Tag: actor

  • ಬೀದಿಗೆ ತಳ್ಳಲ್ಪಟ್ಟ ತಾಯಿಯ ಕಷ್ಟಕ್ಕೆ ಮರುಗಿದ ರೋರಿಂಗ್ ಸ್ಟಾರ್

    ಬೀದಿಗೆ ತಳ್ಳಲ್ಪಟ್ಟ ತಾಯಿಯ ಕಷ್ಟಕ್ಕೆ ಮರುಗಿದ ರೋರಿಂಗ್ ಸ್ಟಾರ್

    ಮಂಡ್ಯ: ಮಕ್ಕಳಿಂದ ಬೀದಿಗೆ ತಳ್ಳಲ್ಪಟ್ಟ ತಾಯಿಯೊಬ್ಬರು ಭಿಕ್ಷೆ ಬೇಡುತ್ತಿದ್ದನ್ನು ಕಂಡ ನಟ ಶ್ರೀಮುರಳಿ, ಮಹಿಳೆ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ.

    ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದೆ. ಈ ವೇಳೆ ಸ್ನಾನಘಟ್ಟದ ಬಳಿ ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಾ ಕುಳಿತಿದ್ದರು. ಇದನ್ನು ಕಂಡ ಶ್ರೀಮುರಳಿ ಮಹಿಳೆಯ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿದ್ದಾರೆ. ಶ್ರೀಮುರುಳಿ ಅವರ ಆತ್ಮೀಯ ಮಾತು ಕಂಡ ಮಹಿಳೆ ತನ್ನ ಕಷ್ಟದ ಜೀವನವನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.

    ಮಹಿಳೆಯ ಕಣ್ಣೀರು ಕಂಡ ಶ್ರೀಮುರುಳಿ ಅವರು ತನ್ನೊಂದಿಗೆ ಬರುವಂತೆ ಆಹ್ವಾನವನ್ನು ನೀಡಿದರು. ಆದರೆ ಶ್ರೀಮುರಳಿ ಅವರ ಆಹ್ವಾನವನ್ನು ಮಹಿಳೆ ನಯವಾಗಿ ತಿರಸ್ಕರಿಸಿದರು. ಬಳಿಕ ಮಹಿಳೆಗೆ ಸಹಾಯ ಮಾಡುವ ಭರವಸೆಯನ್ನು ನೀಡಿದರು.

    ಈ ಹಿಂದೆಯೂ ಇಂತಹ ಅಸಹಾಯ ಮಹಿಳೆಯ ಬಳಿ ಶ್ರೀಮುರಳಿ ಕುಳಿತು ಆತ್ಮೀಯವಾಗಿ ಮಾತನಾಡಿದ್ದರು. ಅವರ ಕಷ್ಟ ಸುಖ ಆಲಿಸುವ ಮೂಲಕ ನೋವನ್ನು ಮರೆಯುವಂತೆ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಶ್ರೀಮುರಳಿ ಅವರ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇಂತಹ ತಾಯಿಯರು, ವೃದ್ಧರಿಗೆ ನಿಮ್ಮ ಸಮಯ ಕೊಟ್ಟು ಸುಖ ದುಃಖ ವಿಚಾರಿಸಿದ್ದಕ್ಕೆ ಧನ್ಯವಾದ. ಅವರಿಗೆ ನೀವು ಮಾತನಾಡಿಸಿದ ದಿನ ಸ್ಮರಣೀಯವಾಗಿರುತ್ತದೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಟೌಟ್ ಕುಸಿದು ನಟ ಅಜಿತ್ ಅಭಿಮಾನಿಗಳಿಗೆ ಗಾಯ

    ಕಟೌಟ್ ಕುಸಿದು ನಟ ಅಜಿತ್ ಅಭಿಮಾನಿಗಳಿಗೆ ಗಾಯ

    ಚೆನ್ನೈ: ಹಾಲಿನ ಅಭಿಷೇಕ ಮಾಡುವ ವೇಳೆ ಖ್ಯಾತ ತಮಿಳು ನಟ ಅಜಿತ್ ಕಟೌಟ್ ಕುಸಿದು ಐವರು ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಅಜಿತ್ ನಟನೆಯ ‘ವಿಶ್ವಾಸಂ’ ಚಿತ್ರದ ರಿಲೀಸ್ ದಿನ ಅಭಿಮಾನಿಗಳು  ವಿಲ್ಲುಪುರಂ ಥಿಯೇಟರ್ ನಲ್ಲಿ ಕಟೌಟ್‍ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡುತ್ತಿದ್ದರು. ಈ ವೇಳೆ ಅಭಿಮಾನಿಗಳು 30 ಅಡಿ ಎತ್ತರದ ಕಟೌಟ್ ಮೇಲೇರುತ್ತಿದ್ದಂತೆ ಭಾರ ತಡೆಯಲಾಗದೇ ಕಟೌಟ್ ನೆಲಕ್ಕುರುಳಿದೆ.

    ನಿಂತಿದ್ದ ಜನರ ಮೇಲೆ ಕಟೌಟ್ ಬಿದ್ದಿದ್ದು, ಐವರಿಗೆ ಗಾಯಗಾಳಾಗಿದೆ. ಘಟನೆಯಲ್ಲಿ ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಗ ಅವರ ಆರೋಗ್ಯದ ಸ್ಥಿತಿ ಹೇಗೆ ಇದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

    ಅಜಿತ್ ಕಟೌಟ್ ನೆಲಕ್ಕುರುಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಅಜಿತ್ ಅಭಿಮಾನಿಗಳು ವಿಶ್ವಾಸಂ ಚಿತ್ರಕ್ಕಾಗಿ ಚಿತ್ರಮಂದಿರದ ಬೀಗವನ್ನು ಮುರಿದು ಟಿಕೆಟ್ ಪಡೆಯಲು ಮುಂದಾಗಿದ್ದರು.

    ವಿಶ್ವಾಸಂ ಚಿತ್ರವನ್ನು ಶಿರುತೈ ಸಿವಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅಜಿತ್, ನಯನತಾರಾ, ಬೇಬಿ ಅನಿಕಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕ ವಯಸ್ಸಿನಲ್ಲಿ ಹಠ ಮಾಡಿದ್ದಕ್ಕೆ ಟಾಲಿವುಡ್ ನಟ ಮನೆಗೆ ಕಾರು ಕಳುಹಿಸಿದ್ರು – ಬಾಲ್ಯದ ನೆನಪು ಹಂಚಿಕೊಂಡ ಪುನೀತ್

    ಚಿಕ್ಕ ವಯಸ್ಸಿನಲ್ಲಿ ಹಠ ಮಾಡಿದ್ದಕ್ಕೆ ಟಾಲಿವುಡ್ ನಟ ಮನೆಗೆ ಕಾರು ಕಳುಹಿಸಿದ್ರು – ಬಾಲ್ಯದ ನೆನಪು ಹಂಚಿಕೊಂಡ ಪುನೀತ್

    ಬೆಂಗಳೂರು: ‘ಎನ್.ಟಿ.ಆರ್ ಕಥಾನಾಯಕಡು’ ಚಿತ್ರದ ಸುದ್ದಿಗೋಷ್ಠಿಯ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ನಡೆದ ಅನುಭವದ ಕಥೆಯೊಂದನ್ನು ಹೇಳಿಕೊಂಡಿದ್ದಾರೆ.

    ಟಾಲಿವುಡ್ ಲೆಜೆಂಡ್ ನಂದಮುರಿ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ತಮ್ಮ ಮುಂಬರುವ ‘ಎನ್.ಟಿ.ಆರ್ ಕಥಾನಾಯಕಡು’ ಚಿತ್ರದ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಬಾಲಿವುಡ್ ನಟಿ ವಿದ್ಯಾ ಬಾಲನ್ ಭಾಗವಹಿಸಿದ್ದರು. ಈ ವೇಳೆ ಪುನೀತ್ ಅವರು ತಮ್ಮ ಚಿಕ್ಕ ವಯಸ್ಸಿನ ಅನುಭವವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

    1982 ಇಸವಿಯಲ್ಲಿ ನನಗೆ ಆಗ 6 ವರ್ಷ. ಆಗ ಎವಿಎಂ ಸ್ಟುಡಿಯೋದಲ್ಲಿ ಯಾವುದೋ ಒಂದು ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನಮ್ಮ ತಂದೆ ಅವರ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿತ್ತು. ನನ್ನ ತಂದೆ ಅವರು ನನ್ನನ್ನು ಶೂಟಿಂಗ್‍ಗೆ ಕರೆದುಕೊಂಡು ಹೋಗುತ್ತಿದ್ದರು.

