Tag: Actor Darshan Fans

  • ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಬೆಂಗಳೂರು: ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನನ್ನದೇನಾದರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ ಎಂದು ನಟ ರಕ್ಷಕ್ ಬುಲೆಟ್ (Rakshak Bullet) ಕಿಡಿಕಾರಿದ್ದಾರೆ.

    ದೊಡ್ಡಬಳ್ಳಾಪುರ (Doddaballapur) ದೇವಸ್ಥಾನಕ್ಕೆ ಹೋಗಿದ್ದ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದುಷ್ಕರ್ಮಿಗಳ ಗುಂಪೊಂದು ಡ್ರ‍್ಯಾಗರ್ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ಘಟನೆ ವೇಳೆ ರಕ್ಷಕ್ ಬುಲೆಟ್ ಕೂಡ ಇದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನನ್ನು ಒಬ್ಬರು ಕರೆದಿದ್ದರು. ಅದಕ್ಕೆ ಅಲ್ಲಿಗೆ ಹೋಗಿದ್ದೆ. ಹೋದೆ, ನನ್ನ ಕೆಲಸ ಮುಗಿಸಿ ಬಂದೆ. ಕೆಲವು ಕಡೆ ನಾನೇ ಬೆದರಿಕೆ ಹಾಕಿಸಿದ್ದೇನೆ, ಸುಪಾರಿ ಕೊಟ್ಟಿದೀನಿ ಅಂತ ಹೇಳಿದ್ದಾರೆ. ಆದರೆ ನಾನು ಇಲ್ಲಿ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಿಯತ್ತಾಗಿ ನಾನು ನನ್ನ ಕೆಲಸ ಅಂತ ಇದೀನಿ. ಘಟನೆ ನಡೆದ ಜಾಗದಲ್ಲಿ ನಾನಿದ್ದೆ. ಆದರೆ ನನಗೂ ಇದ್ಯಾವುದಕ್ಕೂ ನನಗೆ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದ್ರೆ ನನ್ನ ಮೇಲೆ ಬರುತ್ತೆ ಅಂತ ಹೋಗಿಲ್ಲ ಎಂದರು.ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಈ ಘಟನೆ ವೇಳೆ ನಾನು ಆ ಜಾಗದಲ್ಲಿದ್ದೆ ಎನ್ನುವ ಕಾರಣದಿಂದಲೇ ಇಷ್ಟೆಲ್ಲಾ ಆಗ್ತಿದೆ. ಪ್ರಥಮ್ ನನಗೆ ಅಣ್ಣನ ತರ. ಬೇರೆಯವರಿಗೆ ತೊಂದರೆ ಕೊಡೋಕೆ ಬಂದಿಲ್ಲ. ಕಲಾವಿದರಾಗಿ ಕೆಲಸ ಮಾಡೋಕೆ ಬಂದಿದೀನಿ. ಅದನ್ನೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ. ಹೀಗಾಗಿ ಯಾರೇ ಏನೇ ಕೇಳಿದರೂ ನಾನು ನಡೆದಿದ್ದನ್ನು ಹೇಳ್ತೀನಿ. ಏನೇ ಆದರೂ ನಾನು ಎದುರಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸಿದರು.

    ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರು ದೇವಸ್ಥಾನಕ್ಕೆ ಬರಲಿ, ನಾನು ಹೋಗ್ತೀನಿ. ಎಲ್ಲರೂ ಒಂದು ಕರ್ಪೂರ ಹಚ್ಚೋಣ. ನಾನೇನಾದ್ರೂ ತಪ್ಪು ಮಾಡಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಅನ್ನೋದು ಯಾರ ಮನೆ ಬಾಗಿಲನ್ನೂ ಬಿಡಲ್ಲ. ಪ್ರಥಮ್ ಅಣ್ಣನಿಗೆ ನಾನೇನಾದ್ರೂ ತೊಂದರೆ ಕೊಟ್ಟಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕೆಲವರಿಗೆ ನಾನೇನು ಮಾಡಿದ್ರೂ ಸಮಸ್ಯೆ, ಇಲ್ಲಿ ನನ್ನ ಪಾತ್ರವೇ ಇಲ್ಲ. ನನ್ನ ಬಗ್ಗೆ ಸುಮ್ಮನೇ ಅಪಪ್ರಚಾರ ಮಾಡ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನ ಬಗ್ಗೆ ಮಾತಾಡ್ತಿದ್ದಾರೆ. ರಕ್ಷಕ್ ಜೊತೆ ಹುಡುಗರಿದ್ದರು ಅಂತ ಹೇಳ್ತಿದ್ದಾರೆ. ಇದ್ರಿಂದ ನಂಗೆ ತುಂಬಾ ನೋವಾಗಿದೆ. ನನ್ನ ಮನೆಯವರಿಗೂ ತುಂಬಾ ನೋವಾಗಿದೆ. ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಒಟ್ಟಿಗೆ ಚೆನ್ನಾಗಿ ಮಾತನಾಡಿದ್ದೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡಿಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದರು. ಆ ಸ್ಥಳದಲ್ಲಿ ಬುಲೆಟ್ ರಕ್ಷಕ್ ಕೂಡ ಇರುವುದಾಗಿ ಹೇಳಿದ್ದರು. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.ಇದನ್ನೂ ಓದಿ: ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

  • ದರ್ಶನ್ ಮದುವೆ ಆಗ್ತೀನಿ.. ಅವರ ಹೆಂಡತಿ ಆಗೋಕೆ ರೆಡಿ: ಬಳ್ಳಾರಿ ಜೈಲ ಬಳಿ ಮಹಿಳೆ ಹೈಡ್ರಾಮಾ

    ದರ್ಶನ್ ಮದುವೆ ಆಗ್ತೀನಿ.. ಅವರ ಹೆಂಡತಿ ಆಗೋಕೆ ರೆಡಿ: ಬಳ್ಳಾರಿ ಜೈಲ ಬಳಿ ಮಹಿಳೆ ಹೈಡ್ರಾಮಾ

    – ದರ್ಶನ್‌ಗೋಸ್ಕರ ಚಿಕನ್, ಮಟನ್ ತಂದುಕೊಡ್ತೀನಿ ಎಂದ ಡಿಬಾಸ್ ಫ್ಯಾನ್
    – ಯಾರು ಸಿಗರೇಟ್ ಸೇದಲ್ಲ, ಕುಡಿಯಲ್ಲ ಹೇಳಿ ಎಂದು ಪ್ರಶ್ನೆ

    ಬಳ್ಳಾರಿ: ನಟ ದರ್ಶನ್ (Actor Darshan) ನೋಡಲೇಬೇಕು ಎಂದು ಬಳ್ಳಾರಿ ಸೆಂಟ್ರಲ್ ಜೈಲಿನ (Ballary Central Iail) ಮುಂಭಾಗ ಬಂದ ಮಹಿಳಾ ಅಭಿಮಾನಿಯೊಬ್ಬರು ಹೈಡ್ರಾಮಾ ಮಾಡಿದ್ದಾರೆ.

    ಕಲಬುರಗಿ (Kalaburagi) ಮೂಲದ ಲಕ್ಷ್ಮೀ ಎಂಬ ಮಹಿಳೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ದರ್ಶನ್ ನೋಡಲು ಬೆಂಗಳೂರಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಿದ್ದರು. ಜೈಲು ಮುಂಭಾಗದಲ್ಲಿ ಬಂದ ಮಹಿಳೆ ದರ್ಶನ್ ನೋಡಬೇಕೆಂದು ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.ಇದನ್ನೂ ಓದಿ: ಕೊಲೆಗೂ ಮುನ್ನ ದರ್ಶನ್‌ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಸ್ಥಳ ಮಹಜರು; ಫೋಟೊ ರಿವೀಲ್‌

    ಈ ಹಿಂದೆ ಇದೇ ಮಹಿಳೆ, ದರ್ಶನ್ ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿದ್ದಾಗಲೂ (Parappana Agrahara) ಅಲ್ಲಿಗೆ ಭೇಟಿ ನೀಡಿದ್ದರು. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ಆಕೆಯನ್ನು ತಿಳಿಸಿದಾಗ, ದರ್ಶನ್‌ರನ್ನು ಮದುವೆ ಆಗುವುದಕ್ಕೂ ನಾನು ರೆಡಿಯಾಗಿ ಬಂದಿರುವೆ. ನನಗೆ ದರ್ಶನ್ ಅಂದ್ರೆ ತುಂಬಾ ಇಷ್ಟ. ನಾನು ದರ್ಶನ್ ಅವರ ಹೆಂಡತಿಯಾಗುವುದಕ್ಕೂ ಸಿದ್ಧಳಿದ್ದೇನೆ. ದರ್ಶನ್ ಅವರಿಗೆ ವಿಜಯ ಲಕ್ಷ್ಮೀ (Vijaya lakshmi) ಒಬ್ಬರೇ ಹೆಂಡತಿ ಇದ್ದಾರೆ. ಇವಾಗ ನನಗೆ ಅವರೆಂದರೆ ತುಂಬಾ ಇಷ್ಟ. ನಾನು ಜೈಲಲ್ಲಿ ಅವರನ್ನು ನೋಡಲೇಬೇಕು. ಅವರನ್ನು ಮಾತಾಡಿಸಿ ಬರಲೇಬೇಕು. ನಾನು ಅವರಿಗೆ ಮಾತಾಡಿಸುವುದಕ್ಕೆ ಪರಪ್ಪನ ಆಗ್ರಹಾರಕ್ಕೂ ಹೋಗಿದ್ದಾಗ ಅವಕಾಶ ಸಿಗಲಿಲ್ಲ. ನಾನು ಅವರನ್ನು ಮಾತಾಡಿಸಿದ ಬಳಿಕವೇ ಇಲ್ಲಿಂದ ಹೋಗಬೇಕು. ನಾನು ಅವರ ರಕ್ತ ಸಂಬಂಧಿಯಾಗುವುದಕ್ಕೆ ಕಾಯ್ತಾ ಇದ್ದೀನಿ ಎಂದು ಆ ಮಹಿಳೆ ರಂಪಾಟ ಮಾಡಿದ್ದಾರೆ.

    ಬೆಂಗಳೂರಿನಿಂದ ಬಳ್ಳಾರಿಗೆ ಯಾಕೆ ಸಿಫ್ಟ್ ಮಾಡಿದ್ದೀರಾ? ಬೆಂಗಳೂರು ಪೊಲೀಸರು, ದರ್ಶನ್ ಅವರು ಸಿಗರೇಟ್ ಸೇದಿದ್ದಾರೆಂದು ಅವರನ್ನು ಇಲ್ಲಿಗೆ ಕರೆತಂದಿದ್ದಾರೆ. ಯಾರು ಬೀಡಿ ಸೇದಲ್ಲ? ಯಾರು ಸಿಗರೇಟ್ ಸೇದಲ್ಲ? ಯಾರು ಕುಡಿಯಲ್ಲ ಹೇಳಿ? ಸಿಟಿಗಳಲ್ಲಿ ಹೆಣ್ಣುಮಕ್ಕಳೇ ಇದೆಲ್ಲ ಮಾಡುತ್ತಾರೆ. ಹಂಗಾದ್ರೆ ಇವೆಲ್ಲಾ ಬ್ಯಾನ್ ಮಾಡಬೇಕು. ಯಾರು ಜೀವ ಹೊಡೆದಿಲ್ಲವಾ? ದರ್ಶನ್ ಅವರು ಒಬ್ಬ ಮಹಿಳೆಯ ಮಾನ ಕಾಪಾಡಿದ್ದಾರೆ. ಬೆಂಗಳೂರಲ್ಲಿ ಖಾಕಿ ಬಟ್ಟೆ ಹಾಕಿದವರು ದರ್ಶನ್‌ರನ್ನ ಇಲ್ಲಿಗೆ ಕಳುಹಿಸಿದ್ದಾರಲ್ಲ. ಸಿಟಿಯಲ್ಲಿ ಖಾಕಿ ಹಾಕಿಕೊಂಡು ಕೆಲಸ ಮಾಡುವವರು ಹಳ್ಳಿಗೆ ಬರಲಿ, ಹಳ್ಳಿಯವರು ಸಿಟಿಗೆ ಹೋಗಲಿ ಎಂದು ಸಿಟ್ಟಿಗೆದ್ದಿದ್ದಾರೆ.ಇದನ್ನೂ ಓದಿ: ನೋಡಿ.. ನೋಡಿ.. ಜೀವಂತ ಹೆಣವಾಗಿಬಿಟ್ಟಿದ್ದೇವೆ – ರೇಣುಕಾ ಕೊನೇ ಕ್ಷಣದ ಫೋಟೋ ಕಂಡು ತಂದೆ ಕಣ್ಣೀರು

    ಅವರ ಹೆಂಡತಿ ಜೊತೆಗೆ ಬರುತ್ತಿದ್ದೆ. ಆದರೆ ಅವರು ಇವಾಗ ಬಂದಿಲ್ಲ. ದರ್ಶನ್‌ಗೋಸ್ಕರ ಹಣ್ಣು ತೆಗೆದುಕೊಂಡು ಬಂದಿರುವೆ. ಅವಕಾಶ ಕೊಟ್ಟರೆ ಅವರಿಗೋಸ್ಕರ ಚಿಕನ್, ಮಟನ್ ತಂದು ಕೊಡುತ್ತೇನೆ. ಮಾತಾಡಲು ಬರುವವರನ್ನು ಒಳಗಡೆ ಬಿಡಬೇಕು. ನನಗೆ ಯಾರು ಕಳುಹಿಸಲಿಲ್ಲ. ನಾನು ಒಬ್ಬಳೆ ಬಂದಿದ್ದೇನೆ. ಮಾತಾಡದಿದ್ದರೂ ನಾನು ಅವರನ್ನು ನೋಡಿಕೊಂಡು ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಆಕೆಯನ್ನು ಮನವೊಲಿಸಿದ ಜೈಲು ಸಿಬ್ಬಂದಿ ವಾಪಾಸ್ ಕಳುಹಿಸಿದ್ದಾರೆ.

  • ದೇವಿ ಮೂರ್ತಿ ಮೇಲೆ ಕಾಲಿಟ್ಟು ಮಾಲೆ ಹಾಕಿದ ದರ್ಶನ್ ಅಭಿಮಾನಿ – ಫ್ಯಾನ್ಸ್ ಹುಚ್ಚಾಟಕ್ಕೆ ಜನಾಕ್ರೋಶ

    ದೇವಿ ಮೂರ್ತಿ ಮೇಲೆ ಕಾಲಿಟ್ಟು ಮಾಲೆ ಹಾಕಿದ ದರ್ಶನ್ ಅಭಿಮಾನಿ – ಫ್ಯಾನ್ಸ್ ಹುಚ್ಚಾಟಕ್ಕೆ ಜನಾಕ್ರೋಶ

    ಬಳ್ಳಾರಿ: ಜಿಲ್ಲೆಯ ಅದಿದೇವತೆ ಕನಕದುರ್ಗಮ್ಮ ದೇವಿಯ ಬೃಹತ್ ಪ್ರತಿಮೆ ಮೇಲೆ ಕಾಲಿಟ್ಟು ಮಾಲೆ ಹಾಕಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿರುವ ಘಟನೆ ಬಳ್ಳಾರಿಯಲ್ಲಿ (Ballary) ನಡೆದಿದೆ. ಕೊಲೆ ಆರೋಪಿ ದರ್ಶನ್ ಅಭಿಮಾನಿಗಳು ದೇವಿಯ ಮೇಲೆ ಕಾಲಿಟ್ಟು ಮಾಲೆ ಹಾಕಿ ಹುಚ್ಚಾಟ ಮೆರೆದಿದ್ದಾರೆ.ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

     ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀ ಕನಕ ದುರ್ಗಮ್ಮದೇವಿಯ ಮೇಲೆ ಕಾಲಿಟ್ಟು ಹಾರ ಹಾಕಿರುವುದು ಸರಿಯಲ್ಲ. ಮೂರ್ತಿಯ ಮೇಲೆ ಕಾಲಿಟ್ಟು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೊಲೆ ಆರೋಪಿ ದರ್ಶನ್ ಅಭಿಮಾನಿಗಳು (Darshan Fans) ಈ ರೀತಿ ಮಾಡಿರುವುದು ಸರಿಯಲ್ಲ. ಬೃಹತ್ ಪ್ರತಿಮೆ ಮೇಲೆ ಕಾಲಿಟ್ಟು ಮಾಲೆ ಹಾಕಬಾರದು ಎಂಬ ಕಾರಣಕ್ಕೆ ಕ್ರೇನ್ ತರಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಧರ್ಮದರ್ಶಿ ಗಾದೆಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕ್ರೇನ್ ಇದ್ದರೂ ಕೂಡ ದೇವಿಯ ಪ್ರತಿಮೆ ಮೇಲೆ ಕಾಲಿಟ್ಟು ಮಾಲೆ ಹಾಕಿರುವುದು ಖಂಡನೀಯ. ಈ ಮಹಾಪರಾಧಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯೇ ಕಾರಣ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸೆ.2ರಂದು ‘ಮ್ಯಾಕ್ಸ್’ ಸಿನಿಮಾದ ಅಪ್‌ಡೇಟ್- ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಕೂಡಲೇ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.