Tag: actor chethan

  • ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕಿತ್ತೆಸೆಯಬೇಕು- ಕಾಸ್ಟಿಂಗ್ ಕೌಚ್ ಬಗ್ಗೆ ಚೇತನ್ ಗರಂ

    ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಕಿತ್ತೆಸೆಯಬೇಕು- ಕಾಸ್ಟಿಂಗ್ ಕೌಚ್ ಬಗ್ಗೆ ಚೇತನ್ ಗರಂ

    ಮಾಲಿವುಡ್‌ನಲ್ಲಿ (Mollywood) ಹೇಮಾ ಕಮಿಟಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲೂ (Sandalwood) ಮಹಿಳೆಯರ ಸುರಕ್ಷತೆಗೆ ಕಮಿಟಿಯಾಗಬೇಕು ಎಂದು ಫೈರ್ ಸಂಸ್ಥೆ ಇಂದು (ಸೆ.5) ಸಿಎಂಗೆ ಮನವಿ ಸಲ್ಲಿಸಿದ ಬಳಿಕ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟೋ ತಲೆಮಾರಿನಿಂದ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ ಅದನ್ನು ಕಿತ್ತೆಸೆಯಬೇಕು ಎಂದು ನಟ ಚೇತನ್ (Actor Chethan) ಮಾತನಾಡಿದ್ದಾರೆ.

    ಇಂದು 153 ಜನ ಕಲಾವಿದರು ಸಹಿ ಮಾಡಿರುವ ಪ್ರತಿಯನ್ನು ಸಿಎಂಗೆ ಸಲ್ಲಿಸಿದ್ದೇವೆ. ಸದ್ಯದಲ್ಲೇ ಇದರ ಬಗ್ಗೆ ಚರ್ಚೆ ನಡೆಸಲು ಮತ್ತೊಂದು ಸಭೆ ಮಾಡೋಣ ಎಂದು ಅವರು ತಿಳಿಸಿದ್ದಾರೆ ಎಂದು ಚೇತನ್ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಎಷ್ಟೋ ತಲೆಮಾರಿನಿಂದ ಲೈಂಗಿಕ ಕಿರುಕುಳ ಇದೆ ಅಂತ ಕೂಗು ಕೇಳಿ ಬರುತ್ತಿದೆ. ಅದನ್ನ ಕಿತ್ತು ಎಸೆಯಬೇಕು ಅಂತ ಈ ಫೈರ್ ಸಂಸ್ಥೆ ಮುಂದಾಗಿದೆ ಎಂದಿದ್ದಾರೆ ಚೇತನ್. ಇದನ್ನೂ ಓದಿ:ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಮೀರಿ ಹಲವು ಸಮಸ್ಯೆಗಳಿವೆ: ಶೃತಿ ಹರಿಹರನ್

    ಕಾಸ್ಟಿಂಗ್ ಕೌಚ್ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೀವಿ. ಈ ಥರ ಸಮಸ್ಯೆ ಇದೆಯಾ ಅಂತ ಸಿಎಂ ಕೇಳಿದ್ದು ಅಸಮಾಧಾನ ಆಯಿತು. ಹೇಮಾ ವರದಿ ರಚನೆ ಆಗೋಕೆ ಸಾಕಷ್ಟು ಟೈಮ್ ತೆಗೆದುಕೊಳ್ತು. ಅಲ್ಲಿ ಆದಂತೆ ಸ್ಯಾಂಡಲ್‌ವುಡ್‌ನಲ್ಲೂ ಸಮಿತಿ ರಚನೆಯಾಗಬೇಕು. ಈ ಅನ್ಯಾಯದ ವಿರುದ್ದ ಸಾಕಷ್ಟು ಜನ ಕೈಜೋಡಿಸಿದ್ದಾರೆ. ಈ ಕೆಲಸಕ್ಕೆ ಸ್ಟಾರ್ ನಟ, ನಟಿಯರು ಬೆಂಬಲಿಸಿದ್ದಾರೆ. ಇನ್ನೂ ಹೋಮ ಹವನ ಮಾಡುವುದರಿಂದ ಒಳಿತಾಗುವುದಲ್ಲ ಎಂದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಮಿತಿ ರಚಿಸುವ ನಿರ್ಣಯಕ್ಕೆ ಸಿಎಂ ಬೆಂಬಲವಿದೆ ಎಂಬ ನಂಬಿಕೆಯಿದೆ ಎಂದು ಚೇತನ್ ಮಾತನಾಡಿದ್ದಾರೆ.

    ಅಂದಹಾಗೆ, 2017ರಲ್ಲಿ ಸ್ಥಾಪನೆಯಾದ ಆಂತರಿಕ ದೂರು ಸಮಿತಿ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ, ಅದನ್ನು ವಿರುದ್ಧ ಹೋರಾಡುವ ಒಂದು ಕಮಿಟಿ. ಕೆಲವು ವರ್ಷಗಳು ಈ ಸಮಿತಿ ಸೈಲೆಂಟ್ ಆಗಿತ್ತು. ಈಗ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಮತ್ತೆ ಕಾರ್ಯೋನ್ಮುಖವಾಗಿದೆ.

  • ಅಂಬೇಡ್ಕರ್‌ ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ: ನಟ ಚೇತನ್

    ಅಂಬೇಡ್ಕರ್‌ ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ: ನಟ ಚೇತನ್

    `ಆ ದಿನಗಳು’ (Aa Dinagalu) ಖ್ಯಾತಿಯ ಚೇತನ್ ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿಯ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ನಾಟಕವೊಂದರಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವ ಆರೋಪ ಕೇಳಿ ಬಂದಿದೆ. ನಾಟಕದಲ್ಲಿ ನಟಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯವು ಅಮಾನತು ಮಾಡಲಾಗಿದೆ. ವಿಶ್ವವಿದ್ಯಾನಿಲಯದ ನಡೆಯ ಬಗ್ಗೆ ನಟ ಚೇತನ್ ಕಿಡಿಕಾರಿದ್ದಾರೆ. ಅಂಬೇಡ್ಕರ್‌ (Ambedkar) ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ ಎಂದು ನಟ ಚೇತನ್‌ (Actor Chethan) ವಾಗ್ದಾಳಿ ಮಾಡಿದ್ದಾರೆ.

    ಇತ್ತೀಚಿಗೆ ಬೆಂಗಳೂರಿನ (Bengalore) ಜೈನ್ ವಿಶ್ವವಿದ್ಯಾಲಯದ (Jain University) ಪ್ರದರ್ಶಿಸಿದ ಕಿರು ನಾಟಕದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಈ ಕಿರು ನಾಟಕದ ವಿರುದ್ಧ ಕಿಡಿಕಾರಿದ್ದಾರೆ. ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿಸುವ ಮೂಲಕ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದ್ದಾರೆ. ಹಾಗೆಯೇ ಹಲವು ಕಡೆ ವಿದ್ಯಾರ್ಥಿಗಳ ವಿರುದ್ಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ ನಟಿ ಸಮಂತಾ

    ಇದೀಗ ಈ ಬೆಳವಣಿಗೆಯ ಕುರಿತು ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. ಬಲವಾದ ಪ್ರಜಾಪ್ರಭುತ್ವಕ್ಕಾಗಿ, ಎಲ್ಲವನ್ನೂ ಮತ್ತು ಎಲ್ಲರನ್ನೂ ತಮಾಷೆ ಮಾಡುವ ಹಕ್ಕು ನಮಗಿರಬೇಕು. ನಾವುಗಳು ಮೋದಿಯನ್ನು ಅಪಹಾಸ್ಯ ಮಾಡುವ ಸ್ಟ್ಯಾಂಡ್‌-ಅಪ್ ಕಾಮಿಕ್ಸ್ ಮತ್ತು ನಾಟಕಗಳನ್ನು ಹೇಗೆ ಸೆನ್ಸಾರ್ ಮಾಡಬಾರದು, ರಾಮ/ ಮಹಮ್ಮದ್/ಬಸವ ಅಂಬೇಡ್ಕರ್/ದಲಿತರ ವಿರುದ್ಧ `ಹಾಸ್ಯ’ವನ್ನು ಕೂಡ ಅಪರಾಧವೆಂದು ಪರಿಗಣಿಸುವುದು ಮಾಡುವುದು ಪ್ರಜಾಪ್ರಭುತ್ವವಲ್ಲ ಎಂದು ನಟ ಟ್ವೀಟ್ ಮಾಡಿದ್ದಾರೆ.

    ಜೈನ್ ಯುನಿವರ್ಸಿಟಿಯ 6 ವಿದ್ಯಾರ್ಥಿಗಳ (6 Students) ಮೇಲೆ ಎಫ್‌ಐಆರ್/ ಅಮಾನತು ವಾಕ್ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ನಟ ಚೇತನ್ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಕಾಂತಾರ’ ವಿವಾದದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

    `ಕಾಂತಾರ’ ವಿವಾದದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

    ಚಿತ್ರರಂಗದಲ್ಲಿ `ಕಾಂತಾರ’ (Kantara Film) ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. `ಕಾಂತಾರ’ ಆರ್ಭಟಕ್ಕೆ ಇತರೆ ಸಿನಿಮಾಗಳು ಡಲ್ ಹೊಡೆದಿದೆ. ದೈವ ಅಪ್ಪಟ ಕಥೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ನಡುವೆ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಚೇತನ್ ಹೇಳಿಕೆ ವಿವಾದ ಸೃಷ್ಟಿಸಿದೆ. ಇದೀಗ ಚೇತನ್ ಹೇಳಿಕೆಯನ್ನ ನಾನು ಒಪ್ಪೋದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Gnanendra) ಪ್ರತಿಕ್ರಿಯೆ ನೀಡಿದ್ದಾರೆ.

    ಚಂದನವನದಲ್ಲಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾಗೆ ಇಡೀ ಚಿತ್ರರಂಗವೇ ತಲೆಬಾಗಿದೆ. ಪರಭಾಷೆಯ ಸ್ಟಾರ್‌ಗಳು ಕೂಡ ಕನ್ನಡದ `ಕಾಂತಾರ’ ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಹೀಗಿರುವಾಗ ನಟ ಚೇತನ್ ಮಾತಿಗೆ ಆರಗ ಜ್ಞಾನೇಂದ್ರ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

    ಎಲ್ಲರಿಗೂ ವಾಕ್ ಸ್ವಾತಂತ್ರ‍್ಯ ಇರುತ್ತೆ ಮಾತಾಡಿಕೊಳ್ಳಲಿ  ಬೇಕಾದ್ರೆ. ಆದರೆ ಚೇತನ್‌ ಮಾತನ್ನ ನಾನು ಒಪ್ಪೋದಿಲ್ಲ ಎಂದು ಖಡಕ್‌ ಉತ್ತರ ಕೊಟ್ಟಿದ್ದಾರೆ. `ಕಾಂತಾರ’ (Kantara Film) ಸಿನಿಮಾ ನಾನು ನೋಡಿದೆ ತುಂಬಾ ಚೆನ್ನಾಗಿದೆ. ನಮ್ಮ ಮಲೆನಾಡಿನ ಸೊಗಡನ್ನ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಸಿನಿಮಾವೊಂದರ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಚೇತನ್ ವಿವಾದ ಕುರಿತು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ಸಂಚಲನ ಮೂಡಿಸುತ್ತಿರುವ ನಟ ಚೇತನ್ (Chetan) ಇದೀಗ ಮತ್ತೆ ಧರ್ಮದ ಬಗ್ಗೆ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ಎಡೆಮಾಡಿ ಕೊಟ್ಟಿದ್ದಾರೆ.

    `ಕಾಂತಾರ’ (Kantara) ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತಿದೆ. ಈ ಬೆನ್ನಲ್ಲೇ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ವಿರೋಧ ಮತ್ತು ಚರ್ಚೆ ನಡೆದಿತ್ತು. `ಆಮದು ಮಾಡಿಕೊಂಡ ಧರ್ಮಗಳು’ ಎಂಬ ಹೇಳಿಕೆಯನ್ನ ಚೇತನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ. ನಮ್ಮ ಆದಿವಾಸಿ- ಅಲೆಮಾರಿ ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ. ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಇಂತದ `ಆಮದು ಮಾಡಿಕೊಂಡ’ ಧರ್ಮಗಳು – ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ. ಎಲ್ಲಾ ಅಸಮಾನತೆಗಳನ್ನ ನಾವು ವಿರೋಧಿಸಬೇಕು ಎಂದಿದ್ದಾರೆ.

    ಸಿನಿಮಾಗಿಂತ ವಿವಾದಗಳ ಮೂಲಕ ಸುದ್ದಿಯಾಗುವ ನಟ ಚೇತನ್‌, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ವಿವಾದ್ಮಾತಕ ಹೇಳಿಕೆಯ ನಂತರ ಇದೀಗ ಧರ್ಮದ ಬಗ್ಗೆ ಮಾತನಾಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚೇತನ್ ಭಾರತ ಬಿಟ್ಟು ಅಮೇರಿಕಗೆ ಹೋಗಬೇಕು, ಇಲ್ಲವಾದ್ರೆ ನಾನೇ ಕಳಿಸ್ತೀನಿ : ಯುವ ನಿರ್ದೇಶಕ ಕೀರ್ತನ್ ಶೆಟ್ಟಿ

    ಚೇತನ್ ಭಾರತ ಬಿಟ್ಟು ಅಮೇರಿಕಗೆ ಹೋಗಬೇಕು, ಇಲ್ಲವಾದ್ರೆ ನಾನೇ ಕಳಿಸ್ತೀನಿ : ಯುವ ನಿರ್ದೇಶಕ ಕೀರ್ತನ್ ಶೆಟ್ಟಿ

    ಬೆಂಗಳೂರು: ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ತಾವು ಮಾಡುತ್ತಿರುವ ಸಿನಿಮಾ ಕುರಿತು ಹೇಳುತ್ತಾ ನಟ ಚೇತನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಆ ದಿನಗಳು ಚೇತನ್ ಭಾರತ ಬಿಟ್ಟು ಅಮೆರಿಕಗೆ ಹೋಗಬೇಕು. ಇಲ್ಲವಾದ್ರೆ ನಾನೇ ಅವರನ್ನು ಕಳಿಸ್ತೀನಿ ಎಂದು ಹೇಳಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ಮೀಟೂ ವಿಥ್ ಫೈಟೂ’ ಎಂಬ ಸಿನಿಮಾದ ಬಗ್ಗೆ ಬರೆದುಕೊಂಡಿರುವ ಕೀರ್ತನ್ ಶೆಟ್ಟಿ ಚೇತನ್ ವಿರುದ್ಧ ಹರಿಹಾಯ್ದಿದ್ದಾರೆ.

    ಪೋಸ್ಟ್ ವೊಂದರಲ್ಲಿ ನಾನು ಗಂಡಸರ ಪರವಾಗಿ ಇದ್ದೇನೆ. ಇತ್ತಿಚಿಗೆ ಚಿತ್ರ ರಂಗದಲ್ಲಿ ಅನೇಕ ನಟಿಯರು ಮೀಟೂ ದುರ್ಬಳಕೆ ಮಾಡಿಕೊಳ್ತಿದ್ದಾರೆ. ನನ್ನ ಚಿತ್ರ ವಿವಾದ ಸೃಷ್ಟಿಸುತ್ತೆ ಅಂತ ನಂಗೂ ಗೊತ್ತು. ಆದ್ರೆ ಈ ಚಿತ್ರ ನಮ್ಮ ಚಿತ್ರರಂಗದ ಯಾವುದೇ ಗಂಡಸರಿಗೂ ಸಂಬಂಧ ಪಟ್ಟಿದ್ದಲ್ಲ. ನಮ್ಮ ‘ಮೀಟೂ ವಿಥ್ ಫೈಟೂ’ ನಾಯಕಿ ಪ್ರಧಾನವಾಗಿರುವ ಸಿನಿಮಾ. ಕೆಲವು ಧಿಮಾಕು ಮಾಡುವ ನಟಿಯರಿಂದ ಚಿತ್ರರಂಗ ಹಾಳಾಗುತ್ತಿದೆ. ಹಿರಿಯ ನಟರ ಹೆಸರನ್ನು ಕೆಡಿಸಲು ಕೆಲವು ನಟಿಯರು ಮೀಟೂವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತವರು ನಮ್ಮ ಚಿತ್ರ ನೋಡಿಯಾದರೂ ಬುದ್ಧಿ ಕಲಿತಾರ ನೋಡಬೇಕು. ಆದರೆ ನಾನು ಒಳ್ಳೆ ಚಿತ್ರವನ್ನು ಮಾಡಿಲ್ಲ ಅಂದ್ರೆ ಹುಡ್ಕೊಂಡು ಬಂದು ಹೊಡಿರಿ ಅಂತ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಅಷ್ಟೆ ಅಲ್ಲದೆ ಚೇತನ್ ವಿರುದ್ಧ ಫೇಸ್‍ಬುಕ್‍ನಲ್ಲಿ ಇನ್ನೊಂದು ಪೋಸ್ಟ್ ಮಾಡಿರುವ ಕೀರ್ತನ್ ಶೆಟ್ಟಿ, ಕರ್ನಾಟಕದ ಅನ್ನ ತಿಂತೀಯ, ಕಾವೇರಿ ನೀರು ಕುಡಿತೀಯಾ ತಾನೇ ಮತ್ತೇಕೆ ಬಾಗ್ಲಾದೇಶದವರಿಗೆ ಸರ್ಪೋಟ್ ಮಾಡ್ತೀಯಾ. ಮೊನ್ನೆ ಯಾವುದೋ ಕೇರಳ ಕುಟ್ಟಿಗೆ ಸರ್ಪೋಟ್ ಮಾಡಿ ಒಳ್ಳೆ ಪ್ರಚಾರ ಸಿಕ್ಕಿದೆ. ಆದ್ರೆ ಇವಾಗ ಸಿಗಲ್ಲ. ಸುಮ್ಮನೆ ಕನ್ನಡದವರಿಗೆ ಸರ್ಪೋಟ್ ಮಾಡು. ಇಲ್ಲ ಅಂದ್ರೆ ಪಕ್ಕಾ ಅಮೇರಿಕಕ್ಕೆ ಬೆತ್ತಲೆಯಾಗಿ ಓಡಿಸ್ತೀನಿ. ದಯಮಾಡಿ ಕನ್ನಡಕ್ಕೆ ಬೆಂಬಲ ಕೊಡು ಗುರುವೇ. ನಿನ್ನಂತ ದೇಶ ದ್ರೋಹಿಗಳಿಗೆ ನನ್ನ ಸಿನಿಮಾದಲ್ಲಿ ಹೇಗೆ ತೋರಿಸ್ತೀನಿ ನೋಡು. ನಿನ್ನನ್ನು ಕರ್ನಾಟಕದಲ್ಲಿ ರೋಡ್‍ಗೆ ಬರೋವಾಗೆ ಮಾಡ್ತೀನಿ ಎಂದು ಬರೆದು ಕಿಡಿಕಾರಿದ್ದಾರೆ.

    ಈ ಹಿಂದೆ ಇದೇ ಕೀರ್ತನ್ ಶೆಟ್ಟಿ ನಟಿ ಸಂಯುಕ್ತ ಹೆಗಡೆ ಕನ್ನಡದ ಸನ್ನಿ ಲಿಯೋನ್, ಆಕೆಗೆ ಎಣ್ಣೆ-ಸಿಗರೇಟು, ಗಾಂಜಾ ಎಲ್ಲಾ ದುಶ್ಚಟವಿದೆ ಎಂಬುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮೀಟೂ ವಿಥ್ ಫೈಟೂ ಎಂಬ ಚಿತ್ರ ಮಾಡುತ್ತಿರುವ ಮೂಲಕ ಮತ್ತೊಂದು ವಿವಾದವನ್ನು ಎಳೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಿಂಗಾಯತ ಧರ್ಮ ಒಡೆದಿದ್ದೇ ಬಿಎಸ್‍ವೈ – ನಟ ಚೇತನ್ ಹೇಳಿಕೆಗೆ ಸಭೆಯಲ್ಲಿ ಗದ್ದಲ

    ಲಿಂಗಾಯತ ಧರ್ಮ ಒಡೆದಿದ್ದೇ ಬಿಎಸ್‍ವೈ – ನಟ ಚೇತನ್ ಹೇಳಿಕೆಗೆ ಸಭೆಯಲ್ಲಿ ಗದ್ದಲ

    ಬೆಂಗಳೂರು: ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇವುಗಳು ಅಸಮಾನತೆ ಇರುವ ಧರ್ಮ. ವೀರಶೈವದಲ್ಲಿ ಲಿಂಗಬೇಧ, ದೇವಾಲಯದ ಆಚರಣೆ, ಜಾತಿ ಬೇಧ ಒಪ್ಪಿಕೊಂಡಿದ್ದಾರೆ. ಆದ್ರೇ ಇದು ಬಸವಣ್ಣ ಒಪ್ಪಲಿಲ್ಲ. ಲಿಂಗಾಯತ ವೀರಶೈವ ಧರ್ಮ ನಮಗೆ ಬೇಕಾಗಿಲ್ಲ. ನಮ್ಮ ಒಗ್ಗಟ್ಟು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಹಾಗೂ ಯಡಿಯೂರಪ್ಪ ಅಂತ ನಟ ಚೇತನ್ ಹೇಳಿದ್ದಾರೆ.

    ನಗರದ ಬಸವ ಸಮಿತಿಯಲ್ಲಿ ನಡೆಯುತ್ತಿರುವ ಲಿಂಗಾಯತ ಧರ್ಮ- ಸ್ವತಂತ್ರ ಧರ್ಮ ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಚೇತನ್, ಬಸವಣ್ಣನವರ ಹೆಸರನ್ನು ರಾಜಕೀಯ ಪಕ್ಷದವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಬಿಜೆಪಿ ಕಾರ್ಯಕ್ರಮದಲ್ಲಿ ಸಿನಿಮಾ ರಂಗದವರೊಬ್ಬರು ಆಭಿನವ ಬಸವಣ್ಣ ಅಂತ ವರ್ಣಿಸಿದ್ರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ, ದಲಿತರ ಮನೆಯಲ್ಲಿ ತಿಂಡಿ ತಿನ್ನೋ ಡ್ರಾಮಾ ಮಾಡುವ ಯಡಿಯೂರಪ್ಪ ಆಧುನಿಕ ಕೊಂಡಿ ಮನುಷ್ಯ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

    12 ಶತಮಾನದ ಶರಣರ ತತ್ವ 21ನೇ ಶತಮಾನದಲ್ಲಿ ಪುರೋಹಿತ ಶಾಹಿಯಾಗಿ ಬದಲಾವಣೆ ಆಗಿದೆ. ಇದು ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಲ್ಲ. ಇದು ದಶಕದ ಬೇಡಿಕೆ, ಸಂವಿಧಾನದಲ್ಲಿ ಪ್ರತ್ಯೇಕ ಧರ್ಮ ರಚನೆಗೆ ಅವಕಾಶವಿದೆ ಅಂತ ಅವರು ಹೇಳಿದ್ರು.

    ನಟ ಚೇತನ್ ಅವರ ಈ ಹೇಳಿಕೆಗೆ ಸಭೆಯಲ್ಲಿ ಭಾಗಿಯಾಗಿದ್ದ ಶಿವಕುಮಾರ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಪೊಲೀಸರು ಬಂದು ಶಿವಕುಮಾರ್ ನನ್ನು ಕತ್ತು ಹಿಡಿದು ಹೊರ ದಬ್ಬಿದ್ರು. ಅಲ್ಲದೇ ಇದೇ ಸಂದರ್ಭದಲ್ಲಿ ಶಿವಕುಮಾರ್ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಿ? ಯಡಿಯೂರಪ್ಪ ಅವರನ್ನ ಪದೇ ಪದೇ ಯಾಕೆ ಬೈಯುತ್ತೀರಿ ಎಂದು ಶಿವಕುಮಾರ್ ಕೂಗಾಡಿದ್ರು. ಒಟ್ಟಿನಲ್ಲಿ ಯಡಿಯೂರಪ್ಪ ವಿರುದ್ಧ ನಟ ಚೇತನ್ ವಾಗ್ದಾಳಿ ಹಿನ್ನೆಲೆಯಲ್ಲಿ ಸಭೆಯಲ್ಲಿ ಕೊಂಚ ಗೊಂದಲ ಉಂಟಾಯಿತು.

    ಇದೇ ಸಂದರ್ಭದಲ್ಲಿ ಬೇಲಿ ಮಠದ ಶಿವರುದ್ರ ಮಹಾಸ್ವಾಮಿ ಸ್ವಾಮಿ ಮಾತನಾಡಿ, ಲಿಂಗಾಯಿತ ಮಾತ್ರ ಧರ್ಮ, ಉಳಿದೆಲ್ಲವೂ ಮತ. ವೀರಶೈವ ದಲ್ಲಿ ಜಾತಿ ಆಧಾರದ ಮೇಲೆ ಲಿಂಗವನ್ನು ವಿಂಗಡನೆ ಮಾಡಿದರು. ಬ್ರಾಹ್ಮಣರಿಗೆ ಸ್ಫಟಿಕ, ಶೂದ್ರರಿಗೆ ಮಣ್ಣಿನ ಲಿಂಗ ಕೊಟ್ಟ ಅವಿವೇಕದ ಪರಮಾವಾಧಿಯನ್ನು ಹೇಳಿಕೊಟ್ಟಿದೆ. ಆದ್ರೆ ಬಸವಣ್ಣ ಕಾಯಕದಲ್ಲಿಯೇ ಶಿವಲಿಂಗವನ್ನು, ಬದುಕಿನಲ್ಲಿಯೇ ಶಿವಲಿಂಗವನ್ನು ಕಂಡುಕೊಳ್ಳುವ ಬಗ್ಗೆ ಹೇಳಿದ್ರು ಅಂತ ವಾಗ್ದಾಳಿ ನಡೆಸಿದ್ರು.

    ಬ್ರಾಹ್ಮಣರು ಸ್ಫಟಿಕದ ಲಿಂಗ ಪೂಜಿಸಬೇಕು, ಕ್ಷತ್ರಿಯರು ಬಂಗಾರ, ಶೂದ್ರರು ತಾಮ್ರದ ಲಿಂಗ ಮತ್ತು ಅಸ್ಪೃಶ್ಯರು ಮಣ್ಣಿನ ಲಿಂಗ ಪೂಜಿಸಬೇಕು ಎನ್ನುವವರು ಅವರು. ಲಿಂಗ ಪೂಜೆಯಲ್ಲೂ ತಾರತಮ್ಯ ಮಾಡುವುದು ಅವಿವೇಕದ ಪರಮಾವಧಿ. ಹಿಂದೂ ಧರ್ಮದ ಅನುಯಾಯಿಗಳು ಅಂತಾ ಹೇಳಿಕೊಳ್ಳುವ ದರ್ದು, ಹಂಗು ನಮಗಿಲ್ಲ. ಜೈನ, ಬೌದ್ಧ, ಸಿಖ್‍ರಂತೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕತೆ ಕೊಡಿ. ಎಲ್ಲೋ ಏನೂ ಸಿಗತ್ತೆ ಅಂತಾ ತುಪ್ಪದ ಆಸೆಗೆ ಎಂಜಲು ನೆಕ್ಕುವವರಲ್ಲ ನಾವು. ಎಸ್‍ಸಿ-ಎಸ್‍ಟಿಗಳಂತೆ ಸ್ಥಾನಮಾನ ನಾವು ಕೇಳಲ್ಲ ಅಂತ ಕಿಡಿಕಾರಿದ್ರು.

    ಇದೇ ವೇಳೆ ಮಾತೇ ಮಾದೇವಿ ಹಾಗೂ ರಂಭಾಪುರಿ ಶ್ರೀಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶಿವರುದ್ರ ಸ್ವಾಮಿಗಳು, ಬಸವಣ್ಣನವರ ಬೆಳಕನ್ನು ಹಾಳು ಮಾಡಬೇಕು ಅಂತಾ ಸಾಕಷ್ಟು ಪುಸ್ತಕ ಬರೆದ್ರು. ಆದ್ರೆ ಬಸವಣ್ಣನ ಬೆಳಕು ಕಡಿಮೆಯಾಗಿಲ್ಲ. ಈಗ ಬಸವಣ್ಣ ವಿರೋಧಿ ಅಂತ ಹಣೆಪಟ್ಟಿ ಕಟ್ಟುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಈ ಬುದ್ಧಿ ಹಿಂದೆ ಎಲ್ಲಿ ಹೋಗಿತ್ತು ಅಂತ ಪ್ರಶ್ನಿಸಿದ್ರು.

    ಸಭೆಯಲ್ಲಿ ಮುಸ್ಲಿಂ ಮುಖಂಡರು ಸೇರಿದಂತೆ ಸರ್ವಧರ್ಮಿಯರು, ರುದ್ರಾಕ್ಷಿ ಮಠದ ಸಿದ್ದರಾಮೇಶ್ವರ ಸ್ವಾಮೀಜಿ, ನಿಷ್ಕಲ ಮಂಟಪದ ನಿಜಗುಣಾನಂದ ತೊಂಟದಾರ್ಯ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿದ್ದರು.

    ಇತ್ತೀಚೆಗಷ್ಟೇ ಲಿಂಗಾಯತ-ವೀರಶೈವ ಎರಡು ಒಂದೇ ಎಂದು ಸಮಾವೇಶ ನಡೆಸಲಾಗಿತ್ತು. ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆ ನಡೆಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು.

    https://www.youtube.com/watch?v=STXOtb7oEa0