Tag: 2nd Test

  • India vs England 2nd Test: 255 ಕ್ಕೆ ಭಾರತ ಆಲೌಟ್‌, ಇಂಗ್ಲೆಂಡ್‌ಗೆ 399 ರನ್‌ ಗುರಿ

    India vs England 2nd Test: 255 ಕ್ಕೆ ಭಾರತ ಆಲೌಟ್‌, ಇಂಗ್ಲೆಂಡ್‌ಗೆ 399 ರನ್‌ ಗುರಿ

    – ಶುಭಮನ್‌ ಗಿಲ್‌ ಅಮೋಘ ಶತಕ

    ವಿಶಾಖಪಟ್ಟಣಂ: ಇಂಗ್ಲೆಂಡ್‌ (India-England 2nd Test) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟರ್‌ ಶುಭಮನ್‌ ಗಿಲ್‌ (Shubman Gill) ಅವರ ಅಮೋಘ ಶತಕದಾಟದೊಂದಿಗೆ ಭಾರತ ತಂಡವು 78.3 ಓವರ್‌ಗೆ 255 ರನ್‌ ಗಳಿಸಿ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಗೆಲುವಿಗೆ 399 ರನ್‌ಗಳ ಗುರಿ ನೀಡಿದೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ 255 ರನ್ ಗಳಿಸಿತು. 28/0 ಇರುವಾಗಲೇ ರೋಹಿತ್ ಶರ್ಮಾ (13) ಮತ್ತು ಯಶಸ್ವಿ ಜೈಸ್ವಾಲ್ (17) ಎರಡು ಆರಂಭಿಕ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದಿಂದಲೂ ಕೊಹ್ಲಿ ಔಟ್‌?

    ಈ ವೇಳೆ ಶುಭಮನ್‌ ಗಿಲ್‌ ತಂಡದ ಪರ ಲಯ ಕಾಯ್ದುಕೊಂಡು, 104 ರನ್ (147 ಬಾಲ್‌, 11 ಫೋರ್‌, 2 ಸಿಕ್ಸರ್‌) ಗಳಿಸಿದರು. ಅಕ್ಷರ್ ಪಟೇಲ್ ಕೂಡ 45 ರನ್ ಗಳಿಸಿ ಅರ್ಧಶತಕ ವಂಚಿತರಾದರು.

    ಶ್ರೇಯಸ್‌ ಅಯ್ಯರ್‌ (29), ರಜತ್‌ ಪಾಟಿದಾರ್‌ (9), ಶ್ರೀಕಾಂತ್‌ ಭರತ್‌ (6), ರವಿಚಂದ್ರನ್‌ ಅಶ್ವಿನ್‌ (29) ರನ್‌ ಗಳಿಸಿದರು. ಬೌಲರ್‌ಗಳಾದ ಕುಲದೀಪ್‌ ಯಾದವ್‌, ಜಸ್ಪ್ರೀತ್‌ ಬುಮ್ರಾ, ಮುಕೇಶ್‌ ಕುಮಾರ್‌ ಡಕೌಟ್‌ ಆದರು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ

    ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 4 ವಿಕೆಟ್ ಪಡೆದರೆ ರೆಹಾನ್ ಅಹ್ಮದ್ 3 ಮತ್ತು ಜೇಮ್ಸ್ ಆಂಡರ್ಸನ್ 2 ವಿಕೆಟ್ ಪಡೆದರು.

  • ಒಂದೇ ದಿನ 14 ವಿಕೆಟ್ ಪತನ – ಕುತೂಹಲ ಹೆಚ್ಚಿಸಿದೆ 4ನೇ ದಿನದಾಟ

    ಒಂದೇ ದಿನ 14 ವಿಕೆಟ್ ಪತನ – ಕುತೂಹಲ ಹೆಚ್ಚಿಸಿದೆ 4ನೇ ದಿನದಾಟ

    ಢಾಕಾ: 2ನೇ ಟೆಸ್ಟ್‌ನ (2nd Test) ಮೂರನೇ ದಿನ ಬೌಲರ್‌ಗಳ ಮೇಲಾಟ ನಡೆದಿದೆ. ಒಂದೇ ದಿನ ಭಾರತ (India) ಹಾಗೂ ಬಾಂಗ್ಲಾದೇಶದ (Bangladesh) 14 ವಿಕೆಟ್ ಪತನಗೊಂಡಿದ್ದು, ನಾಲ್ಕನೇ ದಿನದಾಟ ಕೂತುಹಲ ಕೆರಳಿಸಿದೆ.

    ಬಾಂಗ್ಲಾದೇಶ ಭಾರತಕ್ಕೆ 145 ರನ್‍ಗಳ ಗುರಿ ನೀಡಿ ಬಳಿಕ ಬೌಲಿಂಗ್‍ನಲ್ಲಿ ಕಮಾಲ್ ಮಾಡಿದೆ. ಭಾರತ ಅಲ್ಪ ಗುರಿಯನ್ನು ಬೆನ್ನಟ್ಟುವ ಉತ್ಸಾಹದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದ್ದು, 4ನೇ ದಿನ 100 ರನ್‍ಗಳ ಟಾರ್ಗೆಟ್ ಪಡೆದಿದೆ. ಇದನ್ನೂ ಓದಿ: ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

    2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 7 ರನ್‍ಗಳಿದ್ದ ಬಾಂಗ್ಲಾ ಮೂರನೇ ದಿನದಾಟದ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೆ ಇನ್ನೊಂದೆಡೆ ಜಾಕಿರ್ ಹಸನ್ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿ, ಏಕಾಂಗಿ ಹೋರಾಟ ನಡೆಸಿ 51 ರನ್ (135 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಬಳಿಕ ಕೆಲ ಕ್ರಮಾಂಕದಲ್ಲಿ ಲಿಂಟನ್ ದಾಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 73 ರನ್ (98 ಎಸೆತ, 7 ಬೌಂಡರಿ) ಸಿಡಿಸಿ ತಂಡಕ್ಕೆ ಆಸರೆಯಾದರು.

    ಆ ಬಳಿಕ ನೂರುಲ್ ಹಸನ್ 31 ರನ್ (29 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ತಸ್ಕಿನ್ ಅಹ್ಮದ್ ಅಜೇಯ 31 ರನ್ (46 ಎಸೆತ, 4 ಬೌಂಡರಿ) ಬಾರಿಸಿದ ಪರಿಣಾಮ 200ರ ಗಡಿ ದಾಟಿ 70.2 ಓವರ್‌ಗಳಲ್ಲಿ 231 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಬೌಲಿಂಗ್‍ನಲ್ಲಿ ಅಕ್ಷರ್ ಪಟೇಲ್ 3 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಅಶ್ವಿನ್, ಸಿರಾಜ್ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮತ್ತು ಉನಾದ್ಕಟ್ ತಲಾ 1 ವಿಕೆಟ್ ಹಂಚಿಕೊಂಡರು. ಇದನ್ನೂ ಓದಿ: 15ರ ಬಾಲಕನಿಗೆ ಕೈತಪ್ಪಿದ ಅವಕಾಶ ಹಿರಿಯ ಅಟಗಾರನಿಗೆ ಮಣೆ – 10 ತಂಡಗಳ ಫೈನಲ್ ಲಿಸ್ಟ್

    145 ರನ್‍ಗಳ ಗುರಿಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಲೆಕ್ಕಾಚಾರ ಆರಂಭದಲ್ಲೇ ತಲೆಕೆಳಗಾಗಿದೆ. ಗಿಲ್ 7, ರಾಹುಲ್ 2, ಪೊಜಾರ 6 ಮತ್ತು ಕೊಹ್ಲಿ 1 ರನ್ ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡು ಆತಂಕ ತಂದೊಡ್ಡಿದ್ದಾರೆ. ಅಂತಿಮವಾಗಿ ಭಾರತ ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 45 ರನ್ ಬಾರಿಸಿದೆ. ಅಕ್ಷರ್ ಪಟೇಲ್ ಅಜೇಯ 26 ರನ್ (54 ಎಸೆತ, 3 ಬೌಂಡರಿ) ಮತ್ತು ನೈಟ್‍ ವಾಚ್‌ಮೆನ್‌ ಉನಾದ್ಕಟ್ 3 ರನ್ ಸಿಡಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೆರಡು ದಿನ ಬಾಕಿ ಇದ್ದು ಭಾರತದ ಗೆಲುವಿಗೆ 100 ರನ್ ಬೇಕಾಗಿದೆ. ಬಾಂಗ್ಲಾ ಗೆಲುವಿಗೆ ಇನ್ನು 6 ವಿಕೆಟ್ ಅವಶ್ಯಕವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 227 ರನ್‍ಗೆ ಬಾಂಗ್ಲಾ ಆಲೌಟ್ – ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದ ಉನಾದ್ಕಟ್

    227 ರನ್‍ಗೆ ಬಾಂಗ್ಲಾ ಆಲೌಟ್ – ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆದ ಉನಾದ್ಕಟ್

    ಢಾಕಾ: ಭಾರತದ (India) ಬೌಲರ್‌ಗಳಾದ ಉಮೇಶ್ ಯಾದವ್, ಅಶ್ವಿನ್, ಜೈದೇವ್ ಉನಾದ್ಕಟ್ ಮೊದಲ ದಿನವೇ 10 ವಿಕೆಟ್ ಬೇಟೆಯಾಡಿ ಬಾಂಗ್ಲಾಗೆ ಬ್ರೇಕ್ ಹಾಕಿದ್ದಾರೆ.

    2ನೇ ಟೆಸ್ಟ್ (2nd Test) ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ (Bangladesh) 73.5 ಓವರ್‌ಗಳಲ್ಲಿ 227 ರನ್ ಸಿಡಿಸಿ ಆಲೌಟ್ ಆಯಿತು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 8 ಓವರ್‌ಗಳಲ್ಲಿ 19 ರನ್ ಬಾರಿಸಿ 208 ರನ್‌ ಹಿನ್ನಡೆಯಲ್ಲಿದೆ.

    ಈ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ 39 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ ಜಾಕಿರ್ ಹಸನ್ 15 ರನ್ (34 ಎಸೆತ, 1 ಬೌಂಡರಿ) ವಿಕೆಟ್ ಪಡೆಯುವಲ್ಲಿ ಜೈದೇವ್ ಉನಾದ್ಕಟ್ ಯಶಸ್ವಿಯಾದರು. ಈ ಮೂಲಕ ಉನಾದ್ಕಟ್ ಡೆಬ್ಯೂ ಪಂದ್ಯವಾಡಿ 12 ವರ್ಷಗಳ ಬಳಿಕ ಮೊದಲ ವಿಕೆಟ್ ಪಡೆಯುವಲ್ಲಿ ಸಫಲರಾದರು. 2010ರಲ್ಲಿ ಉನಾದ್ಕಟ್‌ ಮೊದಲ ಟೆಸ್ಟ್‌ ಪಂದ್ಯವಾಡಿದ್ದರು. ಆ ಬಳಿಕ ಆಡಿರಲಿಲ್ಲ. ಇದೀಗ 12 ವರ್ಷಗಳ ಬಳಿಕ ಮತ್ತೆ ಟೆಸ್ಟ್‌ ತಂಡಕ್ಕೆ ವಾಪಾಸ್‌ ಆಗಿದ್ದಾರೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ಜಾಕಿರ್ ಹಸನ್ ವಿಕೆಟ್‌ ಕಳೆದುಕೊಂಡ ಬಳಿಕ ಇವರ ಹಿಂದೆನೇ ನಜ್ಮುಲ್ ಹೊಸೈನ್ ಶಾಂತೋ ಕೂಡ 24 ರನ್ (57 ಎಸೆತ, 3 ಬೌಂಡರಿ) ಬಾರಿಸಿ ವಿಕೆಟ್ ಕಳೆದುಕೊಂಡರು. ಬಳಿಕ ವಿಕೆಟ್ ಕಳೆದುಕೊಳ್ಳತ್ತಾ ಸಾಗುತ್ತಿದ್ದ ಬಾಂಗ್ಲಾ ಪರ ಮೊಮಿನುಲ್ ಹಕ್ ಏಕಾಂಗಿ ಹೋರಾಟ ನಡೆಸಿದರು.

    ಮಿಂಚಿದ ಮೊಮಿನುಲ್ ಹಕ್:
    ಬಾಂಗ್ಲಾ ಪರ ಶಕೀಬ್ 16 ರನ್ (39 ಎಸೆತ, 1 ಬೌಂಡರಿ, 1 ಸಿಕ್ಸ್), ಮುಶ್ಫಿಕರ್ ರಹೀಮ್ 26 ರನ್ (46 ಎಸೆತ, 5 ಬೌಂಡರಿ) ಮತ್ತು ಲಿಟ್ಟನ್ ದಾಸ್ 25 ರನ್ (26 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಒಬ್ಬರ ಹಿಂದೆ ಒಬ್ಬರು ವಿಕೆಟ್ ನೀಡಿ ಹೊರ ನಡೆದರು. ಇತ್ತ ಮೊಮಿನುಲ್ ಹಕ್ ಮಾತ್ರ ಏಕಾಂಕಿ ಹೋರಾಟಕ್ಕೆ ಮುಂದಾದರು. ಭಾರತದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 84 ರನ್ (157 ಎಸೆತ, 12 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು. ಇದನ್ನೂ ಓದಿ: ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

    ಯಾದವ್, ಅಶ್ವಿನ್ ಭರ್ಜರಿ ಬೇಟೆ:
    ಒಂದು ಕಡೆ ಬಾಂಗ್ಲಾ ಪರ ಮೊಮಿನುಲ್ ಹಕ್ ಏಕಾಂಗಿ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಭಾರತ ಬೌಲರ್‌ಗಳಾದ ಉಮೇಶ್ ಯಾದವ್, ಅಶ್ವಿನ್, ಉನಾದ್ಕಟ್ ಆರಂಭದಿಂದಲೇ ವಿಕೆಟ್ ಬೇಟೆ ಆರಂಭಿಸಿ ಮೂವರೇ ಸೇರಿ 10 ವಿಕೆಟ್ ಬೇಟೆಯಾಡಿದರು. ಯಾದವ್‌ ಮತ್ತು ಅಶ್ವಿನ ತಲಾ 4 ವಿಕೆಟ್‌ ಪಡೆದರೆ, ಇನ್ನುಳಿದ 2 ವಿಕೆಟ್‌ ಉನಾದ್ಕಟ್‌ ಪಾಲಾಯಿತು.

    ಬಾಂಗ್ಲಾ ಆಲೌಟ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಶುಭಮನ್ ಗಿಲ್ ಅಜೇಯ 14 ರನ್ (20 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಕೆ.ಎಲ್ ರಾಹುಲ್ 3 ರನ್ (30 ಎಸೆತ) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 2ನೇ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡ ಕ್ಯಾಪ್ಟನ್ ರಾಹುಲ್ – ಟೀಂ ಇಂಡಿಯಾಗೆ ಪೂಜಾರ ಸಾರಥಿ?

    2ನೇ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡ ಕ್ಯಾಪ್ಟನ್ ರಾಹುಲ್ – ಟೀಂ ಇಂಡಿಯಾಗೆ ಪೂಜಾರ ಸಾರಥಿ?

    ಢಾಕಾ: ಬಾಂಗ್ಲಾದೇಶ (Bangladesh) ವಿರುದ್ಧದ 2ನೇ ಟೆಸ್ಟ್ (2nd Test) ಆರಂಭಕ್ಕೂ ಮುನ್ನ ಟೀಂ ಇಂಡಿಯಾ (Team India) ಹಂಗಾಮಿ ನಾಯಕ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಗಾಯಗೊಂಡಿದ್ದಾರೆ.

    ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ರಾಹುಲ್ ಕೈಗೆ ಬಾಲ್ ತಗುಲಿ ಗಾಯಗೊಂಡಿದ್ದು, ಬಳಿಕ ವಿಶ್ರಾಂತಿ ಮೊರೆ ಹೋಗಿದ್ದಾರೆ. ನಾಳೆಯಿಂದ ಭಾರತ ಮತ್ತು ಬಾಂಗ್ಲಾ ನಡುವೆ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ನಡುವೆ ಇಂದು ರಾಹುಲ್ ಗಾಯಗೊಂಡಿರುವುದು ಟೀಂ ಇಂಡಿಯಾಗೆ ಚಿಂತೆಯಾಗಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ತಬ್ಬಿಕೊಂಡು ಮಲಗಿದ ಮೆಸ್ಸಿ

    ಈಗಾಗಲೇ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಟೀಂ ಇಂಡಿಯಾ 1-0 ಮುನ್ನಡೆ ಪಡೆದುಕೊಂಡಿದೆ. ಇದೀಗ 2ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಗೆಲ್ಲುವ ತವಕದಲ್ಲಿದ್ದ ಭಾರತಕ್ಕೆ ಇದೀಗ ರಾಹುಲ್ ಅಲಭ್ಯರಾಗುವ ಸಾಧ್ಯತೆ ಕಾಡುತ್ತಿದೆ. ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರ ನಡೆದಾಗ ಹಂಗಾಮಿ ನಾಯಕರಾಗಿ ರಾಹುಲ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡು ಮೊದಲ ಪಂದ್ಯ ಗೆದ್ದಿದ್ದರು.

    ಇದೀಗ ರಾಹುಲ್ ಗಾಯದ ಕುರಿತು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೂರ್ ಮಾಹಿತಿ ಹಂಚಿಕೊಂಡಿದ್ದು, ನೆಟ್ಸ್‌ನಲ್ಲಿ ರಾಹುಲ್ ಗಾಯಗೊಂಡಿದ್ದು, ವೈದ್ಯಕೀಯ ತಂಡ ಅವರ ಮೇಲೆ ನಿಗಾ ವಹಿಸಿದೆ. ಅವರು ನಾಳೆಯಿಂದ ನಡೆಯುವ ಟೆಸ್ಟ್‌ನಲ್ಲಿ ಆಡುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಒಂದು ವೇಳೆ ರಾಹುಲ್ ಎರಡನೇ ಟೆಸ್ಟ್‌ಗೆ ಅಲಭ್ಯರಾದರೆ, ತಂಡದ ಉಪನಾಯಕ ಚೇತೇಶ್ವರ ಪೂಜಾರ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಅಭ್ಯಾಸದ ವೇಳೆ ಕೊಹ್ಲಿ ಹಾಗೂ ರಾಹುಲ್ ಎಳೆನೀರು ಸವಿದು ದಣಿವಾರಿಸಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • 238 ರನ್‍ಗಳ ಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

    238 ರನ್‍ಗಳ ಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

    ಬೆಂಗಳೂರು: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 238 ರನ್‍ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಸ್ವದೇಶದಲ್ಲಿ ಸತತ 15 ಟೆಸ್ಟ್ ಸರಣಿಯನ್ನು ಗೆದ್ದ ಸಾಧನೆ ಮಾಡಿತು.

    ಗೆಲ್ಲಲು 447 ರನ್ ಗಳ ಕಠಿಣ ಗುರಿಯನ್ನು ಪಡೆದ ಶ್ರೀಲಂಕಾ ಎರಡನೇ ಇನ್ನಿಂಗ್ಸ್‍ನಲ್ಲಿ 208 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

    2012ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಿತ್ತು. ಈ ಸರಣಿಯ ಬಳಿಕ ನಡೆದ ಭಾರತದಲ್ಲಿ ನಡೆದ ಎಲ್ಲ ಟೆಸ್ಟ್ ಸರಣಿಯನ್ನು ಭಾರತ ಜಯಿಸಿದೆ. ಇಲ್ಲಿಯವರೆಗೆ ಯಾವುದೇ ತಂಡ ಈ ಸಾಧನೆ ಮಾಡಿಲ್ಲ.

    ಒಂದು ವಿಕೆಟ್ ನಷ್ಟಕ್ಕೆ 28 ರನ್‍ಗಳಿಂದ ಮೂರನೇ ದಿನವನ್ನು ಪುನರಾರಂಭಿಸಿದ ಶ್ರೀಲಂಕಾ ಪರ ನಾಯಕ ದಿಮುತ್ ಕರುಣಾರತ್ನೆ 107 ರನ್ ಗಳಿಸಿ ಸ್ವಲ್ಪ ಪ್ರತಿರೋಧ ತೋರಿದರು.

    ಭಾರತದ ಪರ ಸ್ಪಿನ್ನರ್ ಅಶ್ವಿನ್ 4 ವಿಕೆಟ್ ಕಿತ್ತರೆ ಬುಮ್ರಾ 3 ವಿಕೆಟ್ ಕಿತ್ತರು. ಅಕ್ಷರ್ ಪಟೇಲ್ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.

    ಸಂಕ್ಷೀಪ್ತ ಸ್ಕೋರ್
    ಭಾರತ ಮೊದಲ ಇನ್ನಿಂಗ್ಸ್ 252/10
    ಶ್ರೀಲಂಕಾ ಮೊದಲ ಇನ್ನಿಂಗ್ಸ್ 109/10
    ಭಾರತ ಎರಡನೇ ಇನ್ನಿಂಗ್ಸ್ 303/9
    ಶ್ರೀಲಂಕಾ ಎರಡನೇ ಇನ್ನಿಂಗ್ಸ್ 208/ 10

  • ಒಂದೇ ದಿನಕ್ಕೆ 16 ವಿಕೆಟ್ ಪತನ- ಸೋಲಿನ ಭೀತಿಯಲ್ಲಿ ಭಾರತ

    ಒಂದೇ ದಿನಕ್ಕೆ 16 ವಿಕೆಟ್ ಪತನ- ಸೋಲಿನ ಭೀತಿಯಲ್ಲಿ ಭಾರತ

    – ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 97 ರನ್ ಮುನ್ನಡೆ
    – 4 ಇನ್ನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿದ ಕೊಹ್ಲಿ

    ಕ್ರೈಸ್ಟ್ ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನಕ್ಕೆ 16 ವಿಕೆಟ್ ಪತನಗೊಂಡಿವೆ.

    ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 73.1 ಓವರ್ ಗಳಲ್ಲಿ 235 ರನ್‍ಗೆ ಸರ್ವಪತನ ಕಂಡಿತು. 7 ರನ್ ಮುನ್ನಡೆ ಪಡೆದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 36 ಓವರ್ ನಲ್ಲಿ 90 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ. ಇದನ್ನೂ ಓದಿ: ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್

    ಹನುಮಾ ವಿಹಾರಿ 5 ರನ್ ಮತ್ತು ರಿಷಭ್ ಪಂತ್ 1 ರನ್ ಗಳಿಸಿ ಅಜೇಯರಾಗಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸರಣಿಯ ಸತತ ನಾಲ್ಕನೇ ಇನ್ನಿಂಗ್ಸ್ ನಲ್ಲೂ ತಮ್ಮ ವೈಫಲ್ಯವನ್ನು ಮುಂದುವರಿಸಿದ್ದಾರೆ. ವೆಲ್ಲಿಂಗ್ಟನ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ 2 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 19 ರನ್ ಗಳಿಸಿದ್ದರು. ಕ್ರೈಸ್ಟ್ ಚರ್ಚ್ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 3 ರನ್ ಹಾಗೂ 14 ರನ್ ಗಳಿಸಿದ್ದಾರೆ.

    ನ್ಯೂಜಿಲೆಂಡ್‍ನ ಟ್ರೆಂಟ್ ಬೌಲ್ಟ್ ಟೀಂ ಇಂಡಿಯಾದ ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ ಹಾಗೂ ಉಮೇಶ್ ಯಾದವ್ ಅವರನ್ನು ಔಟ್ ಮಾಡಿದರು. ಮಾಯಂಕ್ 3 ರನ್ ಗಳಿಸಿದರೆ, ಪೂಜಾರ 24 ರನ್ ಹಾಗೂ ಉಮೇಶ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    9 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ನೀಲ್ ವ್ಯಾಗ್ನರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಓವರಿನಲ್ಲಿ ಎಲ್‍ಬಿಡಬ್ಲ್ಯೂಗೆ ತುತ್ತಾದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ 14 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು.

    ಎರಡಂಕಿ ದಾಟದ 5 ಬ್ಯಾಟ್ಸ್‌ಮನ್‌ಗಳು:
    ಶನಿವಾರ ಟಾಸ್ ಸೋತ ನಂತರ ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 242 ರನ್‍ಗಳಿಗೆ ಇಳಿಸಿತ್ತು. ಭಾರತದ 5 ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ 3 ರನ್, ಮಾಯಾಂಕ್ ಅಗರ್ವಾಲ್ 7 ರನ್, ಅಜಿಂಕ್ಯ ರಹಾನೆ 7 ರನ್, ರವೀಂದ್ರ ಜಡೇಜಾ 9 ರನ್ ಮತ್ತು ಉಮೇಶ್ ಯಾದವ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    69 ದಿನಗಳಿಂದ ಶತಕ ಬಾರಿಸದ ಕೊಹ್ಲಿ:
    ವಿರಾಟ್ ಕೊಹ್ಲಿ ಕಳೆದ 69 ದಿನಗಳಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ20) ಒಂದೇ ಶತಕ ಗಳಿಸಲು ಸಾಧ್ಯವಾಗಿಲ್ಲ. ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಇಂತಹ ವೈಫಲ್ಯ ತೋರಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ 22 ಇನ್ನಿಂಗ್ಸ್ ಆಡಿದ್ದಾರೆ. ಅವರು ಕೊನೆಯದಾಗಿ ಡಿಸೆಂಬರ್ 22 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಇದಕ್ಕೂ ಮೊದಲು ಫೆಬ್ರವರಿ 25ರಿಂದ ಅಕ್ಟೋಬರ್ 2014 ರವರೆಗೆ ಸುಮಾರು 210 ದಿನಗಳಲ್ಲಿ ಹಾಗೂ ಫೆಬ್ರವರಿ 24ರಿಂದ 2011ರ ಸೆಪ್ಟೆಂಬರ್ ವರೆಗೆ ಸುಮಾರು 180 ದಿನಗಳಲ್ಲಿ ಕೊಹ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.

    ನ್ಯೂಜಿಲೆಂಡ್ ಇನ್ನಿಂಗ್ಸ್:
    ಇದಕ್ಕೂ ಮುನ್ನ ನ್ಯೂಜಿಲೆಂಡ್‍ನ ಮೊದಲ ಇನ್ನಿಂಗ್ಸ್ ನಲ್ಲಿ ಟಾಮ್ ಲಾಥಮ್ 52 ರನ್ ಹಾಗೂ ಕೈಲ್ ಜಾಮಿಸನ್ 49 ರನ್ ಹಾಗೂ ಟಾಮ್ ಬ್ಲೆಂಡಾಲ್ 30 ರನ್ ಗಳಿಸಿದ್ದರು. ಜಾಮಿಸನ್ 9ನೇ ವಿಕೆಟ್‍ಗೆ 51 ರನ್‍ಗಳ ನಿರ್ಣಾಯಕ ಪಾಲುದಾರಿಕೆಯನ್ನು ನೀಲ್ ವ್ಯಾಗ್ನರ್ ಜೊತೆಗೆ ಹಂಚಿಕೊಂಡರು. ಆದಾಗ್ಯೂ ಅವರು ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕವನ್ನು ತಪ್ಪಿಸಿಕೊಂಡರು.

    ಮಿಂಚಿದ ಶಮಿ, ಬುಮ್ರಾ:
    ಭಾರತದ ವೇಗದ ಬೌಲರ್ ಗಳಾದ ಮೊಹಮ್ಮದ್ ಶಮಿ 4 ವಿಕೆಟ್ ಹಾಗೂ ಜಸ್‍ಪ್ರೀತ್ ಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರು. ಸ್ಪಿನ್ನರ್ ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ 1 ವಿಕೆಟ್ ಕಿತ್ತರು.

  • ಮೈದಾನದಲ್ಲಿಯೇ ಕಿತ್ತಾಡಿಕೊಂಡ ಇಶಾಂತ್, ಜಡೇಜಾ – ವಿಡಿಯೋ ವೈರಲ್

    ಮೈದಾನದಲ್ಲಿಯೇ ಕಿತ್ತಾಡಿಕೊಂಡ ಇಶಾಂತ್, ಜಡೇಜಾ – ವಿಡಿಯೋ ವೈರಲ್

    ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಲ್‍ರೌಂಡರ್ ರವಿಂದ್ರ ಜಡೇಜಾ ಹಾಗೂ ವೇಗಿ ಇಶಾಂತ್ ಶರ್ಮಾ ಪರಸ್ಪರ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಎರಡನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾಗೆ ಅಂತಿಮ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ನಾಲ್ಕನೇಯ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ ಜಡೇಜಾ ಮತ್ತು ಇಶಾಂತ್ ಶರ್ಮಾ ಮೈದಾನದಲ್ಲಿಯೇ ಜಗಳವಾಡಿಕೊಂಡಿದ್ದಾರೆ. ಅನುಭವಿ ಹಾಗೂ ಹಿರಿಯ ಆಟಗಾರರು ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

    ವಿಡಿಯೋದಲ್ಲಿ ಏನಿದೆ?:
    ಎರಡನೇ ಇನ್ನಿಂಗ್ಸ್ ಫೀಲ್ಡಿಂಗ್ ವೇಳೆ ಅಂಪೈರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವರು ಚರ್ಚೆಯಲ್ಲಿ ನಿರತರಾಗಿದ್ದರು. ಆದರೆ ಕ್ಷೇತ್ರ ರಕ್ಷಣೆ ವಿಚಾರವಾಗಿ ಇಶಾಂತ್ ಶರ್ಮಾ ಮತ್ತು ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮುಗಿಸಿ ಮುಂದೆ ಹೋಗಿದ್ದ ಇಶಾಂತ್ ಮತ್ತೆ ಜಡೇಜಾ ಕಡೆ ಮರಳಿ ಬೆರಳು ಮಾಡಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಕೂಡಲೇ ಮೊಹಮ್ಮದ್ ಶಮಿ ಹಾಗೂ ಕುಲದೀಪ್ ನೋಡಿ ತಕ್ಷಣವೇ ಅಲ್ಲಿಗೆ ಆಗಮಿಸಿ ಇಬ್ಬರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದುಕೊಂಡಿದೆ. 287 ರನ್ ಗುರಿ ಪಡೆದ ಟೀಂ ಇಂಡಿಯಾ 56 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿತ್ತು. 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ ನಿನ್ನೆಯ ತನ್ನ ಖಾತೆಗೆ 38 ರನ್ ಮಾತ್ರ ಸೇರಿಸಿತು. ಹನುಮ ವಿಹಾರಿ 28 ರನ್, ರಿಷಬ್ ಪಂತ್ 30, ಉಮೇಶ್ ಯಾದವ್ 2 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಮತ್ತು ಬುಮ್ರಾ 0 ಸುತ್ತಿದರು. ಕೊನೆಯ ನಾಲ್ಕು ವಿಕೆಟ್ 3 ರನ್‍ಗಳ ಅಂತರದಲ್ಲಿ ಕಳೆದುಕೊಂಡ ಪರಿಣಾಮ ಭಾರತ ಹೀನಾಯವಾಗಿ ಸೋಲು ಕಂಡಿದೆ.

    https://twitter.com/abhishek2526/status/1074922189990707200

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv