Tag: Achievement

  • ಸಂಸ್ಕೃತ ಪರೀಕ್ಷೆಯಲ್ಲಿ ಇರ್ಫಾನ್‌ಗೆ ಮೊದಲ ಸ್ಥಾನ – 13,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆ

    ಸಂಸ್ಕೃತ ಪರೀಕ್ಷೆಯಲ್ಲಿ ಇರ್ಫಾನ್‌ಗೆ ಮೊದಲ ಸ್ಥಾನ – 13,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆ

    ಲಕ್ನೋ: ಉತ್ತರ ಪ್ರದೇಶ (Uttar Pradesh) ಮಾಧ್ಯಮಿಕ ಸಂಸ್ಕೃತ (Sanskrit) ಶಿಕ್ಷಾ ಪರಿಷತ್ತು ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 13,738 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಮೊಹಮ್ಮದ್ ಇರ್ಫಾನ್ ಅಗ್ರ ಸ್ಥಾನ ಪಡೆದು ಅಭೂತಪೂರ್ವ ಸಾಧನೆ (Achievement) ಮಾಡಿದ್ದಾನೆ.

    ಈತ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯವನಾಗಿದ್ದು, ಸಂಪೂರ್ಣಾನಂದ ಸಂಸ್ಕೃತ ಸರ್ಕಾರಿ ಶಾಲೆಯಲ್ಲಿ (Sampoornananda Sanskrit Government School)  ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಸಂಸ್ಕೃತ ಪರೀಕ್ಷೆಯಲ್ಲಿ 82.71% ಅಂಕ ಪಡೆದು ಮೊದಲನೇ ಸ್ಥಾನ ಪಡೆದಿದ್ದಾನೆ. ಈತ ಇಸ್ಲಾಂ (Islam) ಧರ್ಮಕ್ಕೆ ಸೇರಿದವನಾಗಿದ್ದು, ತಂದೆ ಸಲಾಲುದ್ದೀನ್ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಮಗನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?

    ಪುತ್ರನ ಸಾಧನೆ ಬಗ್ಗೆ ಮಾತನಾಡಿದ ಅವರು, ಮಗನ ಸಾಧನೆ ತುಂಬಾ ಸಂತೋಷ ತಂದಿದೆ. ನಾನು ದಿನಗೂಲಿ ಕಾರ್ಮಿಕನಾಗಿರುವುದರಿಂದ ಮಗನನ್ನು ಉನ್ನತ ಶಾಲೆಯಲ್ಲಿ ಕಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸಂಪೂರ್ಣಾನಂದ ಸಂಸ್ಕೃತ ಶಾಲೆಗೆ ಸೇರಿಸಿದ್ದೆ. ಆ ಶಾಲೆಯಲ್ಲಿ ಸಂಸ್ಕೃತ ಕಡ್ಡಾಯ ವಿಷಯವಾಗಿದ್ದರಿಂದ ನನ್ನ ಮಗ ಅದನ್ನು ಇಷ್ಟಪಟ್ಟು ಕಲಿತ. ಈಗ ಅವನಿಗೆ ಸಂಸ್ಕೃತದಲ್ಲಿ ಬರೆಯಲು ಹಾಗೂ ಮಾತನಾಡಲು ಬರುತ್ತದೆ. ಅವನ ಮುಂದಿನ ಆಸೆಯಂತೆ ಸಂಸ್ಕೃತದಲ್ಲಿ ಶಾಸ್ತ್ರಿ (ಬಿಎ ಸಮಾನ) ಹಾಗೂ ಆಚಾರ್ಯ (ಎಂಎ ಸಮಾನ) ಓದಿಸುತ್ತೇನೆ. ಮುಂದೆ ಅವನು ಸಂಸ್ಕೃತ ಉಪನ್ಯಾಸಕನಾಗಬೇಕು ಎಂಬ ಆಸೆ ಹೊಂದಿದ್ದಾನೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿದ್ಯುತ್ ಕಡಿತ : ಮಂದ ಬೆಳಕಿನಲ್ಲೇ ಭಾಷಣ ಮಾಡಿದ ರಾಷ್ಟ್ರಪತಿ ಮುರ್ಮು

  • ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರಿಗೂ ಸಮಾನ ಅಂಕ

    ಅವಳಿ ಸಹೋದರಿಯರ ವಿಶೇಷ ಸಾಧನೆ – ಇಬ್ಬರಿಗೂ ಸಮಾನ ಅಂಕ

    ಮಂಗಳೂರು: ಅವಳಿ ಸಹೋದರಿಯರಿಬ್ಬರು (Twin Sisters) ಪಿಯುಸಿ (PUC) ಪರೀಕ್ಷೆಯಲ್ಲಿ ಸಮಾನವಾದ ಅಂಕಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಲ್ಲದೇ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಗಂಡಿ (Belthangady) ತಾಲೂಕಿನ ನೆರಿಯ ಗ್ರಾಮದ ಅವಳಿ ಸಹೋದರಿಯರಾದ ಸ್ಪಂದನ ಮತ್ತು ಸ್ಪರ್ಶ ಪಿಯುಸಿ ಪರೀಕ್ಷೆಯಲ್ಲಿ 600ರಲ್ಲಿ 594 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಉಜಿರೆಯ (Ujire) ಎಸ್‌ಡಿಎಂ  ಕಾಲೇಜಿನ (SDM College) ದ್ವಿತೀಯ ಪಿಯುಸಿ ವಾಣಿಜ್ಯ (Commerce) ವಿಭಾಗದ ವಿದ್ಯಾರ್ಥಿನಿಯರಾದ ಇವರು ಸಮಾನವಾಗಿ 594 ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಪಿಯು ಪರೀಕ್ಷಾ ಫಲಿತಾಂಶ – ದಕ್ಷಿಣ ಕನ್ನಡ ಫಸ್ಟ್‌, ಉಡುಪಿ ಸೆಕೆಂಡ್‌ 