    ಬಾಲಯ್ಯ ಸರ್ ಆ ಚಿತ್ರದಲ್ಲಿ ರೇಸ್ ಡ್ರೈವರ್ ಪಾತ್ರ ನಿರ್ವಹಿಸಿದ್ದರು. ಆ ವೇಳೆ ನಾನು ರೇಸ್ ಕಾರನ್ನು ನೋಡಿದೆ. ಆ ಕಾರು ನನಗೆ ಇಷ್ಟವಾಗಿ ಅದು ನನಗೆ ಬೇಕು ಎಂದು ಹಠ ಮಾಡಿದೆ. ಆ ಸಮಯದಲ್ಲಿ ಎನ್‍ಟಿಆರ್ ಸರ್ ಆ ಕಾರನ್ನು ಮನೆಗೆ ಕಳುಹಿಸಿಕೊಟ್ಟರು. ಬಳಿಕ ಆ ಕಾರನ್ನು ಬೇಡ ಎಂದು ಅಪ್ಪಾಜಿ ವಾಪಸ್ ಕಳುಹಿಸಿದ್ದರು.

    ಇದಾದ ಬಳಿಕ 1986ನಲ್ಲಿ ಹೈದರಾಬಾದ್‍ನಲ್ಲಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ಗೆ ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲ ಸ್ಟಾರ್ ನಟರು ಭಾಗಿಯಾಗಿದ್ದರು. ಆ ವೇಳೆ ಎನ್‍ಟಿಆರ್ ಅವರು ಫ್ಲೈಟ್ ಪಕ್ಕ ನಿಂತು ಎಲ್ಲರನ್ನೂ ಸ್ವಾಗತ ಮಾಡುತ್ತಿದ್ದರು. ಆ ಸಮಯದಲ್ಲಿ ಅವರು ಒಂದು ದೊಡ್ಡ ವೆಂಕಟೇಶ್ವರ ಫೋಟೋವನ್ನು ನೀಡಿದ್ದರು. ಈಗಲೂ ಆ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ತಮ್ಮ ಬಾಲ್ಯದ ನೆನಪನ್ನು ಪುನೀತ್ ರಾಜ್‍ಕುಮಾರ್ ಹಂಚಿಕೊಂಡಿದ್ದಾರೆ.

    ನನಗೆ ಸಣ್ಣ ವಯಸ್ಸಿನಿಂದ ನನ್ನ ತಂದೆ ಅವರ ಮೂಲಕ ಎಲ್ಲ ದೊಡ್ಡ ವ್ಯಕ್ತಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಎನ್‍ಟಿಆರ್ ಅವರು ನನ್ನ ತಂದೆಯನ್ನು ನೋಡಿ ತಮ್ಮಡು ತಮ್ಮಡು ಎಂದು ಕರೆಯುತ್ತಿದ್ದರು. ಅವರ ಊರಿನಲ್ಲಿದ್ದರೆ, ಬಾಲಯ್ಯ ಅವರು ಪ್ರೀತಿ ವಿಶ್ವಾಸದಿಂದ ಕುತಿದ್ದ ಜಾಗದಲ್ಲೇ ಎದ್ದು ಕೈ ಬೀಸುತ್ತಿದ್ದರು. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಬರುತ್ತಾರೆ. ಶಿವಣ್ಣ ಅವರಿಗೆ ಬಾಲಯ್ಯ ತುಂಬಾ ಆಪ್ತರು ಎಂದು ಪುನೀತ್ ರಾಜ್‍ಕುಮಾರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿಯಲ್ಲಿ ನಟಸಾರ್ವಭೌಮನ ಆಡಿಯೋ ಲಾಂಚ್

    ಹುಬ್ಬಳ್ಳಿಯಲ್ಲಿ ನಟಸಾರ್ವಭೌಮನ ಆಡಿಯೋ ಲಾಂಚ್

    – ಪುನೀತ್, ರಚಿತಾ ಸ್ಟೆಪ್‍ಗೆ ಪ್ರೇಕ್ಷಕರು ಫಿದಾ

    ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಬಹುನಿರೀಕ್ಷಿತ ನಟ ಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅನುಪಸ್ಥಿತಿಯಲ್ಲಿ, ನಟ ಪುನೀತ್ ರಾಜ್ ಕುಮಾರ್ ನೇತೃತ್ವದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಯಶಸ್ವಿಯಾಗಿ ನಡೆಯಿತು. ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

    ಉತ್ತರ ಕರ್ನಾಟಕ ಭಾಗದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆದ್ರೆ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಐಟಿ ಬಿಸಿ ತಟ್ಟಿದ್ದು, ನಟ ಪುನೀತ್ ರಾಜ್ ಕುಮಾರ್ ಕೂಡ ಗೈರಾಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಮನೆಯ ಮೇಲಿನ ಐಟಿ ದಾಳಿ ಪೂರ್ಣಗೊಂಡಿದ್ದರಿಂದ ಮಧ್ಯಾಹ್ನವೇ ನಗರಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಅನುಮಾನಕ್ಕೆ ತೆರೆ ಎಳೆದರು.

    ನೆಹರೂ ಮೈದಾನದಲ್ಲಿ ಕಿಕ್ಕಿರದ ಜನಸ್ತೋಮದ ಮಧ್ಯೆ ಬಹುಕೋಟಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಯಶಸ್ವಿಯಾಗಿ ನಡೆಯಿತು. ನಟ ಪುನೀತ್ ರಾಜ್ ಕುಮಾರ್, ನಟಿ ರಚಿತಾರಾಮ್ ಸ್ಟೇಪ್ ಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

    ಐಟಿ ದಾಳಿ ಬಳಿಕ ನಟ ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಕೆಲವು ಕ್ಷಣ ಮಾತನಾಡಿದ್ದು, ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನು ತೊಂದರೆ ಆಗಿಲ್ಲ ಎಂದು ಕಾರು ಹತ್ತಿ ಹೊರಟ್ಟಿದ್ದರು. ಕಾರ್ ಹತ್ತಿದ ತಕ್ಷಣ ಪುನೀತ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ `ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಬ್ಬಳ್ಳಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರು ನಟ ಯಶ್

    ಹುಬ್ಬಳ್ಳಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರು ನಟ ಯಶ್

    ಬೆಂಗಳೂರು: ನಟಸಾರ್ವಭೌಮ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ನಟ ಯಶ್ ಹುಬ್ಬಳ್ಳಿ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿರುವ ಯಶ್, ಅನಿವಾರ್ಯ ಕಾರಣಗಳಿಂದ ಇಂದು ವಿಮಾನ ಕೈತಪ್ಪಿದ್ದು, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ನನ್ನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಹುಬ್ಬಳ್ಳಿ ಭಾಗದ ಅಭಿಮಾನಿಗಳ ಕ್ಷಮೆ ಕೋರುತ್ತೇನೆ. ಪವರ್ ಸ್ಟಾರ್ ಅಪ್ಪು ರವರು, ಸಹೃದಯಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ರವರು, ನಿರ್ದೇಶಕರಾದ ಸಹೋದರ ಪವನ್ ಒಡೆಯರ್, ಛಾಯಾಗ್ರಾಹಕರಾದ ವೈದಿ ಸೇರಿದಂತೆ ನಟಸಾರ್ವಭೌಮ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅಪ್ಪು ರವರ ಮೇಲಿನ ನಿಮ್ಮ ಪ್ರೀತಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲಿ ಎಂದು ಹಾರೈಸಿದ್ದಾರೆ.

    ಗಂಡು ಮೆಟ್ಟಿದ ನಾಡು ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ತುಂಬಿ ತುಳುಕಿರುವ ಜನ ಸಾಗರದ ನಡುವೆ ಪುನೀತ್ ರಾಜಕುಮಾರ್, ನಟಿ ರಜಿತಾ ರಾಮ್, ಚಿತ್ರದ ಮತ್ತೊಬ್ಬ ನಾಯಕಿ ಅನುಪಮಾ ಪರಮೇಶ್ವರ ಸೇರಿದಂತೆ ಖ್ಯಾತ ಗಾಯಕ ವಿಜಯ ಪ್ರಕಾಶ್, ಜಯಂತಿ ಕಾಯ್ಕಿಣಿ, ಯೋಗರಾಜ್ ಭಟ್, ಸಾಧು ಕೋಕಿಲಾ, ರವಿಶಂಕರ್, ಕಾಮಿಡಿ ನಟ ಚಿಕ್ಕಣ್ಣ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಬಂದ್ಮೇಲೆ ಐಟಿ ಇಲಾಖೆ ವ್ಯತಿರಿಕ್ತವಾಗ್ತಿದೆ – ಸಚಿವ ವೆಂಕಟರಾವ್ ನಾಡಗೌಡ

    ಮೋದಿ ಬಂದ್ಮೇಲೆ ಐಟಿ ಇಲಾಖೆ ವ್ಯತಿರಿಕ್ತವಾಗ್ತಿದೆ – ಸಚಿವ ವೆಂಕಟರಾವ್ ನಾಡಗೌಡ

    ಕೊಪ್ಪಳ: ಸ್ಯಾಂಡಲ್‍ವುಡ್ ಸ್ಟಾರ್ ನಟರ ಮನೆಮೇಲೆ ಐಟಿ ದಾಳಿಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಪಶುಸಂಗೋಪನಾ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

    ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮೇಲೆ ಯಾಕೆ ಐಟಿ ದಾಳಿಯಾಗುತ್ತಿಲ್ಲ ಎಂಬುದನ್ನು ಮೋದಿಯವರ ಬಳಿಯೇ ಕೇಳಬೇಕು. ನನ್ನ ಕೇಳಿದ್ರೆ ಏನ್ ಹೇಳಲಿ. ಐಟಿ ಮುಂಚೆಯಿಂದಲೂ ಇದ್ದ ಇಲಾಖೆ. ಈಗ ಅದು ಮೋದಿಯವರ ಕೈಯಲ್ಲಿ ಬಹಳ ವ್ಯತಿರಿಕ್ತವಾಗಿ ಉಪಯೋಗವಾಗುತ್ತಿದೆ. ಈ ಮೂಲಕ ಏನೆಲ್ಲ ಮಾಡೋದಿಕೆ ಸಾಧ್ಯ ಇದೆಯೋ ಅವೆಲ್ಲವನ್ನೂ ಮಾಡುತ್ತಿದ್ದಾರೆ ಅಂತ ಅವರು ಆರೋಪಿದ್ರು.

    ಸಿನಿಮಾ ನಟರು ಹೆಚ್ಚೇನಲ್ಲ. ಬರೀ ರಾಜಕಾರಣಿಗಳ ಮೇಲಷ್ಟೇ ಐಟಿ ದಾಳಿಯಾಗಬೇಕಾ ಎಂದು ಪ್ರಶ್ನಿಸಿದ್ರು. ಸಿನಿಮಾ ನಟರು, ವಕೀಲರು, ವೈದ್ಯರ ಮೇಲೂ ಐಟಿ ದಾಳಿಯಾಗುತ್ತದೆ. ಯಾರು ಸಂಪತ್ತು ಜಾಸ್ತಿ ಗಳಿಸಿದ್ದಾರೆ ಅವರ ಮೇಲೆ ರೇಡ್ ಮಾಡುತ್ತಾರೆ. ಬಡವರ ಮೇಲೆ ದಾಳಿ ಮಾಡಕ್ಕಾಗುತ್ತಾ..? ರಾಜಕಾರಣಕ್ಕೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಸಿನಿಮಾ ನಟರ ಮೇಲೆ ಯಾಕೆ ಪಾಪ ರಾಜಕಾರಣ ಮಾಡ್ತಾರೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಕಳೆದ ಎರಡು ದಿನಗಳಿಂದ ನಟರಾದ ಕಿಚ್ಚ ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಮನೆಮೇಲೆ ಐಟಿ ದಾಳಿ ನಡೆಸಿತ್ತು. ಪುನೀತ್, ಶಿವರಾಜ್‍ಕುಮಾರ್, ಸುದೀಪ್ ನಿವಾಸದಲ್ಲಿ ಪರಿಶೀಲನೆ ಅಂತ್ಯಗೊಂಡಿದೆ. ನಿರ್ಮಾಪಕರಾದ ವಿಜಯ ಕಿರಗಂದೂರು, ಸಿ.ಆರ್.ಮನೋಹರ್, ರಾಕ್‍ಲೈನ್ ವೆಂಕಟೇಶ್, ಜಯಣ್ಣ ಮನೆಯಲ್ಲಿ ಪರಿಶೀಲನೆ ಮುಂದುವರಿಯುತ್ತಿದೆ.

    ಸ್ಟಾರ್ ನಟರ ಮನೆಯಲ್ಲಿ ಕೆಜಿಗಟ್ಟಲೆ ಬೆಳ್ಳಿ, ಚಿನ್ನ ಮತ್ತು ಹಣ ಪತ್ತೆಯಾಗಿದೆ. ಈ ಬಂಗಾರ ಮತ್ತು ಹಣಕ್ಕೆ ಸೂಕ್ತ ದಾಖಲೆ ತೋರಿಸಿದ ನಂತರವಷ್ಟೇ ಈ ಆಸ್ತಿಗಳು ಮನೆ ಸೇರಲಿದೆ. ಇದರ ಜೊತೆ ಸಾಕಷ್ಟು ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿರುವ ಕಾರಣ ಎಲ್ಲದಕ್ಕೂ ದಾಖಲೆ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಒಂದು ವಾರದ ಗಡುವನ್ನು ಸ್ಟಾರ್ ನಟರು ಕೇಳಿದ್ದಾರೆ ಎನ್ನುವ ಮಾಹಿತಿ ಐಟಿ ಮೂಲಗಳಿಂದ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ನಟರಿಗೆ ಕಾರಿನ ಕಾಟ!

    ಸ್ಯಾಂಡಲ್‍ವುಡ್ ನಟರಿಗೆ ಕಾರಿನ ಕಾಟ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟರಿಗೆ ಒಂಡು ಕಡೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿದ್ದು, ಮೊತ್ತೊಂದೆಡೆ ಅವರ ಐಷಾರಾಮಿ ಕಾರುಗಳಿಂದ ಕಾಟ ಶುರುವಾಗಿದೆ.

    ಚಂದನವನದ ಸ್ಟಾರ್ ನಟರು ಕಳೆದ ಒಂದು ವರ್ಷದಿಂದ ಸಾಕಷ್ಟು ಬಾರಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ್ದರು. ಈ ಹಿಂದೆ ನಟ ಯಶ್ ಪತ್ನಿ ರಾಧಿಕಾ ಮತ್ತು ಅಪ್ಪ-ಅಮ್ಮನಿಗೆ ಮೂರು ಭರ್ಜರಿ ಕಾರುಗಳನ್ನು ಗಿಫ್ಟ್ ಮಾಡಿದ್ದರು. ನಟ ಸುದೀಪ್ ಕೂಡ ಐಷಾರಾಮಿ ಕಾರು ಖರೀದಿ ಮಾಡಿದ್ದರು. ಈಗಾಗಲೇ ಸುದೀಪ್ ಬಳಿ ಆಡಿ, ರೇಂಜ್ ರೋವರ್, ಪೋರ್ಶೆ ಕಾರುಗಳು ಇವೆ.

    ಪುನೀತ್ ರಾಜ್‍ಕುಮಾರ್ ಬಳಿ ಕೂಡ ರೇಂಜ್ ರೋವರ್ ಹಾಗೂ ಬೆಂಜ್ ಕಾರುಗಳಿವೆ. ಈ ಹಿನ್ನೆಲೆಯಲ್ಲಿ ಕಾರನ್ನು ಖರೀದಿ ಮಾಡುವಾಗ ಹಣವನ್ನು ಯಾವ ಮೂಲದಿಂದ ಸಂದಾಯ ಮಾಡಿದ್ದೀರಿ? ಮತ್ತು ವಿದೇಶ ಪ್ರವಾಸದ ಬಗ್ಗೆಯೂ ಮಾಹಿತಿಯನ್ನು ಅಧಿಕಾರಿಗಳು ಕೇಳುತ್ತಿದ್ದಾರೆ ಎನ್ನಲಾಗಿದೆ.

    ಅಷ್ಟೇ ಅಲ್ಲದೇ ನಟರ ಮನೆಯಲ್ಲಿ ನಡೆಯುವಂತಹ ದೊಡ್ಡ ಕಾರ್ಯಕ್ರಮಗಳ ಕುರಿತು ದಾಖಲೆಗಳನ್ನು ಕೇಳುತ್ತಿದ್ದು, ಕಾರ್ ಮತ್ತು ಇತರೆ ರಶೀದಿಗಳ ಬಗ್ಗೆ ಮಾಹಿತಿ ಐಟಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್, ಅತಿ ಕೆಟ್ಟ ವರ್ತನೆಯ ಆಟಗಾರ: ನಟ ನಾಸಿರುದ್ದೀನ್ ಶಾ

    ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್, ಅತಿ ಕೆಟ್ಟ ವರ್ತನೆಯ ಆಟಗಾರ: ನಟ ನಾಸಿರುದ್ದೀನ್ ಶಾ

    ಮುಂಬೈ: ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ, ವಿಶ್ವದ ಅತೀ ಕೆಟ್ಟ ದುರ್ವರ್ತನೆಯ ಆಟಗಾರನೆಂದು ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಕಿಡಿಕಾರಿದ್ದಾರೆ.

    ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯದಲ್ಲಿ ಕಿತ್ತಾಡಿಕೊಂಡಿದ್ದ ಕ್ಯಾಪ್ಟನ್ ಕೊಹ್ಲಿಯವರ ವರ್ತನೆ ಹಾಗೂ ಅಭಿಮಾನಿಯೊಬ್ಬರಿಗೆ ದೇಶಬಿಟ್ಟು ಹೋಗು ಎಂಬ ಹೇಳಿಕೆಗೆ ಫೇಸ್‍ಬುಕ್ ಮೂಲಕ ನಾಸಿರುದ್ದೀನ್ ಶಾ ಶಾ ಆಕ್ರೋಶ ಹೊರಹಾಕಿದ್ದಾರೆ.

    ಕೊಹ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿರಬಹುದು. ಆದರೆ ಅವರು ವಿಶ್ವದ ಅತಿ ಕೆಟ್ಟ ವರ್ತನೆಯ ಆಟಗಾರನೂ ಹೌದು. ಕ್ರಿಕೆಟ್ ಬದುಕಿನಲ್ಲಿ ತನ್ನ ಸೊಕ್ಕಿನ ಹಾಗೂ ಕೆಟ್ಟ ನಡವಳಿಕೆಯನ್ನು ತೋರುತ್ತಲೇ ಇದ್ದಾರೆ. ಇಷ್ಟೆಲ್ಲಾ ಆದರೂ ನಾನು ದೇಶ ಬಿಡುವ ಯಾವುದೇ ಉದ್ದೇಶವಿಲ್ಲವೆಂದು ನಾಸಿರುದ್ದೀನ್ ಶಾ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾಗಳಲ್ಲಿ ನಾಸಿರುದ್ದೀನ್  ಶಾರವರ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಶಾ ಪರವಾಗಿ ಮಾತನಾಡಿದ್ದರೆ, ಮತ್ತೆ ಕೆಲವರು ಖ್ಯಾತ ಆಟಗಾರನ ಕುರಿತು ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಅವರ ಪೋಸ್ಟನ್ನು ಈಗಾಗಲೇ 2 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿದ್ದು, 60ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

    ಟೆಸ್ಟ್‌ನಲ್ಲಿ ಕೊಹ್ಲಿ ಮಾಡಿದ್ದೇನು?
    ಸೋಮವಾರ ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ, ಬುಮ್ರಾ ಬೌಲ್ ಮಾಡುತ್ತಿದ್ದ 71 ನೇ ಓವರ್ ನಲ್ಲಿ ಕೊಹ್ಲಿ ನಾನ್ ಸ್ಟ್ರೈಕರ್ ಎಂಡ್ ಬಳಿಕ ಫೀಲ್ಡ್ ಮಾಡಲು ನಿರ್ಧರಿಸಿದ್ದರು. ಈ ವೇಳೆ ರನ್ ಓಡುತ್ತಿದ್ದ ಟಿಮ್ ಪೇನ್ ಗೆ ಅಡ್ಡ ಬಂದ ಕೊಹ್ಲಿ ನೇರವಾಗಿ ಮುಖಾಮುಖಿಯಾಗಿ ನಿಂತಿದ್ದರು. ಆಗ ವಿರಾಟ್ ಕೊಹ್ಲಿ ಹಾಗೂ ಟಿಮ್ ಪೇನ್ ನಡುವೆ ವಾಕ್ಸಮರ ಏರ್ಪಟಿತ್ತು. ಇದನ್ನು ಕಂಡ ಅಂಪೈರ್ ಇಬ್ಬರು ಆಟಗಾರರಿಗೂ ನೀವು ತಂಡದ ನಾಯಕರು, ಇಲ್ಲಿಗೆ ಬಿಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಇದನ್ನೂ ಓದಿ: ಕೊಹ್ಲಿ, ಟಿಮ್ ಪೈನೆ ನಡುವೆ ಮಾತಿನ ಕಾಳಗ – ವಿಡಿಯೋ ವೈರಲ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೂಮಪಾನ ಮಾಡಿದ್ದಕ್ಕೆ ಹನ್ಸಿಕಾ ವಿರುದ್ಧ ಕೇಸ್ ದಾಖಲು

    ಧೂಮಪಾನ ಮಾಡಿದ್ದಕ್ಕೆ ಹನ್ಸಿಕಾ ವಿರುದ್ಧ ಕೇಸ್ ದಾಖಲು

    ಚೆನ್ನೈ: ಖ್ಯಾತ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿಯವರು ಪೋಸ್ಟರ್ ನಲ್ಲಿ ಧೂಮಪಾನ ಮಾಡುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಹನ್ಸಿಕಾ ಅಭಿನಯದ 50ನೇ ಚಿತ್ರವಾದ `ಮಹಾ’ ದ ಪೋಸ್ಟರ್ ಕಳೆದ ವಾರವಷ್ಟೇ ಬಿಡುಗಡೆಗೊಂಡಿತ್ತು. ಆದರೆ ಪೋಸ್ಟರ್ ಬಿಡುಗಡೆಯಾದ ಬಳಿಕ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಪೋಸ್ಟರ್ ನಲ್ಲಿ ನಟಿ ಹನ್ಸಿಕಾ ಸಾಧುಗಳ ನಡುವೆ, ಸಿಂಹಾಸನದ ಮೇಲೆ ಕುಳಿತು ಭಂಗಿ ಸೇದುತ್ತಿದ್ದಾರೆ.

    ಚಿತ್ರದ ಪೋಸ್ಟರ್ ಬಗ್ಗೆ ಪುಟ್ಟಳ್ಳಿ ಮಕ್ಕಳ ಕಚ್ಚಿ(ಪಿಕೆಎಂ) ಸಂಘಟನೆಯ ಮುಖ್ಯಸ್ಥರಾದ ಜಾನಕಿರಾಮ್ ಎಂಬವರು ಮಹಾ ಸಿನೆಮಾದ ಪೋಸ್ಟರ್ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸುತ್ತಿದೆ. ಹೀಗಾಗಿ ನಿರ್ದೇಶಕ ಜಮೀಲ್ ಹಾಗೂ ಹನ್ಸಿಕಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಘಟನೆ ಸಂಬಂಧ ಮಹಾ ಚಿತ್ರದ ನಿರ್ದೇಶಕ ಜಮೀಲ್ ಹಾಗೂ ನಟಿ ಇದೂವರೆಗೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹನ್ಸಿಕಾ ತಮ್ಮ 50ನೇ ಸಿನೆಮಾದ ಬಿಡುಗಡೆಯ ನಿರೀಕ್ಷೆಯಲ್ಲಿರುವಾಗಲೇ, ಚಿತ್ರದ ಪೋಸ್ಟರ್ ಶಾಕ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ರಸ್ತೆಗೆ ಅಂಬಿ ಹೆಸರನ್ನಿಟ್ಟು, ಪುಣ್ಯಸ್ಮರಣೆಯಲ್ಲಿ ಮದ್ಯದ ಬಾಟಲಿಗಳನ್ನು ಅರ್ಪಿಸಿದ ಗ್ರಾಮಸ್ಥರು

    ರಸ್ತೆಗೆ ಅಂಬಿ ಹೆಸರನ್ನಿಟ್ಟು, ಪುಣ್ಯಸ್ಮರಣೆಯಲ್ಲಿ ಮದ್ಯದ ಬಾಟಲಿಗಳನ್ನು ಅರ್ಪಿಸಿದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ತಾಲೂಕಿನ ತಾಳಹಳ್ಳಿ ಗ್ರಾಮದ ಗ್ರಾಮಸ್ಥರು ತಮ್ಮ ಊರಿನ ಪ್ರಮುಖ ರಸ್ತೆಗೆ ‘ಕಲಿಯುಗ ಕರ್ಣ ಅಂಬರೀಶ್’ ಎಂದು ನಾಮಕರಣ ಮಾಡುವ ಮೂಲಕ ಮಂಡ್ಯದ ಗಂಡು ದಿವಂಗತ ಅಂಬರೀಶ್ ರವರ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ನೇರವೇರಿಸಿದ್ದಾರೆ.

    ತಾಳಹಳ್ಳಿ ಗ್ರಾಮಸ್ಥರು ಇಂದೂ ಅದ್ಧೂರಿಯಾಗಿ ಅಂಬರೀಷ್‍ರವರ ಪುಣ್ಯಸ್ಮರಣೆಯನ್ನು ಮಾಡಿದ್ದಾರೆ. ಅಲ್ಲದೇ ವಿಶೇಷವಾಗಿ ಅಂಬರೀಶ್ ಭಾವಚಿತ್ರಕ್ಕೆ ಕಬ್ಬಿನ ಜಲ್ಲೆ ಹಾಗೂ ಹೂವಿನ ಅಲಂಕಾರ ಮಾಡಿ, ಪೂಜೆ-ಪುನಸ್ಕಾರ ನೇರವೇರಿಸಿದರು. ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹೊಸ ಬಟ್ಟೆ, ಮದ್ಯದ ಬಾಟಲಿ, ಸಿಗರೇಟ್ ಸೇರಿದಂತೆ ಹೂ, ಹಣ್ಣು-ಕಾಯಿ ಸೇರಿದಂತೆ ಭರ್ಜರಿ ಬಾಡೂಟವನ್ನ ನೈವೈದ್ಯವಾಗಿ ಅರ್ಪಿಸಿದ್ದಾರೆ.

    ಬಾಡೂಟದಲ್ಲಿ ಅಂಬಿ ಅವರಿಗೆ ಪ್ರಿಯವಾಗಿದ್ದ ಮುದ್ದೆ, ನಾಟಿಕೋಳಿ ಸೇರಿದಂತೆ ಬಾಡೂಟವನ್ನು ನೂರಾರು ಮಂದಿಗೆ ಉಣಬಡಿಸಿದ್ದಾರೆ. ಗ್ರಾಮಸ್ಥರು ತಮ್ಮೂರಿನ ರಸ್ತೆಗೆ ಅಂಬಿ ಹೆಸರು ನಾಮಕರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ದಿವಂಗತ ಅಂಬರೀಶ್ ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv