Tag: abudabi

  • ಇಂಡೋ-ಪಾಕ್ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಯುವಕ: ವಿಡಿಯೋ ವೈರಲ್

    ಇಂಡೋ-ಪಾಕ್ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಯುವಕ: ವಿಡಿಯೋ ವೈರಲ್

    ಅಬುದಾಬಿ: ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಯುವಕನೊಬ್ಬ ಭಾರತದ ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜಾಲತಾಣಿಗರಿಂದ ಮೆಚ್ಚುಗೆಯ ಸುರಮಳೆಯೇ ಹರಿದಿದೆ.

    ಪಾಕಿಸ್ತಾನದ ಆದಿಲ್ ತಾಜ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದ ಯುವಕ. ಸೆಪ್ಟೆಂಬರ್ 19 ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದ ಲೀಗ್ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಬರೋಬ್ಬರಿ 15 ತಿಂಗಳ ಬಳಿಕ ಎದುರಾಗಿದ್ದವು. ಈ ವೇಳೆ ಪಂದ್ಯಕ್ಕೂ ಮುನ್ನ ಎರಡು ರಾಷ್ಟ್ರಗಳ ರಾಷ್ಟ್ರಗೀತೆಯನ್ನು ಹಾಕಿದ್ದರು. ಈ ವೇಳೆ ಭಾರತದ ರಾಷ್ಟ್ರಗೀತೆಯನ್ನು ಆದಿಲ್ ತಾಜ್ ರವರು ಹಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆದಿಲ್ ತಾಜ್, ನಾನು ಭಾರತದ ರಾಷ್ಟ್ರಗೀತೆಯನ್ನು ಮೊದಲ ಬಾರಿ ಕೇಳಿದ್ದು, ಬಾಲಿವುಡ್‍ನ `ಕಬಿ ಖುಷಿ ಕಬಿ ಗಂ’ ಚಿತ್ರದಲ್ಲಿ. ನನಗೆ ರಾಷ್ಟ್ರಗೀತೆಯನ್ನು ಕೇಳುತ್ತಲೇ ರೋಮಾಂಚನವಾಗಿತ್ತು. ಅಲ್ಲದೇ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿಗಾಗಿ ನನ್ನ ಕಡೆಯಿಂದ ಸಣ್ಣ ಪ್ರಯತ್ನ ಎನ್ನುವಂತೆ ನಾನು ಭಾರತದ ರಾಷ್ಟ್ರಗೀತೆಯನ್ನು ಹಾಡಿದೆ ಎಂದು ಹೇಳಿದ್ದಾರೆ.

    ಉಭಯ ದೇಶಗಳ ನಡುವೆ ಶಾಂತಿಗಾಗಿ ಇದು ನನ್ನ ಸಣ್ಣ ಪ್ರಯತ್ನವಾಗಿದೆ. ಹೀಗೆ ಮಾಡುವುದಕ್ಕೆ ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ರವರ ಪ್ರೇರಣೆಯೂ ಇದೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ಶಾಂತಿ ಸ್ಥಾಪನೆ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಬಂದರೆ, ನಾವು ಎರಡು ಹೆಜ್ಜೆ ಮುಂದೆ ಹೋಗುತ್ತೇನೆ ಎಂದು ಹೇಳಿದ್ದರು. ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಮೊಳಗಿದಾಗ ಇಮ್ರಾನ್ ಖಾನ್‍ರ ಮಾತು ನೆನೆಪಾಗಿ, ಶಾಂತಿ ಸ್ಥಾಪನೆಗೆ ನನ್ನದು ಸಹ ಪಾತ್ರವಿರಬೇಕು ಎನ್ನುವ ನಿಟ್ಟಿನಲ್ಲಿ ನಾನು ಹಾಡಿದೆ ಎಂದು ತಿಳಿಸಿದರು.

    ಅಲ್ಲದೇ ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗಿದಾಗ ಭಾರತೀಯರು ಗೌರವ ಸಮರ್ಪಿಸಿದ್ದನ್ನು ಗಮನಿಸಿದ್ದೆ. ಮತ್ತೊಮ್ಮೆ ಭಾನುವಾರ(ಇಂದು) ನಡೆಯುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಎರಡು ರಾಷ್ಟ್ರಗಳ ಧ್ವಜವನ್ನು ಹಿಡಿದು ಹೋಗುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

     

  • ಅಬುಧಾಬಿಯಲ್ಲಿ ಕೇರಳ ಮೂಲದ ವ್ಯಕ್ತಿಗೆ 12 ಕೋಟಿ ಬಂಪರ್ ಲಾಟರಿ!

    ಅಬುಧಾಬಿಯಲ್ಲಿ ಕೇರಳ ಮೂಲದ ವ್ಯಕ್ತಿಗೆ 12 ಕೋಟಿ ಬಂಪರ್ ಲಾಟರಿ!

    ಕೊಚ್ಚಿ: ಸಾಮಾನ್ಯವಾಗಿ ಲಾಟರಿಯಲ್ಲಿ ಗೆಲುವು ಸಿಗುವುದು ಅತ್ಯಂತ ವಿರಳ. ಒಂದು ವೇಳೆ ಲಾಟರಿ ಗೆದ್ದರೆ ಅದು ಆತನ ಲಕ್ ಅಂತಾನೇ ಹೇಳಬಹುದು. ಈ ಲಕ್ ಅಬುದಾಭಿಯಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗೆ ಖುಲಾಯಿಸಿದೆ.

    ಹೌದು. ಕೇರಳದ ಶ್ರೀರಾಜ್ ಕೃಷ್ಣನ್(33) ಎಂಬವರು ಕಳೆದ ಭಾನುವಾರ ಅಬುದಾಭಿಯಲ್ಲಿ 12.72 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಉದ್ಯೋಗದ ನಿಮಿತ್ತ ತೆರಳಿದ ಇವರು ಕಳೆದ 9 ವರ್ಷಗಳಿಂದ ಅಬುದಾಭಿಯಲ್ಲಿ ನೆಲೆಸಿದ್ದಾರೆ.

    ಈ ಕುರಿತು ರಾಷ್ಟ್ರೀಯ ಪತ್ರಿಕೆಯೊಂದರ ಜೊತೆ ಹಂಚಿಕೊಂಡ ಅವರು, ಕಳೆದ ಭಾನುವಾರ ಲಾಟರಿ ಗೆದ್ದಿರುವ ಬಗ್ಗೆ ಕರೆಬಂದಾಗ ಅಚ್ಚರಿಗೊಳಗಾದೆ. ಆ ಕರೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಒಟ್ಟಿನಲ್ಲಿ ಲಾಟರಿ ಗೆದ್ದಿರುವ ಕುರಿತು ನನಗಿನ್ನೂ ನಂಬಿಕೆ ಬರ್ತಾ ಇಲ್ಲ. ಕೊನೆಗೂ ನನ್ನ ಕನಸು ಈಡೇರಿತ್ತು. 44698 ನಂಬರ್ ನನ್ನ ಲಕ್ಕಿ ನಂಬರ್ ಅನ್ನೋದನ್ನ ಪ್ರೂವ್ ಮಾಡಿತ್ತು ಎಂದು ಹೇಳಿದ್ದಾರೆ.

    ಅಬುದಾಭಿಯಲ್ಲಿ ಇವರು ಶಿಪ್ಪಿಂಗ್ ಕಂಪನಿ ಉದ್ಯೋಗಸ್ಥರಾದ್ರೆ, ಇವರ ಪತ್ನಿ ಅಶ್ವಥಿ, ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಟರಿ ಗೆದ್ದಿರುವ ಖುಷಿಯಲ್ಲಿರುವ ಈ ದಂಪತಿ, ಈ ಹಣವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬುವುದನ್ನು ಇನ್ನೂ ನಿರ್ಧರಿಸಿಲ್ಲ. ಒಟ್ಟಿನಲ್ಲಿ ಲಾಟರಿ ಗೆದ್ದ ಸಂತಸದಲ್ಲಿ ಮೌನವಹಿಸಿರುವ ಶ್ರೀರಾಜ್, ಯಾವುದೇ ಕಾರಣಕ್ಕೂ ಅಬುದಾಭಿಯಲ್ಲಿನ ಉದ್ಯೋಗವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಅಂತಾ ಸ್ಪಷ್ಟವಾಗಿದೆ.

    ಇತ್ತ ಕೇರಳದ ತ್ರಿಶೂರ್‍ನ ವರಂದರಪಿಲ್ಲಿಯಲ್ಲಿರುವ ಶ್ರೀರಾಜ್ ಪೋಷಕರು ಕೂಡ ಮಗ ಲಾಟರಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮಗನ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ. ಮಗ ಲಾಟರಿ ಗೆದ್ದ ವಿಚಾರ ಕೇಳಿ ತುಂಬಾ ಸಂತಸವಾಯ್ತು. ಅಂತೆಯೇ ಆತ ತವರೂರಿಗೆ ಬಂದು ಅದೇ ಹಣದಲ್ಲಿ ಸ್ವಂತ ಉದ್ಯಮವನ್ನು ಕೈಗೊಳ್ಳುತ್ತಾನೆಂಬ ನಂಬಿಕೆಯಿದೆ. ಅಂತೆಯೇ ಅದರಲ್ಲಿ ಸ್ವಲ್ಪ ಹಣವನ್ನು ಸೇವಾಕಾರ್ಯಗಳಿಗೆ ನೀಡಬೇಕು ಅಂತಾ ಶ್ರೀರಾಜ್ ತಂದೆ ಉನ್ನಿಕೃಷ್ಣನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2013ರಲ್ಲಿ ಶ್ರೀರಾಜ್ ತುಂಬಾ ಕಷ್ಟದಲ್ಲಿದ್ದರು. ಈ ವೇಳೆ ಜ್ಯೋತಿಷಿಯವರ ಬಳಿ ಹೋಗಿ ಕೇಳಿದಾಗ, ನೀವೇನೂ ಚಿಂತೆ ಮಾಡ್ಬೇಡಿ. ನಿಮ್ಮ ಮಗನ ಭವಿಷ್ಯ 2016-17ರ ವೇಳೆ ಬದಲಾಗಲಿದೆ ಅಂತಾ ಹೇಳಿದ್ರು. ಅವರ ಈ ಮಾತು ಇಂದು ನಿಜವಾಗಿದೆ ಅಂತಾ ಉನ್ನಿಕೃಷ್ಣನ್ ಹೇಳಿದ್ದಾರೆ.

    ಒಟ್ಟಿನಲ್ಲಿ ಲಾಟರಿ ಗೆದ್ದ ಬಳಿಕ ಶ್ರೀರಾಜ್‍ಗೆ ಕರೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಕುಟುಂಬ, ಸ್ನೇಹಿತರು ಅಂತಾ ಶುಭಾಶಯ ಕೋರಲು ದಿನದಲ್ಲಿ ಸಾವಿರಾರು ಕರೆಗಳು ಬರುತ್ತಿವೆ. ಬಂದಿರುವ ಕರೆಯಲ್ಲಿ ವೈದ್ಯಕೀಯ ನೆರವು ಮತ್ತು ಚಾರಿಟಿಗಳಿಂದಲೂ ಸಹಾಯ ನೀಡುವಂತೆ ಫೋನ್ ಕಾಲ್ ಬಂದಿವೆ ಅಂತಾ ಶ್ರೀರಾಜ್ ತಿಳಿಸಿದ್ದಾರೆ.