದಂತಿ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಗುರುಹಿರಿಯರು ನಿಶ್ಚಯಿಸಿದ ವರನೊಂದಿಗೆ ಮದುವೆಯಾಗಲು ಅನುಷ್ಕಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದನ್ನೂ ಓದಿ:ನಟ ವಿಶಾಲ್ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    `ಬಾಹುಬಲಿ’ ನಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ. ತಮ್ಮ ಕುಟುಂಬ ನೋಡಿರುವ ವರನೊಂದಿಗೆ ಸ್ವೀಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈ ಕುರಿತ ಗುಡ್ ನ್ಯೂಸ್ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅನುಚಿತವಾಗಿ ವರ್ತಿಸಿದ ಅಭಿಮಾನಿಗೆ ನಟಿ ಸಾನಿಯಾ ದಂಡಂ ದಶಗುಣಂ

    ಅನುಚಿತವಾಗಿ ವರ್ತಿಸಿದ ಅಭಿಮಾನಿಗೆ ನಟಿ ಸಾನಿಯಾ ದಂಡಂ ದಶಗುಣಂ

    ಲಯಾಳಂ ಸ್ಟಾರ್ ನಟಿ ಸಾನಿಯಾ ಐಯ್ಯಪ್ಪನ್ (Saniya Iyappan) ಸದ್ಯ `ಸ್ಯಾಟರ್ಡೆ ನೈಟ್’ (Saturday Night) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ನಟಿ ಸಾನಿಯಾ ಬಳಿ ಅನುಚಿತ ವರ್ತನೆ ಮಾಡಿದ್ದಕ್ಕಾಗಿ ಕಪಾಳಮೋಕ್ಷ ಮಾಡಿದ್ದಾರೆ.

     

    View this post on Instagram

     

    A post shared by Saniya Iyappan (@_saniya_iyappan_)

    ಮಾಲಿವುಡ್‌ನ(Mollywood) ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಸಾನಿಯಾ ಐಯ್ಯಪ್ಪನ್ ಸದ್ಯ `ಸ್ಯಾಟರ್ಡೆ ನೈಟ್’ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಿದೆ. ಕೇರಳದ ವಿವಿಧ ಕಡೆ ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾಗುತ್ತಿದೆ. ಚಿತ್ರತಂಡವು ಕ್ಯಾಲಿಕಟ್‌ನ ಮಾಲ್‌ವೊಂದರಲ್ಲಿ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಈ ವೇಳೆ ಸಾನಿಯಾ ಮತ್ತು ಆಕೆಯ ಸಹನಟಿಯ ಜೊತೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ:ರಿಲೇಶನ್ ಶಿಪ್ ಇಟ್ಕೊಳ್ಳೋಕೆ ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರಿಟ್ಟ ನಟಿ ಮಯೂರಿ

    ಭಾರಿ ನೂಕಾಟದ ನಡುವೆ ವೇದಿಕೆಯಿಂದ ನಟಿ ಸಾನಿಯಾ ಬರುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ನಟಿಯ ಮೈ ಮುಟ್ಟಿದ್ದಾನೆ. ತನ್ನ ಸಹನಟಿಗೂ ಕೂಡ ಇದೇ ಅನುಭವ ಆಗಿದೆ. ಕೂಡಲೇ ಸಾನಿಯಾ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Saniya Iyappan (@_saniya_iyappan_)

    ಪ್ರಚಾರ ಕಾರ್ಯದಲ್ಲಿರುವಾಗ ನಡೆದಿರುವ ಈ ಘಟನೆಯನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಸ್ಪಷ್ಟನೆ ನೀಡಿದ್ದಾರೆ. ಈ ಪೋಸ್ಟ್ ಕೂಡ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸತತ ಸಿನಿಮಾ ಸೋಲಿನ ನಂತರ ಶಸ್ತ್ರಚಿಕಿತ್ಸೆಗೆ ಮುಂದಾದ ನಟಿ ಪೂಜಾ ಹೆಗ್ಡೆ

    ಸತತ ಸಿನಿಮಾ ಸೋಲಿನ ನಂತರ ಶಸ್ತ್ರಚಿಕಿತ್ಸೆಗೆ ಮುಂದಾದ ನಟಿ ಪೂಜಾ ಹೆಗ್ಡೆ

    ಸೌತ್ ಸಿನಿಮಾಗಳ (ಮೂಲಕ‌ ಮೋಡಿ ಮಾಡಿರುವ ಕರಾವಳಿ ಸುಂದರಿ ಪೂಜಾ ಹೆಗ್ಡೆ (Pooja Hegde) ಮತ್ತೆ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗೆಟ್ಟಿರುವ ಪೂಜಾ, ಶಸ್ತ್ರಚಿಕಿತ್ಸೆಗೆ (Surgery) ಮುಂದಾಗಿದ್ದಾರೆ.

    ಬ್ಯೂಟಿ ಜೊತೆ ಪ್ರತಿಭೆ ಇರುವ ನಟಿ ಪೂಜಾಗೆ ಅದ್ಯಾಕೋ ಲಕ್ ಕೈ ಕೊಟ್ಟಿದೆ. ಈ‌ ಹಿಂದೆ ನಟಿಸಿದ ಸಿನಿಮಾಗಳಿಂದ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದ ನಟಿಗೆ ಈಗ ಅದೃಷ್ಟ ಕೈ ಕೊಟ್ಟಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ಪೂಜಾ ಹೆಗ್ಡೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಸೌಂದರ್ಯದ ಕಡೆ ಮತ್ತಷ್ಟು ಗಮನ ಹರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ಸಾಕಷ್ಟು ಕಲಾವಿದರು ತಮ್ಮ ವೃತ್ತಿಬದುಕಿನ ಬದಲಾವಣೆಗಾಗಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುತ್ತಾರೆ. ಅದೇ ಹಾದಿಯಲ್ಲಿ ಪೂಜಾ ಸಾಗುತ್ತಿದ್ದಾರೆ. ಮೂಗಿನ ಸರ್ಜರಿ ಮಾಡಿಸಲು ಪ್ಲ್ಯಾನ್ ಮಾಡಿದ್ದಾರೆ. ನಟಿಯ ಈ ನಿರ್ಧಾರ ಮುಂದೆ ವೃತ್ತಿ ಬದುಕಲ್ಲಿ ಹೊಸ ಬದಲಾವಣೆಯ ಜೊತೆ ಸಕ್ಸಸ್ ತಂದು ಕೊಡುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    Live Tv
    [brid partner=56869869 player=32851 video=960834 autoplay=true]

  • ಭಾರತದ ಟಾಪ್ 10 ನಾಯಕಿಯರಲ್ಲಿ ರಶ್ಮಿಕಾ ಮಂದಣ್ಣಗೂ ಸ್ಥಾನ: ಕನ್ನಡದಿಂದಲ್ಲ ಅನ್ನುವುದೇ ಬೇಸರ

    ಭಾರತದ ಟಾಪ್ 10 ನಾಯಕಿಯರಲ್ಲಿ ರಶ್ಮಿಕಾ ಮಂದಣ್ಣಗೂ ಸ್ಥಾನ: ಕನ್ನಡದಿಂದಲ್ಲ ಅನ್ನುವುದೇ ಬೇಸರ

    ಗಾಗಲೇ ಭಾರತದ ಟಾಪ್ (Top) 10 ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಆರ್ಮ್ಯಾಕ್ಸ್ ಸಂಸ್ಥೆ ಭಾರತದ ಟಾಪ್ 10 ನಟಿಯರ ಪಟ್ಟಿಯನ್ನೂ ರಿಲೀಸ್ ಮಾಡಿದೆ. ನಂಬರ್ ಒನ್ ನಾಯಕಿಯಾಗಿ ಸಮಂತಾ (Samantha) ಹೊರಹೊಮ್ಮಿದ್ದಾರೆ. ಬಾಲಿವುಡ್ ತಾರೆಯರನ್ನೂ ಅವರು ಹಿಂದಿಕ್ಕೆ ಈ ಸ್ಥಾನವನ್ನು ಪಡೆದುಕೊಂಡಿದ್ದು ವಿಶೇಷ. ಈ ಬಾರಿ ಇಬ್ಬರು ಬಾಲಿವುಡ್ ಕಲಾವಿದರು ಮಾತ್ರ ಟಾಪ್ ಟೆನ್‍ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದಕ್ಷಿಣದ ಕಲಾವಿದರೇ ಹೆಚ್ಚಿನ ಸ್ಥಾನ ಪಡೆದಿದ್ದಾರೆ.

