Tag: 2ನೇ ಡೋಸ್

  • ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್

    ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್

    ಬೆಂಗಳೂರು: ಜನರಲ್ಲಿ ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್ ಆಗಿದೆ. ಸಾರ್ವಜನಿಕರು ಅಯ್ಯೋ ಕೊರೊನಾ ಇದ್ರಿಂದ್ರೇ ಇಷ್ಟೊತ್ತಿಗಾಗಲೇ ಬಂದೇ ಬಿಡಬೇಕಿತ್ತು. ಇಲ್ಲಿಯವರೆಗೂ ಬಂದಿಲ್ಲ ಎಂದ ಮೇಲೆ ಮುಂದೆ ಬರುವುದಿಲ್ಲ ಎಂದು ಸುಮ್ಮನಾಗಿದ್ದಾರೆ.

    ಈ ಕುರಿತು ಸಾರ್ವಜನಿಕರಿಗೆ ಕೇಳಿದರೆ, ನೀವಲ್ಲ ಸರ್, ಆ ದೇವರೇ ಬಂದು ತಗೊಳಪ್ಪಾ ಅಂದ್ರೂ ನಾನು ಮಾತ್ರ ತಗೊಳೋದಿಲ್ಲ. ಅದೇನಾಗುತ್ತೋ ಆಗೇ ಬಿಡ್ಲಿ. ನಾನೂ ಒಂದು ಕೈ ನೋಡೇ ಬಿಡ್ತೀನಿ, ಈ ರೀತಿಯ ಸಿನಿಮಾ ಡೈಲಾಗ್‍ಗಳನ್ನು ಹೇಳಿಕೊಂಡು, ವ್ಯಾಕ್ಸಿನ್ ತೆಗೆದುಕೊಳ್ಳದೇ ಇರೋ ಜನರ ಸಂಖ್ಯೆ ನಗರದಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಇದನ್ನೂ ಓದಿ: ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಆರಂಭದಲ್ಲೇ ಹಿನ್ನಡೆ – ಮತ್ತಷ್ಟು ತಡ ಸಾಧ್ಯತೆ

    ಸಿಲಿಕಾನ್ ಸಿಟಿಯಲ್ಲಿ ಕೆಲ ತಿಂಗಳ ಹಿಂದೆ ಕೋವಿಡ್ ಲಸಿಕೆ ಪಡೆಯಲು ಇದ್ದ ಮುತುವರ್ಜಿ ಇತ್ತೀಚಿಗೆ ಜನರಲ್ಲಿ ಮಾಯವಾಗಿ ಹೋಗಿದೆ. ಹೇಗೂ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. ಕೆಲ ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾಗ್ತಿತ್ತು. ಈ ವೇಳೆ ನಾ ಮುಂದು ತಾ ಮುಂದು ಎಂದು ಜನರ ಮಧ್ಯೆ ಪೈಪೋಟಿಯಾಗಿ ಕಾದಾಟ ಸಹ ನಡೆಯುತ್ತಿತ್ತು.

    ಕೆಲವೆಡೆ ನಿರೀಕ್ಷೆಗಿಂತ ಹೆಚ್ಚಿನ ಜನಸಮೂಹ ಬಂದ ಕಾರಣ ನೋ ಸ್ಟಾಕ್ ಬೋರ್ಡ್ ಪ್ರದರ್ಶಿಸಲಾಗ್ತಿತ್ತು. ಆದರೂ ಶಿಫರಸ್ಸು ಮಾಡಿಸಿ ಲಸಿಕೆ ಹಾಕಿಸಿಕೊಳ್ಳಲಾಗ್ತಿತ್ತು. ಆದರೆ ಈಗ 2ನೇ ಡೋಸ್ ಲಸಿಕೆ ಪಡೆಯಲು ಕೈಬೀಸಿ ಕರೆದ್ರೂ, ಜನರು ಜಾಣ ಕಿವುಡುತನದಿಂದ ವರ್ತಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.90ರಷ್ಟು ಹಾಗೂ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಶೇ.50ರಷ್ಟು ಲಸಿಕೆ ಹಾಕಿಸಿಕೊಳ್ಳುವ ಸಂಖ್ಯೆ ಕುಸಿತ ಕಂಡಿದೆ ಎಂದು ಡಾಕ್ಟರ್ ಪ್ರಸನ್ನ ಹೇಳುತ್ತಾರೆ. ಇದನ್ನೂ ಓದಿ: ಕುಮಾರಸ್ವಾಮಿ, ಯಡಿಯೂರಪ್ಪ ಕಾಂಗ್ರೆಸ್‍ನಿಂದ ಸಿಎಂ ಆದೆ ಅಂತ ಹೇಳಬೇಕು: ಎ.ಮಂಜು

    ಕೋವಿಶೀಲ್ಡ್‍ನ ಎರಡನೇ ಡೋಸ್ ಪಡೆಯಬೇಕಾದ ಅದೆಷ್ಟೋ ಜನರು ಲಸಿಕೆ ಹಾಕಿಸಿಕೊಳ್ಳೋದನ್ನೇ ಮರೆತುಬಿಟ್ಟಿದ್ದಾರೆ. ಸರ್ಕಾರವೇ 84 ದಿನಗಳ ಗ್ಯಾಪ್ ನಂತರ ಹಾಕಿಸಿಕೊಳ್ಳಿ ಅಂತೇಳಿದೆ. ಇನ್ನೊಂದೆರೆಡು ವಾರ ಡಿಲೇ ಆದ್ರೆ, ಏನೂ ಆಗಲ್ಲ ಎಂದು ಮರೆತೇ ಬಿಡ್ತಿದ್ದಾರೆ. ಒಂದನೇ ಡೋಸ್ ಪಡೆಯೋದ್ರಿಂದ ಶೇ.54ರಿಂದ ಶೇ.60ರಷ್ಟು ಮಾತ್ರ ಸೇಫ್ ಆಗ್ತೀವಿ ಹೊರತು ಪೂರ್ಣವಾಗಿ ಅಲ್ಲ. ಜನ ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕಬಾರದು. ವ್ಯಾಕ್ಸಿನ್ ಪಡೆಯದೇ ಹೋದ್ರೇ ಮೊದಲ ಡೋಸ್ ಪಡೆದು ಪ್ರಯೋಜನವಿಲ್ಲದ್ದಂತೆ ಆಗಲಿದೆ.

  • ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು ವ್ಯಕ್ತಿ ಸಾವು!

    ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು ವ್ಯಕ್ತಿ ಸಾವು!

    ಮುಂಬೈ: ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ 45 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಭಿವಾಂಡಿಯದ ಸುಖದೇವ್ ಕಿರ್ದತ್ ಮೃತ ವ್ಯಕ್ತಿ. ಇವರು ಕಣ್ಣಿನ ತಜ್ಞರ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಖದೇವ್ ಕಿರ್ದತ್ ಇತ್ತೀಚೆಗಷ್ಟೇ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದ 15 ನಿಮಿಷಗಳ ಬಳಿಕ ವೀಕ್ಷಣಾ ಕೊಠಡಿಗೆ ತೆರಳಿ ಮೃತಪಟ್ಟಿದ್ದಾರೆ.

    ಈ ಮುನ್ನ ಜನವರಿ 28ರಂದು ಸುಖದೇವ್ ಕಿರ್ದತ್ ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದು, ಲಸಿಕೆ ನೀಡುವುದಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಸುಖದೇವ್ ಕಿರ್ದತ್ ಅನೇಕ ವರ್ಷಗಳಿಂದ ರಕ್ತದೊತ್ತಡ ಹೊಂದಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಆದರೂ ಲಸಿಕೆ ನೀಡಿದ ಬಳಿಕ ಯಾವುದೇ ಅಡ್ಡಪರಿಣಾಮಗಳಾಗಿರಲಿಲ್ಲ.

    ಆದರೆ ಈ ಬಾರಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸುಖದೇವ್ ಕಿರ್ದತ್ ರಕ್ತದೊತ್ತಡ ಹಾಗೂ ಉಸಿರಾಟ ಕ್ರಿಯೆ ಎಲ್ಲವೂ ಸಹಜ ಸ್ಥಿತಿಯಲ್ಲಿದ್ದರಿಂದ ಲಸಿಕೆ ನೀಡಲಾಗಿತ್ತು. ಹಾಗಾಗಿ ವ್ಯಕ್ತಿ ಸಾವಿಗೆ ಕಾರಣವೆನೆಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ಸ್ಪಷ್ಟಗೊಳ್ಳಲಿದೆ ಎಂದು ಡಾ. ಖರತ್ ಎಂಬ ವೈದ್ಯರು ತಿಳಿಸಿದ್ದಾರೆ.