Tag: actor

  • ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಕನ್ಫ್ಯೂಷನ್, ಥ್ರಿಲ್ಲರ್ ಸಿನಿಮಾ ಅಲ್ಲ, ನಮ್ದು ಟ್ರುಥ್‍ಫುಲ್ ಸಿನಿಮಾ: ಉಪೇಂದ್ರ

    ಮೈಸೂರು: ಸ್ಯಾಂಡಲ್ ವುಡ್ ನಟ ಕಮ್ ಕೆಪಿಜೆಪಿ ಸ್ಥಾಪಕ ಉಪೇಂದ್ರ ಇಂದು ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಪ್ರಜಾಕೀಯ ಪಕ್ಷದ ಸಂಘಟನೆ ಕುರಿತು ಮಾತನಾಡಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ. ನಮ್ಮದು ಥ್ರಿಲ್ಲರ್ ಸಿನಿಮಾನು ಅಲ್ಲ. ಇದೊಂದು ಟ್ರುಥ್ ಫುಲ್ ಸಿನಿಮಾ. ಅರ್ಥ ಆಗದೆ ಇರೋರಿಗೆ ಇದು ಹಾರರ್ ಸಿನಿಮಾ ಅಂತ ತನ್ನದೇ ಶೈಲಿಯಲ್ಲಿ ಡೈಲಾಗ್ ಹೊಡೆದ್ರು.

    ನಾನೂ ಮತ ಹಾಕಿ ಅಂತ ಬೀಕ್ಷೆ ಬೇಡುತ್ತಿಲ್ಲ. ನಾನೂ ದೇಶ ಸೇವೆ ಮಾಡಲು ಬಂದಿದ್ದೇನೆ. ನೀವೂ ಗೆಲ್ಲಿಸಬೇಕು ಹೊರತು ನಾನೂ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ. ನಾನೂ ಗೆಲ್ಲುತ್ತೇನೆ ಎನ್ನುತ್ತಿಲ್ಲ ನಿಮ್ಮ ಗೆಲುವು ಎನ್ನುತ್ತಿದ್ದೇನೆ. ನನಗೆ ಗಣ್ಯರು, ಹಿರಿಯರು ಬೆಂಬಲ ನೀಡಿದ್ದಾರೆ. ಮೈಸೂರು ಯದುವಂಶ ಮಹಾರಾಜ ಯದುವೀರ್ ಕೂಡ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಹೆಸರು ಹೇಳುವೆ. ಈವರೆಗೂ ಯಾವ ನಟರು ನನ್ನ ಪಾರ್ಟಿಗೆ ಸೇರುವುದಾಗಿ ಹೇಳಿಲ್ಲ. ಆದ್ರೆ ನಟ ಶಿವಣ್ಣ, ಯಶ್ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಅಂತ ಅವರು ಹೇಳಿದ್ರು.

    ರಾಜಕಾರಣ ಅಂದ್ರೆ ಹಿಂಗೆ ಇದೆ ಅಂತ ನಂಬಿ ಬಿಟ್ಟಿದ್ದೇವೆ. ಅದನ್ನ ಬದಲಾವಣೆ ಹೇಗೆ ಅನ್ನೋದೆ ದೊಡ್ಡ ಕುತೂಹಲವಾಗಿದೆ. ಅದಕ್ಕಾಗಿ ಕೆಪಿಜೆಪಿ ಪಕ್ಷ ಕ್ಯಾಶ್‍ಲೆಶ್ ಪಾರ್ಟಿ ಹುಟ್ಟುಹಾಕಿದ್ದೇವೆ. ಈ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ. ನಾವು ಪಾರ್ಟಿ ಆರಂಭಿಸಿದಾಗ ಕೇವಲ 10% ಜನರಿಗೆ ಗೊತ್ತಾಗಿತ್ತು. ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಗೂ ತಲುಪಿದೆ. ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅದಕ್ಕಾಗಿಯೇ ನಾವು ಆ್ಯಪ್ ಬಿಡುಗಡೆ ಮಾಡಿದ್ದೇವೆ. ವೆಬ್‍ಸೈಟ್ ಮೂಲಕ ನಮ್ಮನ್ನ ಸಂಪರ್ಕಿಸಬಹುದು. ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು ಅಂತ ಹೇಳಿದ್ರು.

    ನಾವು ಕ್ಷೇತ್ರವಾರು ಮೈಕ್ರೋ ಪ್ಲಾನ್ ಮಾಡಬೇಕು ಎಂದಿದ್ದೇವೆ. ಹೇಗೆ ಸರ್ಕಾರ ನಡೆಸಬೇಕು.? ಅದು ಸಂಪೂರ್ಣ ಪಾರದರ್ಶಕತೆ ಇರಬೇಕು. ಮೊದಲ ಹೆಜ್ಜೆಯೆ ನಾವು ಸರಿಯಾಗಿ ಇಡಬೇಕು. ನಾನು ನಾಯಕ ಆಗುತ್ತೇನೆ ಅಂತ ನಮ್ಮ ಪಕ್ಷಕ್ಕೆ ಬರಬೇಡಿ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಬನ್ನಿ. ಇಲ್ಲವಾದ್ರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಅಂತ ತನ್ನ ಪಕ್ಷಕ್ಕೆ ಆಗಮಿಸುವವರಿಗೆ ಷರತ್ತು ಹಾಕಿದ್ರು.

    ಇದನ್ನೂ ಓದಿ; ಉಪೇಂದ್ರ ರಾಜಕೀಯ ಎಂಟ್ರಿಗೆ ಯಶ್ ಹೇಳಿದ್ದು ಹೀಗೆ

    ನನ್ನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಆ ರೀತಿ ಆಯೋಗದಲ್ಲಿ ದೂರು ದಾಖಲಾದ್ರೆ ಕಾನೂನು ಹೋರಾಟ ಮಾಡುತ್ತೇನೆ. ನಾನೇನು ಹಣದ ವಿಚಾರವಾಗಿ ತಪ್ಪಾಗಿ ಮಾತನಾಡಿಲ್ಲ. ನೀವು ನನ್ನನ್ನ ಪ್ರಶ್ನೆ ಮಾಡಿದ್ರೆ ಹಾಗಂತ ನಿಮ್ಮ ಮೇಲೆ ಕೇಸ್ ಹಾಕಲು ಸಾಧ್ಯವೇ ಅಂತ ಉಪ್ಪಿ ಪತ್ರಕರ್ತರಿಗೆ ಪ್ರಶ್ನೆ ಹಾಕಿದ್ರು.

  • ತಾನೊಬ್ಬ ದೊಡ್ಡ ನಟ ಅಂದ್ಕೊಂಡು ರಾಜಕಾರಣಿಗಳನ್ನು ಟೀಕಿಸುವುದು ಸರಿಯಲ್ಲ: ರೈಗೆ ಸಿಂಹ ತಿರುಗೇಟು

    ತಾನೊಬ್ಬ ದೊಡ್ಡ ನಟ ಅಂದ್ಕೊಂಡು ರಾಜಕಾರಣಿಗಳನ್ನು ಟೀಕಿಸುವುದು ಸರಿಯಲ್ಲ: ರೈಗೆ ಸಿಂಹ ತಿರುಗೇಟು

    ಮೈಸೂರು: ನಟ ಪ್ರಕಾಶ್ ರೈ ನಾನೊಬ್ಬ ದೊಡ್ಡ ನಟ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಡಾ.ರಾಜ್, ಅಮಿತಾಬ್, ಎನ್.ಟಿ.ಆರ್ ಯಾರೂ ಕೂಡ ನಾನು ದೊಡ್ಡ ನಟ ಅಂತ ಹೇಳಿಕೊಂಡಿಲ್ಲ. ಹೀಗಾಗಿ ರೈ ಹೇಳಿಕೆ ಒಂದು ರೀತಿಯ ಅಭಾಸ ಸೃಷ್ಠಿಸುತ್ತದೆ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟ ಅಷ್ಟೇ. ಇವರು ತಮ್ಮನ್ನ ದೊಡ್ಡ ನಟ ಅಂದುಕೊಂಡು ರಾಜಕಾರಣಿಗಳನ್ನ ಟೀಕೆ ಮಾಡೋದು ಸರಿಯಲ್ಲ. ಪ್ರಕಾಶ್ ರೈ “ಸ್ಪಿಟ್ ಅಂಡ್ ರನ್ ಥರ. ಗುದ್ದು ಓಡೋದಲ್ಲ. ಉಗಿದು ಓಡೋದು”. ಆದ್ರೆ ನಾನು ಅವರಂತೆ ಇರೋಕೆ ಆಗೋಲ್ಲ. ನನಗೆ ಜವಾಬ್ದಾರಿ ಇದೆ, ಕ್ಷೇತ್ರ ಇದೆ. ಅವರಂತೆ ನಾನು ಓಡಿ ಹೋಗೋಕೆ ಆಗೋಲ್ಲ ಅಂತ ಟಾಂಗ್ ನೀಡಿದ್ರು.

    ನಟ ಪ್ರಕಾಶ್ ರೈ ಕುರಿತು ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಅವರಿಗೆ ಮೋದಿ, ಯೋಗಿ ಆದಿತ್ಯನಾಥ್, ಟ್ರಂಪ್ ಚೈನಾ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ಹಕ್ಕಿದೆ. ಅಂತೆಯೇ ಇವರನ್ನು ಪ್ರಶ್ನೆ ಮಾಡುವ ಹಕ್ಕು ಸಹ ಸಾರ್ವಜನಿಕರಿಗೆ ಹಾಗೂ ನನಗೆ ಇದೆ. ಉತ್ತರಪ್ರದೇಶದ ಮಕ್ಕಳ ಮರಣಕ್ಕೆ ಮಿಡಿಯುವ ಇವರ ಆತ್ಮಸಾಕ್ಷಿ. ಕೋಲಾರದಲ್ಲಿ ಆದ ಮಕ್ಕಳ ಸಾವಿನ ಸರಣಿ ಇವರು ಯಾಕೆ ಮಾತನಾಡೋಲ್ಲ. ಇತರರನ್ನು ಪ್ರಶ್ನೆ ಮಾಡುವ ಧಾವಂತದಲ್ಲಿ ದ್ವಂದ್ವ ನಿಲುವನ್ನು ಬಹಿರಂಗೊಳಿಸುತ್ತಿದ್ದಾರೆ. ಸಚಿವ ರಮಾನಾಥ್ ರೈ ಜೊತೆ ವೇದಿಕೆ ಹಂಚಿಕೊಳ್ಳುವ ಇವರು ಶರತ್ ಮಡಿವಾಳ ಹತ್ಯೆ ಬಗ್ಗೆ ಯಾಕೆ ಪ್ರಶ್ನಿಸೋಲ್ಲ ಅಂತ ಕಿಡಿಕಾರಿದ್ರು.

    ದೇಶದಲ್ಲಿ ಮಾತನಾಡಲು ಭಯವಾಗುತ್ತಿದೆ ಎಂಬ ಪ್ರಕಾಶ್ ರೈ ಹೇಳಿಕೆಗೆ ಇದೇ ಪ್ರತಿಕ್ರಿಯಿಸಿದ ಅವರು, ಇವರೇ ಮೋದಿ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಇದಕ್ಕಿಂತ ಸ್ವಾತಂತ್ರ್ಯ ಇನ್ನೆನು ಬೇಕಿದೆ. ಮೋದಿ ಬಗ್ಗೆ ಯಾರೇ ಏನೆ ಮಾತನಾಡಿದ್ರು ಅವರು ಸುಮ್ಮನೆ ಇದ್ದಾರೆ. ಇದಕ್ಕಿಂತ ವಾಕ್ ಸ್ವಾತಂತ್ರ್ಯ ಇನ್ಯಾವ ದೇಶದಲ್ಲಿದೆ ಅಂದ್ರು.

  • ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈ

    ಮೋದಿ, ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಟಾಂಗ್ ನೀಡಿದ ನಟ ಪ್ರಕಾಶ್ ರೈ

    ಬೆಂಗಳೂರು: ಹಿಂದೂ ಭಯೋತ್ಪಾದನೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ನಟ ಪ್ರಕಾಶ್ ರೈ ಈಗ ನಾನು ಯಾವುದೇ ಪಂಥ ಅಥವಾ ಬ್ರಾಂಡ್‍ ಗೆ ಸೇರಿದವಲ್ಲ, ನಾನು ಪ್ರಚಾರಕ್ಕಾಗಿ ಮಾತನಾಡಲ್ಲ, ರಾಜಕೀಯ ನನ್ನ ಕ್ಷೇತ್ರ ಅಲ್ಲ ಅಂತ ಹೇಳಿದ್ದಾರೆ.

    ಪ್ರೆಸ್ ಕ್ಲಬ್ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನನಗೆ ಯಾವ ಪಕ್ಷದ ಮೇಲೂ ನಂಬಿಕೆ ಇಲ್ಲ. ಈಗಿರುವ ಪಕ್ಷಗಳ ಮುಖವಾಣಿಯಾಗಿ ಇರಲು ಇಷ್ಟ ಪಡಲ್ಲ ಅಂದಿದ್ದಾರೆ.

    ಪ್ರಕಾಶ್ ರೈ ಕೊಲ್ಲಿ ಅನ್ನುವ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಮಾತನಾಡುವರು ಮಾಡಲ್ಲ. ಇಂತಹ ಹೇಳಿಕೆಗಳನ್ನು ಅಯ್ಯೋ ಪಾಪ ಅಂತ ನೋಡ್ತಿನಿ. ಬರೀ ನನ್ನ ಬಗ್ಗೆ ಒಳ್ಳೆಯದ್ದನ್ನು ಮಾತ್ರ ಸ್ವೀಕರಿಸುವುದಿಲ್ಲ. ಬೇರೆಯವರ ಅಭಿಪ್ರಾಯ ನೋಡಬೇಕಲ್ಲ ಅಂತ ಹೇಳಿದ್ದಾರೆ.

    ಜಿಎಸ್‍ಟಿ ಕೇವಲ ಬಿಜೆಪಿ, ಮೋದಿ ಮಾತ್ರ ತಂದಿದ್ದಲ್ಲ. ಆದ್ರೆ ಎಲ್ಲಾ ರಾಜ್ಯಗಳ ಸಿಎಂಗಳು ಕೂತು ಮಾತನಾಡಿ ಮಾಡಿರೋದು. ಜಿಎಸ್‍ ಟಿ ಬಗ್ಗೆ ಮಾತನಾಡಿದರೆ ತಪ್ಪಾಗಿ ತಿಳಿಯುತ್ತಾರೆ. ರೈ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾನೆ ಅನ್ನೋದು ಎಷ್ಟು ಸರಿ. ಕುಂಬಾರನ ನೋವು, ಜೇನು ಸಾಕಾಣಿಕೆಯವ ನೋವಿನ ಬಗ್ಗೆ ಮಾತನಾಡಿದ್ದೇನೆ ಅಂತ ಹೇಳಿದ್ರು.

    ಬಿಜೆಪಿ ನಾಯಕನನ್ನು ಪ್ರಶ್ನೆ ಮಾಡಬೇಡ ಅಂಥ ಹೇಳಲಿ. ಅದು ಬಿಟ್ಟು ಸೊಂಟದ ಕೆಳಗಿನ ಮಾತುಗಳನ್ನಾಡುವುದು ಎಷ್ಟು ಸರಿ. ಮಗನ ಸಾವು ಎಷ್ಟು ನೋವು ಅನ್ನೋದು ತಂದೆಗೆ ಗೊತ್ತು. ಯಾರ ಪಕ್ಕದಲ್ಲಿ ಮಲಗಿದ್ದ ಅಂಥ ಮಾತನಾಡುವುದು ಎಷ್ಟು ಸರಿ ಹೇಳಿ ಅಂತ ಸಂಸದ ಪ್ರತಾಪ್ ಸಿಂಹ ವಿರುದ್ಧ ರೈ ಕಿಡಿಕಾರಿದ್ದಾರೆ.

    ಮಾತೃ ಭಾಷೆ ಬಹಳ ಮುಖ್ಯ. ಕನ್ನಡ ಉಳಿಸೋಣ, ಬೆಳೆಸೋಣ. ಅಂತೆಯೇ ಬೇರೆ ಭಾಷೆಯನ್ನು ಕೂಡ ಕಲಿಯೋಣ. ಆದ್ರೆ ಹೇರಿಕೆ ಮಾಡುವುದು ಸರಿ ಅಲ್ಲ ಅಂದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಹೆದರಿಸುವ ಪರಿಸ್ಥಿತಿ ಜಾಸ್ತಿಯಾಗುತ್ತಿದೆ. ಆದ್ರೆ ಹಿಂದೆ ಕೂಡ ಹತ್ತಿಕ್ಕುವ ಕೆಲಸ ಇತ್ತು. ಇಷ್ಟರ ಮಟ್ಟಿಗೆ ಇರಲಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದ ಬಗ್ಗೆ ಮಾತಾಡ್ತಾ ಇದ್ರು. ಆದ್ರೆ ಈಗ ಜಾತಿ, ಧರ್ಮ ಅಂತ ಮಾತಾಡ್ತಾರೆ. ಈಗ ಜನ ಎದ್ದು ನಿಂತು ಮಾತಾಡೋಕೂ ಹೆದರ್ತಾರೆ ಅಂತ ಮೋದಿ ಸರ್ಕಾರಕ್ಕೆ ರೈ ಟಾಂಗ್ ನೀಡಿದ್ರು.

    ರಾಜಕೀಯ ನನ್ನ ಕೆಲಸ ಅಲ್ಲ. ಮುಂದೆ ರಾಜಕೀಯ ಪಕ್ಷ ಕಟ್ಟುವ ಉದ್ದೇಶ ಇಲ್ಲ. ನಾನು ಕಂಫರ್ಟ್ ಜೋನ್ ಗೆ ಬಂದ ಮೇಲೆ ಸುಮ್ಮನೇ ಕೂರುವುದು ಸತ್ತಂತೆ. ಈಗ ಮಾತನಾಡುವುದು ಎಸ್ಕೇಪಿಸಂ ಅನ್ನಿಸುತ್ತೆ ಆದ್ರೆ ಮಾತನಾಡುವುದು ನಿಲ್ಲಿಸಿ ಅನ್ನೋದು ಸರಿ ಇಲ್ಲ ಅಂದ್ರು.

    ಇದೇ ವೇಳೆ ಸಿನಿಮಾ ಹಾಲ್‍ ಗಳಲ್ಲಿ ದೇಶಭಕ್ತಿ ಗೀತೆಗಳಿಗೆ ಎದ್ದು ನಿಲ್ಲುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೆಚ್ಚು ಜನ ಎದ್ದು ನಿಲ್ತಾರೆ ಅನ್ನೋದು ನಂಬೋದಿಲ್ಲ. ಸಿನಿಮಾ ಮಂದಿರಗಳಲ್ಲಿ ಎದ್ದು ನಿಂತು ದೇಶಭಕ್ತಿ ತೋರಿಸ್ತಾರೆ ಅಂತ ನನಗೆ ಅನ್ನಿಸೋದಿಲ್ಲ. ದೇಶಭಕ್ತಿಯನ್ನು ಸಿನಿಮಾ ಮಂದಿರದಲ್ಲಿ ಎದ್ದು ನಿಂತು ತೋರಿಸುವ ಅವಶ್ಯಕತೆ ಇಲ್ಲ ಅಂತ ಅವರು ನುಡಿದ್ರು.

    ಯಾವುದೇ ಪ್ರಶ್ನೆ ಇದ್ದರೇ ಅದನ್ನು ಸೆನ್ಸರ್ ಬೋರ್ಡ್‍ಗೆ ಕೇಳಿ. ಇಲ್ಲವಾದ್ರೆ ಸೆಟ್‍ ಗೆ ಹೋಗಿ ಒಡೆದು ಹಾಕುವುದು ಎಷ್ಟು ಸರಿ. ಸೆನ್ಸರ್ ಬೋರ್ಡ್ ಇದೆ. ಅದಕ್ಕೆ ಬಿಡಿ. ನೈತಿಕ ಪೊಲೀಸ್ ಗಿರಿ ಮಾಡಬೇಡಿ ಅಂತ ಪದ್ಮಾವತಿ ಸಿನಿಮಾ ವಿವಾದದ ವಿಚಾರದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

    ಕನ್ನಡ ಧ್ವಜದಿಂದ ಕನ್ನಡಕ್ಕೆ ನಿಜವಾಗಲೂ ಗುರುತಿಸುವಿಕೆ ಸಿಗೋದಾದ್ರೆ ಸಿಗಲಿ. ಡಬ್ಬಿಂಗ್ ಚಿತ್ರ ನೋಡಬೇಡಿ ಅನ್ನೋ ಪ್ರಚಾರ, ಹೋರಾಟಗಳು ನಡೆಯಲಿ. ಅದು ಬಿಟ್ಟು ಡಬ್ಬಿಂಗ್ ಚಿತ್ರಕ್ಕೆ ತಡೆ ಮಾಡಿದ್ರೆ ಕಾನೂನು ಅಡ್ಡ ಬರುತ್ತೆ ಅಂದ್ರು.

