Tag: 2011ರ ವಿಶ್ವಪಕ್

  • ನೀವು ದಂತಕಥೆ- ಯುವಿಯನ್ನ ಹೊಗಳಿದ ರವಿಶಾಸ್ತ್ರಿ

    ನೀವು ದಂತಕಥೆ- ಯುವಿಯನ್ನ ಹೊಗಳಿದ ರವಿಶಾಸ್ತ್ರಿ

    ನವದೆಹಲಿ: 1983ರ ಬಳಿಕ ಟೀಂ ಇಂಡಿಯಾ 2011ರಲ್ಲಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. 2020ರ ಏಪ್ರಿಲ್ 2ರಂದು 9 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಹಾಲಿ ತಂಡದ ಭಾರತದ ಕೋಚ್ ರವಿಶಾಸ್ತ್ರಿ ಗೆಲುವಿನ ಕ್ಷಣವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

    ರವಿಶಾಸ್ತ್ರಿ ಅವರು, ‘ಎಲ್ಲರಿಗೂ ಅಭಿನಂದನೆಗಳು. ಈ ನೆನಪುಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತವೆ. ನಮ್ಮ 1983ರ ತಂಡ ಜೀವನದಂತೆಯೇ ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ಟ್ವಿಟ್ ಅನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಟ್ಯಾಗ್ ಮಾಡಿದ್ದರು.

    ಈ ಕುರಿತು ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ರವಿಶಾಸ್ತ್ರಿ ಅವರನ್ನು ಟ್ರೋಲ್ ಮಾಡಿದ್ದಾರೆ. ಯುವಿ ಟ್ವೀಟ್‍ಗೆ ಪ್ರತಿಕ್ರಿಯಿಸಿ, ‘ಹಿರಿಯರಿಗೆ ಧನ್ಯವಾದಗಳು. ನೀವು ನನ್ನನ್ನು ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಟ್ಯಾಗ್ ಮಾಡಬಹುದಿತ್ತು. ನಾವಿಬ್ಬರೂ 2011ರ ವಿಶ್ವಕಪ್‍ನ ಚಾಂಪಿಯನ್ ತಂಡದ ಭಾಗವಾಗಿದ್ದೆವು ಎಂದು ನಗುವ ಎಮೋಜಿ ಹಾಕಿ ಕಾಳೆದಿದ್ದಾರೆ.

    ಯುವಿ ಕಾಮೆಂಟ್‍ಗೆ ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ವಿಶ್ವಕಪ್ ವಿಚಾರಕ್ಕೆ ಬಂದಾಗ ನಿಮ್ಮನ್ನು ಕಿರಿಯರೆಂದು ಪರಿಗಣಿಸಲು ಆಗುವುದಿಲ್ಲ. ನೀವು ದಂತಕಥೆ ಎಂದು ಹೊಗಳಿದ್ದಾರೆ.

    2011ರ ಐಸಿಸಿ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯವು ಮುಂಬೈನಲ್ಲಿ ಭಾರತ, ಶ್ರೀಲಂಕಾ ನಡೆದಿತ್ತು. ಟಾಸ್ ಗೆದ್ದಿದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‍ಗೆ 274 ರನ್ ಗಳಿಸಿತ್ತು. ಮಹೇಲಾ ಜಯವರ್ಧನೆ ಅಜೇಯ 103 ರನ್ ಗಳಿಸಿದ್ದರು. ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್‍ಗೆ 277 ರನ್ ಗಳಿಸಿತ್ತು. ಭಾರತದ ಪರ ಗೌತಮ್ ಗಂಭೀರ್ 97 ರನ್ ಮತ್ತು ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್ ಗಳಿಸಿದ್ದರು. ಉತ್ತಮ ಬ್ಯಾಟಿಂಗ್ ಪ್ರದರ್ಶ ನೀಡಿದ್ದ ಧೋನಿ ಅವರನ್ನು ಪಂದ್ಯ ಶ್ರೇಷ್ಠರಾಗಿ ಆಯ್ಕೆ ಮಾಡಿದರೆ, ಯುವರಾಜ್ ಸಿಂಗ್ ಅವರನ್ನು ಸರಣಿ ಶ್ರೇಷ್ಠ ಆಗಿದ್ದರು. ಇದಕ್ಕೂ ಮೊದಲು ಕಪಿಲ್ ದೇವ್ ನಾಯಕತ್ವದಲ್ಲಿ ಭಾರತೀಯ ತಂಡ 1983 ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.