Tag: 108

  • 3 ತಿಂಗಳ ಸಂಬಳ ಕೊಡಿ – ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

    3 ತಿಂಗಳ ಸಂಬಳ ಕೊಡಿ – ಹೋರಾಟಕ್ಕೆ ಮುಂದಾದ 108 ಅಂಬುಲೆನ್ಸ್‌ ಸಿಬ್ಬಂದಿ

    ಬೆಂಗಳೂರು: ಕರ್ನಾಟಕ ಸರ್ಕಾರದ (Karnataka Government) ವಿರುದ್ಧ ಹೋರಾಟ ನಡೆಸಲು 108 ಅಂಬುಲೆನ್ಸ್‌ ಸಿಬ್ಬಂದಿ (Ambulance Smployees) ಮುಂದಾಗಿದ್ದಾರೆ.

    3 ತಿಂಗಳಿನಿಂದ ನಮಗೆ ಸಂಬಳ (Salary) ಸಿಕ್ಕಿಲ್ಲ. ಹೀಗಾಗಿ ನ.16ರ ರಾತ್ರಿ 8 ಗಂಟೆಯ ಒಳಗಡೆ ಸಂಬಳವನ್ನು ಬಿಡುಗಡೆ ಮಾಡಬೇಕು. ಅಂದು ಸಂಬಳ ಪಾವತಿಯಾಗದೇ ಇದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘ, ಅಖಿಲ ಕರ್ನಾಟಕ 108 ಅಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಅಂಬುಲೆನ್ಸ್‌ ನೌಕರರರ ಸಂಘ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಹಾಸನ| ರೀಲ್ಸ್‌ಗಾಗಿ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿ ಹುಚ್ಚಾಟ – ವಿದ್ಯಾರ್ಥಿಗಳ ವಿರುದ್ಧ ಕೇಸ್‌

    ಆರೋಗ್ಯ ಕವಚ ಯೋಜನೆಯಲ್ಲಿ 2 ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ವೇತನದ ಸಮಸ್ಯೆ ಬಗೆಹರಿದಿಲ್ಲ. ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು.

    ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್ಸ್‌ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈ ಕಾರಣಕ್ಕೆ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಗಳು ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿವೆ.

    ನ.16 ಸಂಬಳವಾಗದೇ ಇದ್ದರೆ ರಾತ್ರಿಯಿಂದಲೇ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಸಂಘ ಹೇಳಿದೆ. ಅಷ್ಟೇ ಅಲ್ಲದೇ ಕೋರ್ಟ್‌ ಆದೇಶದ ಅನ್ವಯ ಪ್ರತಿ ತಿಂಗಳ 7 ರಂದು ವೇತನ ಪಾವತಿಯಾಗಬೇಕು. ಮುಂದೆ ವೇತನ ವಿಳಂಬವಾದರೆ 7ರ ರಾತ್ರಿಯಿಂದಲೇ ಅಂಬುಲೆನ್ಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

  • ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್‌ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ

    ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್‌ನಲ್ಲಿ ಡೀಸೆಲ್‌ ಖಾಲಿ – ದಾರಿ ಮಧ್ಯೆ ಅಸುನೀಗಿದ ಬಡ ಜೀವ

    ಜೈಪುರ: ರೋಗಿಯನ್ನು (Patient)  ಆಸ್ಪತ್ರೆಗೆ (Hospital) ಕರೆದೊಯ್ಯುತ್ತಿದ್ದ ವೇಳೆ ಸರ್ಕಾರದ 108 ಅಂಬುಲೆನ್ಸ್‌ನಲ್ಲಿ (108 Ambulance) ಇಂಧನ (Fuel) ಖಾಲಿಯಾಗಿ ದಾರಿ ಮಧ್ಯೆ ರೋಗಿ ಮೃತಪಟ್ಟ ಘಟನೆ ರಾಜಸ್ಥಾನದ (Rajasthan) ಬಾನಸ್‌ವಾರದಲ್ಲಿ ನಡೆದಿದೆ.

