Tag: Active

  • ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ

    ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ

    ಬೆಂಗಳೂರು: ಸ್ಯಾಂಡಲ್‍ವುಡ್ ಬ್ಯೂಟಿಕ್ವೀನ್ ರಮ್ಯ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದು, ಅವರ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ.

    ಒಂದು ಕಾಲದಲ್ಲಿ ಚಂದನವದ ಬುಹುಬೇಡಿಕೆಯ ನಟಿಯಾಗಿ ಮರೆದಿದ್ದ ರಮ್ಯಾ, ಸದ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಖತ್ ಸಕ್ರಿಯವಾಗಿ ಇದ್ದ ರಮ್ಯಾ ಅವರು, ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆದರೆ ಈಗ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ್ಯಕ್ಟಿವ್ ಆಗಿ ಇಟ್ಟುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಈ ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದ ರಮ್ಯಾ ಅವರು, ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ತಮ್ಮ ಟ್ವಿಟ್ಟರ್ ಖಾತೆಯನ್ನು ಡೀ ಆಕ್ಟಿವೇಟ್ ಮಾಡಿದ್ದರು. ಆದಾದ ನಂತರ ರಮ್ಯ ಅವರು ಎಲ್ಲಿ ಇದ್ದಾರೆ. ಏನ್ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿರಲ್ಲಿ. ಆದರೆ ಈಗ ದೇಶವೇ ಕೊರೊನಾ ಸೋಂಕಿನಿಂದ ಭೀತಿಯಲ್ಲಿ ಸಮಯದಲ್ಲಿ ರಮ್ಯ ಅವರು ತಮ್ಮ ಟ್ವಿಟ್ಟರ್ ಖಾತೆಯಗೆ ವಾಪಸ್ ಬಂದಿದ್ದಾರೆ.

    ಮತ್ತೆ ತಮ್ಮ ಟ್ವಿಟ್ಟರ್ ಖಾತೆಗೆ ಮರಳಿರುವ ಅವರು ಯಾವುದೇ ಹೊಸ ಟ್ವೀಟ್ ಮಾಡಿಲ್ಲ. ಆದರೆ ಅವರ ಅಕೌಂಟ್ ಆ್ಯಕ್ಟಿವ್ ಆಗಿದೆ. ರಮ್ಯಾ ಅವರು ಕೊನೆಯದಾಗಿ 2019ರ ಜೂನ್ 1ರಂದು ಕೊನೆಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ಕಳೆದು ಹೋದ ಶ್ವಾನದ ಒಂದು ಫೋಟೋ ಹಾಕಿ ಈ ನಾಯಿ ಕಳೆದು ಹೋಗಿದೆ ಪ್ಲೀಸ್ ವಿಟೋವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರನ್ನು ಲೋಕಸಭೆ ಚುನಾವಣೆ ಬಳಿಕ ಬದಲಾಯಿಸಲಾಗಿತ್ತು. ಈ ಕಾರಣದಿಂದ ಬೇಸರಗೊಂಡು ಸಾಮಾಜಿಕ ಜಾಲತಾಣದಿಂದ ದೂರು ಉಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳಿರುವುದು ತಮ್ಮ ನೆಚ್ಚಿನ ನಟಿ ಕಾಣದೇ ಬೇಜಾರಗಿದ್ದ ಅಭಿಮಾನಿಗಳಲ್ಲಿ ಸಂತಸ ತಂದಿದೆ.

    ಸಿನಿಮಾದ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ, ಕೊನೆಯದಾಗಿ 2016ರಲ್ಲಿ ತೆರೆಕಂಡ ನಾಗರಹಾವು ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಬಳಿಕ ಫುಲ್ ಟೈಮ್ ರಾಜಕೀಯಕ್ಕೆ ಬಂದ ಅವರು ಮತ್ತೆ ಯಾವುದೇ ಸಿನಿಮಾ ಮಾಡಿಲ್ಲ. ಆದರೆ ಇಷ್ಟು ದಿನ ಮರೆಯಾಗಿದ್ದ ರಮ್ಯ ಮತ್ತೆ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಕ್ಯಾಮೆರಾ ಮುಂದೆ ಬರುತ್ತಾರಾ ನಟನೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡಿವೆ.

  • ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್

    ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್

    ಬೆಂಗಳೂರು: ಐಎಂಎ ಎಂಡಿ ಮನ್ಸೂರ್ ಖಾನ್ ತನ್ನ ಎರಡನೇ ಪತ್ನಿ ಹಾಗೂ ಮಕ್ಕಳ ಜೊತೆ ಶನಿವಾರ ರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದಾನೆ. ಆದರೆ ಮನ್ಸೂರ್ ಈಗ ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ.

    ಮನ್ಸೂರ್ ಖಾನ್ ಸಾಯ್ತೀನಿ, ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳಿ ದುಬೈನಲ್ಲಿ ಕುಳಿತುಕೊಂಡು ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ. ಅಲ್ಲದೆ ಬೆಂಗಳೂರಲ್ಲಿ ನಡೆಯುತ್ತಿರೋದರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುತ್ತಿದ್ದಾನೆ. ಯಾರಾದರೂ ಮೆಸೆಂಜರ್ ಅಲ್ಲಿ ಮೆಸೇಜ್ ಮಾಡಿದ್ರೆ ಮನ್ಸೂಲ್ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಇದ್ದು, ವಾಟ್ಸಾಪ್ ಡೀ ಆಕ್ಟೀವ್ ಮಾಡಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಕೂಡ ಸ್ವೀಚ್ ಆಪ್ ಮಾಡಿಕೊಂಡಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಎಲ್ಲಿ ಇದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸರ ಪ್ರಕಾರ ಆತ ದೇಶ ಬಿಟ್ಟು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಮನ್ಸೂರ್ ಪ್ರತಿ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿ ಮತ್ತೆ ಡಿ ಆಕ್ಟೀವ್ ಮಾಡುತ್ತಿದ್ದಾನೆ. ಯಾರಾದರೂ ಮೆಸೆಂಜರ್‍ನಲ್ಲಿ ಮೆಸೇಜ್ ಮಾಡಿದ್ದರೆ, ಆ ಮೆಸೇಜ್ ಕೂಡ ಆತ ನೋಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಏನು ಚರ್ಚೆಯಾಗುತ್ತಿದೆ ಎನ್ನುವ ಕುತೂಹಲದಿಂದ ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿದ್ದಾನೆ.

    ಮನ್ಸೂರ್ ವಾಯ್ಸ್ ಮೆಸೇಜ್ ಬಂದಾಗ ವಾಟ್ಸಾಪ್‍ನಲ್ಲಿ ಆಕ್ಟೀವ್ ಆಗಿದ್ದನು. ಅದಾದ ಬಳಿಕ ಆತ ತನ್ನ ವಾಟ್ಸಾಪ್ ಅನ್ನು ಡಿ ಆಕ್ಟೀವ್ ಮಾಡಿದ್ದಾನೆ. ಮನ್ಸೂರ್ ಇದುವರೆಗೂ ಮತ್ತೆ ವಾಟ್ಸಾಪ್‍ನಲ್ಲಿ ಆನ್ ಮಾಡಿಲ್ಲ. ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.