Tag: Aayush Sharma

  • ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ನಟಿಸಲು ನನಗೆ ಇಷ್ಟವಿರಲಿಲ್ಲ ಎಂದು ಸಲ್ಲು ಸೋದರ ಮಾವ ಆಯುಷ್ ಶರ್ಮಾ ಮಾಧ್ಯಮಗಳ ಮುಂದೆ ಹೇಳಿಕೊಂಡರು.

    ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಅವರು ‘ಅಂತಿಮ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಈ ಚಿತ್ರದ ಪ್ರಮೋಷನ್ ಗೆ ಬಂದಾಗ ಶರ್ಮಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಲು ನಾನು ಆರಂಭದಲ್ಲಿ ಹಿಂಜರಿದಿದ್ದೆ. ನನಗೆ ಮೊದಲು ಆತಂಕವಿತ್ತು. ಏಕೆಂದರೆ ಸಲ್ಮಾನ್ ಅವರಿಗೆ ಚಿತ್ರದಲ್ಲಿ ನಾನು ಹೊಡೆಯುವ ಸನ್ನಿವೇಶವೆಲ್ಲವಿತ್ತು. ಇದನ್ನು ನಾನು ತೀವ್ರವಾಗಿ ವಿರೋಧಿಸಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್

    ಸಲ್ಮಾನ್ ಭಾಯ್‍ಯನ್ನು ಹೊಡೆಯಲು ನಾನು ಕಲ್ಪನೆಯನ್ನು ಸಹ ಮಾಡಿಕೊಂಡಿರಲಿಲ್ಲ. ಆದರೆ ವೃತ್ತಿಜೀವನದಲ್ಲಿ ಅದು ಸರಿಯಿಲ್ಲ ಎಂದು ನನಗೆ ಅನಿಸಿತು. ಅದರಲ್ಲಿಯೂ ನನಗೆ ‘ಸ್ವಜನಪಕ್ಷಪಾತ’ ದ ಬಗ್ಗೆ ತುಂಬಾ ಭಯವಿತ್ತು ಎಂದು ತಮ್ಮ ಆತಂಕದ ಬಗ್ಗೆ ಹೇಳಿಕೊಂಡರು.

    ‘ಆರಂಭದಲ್ಲಿ, ಸಲ್ಮಾನ್ ಭಾಯ್ ‘ಅಂತಿಮ್’ ನಲ್ಲಿ ಇರುವುದನ್ನು ನಾನು ವಿರೋಧಿಸಿದ್ದೆ. ಈ ಚಿತ್ರ ಮಾಡದಂತೆ ನನ್ನ ಕುಟುಂಬವು ಮನವೊಲಿಸಿತ್ತು. ಇದಕ್ಕೆ ಮುಖ್ಯ ಕಾರಣ ನನ್ನ ‘ಲವ್‍ಯಾತ್ರಿ’ ಚಿತ್ರಕ್ಕಿಂತ ಈ ಚಿತ್ರದಲ್ಲಿ ನನ್ನ ಪಾತ್ರ ಭಿನ್ನವಾಗಿದ್ದು, ಸಲ್ಲಾನ್ ಅವರ ಉಪಸ್ಥಿತಿಯಲ್ಲಿ ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ಧೈರ್ಯ ನನಗೆ ಇರಲಿಲ್ಲ’ ಎಂದು ಹೇಳಿದರು.

    ‘ಅಂತಿಮ್’ ಒಂದು ಹೈ-ಆಕ್ಟೇನ್ ಆಕ್ಷನ್ ಚಿತ್ರವಾಗಿದೆ. ಈ ಸಿನಿಮಾಗೆ ಮಹೇಶ್ ಮಂಜ್ರೇಕರ್ ಆಕ್ಷನ್ ಕಟ್ ಹೇಳುತ್ತಿದ್ದು, ನವೆಂಬರ್ 26 ರಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ಸಲ್ಲು ಅಭಿಮಾನಿಗಳು ಕಾಯುತ್ತಿದ್ದು, ಬಹುನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದಾಗಿದೆ. ಇದನ್ನೂ ಓದಿ: ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಆಯುಷ್ ಶರ್ಮಾ 2018 ರ ‘ಲವ್‍ಯಾತ್ರಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಕಾಲಿಟ್ಟಿದ್ದು, ಸಲ್ಮಾನ್ ತಂಗಿ ಅರ್ಪಿತಾ ಖಾನ್ ಅವರ ಪತಿಯಾಗಿದ್ದಾರೆ. ಪ್ರಸ್ತುತ ಸಲ್ಲು ನಿರ್ಮಿಸುತ್ತಿರುವ ‘ಅಂತಿಮ್’ ಸಿನಿಮಾದಲ್ಲಿ ನಟಿಸುತ್ತಿರುವ ಇವರು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಗಂಟುಮೂಟೆ ಸಮೇತ ಗೆಳತಿ ಜೊತೆ ಯುವತಿ ಪಲಾಯನ

    ಗಂಟುಮೂಟೆ ಸಮೇತ ಗೆಳತಿ ಜೊತೆ ಯುವತಿ ಪಲಾಯನ

    – ಸಿಕ್ಕ ಮೇಲೆ ಬಯಲಾಯ್ತು ಸತ್ಯ

    ಲಕ್ನೋ: ಮನೆಯಿಂದ ಓಡಿ ಹೋಗಿದ್ದ ಯುವತಿಯರಿಬ್ಬರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರಲ್ಲಿ ನಡೆದಿದೆ. ಪೊಲೀಸರು ಮುಂದೆ ಇಬ್ಬರು ಮನೆಯಿಂದ ಓಡಿ ಹೋದ ಕಾರಣವನ್ನು ರಿವೀಲ್ ಮಾಡಿದ್ದಾರೆ.

    ಗೀತಾ ಮತ್ತು ರಚನಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಮನೆಯಿಂದ ಓಡಿಹೋದ ಯುವತಿಯರು. ಗೀತಾ ಪೋಷಕರು ಯಾವುದೇ ವಿಷಯಕ್ಕೆ ಬೈದು ಥಳಿಸಿದ್ದಾರೆ. ಇದರಿಂದ ಕೋಪಗೊಂಡ ಗೀತಾ ಗೆಳತಿ ರಚನಾಳನ್ನ ಕರೆದುಕೊಂಡು ಗಂಟುಮೂಟೆ ಸಮೇತ ಮನೆಯಿಂದ ಪರಾರಿಯಾಗಿದ್ದಳು. ಇತ್ತ ಗೀತಾ ಕಾಣೆಯಾಗಿರುವ ಬಗ್ಗೆ ಸೋದರ ಶಹಜಹಾನ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇತ್ತ ರಚನಾ ಪೋಷಕರು ಸಹ ದೂರು ದಾಖಲಿಸಿದ್ದರು.

    ಯುವತಿಯರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತಡಮಾಡದ ಪೊಲೀಸರು ಅಖಾಡಕ್ಕೆ ಇಳಿದಿದ್ದರು. ಮೊದಲಿಗೆ ಇಬ್ಬರ ಮೊಬೈಲ್ ಲೋಕೇಶನ್ ಲಕ್ನೋ ನಗರದಲ್ಲಿ ಪತ್ತೆಯಾಗಿದೆ. ಪೊಲೀಸರ ತಂಡ ಲಕ್ನೋ ತಲುಪವಷ್ಟರಲ್ಲಿ ಗೀತಾ ಮತ್ತು ರಚನಾ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದರು. ಕೊನೆಗೆ ಇಬ್ಬರು ಹತ್ರಾಸ್ ನಲ್ಲಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಯಲಾಯ್ತು ಸತ್ಯ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು ಗೀತಾ ಮತ್ತು ರಚನಾಳನ್ನ ಹತ್ರಾಸ್ ನಿಂದ ಶಹಜಹಾನ್ಪುರಕ್ಕೆ ಕರೆ ತಂದಿದ್ದಾರೆ. ಪೊಲೀಸರ ಮುಂದೆ ಮನೆ ಬಿಟ್ಟು ಹೋಗಿದ್ಯಾಕೆ ಎಂಬುದರ ಬಗ್ಗೆ ಹೇಳಿದ್ದಾರೆ. ಮನೆಯಲ್ಲಿ ಥಳಿಸಿದ ಮೇಲೆ ಗೀತಾ ಮನೆಯಿಂದ ಓಡಿ ಹೋಗಲು ಪ್ಲಾನ್ ಮಾಡಿದ್ದಳು. ನಾನು ಆಕೆಯ ಆಪ್ತೆ ಸ್ನೇಹಿತೆಯಾಗಿದ್ದರಿಂದ ಗೆಳೆತನಕ್ಕಾಗಿ ನಾನು ಆಕೆಯ ಜೊತೆಯಲ್ಲಿಯೇ ಹೋದೆ ಎಂದು ರಚನಾ ಹೇಳಿದ್ದಾಳೆ.

    ಇಬ್ಬರ ಹೇಳಿಕೆಯನ್ನ ದಾಖಲಿಸಿಕೊಂಡಿರುವ ಪೊಲೀಸರು ಪೋಷಕರ ವಶಕ್ಕೆ ನೀಡಿದ್ದಾರೆ. ಗೆಳತಿಗಾಗಿ ಮತ್ತೊಬ್ಬ ಸ್ನೇಹಿತೆ ಓಡಿ ಹೋಗಿರುವುದನ್ನ ಕಂಡು ಪೊಲೀಸರು ಕೂಡ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

  • ಬಾಮೈದನ ‘ಲವ್ ರಾತ್ರಿ’ ಲಾಂಚ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಬಾಮೈದನ ‘ಲವ್ ರಾತ್ರಿ’ ಲಾಂಚ್ ಮಾಡಲಿದ್ದಾರೆ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಈಗಾಗಲೇ ಸೋನಾಕ್ಷಿ ಸಿನ್ಹಾ, ಆಹಿತ್ಯಾ ಶೆಟ್ಟಿ, ಸೂರಜ್ ಪಾಂಚೋಲಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದಾರೆ. ಸದ್ಯ ಸಲ್ಮಾನ್ ತನ್ನ ಬಾಮೈದ ಆಯುಶ್ ಶರ್ಮಾರನ್ನು ಬಾಲಿವುಡ್ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡಲಿದ್ದಾರೆ.

    ಈ ಬಗ್ಗೆ ಸಲ್ಮನ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಬಾಮೈದ ಆಯುಶ್ ಶರ್ಮಾಗೆ ಶುಭಾಶಯವನ್ನು ತಿಳಿಸಿದ್ದಾರೆ. ಈಗಾಗಲೇ ‘ಲವ್ ರಾತ್ರಿ’ ಎಂದು ಸಿನಿಮಾಗೆ ಹೆಸರನ್ನು ಅಂತಿಮಗೊಳಿಸಲಾಗಿದೆ. ಟೈಟಲ್ ಕೇಳಲು ತುಂಬಾ ಕ್ಯಾಚಿಯಾಗಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ.

    ನನ್ನ ನಿರ್ಮಾಣದಲ್ಲಿ ಆಯುಶ್ ಶರ್ಮಾ ಘೋಷಣೆ ಮಾಡಲು ತುಂಬಾ ಖುಷಿಯಾಗುತ್ತಿದೆ. ನಮ್ಮ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಐದನೇ ಸಿನಿಮಾ ಇದಾಗಿದ್ದು, ಅಭಿರಾಜ್ ಮಿನಾವಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

    ಸಲ್ಮಾನ್ ಬಾಮೈದ ಆಯುಶ್ ಗೆ ಸಲಹೆಯನ್ನು ನೀಡಿದ್ದಾರೆ. ಕಂಗ್ರಾಟ್ಸ್ ಆಯುಶ್ ಶರ್ಮಾ, ಶ್ರಮ ಮತ್ತು ಶ್ರದ್ಧೆವಹಿಸಿ ಕೆಲಸ ಮಾಡುವ ಸಮಯ ಇದಾಗಿದೆ. ದೇವರು ನಿನಗೆ ಎಲ್ಲ ಯಶಸ್ಸು ನೀಡಲಿ ಎಂದು ಕಿವಿ ಮಾತು ಹೇಳಿದ್ದಾರೆ.

    ಇತ್ತ ಸಲ್ಮಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಆಯುಶ್, ಈ ಘಟನೆ ನನ್ನ ಜೀವನದಲ್ಲಿ ನಡೆದಿರುವುದು ನನಗೆ ನಂಬಲು ಆಗ್ತಿಲ್ಲ. ಲವ್ ರಾತ್ರಿ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾಯುತ್ತಿದ್ದೇನೆ. ಈ ಸದಾವಕಾಶ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದ ಅಂತಾ ಉತ್ತರಿಸಿದ್ದಾರೆ.

    ಆಯುಶ್ ಮೊದಲ ಸಿನಿಮಾ ಬಾಲಿವುಡ್ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಆದರೆ ಆಯುಶ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇದೂವರೆಗೂ ಅಂತಿಮವಾಗಿಲ್ಲ. ಶೀಘ್ರದಲ್ಲಿಯೇ ಆಯುಶ್ ಗೆ ಜೋಡಿಯಾಗುವ ಲಕ್ಕಿ ಗರ್ಲ್ ಯಾರೆಂಬುದನ್ನ ತಿಳಿಸಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.