Tag: actress Tara

  • ರೆಬೆಲ್ ಸ್ಟಾರ್ ಅಂಬರೀಶ್‌ಗೂ `ಕರ್ನಾಟಕ ರತ್ನ’ ನೀಡುವಂತೆ ಮನವಿ

    ರೆಬೆಲ್ ಸ್ಟಾರ್ ಅಂಬರೀಶ್‌ಗೂ `ಕರ್ನಾಟಕ ರತ್ನ’ ನೀಡುವಂತೆ ಮನವಿ

    ಸಿನಿಮಾ ಹಾಗೂ ರಾಜಕೀಯದಲ್ಲಿ ಅಜಾತಶತ್ರುವಾಗಿ ಬೆಳೆದು ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟ ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರಿಗೂ `ಕರ್ನಾಟಕ ರತ್ನ’ (Karnataka Ratna) ಪುರಸ್ಕಾರ ನೀಡುವಂತೆ ಅಭಿಮಾನಿಗಳು ಹಾಗೂ ಹಿರಿಯ ನಟಿ ತಾರಾ (Actress Tara) ಮನವಿ ಮಾಡಿದ್ದಾರೆ.

    ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನ ಭೇಟಿಯಾಗಿ ನಟಿ ತಾರಾ ಅನುರಾಧ ಮನವಿ ಪತ್ರ ಕೊಟ್ಟಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಲ್ಲದೇ ಕಲಿಯುಗದ ಕರ್ಣ ಎಂದು ಕರೆಸಿಕೊಳ್ಳುವ ಜನಮೆಚ್ಚಿದ ಕಲಾವಿದ ಅಂಬರೀಶ್. ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದರು, ರಾಜಕೀಯದಲ್ಲಿದ್ದರೂ ಪಕ್ಷಗಳ ಬೇದಭಾವವಿಲ್ಲದೆ ಸರ್ವರಿಗೂ ಇಷ್ಟವಾಗುವ ಸಜ್ಜನ ರಾಜಕಾರಣಿಯಾಗಿದ್ದರು.

    ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿರುವ ಈ ಕಲಾವಿದನಿಗೆ ತಕ್ಕ ಗೌರವ ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿಕೊಂಡಿದ್ದರು. ಇತ್ತೀಚೆಗೆ ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾದೇವಿಯವರಿಗೆ ಸರ್ಕಾರ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು.

    ಇದರ ಬೆನ್ನಲ್ಲೇ ಮರಣೋತ್ತರ `ಕರ್ನಾಟಕ ರತ್ನ’ ಗೌರವವನ್ನ ರೆಬೆಲ್ ಸ್ಟಾರ್ ಅಂಬರೀಶ್‌ಗೂ ಕೊಡುವಂತೆ ಒತ್ತಾಯ ಕೇಳಿಬಂದಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಪರವಾಗಿ ಹಿರಿಯ ನಟಿ ತಾರಾ ಅನುರಾಧ, ಡಿಸಿಎಂ ಬಳಿ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

  • ನಟಿ ಜಯಂತಿ ನನಗೆ ತಾಯಿ ಸ್ವರೂಪಿ: ನಟಿ ತಾರಾ

    ನಟಿ ಜಯಂತಿ ನನಗೆ ತಾಯಿ ಸ್ವರೂಪಿ: ನಟಿ ತಾರಾ

     – ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

    ಬೆಂಗಳೂರು: ಹಿರಿಯ ನಟಿ ಜಯಂತಿ ಅವರು ನನಗೆ ತಾಯಿಯ ಸ್ವರೂಪವೆಂದು ನಟಿ ತಾರಾ ಕಣ್ಣೀರಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇನ್ನೂ ಹೆಚ್ಚು ಆರೋಗ್ಯವನ್ನು ಕೊಟ್ಟಿದ್ದಾರೆ ಚೆನ್ನಾಗಿರುತ್ತಿತ್ತು. ಅವರನ್ನು ಕಳೆದುಕೊಂಡು ನಾವು ನಿಜವಾಗಲು ಬಡವರಾಗಿದ್ದೇವೆ. ಅವರು ನನಗೆ ತಾಯಿ ಸ್ವರೂಪಿ. ಅವರು ಸಿಕ್ಕಗೆಲ್ಲ ನನಗೆ ನೇಲ್ ಪಾಲಿಶ್, ಲಿಪ್ಸ್ಟಿಕ್ ಹಾಕು ಎಂದು ಕೇಳುತ್ತಿದ್ದರು. ಆಗ ನನಗೆ ನಗು ಬರುತ್ತಿತ್ತು. ಅಷ್ಟು ಖುಷಿಯಿಂದ ಇದ್ದವರನ್ನು ಈ ಪರಿಸ್ಥಿತಿಯಲ್ಲಿ ನೋಡಲು ತುಂಬಾ ಕಷ್ಟವಾಗುತ್ತೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

    ಜಯಂತಿ ಅವರನ್ನು ಅಂತಿಮವಾಗಿ ನಮ್ಮ ಮನೆಯಲ್ಲಿ ನೋಡಿದ್ದೆ. ಏಕೆಂದರೆ ನಮ್ಮ ಮನೆಯಲ್ಲಿ ಒಂದು ಪೂಜೆಯನ್ನು ಏರ್ಪಡಿಸಿದ್ದೆವು. ಈ ಕಾರಣಕ್ಕೆ ಅಮ್ಮ ಅಲ್ಲಿಗೆ ಬಂದಿದ್ದರು. ಕೊರೊನಾ ಇದ್ದ ಕಾರಣ ನಾವು ಹೆಚ್ಚು ಜನರನ್ನು ಕರೆದಿಲ್ಲ. ಅವರಿಗೆ ನಮ್ಮ ಮನೆಯ ಪೂಜೆಗೆ ಬರುವುದು ತುಂಬಾ ಇಷ್ಟ. ಅವರಿಗೆ ನಮ್ಮ ಮನೆಯ ಅಡುಗೆ, ಊಟ ಎಂದರೆ ತುಂಬಾ ಇಷ್ಟ. ಒಂದು ವೇಳೆ ನಾನು ಅವರನ್ನು ಪೂಜೆಗೆ ಕರೆದಿಲ್ಲವೆಂದರೆ ಅವರು ನನಗೆ ಕರೆ ಮಾಡಿ ಬೈಯುತ್ತಿದ್ದರು ಎಂದು ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ

    ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನ ಏರ್ಪಡಿಸಬೇಕು ಎಂದು ಕುಟುಂಬದವರು ಮತ್ತು ಕಲಾ ಕುಟುಂಬದವರು ತೀರ್ಮಾನಿಸಿ ಸರ್ಕಾರಕ್ಕೆ ಅನುಮತಿ ಕೊಡಿ ಎಂದು ಕೇಳಿದ ತಕ್ಷಣ ಸರ್ಕಾರ ಅನುಮತಿಯನ್ನು ನೀಡಿದೆ. ಇಲ್ಲಿನ ಪುರೋಹಿತರು ಬಂದು ಪೂಜಾ ಕೈಂಕರ್ಯಗಳನ್ನು ಮುಗಿಸಿದ ಕೊಡಲೇ ನಾವು ಕಲಾಕ್ಷೇತ್ರಕ್ಕೆ ಜಯಂತಿ ಅಮ್ಮನವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತೆ ಎಂದು ತಿಳಿಸಿದರು.

    ಅವರ ಸಂಸ್ಕಾರ ಎಲ್ಲಿ, ಯಾವಾಗ ನಡೆಯುತ್ತೆ ಎಂದು ಅವರ ಪುತ್ರ ಕೃಷ್ಣ ಕುಮಾರ್ ಅವರು ನಿರ್ಧರಿಸಿ ಹೇಳುತ್ತಾರೆ. ಅವರನ್ನು ನಾನು ಮಾತ್ರವಲ್ಲ ಇಡೀ ಕನ್ನಡ ಚಲನಚಿತ್ರ ತಂಡ ಮತ್ತು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ ಎಂದರು.

  • ಸಿಎಂ ಪರಿಹಾರ ನಿಧಿಗೆ ಅರಣ್ಯ ಅಭಿವೃದ್ಧಿ ನಿಗಮದಿಂದ 25 ಲಕ್ಷ ರೂ, ಚೆಕ್ ಹಸ್ತಾಂತರಿಸಿದ ನಟಿ ತಾರಾ

    ಸಿಎಂ ಪರಿಹಾರ ನಿಧಿಗೆ ಅರಣ್ಯ ಅಭಿವೃದ್ಧಿ ನಿಗಮದಿಂದ 25 ಲಕ್ಷ ರೂ, ಚೆಕ್ ಹಸ್ತಾಂತರಿಸಿದ ನಟಿ ತಾರಾ

    ಬೆಂಗಳೂರು: ಕೊರೊನಾ 2ನೇ ಅಲೆಯ ಅಬ್ಬರಕ್ಕೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಅರೆಷ್ಟೋ ಜನ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ನರಳಾಡಿ ಪ್ರಾಣ ತೆರುತ್ತಿದ್ದಾರೆ. ಕೊರೊನಾ ಪರಿಹಾರ ನಿಧಿಗಾಗಿ ಅದೆಷ್ಟೋ ಜನ ಪಿಎಂ ಕೇರ್ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಫಂಡ್ ನೀಡುತ್ತಿದ್ದಾರೆ. ನಟಿ ತಾರಾ 25 ಲಕ್ಷ ರೂಪಾಯಿ ಚೆಕ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೈಗೆ ಹಸ್ತಾಂತರಿಸಿದ್ದಾರೆ.

    ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ. ನಟಿ ತಾರಾ ಅನುರಾಧ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ಈ ಚೆಕ್ ಅನ್ನು ಮುಖ್ಯಮಂತ್ರಿಗಳಿಗೆ ಇಂದು ಹಸ್ತಾಂತರಿಸಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಪಾಠಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಕೋವಿಡ್ ನಿರ್ವಹಣೆಗೆ 25 ಲಕ್ಷ ದೇಣಿಗೆ ನೀಡಲಾಗಿದೆ. ಇಂತಹ ಸಮಯದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ನಮ್ಮ ನಿಗಮದಿಂದಲೂ ಸಾಧ್ಯವಾದಷ್ಟು ಸಹಕಾರ ಕೋವಿಡ್ ನಿಯಂತ್ರಣಕ್ಕೆ ನೀಡಿದ್ದೇವೆ ಎಂದು ನಟಿ ತಾರಾ ಹೇಳಿದ್ದಾರೆ. ನೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮತ್ತು ಕೊರೊನ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ

  • ನಿಮ್ಮತ್ರ ಕ್ಷಿಪಣಿ ಇದ್ರೆ ನಮ್ಮೋರನ್ನು ಯಾಕೆ ಹುಡುಕಲಿಲ್ಲ? – ಬಿಜೆಪಿಗೆ ಮೀನುಗಾರ ಮುಖಂಡ ಪ್ರಶ್ನೆ

    ನಿಮ್ಮತ್ರ ಕ್ಷಿಪಣಿ ಇದ್ರೆ ನಮ್ಮೋರನ್ನು ಯಾಕೆ ಹುಡುಕಲಿಲ್ಲ? – ಬಿಜೆಪಿಗೆ ಮೀನುಗಾರ ಮುಖಂಡ ಪ್ರಶ್ನೆ

    ಉಡುಪಿ: ಮಲ್ಪೆ ಕಡಲ ತೀರದಿಂದ ತ್ರಿಭುಜ ಹೆಸರಿನ ಹಡಗಿನೊಂದಿಗೆ ನಾಪತ್ತೆಯಾದ ಏಳು ಮೀನುಗಾರರನ್ನು ಹುಡುಕೋದಕ್ಕೆ ಆಗಲ್ವ? ಪ್ರಧಾನಿ ಮೋದಿ ಬಳಿ ಇರುವ ದೊಡ್ಡ ದೊಡ್ಡ ಕ್ಷಿಪಣಿ ಏನಕ್ಕದು? ಎಂದು ಉಡುಪಿ ಪ್ರಭಾವಿ ಮೀನುಗಾರ ಮುಖಂಡರೊಬ್ಬರು ಬಿಜೆಪಿ ನಾಯಕರಿಗೆ ಮಾತಿನ ಚಾಟಿ ಬೀಸಿದ್ದಾರೆ.

    ಮೀನುಗಾರರ ಮುಖಂಡರು ಹಾಗೂ ಗುತ್ತಿಗೆದಾರರು ಆಗಿರುವ ಡಾ. ಜಿ.ಶಂಕರ್ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಪ್ರಚಾರ ಸಭೆ ಮುಗಿಸಿ ನಟಿ ತಾರಾ ಬಗ್ವಾಡಿ ದೇವಸ್ಥಾನಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ.

    ನಟಿ ತಾರಾ ಅವರು ಪ್ರಚಾರ ಸಭೆಯ ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಅವರು ಅಲ್ಲಿಂದ ತೆರಳಿದ ವೇಳೆ ಧಾರ್ಮಿಕ ಸಭೆಯ ವೇದಿಕೆ ಬಳಿ ಶಂಕರ್ ಹಾಗೂ ಬಿಜೆಪಿ ಶಾಸಕ ಸುಕುಮಾರ ಅವರು ಎದುರಾಗಿದ್ದರು. ಈ ವೇಳೆ ಶಾಸಕರನ್ನು ಪ್ರಶ್ನೆ ಮಾಡಿದ ಶಂಕರ್ ಅವರು, ಯಾರೇ ಆಗಲಿ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುದಿಲ್ಲಾ ಇನ್ನು. ನಿಮಗೆ ನೆತ್ತಿಗೆ ಏರಿದೆಯೇ, ಕಾಂಗ್ರೆಸ್ ನವರನ್ನು ಬಿಡಿ. ನೀವು ಏನು ಮಾಡಿದ್ದೀರಿ ಹೇಳಿ. ನಾನು ನಿಮ್ಮ ಗುರು ಮಾಜಿ ಸಿಎಂ ಯಡಿಯೂರಪ್ಪ ನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಹಾಗೆಯೇ ನನ್ನ ಗುರುಗಳು ಆದರೆ ಕೆಲಸ ಮಾಡಬೇಕಾಗಿತ್ತಲ್ಲಾ. ಕರಾವಳಿಯವರ ಮತಗಳು ನಿಮಗೇ ಬೇಡವೇ? ಕೆಲಸ ಮಾಡಲ್ವಾ? ನೀವು ಬಂದು ಏನು ಮಾಡಿದ್ದೀರಿ ಹೇಳಿ? ಮೀನುಗಾರರಿಗೆ 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ಟಿದ್ದೀರಾ? ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ ಎಂದು ಹೇಳ್ತೀರಿ, ಮೂರು ತಿಂಗಳಿಂದ ಕಳೆದು ಹೋದ ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಇದನ್ನು ಕಂಡ ಇತರೇ ಮುಖಂಡರು, ಶಾಸಕ ಸುಕುಮಾರ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರ ಮುಖಂಡರು ಜಿ. ಶಂಕರ್ ಅವರನ್ನು ಸಂತೈಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾಮೂಲಿ. ನಿಮ್ಮ ಕೆಲಸಗಳನ್ನು ಮಾಡಿಕೊಡುವ ಎಂದು ಹೇಳಿದ್ದಾರೆ.

  • ಕ್ಷಮೆ ಕೇಳಿ ಇಲ್ಲವೇ ರಾಜೀನಾಮೆ ನೀಡಿ – ಸ್ಪೀಕರ್ ವಿರುದ್ಧ ತಾರಾ ಅಸಮಾಧಾನ

    ಕ್ಷಮೆ ಕೇಳಿ ಇಲ್ಲವೇ ರಾಜೀನಾಮೆ ನೀಡಿ – ಸ್ಪೀಕರ್ ವಿರುದ್ಧ ತಾರಾ ಅಸಮಾಧಾನ

    ಬೆಂಗಳೂರು: ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯನ್ನು ವಿವರಿಸಲು ರೇಪ್ ಉದಾಹರಣೆಯನ್ನು ಸದನದಲ್ಲಿ ಪ್ರಸ್ತಾಪಿಸಿದ ಬಗ್ಗೆ ಬಿಜೆಪಿ ನಾಯಕಿ ತಾರಾ ಅವರು ಬೇಸರ ವ್ಯಕ್ತಪಡಿಸಿ, ರಾಜೀನಾಮೆಗೆ ಒತ್ತಾಯಿಸಿದ್ದಾರೆ.

    ವಿಧಾನಸಭೆ ಸದನದಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಅತ್ಯಂತ ಹಗುರವಾಗಿ ಪರಿಗಣಿಸಿ, ಅತ್ಯಾಚಾರದ ವಿಚಾರಣೆಯನ್ನು ಹಾಸ್ಯ ಪ್ರಸಂಗವೆಂಬಂತೆ ಆಡಿರುವ ನಿಮ್ಮ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ. ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಸದನದ ಸದಸ್ಯರ ಮಾತು, ನಡಾವಳಿಗಳನ್ನು ಘನತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಮರೆತು ನೀವು ಹೀಗೆ ಮಾತನಾಡಿರುವುದು ಬಹಳ ಖೇದಕರ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸದನದಲ್ಲಿ ನಿಮ್ಮ ಆ ಮಾತುಗಳನ್ನು ತಮಾಷೆಯೆಂಬಂತೆ ನಗುತ್ತಾ ಆಸ್ವಾದಿಸಿದ ಸದನದ ಘನ ಸದಸ್ಯರ ಹೀನ ಮನಸ್ಥಿತಿ ಮತ್ತು ಇಂತಹದ್ದನ್ನು ಕಂಡೂ ಖಂಡಿಸದೇ ಉಳಿದ ಮಹಿಳಾ ಸದಸ್ಯರ ನಿಷ್ಕ್ರಿಯತೆ ಸಹ ಅಷ್ಟೇ ಖಂಡನೀಯ. ನೀವು ಆಡಿರುವ ಮಾತುಗಳಿಗೆ ಸದನದಲ್ಲಿ ಕ್ಷಮೆ ಕೇಳಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ನಿಮ್ಮಂತಹ ಅಸೂಕ್ಷ್ಮ ಮನಸ್ಸಿನ ಸಭಾಧ್ಯಕ್ಷರು ನಮ್ಮ ರಾಜ್ಯಕ್ಕೆ ಖಂಡಿತ ಬೇಡ ಎಂದು ತಿಳಿಸಿದ್ದಾರೆ.

    ರಮೇಶಣ್ಣನ ಬಗಗೆ ನನಗೆ ತುಂಬಾ ಹೆಮ್ಮೆ ಇದ್ದು, ಸದನದಲ್ಲಿ ಅವರ ತಾಯಿಯನ್ನು ನೆನೆದು ಬಾವುಕರಾಗಿದ್ದ ರಮೇಶಣ್ಣ ಇಂದಿಗೂ ಮಹಿಳೆಯರನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ತಮ್ಮ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದು ಹೇಳಿಕೆ ನೀಡಿರುವುದು ನಮಗೆ ತುಂಬಾ ಬೇಸರ ಮೂಡಿಸಿದೆ. ನಿಮ್ಮಿಂದ ಇಂತಹ ಮಹಿಳಾ ವಿರೋಧಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಅಣ್ಣ ಎಂದು ಖೇದ ವ್ಯಕ್ತಪಡಿಸಿದ್ದಾರೆ.

    50 ಕೋಟಿ ರೂ. ಸ್ಪೀಕರ್ ಅವರಿಗೆ ನೀಡಲಾಗಿದೆ ಎಂಬ ಆಡಿಯೋ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದ ರಮೇಶ್ ಕುಮಾರ್ ಅವರು ಭಾವುಕರಾಗಿದ್ದರು. ಅಲ್ಲದೇ ನನ್ನ ಕುಟುಂಬ, ಬೆಂಬಲಿಗರು, ಪತ್ನಿ, ಮಕ್ಕಳಿಗೆ ನನ್ನ ಮುಖ ಹೇಗೆ ತೋರಿಸುವುದು ಎಂದು ಸ್ಪೀಕರ್ ನುಡಿದ್ದರು. ಆದರೆ ಎರಡು ಪಕ್ಷಗಳ ನಾಯಕರು ಸ್ಪೀಕರ್ ಅವರಿಗೆ ಬೆಂಬಲ ನೀಡಿ ನಿಮ್ಮನ್ನು ಬೀದಿಗೆ ತಂದಿಟ್ಟವರು ಎಂದು ಪರಸ್ಪರ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸುವ ಸಂದರ್ಭದಲ್ಲಿ ರೇಪ್ ಸಂತ್ರಸ್ತೆಯ ಉದಾಹರಣೆ ನೀಡಿ ಸ್ಪೀಕರ್ ಅವರು ಚಾಟಿ ಬೀಸಿದ್ದರು.

    “ನನಗೆ ಹೆಂಗಸರ ಬಗ್ಗೆ ಬಹಳ ಗೌರವ ಇದೆ. ಅವರನ್ನು ಎಂದೂ ಅಗೌರವದಿಂದ ನಡೆಸಿಕೊಂಡಿಲ್ಲ” ಇತ್ಯಾದಿ ಮಾತುಗಳನ್ನು ದಯವಿಟ್ಟು ಆಡಬೇಡಿ. ಅಂತಹ ಯಾವ ಸಮರ್ಥನೆಗಳೂ ಬೇಡ. ನೀವು ಆಡಿರುವ ಮಾತು ಹೊಣೆಗೇಡಿತನದ ಮಾತು ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವೆ ರಾಜಿನಾಮೆ ನೀಡಿ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv