Tag: accenture

  • ಕೇವಲ 11 ವರ್ಷದಲ್ಲಿ ಶೂನ್ಯದಿಂದ 5 ಕೋಟಿ ಸಂಪತ್ತು – ಕೋಟ್ಯಧಿಪತಿಯಾದ ಮಧ್ಯಮ ವರ್ಗದ ಟೆಕ್ಕಿ ಕಥೆ ಓದಿ

    ಕೇವಲ 11 ವರ್ಷದಲ್ಲಿ ಶೂನ್ಯದಿಂದ 5 ಕೋಟಿ ಸಂಪತ್ತು – ಕೋಟ್ಯಧಿಪತಿಯಾದ ಮಧ್ಯಮ ವರ್ಗದ ಟೆಕ್ಕಿ ಕಥೆ ಓದಿ

    ನವದೆಹಲಿ: ಕೇವಲ 11 ವರ್ಷದಲ್ಲಿ ಶೂನ್ಯದಿಂದ 5 ಕೋಟಿ ರೂ. ಸಂಪತ್ತು ಗಳಿಸುವ ಮೂಲಕ ದೆಹಲಿಯ (Delhi) ಗುರುಗ್ರಾಮದ ಟೆಕ್ಕಿಯೊಬ್ಬರು ಸುದ್ದಿಯಲ್ಲಿದ್ದಾರೆ.

    ಆಕ್ಸೆಂಚರ್ (Accenture) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗುರ್ಜೋತ್ ಅಹ್ಲುವಾಲಿಯಾ ತಮ್ಮ ಮೈಲಿಗಲ್ಲನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಅವರು 2024 ಹಣಕಾಸು ವರ್ಷದ ಅತಿದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.


    ಹಣಕಾಸು ಟ್ರ್ಯಾಕಿಂಗ್ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಅವರು ಪೋಸ್ಟ್ ಮಾಡಿದ್ದಾರೆ. ಅಹ್ಲುವಾಲಿಯಾ ಅವರು 2.7 ಲಕ್ಷ ರೂ. ಸಾಲ ಇದ್ದರೆ ಇದ್ದರೆ 5 ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

    ವೃತ್ತಿಜೀವನದ ಪ್ರಗತಿ, ಶಿಸ್ತುಬದ್ಧ ಉಳಿತಾಯ ಮತ್ತು ಇಕ್ವಿಟಿ ಹೂಡಿಕೆಗಳೇ ಈ ಹಣಕಾಸು ಸಾಧನೆಗೆ ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ? – ಖಡಕ್ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ

    ಈ ಪೋಸ್ಟ್‌ ಮಾಡಿದ ನಂತರ  ಹಲವು ಮಂದಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅವರು, ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ. ನನ್ನ ಶಿಕ್ಷಣಕ್ಕೆ ಪೋಷಕರು ಹಣ ನೀಡಿದ್ದರಿಂದ ಯಾವುದೇ ಸಾಲ ಇಲ್ಲ. ನಾನು ಪೋಷಕರ ಜೊತೆ ವಾಸಿಸುತ್ತಿರುವುದರಿಂದ ಬಾಡಿಗೆ ಪಾವತಿಸುತ್ತಿಲ್ಲ ಎಂದು ತಿಳಿಸಿದ್ದಾರೆ.


    ನಾನು ಯಾವುದೇ ರಿಯಲ್ ಎಸ್ಟೇಟ್, ಆಭರಣ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿಲ್ಲ. ಮುಖ್ಯವಾಗಿ ಷೇರುಗಳು, ಮ್ಯೂಚುವಲ್‌ ಫಂಡ್‌, ಬಾಂಡ್‌ಗಳು, NPS, EPF, ಉಳಿತಾಯದಲ್ಲಿ ಹೂಡಿಕೆ ಮಾಡಿದ್ದೇನೆ ಎಂದಿದ್ದಾರೆ.

    ಇತ್ತೀಚಿಗೆ ಷೇರು ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುತ್ತಿರುವುದರಿಂದ ನಿವ್ವಳ ಮೌಲ್ಯದಲ್ಲಿ 8-10% ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಅಹ್ಲುವಾಲಿಯಾ ಅವರು ಷೇರು ಹೂಡಿಕೆಯ ಬಗ್ಗೆ ಪೋಸ್ಟ್‌ ಹಾಕುತ್ತಿರುತ್ತಾರೆ. ನಾನು ಈಕ್ವಿಟಿ, ವೈಯಕ್ತಿಕ ಹಣಕಾಸು, ಹಣದ ಹ್ಯಾಕ್‌ಗಳು ಮತ್ತು ನನ್ನ ಹವ್ಯಾಸಗಳ ಬಗ್ಗೆ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.

  • ಕಂಪೆನಿ ಬೋರ್ಡ್ ಕಾಣೋದಕ್ಕಾಗಿ 20 ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟ ಸಿಬ್ಬಂದಿ!

    ಕಂಪೆನಿ ಬೋರ್ಡ್ ಕಾಣೋದಕ್ಕಾಗಿ 20 ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟ ಸಿಬ್ಬಂದಿ!

    ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಆಕ್ಸೆಂಚರ್ ಕಂಪೆನಿ ಸಿಬ್ಬಂದಿ ಮರ ಕಡಿದು ಮರದ ಬುಡಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

    ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಆಕ್ಸೆಂಚರ್ ಕಂಪೆನಿ ಸಿಬ್ಬಂದಿ ಈ ದರ್ಪದ ವರ್ತನೆ ತೋರಿದ್ದು, ಇಪ್ಪತ್ತು ವರ್ಷ ಹಳೆಯ ಮರಕ್ಕೆ ಬೆಂಕಿಯಿಟ್ಟು ಮರದ ಮಾರಣ ಹೋಮ ನಡೆಸಿದ್ದಾರೆ. ಕಂಪೆನಿ ಬೋರ್ಡ್ ಕಾಣೋದಕ್ಕಾಗಿ ಅರಣ್ಯ ಘಟಕದ ಅನುಮತಿ ಇಲ್ಲದೇ ಮರ ಕಡಿದಿದ್ದಾರೆ.

    ವಕೀಲ ಉಮೇಶ್ ಎಂಬವರು ಬಿಟಿಎಂ ಲೇಔಟ್ ಠಾಣೆಯಲ್ಲಿ ಆಕ್ಸೆಂಚರ್ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.

  • ಗಾಡಿ ಉಜ್ಜಿಕೊಂಡು ಹೋಗಿದ್ದಕ್ಕೆ ಕಿರಿಕ್, 500 ರೂ.ಗೆ ಟೆಕ್ಕಿ ಕೊಲೆ- ಆರೋಪಿಯನ್ನ ಚೇಸ್ ಮಾಡಿ ಹಿಡಿದ ಪೊಲೀಸರು

    ಗಾಡಿ ಉಜ್ಜಿಕೊಂಡು ಹೋಗಿದ್ದಕ್ಕೆ ಕಿರಿಕ್, 500 ರೂ.ಗೆ ಟೆಕ್ಕಿ ಕೊಲೆ- ಆರೋಪಿಯನ್ನ ಚೇಸ್ ಮಾಡಿ ಹಿಡಿದ ಪೊಲೀಸರು

    ಬೆಂಗಳೂರು: ನಗರದಲ್ಲಿ ಟೆಕ್ಕಿಯೊಬ್ಬರನ್ನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಪ್ರಣಾಯ್ ಮಿಶ್ರಾ ಅವರನ್ನ ಸೋಮವಾರದಂದು ತಾವರೆಕೆರೆ ಮುಖ್ಯ ರಸ್ತೆಯ ಚಾಕ್ಲೇಟ್ ಫ್ಯಾಕ್ಟರಿ ಬಳಿ ಇರಿದು ಕೊಲೆ ಮಾಡಲಾಗಿತ್ತು. ಪ್ರಣಾಯ್ ಅವರ ದ್ವಿಚಕ್ರ ವಾಹನ ತನ್ನ ವಾಹನಕ್ಕೆ ಉಜ್ಜಿಕೊಂಡು ಹೋಯಿತೆಂದು ರೌಡಿಶೀಟರ್ ಕಾರ್ತಿಕ್ ಮತ್ತು ಆತನ ಸ್ನೇಹಿತ ಅರುಣ್ ಪ್ರಣಾಯ್‍ರನ್ನು ಹಿಂಬಾಲಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದು ರಸ್ತೆ ಗಲಾಟೆಗೆ ನಡೆದ ಕೊಲೆ ಎಂದು ಪೊಲೀಸರು ಹೇಳಿದ್ದಾರೆ.

    500 ರೂ.ಗೆ ಕೊಲೆ: ಇನ್ನೂ ಆಘಾತಕಾರಿ ಸಂಗತಿ ಅಂದ್ರೆ ಕೇವಲ 500 ರೂ. ಗಾಗಿ ಈ ಕೊಲೆ ನಡೆದಿದೆ. ಗಾಡಿ ಉಜ್ಜಿಕೊಂಡು ಹೋದ ಕಾರಣ ಮುರಿದುಹೋಗಿದ್ದ ಮಡ್ ಗಾರ್ಡ್ ಸರಿಪಡಿಸಲು 500 ರೂ. ಕೊಡಬೇಕು ಎಂದು ರೌಡಿಗಳು ಜಗಳ ಮಾಡಿದ್ದರು. ಆದ್ರೆ ಪ್ರಣಾಯ್, ಇದು ನನ್ನ ತಪ್ಪಲ್ಲ ಎಂದು ಹೇಳಿ ಹಣ ನೀಡಲು ನಿರಾಕರಿಸಿ ಅಲ್ಲಿಂದ ಹೊರಟುಹೋಗಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು, ಪ್ರಣಾಯ್ ಅವರನ್ನ ಬೈಕ್‍ನಲ್ಲಿ ಹಿಂಬಲಿಸಿ ಅಡ್ಡಗಟ್ಟಿದ್ರು. ಪ್ರಣಾಯ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಕೆಳಗೆ ಬಿದ್ದಿದ್ದರು. ಇದರ ಲಾಭ ಪಡೆದ ಆರೋಪಿಗಳು ಪ್ರಣಾಯ್ ಅವರ ಮುಖಕ್ಕೆ ಹೊಡೆದು, ಎರಡು ಬಾರಿ ಹೊಟ್ಟೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಪ್ರಕರಣ ಬೇಧಿಸಲು ರಚಿಸಲಾಗಿದ್ದ ಪೊಲೀಸರ ತಂಡ ಸಿಸಿಟಿವಿ ಆಧಾರಿಸಿ ಬೈಕ್ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡಿ ರೌಡಿಗಳನ್ನ ಟ್ರೇಸ್ ಮಾಡಿದ್ದಾರೆ. ಮೂರು ಸುತ್ತು ಫೈರಿಂಗ್ ಮಾಡಿದ ನಂತರ 24 ವರ್ಷದ ಆರೋಪಿ ಕಾರ್ತಿಕ್‍ನನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ಬಂಧಿಸಲು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಬೇಕಾಯ್ತು. ಸದ್ಯ ಆರೋಪಿ ಕಾರ್ತಿಕ್ ಬುಲೆಟ್ ಏಟಿನಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

    ನಮಗೆ ಆರೋಪಿಯ ಬಗ್ಗೆ ಖಚಿತ ಮಾಹಿತಿ ಇತ್ತು. ನಮ್ಮ ತಂಡ ಅವರನ್ನ ಪತ್ತೆ ಮಾಡಿ ಚೇಸ್ ಮಾಡಿದ್ರು. ಅವರನ್ನ ಬಂಧಿಸಲು ಮುಂದಾದಾಗ, ನಮ್ಮ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ರು. ಹೀಗಾಗಿ ಗುಂಡು ಹಾರಿಸಬೇಕಾಯ್ತು ಎಂದು ಹಿರಿಯ ಅಧಿಕಾರಿ ಎಂಬಿ ಬೋರಲಿಂಗಯ್ಯ ಹೇಳಿದ್ದಾರೆ. ಕಾರ್ತಿಕ್‍ನ ಸ್ನೇಹಿತ ಅರುಣ್‍ಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

    ಪ್ರಣಾಯ್ ರಾಯ್ ವಾಸವಿದ್ದ ಮನೆಯಿಂದ ಕೆಲವು ಕಿ.ಮೀ ದೂರದಲ್ಲೇ ರಕ್ತದ ಮಡುವಲ್ಲಿ ಬಿದ್ದಿದ್ದರು. ಸ್ಥಳದಲ್ಲಿದ್ದವರು ಪ್ರಣಾಯ್‍ರನ್ನು ಆಸ್ಪತ್ರೆಗೆ ದಾಖಲಿಸಿದರಾದ್ರೂ ಅಷ್ಟರಲ್ಲಾಗ್ಲೇ ತಡವಾಗಿತ್ತು. ಭಾನುವಾರದಂದು ಪ್ರಣಾಯ್ ಸ್ನೇತರೊಂದಿಗೆ ಹೊರಗೆ ಪಾರ್ಟಿ ಮುಗಿಸಿ ಮನೆಗೆ ಹೋಗಿ ಮತ್ತೆ ತನ್ನ ಗೆಳತಿಯನ್ನು ಭೇಟಿಯಾಗಲು ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪ್ರಣಾಯ್ ಮಿಶ್ರಾ ಮೂಲತಃ ಒಡಿಶಾದವರು ಎಂದು ವರದಿಯಾಗಿದೆ.