     

  • ಕುಂದಾಪುರದಿಂದ ಸ್ಫರ್ಧಿಸುತ್ತಾರೆ ಅನ್ನೋದಿಕ್ಕೆ ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದು ಹೀಗೆ

    ಕುಂದಾಪುರದಿಂದ ಸ್ಫರ್ಧಿಸುತ್ತಾರೆ ಅನ್ನೋದಿಕ್ಕೆ ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದು ಹೀಗೆ

    ಬೆಂಗಳೂರು: ನಾನು ಕುಂದಾಪುರದಿಂದ ಸ್ಪರ್ಧಿಸುತ್ತೇನೆಂಬುದು ಸುಳ್ಳು ವಿಚಾರ. ಎಲ್ಲ ಅಭ್ಯರ್ಥಿಗಳು ಆದ ಮೇಲೆ ನಾನು ನಿಲ್ಲುವ ಬಗ್ಗೆ ಹೇಳ್ತಿನಿ. ನಾನು ಎಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಇಷ್ಟರಲ್ಲೇ ಹೇಳ್ತೀನಿ ಅಂತ ರಿಯಲ್ ಸ್ಟಾರ್ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಮುಕ್ತ ಅವಕಾಶವಿದ್ದು, ಯಾರು ಬೇಕಾದರೂ ಸಂಪರ್ಕ ಮಾಡಬಹುದು. ವೈಯುಕ್ತಿಕ ಸಂದರ್ಶನ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಬಗ್ಗೆ ವಿವರ, ಸಮಸ್ಯೆಗಳ ಅರಿವಿರಬೇಕು. ವಿದ್ಯಾರ್ಹತೆ ಇಲ್ಲಿ ಪರಿಗಣಿಸಲಾಗುವುದಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಲು ಇಚ್ಛಿಸುವವರು ಒಂದು ತಿಂಗಳ ಒಳಗೆ ಅಪ್ಲಿಕೇಷನ್ ಫಿಲ್ ಮಾಡಿ ಕಳಿಸಬೇಕು ಅಂತ ಹೇಳಿದ್ರು.

    ಮಹಿಳೆಯರು ಕೂಡ ನಮ್ಮ ಪಕ್ಷಕ್ಕೆ ಅಭ್ಯರ್ಥಿಯಾಗಿ ಬರಲು ಆಸಕ್ತಿ ತೋರಿಸಿದ್ದಾರೆ. ಮಹಿಳೆಯರಿಗೂ ಮುಕ್ತ ಅವಕಾಶ ನಮ್ಮಲಿದೆ. ಒಳ್ಳೆ ಒಳ್ಳೆ ಐಡಿಯಾಗಳನ್ಮು ತೆಗೆದುಕೊಂಡು ಬನ್ನಿ ಅಂತ ಉಪ್ಪಿ ಕರೆ ಕೊಟ್ಟಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸ್ಪರ್ಧೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಗೆ ಇಂತದ್ದೇ ಎಂಬ ಮಾನದಂಡವಿಲ್ಲ. ಅವಿದ್ಯಾವಂತರಿಗೂ ಪಕ್ಷದಲ್ಲಿದೆ ಅವಕಾಶ. ಒಂದು ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಡೆಡ್ ಲೈನ್, ಸಂವಿಧಾನಕ್ಕನುಗುಣವಾಗಿ ಕಾಲಂ ಇಟ್ಟಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ ಅಂದ್ರು.

    ವೆಬ್ ಸೈಟ್,ಆಪ್ ಲಾಂಚ್: ಇಂದಿನ ಕಾರ್ಯಕ್ರಮದಿಂದ ಕುಟುಂಬ ಸದಸ್ಯರನ್ನ ಹೊರಗಿಟ್ಟ ಉಪೇಂದ್ರ ಅವರು, ಪ್ರಜಾಕೀಯ ವೆಬ್ ಸೈಟ್ ಲೋಕಾರ್ಪಣೆ ಮಾಡಿದ್ರು. ನಗ್ನ ಸತ್ಯ ಎಂಬ ಹೆಡ್ ನಲ್ಲಿ ಹಲವು ಮಾಹಿತಿ ಹೊರಬರಲಿದ್ದು, ಅಭ್ಯರ್ಥಿಗಳ ಮಾನದಂಡದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ರು.

    https://www.kpjpuppi.org ಉಪೇಂದ್ರ ವೆಬ್ ಸೈಟ್ ಇದಾಗಿದ್ದು, ಈ ವೆಬ್ ಸೈಟ್ ನಲ್ಲಿ ಜನರಿಗೆ ಮಾಹಿತಿ ನೀಡಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯರ್ಥಿಯಾಗ ಬಯಸುವವರು ಇದರಲ್ಲಿ ಡಿಟೇಲ್ಸ್ ಅಪ್ಡೇಟ್ ಮಾಡಬೇಕು. ವಿಧಾನಸಭಾ ಕ್ಷೇತ್ರಕ್ಕೆ ಏನೇನು ಬೇಕೆಂಬ ಬಗ್ಗೆ ಮಾಹಿತಿಯನ್ನು ಜನರಿಗೆ ಈ ವೆಬ್ ಸೈಟ್ ನಲ್ಲಿ ನೀಡಲಿದ್ದೇವೆ ಅಂದ್ರು. ಪ್ರಜಾಕೀಯ ಟ್ಯಾಗ್ ಲೈನ್ ನಲ್ಲಿ ಕರ್ನಾಟಕ ಧ್ವಜದ ಮಾದರಿಯಲ್ಲಿ ಆಪ್ ಲೋಕಾರ್ಪಣೆಯಾಯಿತು.

    ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕೂಡಾ ಪಟ್ಟಿ ಮಾಡಿ ಕಳುಹಿಸಿ. ಈ ಪಕ್ಷಕ್ಕೆ ಸೇರಬಯಸುವವರಿಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಗ್ರಾಮ ಪಂಚಾಯ್ತಿ, ನಗರ ಸಭೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕ ಅಭ್ಯರ್ಥಿಗಳು ನಮ್ಮ ವೆಬ್‍ಗೆ ಡಿಟೇಲ್ಸ್ ಕಳಿಸಬಹುದು ಅಂತ ತಿಳಿಸಿದ್ರು.

    ವೇದಿಕೆಯಲ್ಲಿ ಚೇರ್ ಗಳನ್ನ ಚುನಾವಣಾ ಅಭ್ಯರ್ಥಿಗಳಿಗಾಗಿ ಖಾಲಿ ಉಳಿಸಿದ ಉಪೇಂದ್ರ, ನಮ್ಮ ಪಕ್ಷ ಒಂದು ಮುಕ್ತವಾದ ವೇದಿಕೆ. ಖಾಲಿ ಕುರ್ಚಿಗಳನ್ನು ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಪಕ್ಷದ ಒಂದು ಆಪ್, ಒಂದು ವೆಬ್ ಸೈಟ್ ಮಾಡಿದ್ದೇವೆ. ಅದರಲ್ಲಿ ಪಕ್ಷದ ಎಲ್ಲವೂ ಒಳಗೊಂಡಿರುತ್ತೆ. ಮೈಕೋ ನವೀನ್ ಮತ್ತು ಸ್ನೇಹಿತರು ವೆಬ್‍ಸೈಟ್ ಡಿಸೈನ್ ಮಾಡಿದ್ದಾರೆ ಅಂತ ನಟ ಉಪೇಂದ್ರ ವಿವರಿಸಿದ್ರು.