    ಪ್ರತಿ ಸಲವೂ ಟಾಪ್ ಟೆನ್ ಪಟ್ಟಿಯಲ್ಲಿ ಬಹುತೇಕ ಬಾಲಿವುಡ್ (Bollywood) ನಟಿಯರೇ ಕಾಣಿಸಿಕೊಳ್ಳುತ್ತಿದ್ದರು. ಜೊತೆಗೆ ದಕ್ಷಿಣದ ಸಿನಿಮಾ ರಂಗ ಅಂದಾಕ್ಷಣ, ತಮಿಳು ಮತ್ತು ತೆಲುಗಿನ ನಟಿಯರೂ ಅದರಲ್ಲಿರುತ್ತಿದ್ದರು. ಕನ್ನಡದ ನಟಿ ಅಂದರೆ, ನೇರವಾಗಿ ಕನ್ನಡ ಸಿನಿಮಾದ ನಟನೆಗಾಗಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಒಬ್ಬರೇ ಒಬ್ಬರು ನಟಿಯರು ಈವರೆಗೂ ಕಾಣಿಸಿಕೊಂಡಿಲ್ಲ ಎನ್ನುವುದು ವಿಷಾದನೀಯ. ಈ ಬಾರಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪಟ್ಟಿಯಲ್ಲಿದ್ದರು. ಅದೂ ಕನ್ನಡ ಸಿನಿಮಾರಂಗದಿಂದ ಮಾಡಿ ಆಯ್ಕೆ ಅಲ್ಲ ಎನ್ನುವುದು ನೋವಿನ ಸಂಗತಿ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಭಾತರದ ಟಾಪ್ 10 ನಟಿಯರಲ್ಲಿ ರಶ್ಮಿಕಾ ಮಂದಣ್ಣಗೆ ಟಾಪ್ 6 ಸ್ಥಾನ ದೊರೆತಿದೆ. ಆಲಿಯಾ ಭಟ್ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನ ನಯನತಾರಾ, ನಾಲ್ಕನೇ ಸ್ಥಾನ ಕಾಜಲ್ ಅಗರ್ವಾಲಾ, ಐದನೇ ಸ್ಥಾನ ದೀಪಿಕಾ ಪಡುಕೋಣೆ (Deepika Padukone) ಪಾಲಾಗಿದೆ. ಕೀರ್ತಿ ಸುರೇಶ್ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಎಂಟನೇ ಸ್ಥಾನದಲ್ಲಿ ಕತ್ರಿನಾ ಕೈಫ್ (Katrina Kaif)ಇದ್ದಾರೆ 9ನೇ ಸ್ಥಾನದಲ್ಲಿ ಪೂಜಾ ಹೆಗಡೆ ಮತ್ತು 10ನೇ ಸ್ಥಾನದಲ್ಲಿ ಅನುಷ್ಕಾ ಶೆಟ್ಟಿ ಅವರ ಹೆಸರಿದೆ.

    Live Tv
    [brid partner=56869869 player=32851 video=960834 autoplay=true]

  • ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    ಬಾಲಿವುಡ್ ಬ್ಯೂಟಿ ಬಿಪಾಶಾ ಬಸು(Bipasha Basu) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ತಮ್ಮ ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ಸಂಚಲನ ಮೂಡಿಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಬೇಬಿ ಬಂಪ್ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ಬಿಟೌನ್‌ನಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಬಿಪಾಶಾ ಬಸು ಮತ್ತೆ ಸುದ್ದಿಯಲ್ಲಿದ್ದಾರೆ. ಬೇಡಿಕೆ ಇರುವಾಗಲೇ 2016ರಲ್ಲಿ ಕರಣ್ ಸಿಂಗ್(Karan Singh) ಜೊತೆ ಬಿಪಾಶಾ ಹಸೆಮಣೆ ಏರಿದ್ದರು. ಆರು ವರ್ಷಗಳ ನಂತರ ಇದೀಗ ತಾವು ತಾಯಿಯಾಗಿರುವ ಗುಡ್ ನ್ಯೂಸ್‌ನ ಅಭಿಮಾನಿಗಳೊಂದಿಗೆ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ, ಮೊದಲ ಬಾರಿಗೆ ಸಾರ್ವಜನಿಕವಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಪತಿ ರಣ್‌ಬೀರ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆಲಿಯಾ ಭಟ್

     

    View this post on Instagram

     

    A post shared by Viral Bhayani (@viralbhayani)

    ಮುಂಬೈನ ಸಲೂನ್‌ವೊಂದರಲ್ಲಿ ಬೇಬಿ ಬಂಪ್ ಲುಕ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಪ್ರಗ್ನೆನ್ಸಿ ಗ್ಲೋ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಟಿವಿ ಬಿಗ್ ಬಾಸ್‌ಗೆ ಈ ಕಿರುತೆರೆ ನಟಿ ಬರೋದು ಪಕ್ಕಾ

    ಟಿಟಿ ಬಿಗ್ ಬಾಸ್(Bigg boss) ಆಟಕ್ಕೆ ಬ್ರೇಕ್ ಬಿದ್ದಿದೆ. ಟಿವಿ ಸೀಸನ್‌ನ ಬಿಗ್ ಬಾಸ್ ಶುರುವಾಗಲು ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬುದರ ಬಗ್ಗೆ ಈಗಾಗಲೇ ಅಭಿಮಾನಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ.

    ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬರಲು, ಕೇವಲ ಒಂದು ವಾರ ಬಾಕಿ ಉಳಿದಿದೆ. ಈ ಹಿಂದಿನ 8 ಸೀಸನ್‌ಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳು ಇರಲಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ರೂಪೇಶ್, ಸಾನ್ಯ, ಆರ್ಯವರ್ಧನ್, ರಾಕೇಶ್ ಟಿವಿ ಬಿಗ್ ಬಾಸ್‌ನಲ್ಲಿರದ್ದಾರೆ. ಈ ಸೀಸನ್‌ನಲ್ಲಿ ನಟ ಅನಿರುದ್ಧ ಹೆಸರು ಕೇಲಿ ಬಂದ ಬೆನ್ನಲ್ಲೇ `ಕಮಲಿ’ ಖ್ಯಾತಿಯ ನಟಿ ಅಮೂಲ್ಯ ಓಂಕಾರ್ ಗೌಡ (Amulya Omkar Gowda) ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್

    ಕಿರುತೆರೆ `ಕಮಲಿ’ (Kamali Serial) ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಅಮೂಲ್ಯ ಇದೀಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಮುದ್ದು ಮುಖ, ಖಡಕ್ ನಟನೆಯ ಕರ್ನಾಟಕದ ಮನಗೆದ್ದಿರುವ ನಟಿ ಟಿವಿ ಬಿಗ್ ಬಾಸ್‌ಗೆ ಬರೋದು ಪಕ್ಕಾ ಎನ್ನಲಾಗುತ್ತಿದೆ.

    ಅಷ್ಟಕ್ಕೂ ನಟಿ ಅಮೂಲ್ಯ ಬಿಗ್ ಬಾಸ್‌ಗೆ ಬರೋದು ನಿಜಾನಾ ಅಥವಾ ಸುಳ್ಳು ಸುದ್ದಿನ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಇನ್ನೂ ಟಿವಿ ಬಿಗ್ ಬಾಸ್ ಸೆಪ್ಟೆಂಬರ್ 24ರಿಂದ ಖಾಸಗಿ ವಾಹಿನಿಯಲ್ಲಿ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯಕ್ಕೆ ಎಂಟ್ರಿ ಕೊಟ್ಟ `ಅಧ್ಯಕ್ಷ’ ನಟಿ ಆರೋಹಿತ

    ರಾಜಕೀಯಕ್ಕೆ ಎಂಟ್ರಿ ಕೊಟ್ಟ `ಅಧ್ಯಕ್ಷ’ ನಟಿ ಆರೋಹಿತ

    ಸ್ಯಾಂಡಲ್‌ವುಡ್ ನಟಿ ಆರೋಹಿತ (Aarohitha) ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ (AAP) ಬುಧವಾರ ನಟಿ ಆರೋಹಿತ ಸೇರ್ಪಡೆಯಾಗಿದ್ದಾರೆ. ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ನಟಿ ಆರೋಹಿತರನ್ನ ಸ್ವಾಗತಿಸಿದ್ದಾರೆ. ಇನ್ನು ಈ ವೇಳೆ ನಟಿ ವಸಂತನಗರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಬಯಕೆ ಅನ್ನು ವ್ಯಕ್ತಪಡಿಸಿದ್ದಾರೆ.

