Tag: actor Chetan

  • ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    ಬೆಂಗಳೂರು: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ತಾವು ಪ್ರೀತಿಸಿದ ಹುಡುಗಿ ಮೇಘಾ ಜೊತೆ ಮುಂದಿನ ತಿಂಗಳು ಅಂದರೆ ಫೆಬ್ರವರಿ 2 ರಂದು ಹಸೆಮಣೆ ಏರಲಿದ್ದಾರೆ.

    ಮದುವೆ ಸಂಭ್ರಮದಲ್ಲಿರುವ ಚೇತನ್ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಪರಿಸರ ಸ್ನೇಹಿ ವೆಡ್ಡಿಂಗ್ ಕಾರ್ಡ್, ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವಿಭಿನ್ನವಾಗಿ ಮದುವೆ ಸಂಭ್ರಮ ಆಚರಿಸಿಕೊಳ್ಳಲಿರುವ ಚೇತನ್ ಈಗ ಪ್ರೀವೆಡ್ಡಿಂಗ್ ಫೋಟೋ ಕೂಡ ಟ್ರೆಂಡ್ ಆಗಿದೆ.

    ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದಾರೆ. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಈಗ ಎಲ್ಲರ ಗಮನ ಸೆಳೆದಿದೆ.

  • ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

    ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

    ಬೆಂಗಳೂರು: ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೆ ಏನು ಗೊತ್ತಾ? ಊಟಕ್ಕೆ ಕರೆದದ್ದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಸರ್ಜಾ ಗಂಭೀರ ಆರೋಪ ಮಾಡಿದ್ದಾರೆ.

    ಶೃತಿ ಅವರ ದೂರಿನ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಐಶ್ವರ್ಯ ಅವರು, ಮೀಟೂ ಆರೋಪಕ್ಕೂ ಒಂದು ತಿಂಗಳ ಮುಂಚೆ ಆಷ್ಟೇ ನಟಿ ಶೃತಿ ನಮ್ಮ ತಂದೆ ಅವರನ್ನು ಟ್ವಿಟ್ಟರ್ ನಲ್ಲಿ ಅನ್‍ಫಾಲೋ ಮಾಡಿದ್ದರೆ. ಸಿನಿಮಾ ವೇಳೆ ಲೈಂಗಿಕ ಕಿರುಕುಳ ನೀಡಿದ್ದರೆ ಇಷ್ಟು ದಿನ ಆಕೆ ಅವರು ಸುಮ್ಮನಿದ್ದರು ಎಂದು ಉತ್ತರಿಸಬೇಕಿದೆ ಪ್ರಶ್ನೆ ಮಾಡಿದರು. ಇದೇ ವೇಳೆ ನಟ ಚೇತನ್ ವಿರುದ್ಧವೂ ಆರೋಪ ಮಾಡಿದ ಅವರು ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೇ ಏನು ಎಂದು ಗೊತ್ತಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

    ಒಂದೊಮ್ಮೆ ಸಹ ನಟಿಯನ್ನು ಊಟಕ್ಕೆ ಕರೆಯುವುದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ಕೂಡ ನನ್ನನ್ನು ಊಟಕ್ಕೆ ಕರೆದಿದ್ದಾರೆ. ಅಲ್ಲದೇ ಪ್ರೇಮ ಬರಹ ಸಿನಿಮಾ ವೇಳೆ ನಟ ಚೇತನ್ ರೊಂದಿಗೆ ಫೋಟೋ ಶೂಟ್, ವರ್ಕ್ ಶಾಪ್ ಮಾಡಲಾಗಿತ್ತು. ಈ ವೇಳೆ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನು ಲೈಂಗಿಕ ಶೋಷಣೆ ಎಂದು ಕರೆಯಬಹುದುಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅವರ ಪ್ರಕಾರ ಇದು ಲೈಂಗಿಕ ಶೋಷಣೆ ಆದ್ರೆ ಇದು ಕೂಡ ಕಿರುಕುಳ ಅಗುತ್ತದೆ ಅಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

    ನಟಿ ಶೃತಿ ಹರಿಹರನ್ ಅವರು ಈ ಹಿಂದೆ ತನ್ನ ಮೇಲೆ ಕಾಸ್ಟಿಂಗ್ ಕೌಚ್ ನಡೆದಿತ್ತು ಎಂದು ಹೇಳಿದ್ದರು. ಆದರೆ ಅಂದು ಯಾವುದೇ ನಟರ ಹೆಸರು ಬಹಿರಂಗ ಪಡಿಸಿರಲಿಲ್ಲ. ಈಗ ನಮ್ಮ ತಂದೆಯ ಹೆಸರನ್ನು ಬಳಕೆ ಮಾಡಿಕೊಳ್ಳಲು ಇಂತಹ ಆರೋಪ ಮಾಡಿದ್ದಾರೆ ಎಂದು ಐಶ್ವರ್ಯ ಸರ್ಜಾ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=p-XbtCRr48o

  • 8 ತಿಂಗ್ಳ ಹಿಂದೆ ಶೃತಿ ನಿಮ್ಮ ಸಂಸ್ಥೆಯ ಮೆಂಬರ್ ಆಗಿದ್ರಾ- ಚೇತನ್‍ಗೆ ಧೃವ ಖಡಕ್ ಪ್ರಶ್ನೆ

    8 ತಿಂಗ್ಳ ಹಿಂದೆ ಶೃತಿ ನಿಮ್ಮ ಸಂಸ್ಥೆಯ ಮೆಂಬರ್ ಆಗಿದ್ರಾ- ಚೇತನ್‍ಗೆ ಧೃವ ಖಡಕ್ ಪ್ರಶ್ನೆ

    – ಪಬ್ಲಿಕ್ ಟಿವಿಯಲ್ಲಿ ಚೇತನ್- ಧೃವ ಸರ್ಜಾ ವಾಕ್ಸಮರ

    ಬೆಂಗಳೂರು: ನಟ ಚೇತನ್ ಅವರನ್ನು ತುಂಬಾನೇ ನಾನು ಗೌರವಿಸುತ್ತೇನೆ. ಯಾಕಂದ್ರೆ ನಮ್ಮ ಅಜ್ಜಿ ಜೊತೆ ಅವರು ಗೌರವದಿಂದಲೇ ಮಾತನಾಡಿದ್ರು ಅಂತ ಮಾತು ಮುಂದುವರಿಸಿದ ನಟ ಧೃವ ಸರ್ಜಾ ಅವರು ನಟ ಚೇತನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯಲ್ಲಿ  ಇಬ್ಬರು ನಟರು ಫೋನ್ ಮೂಲಕ ಪರಸ್ಪರ ಏಕವಚನದಲ್ಲೇ ವಾಕ್ಸಮರ ನಡೆಸಿದ್ದಾರೆ. ಫೈರ್ ಎಂಬ ಸಂಸ್ಥೆ ಆರಂಭವಾಗಿ ಒಂದೂವರೆ ವರ್ಷ ಆಯ್ತಂತೆ. ಶೃತಿ ಅದರ ಮೆಂಬರ್ ಆಗಿ 8 ತಿಂಗಳು ಆಯಿತಂತೆ. ಅದರ ಸದಸ್ಯರಾಗೋದು ಏನಕ್ಕೆ ಅಂದ್ರೆ ಏನಾದ್ರೂ ಒಂದು ಆಪಾದನೆ ಇದ್ದರೆ ಮಾತ್ರ ಅದ್ರ ಮೇಂಬರ್ ಆಗ್ತಾರೆ. ಹೀಗಾಗಿ 8 ತಿಂಗಳ ಹಿಂದೆ ಶೃತಿ ಹರಿಹರನ್ ಮೆಂಬರ್ ಆಗಿರೋದು ಸತ್ಯನಾ ಸುಳ್ಳಾ ಎಂದು ನೇರವಾಗಿ ನಟ ಧೃವ ಅವರು ಚೇತನ್ ಅವರನ್ನು ಪ್ರಶ್ನಿಸಿದ್ದಾರೆ.

    ಈ ವೇಳೆ ಚೇತನ್, ಇಂದು ಶೃತಿ ಹರಿಹರನ್ ಆರೋಪದಿಂದ ನಿಮ್ಮ ಕುಟುಂಬಕ್ಕೆ ತೊಂದರೆಯಾಗಿರುವುದು ನಮಗೆಲ್ಲ ಬೇಜಾರಾಗಿದೆ ಅಂತ ಹೇಳಿದ್ರೆ, ಈ ನಾಟಕಗಳೆಲ್ಲ ಬೇಡ. ನನ್ನ ಪ್ರಶ್ನೆಗೆ ಉತ್ತರಿಸಿ ಅಷ್ಟು ಸಾಕು ಅಂತಾ ಚೇತನ್ ವಿರುದ್ಧ ಧೃವ ವಾಗ್ದಾಳಿ ನಡೆಸಿದರು.

    ಇಬ್ಬರ ಸಂಭಾಷಣೆ ಹೀಗಿತ್ತು
    ಚೇತನ್: ನಮ್ಮ ಫೈರ್ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕೆಲಸಗಳನ್ನು ನಾನು ಮಾಡಿಕೊಂಡು ಬಂದಿದ್ದೇವೆ.

    ಧೃವ: ನಿಮ್ಮ ಸಂಸ್ಥೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ನಿಜ. ಅದರಲ್ಲಿ ಹೆಣ್ಣು ಮಕ್ಕಳಿದ್ದಾರೆ ಎಂದ್ರೆ ನಾವೆಲ್ಲ ಆ ಸಂಸ್ಥೆಯನ್ನು ಗೌರವಿಸುತ್ತೇವೆ. ನೀನು ಇದ್ದೀಯಾ ಅಂತಾನೂ ಗೌರವಿಸುತ್ತೇನೆ. ಯಾಕಂದ್ರೆ ನಿನಗೆ ಗೊತ್ತು. ಹೇಗೆ ಮಾತಾಡ್ಬೇಕು.. ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ಚೆನ್ನಾಗಿ ಗೊತ್ತು. ಆದ್ರೆ ಮಿಸ್ಟರ್ ಚೇತನ್, ನನ್ನ ಪ್ರಶ್ನೆಗೆ ಉತ್ತರಿಸಿ. ಅನ್ಯಾಯವಾಗಿರುವವರಷ್ಟೇ ನಿಮ್ಮ ಸಂಸ್ಥೆಗೆ ಮೆಂಬರ್ ಆಗ್ತಾರೆ. ಶೃತಿ ಹರಿಹರನ್ ಅವರಿಗೆ ಅನ್ಯಾಯವಾಗಿದೆ ಅಂತಾನೇ ಅವರು ನಿಮ್ಮ ಸಂಸ್ಥೆಯ ಸದಸ್ಯರಾಗಿದ್ದಾರೆ ಅಂದ್ರೆ 8 ತಿಂಗಳಿಂದ ಏನು ಮಾಡುತ್ತಿದ್ರಿ?.

    ಚೇತನ್: ನಾವು ಈಗಷ್ಟೇ ಸಂಸ್ಥೆ ಕಟ್ಟಿಕೊಂಡು ಬರುತ್ತಿದ್ದೇವೆ ಅಷ್ಟೆ. ಅದರಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಯಾವತ್ತು ಶೃತಿ ಅವರು ದೊಡ್ಡ ಪ್ರಮಾಣದಲ್ಲಿ ನಮ್ಮ ಜೊತೆ ನಿಂತ್ರು ಅಂದ್ರೆ ಯಾವಾಗ ಕನ್ನಡ ಚಿತ್ರರಂಗದಲ್ಲಿ ನಾವು ಒಂದು 50 ಜನರ ಸಹಿ ತೆಗೆದುಕೊಂಡು `ಅಮ್ಮಾ’ ಅನ್ನೋ ಮಲೆಯಾಲಂ ಇಂಡಸ್ಟ್ರಿ ಮೇಲೆ ದಿಲೀಪ್ ಅನ್ನೋ ನಟನ ವಿರುದ್ಧ ಹೋರಾಡಿದ್ವಿ.

    ಧೃವ: ನನಗೆ ಅದ್ಯಾವುದು ಬೇಡ..8 ತಿಂಗಳ ಹಿಂದೆ ಹೇಗೆ ಅವರ(ಅರ್ಜುನ್ ಸರ್ಜಾ) ಮೇಲೆ ದಾಳಿ ಮಾಡೋದು ಅನ್ನೋದನ್ನು ಸ್ಟಡಿ ಮಾಡುತ್ತಿದ್ರಾ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು. ಇದರಿಂದ ನಿನ್ನ ಬಗ್ಗೆ ನಿನಗೆ ನಾಚಿಕೆಯಾಗಲ್ವ? ಒಬ್ಬ ನಟನಾಗಿ ಇಂತಹುದನ್ನೆಲ್ಲಾ ಹೇಗೆ ಮಾಡ್ತಿಯಾ?

    ಒಬ್ಬ ಕಲಾವಿದನಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಮ್ಮ ಮನೆಯವರು ನಮಗೆ ಚೆನ್ನಾಗಿಯೇ ಹೇಳಿಕೊಟ್ಟಿದ್ದಾರೆ. ನೀನು ಚೆನ್ನಾಗಿ ನಟಿಸಲಲ್ಲ. ಯೂ ಆರ್ ಅನ್ ಫಿಟ್ ಅಂತ ಒಬ್ಬ ಕಲಾವಿದನಿಗೆ ಹೇಳಿದ್ರೆ ಅದು ಅವಮಾನ ಆಗುತ್ತೆ ಅಂತಾನೇ ಅವರು(ಅರ್ಜುನ್) ನಿಮಗೆ ಮೆಸೇಜ್ ಮಾಡಿದ್ದಾರೆ. ಆದ್ರೆ ನೀವು ಅದಕ್ಕೆ ಉಲ್ಟಾ ಮೆಸೇಜ್ ಮಾಡಿದ್ದೀರಾ. ಹೀಗಾಗಿ ಅವರು ಪ್ರೊಫೆಶನಲಿ ಇ-ಮೇಲ್ ಇ- ಮೇಲ್ ಮಾಡಿದ್ದಾರೆ ಅಂತ ಹೇಳಿದ್ರು.

    ಈ ಇ-ಮೇಲ್ ಗೆ ನಾನೂ ಪ್ರಸ್ತಾಪ ಮಾಡಿದ್ದೇನೆ ಅಂತ ಚೇತನ್ ಹೇಳಿದ್ದಾರೆ. ಅಲ್ಲದೇ ಸರ್ಜಾ ಕುಟುಂಬದ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಧೃವ, ವೈಯಕ್ತಿಕವಾಗಿ ದ್ವೇಷ ಇಲ್ಲ ಅಂದ ಮೇಲೆ ಒಂದು ಹುಡುಗಿಯನ್ನು ಹಿಡ್ಕೊಂಡು ಯಾಕೆ ಈ ರೀತಿ ಮಾಡ್ತಿದ್ದೀಯಾ? ಯಾಕೆ ಹುಡುಗರಿಗೆ ಯಾರಿಗೂ ಅನ್ಯಾವಾಗಿಲ್ಲ ಅಂತ ಮರು ಪ್ರಶ್ನೆ ಹಾಕಿದ ಅವರು, ಫೈರ್ ಸಂಸ್ಥೆ ಬದಲು ವಾಟರ್ ಸಂಸ್ಥೆ ಅನ್ನೋದನ್ನು ಓಪನ್ ಮಾಡು.

    ನಮ್ಮ ಅಂಕಲ್ ಮೇಲೆ ನಾಯಿ, ನರಿ, ಕ್ರಿಮಿ, ಕೀಟ ಯಾರು ಏನೇ ಹೇಳಿದ್ರೂ ನಾವು ನಂಬಲ್ಲ. ನಾವು ಏನು ಅನ್ನೋದು ನಮಗೆ ಗೊತ್ತಿದೆ. ಕಾನೂನಿಗಿಂತ ನಿಮ್ಮ ಫೈರ್ ಸಂಸ್ಥೆ ದೊಡ್ಡದಲ್ಲ ಅಂದ್ರು.

    ಚೇತನ್: ನಾವು ಇಲ್ಲಿ ಪ್ರಚಾರಕ್ಕೋಸ್ಕರ ನಿಂತುಕೊಂಡಿಲ್ಲ. ಈ ರೀತಿ ನೀವು ಕೆಟ್ಟದಾಗಿ ಮಾತಾಡೋದು ನಿಜವಾಗಿಯೂ ಸರಿಯಿಲ್ಲ. ಒಂದು ಕಡೆ ನಾನು ಮಹಿಳೆಯರ ಪರವಾಗಿ ಅವರಿಗೆ ಕಷ್ಟಗಳು ಆಗಬಾರದು ಅಂತಾನೂ ಹೇಳುತ್ತೀರಾ. ಇನ್ನೊಂದು ಕಡೆ ಮಹಿಳೆಯರ ಪರ ನಿಂತ್ರೆ ಅದಕ್ಕೂ ಹೇಳುತ್ತೀರಾ. ಇದು ಸರಿಯಲ್ಲ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5RZ_sBab49c

    https://www.youtube.com/watch?v=7NpriWx6y3k

    https://www.youtube.com/watch?v=o_HWldGMV30

  • ಬೆಳೆಯಲು ಪ್ರತಿಭೆ ಬಳಸಿ, ವಾಮಮಾರ್ಗ ಬೇಡ: ಚೇತನ್‍ಗೆ ಜಗ್ಗೇಶ್ ಟಾಂಗ್

    ಬೆಳೆಯಲು ಪ್ರತಿಭೆ ಬಳಸಿ, ವಾಮಮಾರ್ಗ ಬೇಡ: ಚೇತನ್‍ಗೆ ಜಗ್ಗೇಶ್ ಟಾಂಗ್

    ಬೆಂಗಳೂರು: ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗ ನಡೆಯುತ್ತಿರುವ ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಚಿತ್ರರಂಗದ ನಟರು ಹೋರಾಟಕ್ಕೆ ಕೊನೆಯವರೆಗೂ ಬೆಂಬಲ ನೀಡಬೇಕು ಎಂದು ಹೇಳಿದ್ದ ನಟ ಚೇತನ್ ಅವರ ಹೇಳಿಕೆಗೆ ನಟ ಜಗ್ಗೇಶ್ ಟ್ವೀಟ್ ಮಾಡಿ ಟಾಂಗ್ ನೀಡಿದ್ದಾರೆ.

    ಯಾಕೆ ಪಾಪ ಈತ ಹೀಗೆ. ಪ್ರತಿ ನಡೆಯು ತಮ್ಮ ಉದ್ದೇಶ ಜಾಣ ಪ್ರೇಕ್ಷಕರಿಗೆ ಅರಿವಾಗಿದೆ. ನಮ್ಮತನ ವೃದ್ಧಿಸಿಕೊಳ್ಳುವ ಜಾತ್ರೆಗಿಂತ ಹೃದಯ ದೇವರು ಜನಮೆಚ್ಚುವಂತೆ ಮಾಡುವ ಕಾರ್ಯ ಶ್ರೇಷ್ಠ. ಬಣ್ಣ ಹಚ್ಚಿ ಹುಲಿಯಾದ ನರಿ ಕಥೆ ಆಗಬಾರದು ಬದುಕು. ಅನೇಕ ಹಿರಿಯ ನಟರು ಬಾಳಿ ಒಳ್ಳೆ ಸಂದೇಶ ಕೊಟ್ಟ ರಂಗ ನಮ್ಮದು. ಬೆಳೆಯಲು ಪ್ರತಿಭೆ ಬಳಸಿ ವಾಮಮಾರ್ಗ ಬೇಡ ಎಂದು ಸಲಹೆ ನೀಡಿ ಟ್ವೀಟ್ ಮಾಡಿದ್ದಾರೆ.

    ಇಂದು ನಟ ಚೇತನ್ ಅವರು ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ವೇಳೆ ಮಹದಾಯಿ ಹೋರಾಟಕ್ಕೆ ಚಿತ್ರರಂಗದ ಹಿರಿಯರು ಕುಳಿತು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಬೇಕು. ಎಷ್ಟೋ ವರ್ಷದ ಹಿಂದೆ ಉತ್ತರ ಕರ್ನಾಟಕ್ಕೆ ಹೋಗಿ ಹೋರಾಟದಲ್ಲಿ ಭಾಗಿಯಾಗಿದ್ದರು. ಅದು ಒಳ್ಳೆಯ ಕೆಲಸವೇ. ಆದರೆ ಹೋರಾಟ ಅಂದರೆ ಒಂದು ಕಡೆ ಹೋಗಿ ಕೈ ಆಡಿಸಿ ಮೆರವಣಿಗೆ ಮಾಡುವುದಲ್ಲ. ಹೋರಾಟ ಅಂದರೆ ಅದು ಬಗೆ ಹರಿಯುವವರೆಗೆ ಜನರ ಜೊತೆ ಇರಬೇಕು ಎಂದು ಹೇಳಿದ್ದರು. ಇದನ್ನೂ ಓದಿ:  ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    “ಲೇ ತಮ್ಮ ನೀನು ಕಲಾವಿದನೊ ಅಥವಾ..? ಹುಬ್ಬಳ್ಳಿಗೆ ಕನ್ನಡ ಚಿತ್ರರಂಗದವರು ಬರಿ ಕೈ ಬಿಸಿ ಮೆರವಣಿಗೆ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕೆ ಹೋಗಿಲ್ಲಪ್ಪ. ರೈತರ ಪ್ರತಿಯೊಂದು ಕಷ್ಟ ದುಃಖಗಳಲ್ಲಿ ನಾವುಗಳು ಯಾವಾಗಲು ನಿಮ್ಮ ಜೊತೆ ಸದಾ ಇರುತ್ತವೆ ಎಂದು ಧೈರ್ಯ ತುಂಬಲು ಹೋಗಿದ್ದು ಸ್ವಾಮಿ” ಎಂದು ಮೇಘರಾಜ್24 ಎಂಬವರು ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಮರು ಟ್ವೀಟ್ ಮಾಡಿ ಜಗ್ಗೇಶ್ ಈ ಮೇಲಿನಂತೆ ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?

    https://www.youtube.com/watch?v=hzIeun7Lix8

     

     

  • ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    ಮೂರು ಪಕ್ಷಗಳಿಗೆ ರಾಜಕೀಯ ಬೇಕಿದೆ, ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ: ಚೇತನ್

    ಬೆಂಗಳೂರು: ಮಹದಾಯಿ ಹೋರಾಟವನ್ನು ರಾಜಕೀಯ ಪಕ್ಷಗಳು ಪತ್ರ ರಾಜಕೀಯ ನಡೆಸಲು ಬಳಸಿಕೊಳ್ಳುತ್ತಿದ್ದು, ರಾಜ್ಯದ ಪ್ರಮುಖ ಮೂರು ಪಕ್ಷಗಳು ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿವೆ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

    ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಮಹದಾಯಿ ಹೋರಾಟಗಾರರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿದ ಅವರು, ಮೂರು ಪಕ್ಷಗಳು ಮಹದಾಯಿ ಇತ್ಯರ್ಥ ಮಾಡುವಲ್ಲಿ ವಿಫಲವಾಗಿವೆ. ಇವರಿಗೆ ರೈತರ ಸಮಸ್ಯೆ ಬಗೆಹರಿಸುವ ಚಿಂತೆ ಇಲ್ಲ. ಕೇವಲ ಅಧಿಕಾರದ ಆಸೆ ಇದೆ. ಅದ್ದರಿಂದ ಜನ ಸಾಮಾನ್ಯರ ಹೋರಾಟಕ್ಕೆ ಪರ್ಯಾಯ ಶಕ್ತಿ ಬೇಕಿದೆ ಎಂದರು.

    ಮಹದಾಯಿ ಸಮಸ್ಯೆ ಬರೀ ಪಕ್ಷದ ಸಮಸ್ಯೆ ಮಾತ್ರವಲ್ಲ. ಈ ಸಮಸ್ಯೆ ಕರ್ನಾಟಕದ ಮೂಲಭೂತ ಹಕ್ಕು. ಯಡಿಯೂರಪ್ಪ ಅವರು 15 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದೇ ಈಗ ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.

    ಇದೇ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿ ಮೋದಿ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಆದರೆ ಒಮ್ಮೆಯೂ ಮಹದಾಯಿ ಕುರಿತು ಮಾತನಾಡಿಲ್ಲ. ಕೇವಲ ಬುಲೆಟ್ ರೈಲು, ಸ್ಮಾಟ್ ಸಿಟಿ, ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಅವರಿಗೆ ರೈತರು, ಜನಸಾಮಾನ್ಯರ ಬಗ್ಗೆ ಕಳಜಿ ಇಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವಾಗಿ ಮಧ್ಯ ಪ್ರವೇಶ ಮಾಡಬೇಕೆಂದು ಎಂದು ಆಗ್ರಹಿಸಿದರು.

    ರಾಜ್ಯಸರ್ಕಾರವು ಕೇವಲ ಪತ್ರ ಬರೆದು ಕೈತೊಳೆದುಕೊಂಡಿದೆ. ಆದರೆ ಸರ್ಕಾರದ ಪ್ರತಿನಿಧಿಗಳನ್ನು ರಾಷ್ಟ್ರಪತಿಗಳ ಬಳಿ ಕಳುಹಿಸಿ ಮನವಿ ಮಾಡಬೇಕು. ರಾಜಕೀಯ ಬಿಟ್ಟು ಕೆಲಸ ಮಾಡಿದರೆ ಈ ವಿಚಾರವನ್ನು ಕೆಲವೇ ನಿಮಿಷಗಳಲ್ಲಿ ಬಗೆಹರಿಸಬಹುದು. ಆದರೆ ಅವರಿಗೆ ಈ ಸಮಸ್ಯೆಯನ್ನು ಪರಿಹರಿಸುವ ಅವಶ್ಯಕತೆ ಇಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿಗೆ ತಿರುಗುಬಾಣವಾದ ಮಹದಾಯಿ ವಿವಾದ – ಉಸ್ತುವಾರಿಗಳ ಮೇಲೆ ಶಾ ಗರಂ

    ಕನ್ನಡ ಚಿತ್ರರಂಗ ನಿರಂತರವಾಗಿ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸುತ್ತದೆ. ಕೇವಲ ಯಾವುದೇ ಒಂದು ಸ್ಥಳಕ್ಕೆ ಭೇಟಿ ನೀಡಿ ಮೆರವಣಿಗೆ ಮಾಡಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ನಿರಂತರವಾಗಿ ಸಮಸ್ಯೆ ಬಗೆ ಹರಿಯುವವರೆಗೆ ನಾವು ಹೋರಾಟಗಾರರ ಪರ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

    ಹೆಗ್ಡೆಗೆ ತಿರುಗೇಟು: ಕೇಂದ್ರ ಸಚಿವರೊಬ್ಬರು ಕೆಲಸಕ್ಕೆ ಬಾರದ ವಿಷಗಳ ಕುರಿತು ಮಾತನಾಡುತ್ತಾರೆ. ಆದರೆ ರೈತರ ಪರವಾಗಿ ಧ್ವನಿ ಎತ್ತಲಿ. ಅದನ್ನು ಬಿಟ್ಟು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: Exclusive ಮಹದಾಯಿ ಪ್ರತಿಭಟನೆ, ಅನಂತ್‍ ಕುಮಾರ್ ಭಾಷಣ: ಬಿಜೆಪಿ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    https://www.youtube.com/watch?v=hzIeun7Lix8