Tag: ಹೋರಾಟ

  • ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

    ಬಿಸಿಸಿಐ ವಿರುದ್ಧದ ಕಾನೂನು ಸಮರದಲ್ಲಿ ಪಾಕ್‍ಗೆ ಭಾರೀ ಮುಖಭಂಗ

    ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಐಸಿಸಿಯಲ್ಲಿ ದಾಖಲಿಸಿದ್ದ ದೂರಿನಲ್ಲಿ ಪಿಸಿಬಿಗೆ ಸೋಲುಂಟಾಗಿದ್ದು, ಭಾರೀ ಮುಖಭಂಗ ಅನುಭವಿಸಿದೆ.

    ಬಿಸಿಸಿಐ ತಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡದ ಕಾರಣ ತಮಗೆ ಭಾರೀ ನಷ್ಟ ಉಂಟಾಗಿದ್ದು, ಪರಿಣಾಮವಾಗಿ 70 ದಶಲಕ್ಷ ಡಾಲರ್ (ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪಿಸಿಬಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಒಪ್ಪಂದದಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ಪಾಕ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತನ್ನ ವಕೀಲರ ಮೂಲಕ ಐಸಿಸಿ ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿತ್ತು.

    2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ (ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ 6 ಕ್ರಿಕೆಟ್ ಸರಣಿ ನಡೆಯಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸರಣಿ ನಡೆಯದ ಕಾರಣ ನಮಗೆ 70 ದಶಲಕ್ಷ ಡಾಲರ್ ನಷ್ಟವಾಗಿದೆ. ಒಪ್ಪಂದ ಉಲ್ಲಂಘನೆಯಾಗಿರುವ ಕುರಿತು ನಾವು ಐಸಿಸಿಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲೂ ಭಾರತ ಭಾಗವಹಿಸಬೇಕಾಗಿತ್ತು. 2008 ನಂತರ ಬಿಸಿಸಿಐ ಯಾವುದೇ ಕಾರಣ ನೀಡದೆ ನಮ್ಮೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ ಐಸಿಸಿ ನಡೆಸುವ ಎಲ್ಲಾ ಸರಣಿಯಲ್ಲೂ ನಮ್ಮ ವಿರುದ್ಧ ಆಡಿದೆ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ಈ ಹಿಂದೆ ಹೇಳಿದ್ದರು.

    ಪಾಕಿಸ್ತಾನದ ಉಗ್ರಗಾಮಿಗಳು 2008 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತ್ತು. ಇದಾದ ಬಳಿಕ 2012 ರಲ್ಲಿ ಎರಡು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಪಾಕ್ ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಬಳಿಕ ಇಲ್ಲಿಯವರೆಗೆ ಭಾರತ-ಪಾಕ್ ಮಧ್ಯೆ ಯಾವುದೇ ಸರಣಿ ನಡೆದಿಲ್ಲ.

    2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

    ಐಸಿಸಿ ತಿಳಿಸಿರುವ ಪ್ರಕಾರ ಈ ಪ್ರಕರಣವನ್ನ ಇಲ್ಲಿಯೇ ಕೈಬಿಡುವಂತೆ ಪಾಕಿಸ್ತಾನಕ್ಕೆ ತಿಳಿಸಿದ್ದು, ಹೀಗಾಗಿ ಉಭಯ ದೇಶಗಳ ನಡುವೆ ನಡೆಯುತ್ತಿದ್ದ ಕಾನೂನು ಸಮರದಲ್ಲಿ ಬ್ರೇಕ್ ಬಿದ್ದಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಚಿ ಅನಿರುಧ್ ಚೌಧರಿ ಅವರು, ಐಸಿಸಿ ನೀಡಿರುವ ತೀರ್ಮಾನದ ಸಂಪೂರ್ಣ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಪ್ರಕರಣದಲ್ಲಿ ಬಿಸಿಸಿಐ ಪರ ನಿಂತ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

    ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

    ಬೆಂಗಳೂರು: ಬೆಳಗಾವಿಯಲ್ಲಿ ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಬೆಂಬಲ ಬೆಲೆ ನಿಗದಿಗಾಗಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಎಚ್‍ಡಿಕೆ ವಿರುದ್ಧ ದೂರು ದಾಖಲಾಗಿದೆ.

    ಸಿಎಂ ಕುಮಾರಸ್ವಾಮಿ ಅವರು ರೈತ ಮಹಿಳೆ ಜಯಶ್ರೀ ಬಗ್ಗೆ 4 ವರ್ಷದಿಂದ ಎಲ್ಲಿ ಮಲಗಿದ್ದೆ? ಎಂದು ಅವಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನವು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲಿಸಲಾಗಿದೆ.

    ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಐಪಿಸಿ ಸೆಕ್ಷನ್ 504 ಹಾಗೂ 509 ಅಡಿ ಸೂಕ್ತ ತನಿಖೆ ನಡೆಸಿ ಸಿಎಂ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಜಿ-ಐಜಿಪಿ ನೀಲಮಣಿ ಎನ್. ರಾಜುಗೆ ಮನವಿ ಮಾಡಿದ್ದಾರೆ.

    ಕಬ್ಬು ಬೆಳೆಗಾರರ ಹೋರಾಟದ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಕಬ್ಬು ರೈತರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಗಂಟೆಗೆ ಸಭೆ ನಡೆಯಲಿದ್ದು, ಕಬ್ಬು ಬಾಕಿ ಪಾವತಿ ಮತ್ತು ರೈತರ ಇತರೆ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ.

    ಈ ವೇಳೆ ರೈತರ ವಿರುದ್ಧ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ರೈತರು ತರಾಟೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ರೈತರ ಸಭೆ ಮುಗಿದ ಬಳಿಕ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ಸಚಿವ ಜಾರ್ಜ್ ಸೇರಿದಂತೆ ಹಲವು ಸಚಿವರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಕಬ್ಬು ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

    ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

    ಚಿಕ್ಕಮಗಳೂರು: ರಕ್ತಚೆಲ್ಲಿಯಾದರು ದತ್ತಪೀಠವನ್ನ ಹಿಂದೂಗಳ ಪೀಠವಾಗಿಸುತ್ತೇವೆ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇವೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಇಂದು ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮುತಾಲಿಕ್ ರಾಜಕೀಯ ಮುಖಂಡರ ವಿಳಂಬ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.

    ದತ್ತಪೀಠ ವಿವಾದವನ್ನು ಶಾಂತಿಯಿಂದಲೇ ಬಗೆಹರಿಸಬಹುದು. ಆದರೆ ವಿವಾದವನ್ನು ಜೀವಂತವಾಗಿರುವಂತೆ ರಾಜಕಾರಣಿಗಳು, ಬುದ್ಧಿಜೀವಿಗಳು ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದರು. ಇಂದು ದೇವೇಗೌಡ ಅವರ ಪುತ್ರರಾದ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ತಂದೆಯಂತೆ ಇಂದು ದತ್ತಪೀಠ ವಿವಾದವನ್ನ ಬಗೆಹರಿಸಿ ಹಿಂದೂಗಳಿಗೆ ನೀಡಬೇಕೆಂದು ಎಂದು ಮನವಿ ಮಾಡಿದರು.

    ದತ್ತಪೀಠದ ಪ್ರದೇಶದಲ್ಲಿರುವ ನಾಗೇನಹಳ್ಳಿ ಬಳಿರುವ ಬಾಬಾಬುಡನ್ ದರ್ಗಾವನ್ನು ಮುಸ್ಲಿಮರಿಗೆ ಒಪ್ಪಿಸಿ, ಈಗ ಇರುವ ಶ್ರೀ ಗುರು ದತ್ತಾತ್ರೇಯ ಪೀಠವನ್ನು ಹಿಂದೂಗಳಿಗೆ ನೀಡುವ ಮೂಲಕ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬಹುದು. ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳಿಗೆ ದತ್ತಪೀಠದ ವಿವಾದ ಜೀವಂತವಾಗಿರಬೇಕಿದೆ. ಬುದ್ಧಿ ಜೀವಿಗಳ ಕಿತಾಪತಿ ಇರುವವರೆಗೂ ನೀತಿ ನಿಯಮಗಳು, ಬಂಧನಗಳು ಸಾಕಷ್ಟು ಇರುತ್ತದೆ. ಇವುಗಳೆಲ್ಲ ಇದ್ದರು ಕೂಡ ಭಕ್ತರು ಯಾವುದಕ್ಕೂ ಹೆದರದೆ ಹೋರಾಟದಲ್ಲಿ ಭಾಗವಹಿಸಿದ್ದಾರೆ. ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ದತ್ತಪೀಠ ಹಿಂದೂಗಳ ಪೀಠ ಆಗುವವರೆಗೂ ನಮ್ಮ ಹೋರಾಟ ನಿರಂತರ ಎಂದು ಖಡಕ್ ಆಗಿ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲ: ಕೈ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ

    ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲ: ಕೈ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ

    ರಾಮನಗರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವುದು ವಿಧಾನಸಭೆಯಲ್ಲಿ ಮಾತ್ರ ಬೇರೆಲ್ಲೂ ಇಲ್ಲ. ಈ ರಾಜ್ಯ ಸರ್ಕಾರವೇನೂ ನಮ್ಮದಾ? ಇದು ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲಾ ಎಂದು ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಹೇಳಿಕೆ ನೀಡಿದ್ದಾರೆ.

    ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ವಿಚಾರವಾಗಿ ರಾಮನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಎಲ್‍ಸಿ ಸಿ.ಎಂ ಲಿಂಗಪ್ಪ ಮಾಧ್ಯಮದವರ ಜೊತೆ ಮಾತನಾಡುತ್ತಾ ಯಾರು ತೈಲ ಬೆಲೆಯನ್ನ ಹೆಚ್ಚಳ ಮಾಡಿದ್ದಾರೋ ಅವರ ವಿರುದ್ಧ ನಮ್ಮ ಹೋರಾಟ. ತೈಲದ ಬೆಲೆ ಏರಿಕೆಯನ್ನು ಕೇಂದ್ರವೇ ಹಾಕಲಿ, ರಾಜ್ಯವೇ ಹಾಕಲಿ ಯಾರೇ ಹಾಕಿದ್ದರು ತಪ್ಪೇ ಎಂದರು.

