Tag: 2018 ಕರ್ನಾಟಕ ವಿಧಾನಸಭಾ ಚುನಾವಣೆ

  • ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ ಮುಂದಿನ ಮುಖ್ಯಮಂತ್ರಿ ನಾನೇ: ವಾಟಾಳ್

    ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ ಮುಂದಿನ ಮುಖ್ಯಮಂತ್ರಿ ನಾನೇ: ವಾಟಾಳ್

    ಚಾಮರಾಜನಗರ: ಶಾಸ್ತ್ರಿಗಳು ಮುಂದಿನ ಮುಖ್ಯಮಂತ್ರಿ ನಾನೇ ಎಂದು ಭವಿಷ್ಯ ನುಡಿದಿದ್ದಾರೆ. ಹೀಗಾಗಿ ನನಗೆ ಮತ ಹಾಕಿ ಎಂಬುದಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

    ಶಾಸ್ತ್ರಿಗಳು ಹೇಳೋ ಪ್ರಕಾರ ನಾನು ಸಿಎಂ ಆಗೋದು ಖಚಿತ. ನಾನು ಸಿಎಂ ಆದರೆ ಚಾಮರಾಜನಗರಕ್ಕೆ ಕೀರ್ತಿ ಎಂದು ತಿಳಿಸಿದರು.

    ಮತಕ್ಕಾಗಿ ಯಾರೇ ಹಣ ನೀಡಿದರೂ ಬೇಡಾ ಎನ್ನಬೇಡಿ. ಹಣ ಕೊಡುವವರಿಂದ ಹಣ ಪಡೆಯಿರಿ. ಹಣ ಪಡೆದು ಓಟು ನಿಮಗೆ ಸ್ವಾಮಿ ಅನ್ನಿ. ಆದರೆ ಮತ ಮಾತ್ರ ನನಗೆ ಹಾಕಿ ಎಂದಿದ್ದಾರೆ.

    ನನಗೆ ನೀವು ಓಟ್ ಹಾಕಿದರೆ ಬೆಂಗಳೂರಿಗೆ ಹೋಗಲು 200 ಬಸ್ ಮಾಡುತ್ತೇನೆ. ಬೆಂಗಳೂರಿಗೆ ಬಂದು ಮಜಾ ಮಾಡಿ. ನಾನೇ ಊಟೋಪಚಾರ ಮಾಡಿಸುತ್ತೇನೆ ಎಂದು ಮತದಾರರಿಗೆ ವಿಭಿನ್ನ ರೀತಿಯಲ್ಲಿ ಆಮಿಷ ಒಡ್ಡಿ ಪ್ರಚಾರ ಮಾಡಿದರು.

    ಪ್ರತಿಭಟನೆ ಹೋರಾಟದ ಮೂಲಕ ರಾಜ್ಯದ ಮನೆ ಮಾತಾಗಿರುವ ಹಾಗೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ಸ್ಥಾಪಕರಾದ ವಾಟಾಳ್ ನಾಗರಾಜ್ 1989, 1994, 2004 ರಲ್ಲಿ ಚಾಮರಾಜನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪುಟ್ಟರಂಗ ಶೆಟ್ಟಿಯವರು 1,1196 ಮತಗಳ ಅಂತರದಿಂದ ಕೆಜೆಪಿಯ ಕೆ ಆರ್ ಮಲ್ಲಿಕಾರ್ಜುನಪ್ಪ ಅವರ ವಿರುದ್ಧ ಜಯಗಳಿಸಿದ್ದರು. ಈ ಬಾರಿ ಕೆ ಆರ್ ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದು ಒಟ್ಟು 14 ಅಭ್ಯಥಿಗಳು ಕಣದಲ್ಲಿದ್ದಾರೆ.

  • ಬರ ಇದ್ದರೂ ಸಚಿವರು ಖಾತೆ ನಿರ್ವಹಿಸುವುದನ್ನು ಬಿಟ್ಟು ದೆಹಲಿಯಲ್ಲಿ ಜಾತಿ ಒಡೆಯೋ ಪ್ಲಾನ್ ಮಾಡ್ತಿದ್ರು: ಮೋದಿ

    ಬರ ಇದ್ದರೂ ಸಚಿವರು ಖಾತೆ ನಿರ್ವಹಿಸುವುದನ್ನು ಬಿಟ್ಟು ದೆಹಲಿಯಲ್ಲಿ ಜಾತಿ ಒಡೆಯೋ ಪ್ಲಾನ್ ಮಾಡ್ತಿದ್ರು: ಮೋದಿ

    ವಿಜಯಪುರ: ಕಾಂಗ್ರೆಸ್ ಸರ್ಕಾರದಲ್ಲಿನ ಸಚಿವರು ಕುರ್ಚಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ಈ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು, ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆ ಉದ್ಭವವಾಗಿತ್ತು, ಭೂಮಾಫಿಯಾ ಜೋರಾಗಿತ್ತು. ಆದರೆ ಈ ಭಾಗದ ಸಚಿವರು ತಮ್ಮ ಖಾತೆ ನಿರ್ವಹಿಸುವುದನ್ನು ಬಿಟ್ಟು ದೆಹಲಿಯಲ್ಲಿ ಕೂತು ಜಾತಿ ಒಡೆಯೋದು ಹೇಗೆ ಅಂತ ಪ್ಲಾನ್ ಮಾಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು.

    ಜನ ಬದಲಾವಣೆ ಬಗ್ಗೆ ಮಾತನಾಡುತ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಸೋಲಿಸುವುದರ ಜೊತೆಗೆ ಕಠಿಣ ಶಿಕ್ಷೆ ನೀಡಲು ಜನತೆ ತೀರ್ಮಾನ ಮಾಡಿದ್ದಾರೆ. ಮೇ 15 ನಂತರ ಮತಯಂತ್ರದ ಮೇಲೆ ದೋಷ ಹಾಕಲು ಕಾಂಗ್ರೆಸ್ ಸರ್ಕಾರ ಸಿದ್ದವಾಗಿದೆ ಎಂದು ವ್ಯಂಗ್ಯವಾಡಿದರು.

    ಏರ್ ಕಂಡೀಷನ್ ಕೊಠಡಿ ಯಲ್ಲಿ ಕೂತು ಕೆಲವರು ಬಹುಮತ ಬರಲ್ಲ ಅಂತ ಹೇಳುತ್ತಾರೆ. ಅವರು ಇಷ್ಟೊಂದು ಉರಿಬಿಸಿಲಿನಲ್ಲಿ ಕೂತಿರುವ ಜನರನ್ನ ಬಂದು ನೋಡಬೇಕು. ಕರ್ನಾಟಕದ ಅನೇಕ ಪ್ರದೇಶಕ್ಕೆ ಹೋಗಿದ್ದೇನೆ. ಕರ್ನಾಟಕದಲ್ಲಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಸವಣ್ಣ ತಮ್ಮ ವಚನದಲ್ಲಿ ಹೇಳುತ್ತಾರೆ. ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯ. ಇವನಮ್ಮವ ಇವನಮ್ಮವ ಎಂದೆಣಿಸಯ್ಯ ಕೂಡಲಸಂಗಮ ದೇವ ಅಂದರೆ ಎಲ್ಲರನ್ನ ಒಂದೇ ಎಂದು ಕಾಣಬೇಕು ಎಂದು ಸಾರಿದ ಪುಣ್ಯ ಭೂಮಿ ಇದು. ಆದರೆ ಈ ಸರ್ಕಾರ ಬಸವಣ್ಣನ ವಚನದ ವಿರುದ್ಧ ನಡೆಯುತ್ತಿದೆ. ಮತ ಪಂಥ ಸಂಪ್ರದಾಯದ ವಿರುದ್ಧ ನಡೆದುಕೊಳ್ತಿದೆ. ಜಾತಿ, ಮತ, ಪಂಥವನ್ನು ಒಡೆಯೋ ಪ್ರಯತ್ನ ಮಾಡುತ್ತಿದೆ. ಇದು ಜಾತಿಗಾಗಿ ಜಗಳವಾಡೋ ಭೂಮಿ ಅಲ್ಲ ಅನ್ನೋದನ್ನ ಜನ ತೋರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

    ಕರ್ನಾಟಕ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದ ಒಬ್ಬ ಮಂತ್ರಿಯ ಹೆಸರನ್ನು ಹೇಳಿ ಎಂದು ಪ್ರಶ್ನಿಸಿದರು. ನೀರವಾರಿ ಸಚಿವ ಎಂ.ಬಿ. ಪಾಟೀಲರಿಂದ ಯಾರು ಯಾರು ಗುತ್ತಿಗೆ ಪಡೆದಿದ್ದಾರೆ ಅವರೆಲ್ಲರೂ ಹೆಲಿಪ್ಯಾಡನಲ್ಲಿ ಅಲೆದಾಡುತ್ತಿದ್ದಾರೆ. ದ್ರಾಕ್ಷಿ ಮಾರುಕಟ್ಟೆಗೆ ತರಲು ನೀವು ಹೆಣಗಾಡುತ್ತೀರಿ. ನಿಮ್ಮ ಕಷ್ಟವನ್ನ ಪರಿಹಾರ ಮಾಡಲು ನಾವು ವ್ಯವಸ್ಥೆ ಮಾಡುತ್ತೇವೆ. ಮೇ 15ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ರೈತ ಬಂಧು ಇಲಾಖೆ ಸ್ಥಾಪನೆಯಾಗಲಿದೆ. 1.5 ಲಕ್ಷ ಕೋಟಿ ರೂ ವೆಚ್ಚದಲ್ಲಿ ನೀರಾವರಿ ಯೋಜನೆ ಜಾರಿಗೆ ಬರಲಿದೆ. ವಿಜಯಪುರದಲ್ಲಿ ತೋಟಗಾರಿಕೆ ಇಲಾಖೆ ಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.