Tag: Actor yash

  • ಅಪ್ಪನ ಕೈ ಬೆರಳ ಬಿಗಿದಪ್ಪಿದ ಮಗಳು – ಪುಳಕಗೊಂಡ ಯಶ್

    ಅಪ್ಪನ ಕೈ ಬೆರಳ ಬಿಗಿದಪ್ಪಿದ ಮಗಳು – ಪುಳಕಗೊಂಡ ಯಶ್

    ಬೆಂಗಳೂರು: ಮನದಾಸೆಯಂತೆ ಜನಿಸಿದ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

    ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ ಮೇಲಂತೂ ಅವಳೊಂದಿಗೆ ನನ್ನ ಪ್ರೀತಿ ನೂರ್ಮಡಿಯಾಗಿದೆ” ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ನಟಿ ರಾಧಿಕ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಮಗಳೊಂದಿಗೆ ಯಶ್ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಮಗಳನ್ನು ಒಂದೇ ನೋಟದೊಂದಿಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ಫೋಟೋ ಕಂಡ ಅಭಿಮಾನಿಗಳು ಸಂತಸಗೊಂಡು ಶುಭ ಕೋರಿದ್ದಾರೆ.

    ಅಂದಹಾಗೇ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಇಷ್ಟ ಪಟ್ಟಿದ್ದ ಸಂಗತಿ ಈಗಾಗಲೇ ತಿಳಿದಿದೆ. ಮುದ್ದಿನ ಮಗಳ ಜನನದ ಸುದ್ದಿ ಕೇಳಿದ ಯಶ್ ಕಣ್ಣಲ್ಲಿ ಆನಂದಭಾಷ್ಪ ತುಂಬಿತ್ತು ಎಂದು ವೈದ್ಯರು ತಿಳಿಸಿದ್ದರು.

    https://www.youtube.com/watch?v=VxelNRK-5H0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ

    ಕೋಲಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿಢೀರ್ ಪ್ರತ್ಯಕ್ಷ

    ಕೋಲಾರ: ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಕೋಲಾರದಲ್ಲಿ ಪ್ರತ್ಯಕ್ಷರಾಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುದುಕುಳ ಬಳಿ ಇರುವ ಜೋಯನ್ ಗಾಲ್ಫ್‍ಗೆ ನಟ ಯಶ್ ಬುಧವಾರ ಭೇಟಿ ನೀಡಿದ್ದಾರೆ. ಈ ವೇಳೆ ಗಾಲ್ಫ್ ಅಧ್ಯಕ್ಷ ರೈ ಹಾಗೂ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿಯನ್ನು ಯಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಯಶ್ ಭೇಟಿ ನೀಡಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ರಾಕಿಂಗ್ ಸ್ಟಾರ್ ಜೊತೆ ಪೀಪಲ್ ಸ್ಟಾರ್ ಎಂಎಲ್‍ಎ ಎಂದು ಹಣೆ ಪಟ್ಟಿ ಬರೆದು ಹಂಚಿಕೊಂಡಿದ್ದಾರೆ. ಭೇಟಿ ವೇಳೆ ನಟ ಯಶ್ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ ನೂತನ ಶಾಸಕರಾಗಿ ಆಯ್ಕೆ ಆಗಿರುವ ಶಾಸಕ ಎಸ್‍ಎನ್ ನಾರಾಯಣಸ್ವಾಮಿ ಅವರಿಗೆ ಶುಭಾಶಯ ಕೋರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಕ್ರೀಯರಾಗಿದ್ದ ನಟ ಯಶ್ ತಮ್ಮ ಆಪ್ತ ವಲಯದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.

    ಸದ್ಯ ಸ್ಯಾಂಡಲ್‍ವುಡ್ ಸಿನಿಮಾ ಅಭಿಮಾನಿಗಳು ಯಶ್ ಅವರ ಕೆಜಿಎಫ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದು, ಚಿತ್ರ ತಂಡ ಆರಂಭದಿಂದಲೇ ಚಿತ್ರ ಕಥೆಯ ಕುರಿತ ರೋಚಕತೆಯನ್ನು ಉಳಿಸಿಕೊಂಡು ಬರುತ್ತಿದೆ. ಚಿತ್ರದಲ್ಲಿ ಯಶ್ ಅವರ ಲುಕ್ ಸಹ ಅಭಿಮಾನಿಗಳಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಯಶ್ ರ ಹೊಸ ಲುಕ್ ನ ಫೋಟೋವನ್ನು ಅಭಿಮಾನಿಗಳೇ ಸಿದ್ಧಗೊಳಿಸಿ ಬಿಡುಗಡೆಗೊಳಿಸಿದ್ದರು. ಸದ್ಯಕ್ಕೆ ಕೆಜಿಎಫ್ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ.

  • ಮಾನಪ್ಪ ವಜ್ಜಲ್ ಪರ ಪ್ರಚಾರ – ಬದಾಮಿಗೆ ನಾನು ಹೋಗಲ್ಲ: ನಟ ಯಶ್

    ಮಾನಪ್ಪ ವಜ್ಜಲ್ ಪರ ಪ್ರಚಾರ – ಬದಾಮಿಗೆ ನಾನು ಹೋಗಲ್ಲ: ನಟ ಯಶ್

    ರಾಯಚೂರು: ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ನಟ ಯಶ್ ಭರ್ಜರಿ ಪ್ರಚಾರ ನಡೆಸಿದ್ದಾರೆ.

    ಲಿಂಗಸುಗೂರು ಹಾಗೂ ಮುದಗಲ್ ನಲ್ಲಿ ಯಶ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ ನನ್ನ ಸ್ನೇಹಿತರು, ಅವರ ವ್ಯಕ್ತಿತ್ವಕ್ಕೆ ಬಂದು ಪ್ರಚಾರ ಮಾಡುತ್ತಿದ್ದೇನೆ. ಆದರೆ ಬದಾಮಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

    ನಾನು ನನ್ನ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇನೆ. ಈ ಭಾಗದಲ್ಲಿ ಯಶೋಮಾರ್ಗದ ಕೆಲಸ ವಾಗಬೇಕಾಗಿದೆ. ಅದಕ್ಕಾಗಿ ನಾನು ಸ್ನೇಹಿತರ ಪರ ಕೆಲಸ ಮಾಡುತ್ತಿದ್ದೇನೆ. ನಾನು ಜಾತಿ, ಧರ್ಮ ನೋಡಿ ಪ್ರಚಾರ ಮಾಡುವುದಿಲ್ಲ. ನಟರು ಸಮಾಜಕ್ಕೆ ಏನೂ ಮಾಡಲ್ಲ ಎಂದು ಜನ ಹೇಳುತ್ತಿದ್ದರು ಹೀಗಾಗಿ ಸುಮ್ಮನೆ ಇದ್ದವರನ್ನ ಹೋರಾಟ ಹಾಗೂ ಸಮಾಜ ಕೆಲಸಕ್ಕೆ ಹಚ್ಚಿದ್ದಾರೆ. ರಾಜಕೀಯಕ್ಕೆ ಮೊದಲಿನಿಂದಲೂ ನನಗೆ ಸಂಪರ್ಕವಿದೆ. ಯಶೋಮಾರ್ಗದಿಂದ ಅದನ್ನ ಮಾಡಿ ತೋರಿಸುತ್ತೇನೆ ಎಂದರು.

    ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೋಗುವುದಿಲ್ಲ. ಸ್ನೇಹಿತರು ಕರೆದರೆ ಮಾತ್ರ ಹೋಗುತ್ತೇನೆ. ಬದಾಮಿಗೆ ನಾನು ಹೋಗುವುದಿಲ್ಲ. ನಾನು ಬಂದ ತಕ್ಷಣ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವುದಿಲ್ಲ. ಪ್ರೀತಿ ವಿಶ್ವಾಸದಿಂದ ಇದ್ದವರಿಗೆ ಕೆಲಸ ಮಾಡುತ್ತೇನೆ ಅಂತ ನಟ ಯಶ್ ಹೇಳಿದರು.

  • ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

    ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

    ಬೆಂಗಳೂರು: ಮರ ಮತ್ತು ಕೆರೆಯನ್ನು ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ಫೇಸ್‍ಬುಕ್ ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ ಅಭಿಮಾನಿಯೊಬ್ಬರು ನೀವು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ, ಬೆಂಗಳೂರು ನಗರದಲ್ಲಿ ಈಗ 5 ಲಕ್ಷ ಗಿಡ ನೆಡಬೇಕಾಗಿದೆ. ಇದಕ್ಕೆ ಪ್ರೋತ್ಸಾಹ ನೀಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ. ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಯಾವುದೇ ಕ್ಷೇತ್ರದಲ್ಲಾದರೂ ಸರಿ ಮರಗಳನ್ನು ನೆಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಉತ್ತರಿಸಿದರು.