    ಕನ್ನಡದ ಆಟಗಾರ, ಕಿರಿಕ್ ಪಾರ್ಟಿ, ಗೌಡ್ರು ಹೋಟೆಲ್, ಜಗ್ಗಿ, ಅಧ್ಯಕ್ಷ, ಆಯುಷ್ಮಾನ್‌ಭವ ಸಿನಿಮಾಗಳಲ್ಲಿ ನಟಿ ಆರೋಹಿತ ಬಣ್ಣ ಹಚ್ಚಿದ್ದಾರೆ. ಬೆಂಗಳೂರಿನ ವಸಂತನಗರದ ನಿವಾಸಿಯಾಗಿರುವ ಆರೋಹಿತ ಅಲಿಯಾಸ್ ಪ್ರಿಯಾಂಕ ಬಿ.ಕಾಂ ಪದವೀಧರೆಯಾಗಿದ್ದು, ತಮ್ಮ ವ್ಯಾಸಂಗದ ನಂತರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ಛಾಪೂ ಮೂಡಿಸಿದ್ದ ಈ ನಟಿ ಇದೀಗ ರಾಜಕೀಯ ಕ್ಷೇತ್ರದಲ್ಲಿ ಜನಸೇವೆ ಮಾಡಲು ರೆಡಿಯಾಗಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ ಆರೋಹಿತ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ:‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ: ನಟ ಅಜಯ್ ದೇವಗನ್ ವಿರುದ್ಧ ದೂರು ದಾಖಲು

    ಈ ವೇಳೆ ಎಎಪಿ ಪಕ್ಷದ ಬಗ್ಗೆ ನಟಿ ಆರೋಹಿತ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಹಾಗೂ ದೇಶದೆಲ್ಲೆಡೆ ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಪಕ್ಷಕ್ಕೆ ನಾನು ಸೇರಿದ್ದೇನೆ ಎಂದು ಆರೋಹಿತ ಹೇಳಿದರು.

    ಇನ್ನೂ ಚಂದನವನದ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಆರೋಹಿತ, ಇದೀಗ ರಾಜಕೀಯ ರಂಗದಲ್ಲಿ ಛಾಪೂ ಮೂಡಿಸಲು ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಸಂಭ್ರಮದಲ್ಲಿ `ಸೀತಾ ರಾಮಂ’ ನಟಿ ಮೃಣಾಲ್ ಠಾಕೂರ್

    ಮದುವೆ ಸಂಭ್ರಮದಲ್ಲಿ `ಸೀತಾ ರಾಮಂ’ ನಟಿ ಮೃಣಾಲ್ ಠಾಕೂರ್

    `ಸೀತಾ ರಾಮಂ’ (Sita Ramam) ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಮೃಣಾಲ್ ಠಾಕೂರ್ (Mrunal Thakur) ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ನಟಿ ಮಿಂಚಿದ್ದಾರೆ. ಸದ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Mrunal Thakur (@mrunalthakur)

    ಮರಾಠಿ ಚಿತ್ರ ಮತ್ತು ಹಿಂದಿ ಸೀರಿಯಲ್ ಮತ್ತು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ಮೃಣಾಲ್ ಠಾಕೂರ್ ಈಗ `ಸೀತಾ ರಾಮಂ’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ನಟಿಗೆ ಭರ್ಜರಿ ಆಫರ್ಸ್‌ ಇದೀಗ ಅರಸಿ ಬರುತ್ತಿದೆ. ಸದ್ಯ ನಟಿ ಮೃಣಾಲ್ ಸ್ನೇಹಿತೆಯ ಮದುವೆಯ ಸಂಭ್ರಮದಲ್ಲಿದ್ದಾರೆ. ಸ್ನೇಹಿತೆ ಅನನ್ಯಾ ಮದುವೆಯಲ್ಲಿ ನಟಿ ಕುಣಿದು ಕುಪ್ಪಳಿದ್ದಾರೆ.

     

    View this post on Instagram

     

    A post shared by Mrunal Thakur (@mrunalthakur)

    ಅರಿಶಿನ, ಮೆಹೆಂದಿ, ಪ್ರತಿಯೊಂದು ಶಾಸ್ತçದಲ್ಲೂ ನಟಿ ಏಂಜಾಯ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಂಭ್ರಮದ ವೀಡಿಯೋ ಮತ್ತು ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ

     

    View this post on Instagram

     

    A post shared by Mrunal Thakur (@mrunalthakur)

    ಇತ್ತೀಚೆಗಷ್ಟೇ `ಸೀತಾ ರಾಮಂ’ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಮನೋಜ್ಞವಾಗಿ ನಟಿಸಿ ಮೃಣಾಲ್ ಸೈ ಎನಿಸಿಕೊಂಡಿದ್ದಾರೆ. ಸೀತಾ ರಾಮನ ಕಥೆಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ಈ ಚಿತ್ರದ ಸಕ್ಸಸ್ ನಂತರ `ಎನ್‌ಟಿಆರ್ 30′ (Ntr 30) ಚಿತ್ರಕ್ಕೆ ಎನ್‌ಟಿಆರ್‌ಗೆ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣದ ಸಾಕಷ್ಟು ಸಿನಿಮಾಗೆ ನಟಿಸಲು ಭರ್ಜರಿ ಅವಕಾಶವನ್ನ ನಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯ ಅಖಾಡಕ್ಕೆ ಸ್ಯಾಂಡಲ್‌ವುಡ್‌ ನಟಿ ಪೂಜಾ ರಮೇಶ್

    ರಾಜಕೀಯ ಅಖಾಡಕ್ಕೆ ಸ್ಯಾಂಡಲ್‌ವುಡ್‌ ನಟಿ ಪೂಜಾ ರಮೇಶ್

    ನ್ನಡದ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪೂಜಾ ರಮೆಶ್(Pooja Ramesh) ಇದೀಗ ರಾಜಕೀಯದತ್ತ(Politics) ಮುಖ ಮಾಡಿದ್ದಾರೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ಅಖಾಡದಲ್ಲಿ ಮಿಂಚಲು ನಟಿ ಸಜ್ಜಾಗಿದ್ದಾರೆ.

    ಸ್ಯಾಂಡಲ್‌ವುಡ್‌ನಲ್ಲಿ(Sandalwood) ಪೇಪರ್ ದೋಣಿ, ನಿರುದ್ಯೋಗಿ, ಲಹರಿ, ತಾಂಡವ, ಮಹಾಕಾಳಿ, ಸಿನಿಮಾಗಳ ಗಮನ ಸೆಳೆದ ನಟಿ ಪೂಜಾ ರಮೇಶ್ ಇದೀಗ ರಾಜಕೀಯಕ್ಕೆ ಬರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕರಾವಳಿ ಮೂಲದ ನಟಿ ರಾಯಚೂರಿನಲ್ಲಿ ಸ್ಪರ್ಧೆಗೆ ನಿಲ್ಲುವುದಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ


    ತಾವು ರಾಯಚೂರಿನಿಂದ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ. ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ಪೂಜಾ ರಮೇಶ್ ಹೇಳಿದ್ದಾರೆ. ರಾಯಚೂರಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಕಾರಣ ತಿಳಿಸಿರುವ ನಟಿ ಪೂಜಾ, ಇಲ್ಲಿ ಕೆಲ ಸಮಯದಿಂದಲೂ ನಾನು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಈ ಭಾಗದ ಜನರೊಟ್ಟಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಹಾಗಾಗಿ ನಾನು ಈ ರಾಯಚೂರಿನಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದಾರೆ.

    ಸದ್ಯ ಬಣ್ಣದ ಲೋಕಕ್ಕೆ ಬ್ರೇಕ್ ಹಾಕಿ, ಚುನಾವಣೆ ಅಖಾಡದಲ್ಲಿ ಇಳಿಯಲು ಪೂಜಾ ರಮೇಶ್ ರೆಡಿಯಾಗಿದ್ದಾರೆ. ಚಂದನವನದಲ್ಲಿ ಗುರುತಿಸಿಕೊಂಡಿರುವ ಹಾಗೆ, ರಾಜಕೀಯದಲ್ಲೂ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]