    ರಾಜ್ಯದಲ್ಲಿರುವುದು ನಮ್ಮ ಸರ್ಕಾರನಾ ಯಾರು ಹೇಳಿದ್ದು ನಮ್ಮ ಸರ್ಕಾರ ಅಂತಾ? ಸಮ್ಮಿಶ್ರ ಸರ್ಕಾರ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ವಿಧಾನಸಭೆಯಲ್ಲಿ ಮತ್ತು ಕಾಂಗ್ರೆಸ್ ಎಂಎಲ್‍ಎಗಳು ಹಾಗೂ ಜೆಡಿಎಸ್ ಎಂಎಲ್‍ಎಗಳ ಮಧ್ಯೆ ಸಮ್ಮಿಶ್ರವಿದೆ. ಬೇರೆಲ್ಲಿದೆ ಯಾವ ತಾಲ್ಲೂಕಿನಲ್ಲಿದೆ ಕೇಳಲೇಬೇಡಿ. ಈ ರಾಜ್ಯ ಸರ್ಕಾರ ನಮ್ಮದು ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರಿಲ್ಲ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

    ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

    ಕಾಸರಗೋಡು: `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಕನ್ನಡ ಶಾಲೆ ದುಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಈಗ ಕೇರಳದ ಶಾಲೆಯೊಂದರಲ್ಲಿ ಕನ್ನಡ ತರಗತಿಗೆ ಮಲೆಯಾಳಂ ಅಧ್ಯಾಪಕನ ನೇಮಕಾತಿ ಖಂಡಿಸಿ ಉಗ್ರ ಹೋರಾಟ ನಡೆಸಲು ಗಡಿಯಲ್ಲಿರುವ ಭಾಷಾಭಿಮಾನಿಗಳು ತೀರ್ಮಾನಿಸಿದ್ದಾರೆ.

    ಕಾಸರಗೋಡು ಜಿಲ್ಲೆಯ ಉಪ್ಪಳದ ಮಂಗಲ್ಪಾಡಿ ಸರ್ಕಾರಿ ಹೈಸ್ಕೂಲ್(ಕುಕ್ಕಾರು)ನಲ್ಲಿರುವ ಶಾಲೆಯಲ್ಲಿ ಕನ್ನಡ ತರಗತಿಯ ಗಣಿತ ವಿಭಾಗಕ್ಕೆ ಮಲೆಯಾಳಂ ಅಧ್ಯಾಪಕನ ನೇಮಕಾತಿಯ ಮಾಡಲು ಮುಂದಾಗಿತ್ತು. ಬಳಿಕ ಈ ಬಗ್ಗೆ ಮಲೆಯಾಳ ಅಧ್ಯಾಪಕನ ನೇಮಕಾತಿ ಬೇಡ ಎಂದು ಕನ್ನಡ ಭಾಷಾಮಾನಿಗಳು ಹೋರಾಟ ಮಾಡಿದ್ದರು. ಇದನ್ನೂ ಓದಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ

    ಈ ಬಗ್ಗೆ ನಡೆದ ಹೋರಾಟ ಅಷ್ಟೇನು ತೀವ್ರವಾಗಿ ಪರಿಣಮಿಸಿರಲಿಲ್ಲ. ಆದರೆ ಇತ್ತೀಚೆಗೆ `ಸ.ಹಿ.ಪ್ರಾ. ಶಾಲೆ ಕಾಸಗೋಡು’ ಸಿನಿಮಾ ಬಿಡುಗಡೆಗೊಂಡ ನಂತರ ಆ ಸಿನಿಮಾದಲ್ಲಿ ಕನ್ನಡ ಶಾಲೆಯನ್ನು ಉಳಿಸಲು ನಡೆಸಿದ ಹೋರಾಟದ ಪ್ರಭಾವದಿಂದ ಮಲೆಯಾಳಂ ಪ್ರಧ್ಯಾಪಕನ ನೇಮಕಾತಿಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಪೋಷಕರು ಶಿಕ್ಷಕರ ಸಂಘ(ಪಿಟಿಎ) ಹಾಗೂ ಕನ್ನಡ ಭಾಷಾಭಿಮಾನಿಗಳ ಸಭೆಯಲ್ಲಿ ತೀರ್ಮಾನ ನಡೆಸಲಾಗಿದೆ.

    ಈ ಸಂಬಂಧ ಮಂಗಲ್ಪಾಡಿ ಶಾಲಾ ಪರಿಸರದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸಮಸ್ಯೆ ಇತ್ಯರ್ಥವಾಗುವ ತನಕ ಹೋರಾಟ ತೀವ್ರವಾಗಿ ನಡೆಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಓಣಂ ರಜೆ ಮುಗಿದ ನಂತರ ಮಲೆಯಾಳಂ ಅಧ್ಯಾಪಕ ಶಾಲೆಗೆ ಬಂದರೆ ವಿದ್ಯಾರ್ಥಿಗಳ ಪೋಷಕರ ಮೂಲಕ ದಿಗ್ಬಂಧನ ನಡಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಅಧ್ಯಾಪಕ ಶಾಲಿ ಮಾಸ್ಟರ್ ಸಮಸ್ಯೆಗಳ ಬಗ್ಗೆ ಕುರಿತು ವಿವರಿಸಿದ್ದರು.

    ಈ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕಾಸರಗೋಡು, ಶಾಲಾ ಮಾತೃ ಸಮಿತಿಯ ಯಶೋಧ ಶೆಟ್ಟಿ, ಸಾಮಾಜಿಕ ಮುಂದಾಳು ದಿನೆಶ್ ಚೆರುಗೋಳಿ, ಚಂದ್ರ ಕುಬಣುರು ಅವರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಸಭೆಯಲ್ಲಿ ಪಿಟಿಎ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಕೈ ಮುಗಿದು ಕೇಳ್ಕೊತೀನಿ, ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ: ಡಿಕೆಶಿ

    ಬೆಂಗಳೂರು: ಮಹದಾಯಿಗಾಗಿ ಪಕ್ಷಭೇದ ಮರೆತು ಹೋರಾಡೋಣ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಪಕ್ಷಗಳ ಮುಖಂಡರುಗಳಲ್ಲಿ ಕೈ ಮುಗಿದು ಕೇಳಿಕೊಂಡರು.

    ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಹಿತ ಕಾಪಾಡಲು, ನಾವು ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧರಿದ್ದು, ಮಹದಾಯಿಗಾಗಿ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ಕುರಿತು ಎಲ್ಲಾ ಪಕ್ಷದ ಮುಖಂಡರಿಗೆ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಹಾದಾಯಿಗಾಗಿ ಎಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡೋಣ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕಾಗಿದೆ. ಒಂದು ತೊಟ್ಟು ನೀರನ್ನು ಉಳಿಸಿಕೊಳ್ಳಲು, ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಐ-ತೀರ್ಪಿನಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ವಾರದಲ್ಲಿ ಹಿರಿಯ ಅಧಿಕಾರಿಗಳ ತಂಡದ ಜೊತೆ ಮಹಾದಾಯಿಗೆ ಭೇಟಿ ಮಾಡಿ ಪರಿಶೀಲನೆ ನಡೆಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಬೇರೆ ರಾಜ್ಯದ ನಡೆ ನಮಗೆ ಬೇಡದ ವಿಚಾರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹದಾಯಿ ನ್ಯಾಯಾಧೀಕರಣದ ಐತೀರ್ಪಿಗೆ ಗೋವಾ-ಮಹಾರಾಷ್ಟ್ರ ವಿರೋಧ

    ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಹೋಗುತ್ತೀರಾ ಎಂದು ಪ್ರಶ್ನಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡದೇ ಪ್ರಶ್ನೆ ಕೇಳುತ್ತಲೇ ಸ್ಥಳದಿಂದ ತರಾತುರಿಯಲ್ಲಿ ಸಚಿವರು ಹೊರಟು ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಬದುಕಿದ್ದೇನೆಂದು ತಿಳಿಸಲು 3 ವರ್ಷಗಳಿಂದ ಹೋರಾಡುತ್ತಿದ್ದಾನೆ ರೈತ!

    ಮಂಡ್ಯ: ತಾನು ಬದುಕಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಲು ರೈತರೊಬ್ಬರು ಕಳೆದ ಮೂರು ವರ್ಷಗಳಿಂದ ಹರಸಾಹಸ ಪಡುತ್ತಿರುವ ಶೋಚನಿಯ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ದಾಖಲೆಗಳಲ್ಲಿ ಮೃತಪಟ್ಟು ನಿಜ ಜೀವನದಲ್ಲಿ ಬದುಕಿರುವ ರೈತನಾಗಿದ್ದಾರೆ. ಸರ್ಕಾರಿ ಅಧಿಕಾರಿಯ ಬೇಜವಾಬ್ದಾರಿತನದಿಂದ ಬದುಕಿರುವಾಗಲೇ ರೈತನಿಗೆ ಮರಣ ಪತ್ರ ನೀಡಿ, ರೈತನ ಬದುಕಿಗೆ  ಕೊಳ್ಳಿ ಇಟ್ಟಿದ್ದಾರೆ. ಹೀಗಾಗಿ ರಾಮೇಗೌಡರವರು ನಿಜವಾಗಿಯೂ ಸತ್ತೇ ಹೋಗಿದ್ದಾರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಿ, ಮತದಾರರ ಪಟ್ಟಿಯಿಂದಲೂ ಹೆಸರನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಮತ್ತು ಅಧಿಕೃತವಾಗಿ ವ್ಯವಹಾರ ನಡೆಸಲು ಸಾಧ್ಯವಾಗದೇ ರೈತ ಕಂಗಾಲಾಗಿ ಹೋಗಿದ್ದಾರೆ.

    ತನಗಾಗುತ್ತಿರುವ ಕಷ್ಟವನ್ನು ಪರಿಹರಿಸಿಕೊಡಿ ಎಂದು ಸತತ ಮೂರು ವರ್ಷಗಳಿಂದಲೂ ರಾಮೇಗೌಡ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನೀನು ಈಗಾಗಲೇ ಸತ್ತು ಹೋಗಿದ್ದೀಯ, ಇನ್ನೇನು ಸರಿಪಡಿಸೋದು ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ತೀವ್ರವಾಗಿ ಮನನೊಂದ ಅವರು ದಾಖಲೆಗಳಲ್ಲಿ ಮಾತ್ರ ಸತ್ತಿರುವ ನಾನು ನಿಜವಾಗಿಯೂ ಸತ್ತೇ ಹೋಗುತ್ತೇನೆ ಎಂದು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

    ಆತ್ಮಹತ್ಯೆಗೆ ಯತ್ನಸಿದ ರಾಮೇಗೌಡರವರನ್ನು ಕುಟುಂಬಸ್ಥರು ಕಾಪಾಡಿಕೊಳ್ಳುವಲ್ಲಿ ಸಫಲರಾಗಿದರು. ಆದರೆ ಇನ್ನಾದರೂ ಸರ್ಕಾರಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಮಾತನಾಡದೇ, ಆಗಿರುವ ತಪ್ಪನ್ನು ಸರಿಪಡಿಸಕೊಡಬೇಕೆಂದು ಕುಟುಂಬಸ್ಥರು ಮನವಿಮಾಡಿಕೊಂಡಿದ್ದಾರೆ.

    ಏನದು ಘಟನೆ?
    2015ರಲ್ಲಿ ರಾಮೇಗೌಡರ ತಂದೆ ತಿಮ್ಮೇಗೌಡರು ಮೃತಪಟ್ಟ ಹಿನ್ನೆಲೆಯಲ್ಲಿ ಅರಕೆರೆ ಗ್ರಾಮದ ನಾಡಕಚೇರಿಯಲ್ಲಿ ಅವರು ಮರಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಲೇಜ್ ಅಕೌಂಟೆಂಟ್ ಲಿಂಗಪ್ಪಾಜಿ ಎಂಬವರ ಬೇಜವಾಬ್ದಾರಿತನದಿಂದಾಗಿ ಇಬ್ಬರ ಹೆಸರಲ್ಲೂ ಮರಣಪತ್ರ ನೋಂದಣಿಯಾಗಿದೆ. ಖುದ್ದು ತಲಶೀಲ್ದಾರರೇ ಸಹಿ ಹಾಕಿದ ಮರಣಪತ್ರಗಳನ್ನು ನಾಡಕಚೇರಿಯಿಂದ ರೈತ ಪಡೆದುಕೊಂಡು, ಆಘಾತಕ್ಕೆ ಒಳಗಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತ ಸ್ವತಂತ್ರವಾಗೋ 60 ದಿನಗಳ ಹಿಂದಿನ ಥ್ರಿಲ್ಲಿಂಗ್ ಕಹಾನಿ!

    ಭಾರತ ಸ್ವತಂತ್ರವಾಗೋ 60 ದಿನಗಳ ಹಿಂದಿನ ಥ್ರಿಲ್ಲಿಂಗ್ ಕಹಾನಿ!

    1947ರ ಜೂನ್ ತಿಂಗಳು ದೆಹಲಿ ಎಂದಿನಂತಿರಲಿಲ್ಲ. ತಾಪದಿಂದ ಸುಡುತ್ತಿದ್ದ ರಾಜಧಾನಿ ದೆಹಲಿ ರಾಜಕೀಯ ತಾಪದಲ್ಲಿ ಬೆಂದು ಹೋಗಿತ್ತು. ಪಂಜಾಬ್ ಹಾಗೂ ಬಂಗಾಳದಲ್ಲಿ ಹೊತ್ತಿಕೊಂಡ ದಂಗೆಯ ಬೆಂಕಿಯ ಧಗೆ ದೆಹಲಿಯನ್ನೂ ತಲುಪಿ ಬಿಟ್ಟಿತ್ತು. ರೈಸಿನಾ ಹಿಲ್ಸ್ನ ಹವಾನಿಯಂತ್ರಿತ ಕೋಣೆಯೊಂದ್ರಲ್ಲಿ ಕುಳಿತ ಮೌಂಟ್ ಬ್ಯಾಟನ್ ಗೆ ಈ ಬಿಸಿ ತಟ್ತಾ ಇತ್ತು. ದೇಶದ ಸ್ವಾತಂತ್ರ್ಯ ಹಾಗೂ ಯಾವ ರೀತಿ ದೇಶವನ್ನು ಇಬ್ಭಾಗಿಸಬೇಕು ಅನ್ನೋದಕ್ಕೆ ಕರೆಯಲಾಗಿದ್ದ ಸಭೆಯಲ್ಲೂ ಇದರ ಪರಿಣಾಮ ಚೆನ್ನಾಗೇ ತಟ್ಟಿತ್ತು. ಈ ಮೀಟಿಂಗ್ ನಲ್ಲಿ ಸರ್ದಾರ್ ಪಟೇಲರ್ ಹಾಗೂ ಜಿನ್ನಾ ನಡುವೆ ತೀವ್ರತೆರನಾದ ಚರ್ಚೆ ಆಯ್ತು. ಯಾರಿಗೂ ಒಂದು ನಿರ್ಧಾರಕ್ಕೆ ಬರೋದಕ್ಕೆ ಸಾಧ್ಯಾನೇ ಆಗ್ಲಿಲ್ಲ. ಹೀಗಾಗಿ, ಜೂನ್ ತಿಂಗಳ ಮೂರನೇ ವಾರದಲ್ಲಿ ಮತ್ತೆ ಮೌಂಟ್ ಬ್ಯಾಟನ್ ಮೀಟಿಂಗ್ ಕರೆದಿದ್ರು.

    ಆದ್ರೆ ವಿಚಿತ್ರ ಅನ್ನುವಂತೆ ಆ ಮೀಟಿಂಗ್ ನಲ್ಲಿ ಮೊಹಮ್ಮದ್ ಆಲಿ ಜಿನ್ನಾ ತುಟಿಕ್ ಪಿಟಿಕ್ ಅನ್ನದೆ ತಮ್ಮಲ್ಲಿದ್ದ ಪೆನ್ ತೆಗೆದುಕೊಂಡು ಖಾಲಿ ಹಾಳೆಯ ಮೇಲೆ ಯಾವುದೋ ಚಿತ್ರ ಬರೀತಾ ಕೂತುಬಿಟ್ಟಿದ್ರು. ಅಂದ ಹಾಗೆ ಈ ಜಿನ್ನಾ ದಾದಾಬಾಯಿ ನವರೋಜಿ, ಗೋಖಲೆಯಂಥವ್ರ ಪ್ರಭಾವಕ್ಕೆ ಒಳಗಾಗಿದ್ದವರು. ಹಿಂದೂ ಮುಸ್ಲಿಂ ಐಕ್ಯತೆ ಮೇರೆಗೆ ಭಾರತ ಸ್ವಾತಂತ್ರ್ಯ ಗಳಿಸೋ ನಿಟ್ಟಿನಲ್ಲಿ ಶ್ರಮಿಸ್ತಿದ್ದ ವ್ಯಕ್ತಿ. ಆದ್ರೆ, 1920ರ ಬಳಿಕ ಮಹಾತ್ಮಾ ಗಾಂಧಿಯವ್ರು ಕಾಂಗ್ರೆಸ್ ನ ಅದ್ವಿತೀಯ ನಾಯಕರಾದ ಬಳಿಕ ಜಿನ್ನಾರ ಧೋರಣೆ ಸಂಪೂರ್ಣವಾಗಿ ಬದಲಾಗಿಹೋಗಿತ್ತು.

    ಇಂಥಾ ಜಿನ್ನಾ ಆ ದಿನ ಮೀಟಿಂಗ್ ನಲ್ಲಿ ಯಾರ ಬ್ರಿಟೀಷ್ ಸರ್ಕಾರ, ಕಾಂಗ್ರೆಸ್ ಹೀಗೆ ಯಾರ ಮಾತನ್ನೂ ಕೇಳೋ ಸ್ಥಿತಿಯಲ್ಲೇ ಇರ್ಲಿಲ್ಲ. ಸಭೆಯಲ್ಲಿ ಕುಳಿತಷ್ಟೂ ಹೊತ್ತು ಹಾಳೆಯೊಂದರಲ್ಲಿ ಅದೇನೇನೋ ಗೀಚ್ತಾ ಕೂತುಬಿಟ್ಟಿದ್ರು. ಆ ಸಭೆಯ ಬಳಿಕ ಮೌಂಟ್ ಬ್ಯಾಟನ್ ರ ಮಾಧ್ಯಮ ಸಲಹೆಗಾರ ಕ್ಯಾಂಬಲ್ ಜಾನ್ಸನ್ ರಿಗೆ ಆ ಹಾಳೆ ಸಿಕ್ತು. ಅದನ್ನು ನೋಡಿ ಒಂದು ಕ್ಷಣ ಕ್ಯಾಂಬಲ್ ಜಾನ್ಸನ್ ದಿಘ್ಭ್ರಾಂತರಾಗಿಬಿಟ್ಟಿದ್ರು. ಈ ಕಾಗದದಲ್ಲಿ ಒಂದು ರೀತಿಯ ಶಕ್ತಿ ಹಾಗೂ ಛಲ ಅಭಿವ್ಯಕ್ತವಾಗಿರೋದು ಗಮನಕ್ಕೆ ಬಂದಿತ್ತು.

    ಜೂನ್ ತಿಂಗಳ ಮೂರನೇ ವಾರದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾದ್ರೂ ಕಾಶ್ಮೀರ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೌಂಟ್ ಬ್ಯಾಟನ್ ರ ಚಿಂತೆ ಮಾತ್ರ ನಿವಾರಣೆಯಾಗಿರ್ಲಿಲ್ಲ. ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳ ನಡುವಿನ ಅಶಾಂತಿಗೆ ಕಾರಣವಾಗಬಹುದು ಅನ್ನೋದನ್ನ ಮೌಂಟ್ ಬ್ಯಾಟನ್ ಅಂದೇ ಅರಿತುಬಿಟ್ಟಿದ್ರು. ಹೀಗಾಗಿ ಇದನ್ನು ಇಲ್ಲೇ ಪರಿಹರಿಸಬೇಕು ಅನ್ನೋ ನಿರ್ಧಾರಕ್ಕೆ ಬಂದ ಮೌಂಟ್ ಬ್ಯಾಟನ್ ಕಾಶ್ಮೀರದ ರಾಜ ಹರಿ ಸಿಂಗ್ ಅವ್ರನ್ನ ಭೇಟಿಯಾಗೋಕೆ ನಿರ್ಧರಿಸ್ತಾರೆ. ಆದ್ರೆ, ಭೇಟಿಗೆ ನಿಗದಿಯಾಗಿದ್ದ ದಿನದಂದೇ ರಾಜ ಹರಿಸಿಂಗ್ ತಮ್ಮ ಆರೋಗ್ಯ ಕೆಟ್ಟು ಹೋಗಿದೆ. ಹಾಗಾಗಿ ಭೇಟಿಯಾಗೋದಕ್ಕೆ ಸಾಧ್ಯ ಇಲ್ಲ ಅಂತಾ ಹೇಳಿ ಕಳಿಸ್ತಾರೆ.

    ಇತ್ತ ಮಹಾತ್ಮಾ ಗಾಂದೀಜಿ ಹಾಗೂ ಜವಹರಲಾಲ್ ನೆಹರೂ ಕೂಡಾ ಕಾಶ್ಮೀರಕ್ಕೆ ಹೋಗೋಕೆ ಉತ್ಸುಕರಾಗಿದ್ರು. ಕಾಶ್ಮೀರದ ಭವಿಷ್ಯವೇನಿದ್ರೂ ಭಾರತದ ಜೊತೆಗೇ ಅನ್ನೋದನ್ನ ಮನವರಿಕೆ ಮಾಡಿಕೊಡೋಕೆ ಗಾಂಧಿ ಹಾಗೂ ನೆಹರೂ ಬಯಸಿದ್ರು. ಆದ್ರೆ, ಇತ್ತ ಮೊಹಮ್ಮದ್ ಆಲಿ ಜಿನ್ನಾ ಮಾತ್ರ ಖಾಲಿಯಾಗ್ತಿರೋ ತನ್ನ ಸಿಗಾರ್ ನಿಂದ ಬರೋ ಹೊಗೆಯಂತೆ ವಿಲ ವಿಲ ಒದ್ದಾಡ್ತಿದ್ರು. ಮೌಂಟ್ ಬ್ಯಾಟನ್ ಗೆ ಜಿನ್ನಾರ ಮನಸ್ಥಿತಿಯನ್ನು ಅರಿಯೋದು ಬಹಳ ದುಸ್ತರ ಅಂತಾ ಅನಿಸಿಬಿಟ್ಟಿತ್ತು.

    ಇಂಥಾ ಸಂದರ್ಭದಲ್ಲೇ ಜೂನ್ 27ಕ್ಕೆ ರ್ಯಾಡ್ ಕ್ಲಿಫ್ ಅನ್ನೋ ಬ್ರಿಟೀಷ್ ಅಧಿಕಾರಿಗೆ ಭಾರತ ಹಾಗೂ ಪಾಕಿಸ್ತಾನವನ್ನು ವಿಭಜಿಸೋ ಜವಾಬ್ದಾರಿ ಕೊಡಲಾಯ್ತು. ಭಾರತದ ಬಗ್ಗೆ, ಭಾರತದ ಇತಿಹಾಸದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ಅಷ್ಟೇ ಯಾಕೆ ಭಾರತದ ಮೇಲೆ ಕಾಲೂ ಇಡದಿದ್ದ ವ್ಯಕ್ತಿಯ ಹೆಗಲಿಗೆ ದೇಶ ಇಬ್ಭಾಗ ಮಾಡೋ ಜವಾಬ್ದಾರಿ..ಎಂಥಾ ವಿಪರ್ಯಾಸ ಅಲ್ವಾ..?

    ಅಂದು ರ್ಯಾಡ್ ಕ್ಲಿಫ್ ಮುಂದೆ ಭಾರತದ ನಕ್ಷೆಯನ್ನು ತೆರೆದಿಟ್ಟಾಗ ಅವ್ರೂ ಒಂದು ಕ್ಷಣ ನಿಬ್ಬೆರಗಾಗಿದ್ರು. ಒಬ್ಬ ಬ್ರಿಟೀಷ್ ಅಧಿಕಾರಿಯ ಕೈಯ್ಯಲ್ಲಿ 9 ಕೋಟಿ ಜನರ ಹಣೆಬರಹ ನಿರ್ಧಾರ ಆಗೋದಿತ್ತು. ಹಿಂದೂಗಳ ಸಂಖ್ಯೆ ಹಾಗೂ ಮುಸಲ್ಮಾನರ ಸಂಖ್ಯೆ ಯಾವ ಭಾಗದಲ್ಲಿ ಎಷ್ಟಿದೆ ಅಂತಾ ನೋಡಿಕೊಂಡು ವಿಭಜನೆ ಮಾಡೋದಕ್ಕೆ ರ್ಯಾಡ್ ಕ್ಲಿಫ್ಗೆ ಸೂಚಿಸಲಾಯ್ತು. ಅದೇ ರೀತಿ ರ್ಯಾಡ್ ಕ್ಲಿಫ್ ಭಾರತ ಹಾಗೂ ಪಾಕಿಸ್ತಾನವನ್ನು ವಿಭಜನೆ ಮಾಡೇಬಿಟ್ಟಿದ್ರು. ಜುಲೈ 4 ರಂದು ಲಂಡನ್ ನಲ್ಲಿ ಸಿಕ್ಕಾಪಟ್ಟೆ ಮಳೆ ಸುರೀತಾ ಇತ್ತು. ಇತ್ತ ದೆಹಲಿಯಲ್ಲಿ ಸೂರ್ಯ ನೆತ್ತಿ ಸುಡ್ತಾ ಇದ್ದ. ಅದೇ ದಿನ ಗಾಂಧಿಜಿ ಮೌಂಟ್ ಬ್ಯಾಟನ್ ರನ್ನ ವೈಸ್ ರಾಯ್ ಹೌಸ್ ನಲ್ಲಿ ಭೇಟಿಯಾಗ್ತಾರೆ. ಕಾಂಗ್ರೆಸ್ ಕಡೆಯಿಂದ ದೇಶದ ಮೊದಲ ಗವರ್ನರ್ ಜನರಲ್ ಆಗುವ ಆಹ್ವಾನವನ್ನೂ ಕೊಟ್ರು. ಇದ್ರ ಜೊತೆಗೆ ವೈಸ್ ರಾಯ್ ಹೌಸ್ ನಿಂದ ದೆಹಲಿಯ ಯಾವ್ದಾದ್ರೂ ಬಂಗಲೆಗೆ ಶಿಫ್ಟ್ ಆಗುವಂತೆ ಹೇಳಿದ್ರು. ವೈಸ್ ರಾಯ್ ಹೌಸನ್ನ ಆಸ್ಪತ್ರೆಯಾಗಿ ಪರಿವರ್ತಿಸೋ ಇರಾದೆಯನ್ನು ವ್ಯಕ್ತಪಡಿಸಿದ್ರು. ಆದ್ರೆ, ಮೌಂಟ್ ಬ್ಯಾಟನ್ ಈ ಪ್ರಸ್ತಾಪಕ್ಕೆ ಏನೂ ಹೇಳದೇ ನಕ್ಕು ಸುಮ್ಮನಾದ್ರು.

    ಆಗಿನ್ನೂ, ರ್ಯಾಡ್ ಕ್ಲಿಫ್ ವಿಭಜನೆಯಾಗೋ ದೇಶದ ನಕ್ಷೆಯನ್ನು ಕೈಯ್ಯಲ್ಲಿ ಹಿಡಿದು ಬಂದಿದ್ದರಷ್ಟೇ. ಆಗ ಇಡೀ ದೇಶದ ಜನ ಬಹಳ ಆತಂಕದಲ್ಲಿದ್ರು. ಆಗ, ಜನ ದಂಗೆ ಏಳೋದನ್ನ ತಪ್ಪಿಸಿಕೊಳ್ಳಬೇಕು ಅಂದ್ರೆ ಅದು ಮಹಾತ್ಮಾ ಗಾಂಧಿಯಿಂದ ಮಾತ್ರ ಸಾಧ್ಯ ಅನ್ನೋದನ್ನ ಅರಿತ ಮೌಂಟ್ ಬ್ಯಾಟನ್ ತಕ್ಷಣವೇ ಗಾಂಧಿಯವ್ರ ಭೇಟಿಗೆ ಕಲ್ಕತ್ತೆಗೆ ಬರ್ತಾರೆ. ಪಂಜಾಬ್ ನಲ್ಲಿ ಅದಾಗ್ಲೇ ಎದ್ದ ದಂಗೆಯನ್ನು ನಿಭಾಯಿಸುವಲ್ಲಿ ಮೌಂಟ್ ಬ್ಯಾಟನ್ ಥಂಡಾ ಹೊಡೆದು ಹೋಗಿದ್ರು. ಹೀಗಾಗಿ, ಕಲ್ಕತ್ತೆಯಲ್ಲಿ ಏಳಬಹುದಾದ ಆಂತರಿಕ ಕ್ಷೋಭೆಯನ್ನು ನಿಯಂತ್ರಣ ಮಾಡೋಕೆ ಗಾಂಧೀಜಿಯ ಸಹಾಯ ಯಾಚಿಸಿದ್ರು ಬ್ಯಾಟನ್. ಅಷ್ಟರಲ್ಲಿ ಮೌಂಟ್ ಬ್ಯಾಟನ್ ಭಾರತದ ಹಾಗೂ ಜಿನ್ನಾ ಪಾಕಿಸ್ತಾನದ ಗವರ್ನರ್ ಜನರಲ್ ಗಳು ಅನ್ನೋ ತೀರ್ಮಾನಕ್ಕೆ ಬರಲಾಯ್ತು.

    ಅಂದು ಜುಲೈ 15ನೇ ತಾರೀಕು. ಭಾರತದ ಸ್ವಾತಂತ್ರ್ಯ ಸಿಗೋ 30 ದಿನಗಳ ಮೊದಲಿನ ಘಟನೆ. ಬ್ರಿಟೀಷರು ಭಾರತದ ಸ್ವಾತಂತ್ರ್ಯ ಕುರಿತಂತೆ ತಮ್ಮ ಸಮ್ಮತಿ ಸೂಚಿಸಿದ್ರು. ಮೌಂಟ್ ಬ್ಯಾಟನ್ ಭಾರತ ಹಾಗೂ ಪಾಕಿಸ್ತಾನದ ವಿಭಜನೆ ಹಾಗೂ ಸ್ವಾತಂತ್ರ್ಯಕ್ಕಾಗಿ ತಮ್ಮ ಒಪ್ಪಿಗೆ ಸೂಚಿಸಿದ್ರೇನೋ ನಿಜ. ಆದ್ರೆ, ಸ್ವಾತಂತ್ರ್ಯದ ಸಮಯ ಹತ್ತಿರ ಬರ್ತಾ ಇದ್ದಂತೆ ಅವರೆದೆ ಒಂದೇ ಸಮನೆ ಢವ ಢವ ಅಂತಾ ಜೋರಾಗಿ ಹೊಡೆದುಕೊಳ್ಳೋದಕ್ಕೆ ಶುರುವಾಗಿಬಿಟ್ಟಿತ್ತು. ಅದಾಗ್ಲೇ ಹಿಂದೂ ಮುಸಲ್ಮಾನರ ನಡುವೆ ಒಳ ಜಗಳಗಳು ಆರಂಭವಾಗಿಬಿಟ್ಟಿತ್ತು. ಬೇಗೆ ಬೇಗ ತಮ್ಮ ಕೆಲಸ ಮುಗಿಸಿದ್ರೆ ದಂಗೆ ಕಮ್ಮಿಯಾಗಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದ ಮೌಂಟ್ ಬ್ಯಾಟನ್ ರಿಗೆ ಈ ಸಂದರ್ಭ ಒಂದು ರೀತಿಯಲ್ಲಿ ಮರ್ಮಾಘಾತ ಕೊಟ್ಟಿತ್ತು.

    ಹಿಂದುಸ್ತಾನದಲ್ಲಿ ಅಕ್ಷರಶಃ ಜನ ರಕ್ತಕೂಪದಲ್ಲಿ ಕೂತಿದ್ರು. ಸಾವಿರಾರು ಜನ ಪ್ರಾಣ ಕಳೆದುಕೊಂಡ್ರು. ಆದ್ರೆ, ಬ್ರಿಟೀಷ್ ಅಧಿಕಾರಿಗಳಿಗೆ ಜನ್ರ ನೋವು, ಚೀತ್ಕಾರ, ಕಣ್ಣೀರು ಏನೂ ಕಾಣಿಸ್ಲೇ ಇಲ್ಲ. ಕಿವಿಯೂ ಕೇಳದಂತೆ, ಕಂಡೂ ಕಾಣದಂತಿದ್ದ ಅವರ ಹೃದಯ ಕಲ್ಲಿನಂತಾಗಿತ್ತು. ಕ್ಯಾಲೆಂಡರ್ ನಲ್ಲಿ ಒಂದೊಂದೇ ತಾರೀಕು ಕಳೀತಾ ಇತ್ತು. ಆಗಸ್ಟ್ ತಿಂಗಳ 1, 2, 3..ಹೀಗೆ ದಿನಗಳು ಉರುಳ್ತಾ ಇದ್ದಂತೆ ಮೌಂಟ್ ಬ್ಯಾಟನ್ ರ ಹಣೆಯ ಮೇಲೆ ಆತಂಕದ ರೇಖೆಗಳು ಮೂಡೋದಕ್ಕೆ ಶುರುವಾಯ್ತು. ಅದಾಗ್ಲೇ ತಮ್ಮ ಲಾಂಛನಗಳು ಎಲ್ಲೆಲ್ಲಿ ಇವೆಯೋ ಅದನ್ನೆಲ್ಲಾ ತೆಗೆದು ಹಾಕುವ ಕಾರ್ಯದಲ್ಲಿ ಬ್ರಿಟೀಷ್ ಅಧಿಕಾರಿಗಳ ಸೇವಕರು ತೊಡಗಿಕೊಂಡಿದ್ರು. ಅಷ್ಟೊತ್ತಿಗಾಗ್ಲೇ ದೇಶ ವಿಭಜನೆಯ ನಕ್ಷೆಯ ಜೊತೆಗೆ ಜನರ ಜಮೀನುಗಳನ್ನು, ಆಸ್ತಿಪಾಸ್ತಿಗಳನ್ನು ಇಬ್ಭಾಗ ಮಾಡೋ ಕೆಲಸದಲ್ಲಿ ಬ್ರಿಟೀಷ್ ಅಧಿಕಾರಿ ರೆಡ್ ಕ್ಲಿಫ್ ನಿರತರಾಗಿದ್ರು. ಯಾವುದೋ ಕಟುಕ ಪ್ರಾಣಿ ಬಲಿ ಕೊಡುವಂತೆ ರೆಡ್ ಕ್ಲಿಫ್ ದೇಶ ಒಡೆಯೋ ಕೆಲಸವನ್ನು ನಿರ್ದಾಕ್ಷಿಣ್ಯವಾಗಿ ಮಾಡಿ ಬಿಟ್ಟಿದ್ರು. ಚೌಧರಿ ಮಹಮ್ಮದ್ ಅಲಿ, ಎಚ್ ಎಂ ಪಟೇಲರಿಗೆ ಜನರಿಗೆ ಸಂಬಂಧಿಸಿದ ಆಸ್ತಿ ಬಟವಾಡೆ ಮಾಡೋ ಹೊಣೆಗಾರಿಕೆ ಕೊಡಲಾಯ್ತು. ಈ ಕೆಲಸ ಅಷ್ಟು ಸುಲಭ ಖಂಡಿತಾ ಆಗಿರ್ಲಿಲ್ಲ. ಹೀಗಾಗಿ ಇಬ್ಬರೂ ಕೂತು ಸರ್ದಾರ್ ಪಟೇಲರ ಕೋಣೆಯಲ್ಲಿ ಕುಳಿತು ಆಸ್ತಿ ಪತ್ರಗಳನ್ನಿಟ್ಟು ತಲೆ ಮೇಲೆ ಕೈ ಹೊತ್ತು ಕೂತ್ರು.

    ಕೊನೆಗೂ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ದಿನಗಳು ಹತ್ತಿರ ಬಂತು. 80 ಶೇಕಡಾ ಭಾರತ ಹಾಗೂ 20 ಶೇಕಡಾ ಪಾಕಿಸ್ತಾನಕ್ಕೆ ಕಳುಹಿಸುವ ಎಲ್ಲಾ ದಾಖಲೆ ಪತ್ರಗಳು ತಯಾರಾಯ್ತು. ಕೊನೆಗೂ ಆಸ್ತಿ ಪಾಸ್ತಿಗಳನ್ನು ಭಾಗ ಮಾಡುವಲ್ಲಿ ಒಂದು ತಾರ್ಕಿಕ ಅಂತ್ಯಕ್ಕೂ ಬರಲಾಯ್ತು. ಆದ್ರೆ, ಈ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿಯಿಂದ ಮಾಡಿದ ಕುದುರೆ ರಥವನ್ನು ಎರಡು ಭಾಗ ಮಾಡೋ ಕುರಿತಾಗಿ ವಾಗ್ವಾದ ಏಳ್ತು. ಪ್ರತಿಯೊಂದು ವಸ್ತುಗಳಿಗಾಗಿ ದೊಡ್ಡ ದೊಡ್ಡ ಜಗಳಗಳೇ ನಡೀತಿತ್ತು. ಲಾಹೋರ್ ನಲ್ಲಿದ್ದ ಮಾನಸಿಕ ರೋಗಿಗಳ ಆಸ್ಪತ್ರೆಯನ್ನು ಪಾಕಿಸ್ತಾನಕ್ಕೆ ಸೇರಿಸ್ಬೇಕಾ..? ಅಥ್ವಾ ಭಾರತದ ಮಡಿಲಿಗೆ ಹಾಕಬೇಕಾ ಅನ್ನೋ ಬಗ್ಗೆ ನಿರ್ಧಾರ ತಾಳಲೇ ಇಲ್ಲ. ಆಗಸ್ಟ್ ತಿಂಗಳಲ್ಲಿ ಇಡೀ ದೇಶದಲ್ಲೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಜನ ಮಿಂದೇಳ್ತಾ ಇದ್ರು. ಆಗಸ್ಟ್ 4ನೇ ತಾರೀಕು ಮುಂಬೈಯ ತಾಜ್ ಹೋಟೇಲ್ ನ ಶಿಖರದಲ್ಲಿ ಭಾರತದ ಸ್ವತಂತ್ರ್ಯ ಭಾರತದ ಧ್ವಜವನ್ನು ಹಾರಾಡಿಸೋ ಬಗ್ಗೆ ಚಿಂತನೆ ನಡೀತಿತ್ತು. ಅಲ್ಲೀವರೆಗೂ ಹೊಟೇಲ್ ನಲ್ಲಿ ದಿನನಿತ್ಯ ನುಡಿಸಲ್ಪಡ್ತಿದ್ದ ಹಾಡಾದ ಗಾಡ್ ಸೇವ್ ದಿ ಕಿಂಗ್ ಅಂದ್ರೆ ದೇವರೇ ರಾಜನನ್ನು ರಕ್ಷಿಸು ಅನ್ನೋ ಹಾಡನ್ನು ಶಾಶ್ವತವಾಗಿ ಬಂದ್ ಮಾಡಿಸಲಾಯ್ತು.

    ಅಂದು ಆಗಸ್ಟ್ 7ನೇ ತಾರೀಕು. ಸ್ವಾತಂತ್ರ್ಯ ಸಿಗೋ 8 ದಿನಗಳ ಮೊದಲು. ಮೊಹಮ್ಮದ್ ಅಲಿ ಜಿನ್ನಾ ದೆಹಲಿಗೆ ಶಾಶ್ವತವಾಗಿ ಗುಡ್ ಬೈ ಹೇಳಿ ಕರಾಚಿಯತ್ತ ಮುಖ ಮಾಡೋಕೆ ಅಣಿಯಾಗ್ತಿದ್ರು. ಅವತ್ತು ಜಿನ್ನಾ ಅಪರೂಪಕ್ಕೊಮ್ಮೆ ಧರಿಸ್ತಿದ್ದ ಬಟ್ಟೆಯನ್ನು ಧರಿಸಿದ್ರು. ದೆಹಲಿಯ ಔರಂಗಜೇಬ್ ರಸ್ತೆಯಲ್ಲಿದ್ದ ತಮ್ಮ ಮನೆಯ ಅಲ್ಮರಾದಿಂದ ತಮ್ಮ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಏರ್ ಏರ್ ಪೋರ್ಟ್ ನತ್ತ ತಮ್ಮ ಪ್ರಯಾಣ ಬೆಳೆಸಿದ್ರು. ಜಿನ್ನಾ ಹೊರಡೋದು ಗೊತ್ತಾಗ್ತಿದ್ದಂತೆ ಮೌಂಟ್ ಬ್ಯಾಟನ್ ಜಿನ್ನಾಗಾಗಿ ತಮ್ಮ ಎರಡು ಕಾರ್ ಗಳನ್ನು ಕಾಣಿಕೆಯಾಗಿ ಕೊಟ್ರು. ವೈಸ್ ರಾಯ್ ಮೌಂಟ್ ಬ್ಯಾಟನ್ ಜಿನ್ನಾರನ್ನು ಕರಾಚಿಗೆ ಕಳುಹಿಸೋದಕ್ಕೆ ತಮ್ಮ ಪ್ರೈವೇಟ್ ಏರ್ ಕ್ರಾಫ್ಟ್ ಕೂಡಾ ಕೊಟ್ರು.

    ಜಿನ್ನಾ ಏರ್ ಏರ್ ಪೋರ್ಟ್ ಗೆ ಹೋಗ್ತಿದ್ದಂತೆ ಬಹಳ ಕಡಿಮೆ ಜನ ಅವ್ರನ್ನ ಬೀಳಕೊಡೋದಕ್ಕೆ ಬಂದಿದ್ರು. ದೆಹಲಿಯ ಮೇಲಿಂದ ಹಾರಿ ಹೋಗ್ತಿದ್ದ ವಿಮಾನದ ಕಿಟಕಿ ಮೂಲಕ ಜಿನ್ನಾ ಕೆಳಗೆ ನೋಡಿ ಒಂದು ದೀರ್ಘ ನಿಟ್ಟುಸಿರು ಬಿಟ್ಟಿದ್ರು. ವಿಮಾನದ ಪೈಲಟ್ ಗೆ ಬಹುಶಃ ಇದುವೇ ನನ್ನ ಕೊನೇಯ ದೆಹಲಿ ಭೇಟಿ ಅಂತಾ ಜಿನ್ನಾ ಹೇಳಿದ್ರು. ಕರಾಚಿಗೆ ಹೋಗೋವರೆಗೂ ತಮ್ಮ ಬಳಿ ಇದ್ದ ದಿನ ಪತ್ರಿಕೆಗಳನ್ನು ತಿರುವಿ ಹಾಕ್ತಿದ್ರು ಬಿಟ್ರೆ ಒಂದೇ ಒಂದೇ ಶಬ್ದ ಮಾತಾಡ್ಲಿಲ್ಲ. ಕರಾಚಿಗೆ ಜಿನ್ನಾ ಇದ್ದ ವಿಮಾನ ಹೋಗಿ ಇಳೀತಿದ್ದಂತೆ ವೆಲ್ ಕಮ್ ಮಾಡೋದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ರು. ಇಡೀ ಏರ್ ಪೋರ್ಟ್ ಜನರಿಂದ ತುಂಬಿ ಹೋಗಿತ್ತು. ಇತ್ತ ಜಿನ್ನಾ ಕರಾಚಿಯತ್ತ ಮುಖ ಮಾಡಿದ್ರೆ ಅತ್ತ ಮೌಂಟ್ ಬ್ಯಾಟನ್ ಗೆ ಕೊಟ್ಟ ವಚನಕ್ಕಾಗಿ ಗಾಂಧೀಜಿ ಕಲ್ಕತ್ತೆಯತ್ತ ಮುಖ ಮಾಡಿದ್ರು.

    ಜಿನ್ನಾ ಕರಾಚಿಗೆ ತಲುಪಿ ತಮಗೆ ಗೊತ್ತು ಮಾಡಲಾಗಿದ್ದ ಬಂಗಲೆಯತ್ತ ಮುಖ ಮಾಡ್ತಿದ್ದಂತೆ ಖುಷಿಯಲ್ಲಿದ್ರು. ಆದ್ರೆ, ಉತ್ತ ಗಾಂಧೀಜಿಯ ಮನಸ್ಸಲ್ಲಿ ಬೇರೇನೋ ಓಡ್ತಾ ಇತ್ತು. ಹೊತ್ತಿ ಉರೀತಿದ್ದ ಕಲ್ಕತ್ತೆಯನ್ನು ಶಾಂತ ಮಾಡೋಕೆ ಗಾಂಧೀಜಿ ಅಲ್ಲಿಗೆ ಹೋಗೊದು ಅನಿವಾರ್ಯ ಕೂಡಾ ಆಗಿತ್ತು. ಕಲ್ಕತ್ತೆಯನ್ನು ನಿಯಂತ್ರಣಕ್ಕೆ ತರೋದಕ್ಕೆ ಕೇವಲ ಮೌಂಟ್ ಬ್ಯಾಟನ್ ಮಾತ್ರ ಗಾಂಧೀಜಿಯವರನ್ನು ಕೇಳಿಕೊಂಡಿರಲಿಲ್ಲ. ಬಂಗಾಳದ ಪ್ರಧಾನ ಮಂತ್ರಿ ಹುಸೇನ್ ಶಹೀದ್ ಸುಹ್ರವಾರ್ಡಿಗೂ ಕಲ್ಕತ್ತೆ ದಂಗೆಯಲ್ಲಿ ಬೇಯೋದು ಬೇಡ ಅಂದಿದ್ರು. ಹೆಚ್ಚಿನ ಜನ್ರ ಮನಸ್ಸಲ್ಲಿದ್ದಿದ್ದು ಸುಹ್ರವಾರ್ಡಿಯವ್ರೇ ಈ ಎಲ್ಲಾ ಬೇಗುದಿಗೆ ಕಾರಣ ಅಂತಾ. ಹೀಗಾಗಿ ಸುಹ್ರವಾರ್ಡಿಯವ್ರಿಗೂ ಗಾಂಧೀಜಿ ಏಕಮಾತ್ರ ಆಶಾಕಿರಣವಾಗಿ ಗೋಚರಿಸಿದ್ರು.

    ಆಗ ಗಾಂಧೀಜಿ ಬಾಂಗ್ಲಾ ಪ್ರಧಾನಿ ಸುಹ್ರವಾರ್ಡಿಯವ್ರಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನಿಟ್ರು. ನೋವಾಖಲಿಯಲ್ಲಿದ್ದ ಮುಸಲ್ಮಾನರು ಅಲ್ಲಿದ್ದ ಹಿಂದೂಗಳ ಜೊತೆ ಕೆಟ್ಟದಾಗಿ ವರ್ತಿಸದಂತೆ ನೋಡಿಕೊಳ್ಳಬೇಕು. ಹಾಗೂ ಸುಹ್ರಾವಾರ್ಡಿಯವ್ರು ಕಲ್ಕತ್ತಾದಲ್ಲಿ ಕೆಲಸ ದಿನ ತಮ್ಮ ಜೊತೆಯೇ ಇರಬೇಕು ಅನ್ನೋದಾಗಿ ಗಾಂಧೀಜಿ ನಿಭಂಧನೆ ವಿಧಿಸ್ತಾರೆ. ಅದಕ್ಕೆ ಅನಿವಾರ್ಯವಾಗಿ ಸುಹ್ರಾವಾರ್ಡಿಯವ್ರು ಒಪ್ಪಿಗೆ ಸೂಚಿಸ್ತಾರೆ. ಗಾಂಧೀಜಿಯವ್ರ ಈ ತೀರ್ಮಾನ ತಿಳಿದ ಸರ್ದಾರ್ ಪಟೇಲ್ ರು ಗಾಂಧಿಜಿಗೆ ಒಂದು ಪತ್ರ ಬರೀತಾರೆ.

    ನೀವು ಹೋಗಿ ಇರುವ ಸ್ಥಳ ಯಾವುದೇ ಪ್ರಾಣಿಗಳನ್ನು ಹತ್ಯೆ ಮಾಡೋ ಸ್ಥಳಕ್ಕಿಂತ ಕಮ್ಮಿ ಇಲ್ಲ. ಅದೂ ಅಲ್ಲದೇ ನೀವು ನಿಮ್ಮ ಜೊತೆ ಇರೋದಕ್ಕೆ ಅದೆಂಥಾ ವ್ಯಕ್ತಿಯನ್ನು ಆರಿಸಿಕೊಂಡಿದ್ದೀರಿ. ಅದೂ ಸುಹ್ರವಾರ್ಡಿ ಎಂದು ಪತ್ರ ಬರೆಯುತ್ತಾರೆ. ಆದ್ರೆ ಇದೇ ಸುಹ್ರಾವಾರ್ಡಿ ಕಲ್ಕತ್ತೆ ದಂಗೆಯ ಸಮಯದಲ್ಲಿ ಗಾಂಧೀಜಿಗೆ ಹೆಗಲಿಗೆ ಹೆಗಲು ಕೊಟ್ಟಿದ್ರು. ಅದೂ ಅಲ್ಲದೇ ಅನೇಕ ಹಿಂದೂ ಮನೆತನಗಳ ಜೊತೆ ಸುಹ್ರಾವಾರ್ಡಿ ಉತ್ತಮ ಸಂಬಂಧ ಕೂಡಾ ಹೊಂದಿದ್ರು. ಅಷ್ಟ್ರಲ್ಲಾಗ್ಲೇ ಸ್ವಾಂತಂತ್ರ್ಯದ ದಿನ ಅಂತಾ ಆಗಸ್ಟ್ 15ಕ್ಕೆ ದಿನಾಂಕ ನಿಗದಿಗೊಳಿಸಲಾಯ್ತು. ಆದ್ರೆ, ವಿಪರ್ಯಾಸ ಅಂದ್ರೆ ಜ್ಯೋತಿಷಿಗಳು ಈ ದಿನವನ್ನು ಅಶುಭ ಅಂತಾ ಹೇಳಿ ಮುಂದಕ್ಕೆ ಹಾಕುವಂತೆ ಸೂಚಿಸಿದ್ರು.

    ನವದೆಹಲಿಯ ಒಂದು ಬಂಗ್ಲೆಯಲ್ಲಿ ಕೂತು ರೆಡ್ ಕ್ಲಿಫ್ ಇನ್ನೂ ದೇಶ ವಿಭಜನೆಯ ನಕ್ಷೆ ಹಿಡಿದು ಯೋಚನೆ ಮಾಡ್ತಾ ಇದ್ರು. ಕೇವಲ 72 ಗಂಟೆಗಳು ಮಾತ್ರ ರೆಡ್ ಕ್ಲಿಫ್ ಬಳಿ ಇತ್ತು. ಅಂದ್ರೆ ಕೇವಲ ಮೂರು ಗಂಟೆಗಳು ಮಾತ್ರ. ಬ್ರಿಟೀಷ್ ಸರ್ಕಾರ ಇದನ್ನು ಬಹಳ ಗೌಪ್ಯವಾಗಿ ಮಾಡಿ ಮುಗಿಸಬೇಕು ಅನ್ನೋ ತರಾತುರಿಯಲ್ಲಿತ್ತು. ಯಾವುದೇ ಕಾರಣಕ್ಕೂ ಎರಡೂ ದೇಶಗಳ ಸ್ವಾತಂತ್ರ್ಯದ ಮೊದಲು ಈ ವಿಚಾರದ ಸಣ್ಣ ಕ್ಲೂ ಕೂಡಾ ಯಾರಿಗೂ ಸಿಗದಂತೆ ನಿಗಾ ವಹಿಸಲಾಗಿತ್ತು.

    ಅಂದು ಆಗಸ್ಟ್ 12. ಅಂದ್ರೆ ಸ್ವಾತಂತ್ರ್ಯ ಸಿಗೋ ಕೇವಲ 72 ಗಂಟೆಗಳ ಮೊದಲು. ಅಂದು ರೆಡ್ ಕ್ಲಿಫ್ ರ ವರದಿ ತಯಾರಾಗಿತ್ತು. ಅದನ್ನು ವೈಸ್ ರಾಯ್ ಬಂಗಲೆಗೆ ತೆಗೆದುಕೊಂಡು ಹೋಗಲಾಯ್ತು. ಎರಡೂ ದೇಶಗಳ ಹಣೆಬರಹ, ಭವಿಷ್ಯ ಎಲ್ಲವೂ ಈ ಲಕೋಟೆಯಲ್ಲಿ ಭದ್ರವಾಗಿತ್ತು. ಈ ಲಕೋಟೆ ಯಾವಾಗ ತೆರೆಯಲಾಗುತ್ತೋ ಅಂದು ಇಡೀ ದೇಶದಲ್ಲಿ ದೊಂಬಿ ಏಳಬಹುದು ಅನ್ನೋದು ವೈಸ್ ರಾಯ್ ಗೆ ಚೆನ್ನಾಗೇ ಗೊತ್ತಿತ್ತು. ವೈಸ್ ರಾಯ್ ಅಂದೇ ಮಧ್ಯಾಹ್ನ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗೋದಕ್ಕೆ ಕರಾಚಿಯತ್ತ ಮುಖ ಮಾಡಿದ್ರು. ಅದಾಗ್ಲೇ ಜ್ಯೋತಿಷಿಗಳೂ ಆಗಸ್ಟ್ 15 ಅಶುಭ ಅಂದಿದ್ರಿಂದ 14ರಂದೇ ಸ್ವಾತಂತ್ರ್ಯದ ಆಡಳಿತಾತ್ಮಕ ಪ್ರಕ್ರಿಯೆಗಳು ಆರಂಭವಾಗಿದ್ವು. ಅಲ್ಲೀವೆರಗೂ ಪಾಕಿಸ್ತಾನದಲ್ಲಿದ್ದ ಜಿನ್ನಾ ಖುಷಿಯಾಗಿದ್ರು. ಆದ್ರೆ, ಅದಾಗ್ಲೇ ಒಂದು ಅಪಶಕುನ ಸಿಕ್ಸ್ತ್ ಸೆನ್ಸ್ ನಲ್ಲಿ ಲೊಚಗುಟ್ಟೋಕೆ ಶುರುವಾಗಿತ್ತು.

    ಯಾವ ಕುದುರೆ ಸಾರೋಟಿನಲ್ಲಿ ಕೂತು ಜಿನ್ನಾ ಪಾಕಿಸ್ತಾನದಲ್ಲಿ ತಮ್ಮ ಅಧಿಕಾರ ವಹಿಸ್ಬೇಕಾಗಿತ್ತೋ ಆ ಕುದುರೆಯ ಕಾಲಿಗೆ ಪೆಟ್ಟಾಯ್ತು. ಆಗಸ್ಟ್ 13ನೇ ತಾರೀಕು ಜಿನ್ನಾ ತಮ್ಮ ಬಂಗಲೆಯಲ್ಲಿ ಎಲ್ಲರಿಗೂ ಔತಣ ಕೂಟ ಏರ್ಪಾಡು ಮಾಡಿದ್ರು. ಆ ದಿನ ರಂಜಾನ್ ಮಾಸದ ಕೊನೆಯ ವಾರದಲ್ಲಿ ಬರುತ್ತೆ ಅನ್ನೋದು ಅವ್ರಿಗೆ ಆಮೇಲೆ ಗೊತ್ತಾಯ್ತು. ಹೀಗಾಗಿ, ಒಂದು ಕಡೆ ಆಗಸ್ಟ್ 15ನ್ನು ಭಾರತದಲ್ಲಿ ಜ್ಯೋತಿಷಿ ಅಶುಭ ಅಂತಾ ಹೇಳಿದ್ರೆ ಜಿನ್ನಾಗೆ ಕೂಡಾ ಆಗಸ್ಟ್ 13 ಅನುಕೂಲವಾಗಿರ್ಲಿಲ್ಲ.

    ಅಂದು ಆಗಸ್ಟ್ 14. ಸ್ವಾತಂತ್ರ್ಯ ಸಿಗೋ 36 ಗಂಟೆ ಮೊದಲು. ಅಷ್ಟ್ರಲ್ಲಿ ಮಹಾತ್ಮಾ ಗಾಂಧಿ ತಾವು ಉಳಿದುಕೊಂಡಿದ್ದ ಆಶ್ರಮದಿಂದ ಹೊರಟಾಗಿತ್ತು. ಕಲ್ಕತ್ತೆಯನ್ನು ದಂಗೆಯಿಂದ ರಕ್ಷಿಸಿಕೊಳ್ಳೋ ಅಚಲ ವಿಶ್ವಾಸ ಅವ್ರಿಗೆ ಇತ್ತು. ಮೌಂಟ್ ಬ್ಯಾಟನ್ ಜೊತೆಗೆ ಇಡೀ ದೇಶಕ್ಕೆ ಮಹಾತ್ಮಾ ಏನಾದ್ರೂ ಚಮತ್ಕಾರ ಮಾಡ್ತಾರೆ ಅನ್ನೋ ನಂಬಿಕೆ ಇತ್ತು. ಸೋದಪುರ್ ನ ತಮ್ಮ ಆಶ್ರಮದಿಂದ ಹತ್ತು ಮೈಲು ದೂರವಿದ್ದ ಹೈದರಿ ಹೌಸ್ ಗೆ ಹೋಗೋದು ಅವ್ರ ಗುರಿಯಾಗಿತ್ತು. ಆ ದಿನ ಹತ್ತು ಮೈಲಿ ನಡೆಯೋದು ಯಾವತ್ತೂ ಮುಗಿಯದ ಪಯಣದ ರೀತಿ ಗಾಂಧೀಜಿಗೆ ಭಾಸವಾಗ್ತಿತ್ತು. ಅಂದ ಹಾಗೆ, ಈ ಹೈದ್ರಿ ಹೌಸ್ ಒಂದು ಶ್ರೀಮಂತ ಕುಟುಂಬದ ಮುಸಲ್ಮಾನರ ಬಂಗಲೆಯಾಗಿತ್ತು. ಇಷ್ಟು ದೊಡ್ಡ ಬಂಗಲೆಯನ್ನು ಹಾಗೇ ಬಿಟ್ಟ ಕಾರಣ ಅದು ಪಾಳು ಬಿದ್ದಿತ್ತು. ಇಲ್ಲಿಗೂ ಗಾಂಧಿ ಬಾಂಗ್ಲಾ ಪ್ರಧಾನಿ ಸುಹ್ರಾವಾರ್ಡಿ ಜೊತೆಗೆ ಬಂದಿದ್ರು.

    ಹೈದರಿ ಹೌಸ್ ಒಳಗಡೆ ಗಾಂಧಿ ತಮ್ಮ ಜೊತೆಗೆ ಬಂದಿದ್ದ ಸುಹ್ರಾವಾರ್ಡಿಯ ಜೊತೆ ಕುತಿದ್ರು. ಆಕ್ರೋಶಗೊಂಡಿದ್ದ ಹಿಂದೂಗಳು ಸುಹ್ರಾವಾರ್ಡಿಯರತ್ತ ಕಲ್ಲು ತೂರೋದಕ್ಕೆ ಶುರುಮಾಡಿದ್ರು. ಗಾಂಧೀಜಿಗೆ ಅಂದು ಮೊಟ್ಟ ಮೊದಲ ಬಾರಿಗೆ ಇಂಥಾ ಒಂದು ಸಂದಿಗ್ಧ ಸ್ಥಿತಿಯನ್ನು ಎದುರಿಸೋ ಹಾಗಾಯ್ತು. ದೇಶದ ಮಹಾತ್ಮಾ ಅನಿಸಿಕೊಂಡ ವ್ಯಕ್ತಿ ಅದೆಂಥಾ ಪರಿಸ್ಥಿತಿಯನ್ನ ಎದುರಿಸಿರಬೇಡ ಯೋಚಿಸಿ. ಅಷ್ಟ್ರಲ್ಲಿ ನೆಹರೂ ನೀವು ಈ ಕೂಡಲೇ ದೆಹಲಿಗೆ ಬನ್ನಿ. ಇಲ್ಲಿ ಪರಿಸ್ಥಿತಿ ಕೈ ಮೀರಿ ಹೋಗ್ತಿದೆ ಅಂತಾ ಗಾಂಧೀಜಿಗೆ ಬುಲಾವ್ ಕೊಟ್ಟಿದ್ರು. ಆ ಹೊತ್ತಿಗೆ ಅಲ್ಲಿನ ಜನ ಯಾರೂ ಕೂಡಾ ಮಾತು ಕೇಳೋ ಪರಿಸ್ಥಿತಿಯಲ್ಲೇ ಇರ್ಲಿಲ್ಲ.

    ಅತ್ತ ಕರಾಚಿಯಲ್ಲಿ ಜಿನ್ನಾ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋದಕ್ಕೆ ಹೊರಟಿದ್ರು. ದೇಶ ಒಟ್ಟಾಗಿರಬೇಕು ಅಂತಾ ಯಾವ ಮಹಾತ್ಮ ಅಂದುಕೊಂಡಿದ್ರೋ ಅವ್ರ ಇಚ್ಚೆಯ ವಿರುದ್ಧವಾಗಿ ಜಿನ್ನಾ ಜಯ ಸಾಧಿಸಿದ್ರು. ಕರಾಚಿಯ ಮೈದಾನ ಇತಿಹಾಸದ ಪುಟಗಳಲ್ಲಿ ದೊಡ್ಡ ಘಟನೆಯೊಂದಕ್ಕೆ ಸಾಕ್ಷಿಯಾಯ್ತು. ಈ ಮೂಲಕ ಮೊಹಮ್ಮದ್ ಅಲಿ ಜಿನ್ನಾ ದೇಶ ವಿಭಜನೆಯ ತಮ್ಮ ಗುರಿಯನ್ನು ಸಾಧಿಸಿಯಾಗಿತ್ತು. ಆದ್ರೆ, ಗಾಂಧೀಜಿ ಅಂದು ಈ ಸ್ವಾತಂತ್ರ್ಯವನ್ನು ನಾನು ನಿಜವಾದ ಸ್ವಾತಂತ್ರ್ಯ ಅಂತಾ ಅಂದುಕೊಳ್ಳೋದಿಲ್ಲ ಅಂತಾ ಮನಸ್ಸಲ್ಲೇ ನಿಶ್ಚಯಿಸಿಬಿಟ್ಟಿದ್ರು. ಇದೇ ಅವಧಿಯಲ್ಲಿ ಮೌಂಟ್ ಬ್ಯಾಟನ್ ಕೂಡಾ ಮತ್ತೊಂದು ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ರು. ಮೌಂಟ್ ಬ್ಯಾಟನ್ ಬಳಿ ಸಮಯ ಬಹಳ ಕಮ್ಮಿ ಇತ್ತು.

    ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಯಾಗಿತ್ತು. ಇಡೀ ದೇಶವಾಸಿಗಳಿಗೆ ಈ ದಿನದ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು. ಸಾವು ನೋವಿನ ಮಧ್ಯೆ ಅಂಗ್ರೇಝಿಗಳ ಹುಕುಂ ಹಾಗೂ ಸ್ವಾತಂತ್ರ್ಯದ ಪ್ರಥಮ ಗಾಳಿಯನ್ನು ಉಡಿರಾಡೋ ತೀವ್ರತೆಗೆ ಭಾರತೀಯರು ಬಿದ್ದಿದ್ರು. ಆದ್ರೆ, ನಾಳೆ ದಿನ ಈ ಸ್ವಾತಂತ್ರ್ಯಕ್ಕೆ ಯಾವ ರೀತಿಯ ಬೆಲೆ ಕಟ್ಬೇಕಾಗುತ್ತೆ ಅನ್ನೋ ಭಯ ಪ್ರತಿಯೊಬ್ಬ ಭಾರತೀಯನಿಗೂ ಆತಂಕದ ಛಾಯೆ ಮೂಡಿಸಿತ್ತು. 14ರ ರಾತ್ರಿ ದೆಹಲಿಯಲ್ಲಿ ಭಾರೀ ಮಳೆ ಸುರೀತಾ ಇತ್ತು. ಆದ್ರೆ, ಅಲ್ಲಿ ನೆರೆದಿದ್ದ ಜನ್ರು ಹಠದಲ್ಲಿ ಅಲ್ಲೇ ನಿಂತಿದ್ರು. ಕೆಂಪುಕೋಟೆಯ ಹೊರಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ರು. ಸರಿಯಾಗಿ 12 ಗಂಟೆಗೆ ಪಂಡಿತ್ ಜವಹರಲಾಲ್ ನೆಹರೂರವರಿಗೆ ಪ್ರಧಾನಮಂತ್ರಿ ಪದವಿಯಲ್ಲಿ ಕೂರಿಸಲಾಯ್ತು. ಜವಹರಲಾಲ್ ನೆಹರೂ ಇಡೀ ದೇಶವನ್ನು ಉದ್ದೇಶಿಸಿ ತಮ್ಮ ಐತಿಹಾಸಿಕ ಭಾಷಣ ಮಂಡಿಸಿದ್ರು. ಇಡೀ ಭಾರತಕ್ಕೆ ಭಾರತವೇ ಸಂಭ್ರಮ ಸಡಗರದಲ್ಲಿ ತೇಲಾಡ್ತಾ ಇತ್ತು. ಆದ್ರೆ, ಇಡೀ ದೇಶವನ್ನೇ ಸ್ವಾತಂತ್ರ್ಯಕ್ಕಾಗಿ ಬಡಿದೆಬ್ಬಿಸಿದ ಮಹಾತ್ಮ ಮಾತ್ರ ಹೈದರೀ ಹೌಸ್ ನಲ್ಲಿ ಶಾಂತಿಯಿಂದ ನಿದ್ದೆಗೆ ಜಾರಿದ್ರು. ಗಾಂಧೀಜಿಯನ್ನು ಅಂದು ದೂರವಿಟ್ಟಿರಲಿಲ್ಲ. ಬದಲಾಗಿ ದೇಶಕ್ಕಾಗಿ ಆಜೀವ ಪರ್ಯಂತ ಸವೆಸಿದ್ದ ಜೀವ ಬಹಳ ಬಳಲಿ ಹೋಗಿತ್ತು.

    ಶಪಥ ತೆಗೆದುಕೊಂಡ ಬಳಿಕ ನೆಹರು ತಮ್ಮ ಸಂಪುಟದ ಮಂತ್ರಿಗಳ ಹೆಸರಿರುವ ಲಕೋಟೆಯನ್ನು ಮೌಂಟ್ ಬ್ಯಾಟನ್ ಮುಂದಿಟ್ರು. 15ನೇ ಆಗಸ್ಟ್ ಭಾರತ ಸ್ವತಂತ್ರವಾಯ್ತು. ಬ್ರಿಟೀಷರ ಕಪಿಮುಷ್ಟಿಯಿಂದ ಹೊರಬಂತು. ಆದ್ರೆ ಆ ದಿನ ಗಾಂಧಿ ಸ್ವಾತಂತ್ರ್ಯವನ್ನು ಉಪವಾಸ ಮಾಡೋದ್ರ ಮೂಲಕ ಗಾಂಧಿ ಹೃದರೀ ಹೌಸ್ ನಲ್ಲಿಯೇ ತಮ್ಮದೇ ರೀತಿಯಲ್ಲಿ ಅನುಭವಿಸಿದ್ರು. ಸ್ವಾತಂತ್ರ್ಯದ ಸಂದೇಶ ಕೊಡಿ ಅಂತಾ ಪತ್ರಿಕೆಯವರು ಸಂದರ್ಶನಕ್ಕೆ ಅಂತಾ ಬಂದಾಗ ನನ್ನ ಶಕ್ತಿ ಕುಗ್ಗಿದೆ ಅಂತಾ ಅಂದುಬಿಟ್ಟಿದ್ರು. ಗಾಂಧೀಜಿ ಯಾವ ಉದ್ದೇಶಕ್ಕೆ ಈ ಮಾತು ಹೇಳಿದ್ರು ಅನ್ನೋದು ನಿಗೂಢವಾಗಿಯೇ ಉಳೀತು.

    • ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಮೌಂಟ್ ಬ್ಯಾಟನ್ ಹಾಗೂ ಅವ್ರ ಪತ್ನಿ ಬಹಳ ಖುಷಿಯಲ್ಲಿದ್ರು. ಒಂದು ಮಿಷನ್ ನನ್ನ ಪೂರ್ಣ ಮಾಡಿದ ಸಂತೃಪ್ತಿ ಅವರಲ್ಲಿತ್ತು. ಆದ್ರೆ, ಸ್ವಾತಂತ್ರ್ಯ ಸಿಕ್ಕಿದ ಇಂಥಾ ಸಮಯದಲ್ಲೂ ದೇಶದ ಕೆಲವಷ್ಟು ಜನ್ರು ಗೊಂದಲದಲ್ಲಿದ್ರು. ನಾವು ಸಂಭ್ರಮಿಸ್ಬೇಕೋ ಅಥವಾ ದುಃಖಿಸ್ಬೇಕೋ ಅನ್ನೋದು ಅವ್ರಿಗೆ ಗೊತ್ತೇ ಆಗ್ಲಿಲ್ಲ. ಇಂಥಾ ಹೊತ್ತಲ್ಲಿ ಮುಂಬೈಯ ಆ ಬಂಗಲೆಯೊಂದರಲ್ಲಿ ವಿಚಿತ್ರವಾದ ಅಷ್ಟೇ ಸಂವೇದನಾಶೀಲವಾದ ಸ್ವಾತಂತ್ರ್ಯದ ಸಂಭ್ರಮವಿತ್ತು. ಅಲ್ಲಿ ಪಾಕಿಸ್ತಾನ ಹಾಗೂ ಭಾರತ ಎರಡೂ ಸ್ವತಂತ್ರ ರಾಷ್ಟ್ರಗಳ ಬಾವುಟ ಹಾರ್ತಾ ಇತ್ತು. ಅಂದ ಹಾಗೆ, ಅದು ಬೇರ್ಯಾರೂ ಅಲ್ಲ ಮೊಹಮ್ಮದ್ ಅಲಿ ಜಿನ್ನಾರ ಮಗಳು ದಿನಾ ವಾಡಿಯಾರ ಬಂಗ್ಲೆಯಾಗಿತ್ತು. ಇದು ದೇಶ ವಿಭಜನೆಯ ನೋವಿನ ಕಥೆ. ಎರಡು ದೇಶಗಳು ಉದಯವಾದ ಕಥೆ.

    • ಕ್ಷಮಾ ಭಾರಧ್ವಜ್
  • 15 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೆ ಪ್ರತಿಭಟನೆ – ಕೊನೆಗೂ ಸರ್ಕಾರದಿಂದ 6ಕೋಟಿ ರೂ. ಮನ್ನಾ

    15 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೆ ಪ್ರತಿಭಟನೆ – ಕೊನೆಗೂ ಸರ್ಕಾರದಿಂದ 6ಕೋಟಿ ರೂ. ಮನ್ನಾ

    ಚಾಮರಾಜನಗರ: ರೈತರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಮಾಡುವ ಚಳುವಳಿಗಳಲ್ಲಿ ಕರನಿರಾಕರಣ ಚಳುವಳಿಯು ಒಂದು. ಹಾಗೆಯೇ ಜಿಲ್ಲೆಯ ಯಳಂದೂರು ಗ್ರಾಮಗಳ ರೈತರು ಕಳೆದ ಹದಿನೈದು ವರ್ಷಗಳಿಂದ ಕರನಿರಾಕರಣ ಚಳುವಳಿ ನಡೆಸುತ್ತಿದ್ದಾರೆ.

    ಕೋಟ್ಯಾಂತರ ರೂಪಾಯಿ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದರೂ ಸರ್ಕಾರ ಈ ಗ್ರಾಮಗಳಿಗೆ ವಿದ್ಯುತ್ ಕಡಿತಗೊಳಿಸುವ ಧೈರ್ಯಮಾಡಿಲ್ಲ. ಇದೀಗ ರೈತರ ಚಳುವಳಿಗೆ ಮಣಿದ ಸರ್ಕಾರ ಕೋಟ್ಯಾಂತರ ರೂಪಾಯಿ ವಿದ್ಯುತ್ ಬಾಕಿ ವಸೂಲಿ ಮಾಡದೆ ಇರಲು ನಿರ್ಧರಿಸಿದೆ. ಆದರೂ ತಮ್ಮ ಬೇಡಿಕೆ ಈಡೇರುವವರೆಗೂ ಸರ್ಕಾರಕ್ಕೆ ಯಾವುದೇ ರೀತಿಯ ಕರ ನೀಡುವುದಿಲ್ಲ ಎಂಬುದು ರೈತರ ನಿಲುವಾಗಿದೆ.

    ಯಳಂದೂರಿನ ರೈತರ ಕರೆಂಟ್ ಬಿಲ್ ಹಿಡ್ಕೊಂಡು ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಕೃಷಿ ಪಂಪ್ ಸೆಟ್ ಗಳಿಗೆ 24 ಗಂಟೆ ವಿದ್ಯುತ್, ಸಮಾನ ಶಿಕ್ಷಣ ನೀತಿ ಜಾರಿ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಕೊನೆಗೆ ಸುಸ್ತಾಗಿ ಕರನಿರಾಕರಣ ಚಳವಳಿ ನಡೆಸುತ್ತಿದ್ದರು. ಹೊನ್ನೂರು, ಕೆಸ್ತೂರು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳ ರೈತರು ಕಳೆದ 15 ವರ್ಷಗಳಿಂದ ಸರ್ಕಾರಕ್ಕೆ ಕಂದಾಯ, ನೀರಿನ ತೆರಿಗೆ, ವಿದ್ಯುತ್ ಬಿಲ್ ಹೀಗೆ ಯಾವುದೇ ರೀತಿಯ ಕರವನ್ನು ಕಟ್ಟುತ್ತಿಲ್ಲ.

    ಈ ಗ್ರಾಮಗಳಲ್ಲಿ ಸುಮಾರು 4 ಸಾವಿರದ 570 ರೈತರು ಕಳೆದ 15 ವರ್ಷಗಳಿಂದ 6 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಪಾವತಿಸುವಂತೆ ಹಲವಾರು ಬಾರಿ ನೋಟೀಸ್ ನೀಡಿ ಎಚ್ಚರಿಕೆ ನೀಡಿದ್ದರೂ ಬಗ್ಗದ ರೈತರು ಅಧಿಕಾರಿಗಳನ್ನೇ ಹಿಮ್ಮೆಟ್ಟಿಸಿದ ಉದಾಹರಣೆಗಳಿವೆ. ಹೀಗಾಗಿ ಇದೀಗ ಈವರೆಗಿನ ಬಿಲ್ ಮನ್ನಾ ಮಾಡಿ ಇನ್ಮುಂದೆ ಬರುವ ಬಿಲ್ ಪಾವತಿಸುವಂತೆ ಸೂಚಿಸಿ, ಹೊಸ ಮೀಟರ್ ಅಳವಡಿಸಿದೆ ಎಂದು ಗ್ರಾಮಸ್ಥ ಸಂತೋಷ್ ಹೇಳಿದ್ದಾರೆ.

  • ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಜನಾಂದೋಲನ ಕೈಗೊಳ್ಳಲಿ: ಜಗದೀಶ್ ಶೆಟ್ಟರ್ ಸವಾಲು

    ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಜನಾಂದೋಲನ ಕೈಗೊಳ್ಳಲಿ: ಜಗದೀಶ್ ಶೆಟ್ಟರ್ ಸವಾಲು

    ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕಾಳಜಿ ಇರುವವರು ಈಗ ಜನಾಂದೋಲನ ಹೋರಾಟಕ್ಕೆ ಮುಂದಾಗಲಿ. ರಾಜಕೀಯ ಉದ್ದೇಶಕ್ಕಾಗಿ ಹೋರಾಟ ಮಾಡಿ ಸಮಾಜದಲ್ಲಿ ಒಡಕು ತಂದಿಟ್ಟರು ಎಂದು ಶಾಸಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಒಂದೇ. ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಕೆಲವರು ಮುಂದಾದರು. ಅಂತವರಿಗೆ ಜನರು ಚುನಾವಣೆಯ ಫಲಿತಾಂಶದಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಈಗ ಹೋರಾಟಕ್ಕೆ ಇಳಿಯಲಿ ಎಂದು ಸವಾಲು ಹಾಕಿದರು.

    ಪ್ರತ್ಯೇಕ ಲಿಂಗಾಯತ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ವಾಪಸ್ ಕಳುಹಿಸಿದೆ ಎಂದು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ. ಇದೊಂದು ಸ್ವಾರ್ಥ ಸಾಧನೆಗಾಗಿ ಮಾಡಿದ ಹೋರಾಟ ಅಷ್ಟೇ. ಕೆಲವೇ ಕೆಲವು ನಾಯಕರು, ಸ್ವಾಮೀಜಿಗಳು ಮುಂಚೂಣಿಯಲ್ಲಿದ್ದರು, ಸ್ವಹಿತಾಸಕ್ತಿಗೋಸ್ಕರ ನಡೆಸಿದ ಹೋರಾಟಕ್ಕೆ ಮಹತ್ವ ನೀಡುವುದು ಬೇಡ ಎಂದು ಹೇಳಿದರು.