Tag: actor Diganth

  • ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

    ಜಾಲಿ ಮೂಡ್‌ನಲ್ಲಿ ನಟ ದಿಗಂತ್ – ನೇತ್ರಾಣಿಯ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌

    ಕಾರವಾರ: ಸ್ಯಾಂಡಲ್‌ವುಡ್‌ ನಟ ದಿಗಂತ್‌ ಜಾಲಿ ಮೂಡ್‌ನಲ್ಲಿದ್ದಾರೆ. ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್‌ ಮಾಡಿ ಎಂಜಾಯ್‌ ಮಾಡಿದ್ದಾರೆ.

    ರಾಜ್ಯದ ಏಕೈಕಾ ಸ್ಕೂಬಾ ಡೈವಿಂಗ್ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ನಡುಗಡ್ಡೆಯಲ್ಲಿ ಇಂದು ನಟ ದಿಗಂತ್, ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಸಹಕಾರದೊಂದಿಗೆ ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. 10 ಮೀಟರ್ ಆಳಕ್ಕೆ ಹೋಗಿ ವಿವಿಧ ಭಂಗಿಯಲ್ಲಿ ಈಜಿ ಖುಷಿಪಟ್ಟರು. ಸ್ಕೂಬಾ ಡೈವಿಂಗ್‌ಗಾಗಿ ಮಾಲ್ಡೀವ್ಸ್‌ನಲ್ಲಿ ತರಬೇತಿ ಪಡೆದಿದ್ದರು. ಇದನ್ನೂ ಓದಿ: ಮೊದಲ ದಿನದ ಶೂಟಿಂಗ್‍ನಲ್ಲಿ ಪಾಲ್ಗೊಂಡ ಮೇಘನಾ ರಾಜ್

    ಮುರುಡೇಶ್ವರದ ನೇತ್ರಾಣಿಯ ನಡುಗಡ್ಡೆಗೆ ತೆರಳಿದ ಅವರು ಅರಬ್ಬೀ ಸಮುದ್ರದಲ್ಲಿ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಡೈವಿಂಗ್ ಮಾಡಿದರು. ನಂತರ ಸಮುದ್ರದಾಳದ ಜಲಚರಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದರು.

    ಹಲವು ವರ್ಷದ ನಂತರ ವೀಕೆಂಡ್ ಮಸ್ತಿಗಾಗಿ ತಂದೆ ಕೃಷ್ಣಮೂರ್ತಿ ಮಂಚಾಲೆ, ತಾಯಿ ಮಲ್ಲಿಕಾ ಹಾಗೂ ಐಂದ್ರಿತಾ ಸಹೋದರನೊಂದಿಗೆ ಆಗಮಿಸಿದ್ದ ಅವರು ಇದೇ ಮೊದಲ ಬಾರಿಗೆ ಮುರುಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು. ಇದನ್ನೂ ಓದಿ: ವಿಕ್ರಾಂತ್ ರೋಣ ಚಿತ್ರಕ್ಕೆ ಭರ್ಜರಿ ಆಫರ್ ನೀಡಿದ ಓಟಿಟಿ!

  • ಕೊರೊನಾ ವಾರಿಯರ್ ಆದ ದಿಗಂತ್ – ಬಡ ರೋಗಿಗಳ ಮನೆಗೆ ತೆರಳಿ ಔಷಧಿ ವಿತರಣೆ

    ಕೊರೊನಾ ವಾರಿಯರ್ ಆದ ದಿಗಂತ್ – ಬಡ ರೋಗಿಗಳ ಮನೆಗೆ ತೆರಳಿ ಔಷಧಿ ವಿತರಣೆ

    ಬೆಂಗಳೂರು: ಕೊರೊನಾ ವೈರಸ್ ಎಂಬ ಶಬ್ದ ಕೇಳಿದರೆ ಸಾಕು ಇಡೀ ವಿಶ್ವವೇ ಬೆಚ್ಚಿಬೀಳುತ್ತಿದೆ. ಇತ್ತ ಭಾರತಲ್ಲೂ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಜಾರಿಮಾಡಿದ್ದ ಲಾಕ್‍ಡೌನ್ ಅವಧಿಯನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ಬಡ ರೋಗಿಗಳು ಔಷಧಿ ಸಿಗದೇ ಪರದಾಡಬಾರದೆಂದು ನಟ ದಿಗಂತ್ ಅವರು ಬಡವರ ನೆರವಿಗೆ ನಿಂತಿದ್ದಾರೆ.