    ಬದುಕುವುದಕ್ಕೆ ಕೆಲಸ ಅನಿವಾರ್ಯ. ಇದೂ ಇದೆ ವೃತ್ತಿಯೂ ಇದೆ. ಬದುಕುವುದಕ್ಕೆ ಅದೂ ಅನಿವಾರ್ಯವಾಗಿದೆ. ಇದರಲ್ಲೇ ಮುಂದುವರಿಯುತ್ತೇನೆ. ಅನಿವಾರ್ಯವಾದರೆ ಅಲ್ಲಿಗೂ ಹೋಗ್ತೇನೆ ಅಂತ ಹೇಳಿದ್ರು. ಇನ್ನು ಪಕ್ಷ ಉದ್ಘಾಟನೆಯಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಕುರಿತು ಮಾತನಾಡಿದ ಅವರು, ಬಿಜೆಪಿ ಅವರು ತಪ್ಪಾಗಿ ತಿಳ್ಕೊಂಡಿದ್ರು. ಯಾರೋ ಮಾಡಿದ ವಿಡಿಯೋಗೆ ನನ್ನ ಟೀಕೆ ಮಾಡಿದ್ರು. ಅವರಿಗೆ ವಾಸ್ತವ ತಿಳಿಸಿದ್ದೆ, ಬಳಿಕ ಸರಿ ಹೋಗಿದೆ. ನಾನು ಯಾರನ್ನೂ ದೂಷಿಸುವುದಿಲ್ಲ ಅಂತ ಅಂದ್ರು.

    ನಿರ್ಮಾಪಕ ಸೌಂದರ್ಯ ಜಗದೀಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಈ ವೇಳೆ ಭಾಗಿಯಾಗಿದ್ದರು.

    https://www.youtube.com/watch?v=oFdyrl5xSTg

  • ಖಳನಟರಾದ ಅನಿಲ್, ಉದಯ್ ದುರಂತ ಸಾವಿಗೆ ಒಂದು ವರ್ಷ

    ಖಳನಟರಾದ ಅನಿಲ್, ಉದಯ್ ದುರಂತ ಸಾವಿಗೆ ಒಂದು ವರ್ಷ

    ಬೆಂಗಳೂರು: `ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿಗೆ ಇಂದು ಒಂದು ವರ್ಷ.

    ಹೌದು. ಕಳೆದ ವರ್ಷ ಇದೇ ದಿನ ಮಧ್ಯಾಹ್ನ ನಟ ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಸ್ಟಂಟ್ ಮಾಡಲು ಹೋಗಿ ಉದಯ್ ಮತ್ತು ಅನಿಲ್ ಮೇಲಿನಿಂದ ತಿಪ್ಪಗೊಂಡನಹಳ್ಳಿ ಕೆರೆಯ ನೀರಿನ ಆಳಕ್ಕೆ ಬಿದ್ದು ಸಾವಿಗೀಡಾಗಿದ್ದರು. ಹೀಗಾಗಿ ಅನಿಲ್ ಮತ್ತು ಉದಯ್ ಅವರ ದುರಂತ ಸಾವಿಗೆ ಇಂದು ವರ್ಷವಾದ ಹಿನ್ನೆಲೆಯಲ್ಲಿ ಸ್ನೇಹಿತರು ಕುಟುಂಬಸ್ಥರ ಉಪಸ್ಥಿತಿಯಲ್ಲಿ ಅವರ ಮೊದಲನೇ ಪುಣ್ಯ ತಿಥಿ ಕಾರ್ಯಕ್ರಮ ಮಾಡಲಾಗುತ್ತಿದೆ.

    ಬೆಳಗ್ಗೆ ಈ ಇಬ್ಬರು ನಟರ ಕುಟುಂಬಸ್ಥರು ಬನಶಂಕರಿ ರುದ್ರಭೂಮಿಯಲ್ಲಿ ಅನಿಲ್, ಉದಯ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅನಿಲ್, ಉದಯ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ, ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ.

    ಇದನ್ನೂ ಓದಿ: ಮೇ.12ರಂದು ಮಾಸ್ತಿಗುಡಿ ಬಿಡುಗಡೆ

    ಇಷ್ಟು ಮಾತ್ರವಲ್ಲದೇ ಕದಿರೇನಹಳ್ಳಿ ಬ್ರಿಜ್ಡ್ ಸರ್ಕಲ್‍ನಲ್ಲಿ ಅನಿಲ್ ಉದಯ್ ಸ್ಮಾರಕ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದ್ದು ಮುಂದಿನ ವರ್ಷದಲ್ಲಿ ಉದ್ಘಾಟನೆಯಾಗಲಿದೆ. ಕದಿರೇನಹಳ್ಳಿ ಬ್ರಿಡ್ಜ್ ಮೇಲೆ ನಡೆಯುತ್ತಿರುವ ಪುಣ್ಯತಿಥಿ ಆಚರಣೆಯಲ್ಲಿ ಅನಿಲ್ ಪತ್ನಿ ರಮ್ಯಾ, ಅನಿಲ್ ತಾಯಿ ವಿಜಯಲಕ್ಷ್ಮಿ ಉದಯ್ ತಾಯಿ ಕೌಶಲ್ಯ ಭಾಗಿಯಾಗಿದ್ದಾರೆ.

    ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪಿ ಗೌಡ ಚಾರಿಟೇಬಲ್ ಟ್ರಸ್ಟ್‍ನ ಮುಖಂಡತ್ವ ವಹಿಸಿಕೊಂಡು ಪ್ರತಿ ವರ್ಷ ದೀನ ದಲಿತರಿಗೆ ಸಹಾಯ ಮಾಡೋಕೆ ನಿರ್ಧರಿಸಿದ್ದಾರೆ. ಪುಣ್ಯತಿಥಿ ಆಣರಣೆಯ ವೇಳೆ ನಿರ್ಮಾಪಕ ಸುಂದರ್ ಪಿ ಗೌಡ, ಹಾಗೂ ನಟ ದುನಿಯಾ ವಿಜಯ್ ತಂದೆ ಉಪಸ್ಥಿತಿಯಿದ್ದು, ಶೂಟಿಂಗ್ ನಿಮಿತ್ತ ದುನಿಯಾ ವಿಜಿ ಪುಣ್ಯತಿಥಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

    ಮಾಸ್ತಿಗುಡಿ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಕೃತಿ ಕರಬಂಧ ಹಾಗೂ ಅಮೂಲ್ಯ ನಟಿಸಿದ್ದರು. ಈ ಚಿತ್ರ ಮೇ 12ರಂದು ಬಿಡುಗಡೆಗೊಂಡಿತ್ತು.

    https://www.youtube.com/watch?v=7sSL-_09xO0

    https://www.youtube.com/watch?v=33UF4AToAd0

    https://www.youtube.com/watch?v=8h6lS3M-Dzs

    https://www.youtube.com/watch?v=_y9vGs0nEHM

  • ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಬೆಂಗಳೂರು: ಕನ್ನಡದ ಸಾಕಷ್ಟು ಸಿನಿಮಾ ಧಾರಾವಾಹಿಗಳಲ್ಲಿ ಪೊಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.

    ವೇಣುಗೋಪಾಲ್ ಅವರು ಮಂಗಳವಾರ ಬೆಳಿಗ್ಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಕೊನೆಯದಾಗಿ ಶುದ್ಧಿ ಚಿತ್ರದಲ್ಲಿ ನಟಿಸಿದ್ದರು.

    ವೇಣುಗೊಪಾಲ್ ಅವರು ಡಾ. ವಿಷ್ಣುವರ್ಧನ್ ಅವರ ಚಿತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು. ಸೂರಪ್ಪ, ರಾಜನರಸಿಂಹ, ಕೋಟಿಗೊಬ್ಬ, ಡಕೋಟ ಎಕ್ಸ್ ಪ್ರೆಸ್ ಇನ್ನೂ ಅನೇಕರ ಚಿತ್ರದಲ್ಲಿ ನಟಿಸಿದ್ದು, ಮನೆತನ, ಜನನಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.

  • ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ

    ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ

    ಬೆಂಗಳೂರು: ಕಳೆದ ಐದು ದಿನಗಳಿಂದ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕೈ ಉತ್ಪನ್ನಗಳನ್ನ ತೆರಿಗೆಯಿಂದ ಮುಕ್ತಗೂಳಿಸಬೇಕು ಅಂತ ನಗರದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಇದೀಗ ಈ ಸತ್ಯಾಗ್ರಹಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಕೈ ಜೋಡಿಸಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಜಿಎಸ್‍ಟಿ ಅನ್ನೋದು ನಿಜವಾದ ಗ್ರಾಮೀಣ ಪ್ರದೇಶದಲ್ಲಿ ಸರಿಯಲ್ಲ. ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಯಾಕಂದ್ರೆ ಗ್ರಾಮೀಣ ಭಾಗದಲ್ಲಿ ಸಮಾನ ಅದಾಯ ಇರುವುದಿಲ್ಲ. ಹಲವು ಸರ್ಕಾರಗಳು ಗ್ರಾಮೀಣ ಭಾಗದ ಜನರನ್ನು, ಬುಡಕಟ್ಟು ಜನರನ್ನು, ಅದಿವಾಸಿಗಳನ್ನು ಕಡೆಗಣಿಸುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಜಿಎಸ್‍ಟಿಯಿಂದ ವಿನಾಯಿತಿಯನ್ನು ನೀಡಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶವಿರುವ ಭಾರತ ದೇಶದಲ್ಲಿ ಎಷ್ಟರಮಟ್ಟಿಗೆ ಒಂದು ಸಮಾನವಾದ ತೆರಿಗೆ ನಿಯಮವನ್ನು ಒಪ್ಪಿಕೊಳ್ಳಲಾಗುತ್ತದೆ? ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಅಂತ ಹೇಳಿದ್ರು.

    ಗ್ರಾಮೀಣ ಜನರನ್ನ ಕಡೆಗಣಿಸ್ತಿದ್ದಾರೆ: 1930ರ ಕಾಲದಲ್ಲಿ ಬ್ರಿಟೀಷರು ಉಪ್ಪಿಗೆ ತೆರಿಗೆ ಹಾಕಿದ್ರು. ಅದಾದ ನಂತರ ಬಂದ ಎಲ್ಲಾ ಸರ್ಕಾರಗಳು ಬ್ರಿಟೀಷರಂತೆ ಕೆಲಸ ಮಾಡುತ್ತಿವೆ. ಇವತ್ತ್ಯಾಕೆ ಇದೊಂದು ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿದೆ ಅಂದ್ರೆ ಸಾಕಷ್ಟು ವರ್ಷಗಳಿಂದ ಬಂದಂತಹ ಯಾವುದೇ ಸರ್ಕಾರಗಳು ಕೂಡ ನಮ್ಮ ರೈತರು, ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಕಡೆಗಣಿಸುತ್ತಲೇ ಬಂದಿವೆ ಅನ್ನೋದನ್ನ ನಾವು ಒಪ್ಪಿಕೊಳ್ಳಲೇಬೇಕು ಅಂದ್ರು.

    ಕೈ ಉತ್ಪನ್ನಗಳು ಏನು ಅನ್ನೋದರ ಬಗ್ಗೆ ಒಂದು ಸ್ಪಷ್ಟವಾದ ಪರಿಕಲ್ಪನೆ ಇಲ್ಲದಂತಹ ಸರ್ಕಾರಗಳು ಇಂದು ನಮ್ಮ ದೇಶವನ್ನು ಆಳುತ್ತಾ ಇವೆ. ಬ್ರಿಟೀಷರು ನಮ್ಮ ದೇಶಕ್ಕೆ ಬರೋದಕ್ಕಿಂತಲೂ ಮೊದಲು ನಮ್ಮ ದೇಶದಲ್ಲಿ ಯಂತ್ರಗಳಿರಲಿಲ್ಲ. ಆ ಸಂದರ್ಭದಲ್ಲಿ ನಾವು ನಮ್ಮ ಕೈಯಿಂದ ಉತ್ಪನ್ನವಾದ ವಸ್ತುಗಳನ್ನೇ ಬಳಸುತ್ತಾ ಇದ್ದೆವು ಮತ್ತು ಅದನ್ನೇ ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದೆವು. ಆ ಕಾಲದಲ್ಲಿಯೇ ನಾವು ಇಷ್ಟೊಂದು ಬಡವರಾಗಿರಲಿಲ್ಲ. ಕೈ ಉತ್ಪನ್ನಗಳು ಮತ್ತು ಗ್ರಾಮೀಣ ಬದುಕನ್ನು ನೋಡಬೇಕಾದ್ರೆ ಅದು ಕೇವಲ ಹಣಕಾಸಿಗಾಗಿ ಮಾತ್ರವಲ್ಲ. ಅದು ಅವರ ಅಸ್ತಿತ್ವ, ನಮ್ಮ ಸಂಸ್ಕೃತಿ, ಬದುಕಿನ ರೀತಿ. ಜ್ಞಾನ, ಕೊಂಡಾಟ ಹಾಗೂ ನಮ್ಮ ಸಂಭ್ರಮವನ್ನು ಹೇಳಿಕೊಳ್ಳುವಂತಹ ಒಂದು ರೈತ ಬದುಕು ಕಟ್ಟುವ ರೀತಿಯಾಗಿದೆ. ಹೀಗಿದ್ದಂತಹ ಸಂದರ್ಭದಲ್ಲಿ ಬ್ರಿಟೀಷರು ಇಲ್ಲಿಗೆ ಬಂದು ಅವರ ಯಂತ್ರಗಳನ್ನು ಇಲ್ಲಿಗೆ ತಂದು, ಅದರಿಂದ ಉತ್ಪಾದಿಸಿ, ನಮ್ಮ ಗ್ರಾಮೀಣ ಜನರ ಕೈ ಉತ್ಪನ್ನಗಳನ್ನು ಕಡಿಮೆ ಮಾಡಿ ವಿದೇಶಗಳಿಂದ ನಾವೇ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತೆ ಮಾಡಿದ್ದಾರೆ ಅಂದ್ರು.

    ಜಿಎಸ್‍ಟಿಯಿಂದ ಸೋಲು: ಇಂದಿನ ಬಿಜೆಪಿ ಸರ್ಕಾರ ಕೂಡ ಈ ಹಿಂದಿನ ಸರ್ಕಾರಗಳಂತೆ ಅದನ್ನೇ ಮುಂದುವರೆಸಿಕೊಂಡು ಬಂದಿದೆ. ಇಂದು ನಾವು ಈ ಹೋರಾಟ ಮಾಡುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನಮ್ಮ ಮುಂದಿದೆಯಷ್ಟೆ. ಇವರು ಇನ್ನೂ ದೊಡ್ಡ ತಪ್ಪು ಮಾಡಿದ್ದಾರೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕೈ ಉತ್ಪನ್ನಗಳನ್ನ ತೆರಿಗೆ ಮುಕ್ತಗೊಳಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಸನ್ನ ಅವರು ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಎಸ್‍ಟಿಗೆ ವಿರೋಧ ವ್ಯಕ್ತಪಡಿಸಲೇಬೇಕು. ಇಂದು ಜಿಎಸ್‍ಟಿ ಎಲ್ಲರಿಗೂ ಸಮಾನ ತೆರಿಗೆ. ಯಾವ ಒಂದು ದೊಡ್ಡ ದೃಷ್ಟಿಕೋನದಿಂದ ಮಾಡಿದ್ರೋ? ಇದ್ರಿಂದ ಸೋಲುಂಟಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಕಂಪನಿಗಳಿಗೆ ಒಂದೇ ಟ್ಯಾಕ್ಸ್. ಒಬ್ಬ ಸಾಮಾನ್ಯ ಮನುಷ್ಯನಿಗೂ ಅದೇ ಟ್ಯಾಕ್ಸ್ ಆದ್ರೆ ಹೇಗೆ ಬದುಕಲು ಸಾಧ್ಯ. ಸಾಮಾನ್ಯ ವ್ಯಕ್ತಿಯ ಉತ್ಪನನ್ನಗಳಿಗೆ ಬೆಲೆ ಕೊಡ್ತಾ ಇಲ್ಲ. ಆತನಿಗೆ ಉದ್ಯೋಗಾವಕಶವನ್ನು ಕೊಡ್ತಾ ಇಲ್ಲ. ಈಗಾಗಲೇ ಯಾಂತ್ರೀಕರಣದಿಂದ ಒದ್ದಾಡುತ್ತಿರೋ ಹೊತ್ತಲ್ಲಿ ಆತನ ಮೇಲೆ ಈ ಜಿಎಸ್‍ಟಿ ಯನ್ನು ಹಾಕಿ ತುಳಿದರೆ ಈ ದೇಶ ಏನಾಗಬೇಕು ಅಂತ ಹೇಳಿದ್ರು.

    ಇದೇ ವೇಳೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ಜಿಎಸ್‍ಟಿ ತೆರಿಗೆ ಜಾರಿಗೆ ತರುವ ಮೊದಲು ಅವರು ಕೈ ಉತ್ಪನ್ನಗಳನ್ನು ಪರಿಗಣಿಸಲೇ ಇಲ್ಲ. ಕೈ ಉತ್ಪನ್ನ ಅನ್ನೋ ವ್ಯಾಖ್ಯಾನವೇ ಇಡೀ ಜಿಎಸ್‍ಟಿ ಎಂಬ ಪದಗುಚ್ಚದಲ್ಲೇ ಇಲ್ಲ. ಹೀಗಾಗಿ ಇದೊಂದು ಯಂತ್ರೋತ್ಪನ್ನಗಳ ಪರವಾದ ಹಾಗೂ ಕೈ ಉತ್ಪನ್ನಗಳ ವಿರುದ್ಧವಾದ ತೆರಿಗೆಯಾಗಿ ಜಾರಿಗೆ ಬಂದಿದೆ. ಕೈ ಉತ್ಪನ್ನಗಳು ಸಹಜವಾಗಿಯೇ ದುಬಾರಿ. ಹೀಗಾಗಿ ಅವುಗಳಿಗೆ ತೆರಿಗೆ ವಿಧಿಸದೇ ಇರುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇಂದು ಟಾಟಾ, ಬಿರ್ಲಾಗಳಿಗೆ ಸಾಮಾಜಿಕ ನ್ಯಾಯಗಳನ್ನು ವಿಧಿಸುತ್ತಿವೆ. ಹೀಗಾಗಿ ಈ ವಿಷಯ ನಿರ್ಧಾರವಾಗುವವರೆಗೆ ಅಂದ್ರೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗೋವರೆಗೆ ಈ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.

  • ಗಂಡು ಮಗುವಿನ ತಂದೆಯಾದ ನಟ, ರಾಜಕಾರಣಿ ಪವನ್ ಕಲ್ಯಾಣ್

    ಗಂಡು ಮಗುವಿನ ತಂದೆಯಾದ ನಟ, ರಾಜಕಾರಣಿ ಪವನ್ ಕಲ್ಯಾಣ್

    ಹೈದರಾಬಾದ್: ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಇಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ.

    ಹೌದು. ನಟಿ ರೇಣು ದೇಸಾಯಿಗೆ ವಿಚ್ಚೇದನ ನೀಡಿದ ಬಳಿಕ ನಟ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ವರಿಸಿದ್ದರು. ಕಳೆದ 2011ರಲ್ಲಿ ಟೀನ್ ಮಾರ್ ಎಂಬ ಚಿತ್ರದ ಶೂಟಿಂಗ್ ವೇಳೆ ಪವನ್ ಅವರು ಅನ್ನಾರನ್ನು ಭೇಟಿಯಾಗಿದ್ದರು. ಆ ಬಳಿಕ ಇಬ್ಬರು ಡೇಟಿಂಗ್ ಮಾಡಿದ್ದು, ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯೂ ಆದ್ರು. ಈಗಾಗಲೇ ದಂಪತಿಗೆ ಪೊಲೆನಾ ಎಂಬ ಹೆಸರಿನ ಹೆಣ್ಣು ಮಗುವಿದೆ. ಇದೀಗ ಮತ್ತೆ ಗಂಡು ಮಗುವಿಗೆ ಅನ್ನಾ ಜನ್ಮ ನಿಡಿದ್ದು, ಎರಡೂ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ.

    ಚಿತ್ರವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೂ ಪವನ್ ಹೈದರಾಬಾದ್ ಗೆ ಬಂದು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ. ಸದ್ಯ ತಾಯಿ- ಮಗು ಆರೋಗ್ಯವಾಗಿದ್ದಾರೆ.

    ಒಟ್ಟಿನಲ್ಲಿ ನಿರೀಕ್ಷೆಯಂತೆ ಸಂಕ್ರಾತಿಗೆ ತನ್ನ 25ನೇಯ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ತಾಯಿ-ಮಗುವಿನ ಜೊತೆ ಪವನ್ ಕಲ್ಯಾಣ್ ತನ್ನ ಜೊತೆ ತನ್ನ ಅಮೂಲ್ಯ ಕ್ಷಣಗಳನ್ನು ಕಳೆಯಲಿದ್ದಾರೆ. ಪವನ್ ಈ ಮೊದಲು ಮದುವೆಯಾದ ರೇಣು ದೇಸಾಯಿಗೆ ಇಬ್ಬರು ಮಕ್ಕಳಿದ್ದು, ಮಗ ಅಕಿರ ಹಾಗೂ ಮಗಳು ಸದ್ಯ ಇದೀಗ ತಾಯಿಯ ಜೊತೆಗಿದ್ದಾರೆ.

  • ವೆಬ್‍ಸೈಟ್‍ನಲ್ಲಿ ನಟ, ನಟಿಯರ ಅಶ್ಲೀಲ ಫೋಟೋ – ಬೆಂಗ್ಳೂರಲ್ಲಿ ಕಾಮುಕ ವಶ

    ವೆಬ್‍ಸೈಟ್‍ನಲ್ಲಿ ನಟ, ನಟಿಯರ ಅಶ್ಲೀಲ ಫೋಟೋ – ಬೆಂಗ್ಳೂರಲ್ಲಿ ಕಾಮುಕ ವಶ

    ಬೆಂಗಳೂರು: ಟಾಲಿವುಡ್‍ನ ನಟಿಯರ ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ತೋರಿಸಿ ಆಪ್‍ಲೋಡ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕಾಮುಕ ವ್ಯಕ್ತಿಯನ್ನು ದಾಸರಿ ಪ್ರದೀಪ್ ಎನ್ನಲಾಗಿದ್ದು, ಈತ ಸುಮಾರು 30 ವೈಬ್‍ಸೈಟ್‍ಗಳಿಗೆ ನಿರ್ವಹಣೆ ಮಾಡುತ್ತಿದ್ದನು. ಅಲ್ಲದೇ ಮನಬಂದಂತೆ ನಟಿಯರ ಬಗ್ಗೆ ಅಸಭ್ಯವಾಗಿ ಆಪ್‍ಲೋಡ್ ಮಾಡ್ತಿದ್ದ ಎನ್ನಲಾಗುತ್ತಿದೆ.

    ನಟಿಯರ ದೂರಿನ ಮೇರೆಗೆ ಎಚ್ಚೆತ್ತ ಹೈದ್ರಾಬಾದ್ ಸೈಬರ್ ಕ್ರೈಂ ಪೊಲೀಸರು ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಆರೋಪಿ ಪ್ರದೀಪ್‍ನನ್ನು ವಶಕ್ಕೆ ಪಡೆದಿದ್ದು ಇಂದು ಹೈದ್ರಾಬಾದ್‍ನ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.

     

  • ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

    ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

    ವಾಷಿಂಗ್ಟನ್: ಸಿನಿಮಾಗಾಗಿ ದರೋಡೆಕೋರನಂತೆ ನಟಿಸುತ್ತಿದ್ದ ನಟನನ್ನು ನಿಜವಾದ ದರೋಡೆಕೋರ ಎಂದು ತಿಳಿದು ಪೊಲೀಸರು ಅವರ ಮೇಲೆ ಫೈರಿಂಗ್ ಮಾಡಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇಂಡಿಯಾನಾದ ಕ್ರಾವ್‍ಫರ್ಡ್ಸ್ ವಿಲ್ಲೆ ಪೊಲೀಸರು ಬಾಡಿಕ್ಯಾಮ್ ವಿಡಿಯೋವನ್ನ ಬಿಡುಗಡೆ ಮಾಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ನಟನ ಮೇಲೆ ಗುಂಡು ಹಾರಿಸೋ ದೃಶ್ಯ ಸೆರೆಯಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮುಸುಕುಧಾರಿ ವ್ಯಕ್ತಿ ಗನ್ ಹಿಡಿದು ಉಪಹಾರ ಗೃಹದೊಳಗೆ ಹೋಗುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ರು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಪೊಲೀಸರು ಸ್ಥಳಕ್ಕೆ ಬಂದ ವೇಳೆ ಶೂಟಿಂಗನ್ನು ನಿಜವಾದ ದರೋಡೆ ಎಂದು ತಿಳಿದು ಗನ್ ಕಳೆಗಿಡುವಂತೆ ಹೇಳಿದ್ದಾರೆ. ಬಳಿಕ ಅದೊಂದು ಶೂಟಿಂಗ್ ಪ್ರಾಪರ್ಟಿ ಅಷ್ಟೇ ಎಂಬುದು ಗೊತ್ತಾಗಿದೆ.

    ಡ್ರಾಪ್ ದಿ ಗನ್ ಎಂದು ಹೇಳುತ್ತಾ ಪೊಲೀಸ್ ಅಧಿಕಾರಿ ಫೈರ್ ಮಾಡೋದನ್ನ ವಿಡಿಯೋದಲ್ಲಿ ಕಾಣಬಹುದು. ಆಗ ನಟ ಜೆಫ್ ಡಫ್ ನಾವು ಸಿನಿಮಾ ಶೂಟಿಂಗ್ ಮಾಡ್ತಿದ್ದೀವಿ ಎಂದು ಕಿರುಚುತ್ತಾ ಗನ್ ಕೆಳಗಿಟ್ಟು ಮುಸುಕು ತೆಗೆದಿದ್ದಾರೆ. ಅದೃಷ್ಟವಶಾತ್ ಪೊಲೀಸರು ಹಾರಿಸಿದ ಗುಂಡು ಡಫ್‍ಗೆ ತಗುಲಲಿಲ್ಲ. ಬದಲಿಗೆ ಹತ್ತಿರದ ಕಟ್ಟಡಕ್ಕೆ ಬಿದ್ದಿದೆ. ಪೊಲೀಸ್ ಇಲಾಖೆ ಈ ವಿಡಿಯೋವನ್ನ ತನ್ನ ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡಿದೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಮತ್ತೊಬ್ಬ ನಟ ಫಿಲಿಪ್ ಡೆಮೊರೆಟ್, ಬುಲೆಟ್ ಆತನ ತಲೆಯ ಪಕ್ಕದಲ್ಲೇ ಹೋಯ್ತು. ಅದರ ಬಗ್ಗೆ ನಾನು ಯೋಚಿಸಲಾರೆ. ಒಂದು ವೇಳೆ ಗುಂಡು ತಾಗಿದ್ದರೆ ದೊಡ್ಡ ಅನಾಹುತವಾಗ್ತಿತ್ತು. ದೇವರ ದಯದಿಂದ ಹಾಗಾಗಲಿಲ್ಲ ಎಂದಿದ್ದಾರೆ.

    ಮಾಂಟ್ಗೊಮೆರಿ ಕೌಂಟಿ ಪ್ರೊಡಕ್ಷನ್‍ನವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದರೆಂದು ಬಳಿಕ ಇಂಡಿಯಾನಾ ಪೊಲೀಸರಿಗೆ ಗೊತ್ತಾಗಿದೆ. ಆದ್ರೆ ಉಪಹಾರ ಗೃಹದವರಾಗಲಿ, ಪ್ರೊಡಕ್ಷನ್ ಕಂಪನಿಯವರಗಲೀ ಪೊಲೀಸರಿಗೆ ಹಾಗೂ ಅಕ್ಕಪಕ್ಕದವರಿಗೆ ಶೂಟಿಂಗ್ ನಡೆಯುವ ಬಗ್ಗೆ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.