Tag: 10 month old baby

  • ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ರೆಸಿಪಿ

    ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ರೆಸಿಪಿ

    ರೆಸ್ಟೋರೆಂಟ್, ಡಾಬಾಗಳಲ್ಲಿ ಸಿಗುವ ಚಿಕನ್ ಖಾದ್ಯ ತಿಂದವರಿಗೆ ಮನೆಯಲ್ಲಿ ಇದನ್ನ ಹೇಗೆ ಮಾಡೋದು ಅಂತ ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾಗಿ ಇದೀಗ ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ಮಾಡುವ ವಿಧಾನ ನಿಮ್ಮ ಮುಂದಿದೆ. ಸಾಮಾನ್ಯವಾಗಿ ಭಾನುವಾರದ ದಿನ ಬಹುತೇಕರ ಮನೆಯಲ್ಲಿ ಬಾಡುಟದ ಪರಿಮಳ ಇರಲೇಬೇಕು. ಪ್ರತಿವಾರ ಸಾಮಾನ್ಯ ಚಿಕನ್ ರೆಸಿಪಿ ಮಾಡಿ ಬೇಜಾರು ಆಗಿದ್ರೆ ಒಮ್ಮೆ ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮೊಗಲಾಯಿ ಚಿಕನ್ ಗ್ರೇವಿ ರೆಸಿಪಿ ಮಾಡಿ. ಮನೆಗೆ ವಿಶೇಷ ಅತಿಥಿ, ಪಾರ್ಟಿ ಸಂದರ್ಭಗಳಲ್ಲಿ ಈ ರೀತಿಯ ರುಚಿಕರ ಖಾದ್ಯ ಮಾಡಬಹುದು.

    ಬೇಕಾಗುವ ಸಾಮಾಗ್ರಿಗಳು
    * ಚಿಕನ್-1 ಕೆಜಿ
    * ಈರುಳ್ಳಿ- 3 (ಮಧ್ಯಮ ಗಾತ್ರದ್ದು)
    * ಮೊಸರು-1 ಕಪ್
    * ಹಾಲು- 1 ಕಪ್
    * ತುಪ್ಪ- 1 ಕಪ್
    * ಬದಾಮಿ- 50 ಗ್ರಾಂ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟಿ ಸ್ಪೂನ್
    * ಹಸಿ ಮೆಣಸಿನಕಾಯಿ- 3 ರಿಂದ 4
    * ಧನಿಯಾ ಪೌಡರ್- 1 ಟೀ.ಸ್ಪೂನ್
    * ಅಚ್ಚ ಖಾರದ ಪುಡಿ-1/2 ಟೀ ಸ್ಪೂನ್
    * ಅರಿಶಿನ- 1/2 ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು
    * ಕೆಂಪು ಮೆಣಸಿನಕಾಯಿ- 4
    * ಧನಿಯಾ- 1 ಟೀಸ್ಪೂನ್
    * ಜೀರಿಗೆ- 1 ಟೀ ಸ್ಪೂನ್
    * ಕಾಳು ಮೆಣಸು- 1 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ ಕಡಿಮೆ ಉರಿಯಲ್ಲಿ ಬದಾಮಿ, ಕಾಳು ಮೆಣಸು, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಧನಿಯಾ ಹಾಕಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಮಿಕ್ಸಿ ಬೌಲಿಗೆ ಹಾಕಿ ಪೌಡರ್ ಮಾಡಿಕೊಳ್ಳಿ.
    * ಮತ್ತೊಂದು ಪ್ಯಾನ್ ಇಟ್ಟುಕೊಂಡು ಒಂದು ಟೀ ಸ್ಪೂನ್ ತುಪ್ಪ ಹಾಕಿ. ಉದ್ದವಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಹುರಿದು ಎತ್ತಿಟ್ಟುಕೊಳ್ಳಿ.

    * ಇನ್ನೊಂದು ಮಿಕ್ಸಿಂಗ್ ಬೌಲ್ ನಲ್ಲಿ ತೊಳೆದುಕೊಂಡಿರುವ ಚಿಕನ್ ಹಾಕಿ. ಅದಕ್ಕೆ ಅಚ್ಚ ಖಾರದ ಪುಡಿ, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 15 ನಿಮಿಷ ಎತ್ತಿಡಿ.
    * ಈರುಳ್ಳಿ ಫ್ರೈ ಮಾಡಿದ ಪಾತ್ರೆಯಲ್ಲಿ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಚಿಕನ್ ಹಾಕಿ. ತುಪ್ಪದಲ್ಲಿ ಚಿಕನ್ ಚೆನ್ನಾಗಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿ, ರುಬ್ಬಿಕೊಂಡಿರುವ ಮಸಾಲೆಯನ್ನ ಸೇರಿಸಿ.

    * ಮಸಾಲೆ ಸೇರಿಸಿದ ನಂತರ ಕಡಿಮೆ ಉರಿಯಲ್ಲಿ ಚಿಕನ್ ಚೆನ್ನಾಗಿ ಎರಡು ನಿಮಿಷ ಬೇಯಿಸಿ. ತದನಂತರ ಅರ್ಧ ಕಪ್ ಮೊಸರು, ಒಂದು ಕಪ್ ಹಾಲು ಹಾಗೂ ಫ್ರೈ ಮಾಡಿಕೊಂಡಿರುವ ಈರುಳ್ಳಿ ಸೇರಿಸಿ ಚೆನ್ನಾಗಿ ಪ್ಲಿಪ್ ಮಾಡಬೇಕು.
    * ಕೊನೆಗೆ ಒಂದು ಕಪ್ ನೀರು, ಮೂರು ಹಸಿ ಮೆಣಸಿನಕಾಯಿ ಹಾಕಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ್ರೆ ಮುಗಲಾಯಿ ಚಿಕನ್ ರೆಡಿ.

     

  • ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್

    ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್

    ಮಂಗಳೂರು: ಕೋವಿಡ್19 ಪಾಸಿಟಿವ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖವಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಮಗುವಿನ ತಾಯಿ ಹಾಗೂ ಅಜ್ಜಿಯ ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಅವರೂ ಕೂಡ ಇಂದು ಡಿಸ್ಚಾಜ್9 ಆಗಿದ್ದಾರೆ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 12 ಕೊರೊನಾ ಸೋಂಕಿತರಲ್ಲಿ 6 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ವಾರ ಪೂರ್ತಿ ಅಂದರೆ ಏಪ್ರಿಲ್ 5ರಿಂದ 11ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ.

    ಜಿಲ್ಲೆಯ 10 ತಿಂಗಳ ಮಗುವಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲೇ ವಿಶಿಷ್ಟವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕೊರೊನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟ ಮಗುವಿನ ಐಸೋಲೇಶನ್‍ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಗೊಳಿಸಿದ್ದಾರೆ.

    ಮಗುವಿನ ಗ್ರಾಮದಲ್ಲಿ ಯಾರಿಗೂ ಕೊರೊನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಮಗುವಿಗೆ ಕೊರೊನಾ ದೃಟಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಿ, ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಗ್ರಿ ಹಾಗೂ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿತ್ತು.

  • 10 ತಿಂಗಳ ಮಗುವಿಗೆ ಕೊರೊನಾ ಚಿಕಿತ್ಸೆ-ಕಂದನಿಗಾಗಿ ಅಮ್ಮನ ತ್ಯಾಗ

    10 ತಿಂಗಳ ಮಗುವಿಗೆ ಕೊರೊನಾ ಚಿಕಿತ್ಸೆ-ಕಂದನಿಗಾಗಿ ಅಮ್ಮನ ತ್ಯಾಗ

    -ಮನಕಲುಕುತ್ತೆ ಮಂಗಳೂರಿನ ಹಸುಗೂಸಿನ ಕಥೆ

    ಮಂಗಳೂರು: 10 ತಿಂಗಳ ಮಗುವಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂದನಿಗಾಗಿ ಅಮ್ಮನ ತ್ಯಾಗದ ಕಥೆ ಮನಕಲಕುತ್ತದೆ. ಮಗುವಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದರೂ, ಕಂದಮ್ಮನಿಗೆ ಎದೆ ಹಾಲು ನೀಡುವುದನ್ನ ತಾಯಿ ನಿಲ್ಲಿಸಿಲ್ಲ.

    ಕೇರಳಕ್ಕೆ ಹೋದಾಗ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಐಸೋಲೇಷನ್ ವಾರ್ಡ್ ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಮ್ಮನ ಎದೆ ಹಾಲು ಕುಡಿದ್ರೆ ಮಾತ್ರ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ ಕೊರೊನಾ ಸೋಂಕು ತಗುಲಿದ್ದರೂ ತಾಯಿ ಎದೆ ಹಾಲು ಕುಡಿಸುತ್ತಿದ್ದಾರೆ. ವೈದ್ಯರ ತೀವ್ರ ನಿಗಾದ ಜೊತೆಗೆ ಮಗುವಿಗೆ ಅಮ್ಮನ ಆರೈಕೆಯೂ ಅಷ್ಟೇ ಅಗತ್ಯವಾಗಿದೆ. ಹಾಗಾಗಿ ಮಗುವಿಗೆ ಅಮ್ಮನೇ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

    ಅಮ್ಮನ ಆರೈಕೆ ಅಗತ್ಯ ಇರೋದರಿಂದ ತಾಯಿಯನ್ನು ಮಗುವಿನಿಂದ ವೈದ್ಯರು ಬೇರ್ಪಡಿಸಿಲ್ಲ. ಕಂದನ ಜೊತೆಗಿರಲು ಐಸೋಲೇಷನ್ ವಾರ್ಡ್ ನಲ್ಲಿ ತಾಯಿ ಮತ್ತು ಅಜ್ಜಿಗೆ ಅವಕಾಶ ಕಲ್ಪಿಸಲಾಗಿದೆ. ಮಗುವಿನ ಜೊತೆ ತಾಯಿ ಹಾಗೂ ಅಜ್ಜಿಯ ಆರೋಗ್ಯದ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಐಸೋಲೇಷನ್ ವಾರ್ಡ್ ತೆರಳುವಾಗ ಮಗುವಿನ ತಾಯಿ ಮತ್ತು ಅಜ್ಜಿ ವೈದ್ಯಕೀಯ ರಕ್ಷಣಾ ಸಾಮಾಗ್ರಿಗಳು ಅಂದರೆ ಪಿಪಿಇ ಕಿಟ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಮಗು ಹೆಚ್ಚು ತಾಯಿ ಜೊತೆ ಇರಲು ಬಯಸುತ್ತೆ. ತಾಯಿಯ ಬೆಚ್ಚಗೆ ಅಪ್ಪುಗೆಯಲ್ಲಿದ್ದಷ್ಟು ಮಗುವಿನ ಆರೋಗ್ಯ ಸ್ಥಿರವಾಗಿರುತ್ತೆ. ಹಾಗಾಗಿ ತಾಯಿಗೆ ವೈದ್ಯಾಧಿಕಾರಿಗಳು ಹೆಚ್ಚು ಷರತ್ತುಗಳನ್ನು ವಿಧಿಸಿಲ್ಲ.

    ತಾಯಿ ಮತ್ತು ಅಜ್ಜಿಗೆ ಕೊರೊನಾ ಸೋಂಕು ತಗುಲಿಲ್ಲ. ನಿರಂತರವಾಗಿ ಮಗುವಿನ ಸಂಪರ್ಕದಲ್ಲಿ ಇರೋದರಿಂದ ಇಬ್ಬರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಮುದ್ದು ಕಂದಮ್ಮನಿಗಾಗಿ ತಾಯಿಯ ಈ ತ್ಯಾಗ ಮನ ಮಿಡಿಯುತ್ತದೆ.