    ಹೌದು. ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ನೇತೃತ್ವದಲ್ಲಿ ನಟ ದಿಗಂತ್ ಹಾಗೂ ಯತೀಶ್ ತಂಡ ಬಡವರ ನೆರವಿಗೆ ಮುಂದಾಗಿದೆ. ಔಷಧಿಗಾಗಿ ಪರದಾಡುವ ಬಡವರಿಗೆ ಅವರ ಮನೆ ಬಾಗಲಿಗೆ ಔಷಧಿಯನ್ನು ತಲುಪಿಸುವ ಕೆಲಸವನ್ನು ತಂಡ ಮಾಡುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಔಷಧಿಯ ಅಗತ್ಯವಿರುವ ಮಂದಿಗೆ ಅದನ್ನು ತಲುಪಿಸುವ ಕೆಲಸದಲ್ಲಿ ತಂಡ ನಿರತವಾಗಿದೆ.

    ಇತ್ತ ಲಾಕ್‍ಡೌನ್ ಮತ್ತೆ ಎರಡು ವಾರ ವಿಸ್ತರಣೆ ಆದ ಕಾರಣಕ್ಕೆ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ನೆರವಿಗೆ ಮುಂದೆ ಬಂದಿರುವ ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ಸದಸ್ಯರು ಹಾಗೂ ದಿಗಂತ್ ಅವರ ತಂಡ ಜೊತೆಗೂಡಿ ಔಷಧಿ ಅಗತ್ಯವಿರುವ ಬಡವರಿಗೆ ಅದನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಕೊಡಗಿನಿಂದ ಹೊರಟಿದ್ದ ತಂಡ ಬೈಕ್‍ನಲ್ಲಿ ತೆರಳಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗೆ ಔಷಧಿ, ಮಾತ್ರೆಯನ್ನು ನೀಡಿ ಸಹಾಯ ಮಾಡಿದ್ದಾರೆ. ತಂಡದ ಈ ವಿನೂತನ ಕಾರ್ಯಕ್ಕೆ ಡಿಸಿಪಿ ಭೀಮಾಶಂಕರ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ತಂಡಕ್ಕೆ ಮತ್ತು ದಿಗಂತ್ ತಂಡಕ್ಕೆ ಶುಭಕೋರಿದ್ದಾರೆ.

    ಈ ಹಿಂದೆ ದಿಗಂತ್ ಪತ್ನಿ ನಟಿ ಐಂದ್ರಿತಾ ರೇ ಲಾಕ್‍ಡೌನ್‍ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಐಂದ್ರಿತಾ, ನಮ್ಮ ನೆರೆಹೊರೆಯಲ್ಲಿರುವ ನಾಲ್ಕು ಕಾಲಿನ ಸ್ನೇಹಿತರನ್ನು ನಾವು ಮರೆಯಬಾರದು. ಈ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ ಮತ್ತು ಕೊರೊನಾದಿಂದ ಪ್ರಸ್ತುತ ದೇಶ ಲಾಕ್‍ಡೌನ್ ಆಗಿದೆ. ಈ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ಮತ್ತು ನೀರಿನ ಕೊರತೆ ಊಂಟಾಗಿದೆ. ಆದ್ದರಿಂದ ನೀವು ಮನೆಗೆ ಬೇಕಾದ ದಿನಸಿ ತರಲು ಹೊರಹೋದಾಗ ದಯವಿಟ್ಟು ನಾಯಿಗಳಿಗೆ ಆಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.

    ಹೀಗೆ ಸಾಕಷ್ಟು ಮಂದಿ ಸಿನಿ ತಾರೆಯರು ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ, ನಿರ್ಗತಿಕರಿಗೆ ಹಾಗೂ ಮೂಕಪ್ರಾಣಿಗಳ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.

  • ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

    ಭಾವಿ ಪತ್ನಿಗೆ ಶೂಟಿಂಗ್ ಸ್ಪಾಟ್‍ನಲ್ಲೇ ಸರ್ಪ್ರೈಸ್ ಕೊಟ್ಟ ದಿಗಂತ್!

    ಬೆಂಗಳೂರು: ಹಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿದ್ದ ಸ್ಯಾಂಡಲ್‍ವುಡ್ ತಾರೆಯರಾದ ದಿಗಂತ್, ಐಂದ್ರಿತಾ ರೇ ಸಪ್ತಪದಿ ತುಳಿಯುಲು ಸಜ್ಜಾಗುತ್ತಿರುವ ಸುದ್ದಿ ಬಹಿರಂಗವಾಗುತ್ತಿದಂತೆ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಇತ್ತ ನಟ ದಿಗಂತ್ ಭಾವಿ ಪತ್ನಿಗೆ ಗೋವಾ ಶೂಟಿಂಗ್ ಸ್ಪಾಟ್‍ನಲ್ಲೇ ಪ್ರಪೋಸ್ ಮಾಡಿದ್ದು, ನೀನು ನನ್ನನ್ನು ಮದುವೆಯಾಗುತ್ತಿಯಾ ಎಂದು ಹೇಳಿ ರಿಂಗ್ ತೊಡಿಸಿದ್ದಾರೆ. ಐಂದ್ರಿತಾ ಅವರಿಗೆ ತಿಳಿಸದೇ ಪ್ಲಾನ್ ಮಾಡಿದ್ದ ದಿಗಂತ್ ಈ ಮೂಲಕ ಬಿಗ್ ಸರ್ಪ್ರೈಸ್ ನೀಡಿದರು.

    ಡಿಸೆಂಬರ್ 12 ರಂದು ಈ ಪ್ರೇಮಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಬೆಂಗಾಳಿ ಹಾಗೂ ಕರ್ನಾಟಕ ಸಂಪ್ರದಾಯದಲ್ಲಿ ಮದುವೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಶ್ರೀಲಂಕಾದಲ್ಲಿ ನಟ ದಿಗಂತ್ ಬ್ಯಾಚುಲರ್ ಪಾರ್ಟಿ ಮಾಡಿ ಮುಗಿಸಿದ್ದು, ಸದ್ಯ ಐಂದ್ರಿತಾ ಗೋವಾದಲ್ಲಿ ಗರುಡ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ. ಝೀರೋ ವೇಸ್ಟೇಜ್ ಕಾನ್ಸೆಪ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮಾಡಲು ಐಂದ್ರಿತಾ ದಿಗಂತ್ ಪ್ಲ್ಯಾನ್ ಮಾಡಿದ್ದು, ಸರಳವಾಗಿ ಸಾಂಪ್ರದಾಯಿಕವಾಗಿ ಮದುವೆ ಆಗಲು ಜೋಡಿ ನಿರ್ಧರಿಸಿದೆ.

    ಶೂಟಿಂಗ್ ಸ್ಥಳದಲ್ಲಿ ಹಿರಿಯ ನಟ ರಂಗಾಯಣ ರಘು ಸೇರಿದಂತೆ ಇಡೀ ಚಿತ್ರತಂಡ ಐಂದ್ರಿತಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಡಿಸೆಂಬರ್ 12 ಮದುವೆ ಎಂದು ಐಂದ್ರಿತಾ ಅವರು ಘೋಷಣೆ ಮಾಡುತ್ತಿದಂತೆ ಚಿತ್ರತಂಡ ಎಲ್ಲಾ ಸದಸ್ಯರು ಸಂತಸಗೊಂಡರು. ಬಳಿಕ ಮಾತನಾಡಿದ ರಂಗಾಯಣ ರಘು ಅವರು, ಇಬ್ಬರು ಒಳ್ಳೆ ಜೋಡಿಯಾಗಿದ್ದು, ದೇವರು ಇವರ ಜೀವನದಲ್ಲಿ ಸಂತಸ ನೀಡಲಿ ಎಂದು ಹಾರೈಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv