Tag: accused

  • ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಚಿಕ್ಕಬಳ್ಳಾಪುರ: ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನೆಟ್ಟಿ ಬಂಧಿಸಿದ್ದಾರೆ.

    ಬೆಂಗಳೂರು ಮೂಲದ ಕರೀಂಖಾನ್(81) ಕೊಲೆ ಮಾಡಿ ಪರಾರಿಯಾಗುತ್ತಿದ್ದ, ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ರನ್ನು ಗೌರಿಬಿದನೂರು ಪೊಲೀಸರು ವಿಮಾನದಲ್ಲಿ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರು ಮೂಲದ ಕರೀಂಖಾನ್(81) ಗೌರಿಬಿದನೂರು ತಾಲೂಕು ಗೊಡ್ಡಾವರಹಳ್ಳಿ ಬಳಿ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿ ಫಾರಂ ಹೌಸ್ ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗಂತಲೇ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು.

    ಆದರೆ ಮೇ 3ರಂದು ತೋಟಕ್ಕೆ ಬಂದಿದ್ದ ಮಾಲೀಕ ಕರೀಂಖಾನ್ ರನ್ನು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ. ಕರೀಂಖಾನ್ ನನ್ನ ತೋಟದಲ್ಲಿನ ಶೆಡ್ ನಲ್ಲಿ ಮೋಟಾರು ಅಳವಡಿಕೆಗೆ ಇರುವ ಬೃಹದಾದ ಗುಂಡಿಯಲ್ಲಿ ಹಾಕಿ ಕೂಡಿ ಹಾಕಿದ್ದರು. ನಂತರ ಮಗ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಿಮ್ಮ ತಂದೆಯನ್ನು ಕಿಡ್ನಾಪ್ ಮಾಡಿದ್ದೇವೆ. 70 ಲಕ್ಷ ರೂ. ನೀಡಿ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಕರೀಂಖಾನ್ ಮಗ ಆಯೂಬ್ ಖಾನ್ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಇತ್ತ ಶೆಡ್‍ನ ಗುಂಡಿಯಲ್ಲಿ ಕೂಡಿ ಹಾಕಿದ್ದ ಕರೀಂಖಾನ್ ಕೂಡ ಗುಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಿಂದ ಪೊಲೀಸರಿಗೆ ವಿಷಯ ಗೊತ್ತಾಗುವಷ್ಟರಲ್ಲಿ ಪರಾರಿಯಾಗಬೇಕು ಎಂದು ತೀರ್ಮಾನಿಸಿದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು, ರೈಲು ಮೂಲಕ ಅಸ್ಸಾಂಗೆ ಪಯಣ ಬೆಳೆಸಿದ್ದರು.

    ಪರಾರಿಯಾದ ವಿಷಯ ತಿಳಿದ ಪೊಲೀಸರು, ಇವರೇ ಅಪಹರಣಕಾರರು ಎಂದು ಅಸ್ಸಾಂ ನತ್ತ ತೆರಳುತ್ತಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ವಿಮಾನದ ಮೂಲಕ ಕೋಲ್ಕತ್ತಾ ಗೆ ತೆರಳಿ, ಅಲ್ಲಿ ಹೌರಾ ರೈಲ್ವೇ ಜಂಕ್ಷನ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಗ ನಡೆದ ಘಟನೆಯನ್ನ ಬಾಯ್ಬಿಟ್ಟಿರೋ ಸೆಕ್ಯೂರಿಟಿ ಗಾರ್ಡ್‍ಗಳು, ಕರೀಂಖಾನ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಸದ್ಯ ಮೂವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಸೆಕ್ಯೂರಿಟಿ ಗಾರ್ಡ್ ಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ.

    ಮತ್ತೊಂದೆಡೆ ಗುಂಡಿಯಲ್ಲಿದ್ದ ಕರೀಂಖಾನ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

    ಇನ್ನೂ ಮೂವರು ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ಗಳು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಆರೋಪಿಯನ್ನ ಹಿಡಿಯಲು ಸಿಂಪಲ್ ಟೆಕ್ನಿಕ್ ಬಳಸಿದ ವಯೋವೃದ್ಧ-ವಿಡಿಯೋ ನೋಡಿ

    ಆರೋಪಿಯನ್ನ ಹಿಡಿಯಲು ಸಿಂಪಲ್ ಟೆಕ್ನಿಕ್ ಬಳಸಿದ ವಯೋವೃದ್ಧ-ವಿಡಿಯೋ ನೋಡಿ

    ಕೊಲಂಬೊ: ಪೊಲೀಸರು ಶಂಕಿತ ಆರೋಪಿಯನ್ನು ಬೆನ್ನಟ್ಟಿ ಬರುವಾಗ ಮಾರ್ಗ ಮಧ್ಯೆ ನಿಂತಿದ್ದ ವೃದ್ಧ ವ್ಯಕ್ತಿಯೊಬ್ಬ ಆತನನ್ನು ಬಂಧಿಸಲು ಸಿಂಪಲ್ ಟೆಕ್ನಿಕ್ ಬಳಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಬಿಲ್ ಎಂಬವರೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರಿಗೆ ಸಹಕರಿಸಿದ ವಯೋವೃದ್ಧರು. ಏಪ್ರಿಲ್ 3ರಂದು ಬಿಲ್ ತಮ್ಮ ಮೊಮ್ಮಗಳೊಂದಿಗೆ ನಗರದ ಗೃಂಥಾಲಯಕ್ಕೆ ಆಗಮಿಸಿದ್ದರು. ಗೃಂಥಾಲಯದಿಂದ ಹಿಂದಿರುವ ವೇಳೆ ಪೊಲೀಸ್ ವಾಹನದ ಸೈರನ್ ಕೇಳಿಸಿದ್ದರಿಂದ ರಸ್ತೆ ದಾಟದೇ ಅಲ್ಲಿಯೇ ನಿಂತುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಬಿಲ್ ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆ ಗೃಂಥಾಲಯದ ಕಟ್ಟಡದ ಮುಂಭಾಗದಲ್ಲಿಯೇ ನಿಂತಿದ್ದಾರೆ. ಎಡಗಡೆಯಿಂದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದನ್ನು ನೋಡಿದ್ದಾರೆ. ಯುವಕ ತಮ್ಮ ಹತ್ತಿರ ಬರುತ್ತಿದ್ದಂತೆ ಒಂದು ಹೆಜ್ಜೆ ಹಿಂದೆ ಬಂದು ಅವನಿಗೆ ಕಾಲು ಅಡ್ಡ ಹಾಕಿ ಬೀಳಿಸಿದ್ದಾರೆ. ವೇಗದಲ್ಲಿ ಓಡಿ ಬರ್ತಿದ್ದ ಆರೋಪಿ ಆಯತಪ್ಪಿ ಕೆಲ ದೂರ ಹೋಗಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಲ್, ಗೃಂಥಾಲಯದಿಂದ ಹೊರ ಬಂದಾಗ ಪೊಲೀಸ್ ಸೈರನ್ ಕೇಳಿಸಿತು. ಎಡಗಡೆಯಿಂದ ಒಬ್ಬ ಓಡಿ ಬುರತ್ತಿದ್ದನ್ನು ನೋಡಿ ಪೊಲೀಸರಿಗೆ ಸಹಾಯ ಮಾಡುವ ಉದ್ದೇಶಕ್ಕಾಗಿ ಕಾಲನ್ನು ಅಡ್ಡ ಹಾಕಿ ಆತನನ್ನು ಬೀಳಿಸಿದೆ. ಎಲ್ಲರೂ ಕಳ್ಳರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಬಿಲ್ ಆರೋಪಿಯನ್ನು ಹಿಡಿಯಲು ಬಳಸಿರುವ ಟೆಕ್ನಿಕ್ ಗೃಂಥಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಏಪ್ರಿಲ್ 3ರಂದು ಈ ಘಟನೆ ನಡೆದಿದ್ದು, ಗುರುವಾರ (ಮೇ 3)ದಂದು ಕೊಲಂಬೊದ ಓಹಿಯೋ ಪೊಲೀಸರು ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಬಂಧಿತ ಶಂಕಿತ ಆರೋಪಿಯಿಂದ ಗ್ಲಾಕ್ 9 ಎಂ.ಎಂ ಪಿಸ್ತೂಲ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಜನರು ಅಜ್ಜನ ಸಿಂಪಲ್ ಟೆಕ್ನಿಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 8 ತಿಂಗಳ ಕಂದಮ್ಮನನ್ನ ಅತ್ಯಾಚಾರಗೈದಿದ್ದ ಕಾಮುಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು-ವಿಡಿಯೋ ನೋಡಿ

    8 ತಿಂಗಳ ಕಂದಮ್ಮನನ್ನ ಅತ್ಯಾಚಾರಗೈದಿದ್ದ ಕಾಮುಕನನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು-ವಿಡಿಯೋ ನೋಡಿ

    ಇಂದೋರ್: 8 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನು ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ಜಿಲ್ಲಾ ನ್ಯಾಯಾಲಯದ ಮುಂದೆ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಿದ್ದ ಪೊಲೀಸರು ಕಾಮುಕನನ್ನು ನ್ಯಾಯಾಲಯದ ಮುಂದೇ ಹಾಜರು ಪಡಿಸಲು ಕರೆತಂದಿದ್ದರು.

    ಕಾಮುಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಆ ವೇಳೆ ಕೋರ್ಟ್ ಆವರಣದಲ್ಲಿ ಜಮಾವಣೆಗೊಂಡಿದ್ದರು. ಆರೋಪಿಯನ್ನು ಪೊಲೀಸರು ವಾಹನದಿಂದ ಕೆಳಗಿಳಿಸುತ್ತಿದಂತೆ ಸಾರ್ವಜನಿಕರು ಏಕಾಏಕಿ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಈ ವೇಳೆ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪೊಲೀಸರು ಆರೋಪಿಯನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.

    ಘಟನೆಯ ವಿವರ: ಪುಟ್ಟ ಕಂದಮ್ಮನ ಹೆತ್ತವರು ಬಲೂನ್ ಮಾರಿ ಜೀವನ ನಡೆಸುತ್ತಿದ್ದು, ನಗರದ ರಾಜ್ ವಾಡ ಕೋಟೆಯ ರಸ್ತೆ ಬದಿಯಲ್ಲಿ ನಿದ್ದೆ ಮಾಡುತ್ತಿದ್ದರು. ಇದನ್ನು ಗಮನಿಸಿದ 21 ವರ್ಷದ ಕಾಮುಕ ನವೀನ್ ಎಂಬಾತ ಮುಗ್ದ ಕಂದಮ್ಮನನ್ನು ಹೆತ್ತವರ ಬಳಿಯಿಂದ ಅಪಹರಿಸಿ 200 ಮೀಟರ್ ದೂರದಲ್ಲಿರೋ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿ ಅತ್ಯಾಚಾರಕ್ಕೊಳಗಾದ ಮಗುವಿನ ಹೆತ್ತವರಿಗೆ ತಿಳಿದವನಾಗಿದ್ದು, ಹೀಗಾಗಿ ಆತನನ್ನು ಬೇಗ ಬಂಧಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

    ಪ್ರಕರಣ ಬೆಳಕಿಗೆ: ಕಟ್ಟಡದ ನೆಲ ಮಾಳಿಗೆಯಲ್ಲಿರುವ ತನ್ನ ಅಂಗಡಿಯ ಬಾಗಿಲು ತೆರೆಯಲು ಮಾಲೀಕ ಬಂದಾಗ, ಒಂದು ಬದಿಯಲ್ಲಿ ಪುಟ್ಟ ಕಂದಮ್ಮ ಶವವಾಗಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.

    ಸದ್ಯ ಪೊಲೀಸರು ದ್ವಿ-ಚಕ್ರ ವಾಹನದ ಜೊತೆಗೆ ರಕ್ತಸಿಕ್ತವಾದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಖಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ವೇಗವಾಗಿ ನಡೆಸಲು ಸೂಚಿಸಿದ್ದರು.

     

  • ರಸ್ತೆ ಬದಿಯಲ್ಲಿ ಹೆತ್ತವರೊಂದಿಗೆ ಮಲಗಿದ್ದ 8 ತಿಂಗ್ಳ ಕಂದಮ್ಮನನ್ನು ಅಪಹರಿಸಿ ರೇಪ್ ಮಾಡಿ ಕೊಲೆಗೈದ!

    ರಸ್ತೆ ಬದಿಯಲ್ಲಿ ಹೆತ್ತವರೊಂದಿಗೆ ಮಲಗಿದ್ದ 8 ತಿಂಗ್ಳ ಕಂದಮ್ಮನನ್ನು ಅಪಹರಿಸಿ ರೇಪ್ ಮಾಡಿ ಕೊಲೆಗೈದ!

    ಇಂದೋರ್: ಕಾಮುಕನೊಬ್ಬ ನಗರದ ರಸ್ತೆ ಬದಿಯಲ್ಲಿ ಹೆತ್ತವರ ಜೊತೆ ಮಲಗಿದ್ದ 8 ತಿಂಗಳ ಮಗುವನ್ನು ಹೊತ್ತೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಹೆತ್ತವರೊಂದಿಗೆ ನಿದ್ದೆಗೆ ಜಾರಿದ್ದ ಕಂದಮ್ಮನನ್ನು ಕಾಮುಕ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಘಟನೆಯ ವಿವರ: ಪುಟ್ಟ ಕಂದಮ್ಮನ ಹೆತ್ತವರು ಬಲೂನ್ ಮಾರಿ ಜೀವನ ನಡೆಸುತ್ತಿದ್ದು, ನಗರದ ರಾಜ್ ವಾಡ ಕೋಟೆಯ ರಸ್ತೆ ಬದಿಯಲ್ಲಿ ನಿದ್ದೆ ಮಾಡುತ್ತಿದ್ದರು. ಇದನ್ನು ಗಮನಿಸಿದ 21 ವರ್ಷದ ಕಾಮುಕ ನವೀನ್ ಎಂಬಾತ ಮುಗ್ದ ಕಂದಮ್ಮನನ್ನು ಹೆತ್ತವರ ಬಳಿಯಿಂದ ಅಪಹರಿಸಿ 200 ಮೀಟರ್ ದೂರದಲ್ಲಿರೋ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿ ಅತ್ಯಾಚಾರಕ್ಕೊಳಗಾದ ಮಗುವಿನ ಹೆತ್ತವರಿಗೆ ತಿಳಿದವನಾಗಿದ್ದು, ಹೀಗಾಗಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ವಿಡಿಯೋದಲ್ಲೇನಿದೆ?: ಮಗುವಿನ ದೂರದ ಸಂಬಂಧಿಯಾಗಿರೋ ಆರೋಪಿ ನವೀನ್ ಗಡ್ಕೆ, ತನ್ನ ದ್ವಿಚಕ್ರ ವಾಹನದಲ್ಲಿ ಬೆಳಗಿನ ಜಾವ 4.45ರ ಸುಮಾರಿಗೆ ಮಗು ಮಲಗಿದ್ದ ಸ್ಥಳಕ್ಕೆ ಬಂದಿದ್ದಾನೆ. ಮಗುವನ್ನು ಅಲ್ಲಿಂದ ಅಪಹರಿಸುತ್ತಾನೆ. ನಂತ್ರ ಹತ್ತಿರದಲ್ಲಿರೋ ವಾಣಿಜ್ಯ ಸಂಕೀರ್ಣವೊಂದರ ನೆಲಮಾಳಿಗೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯ ಮೃತದೇಹ ಮಧ್ಯಾಹ್ನ ದೊರೆತಿದೆ ಗುಪ್ತಾಂಗ, ತಲೆ ಸೇರಿದಂತೆ ಬಾಲಕಿಯ ದೇಹದಲ್ಲಿ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಎಸೆದಿರಬೇಕು ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ.

     

    ಪ್ರಕರಣ ಬೆಳಕಿಗೆ: ಕಟ್ಟಡದ ನೆಲ ಮಾಳಿಗೆಯಲ್ಲಿರುವ ತನ್ನ ಅಂಗಡಿಯ ಬಾಗಿಲು ತೆರೆಯಲು ಮಾಲೀಕ ಬಂದಾಗ, ಒಂದು ಬದಿಯಲ್ಲಿ ಪುಟ್ಟ ಕಂದಮ್ಮ ಶವವಾಗಿ ಬಿದ್ದಿರುವುದು ಕಂಡು ಬಂದಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ಪೊಲೀಸರು ದ್ವಿ-ಚಕ್ರ ವಾಹನದ ಜೊತೆಗೆ ರಕ್ತಸಿಕ್ತವಾದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಖಂಡಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಅವರು ತಿಳಿಸಿದ್ದಾರೆ.

  • ಕೋರ್ಟ್ ನಲ್ಲಿ ತೀರ್ಪು ಪ್ರಕಟವಾಗ್ತಿದ್ದಂತೆಯೇ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಶೂ ಎಸೆದ!

    ಕೋರ್ಟ್ ನಲ್ಲಿ ತೀರ್ಪು ಪ್ರಕಟವಾಗ್ತಿದ್ದಂತೆಯೇ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಶೂ ಎಸೆದ!

    ಉಡುಪಿ: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಉಡುಪಿಯ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿಯೇ ಶೂ ಎಸೆದ ಕಳವಳಕಾರಿ ಘಟನೆ ನಡೆದಿದೆ.

    ಐದು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನಲ್ಲಿ ಹದಿನೈದರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿತ್ತು. ಬಳಿಕ ತನಿಖೆಯಿಂದ ಬ್ರಹ್ಮಾವರದ ಪ್ರಶಾಂತ ಕುಲಾಲ್ ಆರೋಪಿಯೆಂದು ಬೆಳಕಿಗೆ ಬಂತು. ಕೂಡಲೇ ಈತನನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನಿಂದ ಈತ ಬಿಡುಗಡೆ ಹೊಂದಿದ್ದು, ವಿಚಾರಣೆ ನಡೆಯುತ್ತಿತ್ತು. ಆ ಬಳಿಕವೂ ಈತ ಒಂದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

    ಗುರುವಾರ ಸಂಜೆ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಈ ವೇಳೆ ಈತನ ಅಪರಾಧಿ ಹಿನ್ನೆಲೆಯನ್ನು ಉಲ್ಲೇಖಿಸಿದ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್ ವಾಸು ಪೂಜಾರಿ ಅವರು ಈತನಿಗೆ ಕಠಿಣ ಶಿಕ್ಷೆ ನೀಡುವಂತೆ ವಾದಿಸಿದ್ದರು. ತೀರ್ಪು ನೀಡಿದ ನ್ಯಾಯಾಧೀಶರು 20 ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಿದ್ದರು.

    ತೀರ್ಪು ಪ್ರಕಟವಾಗುತ್ತಿದ್ದಂತೆ ಕೋಪಗೊಂಡ ಪ್ರಶಾಂತ್ ತನ್ನ ಎರಡೂ ಕಾಲುಗಳ ಶೂ ತೆಗೆದು ನ್ಯಾಯಾಧೀಶರ ಸಮ್ಮುಖದಲ್ಲಿದ್ದ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ್ ವಾಸು ಪೂಜಾರಿಯತ್ತ ಎಸೆದಿದ್ದಾನೆ. ಅವರು ಅದೃಷ್ಟವಶಾತ್ ಏಟಿನಿಂದ ತಪ್ಪಿಸಿಕೊಂಡಿದ್ದು, ಇದು ನ್ಯಾಯಾಲಯವನ್ನು ಅವಮಾನಿಸಿದ ಪ್ರಕರಣವಾಗಿದೆ.

    ಪ್ರಶಾಂತ್ ವಿರುದ್ಧ ಈ ಬಗ್ಗೆ ಶುಕ್ರವಾರ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಕೋರಿಕೆಯ ಮೇರೆಗೆ ವಿಜಯ್ ವಾಸು ಪೂಜಾರಿ ಅವರಿಗೆ ಭದ್ರತೆ ನೀಡಲಾಗಿದೆ.

  • ದರೋಡೆ ಮಾಡಿ ತಪ್ಪನ್ನ ಕ್ಷಮಿಸುವಂತೆ ದೇವರ ಮೊರೆ ಹೋದ್ರು – ದೇವಾಲಯದಲ್ಲೇ ಪೊಲೀಸರಿಗೆ ಸೆರೆಯಾದ್ರು

    ದರೋಡೆ ಮಾಡಿ ತಪ್ಪನ್ನ ಕ್ಷಮಿಸುವಂತೆ ದೇವರ ಮೊರೆ ಹೋದ್ರು – ದೇವಾಲಯದಲ್ಲೇ ಪೊಲೀಸರಿಗೆ ಸೆರೆಯಾದ್ರು

    ಬೆಂಗಳೂರು: ದರೋಡೆ ಮಾಡಿ ತಪ್ಪನ್ನು ಕ್ಷಮಿಸುವಂತೆ ದೇವರ ಮೊರೆ ಹೋಗುತ್ತಿದ್ದ ಖತರ್ನಾಕ್ ದರೋಡೆಕೋರರನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ನಗರದ ಹೊರವಲಯ ನೆಲಮಂಗಲ ಪಟ್ಟಣ ಪೊಲೀಸರು ಕುಖ್ಯಾತ ದರೋಡೆಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಶೋಕಿಗಾಗಿ ದರೋಡೆ ಮಾಡುವ ವೃತ್ತಿಯನ್ನು ಆರಂಭಿಸಿದ್ದರು. ದರೋಡೆ ಮಾಡಿದ ಬಳಿಕ ಮಾಡಿದ ತಪ್ಪನ್ನ ಕ್ಷಮಿಸುವಂತೆ ದೇವರ ಮೊರೆ ಹೋಗುತ್ತಿದ್ದರು. ಆದರೆ ದೇವರ ಮೊರೆ ಹೋದಾಗಲೇ ಗ್ರಹಚಾರ ಕೈಕೊಟ್ಟು ಪೊಲೀಸರ ಅತಿಥಿಗಳಾಗಿದ್ದಾರೆ.

    ಕಳೆದ ಒಂದು ವಾರದ ಹಿಂದೆ ನೆಲಮಂಗಲ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಫೈನಾನ್ಸಿಷಯರ್ ಮೇಲೆ ಹಲ್ಲೆ ಮಾಡಿ, ಚಿನ್ನಾಭರಣಗಳೊಂದಿಗೆ ಐದು ಮಂದಿ ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ವಿನೋದ್, ವಿಜಯ್, ಶಿವರಾಜ್, ಅನಿಲ್ ಹಾಗೂ ಒಬ್ಬ ಅಪ್ರಾಪ್ತ ಆರೋಪಿ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ.

    ಬಂಧಿತರು ನಗರದ ಕಮಲನಗರ ಹಾಗೂ ಕಾಮಾಕ್ಷಿಪಾಳ್ಯದ ನಿವಾಸಿಗಳಾಗಿದ್ದು, ಶೋಕಿಗಾಗಿ ದರೋಡೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 2 ಬೈಕ್, 3 ಲಕ್ಷ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಭೀಮಶಂಕರ್ ಎಸ್ ಗುಳೇದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಅತ್ಯಾಚಾರಿ ಆರೋಪಿಯನ್ನ ಬೆಲ್ಟ್ ನಿಂದ ಹೊಡೆದ ಸಬ್ ಇನ್ಸ್ ಪೆಕ್ಟರ್- ವಿಡಿಯೋ ವೈರಲ್

    ಅತ್ಯಾಚಾರಿ ಆರೋಪಿಯನ್ನ ಬೆಲ್ಟ್ ನಿಂದ ಹೊಡೆದ ಸಬ್ ಇನ್ಸ್ ಪೆಕ್ಟರ್- ವಿಡಿಯೋ ವೈರಲ್

    ಲಕ್ನೋ: ಅತ್ಯಾಚಾರಿ ಆರೋಪಿಗೆ ಸಬ್ ಇನ್ಸ್ ಪೆಕ್ಟರ್ ಒಬ್ಬರು ಮನಸೋ ಇಚ್ಚೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಮಾವ್ ನಗರದ ಠಾಣೆಯಲ್ಲಿ ನಡೆದಿದ್ದು, ಇದೀಗ ಅತ್ಯಾಚಾರಿ ಆರೋಪಿಯನ್ನು ಬೆಲ್ಟ್ ನಿಂದ ಹೊಡೆದ ಪೊಲೀಸ್ ಅಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

    ರಾಜನ್ ಮೌರ್ಯ ಎಂಬವರೇ ಆರೋಪಿಯನ್ನು ಥಳಿಸಿದ ಪೊಲೀಸ್ ಅಧಿಕಾರಿ. ರಾಜನ್ ಠಾಣೆಯ ಮುಂಭಾಗದಲ್ಲಿಯೇ ಆರೋಪಿಗೆ ಥಳಿಸಿತ್ತಿರುವಾಗ ಕೆಲವರು ಏನಿದು ಅಂತಾ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬೇಕಾದ್ರೆ ವಿಡಿಯೋ ಮಾಡಿಕೊಳ್ಳಿ ನಾನು ಯಾರಿಗೂ ಹೆದರುವುದಿಲ್ಲ ಅಂತಾ ರಾಜನ್ ಮೌರ್ಯ ಹೇಳಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ವಿಡಿಯೋದಲ್ಲಿ ಏನಿದೆ?: ಮಾವ್ ನಗರದ ಠಾಣೆಯ ಮುಂಭಾಗದಲ್ಲಿ ಅತ್ಯಾಚಾರ ಆರೋಪಿಯನ್ನು ನಿಲ್ಲಿಸಿ ಹಲ್ಲೆ ಮಾಡಲಾಗಿದೆ. ಆರೋಪಿಯ ಕೈ ಗಳನ್ನು ಇಬ್ಬರು ಹಿಡಿದಿದ್ದು, ಹಿಂದಿನಿಂದ ರಾಜನ್ ಮೌರ್ಯ ಬೆಲ್ಟ್ ನಿಂದ ಥಳಿಸಿದ್ದಾರೆ. ಆರೋಪಿ ನೋವಿನಿಂದ ಚೀರಾಡಿದ್ರೂ ಪೊಲೀಸ್ ಅಧಿಕಾರಿ ಥಳಿಸಿದ್ದಾರೆ.

    ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಘಟನೆ ಬಗ್ಗೆ ವಿವರಣೆ ಕೇಳಿ ರಾಜನ್ ಮೌರ್ಯ ನೋಟಿಸ್ ಜಾರಿ ಮಾಡಲಾಗಿದೆ. ವಿಡಿಯೋದಲ್ಲಿ ರಾಜನ್ ಆರೋಪಿಗೆ ಥಳಿಸಿದ್ದು ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಶಿವಾಜಿ ಶುಕ್ಲಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  • ಡೆಲಿವರಿ ತಡವಾಗಿದ್ದಕ್ಕೆ ಫ್ಲಿಪ್ ಕಾರ್ಟ್ ಬಾಯ್‍ಗೆ 20 ಬಾರಿ ಇರಿದ ಮಹಿಳೆ

    ಡೆಲಿವರಿ ತಡವಾಗಿದ್ದಕ್ಕೆ ಫ್ಲಿಪ್ ಕಾರ್ಟ್ ಬಾಯ್‍ಗೆ 20 ಬಾರಿ ಇರಿದ ಮಹಿಳೆ

    ನವದೆಹಲಿ: ಮೊಬೈಲ್ ತಡವಾಗಿ ತಲುಪಿಸಿದ್ದಕ್ಕೆ ಮಹಿಳೆಯೊಬ್ಬಳು ಡೆಲಿವರಿ ಬಾಯ್ ಮೇಲೆ 20 ಬಾರಿ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ನವದೆಹಲಿಯ ನಿಹಾರ್ ವಿಹಾಲ್ ಬಳಿ ನಡೆದಿದೆ.

    ಮಹಿಳೆಯಿಂದ ಹಲ್ಲೆಗೊಳಗಾದ ಯುವಕ ಹೆಸರು ಕೇಶವ್. ಆನ್ ಲೈನ್ ಶಾಪಿಂಗ್ ತಾಣಾ ಪ್ಲಿಪ್ ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ.

    ಕಮಲ್ ದೀಪ್ 11 ಸಾವಿರ ರೂ. ಬೆಲೆಯ ಮೊಬೈಲ್ ಬುಕ್ ಮಾಡಿದ್ದಳು. ಇದಾದ ನಾಲ್ಕು ದಿನಗಳ ಬಳಿಕ ಕೇಶವ್ ಮೊಬೈಲ್ ಮನೆಗೆ ತಲುಪಿಸಲು ತೆರಳಿದ ವೇಳೆ ಘಟನೆ ನಡೆದಿದೆ.

    ಕೇಶವ್ ಮನೆಗೆ ತೆರಳಿದ ಮರು ಕ್ಷಣದಲ್ಲಿ ಆತನನ್ನು ಬಲವಂತವಾಗಿ ಮನೆ ಒಳಗೆ ಎಳೆದ ಆಕೆ ಆತನ ಮೇಲೆ ಚಾಕುವಿನಿಂದ 20 ಬಾರಿ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಕಮಲ್ ದೀಪ್ ಸಹೋದರ ಜಿತೇಂದರ್ ಸಹ ಕೃತ್ಯಕ್ಕೆ ಸಹಕಾರ ನೀಡಿದ್ದು, ಇಬ್ಬರು ಸೇರಿ ಶೂ ಲೇಸ್‍ನಿಂದ ಕೇಶವ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಕೇಶವ್ ಪ್ರಜ್ಞೆತಪ್ಪಿ ಮನೆಯಲ್ಲೇ ಕುಸಿದು ಬಿದಿದ್ದಾನೆ.

    ಸ್ವಲ್ಪ ಸಮಯದ ಬಳಿಕ ಕೇಶವ್ ಬಳಿ ಇದ್ದ 40 ಸಾವಿರ ಹಣ ಹಾಗೂ ಡೆಲಿವರಿ ನೀಡಲು ತಂದಿದ್ದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಬೈಕ್ ಮೂಲಕ ಆತನನ್ನು ಚಂದನ್ ವಿಹಾರ್ ಪ್ರದೇಶದ ಕೊಳಚೆ ನೀರು ಕಾಲುವೆಗೆ ಎಸೆದಿದ್ದಾರೆ.

    ಈ ವೇಳೆ ಕೊಳಚೆ ನೀರು ಪೈಪ್ ನಿಂದ ರಕ್ತ ಬರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಕೇಶವ್ ನನ್ನು ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪ್ರಥಮ ಚಿಕಿತ್ಸೆ ಬಳಿಕ ಘಟನೆ ಕುರಿತು ಕೇಶವ್ ನಿಂದ ಮಾಹಿತಿ ಪಡೆದ ಪೊಲೀಸರು ಆರೋಪಿ ಕಮಲ್ ದೀಪ್ ಹಾಗೂ ಜಿತೇಂದರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೇ ನೀಡಿರುವ ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಸಂಸ್ಥೆಯ ಡೆಲಿವರಿ ಬಾಯ್ ಮೇಲೆ ನಡೆದಿರುವ ಹಲ್ಲೆ ದೃಢಪಡಿಸಿದೆ. ಅಲ್ಲದೇ ಆತನ ಆರೋಗ್ಯದ ಚಿಕಿತ್ಸೆಯ ವೆಚ್ಚ ಹಾಗೂ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ.

  • ಗೌರಿ ಹತ್ಯೆ ಕೇಸ್:  ಶಂಕಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು

    ಗೌರಿ ಹತ್ಯೆ ಕೇಸ್: ಶಂಕಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು ಉಂಟಾಗಿದೆ.

    ಫೆಬ್ರವರಿ 18ರಂದು ಪೊಲೀಸರು ಆರೋಪಿ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಬಂಧಿಸಿದ್ದರು. ಈ ಸಂಬಂಧ ಆರೋಪಿ ಪದೇ ಪದೇ ಹೇಳಿಕೆಯನ್ನು ಬದಲಾಯಿಸುತ್ತಿದ್ದರಿಂದ ಮಂಪರು ಪರೀಕ್ಷೆಗೆ ಅವಕಾಶ ನೀಡಬೇಕೆಂದು ಎಸ್‍ಐಟಿ ನ್ಯಾಯಾಲಯದ ಮೊರೆ ಹೋಗಿತ್ತು.

    ಈ ಸಂಬಂಧ ಮೂರನೇ ಎಸಿಎಂಎಂ ನ್ಯಾಯಾಲಯ ಅಹಮದಾಬಾದ್ ಎಫ್‍ಎಸ್‍ಎಲ್ ನಲ್ಲಿ ಮಂಪರು ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು. ಆದರೆ ಅಹಮದಾಬಾದ್ ಎಫ್‍ಎಸ್‍ಎಲ್ ಅಧಿಕಾರಿಗಳಿಗೆ ಕನ್ನಡ ಭಾಷೆ ಅರ್ಥವಾಗದ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆ ವಿಳಂಬವಾಗಿದೆ ಅಂತಾ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮನೋವಿಜ್ಞಾನದ ಮಾಹಿತಿ ತಿಳಿದಿರುವ ಕನ್ನಡ ಮತ್ತು ಗುಜರಾತಿ ಭಾಷೆ ಗೊತ್ತಿರುವ ವ್ಯಕ್ತಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

    ಮಂಪರು ಪರೀಕ್ಷೆ ವೇಳೆಯಲ್ಲಿ ಗುಜರಾತಿನ ಅಧಿಕಾರಿಗಳು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದರೆ ಶಂಕಿತ ಆರೋಪಿಗೆ ಉತ್ತರಿಸಲು ಕಷ್ಟವಾಗುವ ಸಾಧ್ಯತೆಯಿದೆ. ಸದ್ಯ ಹೊಟ್ಟೆ ಮಂಜನನ್ನು ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿದ್ದು, ಸೂಕ್ತ ಭಾಷಾಂತರ ವ್ಯಕ್ತಿಗಳು ಸಿಕ್ಕ ನಂತರ ಕೋರ್ಟ್ ಗಮನಕ್ಕೆ ತಂದು ಅಹಮದಾಬಾದ್ ನ ಎಫ್‍ಎಸ್‍ಎಲ್ ಗೆ ಕರೆದೊಯ್ಯಲು ಎಸ್‍ಐಟಿ ಮುಂದಾಗಿದೆ.

  • ನಾಲ್ವರು ರೇಪ್ ಆರೋಪಿಗಳಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿದ್ರು ಜನ

    ನಾಲ್ವರು ರೇಪ್ ಆರೋಪಿಗಳಿಗೆ ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿದ್ರು ಜನ

    ಭೋಪಾಲ್: ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.

    ಭಾನುವಾರ ಮಧ್ಯಾಹ್ನ ಭೋಪಾಲ್ ನ ಬೀದಿಗಳಲ್ಲಿ ಆರೋಪಿಗಳ ಮೆರವಣಿಗೆ ಮಾಡಿದ್ದು, ರಸ್ತೆ ಬದಿ ನಿಂತಿದ್ದ ಜನ ನಾಲ್ವರಿಗೂ ಕಪಾಳಕ್ಕೆ ಬಾರಿಸಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳನ್ನ ತಡೆಗಟ್ಟಲು ಸಿಎಂ ಶಿವರಾಜ್ ಸಿಂಗ್ ಚೌಹಾನ್ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಈ ಅಭ್ಯಾಸ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.

    ಶನಿವಾರದಂದು ಮಹಿಳೆ ಮೇಲೆ ಮಾಜಿ ಪ್ರಿಯಕರ ಹಾಗೂ ಆತನ ಸ್ನೇಹಿತನೊಬ್ಬ ಸೇರಿ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ. ಈ ಇಬ್ಬರಿಗೂ ಮತ್ತಿಬ್ಬರು ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಭೋಪಾಲ್ ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಲೋಧಾ ಹೇಳಿದ್ದಾರೆ.

    ಮಹಿಳೆಯ ಬಾಯ್‍ಫ್ರೆಂಡ್ ಏನೋ ಮುಖ್ಯವಾದ ವಿಷಯ ತಿಳಿಸಬೇಕೆಂದು ಹೇಳಿ ಆಕೆಗೆ ಶನಿವಾರದಂದು ರೆಸ್ಟೊರೆಂಟ್‍ನಲ್ಲಿ ಭೇಟಿಯಾಗುವಂತೆ ಕರೆದಿದ್ದ. ಮಹಿಳೆ ಅಲ್ಲಿಗೆ ಹೋದಾಗ ಆಕೆಯ ಮೊಬೈಲ್ ಕಸಿದುಕೊಂಡಿದ್ದು, ಫೋನ್ ಬೇಕಾದರೆ ತನ್ನ ಜೊತೆ ಸ್ನೇಹಿತನ ರೂಮಿಗೆ ಬರಬೇಕೆಂದು ಹೇಳಿದ್ದ. ಮಹಿಳೆ ಬಲವಂತವಾಗಿ ಬೈಕ್‍ನಲ್ಲಿ ಆತನೊಂದಿಗೆ ಹೋಗಿದ್ದರು ಎಂದು ಲೋಧಾ ಹೇಳಿದ್ದಾರೆ.

    ರೂಮ್ ತಲುಪಿದ ನಂತರ ಮಹಿಳೆಯ ಮಾಜಿ ಪ್ರಿಯಕರನ ಇತರೆ ಮೂವರು ಸ್ನೇಹಿತರು ಅಲ್ಲಿದ್ದರು. ಇಬ್ಬರು ಮಹಿಳೆ ಮೇಲೆ ರೇಪ್ ಮಾಡಿದ್ದು, ಮತ್ತಿಬ್ಬರು ಕಾವಲು ನಿಂತಿದ್ದರು ಎಂದು ಅವರು ತಿಳಿಸಿದ್ದಾರೆ.

    ಮಹಿಳೆ ಅವರಿಂದ ತಪ್ಪಿಸಿಕೊಂಡು ಭಾನುವಾರ ಬೆಳಗ್ಗೆ ಪೊಲೀಸರ ಬಳಿ ದೂರು ದಾಖಲಿಸಿದ್ದರು ಎಂದು ಹೇಳಿದ್ದಾರೆ.