    ಬಾನಸ್‌ವಾರ ಜಿಲ್ಲೆಯ ದಾನಪುರ್‌ನಲ್ಲಿ ರೋಗಿಯೊಬ್ಬರು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು. ಈ ವೇಳೆ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಲು 108ಕ್ಕೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ 108 ರೋಗಿಯನ್ನು ಕರೆದುಕೊಂಡು ಹೊರಟಿದ್ದು, ನಂತರ ದಾರಿ ಮಧ್ಯೆ ಡೀಸೆಲ್ ಖಾಲಿಯಾಗಿ ನಿಂತಿದೆ. ತಕ್ಷಣ ರೋಗಿಯ ಸಂಬಂಧಿಕರು ಅಂಬುಲೆನ್ಸ್ ಅನ್ನು ತಳ್ಳಿಕೊಂಡು ಹೊರಟಿದ್ದಾರೆ. ಈ ಮಧ್ಯೆ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ರೋಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

    ಇದೀಗ ಡೀಸೆಲ್ ಖಾಲಿಯಾಗಿ ಸಾರ್ವಜನಿಕರು ತಳ್ಳಿಕೊಂಡು ಹೋಗುತ್ತಿರುವ 108 ಅಂಬುಲೆನ್ಸ್‌ನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಕುರಿತಾಗಿ ಆರೋಗ್ಯ ಅಧಿಕಾರಿ ಜೊತೆ ಕೇಳಿದಾಗ, ಘಟನೆಯ ಬಗ್ಗೆ ನಮಗೆ ತಿಳಿದುಬಂದಿದ್ದು, ವಿಚಾರಣೆ ಆರಂಭಿಸಿದ್ದೇವೆ. ನಾವು ಮೃತಪಟ್ಟ ರೋಗಿಯ ಸಂಬಂಧಿಕರನ್ನು ಭೇಟಿ ಮಾಡುತ್ತೇವೆ. 108 ಅಂಬುಲೆನ್ಸ್ ಅನ್ನು ಖಾಸಗಿ ಏಜೆನ್ಸಿ ನಡೆಸುತ್ತಿದೆ. ಅಂಬುಲೆನ್ಸ್‌ಗಳ ನಿರ್ವಹಣೆಯ ಜವಾಬ್ದಾರಿ ಅವರ ಮೇಲಿದೆ ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ರೈತನೊಬ್ಬ ನಾಲಿಗೆಗೆ ಹಾವಿನಿಂದ ಕಚ್ಚಿಸಿಕೊಂಡ

    Live Tv
    [brid partner=56869869 player=32851 video=960834 autoplay=true]

  • ಸಂಬಳ ನೀಡದಿದ್ದರೆ 108 ಅಂಬುಲೆನ್ಸ್ ಸೇವೆ ಸ್ಥಗಿತ – GVK ಹೊಣೆ ಎಂದ ಚಾಲಕರು

    ಸಂಬಳ ನೀಡದಿದ್ದರೆ 108 ಅಂಬುಲೆನ್ಸ್ ಸೇವೆ ಸ್ಥಗಿತ – GVK ಹೊಣೆ ಎಂದ ಚಾಲಕರು

    ಬೆಂಗಳೂರು: ರಾಜ್ಯದಲ್ಲಿ 108 ಸೇವೆಯಲ್ಲಿನ ಸಮಸ್ಯೆ ಮುಗಿಯೋ ತರ ಕಾಣುತ್ತಿಲ್ಲ. ಸಿಬ್ಬಂದಿಗಳಿಗೆ ಸಂಬಳ ಕೊಡಲು ಸತಾಯಿಸುತ್ತಿರುವ ಜಿವಿಕೆ (GVK) ಸಂಸ್ಥೆಗೆ ಆರೋಗ್ಯ ಇಲಾಖೆ ಇಂದು ಮತ್ತೆ ನೋಟಿಸ್ ಜಾರಿ ಮಾಡಿದೆ.

    ನಾಳೆ ಸಂಜೆಯೊಳಗೆ ಸಿಬ್ಬಂದಿಗೆ ಸಂಬಳ ನೀಡದಿದ್ರೆ, ಸಂಸ್ಥೆಯನ್ನು ಬ್ಲಾಕ್ ಲಿಸ್ಟ್‌ಗೆ ಹಾಕಬೇಕಾಗುತ್ತೆ ಅಂತ ಎಚ್ಚರಿಕೆಯನ್ನೂ ನೀಡಿದೆ. ಮತ್ತೊಂದು ಕಡೆ ನಾಳೆ ಸಂಜೆಯೊಳಗೆ ಸಂಬಳ ನೀಡದಿದ್ದರೆ ಅಂಬುಲೆನ್ಸ್ (Ambulance) ಸೇವೆ ಸ್ಥಗಿತಗೊಳಿಸಬೇಕಾಗುತ್ತೆ ಅಂತ ಜಿವಿಕೆ ಸಂಸ್ಥೆಗೆ 108 ಅಂಬುಲೆನ್ಸ್ ಚಾಲಕರು ಸಹ ಗಡುವು ನೀಡಿದ್ದಾರೆ. ಇದನ್ನೂ ಓದಿ: ಜಿ-20 ಅಧ್ಯಕ್ಷ ಸ್ಥಾನ ಹಸ್ತಾಂತರ – ಭಾರತಲ್ಲಿ ಎಲ್ಲಿ, ಯಾವಾಗ ನಡೆಯುತ್ತೆ?

    ಈಗಾಗಲೇ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆ ಬಳಿ ಅಂಬುಲೆನ್ಸ್ ನಿಂತಲ್ಲೆ ನಿಂತಿವೆ. ಕೆಲವೆಡೆ ಚಾಲಕರು ಮತ್ತು ಸಿಬ್ಬಂದಿ ಕೆಲಸಕ್ಕೆ ಹಾಜರಾಗಿಲ್ಲ. ಗುರುವಾರ ಸಂಜೆಯೊಳಗೆ ನಮಗೆ ವೇತನ ಬಿಡುಗಡೆ ಮಾಡಬೇಕು, ಒಂದು ವೇಳೆ ವೇತನ ಸಿಗದಿದ್ದರೆ ರಾಜ್ಯಾದ್ಯಂತ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಇದರಿಂದ ಆಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆಯೆ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    Live Tv
    [brid partner=56869869 player=32851 video=960834 autoplay=true]

  • ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ

    ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ

    ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆಯಷ್ಟೇ 262 ಹೊಸ 108 ಅಂಬುಲೆನ್ಸ್ (108 Ambulance) ಖರೀದಿಗೆ ಒಪ್ಪಿಗೆ ಸೂಚಿಸಿದೆ. ಆದ್ರೆ, ಇರುವ 108 ಅಂಬುಲೆನ್ಸ್‌ಗೆ ಸಂಬಂಧಿಸಿದ ನೂರೆಂಟು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಯಾವುದೇ ಪ್ರಯತ್ನಗಳನ್ನು ನಡೆಸಿದಂತೆ ಕಾಣುತ್ತಿಲ್ಲ.

    108 ಅಂಬುಲೆನ್ಸ್ ನಿರ್ವಹಣೆ ಹೊಣೆ ಹೊತ್ತಿರುವ ಹೈದರಾಬಾದ್‌ ಮೂಲದ ಜಿವಿಕೆ (GVK) ಸಂಸ್ಥೆ ವಿರುದ್ಧ ನೌಕರರ ಸಂಘ ಸಿಡಿದೆದ್ದಿದೆ. ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 31 ಕೋಟಿ ಹಣ ಬಿಡುಗಡೆ ಮಾಡಿದೆ. ಆದ್ರೆ, ಇದನ್ನು ಸಿಬ್ಬಂದಿಗೆ ವರ್ಗಾಯಿಸುವ ಕೆಲಸವನ್ನು ಜಿವಿಕೆ ಸಂಸ್ಥೆ ಮಾಡಿಲ್ಲ. ಇದನ್ನೂ ಓದಿ: ವಿಕೃತಕಾಮಿ ಉಮೇಶ್‌ ರೆಡ್ಡಿಗೆ ರಿಲೀಫ್‌ – ಸುಪ್ರೀಂನಿಂದ ಗಲ್ಲು ಶಿಕ್ಷೆ ರದ್ದು

    ಕೇಳಿದ್ರೆ, ಹೈದರಾಬಾದ್‌ ಹೆಡ್ ಆಫೀಸ್‍ನಿಂದ ವೇತನ ಹೆಚ್ಚಳದ ಆದೇಶ ಬಂದಿಲ್ಲ ಎಂದು ಬೆಂಗಳೂರು (Bengaluru) ಕಚೇರಿ ಅಧಿಕಾರಿಗಳು ಹೇಳುತ್ತಿದ್ದು, ಇದಕ್ಕೆ ಸಿಟ್ಟಿಗೆದ್ದಿರುವ 108 ಅಂಬುಲೆನ್ಸ್ ನೌಕರರ ಸಂಘ ಮತ್ತೊಮ್ಮೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದೆ. ಕೂಡಲೇ ಆರೋಗ್ಯ ಸಚಿವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದೆ. ಜಿವಿಕೆ ಕಂಪನಿಯನ್ನು ವಜಾ ಮಾಡುವಂತೆ ಪಟ್ಟು ಹಿಡಿದಿದೆ. ಇದನ್ನೂ ಓದಿ: ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • 108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    ರಾಯಚೂರು: ಜಿಲ್ಲೆಯಲ್ಲಿ ಒಂದೇ ದಿನ ಎರಡು ಕಡೆ 108 ಆರೋಗ್ಯ ಕವಚ ವಾಹನದಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದಾರೆ.

    ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯ ಮಾನಸಮ್ಮ ಹಾಗೂ ಸಿರವಾರ ತಾಲೂಕಿನ ಮಾಡಗಿರಿಯ ಪದ್ದಮ್ಮ ಅವರಿಗೆ 108 ವಾಹನದಲ್ಲೇ ಹೆರಿಗೆಯಾಗಿದೆ. ವಿಶೇಷವೆಂದರೆ ಗರ್ಭಿಣಿಯರಿಬ್ಬರೂ ಸಹ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

    ಇಬ್ಬರನ್ನೂ ಪ್ರತ್ಯೇಕವಾಗಿ 108ರಲ್ಲಿ ರಾಯಚೂರಿನ ರಿಮ್ಸ್‌ಗೆ ಕರೆತರುವಾಗ ಹೆರಿಗೆಯಾಗಿವೆ. 108 ಆರೋಗ್ಯ ಕವಚ ವಾಹನದ ಸಿಬ್ಬಂದಿ ಇಬ್ಬರಿಗೂ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಂದಿರು ರಾಯಚೂರಿನ ರಿಮ್ಸ್‌ಗೆ ದಾಖಲಾಗಿದ್ದಾರೆ. ಶಿಶುಗಳು ಹಾಗೂ ಬಾಣಂತಿಯರು ಆರೋಗ್ಯದಿಂದಿದ್ದಾರೆ.

    108 ವಾಹನದಲ್ಲಿ ಹೆರಿಗೆಯಾಗುವುದು ಜಿಲ್ಲೆಯಲ್ಲಿ ಹೊಸದೇನಲ್ಲವಾದರೂ ಒಂದೇ ದಿನ ಎರಡು ಕಡೆಗಳಲ್ಲಿ ಹೆರಿಗೆಯಾಗಿರುವುದು ವಿಶೇಷವಾಗಿದೆ. ಹಾಳಾದ ರಸ್ತೆಗಳಿಂದಾಗಿ ಗರ್ಭಿಣಿಯರು ಆಸ್ಪತ್ರೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳು ಸಹ ಇದೆ. ಆದರೆ ಈ ಎರಡು ಪ್ರಕರಣಗಳಲ್ಲಿ ಗರ್ಭಿಣಿಯರು ಹೆರಿಗೆ ನೋವು ಕಾಣಿಸಿಕೊಂಡು ಸಹಜವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.

  • ರೋಗಿಯಿಂದಲೇ 108 ವಾಹನ ಜಖಂ

    ರೋಗಿಯಿಂದಲೇ 108 ವಾಹನ ಜಖಂ

    ತುಮಕೂರು: ರೋಗಿಯಿಂದಲೇ 108 ವಾಹನ ಜಖಂ ಆದ ಘಟನೆ ಜಿಲ್ಲಾಸ್ಪತ್ರೆ ಮುಂಭಾಗ ತಡರಾತ್ರಿ ನಡೆದಿದೆ.

    26 ವರ್ಷದ ಗಿರೀಶ್ ತಡರಾತ್ರಿ ಗುಬ್ಬಿ ತಾಲೂಕಿನ ಕೆ.ಜಿ.ಟೆಂಪಲ್ ಬಳಿ ಬೈಕ್‍ನಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನ ಗುಬ್ಬಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. 108 ವಾಹನದಲ್ಲಿ ಗಿರೀಶ್ ಹಾಗೂ ಅವರ ಸ್ನೇಹಿತರಿಬ್ಬರನ್ನ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಗಿರೀಶ್ ಒತ್ತಾಯಿಸಿದ್ದರು. ಇದಕ್ಕೆ 108 ಸಿಬ್ಬಂದಿ ಒಪ್ಪದಿರುವುದಕ್ಕೆ ಗಲಾಟೆ ನಡೆದಿದೆ.

    ಕುಪಿತಗೊಂಡ ಮೂವರು 108 ಸಿಬ್ಬಂದಿಯ ಮುಂದೆಯೇ ವಾಹನ ಜಖಂಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಿರೀಶ್ ಹಾಗು ಸ್ನೇಹಿತರಾದ ರಾಕೇಶ್ ಹಾಗೂ ನಟರಾಜುನನ್ನು ಪೊಲೀಸರು ತಡರಾತ್ರಿಯೇ ವಶಕ್ಕೆ ಪಡೆದಿದ್ದಾರೆ. ಬಳಿಕ ಗಿರೀಶ್‍ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಅಡ್ಡದಾರಿ ಮೂಲಕ ಸರ್ಕಾರದ ದುಡ್ಡು ಹೊಡೆಯುತ್ತಿದೆ ಜಿವಿಕೆ

    ಅಡ್ಡದಾರಿ ಮೂಲಕ ಸರ್ಕಾರದ ದುಡ್ಡು ಹೊಡೆಯುತ್ತಿದೆ ಜಿವಿಕೆ

    – ನಡುರೋಡಲ್ಲಿ ರೋಗಿಗಳ ಶಿಫ್ಟಿಂಗ್
    – ಪಬ್ಲಿಕ್ ಟಿವಿಯಲ್ಲಿ 108 ಆಂಬ್ಯುಲೆನ್ಸ್ ಕರ್ಮಕಾಂಡ

    * ರಕ್ಷಾ ಕಟ್ಟೆಬೆಳಗುಳಿ

    ಬೆಂಗಳೂರು: ಪ್ರಾಣ ರಕ್ಷಣೆಗಾಗಿ ಮೀಸಲಿರೋ 108 ಅಂಬುಲೆನ್ಸ್‍ಗಳು ಪ್ರಾಣ ಭಕ್ಷಕನ ರೀತಿ ಕೆಲಸ ಮಾಡ್ತಾ ಇವೆ. ಸರ್ಕಾರಕ್ಕೆ ಹೆಚ್ಚೆಚ್ಚು ಟ್ರಿಪ್‍ಗಳನ್ನು ತೋರಿಸೋ ನಿಟ್ಟಿನಲ್ಲಿ ರಸ್ತೆ ಮಧ್ಯದಲ್ಲೇ ರೋಗಿಗಳ ಶಿಫ್ಟಿಂಗ್ ನಡೆಯುತ್ತಿದೆ.

    ಹೌದು. ಜನರ ಜೀವ ರಕ್ಷಣೆಕಾಗಿ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸೋ 108 ಆಂಬ್ಯುಲೆನ್ಸ್ ಗಳಲ್ಲಿ ಇತ್ತೀಚೆಗೆ ಶುರುವಾಗಿರೋ ಮತ್ತೊಂದು ಕರ್ಮಕಾಂಡ ಇದು. ರಾಜ್ಯದಲ್ಲಿ ಒಟ್ಟು 717 108 ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಈ ವಾಹನಗಳ ಮೇಲುಸ್ತುವಾರಿ ವಹಿಸಿರೋ ಜಿವಿಕೆ ಸಂಸ್ಥೆ ಸರ್ಕಾರಕ್ಕೆ ಹೆಚ್ಚು ಶೆಡ್ಯೂಲ್‍ಗಳನ್ನು ತೋರಿಸೋಕೆ ಒಂದು ಪೇಷೆಂಟ್‍ನ ಎರಡು 108 ಆಂಬ್ಯುಲೆನ್ಸ್ ಆಸ್ಪತ್ರೆಗೆ ಸಾಗಿಸೋ ಕೆಲಸ ಮಾಡ್ತಿದ್ದು, ರೋಗಿಗಳ ಜೀವದೊಂದಿಗೆ ಆಟವಾಡ್ತಿದ್ದಾರೆ. ಇತ್ತ ಇದೇ ಶಿಫ್ಟಿಂಗ್ ವಿಚಾರದಿಂದ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಸ್ಥಳೀಯರಿಂದ ಥಳಿತಕೊಳಗಾದ ಘಟನೆಗೆಳು ಸಹ ನಡೆದಿವೆ.

    ಶವ ಸಾಗಿಸೋಕ್ಕೆ ತಯಾರಿ: ಈಗಾಗ್ಲೇ 717, 108 ಆಂಬ್ಯುಲೆನ್ಸ್ ಗಳನ್ನು ಮೇಲುಸ್ತುವಾರಿ ಹೊತ್ತಿರೋ ಪರರಾಜ್ಯದ ಜಿವಿಕೆ, ಭ್ರಷ್ಟಾಚಾರ, ಹಾಗೂ ರೊಗಿಗಳ ಬಗೆಗಿನ ನಿರ್ಲಕ್ಷ್ಯಕ್ಕೆ ಹೆಸರಾಗಿರೋ ಜೆವಿಕೆಗೆ ರಾಜ್ಯದ ತಾಲೂಕು ಆಸ್ಪತ್ರೆಗಳ 800 ಆಂಬ್ಯುಲೆನ್ಸ್ ಗಳು ಹಾಗೂ ಮುಕ್ತಿ ವಾಹನದ ಉಸ್ತುವಾರಿಯನ್ನು ನೀಡೋಕೆ ಸರ್ಕಾರ ಚಿಂತನೆ ನಡೆಸಿದೆ. ಹಾಗಾಗಿ ಶವವನ್ನು ಸಹ 108 ಆಂಬ್ಯುಲೆನ್ಸ್ ಗಳಲ್ಲಿ ಸಾಗಿಸುವಂತೆ ಸೂಚನೆ ನೀಡಿದ್ದಾರಂತೆ.

    108 ಆಂಬ್ಯುಲೆನ್ಸ್ ನಲ್ಲಿ ಜಿವಿಕೆ ನಡೆಸುತ್ತಿರೋ ಕರ್ಮಕಾಂಡ ಇಷ್ಟಕ್ಕೆ ಮುಗಿಯೋದಿಲ್ಲ, ದುರಸ್ಥಿತಿಯಲ್ಲಿರೋ, ವಾಹನಗಳ ಬಗ್ಗೆ ಕಂಪ್ಲೇಟ್ ಮಾಡಿದ್ರೂ ಕೇಳೋರಿಲ್ಲ. ಕೆಲವೊಂದು ಬಾರಿ 108 ಆಂಬ್ಯುಲೆನ್ಸ್‍ಗಳಲ್ಲಿ ರೋಗಿಗಳಿದ್ದಾಗ ಕೆಟ್ಟು ನಿಂತು ಪರದಾಡೋ ಪರಿಸ್ಥಿತಿ ಸಿಬ್ಬಂದಿಯದ್ದು.

    https://www.youtube.com/watch?v=x_qQg8Ybbqs