    ಯಾವುದೇ ಪಕ್ಷದ ಬಗ್ಗೆ ನನಗೆ ಸ್ಪಷ್ಟನೆ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಸ್ನೇಹಿತರು ರಾಜಕೀಯಲ್ಲಿ ತೊಡಗಿದ್ದಾರೆ, ಶಾಸಕರಾಗಿದ್ದಾರೆ. ಕೆಲವು ಗೆಳೆಯರು ಪ್ರಚಾರಕ್ಕೆ ಬರುವಂತೆ ಕೇಳುತ್ತಿದ್ದಾರೆ. ಆಗ ಅವರಿಗೆ ನಾನು ಪ್ರಚಾರಕ್ಕೆ ಬರುತ್ತೇನೆ. ಆದರೆ, ನೀನು ಕೆಲಸ ಮಾಡದಿದ್ದರೆ ಜನರು ನನ್ನ ಕೇಳುತ್ತಾರೆ. ನಾನು ಏನು ಉತ್ತರ ಕೊಡಬೇಕು. ಆಗ ನಾನೇ ನಿಮಗೆ ವಿರುದ್ಧವಾಗಿ ನಿಲ್ಲುತ್ತೇನೆ. ಅದಕ್ಕೆ ನಾವು ಗೆಳೆಯರಾಗಿಯೇ ಇರುವುದು ಒಳ್ಳೆಯದು ಎಂದು ತಿಳಿಸುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ:ನಾನು ಯಾವುದೇ ಬಾಡಿಗೆ ಹಣ ಇಟ್ಟುಕೊಂಡಿಲ್ಲ: ಅಭಿಮಾನಿಗಳ ಪ್ರಶ್ನೆಗಳಿಗೆ ಯಶ್ ಸ್ಪಷ್ಟನೆ

    ನನಗೆ ರಾಜಕೀಯಕ್ಕೆ ಬರುವ ಆಸೆ ಇಲ್ಲ. ಒಂದು ವೇಳೆ ಬರುವುದಾದರೆ ತಿಳಿಸುತ್ತೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಅಲ್ಲಿನ ಪ್ರತಿನಿಧಿಗಳು ಆ ವಿಷಯವನ್ನು ಬಗೆಹರಿಸಲು ಹೋರಾಡಬೇಕು. ನಾನು ಭ್ರಮೆಯಲ್ಲಿ ಬದುಕುತ್ತಿಲ್ಲ. ಇಂದು ಮಾಧ್ಯಮಗಳಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳ ಬೆಂಬಲಿಗರ ವರ್ತನೆ ಹಾಗೂ ಬಂಡಾಯಗಳ ವೇಳೆ ಅವರ ವರ್ತನೆ ಹೇಗೆ ಇರುತ್ತದೆ ಎಂದು ನಾನು ನೋಡಿದೆ. ಇಲ್ಲಿ ಯಾರ ವಿರುದ್ಧ ಕಳಂಕ, ತಕರಾರುಗಳಿಲ್ಲ? ಯಾರು ಸರಿಯಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

    ಇತ್ತೀಚೆಗೆ ಒಬ್ಬರು ತಮ್ಮ ಕ್ಷೇತ್ರದಲ್ಲಿ ಹತ್ತು ಕೆರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ಅವರಿಗೆ ಬೆಂಬಲ ನೀಡುತ್ತೇನೆ. ನಾಲ್ಕು ಜನಕ್ಕೆ ಒಳ್ಳೆಯದು ಆಗುವುದಾದರೆ ನಾನು ಕೆಟ್ಟವನಾಗುವುದಕ್ಕೂ ಸಿದ್ಧ. ಯಾರಿಗೂ ಒಳ್ಳೆಯದನ್ನು ಮಾಡದೇ ಒಳ್ಳೆಯವನು ಅಂಥ ಅನಿಸಿಕೊಂಡು ಬದುಕುವುದು ಸರಿಯಲ್ಲ. ನಾನು ಏನು ಇಲ್ಲದೇ ಬಂದವನು. ಈಗ ಎಲ್ಲವೂ ಸಿಕ್ಕಿದೆ. ಇದನ್ನು ಕೊಟ್ಟಿದ್ದು ಜನ. ಈ ಜನ್ಮದಲ್ಲಿ ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತೇನೆ. ನನ್ನ ಮೇಲೆ ನೀವು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಯಾವುದೇ ಕೆಲಸ ಮಾಡುವ ವೇಳೆ ಸರ್ಕಾರ ಬೇಕಾಗುತ್ತದೆ. ಸರ್ಕಾರದ ಬೆಂಬಲ ಇಲ್ಲದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸರ್ಕಾರದ ಕೆಲಸವನ್ನು ಹೇಗೆ ಮಾಡಿಸಬೇಕು. ನಾನು ರಾಜಕಾರಣಕ್ಕೆ ಬರಬೇಕಾ, ಅದು ಆಗಲ್ಲ. ನಮ್ಮ ಮಾತನ್ನು ಕೇಳುವ ನಾಲ್ಕು ಜನ ರಾಜಕಾರಣಿಗಳು ಸಿಕ್ಕರೆ ಅವರ ಮೂಲಕ ಕೆಲಸ ಮಾಡಿಸಬಹುದು ಎಂದು ಅವರು ವಿವರಿಸಿದ್ದಾರೆ.

     

    https://www.facebook.com/TheOfficialYash/videos/2291921764368555/