    ಸ್ಪಂದನ ಮತ್ತು ಸ್ಪರ್ಶ ಇಂಗ್ಲಿಷ್ (English) ಮತ್ತು ಅರ್ಥಶಾಸ್ತ್ರ (Economics) ವಿಷಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ ಸಮಾನವಾದ ಅಂಕಗಳನ್ನು ಪಡೆದಿದ್ದಾರೆ. ಸ್ಪಂದನ ಇಂಗ್ಲಿಷ್‌ನಲ್ಲಿ 98 ಹಾಗೂ ಸ್ಪರ್ಶ 97 ಅಂಕಗಳನ್ನು ಪಡೆದಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ಪಂದನ 98 ಅಂಕಗಳನ್ನು ಪಡೆದಿದ್ದರೆ, ಸ್ಪರ್ಶ 99 ಅಂಕಗಳನ್ನು ಪಡೆದಿದ್ದಾರೆ. ಹಿಂದಿಯಲ್ಲಿ (Hindi) ಇಬ್ಬರೂ 98 ಅಂಕಗಳನ್ನು ಪಡೆದು ಉಳಿದೆಲ್ಲಾ ವಿಷಯಗಳಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: 2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ

  • ಒಂದೇ ರಾತ್ರಿಯಲ್ಲಿ 43 ಟನ್ ಕಬ್ಬು ಲೋಡ್ – ಯುವಕನ ಸಾಧನೆಗೆ ರೈತರ ಮೆಚ್ಚುಗೆ

    ಒಂದೇ ರಾತ್ರಿಯಲ್ಲಿ 43 ಟನ್ ಕಬ್ಬು ಲೋಡ್ – ಯುವಕನ ಸಾಧನೆಗೆ ರೈತರ ಮೆಚ್ಚುಗೆ

    ಬಾಗಲಕೋಟೆ: ಸಾಧಿಸುವ ಛಲವೊಂದಿದ್ದರೆ ಏನುಬೇಕಾದರೂ ಸಾಧಿಸಬಹುದು ಎಂಬುದನ್ನು ಯುವ ಕಾರ್ಮಿಕರೊಬ್ಬರು ಒಂದೇ ರಾತ್ರಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಯುವ ಶ್ರಮಜೀವಿ 43 ಟನ್ ಕಬ್ಬನ್ನು ಟ್ರ್ಯಾಕ್ಟರ್‍ ಗೆ ಲೋಡ್ ಮಾಡುವ ಮೂಲಕ ಸಾಧನೆ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

    ಕ್ಷೇತ್ರ ಯಾವುದಾದರೇನು ಸಾಧಕನಿಗೆ ಸಾಧನೆ ಸಹಜವಾಗಿ ಪ್ರಾಪ್ತವಾಗುತ್ತದೆ ಎಂಬುದಕ್ಕೆ ಸಾಕ್ಷಿಯಂತಿರುವ ಈ ಘಟನೆ ನಡೆದಿರುವುದು ಬಾಗಲಕೋಟೆಯಲ್ಲಿ. ಕಟಾವ್ ಮಾಡಿ ಹಾಕಿದ್ದ 43 ಟನ್ ಕಬ್ಬನ್ನು ಒಂದೇ ರಾತ್ರಿಯಲ್ಲಿ ತಾನೊಬ್ಬನೇ ಟ್ರ್ಯಾಕ್ಟರ್‍ ಗೆ ಲೋಡ್ ಮಾಡಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ 21 ವರ್ಷದ ಶ್ರೀನಿವಾಸ ನಾಯಕ ಇದೀಗ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕಬ್ಬು ಕಟಾವ್ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿರುವ ಶ್ರೀನಿವಾಸ್, ನಿನ್ನೆ ರಾತ್ರಿ 11.50ಕ್ಕೆ ಕಬ್ಬು ಲೋಡ್ ಆರಂಭಿಸಿ ಇಂದು ಬೆಳಗ್ಗೆ 6.20 ರವರೆಗೆ ಮೂರು ಟ್ರ್ಯಾಲಿಗಳಲ್ಲಿ ಒಟ್ಟು 43 ಟನ್ ಕಬ್ಬು ಲೋಡ್ ಮಾಡಿದ್ದಾರೆ.

    ಗ್ರಾಮದ ರೈತ ಶ್ರೀನಿವಾಸ್ ಲೆಂಡಿ ಅವರ ಜಮೀನಿನಲ್ಲಿ ಕಡಿದು ಹಾಕಿದ್ದ ಕಬ್ಬನ್ನು ಶ್ರೀನಿವಾಸ್ ಹೊತ್ತುಕೊಂಡು ಟ್ರ್ಯಾಕ್ಟರ್‍ ನಲ್ಲಿ ಹಾಕಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ಒಬ್ಬ ಕೂಲಿ ಕಾರ್ಮಿಕರೊಬ್ಬರು ಒಂದು ರಾತ್ರಿಯಲ್ಲಿ 34 ಟನ್ ಕಬ್ಬು ಲೋಡ್ ಮಾಡಿದ್ದರು. ಆ ದಾಖಲೆ ಮೀರಿಸಲು ಶ್ರೀನಿವಾಸ್ 43 ಟನ್ ಕಬ್ಬು ಲೋಡ್ ಮಾಡಿ, ಕಬ್ಬಿನ ಗ್ಯಾಂಗ್‍ನವರಿಂದ ಶಹಬ್ಬಾಶ್ ಗಿರಿ ಪಡೆದಿದ್ದಾರೆ.

    ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಕಟಾವು ಆರಂಭವಾಗಿದ್ದು, ಕಾರ್ಮಿಕರು ಈ ರೀತಿಯ ಜಿದ್ದಿಗೆ ಬಿದ್ದು ಕಟಾವ್ ಮಾಡಿ, ಕಬ್ಬು ಟ್ರ್ಯಾಕ್ಟರ್‍ ಗೆ ಹೇರುವ ಸಾಧನೆ ಮಾಡಿ ಗಮನ ಸೆಳೆಯುತ್ತಿದ್ದಾರೆ. ಶ್ರೀನಿವಾಸ್ ಸಾಧನೆ ಜಿಲ್ಲೆಯ ರೈತ ಸಮೂಹದಿಂದ ಮಚ್ಚುಗೆ ವ್ಯಕ್ತವಾಗಿದೆ.

  • ಇಂದು ಫೈನಲ್ ಆಡಿ ಐಪಿಎಲ್‍ನಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ ಹಿಟ್‍ಮ್ಯಾನ್

    ಇಂದು ಫೈನಲ್ ಆಡಿ ಐಪಿಎಲ್‍ನಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ ಹಿಟ್‍ಮ್ಯಾನ್

    ಅಬುಧಾಬಿ: ಇಂದು ನಡೆಯಲಿರುವ ಐಪಿಎಲ್-2020ಯ ಫೈನಲ್ ಆಡುವ ಮೂಲಕ ಹೊಸ ಸಾಧನೆ ಮಾಡಲು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಸಿದ್ಧವಾಗಿದ್ದಾರೆ.

    ಇಂದು ದುಬೈ ಮೈದಾನದಲ್ಲಿ ಐಪಿಎಲ್-2020 ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯದ್ದಕ್ಕೂ ಉತ್ತಮ ಪ್ರದರ್ಶನ ತೋರಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪೈನಲ್ ಪಂದ್ಯದಲ್ಲಿ ಸೆಣೆಸಾಡಲಿವೆ. ಇಂದು ಸಂಜೆ ಏಳು ಗಂಟೆಗೆ ಮ್ಯಾಚ್ ಆರಂಭವಾಗಲಿದೆ. ಈ ಪಂದ್ಯ ಆಡಲಿರುವ ರೋಹಿತ್ ಶರ್ಮಾ ಹೊಸ ಸಾಧನೆಯ ಅಂಚಿನಲ್ಲಿದ್ದಾರೆ.

    ಐಪಿಎಲ್‍ನಲ್ಲಿ 2008ರಿಂದಲೂ ಆಡಿಕೊಂಡು ಬಂದಿರುವ ರೋಹಿತ್ ಇಲ್ಲಿಯವರೆಗೂ ಬರೋಬ್ಬರಿ 199 ಪಂದ್ಯಗಳನ್ನು ಆಡಿದ್ದಾರೆ. ಇಂದು ನಡೆಯಲಿರುವ ಫೈನಲ್ ಅಲ್ಲಿ ರೋಹಿತ್ ಆಡುವ ಮೂಲಕ ಐಪಿಎಲ್‍ನಲ್ಲಿ 200 ಒಂದ್ಯಗಳನ್ನಾಡಿದ ಎರಡನೇ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯವರು 200 ಪಂದ್ಯಗಳನ್ನಾಡಿ, 200 ಐಪಿಎಲ್ ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದರು.

    ಐಪಿಎಲ್‍ನಲ್ಲಿ 5,162 ರನ್ ಗಳಿಸಿರುವ ರೋಹಿತ್ ಶರ್ಮಾ ಐಪಿಎಲ್‍ನ ಐದನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‍ಮನ್ ಆಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್, ಕೇವಲ ಏಳು ಆವೃತ್ತಿಯಲ್ಲಿ ತಮ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ಬಾರೀ ಚಾಂಪಿಯನ್ ಆಗುವಂತೆ ಮಾಡಿದ್ದಾರೆ.

  • ಯುಪಿಎಸ್‍ಸಿ ಪರೀಕ್ಷೆಯಲ್ಲಿ ಚಿಕ್ಕೋಡಿಯ ರೈತ, ಕಾರ್ಮಿಕ, ಅರಣ್ಯ ಸಿಬ್ಬಂದಿ ಮಕ್ಕಳ ಸಾಧನೆ

    ಯುಪಿಎಸ್‍ಸಿ ಪರೀಕ್ಷೆಯಲ್ಲಿ ಚಿಕ್ಕೋಡಿಯ ರೈತ, ಕಾರ್ಮಿಕ, ಅರಣ್ಯ ಸಿಬ್ಬಂದಿ ಮಕ್ಕಳ ಸಾಧನೆ

    – ಪ್ರಫುಲ್ 532, ಗಜಾನನ ಹೊಸಬಾಳೆ 663, ಪ್ರಿಯಾಂಕಾ ಕಾಂಬ್ಳೆ 670ನೇ ರ‌್ಯಾಂಕ್

    ಚಿಕ್ಕೋಡಿ: ಯುಪಿಎಸ್‍ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಒಬ್ಬ, ಚಿಕ್ಕೋಡಿಯ ಇಬ್ಬರು ಸಾಧನೆ ಮಾಡಿದ್ದು, ರೈತನ ಮಗ, ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವವರ ಮಗ ಹಾಗೂ ಅರಣ್ಯ ಸಿಬ್ಬಂದಿ ಮಗಳು 532, 663 ಹಾಗೂ 670ನೇ ರ‌್ಯಾಂಕ್  ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ರೈತನ ಮಗ, ಅಪ್ಪಟ ಗ್ರಾಮೀಣ ಪ್ರತಿಭೆ ಪ್ರಫುಲ್ ಕೆಂಪಣ್ಣ ದೇಸಾಯಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಪ್ರಫುಲ್ ದೇಸಾಯಿ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಹುಬ್ಬಳ್ಳಿಯ ಬಿವಿವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿ ಮುಗಿಸಿದ್ದು, ಸದ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಫುಲ್ ಮೂರನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಪಡೆದಿದ್ದಾರೆ. ಪ್ರಫುಲ್ ಅವರ ಸಾಧನೆಗೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಕುಟಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಯುವಕ ಗಜಾನನ ಬಾಳೆ ಸಹ ಯುಪಿಎಸ್‍ಸಿ ಪರೀಕ್ಷೆಯಲ್ಲಿ 663ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. ಯುವಕನ ತಂದೆ ಕಾಗವಾಡ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ಮಗನಿಗೆ ವಿದ್ಯಾಭ್ಯಾಸ ನೀಡಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ.

    ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಇ ಆಂಡ್ ಸಿ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ, ದೆಹಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಯ ತರಬೇತಿ ಪಡೆದಿದ್ದರು. 29ನೇ ವಯಸ್ಸಿನಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 663ನೇ ರ‌್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಗಜಾನನ ಅವರ ಸಾಧನೆಯಿಂದ ಕುಟಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

    ಅರಣ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಪುತ್ರಿ ಸಹ ಯುಪಿಎಸ್‍ಸಿ ಪರೀಕ್ಷೆಯಲ್ಲಿ 670ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಪ್ರೀಯಾಂಕಾ ವಿಠ್ಠಲ ಕಾಂಬ್ಳೆ, ಸರ್ಕಾರಿ ಶಾಲೆಯಲ್ಲಿ ಓದಿ, ಬಿಎಸ್‍ಸಿ ಅಗ್ರಿ ಪದವಿ ಮುಗಿಸಿದ್ದಾರೆ. ಪ್ರಿಯಾಂಕಾ ತಂದೆ ಅರಣ್ಯ ಇಲಾಖೆಯ ವಂಟಮೂರಿ ವಲಯದ ಅರಣ್ಯ ರಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ 6 ತಿಂಗಳು ಸರ್ಕಾರದಿಂದ ನೀಡುವ ಉಚಿತ ಯುಪಿಎಸ್‍ಸಿ ತರಬೇತಿಯನ್ನು ದೆಹಲಿಯಲ್ಲಿ ಪಡೆದಿರುವ ಪ್ರೀಯಾಂಕಾ, 2ನೇ ಪ್ರಯತ್ನದಲ್ಲಿ ಯುಪಿಎಸ್‍ಸಿ ಪಾಸ್ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗುವ ಕನಸು ಕಂಡಿದ್ದಾರೆ.

  • ಚಹಾ ಮಾರುವವನ ಮಗಳು ಏರ್‌ಫೋರ್ಸ್ ಅಧಿಕಾರಿಯಾಗಿ ಆಯ್ಕೆ- ಅಪ್ಪಂದಿರ ದಿನಕ್ಕೆ ಮರೆಯಲಾಗದ ಉಡುಗೊರೆ

    ಚಹಾ ಮಾರುವವನ ಮಗಳು ಏರ್‌ಫೋರ್ಸ್ ಅಧಿಕಾರಿಯಾಗಿ ಆಯ್ಕೆ- ಅಪ್ಪಂದಿರ ದಿನಕ್ಕೆ ಮರೆಯಲಾಗದ ಉಡುಗೊರೆ

    – ಸಾಲ ಮಾಡಿ ಶಿಕ್ಷಣ ಕೊಡಿಸಿದ್ದ ತಂದೆ
    – ಮಗಳ ಸಾಧನೆ ಕಂಡು ಹೆಮ್ಮೆ

    ಭೋಪಾಲ್: ಚಹಾ ಅಂಗಡಿ ಮಾಲೀಕನ ಮಗಳು ಭಾರತೀಯ ವಾಯು ಪಡೆಯ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ಅಪ್ಪಂದಿರ ದಿನಕ್ಕೆ ತಮ್ಮ ತಂದೆಗೆ ವಿಶೇಷ ಉಡುಗೊರೆ ನೀಡಿದ್ದಾರೆ.

    ಮಧ್ಯಪ್ರದೇಶದ ಪುಟ್ಟ ಜಿಲ್ಲೆ ನೀಮುಚ್‍ನಲ್ಲಿ ಚಹಾ ಅಂಗಡಿ ಇಟ್ಟುಕೊಂಡಿರುವ ಸುರೇಶ್ ಗಂಗ್ವಾಲ್ ಅವರ ಪುತ್ರಿ ಆಂಚಲ್, ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾಗಿರುವುದು ಮಾತ್ರವಲ್ಲದೆ ಕಂಬೈನ್ಡ್ ಗ್ರಾಜ್ಯುವೇಶನ್ ಪರೇಡ್‍ನಲ್ಲಿ ರಾಷ್ಟ್ರಪತಿಯವರಿಂದ ಪದಕವನ್ನೂ ಸ್ವೀಕರಿಸಿದ್ದಾರೆ. ಒಟ್ಟು 123 ಫ್ಲೈಟ್ ಕೆಡೆಟ್‍ಗಳನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

    ತಮ್ಮ ಮಗಳ ಸಾಧನೆ ಬಗ್ಗೆ ತಂದೆ ಸುರೇಶ್ ಅವರು ಸಂತಸ ವ್ಯಕ್ತಪಡಿಸಿದ್ದು, ಯಾವುದೇ ತಂದೆಗೆ ಮಗಳು ನೀಡುವ ಅತ್ಯದ್ಭುತ ಉಡುಗೊರೆ ಇದು. ನನ್ನ ಮಗಳು ಯಾವಾಗಲೂ ನಾನು ಹೆಮ್ಮೆ ಪಡುವಂತೆಯೇ ಮಾಡಿದ್ದಾಳೆ ಎಂದಿದ್ದಾರೆ.

    ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಎಲ್ಲ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ನನ್ನ ಪತ್ನಿ ಎಂದೂ ಒಡವೆ ಹಾಗೂ ಬೆಲೆ ಬಾಳುವ ವಸ್ತುಗಳು ಬೇಕೆಂದು ಬೇಡಿಕೆ ಇಟ್ಟ ನೆನಪಿಲ್ಲ. ಈಗಲೂ ಅವಳು ಚಿನ್ನದ ಒಡವೆಗಳನ್ನು ಹಾಕುವುದಿಲ್ಲ. ನಾವು ನಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡುತ್ತೇವೆ ಎಂದು ವಿವರಿಸಿದ್ದಾರೆ.

    ಕುಟುಂಬಕ್ಕೆ ಸಹಾಯ ಮಾಡಲು ಸುರೇಶ್ 10ನೇ ತರಗತಿ ನಂತರ ಶಿಕ್ಷಣಕ್ಕೆ ಗುಡ್‍ಬೈ ಹೇಳಿದ್ದರು. ಹೀಗಾಗಿ ಅವರು ಸಾಧಿಸದಿರುವುದನ್ನು ಮಕ್ಕಳು ಸಾಧಿಸಬೇಕು ಎಂಬುದು ಅವರ ಬಯಕೆಯಾಗಿದೆ. ಮಕ್ಕಳನ್ನು ಎಂಜಿನಿಯರಿಂಗ್ ಮಾಡಿಸುತ್ತಿದುದರ ಮಧ್ಯೆಯೂ ಮಗಳನ್ನು ಇಂದೋರ್‍ನಲ್ಲಿ ಕೋಚಿಂಗ್‍ಗೆ ಸೇರಿಸಲು ನಾನು ಸಾಲ ಪಡೆದಿದ್ದೆ. ಮಕ್ಕಳು ಸಾಧಿಸುತ್ತಾರೆ ಎಂಬ ನಂಬಿಕೆ ನನಗಿತ್ತು. ಅವರು ಕೆಲಸಕ್ಕೆ ಸೇರಿದ ಬಳಿಕ ಸಾಲ ತೀರಿಸಬಹುದೆಂದು ಸಾಲ ಮಾಡಿ ಓದಿಸಿದೆ.

    ಮಗಳ ಕಾಲೇಜಿನ ಘಟಿಕೋತ್ಸವಕ್ಕೆ ಹೈದರಾಬಾದ್‍ಗೆ ಹೋಗಲು ಆಗಿರಲಿಲ್ಲ. ಅಲ್ಲದೆ ಕಳೆದ ಬಾರಿ ನೀಮುಚ್‍ಗೆ ಬಂದಾಗ ಅವಳು ಈ ಕಾರ್ಯಕ್ರಮಕ್ಕೂ ನಮ್ಮೆಲ್ಲರನ್ನು ಆಹ್ವಾನಿಸಿದ್ದಳು. ಆದರೆ ಲಾಕ್‍ಡೌನ್ ಹಿನ್ನೆಲೆ ಈ ಕಾರ್ಯಕ್ರಮಕ್ಕೂ ಹೋಗಲು ಸಾಧ್ಯವಾಗಿರಲಿಲ್ಲ. ನಮ್ಮ ಆಶೀರ್ವಾದ ಯಾವಾಗಲೂ ಅವಳ ಮೇಲಿರುತ್ತದೆ. ಅಲ್ಲದೆ ದೇಶಕ್ಕಾಗಿ ಅವಳು ಏನು ಬೇಕಾದರೂ ಮಾಡುತ್ತಾಳೆ ಎಂದು ಸುರೇಶ್ ಹೇಳಿದ್ದಾರೆ.

  • ರಾಜಕೀಯವಾಗಿ ಸುಷ್ಮಾ ಸ್ವರಾಜ್ ಬೆಳೆದು ಬಂದಿದ್ದು ಹೇಗೆ?

    ರಾಜಕೀಯವಾಗಿ ಸುಷ್ಮಾ ಸ್ವರಾಜ್ ಬೆಳೆದು ಬಂದಿದ್ದು ಹೇಗೆ?

    ನವದೆಹಲಿ: ಕೇಂದ್ರದ ಮಾಜಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರ ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಆದರೆ ಬಿಜೆಪಿ ಪಕ್ಷಕ್ಕಾಗಿ ಹಾಗೂ ಸಚಿವೆಯಾಗಿ ಸುಷ್ಮಾ ಅವರು ತಮ್ಮ ದಿಟ್ಟ ನಡೆ, ನೇರ ನುಡಿ ಮೂಲಕವೇ ಎಲ್ಲರ ಮನಗೆದ್ದಿದ್ದಾರೆ.

    ಹರಿಯಾಣ ಮೂಲದ ಸುಷ್ಮಾ ಸ್ವರಾಜ್ ಅವರು 1953 ಫೆಬ್ರವರಿ 14ರಂದು ಅಂಬಾಲಾ ಕಂಟೋನ್ಮೆಂಟ್‍ನಲ್ಲಿ ಜನಿಸಿದ್ದರು. ಹಾರ್ದೇವ್ ಶರ್ಮಾ ಹಾಗೂ ಲಕ್ಷ್ಮಿ ದೇವಿ ದಂಪತಿಗೆ ಜನಿಸಿದ ಸುಷ್ಮಾ ಅವರು ಸಂಸ್ಕೃತ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಆ ನಂತರ ಪಂಜಾಬ್ ವಿವಿಯಲ್ಲಿ ಕಾನೂನು ಪದವಿ ಪಡೆದು 1973ರಲ್ಲಿ ಸುಪ್ರೀಂಕೋರ್ಟ್ ವಕೀಲರಾಗಿ ಅಭ್ಯಾಸ ಆರಂಭಿಸಿದ ಇವರು, ಎಬಿವಿಪಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು.

    1975ರಲ್ಲಿ ಜಾರ್ಜ್ ಫರ್ನಾಂಡೀಸ್ ಕಾನೂನು ತಂಡದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದು, ಜಯಪ್ರಕಾಶ್ ನಾರಾಯಣರ ಕ್ರಾಂತಿಯ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ತುರ್ತು ಪರಿಸ್ಥಿತಿ ನಂತರ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕಮಲದ ಕೈ ಹಿಡಿದಿದ್ದರು. 1977ರಂದು ಮೊದಲ ಬಾರಿಗೆ ಸುಷ್ಮಾ ಅವರು ಹರಿಯಾಣ ಶಾಸಕಿಯಾಗಿ ಆಯ್ಕೆಯಾದರು. ಅಂದಿನಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದರು.

    1990 ರಲ್ಲಿ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಗೊಂಡ ಸುಷ್ಮಾ 1996 ರಲ್ಲಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ದೆಹಲಿ ಸಿಎಂ ಆಗಿ, ಶಿಕ್ಷಣ ಸಚಿವೆಯಾಗಿ, ವಿದೇಶಾಂಗಸಚಿವೆಯಾಗಿ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದ ಸುಷ್ಮಾ ಬಿಜೆಪಿ ಹೈಕಮಾಂಡ್‍ನಂತೆ ಕೆಲಸ ನಿರ್ವಹಿಸಿ ಪಕ್ಷದ ಏಳ್ಗೆಗೆ ದುಡಿದಿದ್ದರು.

    ಕರ್ನಾಟಕದೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದ ಸುಷ್ಮಾ ಅವರು ಬಳ್ಳಾರಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುಕಂಡಿದ್ದರು.

    1996ರಲ್ಲಿ 11ನೇ ಲೋಕಸಭೆ ಸದಸ್ಯೆಯಾದ(ಎರಡನೆಯ ಅವಧಿ) ಸುಷ್ಮಾ ಅವರು ಕೇಂದ್ರ ಮಾಹಿತಿ & ಪ್ರಸಾರ ಖಾತೆ ಸಚಿವೆಯಾಗಿ, 1998ರಲ್ಲಿ ಹಾಜ್ ಖಾಸ್ ಕ್ಷೇತ್ರದಿಂದ ದೆಹಲಿ ಅಸೆಂಬ್ಲಿಗೆ ಆಯ್ಕೆಯಾದ ಬಳಿಕ 1999ರಲ್ಲಿ ದೆಹಲಿ ಸಿಎಂ ಆಗಿ ಆಯ್ಕೆಯಾದರು. ನಂತರ 2002ರಿಂದ 2004ರವರೆಗೆ ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. 2009-14ರ 15ನೇ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾದ ಅವರು ಬಿಜೆಪಿ ಹಿರಿಯಾ ನಾಯಕ ಕೆ.ಎಲ್ ಅಡ್ವಾಣಿ ಅವರ ಬದಲಿಗೆ ಪ್ರತಿಪಕ್ಷ ನಾಯಕಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಬಳಿಕ 2014ರಲ್ಲಿ ಹಾಗೂ 2019ರಲ್ಲಿ ಮೋದಿ ಸರ್ಕಾರ ಬಂದ ಮೇಲೆ ಸತತ ಎರಡನೇ ಬಾರಿಗೆ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಕರ್ತವ್ಯ ನಿರ್ವಹಿಸಿ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡಿದ್ದರು.

    2003-04 ರವರೆಗೆ ಕುಟುಂಬ ಕಲ್ಯಾಣ ಸಚಿವೆಯಾಗಿದ್ದು, ಭೋಪಾಲ್, ಭುವನೇಶ್ವರ್, ಜೋಧಪುರ್, ಪಾಟ್ನಾ, ರಾಯಪುರ, ರಿಷಿಕೇಶ್‍ನಲ್ಲಿ ಏಮ್ಸ್ ಸ್ಥಾಪನೆ ಮಾಡಿರುವುದು ಹಾಗೂ 2014ರಲ್ಲಿ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮ ಸೇವೆಸಲ್ಲಿಸಿ ಸುಷ್ಮಾ ಅವರು ಎಲ್ಲರ ಹೆಗ್ಗಳಿಕೆ ಪಡೆದಿದ್ದರು.

    ಸುಷ್ಮಾ ಸ್ವರಾಜ್ ನಿರ್ವಹಿಸಿದ ಹುದ್ದೆಗಳು:
    1977-82 – ಹರಿಯಾಣ ಶಾಸಕಿಯಾಗಿ ಆಯ್ಕೆ
    1977-79 – ಹರಿಯಾಣ ಕಾರ್ಮಿಕ ಮತ್ತು ಉದ್ಯೋಗ ಸಚಿವೆ
    1982-90 – ಹರಿಯಾಣ ಎಂಎಲ್‍ಎ ಆಗಿ ಆಯ್ಕೆ
    1982-90 – ಶಿಕ್ಷಣ, ಆಹಾರ & ನಾಗರಿಕ ಸರಬರಾಜು ಸಚಿವೆ
    1990-96 – ರಾಜ್ಯಸಭೆಗೆ ಆಯ್ಕೆ
    1996-97 – 11ನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)
    1996 – ಕೇಂದ್ರ ಮಾಹಿತಿ & ಪ್ರಸಾರ ಖಾತೆ ಸಚಿವೆ
    1998 – ಹಾಜ್ ಖಾಸ್ ಕ್ಷೇತ್ರದಿಂದ ದೆಹಲಿ ಅಸೆಂಬ್ಲಿಗೆ ಆಯ್ಕೆ
    1999 – ದೆಹಲಿ ಮುಖ್ಯಮಂತ್ರಿ
    2000-06 – ರಾಜ್ಯಸಭಾ ಸದಸ್ಯೆ
    2003-04 – ಆರೋಗ್ಯ & ಕುಟುಂಬ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವೆ
    2006-09 – ರಾಜ್ಯಸಭಾ ಸದಸ್ಯೆ
    2009-14 – 15ನೇ ಲೋಕಸಭಾ ಸದಸ್ಯೆ
    2009 – ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ
    2009-14 – ಅಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ
    2014 – 16ನೇ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿ ವಿದೇಶಾಂಗ ಸಚಿವೆ ಆಗಿದ್ದರು.

    ಮಂಗಳವಾರ ರಾತ್ರಿ ನಿಧನ ಹೊಂದಿರುವ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರವನ್ನು ಜನಪತ್ ರಸ್ತೆಯ ಧವನ್ ದೀಪ್ ಕಟ್ಟಡದ ನಿವಾಸದಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಜಂತರ್ ಮಂತರ್‍ನಲ್ಲಿ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ಬಳಿಕ 3 ಗಂಟೆಗೆ ಲೋಧಿ ರಸ್ತೆಯ ಶವಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

    https://www.youtube.com/watch?v=cBEdU1ss17Q

  • ಮುಕೇಶ್ ಅಂಬಾನಿ ಪುತ್ರಿ ಮದ್ವೆ ಫೋಟೋ ಕ್ಲಿಕ್ಕಿಸಿದ್ದು ಕನ್ನಡಿಗ!

    ಮುಕೇಶ್ ಅಂಬಾನಿ ಪುತ್ರಿ ಮದ್ವೆ ಫೋಟೋ ಕ್ಲಿಕ್ಕಿಸಿದ್ದು ಕನ್ನಡಿಗ!

    – ಮಂಗಳೂರಿನ ವಿವೇಕ್ ಸಿಕ್ವೇರಾ ತಂಡದಿಂದ ಛಾಯಾಗ್ರಹಣ
    – ಕಾಲೇಜ್ ಡ್ರಾಪ್‍ಔಟ್ ವಿದ್ಯಾರ್ಥಿಯ ಪ್ರತಿಭೆಗೆ ಸಿಕ್ತು ಅದೃಷ್ಟ

    ಬೆಂಗಳೂರು: ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಉದ್ಯಮಿ ಆನಂದ್ ಪಿರಾಮನ್ ಮದುವೆ ಸಮಾರಂಭದ ಫೋಟೋಗಳನ್ನು ಮಂಗಳೂರಿನ ಫೋಟೋಗ್ರಾಫರ್ ಮತ್ತು ಅವರ ತಂಡ ಕ್ಲಿಕ್ಕಿಸಿದೆ.

    ಹೌದು. ಮಂಗಳೂರಿನ ವಿವೇಕ್ ಸಿಕ್ವೇರಾ ಮತ್ತು ಅವರ ತಂಡ 15 ದಿನಗಳ ಕಾಲ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಭಾಗಿಯಾಗಿ ಈ ವಿಶೇಷ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ.

    ಆಫರ್ ಸಿಕ್ಕಿದ್ದು ಹೇಗೆ?
    ಜೂನ್ ತಿಂಗಳಿನಲ್ಲಿ ಅಂಬಾನಿ ಮತ್ತು ಪಿರಾಮಲ್ ಕುಟುಂಬಕ್ಕೆ ಆಪ್ತವಾಗಿರುವ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದರು. ಈ ಸಮಯದಲ್ಲಿ ಡಿಸೆಂಬರ್ 1 ರಿಂದ 15 ರವರೆಗಿನ ಎಲ್ಲ ದಿನಗಳನ್ನು ನಮಗಾಗಿ ಕಾಯ್ದಿರಿಸಿ ಎಂದು ಹೇಳಿದರು. ಈ ಸಮಯದಲ್ಲಿ ನೀವು ತೆಗೆದಿರುವ ಕೆಲ ಫೋಟೋ ಸ್ಯಾಂಪಲ್ ಗಳನ್ನು ನಮಗೆ ಕಳುಹಿಸಿಕೊಡಿ ಎಂದು ಕೇಳಿದ್ದರು. ಮಾತುಕತೆಯ ಸಮಯದಲ್ಲಿ 15 ದಿನಗಳ ಕಾಲ ಯಾರ ಮದುವೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಹೇಳಿರಲಿಲ್ಲ ಎಂದು ವಿವೇಕ್ ಅವರು ಆಫರ್ ಸಿಕ್ಕಿದ ವಿಚಾರ ತಿಳಿಸಿದ್ದಾರೆ.

    2 ದಿನ ಬೇಕಾಯ್ತು:
    ಅಕ್ಟೋಬರ್ ನಲ್ಲಿ ಅಂಬಾನಿ ಪುತ್ರಿಯ ಮದುವೆ ಸಮಾರಂಭ ಫೋಟೋ ತೆಗೆಯಲು ನನ್ನನ್ನು ಆಯ್ಕೆ ಮಾಡಿದ ವಿಚಾರ ಗೊತ್ತಾಯಿತು. ಈ ಸಮಯದಲ್ಲಿ ನನ್ನನ್ನೇ ಆಯ್ಕೆ ಮಾಡಿದ್ದು ಯಾಕೆ ಎಂದು ಕೇಳಿದಾಗ, ನನ್ನ ಫೋಟೋ ತೆಗೆಯುವ ಪ್ರತಿಭೆ ನೋಡಿ ಆಯ್ಕೆ ಮಾಡಲಾಯಿತು ಎಂದು ಹೇಳಿದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿಷಯವನ್ನು ಅರಗಿಸಿಕೊಳ್ಳಲು ಎರಡು ದಿನ ಬೇಕಾಯಿತು. ಮುಂಬೈಗೆ ಹೋಗಿ ಫೋಟೋ ರಹಸ್ಯ, ಸಂಭಾವನೆ ವಿಚಾರ ಕುರಿತು ಮಾತನಾಡಿ ಒಪ್ಪಂದ ಮಾಡಿಕೊಂಡು ಬಂದೆ. ಯಾವುದೇ ಕಾರಣಕ್ಕೂ ತೆಗೆದ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಎಂದು ಷರತ್ತು ವಿಧಿಸಲಾಗಿತ್ತು.

    ಮದುವೆಗಾಗಿಯೇ ನಾವು 2 ತಿಂಗಳು ಸಿದ್ಧತೆ ನಡೆಸಿದೆವು. ‘ಲುಕ್ಸ್ ಕ್ಯಾಪ್ಚರ್’ ನ 17 ಮಂದಿ ಸದಸ್ಯರು ಮುಂಬೈ ಮತ್ತು ಉದಯ್‍ಪುರ್ ಸಮಾರಂಭವನ್ನು ಕವರ್ ಮಾಡಿದ್ದೇವೆ. ನನ್ನ ಸ್ಟುಡಿಯೋ ಪಾಲುದಾರನಾಗಿರುವ ಶಂಕರ್ ಜೊತೆ ನಾಲ್ವರು ಮತ್ತು ನಾನು ಫೋಟೋ ತೆಗೆದಿದ್ದೇವೆ. ಉಳಿದ 7 ಮಂದಿ ವಿಡಿಯೋ, ಡ್ರೋನ್ ಮೂಲಕ ಸಮಾರಂಭವನ್ನು ಸೆರೆಹಿಡಿದಿದ್ದಾರೆ. ಉಳಿದವರು ನಮಗೆ ತಾಂತ್ರಿಕ ಸಹಾಯ ನೀಡಿದರು ಎಂದು ವಿವೇಕ್ ವೃತ್ತಿ ಅನುಭವವನ್ನು ಹಂಚಿಕೊಂಡರು.

    ಝಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ನಡೆದ ಈ ಮದುವೆಯಲ್ಲಿ ಶಂಕರ್ ಮತ್ತು ನನಗೆ ವಿಶೇಷ ಐಡಿ ಕಾರ್ಡ್ ನೀಡಲಾಗಿತ್ತು. ಹೀಗಾಗಿ ವಿಐಪಿ, ವಧು ವರರಿಗೆಂದೇ ಮೀಸಲಾಗಿದ್ದ ಸ್ಥಳದಲ್ಲಿ ನಮಗೆ ಓಡಾಟ ಮಾಡಲು ಅನುಮತಿ ಸಿಕ್ಕಿತ್ತು. 1.2 ಲಕ್ಷ ಫೋಟೋ, ವಿಡಿಯೋ ಸೇರಿ ಒಟ್ಟು 30 ಟಿಬಿ ಡೇಟಾ ಆಗಿದ್ದು, ಒಂದು ತಿಂಗಳ ಡೆಡ್‍ಲೈನ್ ಒಳಗಡೆ ಫೋಟೋಗಳನ್ನು ನೀಡಬೇಕಿದೆ. ಈಗ ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇವೆ ಎಂದು ವಿವೇಕ್ ಹೇಳಿದರು.

    ಒಟ್ಟು ಎಷ್ಟು ರೂ. ಬಿಲ್ ಆಗಬಹುದು ಎಂದು ಪ್ರಶ್ನೆ ಕೇಳಿದ್ದಕ್ಕೆ ವಿವೇಕ್ ಅವರು, ಬಿಲ್ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ದೇಶದ ಅತಿ ದೊಡ್ಡ ಮದುವೆ, ವಿವಿಐಪಿಯವರು ಭಾಗವಹಿಸಿದ್ದ ಸಮಾರಂಭದಲ್ಲಿ ಫೋಟೋ ತೆಗೆಯಲು ಅವಕಾಶ ಸಿಕ್ಕಿದ್ದೆ ದೊಡ್ಡದು. ಈ ಸಮಾರಂಭವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಡ್ರಾಪ್‍ಔಟ್ ವಿದ್ಯಾರ್ಥಿ:
    ವಿಶೇಷ ಏನೆಂದರೆ ವಿವೇಕ್ ಅವರು ಕಾಲೇಜ್ ಡ್ರಾಪ್‍ಔಟ್ ವಿದ್ಯಾರ್ಥಿ. ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದ ಅವರು ನಂತರ ಪೆಟ್ರೋಲ್ ಬಂಕ್ ಒಂದರಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡಿದ್ದರು. ಸಮಯದಲ್ಲಿ ಸ್ನೇಹಿತರಿಂದ ಫೋಟೋಗ್ರಾಫಿ ಕಲಿತು ಭದ್ರತಾ ಠೇವಣಿಯಾಗಿ ಇಟ್ಟಿದ್ದ 7 ಸಾವಿರ ರೂ. ಹಣವನ್ನು ಡ್ರಾ ಮಾಡಿ 7 ಸಾವಿರ ರೂ. ಮೌಲ್ಯದ ಕ್ಯಾಮೆರಾವನ್ನು ಖರೀದಿಸಿದ್ದರು. ಠೇವಣಿಯನ್ನು ಡ್ರಾ ಮಾಡಿದ ಬಳಿಕ ಕೆಲಸ ಹೋಯ್ತು. ರಿಸ್ಕ್ ಕೆಲಸ ಆದರೂ ವಿವೇಕ್ ಅವರು ಫೋಟೋಗ್ರಫಿಯಲ್ಲೇ ಮುಂದುವರಿದರು.

    2010, 2011, 2012, 2014ರಲ್ಲಿ ಬೆಟರ್ ಫೋಟೋಗ್ರಾಫಿ ಸಂಸ್ಥೆ ನೀಡುವ `ಅತ್ಯುತ್ತಮ ಮದುವೆ ಫೋಟೋಗ್ರಾಫರ್’ ಪ್ರಶಸ್ತಿಗೆ ವಿವೇಕ್ ಅವರಿಗೆ ಲಭಿಸಿದೆ. ಈ ಮಾಹಿತಿಯನ್ನು ಕಲೆ ಹಾಕಿದ್ದ ಅಂಬಾನಿ ಕುಟುಂಬ ವಿವೇಕ್ ಸಿಕ್ವೇರಾ ಅವರನ್ನು ಸಂಪರ್ಕಿಸಿ ಆಫರ್ ನೀಡಿತ್ತು.

    ವಿವೇಕ್ ಜೊತೆ ಭಾರತದ ಇನ್ನೊಂದು ಫೋಟೋಗ್ರಾಫರ್ ತಂಡ ಅಷ್ಟೇ ಅಲ್ಲದೇ ಬ್ರಿಟನ್, ಇಟಲಿ ಇತರೇ ದೇಶಗಳ ಪ್ರಸಿದ್ಧ ಫೋಟೋಗ್ರಾಫರ್ ಗಳು ಅಂಬಾನಿ ಪುತ್ರಿಯ ವೈಭವದ ಮದುವೆಯನ್ನು ಕವರ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಹಿಮಾದಾಸ್ ಆಯ್ಕೆ

    ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಹಿಮಾದಾಸ್ ಆಯ್ಕೆ

    ದಿಸ್ಪುರ್: ಭಾರತದ ಕ್ರೀಡಾಪಟು ಹಿಮಾದಾಸ್ ಅವರನ್ನು ರಾಜ್ಯಕ್ಕೆ ಮೊದಲ ಕ್ರೀಡಾ ರಾಯಭಾರಿ ಆಗಿ ಮುಖ್ಯಮಂತ್ರಿ ಸರಬಾನಂದ ಸೊನೋವಾಲ್ ರವರು ಆಯ್ಕೆ ಮಾಡಿದ್ದಾರೆ.

    ಇತ್ತೀಚೆಗೆ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮಾದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. ಈ ವೇಳೆ ಸಿಎಂ ಸೊನೋವಾಲ್ ರಾಜ್ಯದ ಕ್ರೀಡಾ ರಾಯಭಾರಿ ಎಂದು ಘೋಷಣೆಯನ್ನು ನೀಡಿದ್ದರು. ಇದೇ ಮೊದಲ ಬಾರಿಗೆ ಅಸ್ಸಾಂ ನಲ್ಲಿ ಕ್ರೀಡಾ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ.

    ಫ್ರಾನ್ಸ್ ನಲ್ಲಿ ಆಯೋಜಿಸಿದ ಮಹಿಳಾ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ 18 ನೇ ವಯಸ್ಸಿನಲ್ಲಿಯೇ ಇತಿಹಾಸವನ್ನು ಸೃಷ್ಟಿಸುವಲ್ಲಿ ಹಿಮಾದಾಸ್ ಯಶಸ್ವಿಯಾದರು.

    ಈ ಮುಂಚಿನ ಓಟದ ಹಿಮಾದಾಸ್ ರವರ ಸಾಧನೆಗೆ ಸಿಎಂ ಅಭಿನಂದಿಸಿದ್ದು, ಹಿಮಾದಾಸ್‍ರವರ ಸ್ಫೂರ್ತಿಯಿಂದ, ಅವಕಾಶಗಳಿಂದ ಮತ್ತು ಸಾಧನೆಗಳಿಂದ ಅಸ್ಸಾಂನ ಬೆಳವಣಿಗೆಗೆ ಪೂರಕವಾಗಲಿವೆ ಎಂದರು.

    ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.

  • ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

    ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

    ರಾಯ್‍ಪುರ್: ಸಾಧಿಸುವ ಛಲವಿರುವವರಿಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಛತ್ತೀಸ್‍ಗಡದ ಆದಿವಾಸಿ ಜನಾಂಗದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಐಐಟಿಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಇದನ್ನ ಸಾಬೀತುಪಡಿಸಿದ್ದಾರೆ.

    ಛತ್ತೀಸ್‍ಗಢದ ಜಸ್ಪುರ್ ಜಿಲ್ಲೆಯ ಕುದೆಕೆಲಾ ಹಾಗೂ ಜಾಗ್ರಮ್ ಗ್ರಾಮದ ಅದಿವಾಸಿ ಜನಾಂಗಕ್ಕೆ ಸೇರಿದ ದೀಪಕ್ ಕುಮಾರ್ ಹಾಗೂ ನಿತೀಶ್ ಗಂಜಾನ್ ದೆಹಲಿ ಐಐಟಿಯಲ್ಲಿ ಪ್ರವೇಶ ಪಡೆದವರು. ಬಡತನದ ಮಧ್ಯೆಯೂ ಆದಿವಾಸಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಇತರರಿಗೆ ಮಾದರಿಯಾಗಿದೆ.

    ಈ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಪ್ರತಿಷ್ಠಿತ ಐಐಟಿಯಲ್ಲಿ ಟೆಕ್ಸ್‍ಟೈಲ್ ಬ್ರ್ಯಾಂಚ್‍ನಲ್ಲಿ ಪ್ರವೇಶ ಪಡೆದಿದ್ದಾರೆ. ಈ ಸಾಧನೆಯಿಂದ ವಿದ್ಯಾರ್ಥಿಗಳ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು ತಮ್ಮ ಈ ಸಾಧನೆಗೆ ಕುಟಂಬಸ್ಥರು ಹಾಗೂ ಜಿಲ್ಲಾಡಳಿತ ಪ್ರೇರಣೆ ಕಾರಣ ಎಂದು ತಿಳಿಸಿದ್ದಾರೆ.