Tag: ಹೊಸವರ್ಷ

  • ಕೊರೊನಾ ಭೀತಿ – ಹೊಸವರ್ಷಕ್ಕೆ ತಮಿಳುನಾಡಿನ ಬೀಚ್‍ಗಳಿಗೆ ಪ್ರವೇಶ ನಿರ್ಬಂಧ

    ಕೊರೊನಾ ಭೀತಿ – ಹೊಸವರ್ಷಕ್ಕೆ ತಮಿಳುನಾಡಿನ ಬೀಚ್‍ಗಳಿಗೆ ಪ್ರವೇಶ ನಿರ್ಬಂಧ

    ಚೆನ್ನೈ: ಕೊರೊನಾ ವೈರಸ್ ತಡೆಗಟ್ಟಲು ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ತಮಿಳುನಾಡು ಸರ್ಕಾರ ಬೀಚ್‍ಗಳಲ್ಲಿ ಸಾರ್ವಜನಿಕರಿಗೆ ಡಿಸೆಂಬರ್ 31ರಂದು ಮತ್ತು ಜನವರಿ 1ರಂದು ನಿರ್ಬಂಧ ಹೇರಿದೆ.

    ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ಅವರು, ಪ್ರಸ್ತುತ ಪರಿಸ್ಥಿತಿ ಅನುಗುಣವಾಗಿ 6ರಿಂದ 12ನೇ ತರಗತಿಯವರೆಗೂ ಶಾಲೆಗಳನ್ನು ತೆರೆಯಲಾಗುತ್ತಿಲ್ಲ. ಆದರೆ ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸೋಮವಾರ ಸಭೆ ನಡೆಸಿದ ಸ್ಟಾಲಿನ್ ಅವರು, ಈ ವೇಳೆ ಡಿಸೆಂಬರ್ 31 ರವರೆಗಿನ ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ವಿಸ್ತರಿಸುವುದಾಗಿ ಘೋಷಿಸಿದರು. ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಭೆಗಳಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಕಾಶಿಯಿಂದ ಕಾಶ್ಮೀರದವರೆಗೆ ಅಭಿವೃದ್ಧಿ – ಮೋದಿ ಅವಧಿಯಲ್ಲಿ ಯಾವೆಲ್ಲ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ?

    ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಡಿಸೆಂಬರ್ 31ರಿಂದ ಜನವರಿ 1ರವರೆಗೂ ಮರೀನಾ ಬೀಚ್ ಸೇರಿದಂತೆ ರಾಜ್ಯದ ಹಲವು ಬೀಚ್‍ಗಳಿಗೆ ಸಾರ್ವನಿಕರ ಪ್ರವೇಶವನ್ನು ನಿರ್ಬಂಧ ಹೇರಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

  • ಹೊಸ ವರ್ಷ ಆಚರಣೆಗೆ ಶಿಮ್ಲಾ ಹೋಗಲು ದರೋಡೆ ಮಾಡಿ ಸಿಕ್ಕಿಬಿದ್ದ!

    ಹೊಸ ವರ್ಷ ಆಚರಣೆಗೆ ಶಿಮ್ಲಾ ಹೋಗಲು ದರೋಡೆ ಮಾಡಿ ಸಿಕ್ಕಿಬಿದ್ದ!

    ನವದೆಹಲಿ: ಹೊಸ ವರ್ಷ ಆಚರಣೆಗೆಂದು ಶಿಮ್ಲಾಗೆ ಹೋಗುವ ಆಸೆಯಿಂದ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

    ಆರೋಪಿಗಳನ್ನು ಫಯಾಜ್ ಅಹ್ಮದ್ ಸಿದ್ದಿಕಿ ಮತ್ತು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದ್ದು, ಇವರು ಜಾಮಿಯಾ ನಗರದ ನಿವಾಸಿಗಳು. ಇವರಲ್ಲಿ ಫಯಾಜ್ ಹಾಲು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದು, ಸಾದಿಕ್ ಈತನ ಸಹೋದರನಾಗಿದ್ದಾನೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಹೊಸ ವರ್ಷವನ್ನು ಆಚರಿಸಲು ಶಿಮ್ಲಾಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದರು. ಹೀಗಾಗಿ ಬುಧವಾರ ಮದರ್ ಡೈರಿಯ ಜಂತಾ ಫ್ಲಾಟ್ಸ್‍ನ ನೈಫ್ ಪಾಯಿಂಟ್ ಬಳಿ ವ್ಯಕ್ತಿಯೊಬ್ಬನನ್ನು ತಡೆದು 1.36 ಲಕ್ಷ ರೂ ದರೋಡೆ ಮಾಡಿದ್ದಾರೆ. ನಂತರ ಆರೋಪಿಗಳು ಅಲ್ಲಿದ್ದ ಜಸೋಲಾ ಕಡೆಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳ್ಳತನ ಮಾಡಿರುವುದಾಗಿ ಗುಲ್ಜಾರ್ ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಅದೇ ಸಮಯ ಸಿದ್ದಿಕಿ ಮತ್ತು ಆತನ ಸಹೋದರ ಒಟ್ಟಿಗೆ ಇರುವುದನ್ನು ನೋಡಿ ಪ್ರಶ್ನಿಸಿದಾಗ ಸಿದ್ದಿಕಿ ನಾನು ಮತ್ತು ನನ್ನ ತಮ್ಮ ಹಾಲು ಸರಬರಾಜು ಮಾಡಲು ಮದರ್ ಡೈರಿ ಬಳಿ ಬಂದಿರುವುದಾಗಿ ಹೇಳಿದ್ದಾನೆ. ನಂತರ ಘಟನೆ ಕುರಿತಂತೆ ಪೊಲೀಸರು ಫಯಾಜ್ ಮತ್ತು ಗುಲ್ಜಾರ್‍ನನ್ನು ಪ್ರತ್ಯೇಕವಾಗಿ ಕರೆಸಿ ವಿಚಾರಣೆ ನಡೆಸಿದ್ದಾರೆ.

    ಗುಲ್ಜಾರ್ ವಿಚಾರಿಸಿದಾಗ ನಾನು ಜಸೋಲಾ ಬಳಿ ಕಾಡಿನಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದೆ. ನಂತರ ನೈಫ್ ಪಾಯಿಂಟ್ ಬಳಿ ಬರುವ ಹಾದಿಯಲ್ಲಿ ಒಂದೇ ಸಲ ಮೋಟಾರ್ ಸೈಕಲ್ ಮತ್ತು ಸ್ಕೂಟರ್‍ಗಳಲ್ಲಿ ಬಂದ ನಾಲ್ಕು ಜನರು ತನ್ನ ಬಳಿ ಇದ್ದ 1.36 ಲಕ್ಷ ರೂ. ಮತ್ತು ಮೊಬೈಲ್ ಫೋನ್‍ನನ್ನು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

    ಫಯಾಜ್ ಸಹೋದರನ ವಿಚಾರಣೆ ನಡೆಸುತ್ತಿದ್ದ ವೇಳೆ, ಆತನ ಮೊಬೈಲ್‍ಗೆ ಬಿಡದಂತೆ ‘ಎಸ್’ ಎಂಬ ಅಕ್ಷರದಿಂದ ಆರಂಭವಾಗುವ ಹೆಸರಿನಿಂದ ನಿರಂತರವಾಗಿ ಕರೆಗಳು ಬರುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ಕಾಲ್ ಲಿಸ್ಟ್ ವಿಶ್ಲೇಷಿಸಿದಾಗ ಫಯಾಜ್ ಸಿದ್ದಿಕಿ ಜೊತೆ ಸಂಪರ್ಕದಲ್ಲಿರುವುದು ಕಂಡುಬಂದಿದೆ. ವಿಚಾರಣೆ ವೇಳೆ ಇಬ್ಬರು ಸ್ಥಳದಲ್ಲಿಯೇ ಇದ್ದರೂ ಕರೆ ಮಾಡಿರುವುದು ಪೊಲೀಸರಿ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಪೊಲೀಸ್(ಆಗ್ನೇಯ) ಆರ್.ಪಿ ಮೀನಾ ಹೇಳಿದರು.

    ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಹೊಸ ವರ್ಷದ ಅಂಗವಾಗಿ ತಾನು ತನ್ನ ಸ್ನೇಹಿತರು ಶಿಮ್ಲಾಕ್ಕೆ ಹೋಗಲು ಯೋಜಿಸಿದ್ದೆವು. ಆದ್ರೆ ಪ್ರವಾಸಕ್ಕೆ ಹೋಗಲು ನಮ್ಮ ಬಳಿ ಹಣವಿರಲಿಲ್ಲ. ಹಾಗಾಗಿ ಸಾದಿಕ್ ಜೊತೆ ಸೇರಿ ಹಣ ದರೋಡೆ ಮಾಡಿದೆವು ಎಂದು ಫಯಾಜ್ ಒಪ್ಪಿಕೊಂಡಿದ್ದಾನೆ. ಇನ್ನೂ ಅವರ ಜೊತೆ ಕೆಲಸ ಮಾಡುತ್ತಿದ್ದ ನೌಶಾದ್ ಎಂಬಾತನಿಗೆ ಕೂಡ ಕರೆ ದರೋಡೆ ಮಾಡಿರುವುದಾಗಿ ತಿಳಿಸಿದ್ದಾನೆ. ಸದ್ಯ ಸಾದಿಕ್‍ನನ್ನು ಬಂಧಿಸಲಾಗಿದ್ದು ಆತನ ಬಳಿ ಇದ್ದ 65,000 ರೂ ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

  • ಮತ್ತೆ ರಾಜ್ಯದಲ್ಲಿ ನೈಟ್ ಕರ್ಫ್ಯೂ?

    ಮತ್ತೆ ರಾಜ್ಯದಲ್ಲಿ ನೈಟ್ ಕರ್ಫ್ಯೂ?

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧವಾತ್ತಿರುವವರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

    ಹೌದು. ಹೊಸ ವರ್ಷದ ಸಾರ್ವಜನಿಕ ಸಂಭ್ರಮಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಹೊಸ ವರ್ಷಕ್ಕೆ ಒಂದು ವಾರ ಮೊದಲೇ ನೈಟ್ ಕರ್ಫ್ಯೂಗೆ ಪ್ಲಾನ್ ಮಾಡಲಾಗುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಡಿಸೆಂಬರ್ 26ರಿಂದ ನೈಟ್ ಕರ್ಫ್ಯೂ ಜಾರಿಗೆ ತರಲು ಚಿಂತನೆ ನಡೆದಿದೆ. ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿ ಆಗಬಹುದು. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ಇದೆ.

    ಹೊಸ ವರ್ಷದ ಸಂಭ್ರಮಕ್ಕೆ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಹಾಗೂ ಹೋಟೆಲ್, ರೆಸಾರ್ಟ್, ಪಬ್‍ಗಳಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಕೊರೊನಾ ಸೆಕೆಂಡ್ ವೇವ್ ಆತಂಕ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

  • ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ಬೆಂಗಳೂರು: ನಗರದ ಎಂಜಿ ರೋಡ್, ಬ್ರಿಗೇಡ್ ರೋಡಲ್ಲಿ ಹೊಸ ವರ್ಷ ಬೇಕಾ ಅನ್ನೋವಷ್ಟರ ಮಟ್ಟಿಗೆ ಪೋಲಿಗಳ ಹಾವಳಿಯಿತ್ತು. ಈ ವರ್ಷ ಹೊಸವರ್ಷಾಚರಣೆಗೆ ಪೊಲೀಸರು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು ಕೂಡ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಮಾತ್ರ ನಿಂತಿಲ್ಲ.

    ಕಾಮುಕರ ಅಟ್ಟಹಾಸಕ್ಕೆ ನಲುಗಿದ ಯುವತಿಯರು ತಕ್ಷಣವೇ ಪ್ರತಿರೋಧ ತೋರಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ಎಗ್ಗಿಲ್ಲದೇ ಲೈಂಗಿಕ ದೌರ್ಜನ್ಯ ನಡೆಯಿತು.

    ಎಲ್ಲೆಲ್ಲಿ ಏನೇನಾಯಿತು..?
    ನಗರದ ಒಪೆರಾ ಜಂಕ್ಷನ್ ಹೌಸ್ ನಲ್ಲಿ ಎದುರಿನಿಂದ ಬಂದ ಯುವಕ, ಯುವತಿಯ ಮೈಗೆ ಕೈ ಹಾಕಿದ್ದಾರೆ. ಆತ ಯಾರು ಎಂಬುದನ್ನು ಅರಿತುಕೊಂಡ ಯುವತಿ ಆ ಬೀದಿ ಕಾಮುಕನಿಗೆ ಸ್ಥಳದಲ್ಲೇ ಚಪ್ಪಲಿ ಸೇವೆ ಮಾಡಿದ್ದಾಳೆ. ಇತ್ತ ಸ್ನೇಹಿತನ ಜೊತೆ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಯುವತಿಗೆ, ಎದುರಿನಿಂದ ಬಂದಾತ ಆಕೆಯ ಮೈ ಮುಟ್ಟಿದ್ದಾನೆ. ಆ ಯುವತಿ ತಿರುಗಿ ಆತನಿಗೆ ಹೊಡೆಯೋ ಪ್ರಯತ್ನ ಕೂಡ ಮಾಡಿದ್ದಾಳೆ. ಆದರೆ ಜೊತೆಯಲ್ಲಿದ್ದ ಸ್ನೇಹಿತ ಆಕೆಯನ್ನ ತಡೆದು ಕರೆದೊಯ್ದ ಪ್ರಸಂಗ ನಡೆದಿದೆ.

    ಇಷ್ಟು ಮಾತ್ರವಲ್ಲದೆ ಪಾನಮತ್ತಳಾಗಿದ್ದ ಯುವತಿ ಹಿಂಬದಿ ಮುಟ್ಟಿದ್ದ ಯುವಕನಿಗೂ ಸರಿಯಾಗಿ ಇಕ್ಕಿದ್ದಾರೆ. ತನ್ನ ಪಾಡಿಗೆ ತಾನು ಕುಣಿಯುತ್ತಾ ಹೋಗುತ್ತಿದ್ದಾಕೆಯನ್ನ ಮತ್ತಿಬ್ಬರು ಮುಟ್ಟಿದರು. ಅವರಿಗೂ ಯುವತಿ ಸಖತ್ ಗೂಸಾ ನೀಡಿದ್ದಾಳೆ. ಕೊನೆಗೆ ಆಕೆಯನ್ನ ಕೆಳಗೆ ತಳ್ಳಿ ಕಾಮುಕರು ಬೀಳಿಸಿದ್ದಾರೆ. ಇದನ್ನೂ ಓದಿ: ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

    ನಗರದ ಬ್ರಿಗೇಡ್ ರಸ್ತೆಯಲ್ಲಿ ಮನೆಗೆ ಹೋಗಲು ಹೊರಟು ನಿಂತಿದ್ದ ಯುವತಿಯನ್ನ ಮೂವರು ಕಾಮುಕರು ಚುಡಾಯಿಸ್ತಾ ನಿಂತಿದ್ದರು. ಹೂವು ಕೊಟ್ಟು ಆಕೆಯನ್ನ ಪ್ರಪೋಸ್ ಮಾಡುತ್ತಾ, ಮಾನಸಿಕ ಕಿರಿಕಿರಿ ನೀಡುತ್ತಿದ್ದರು. ಕ್ಯಾಮೆರಾ ಶೂಟ್ ಮಾಡುತ್ತಿದೆ ಎಂದು ಗೊತ್ತಾದ ಕೂಡಲೇ ಮತ್ತೊಬ್ಬಾತ ಕರೆದುಕೊಂಡು ಹೋದ ಪ್ರಸಂಗವೂ ನಡೆದಿದೆ.

    ಪೆಟ್ರೋಲ್ ಬಂಕ್ ಎದುರು ಮೂವರು ಯುವತಿಯರು ಹೋಗುವಾಗ ಬೀದಿ ಕಾಮಾಂಧರು ಕೈಯಿಂದ ಅವರ ದೇಹ ಸವರುವ ಕೆಲಸ ಮಾಡಿದ್ದಾರೆ. ಈ ವೇಳೆ ಯುವತಿಯರು ಅವರಿಂದ ಹೇಗೋ ತಪ್ಪಿಸಿಕೊಂಡು ಪೊಲೀಸರ ಬಳಿ ಹೋಗಿ ರಕ್ಷಿಸಿಕೊಂಡಿದ್ದಾರೆ.

  • ಡರ್ಟಿ ಕೇಕ್, ಪ್ರಾಣ ತೆಗೆಯೋ ರಾಸಾಯನಿಕ- ನ್ಯೂ ಇಯರ್ ಕಲರ್‌ಫುಲ್‌ ಕೇಕಿನ ಹಿಂದಿದೆ ಕಿಲ್ಲರ್ ಕೆಮಿಕಲ್..!

    ಡರ್ಟಿ ಕೇಕ್, ಪ್ರಾಣ ತೆಗೆಯೋ ರಾಸಾಯನಿಕ- ನ್ಯೂ ಇಯರ್ ಕಲರ್‌ಫುಲ್‌ ಕೇಕಿನ ಹಿಂದಿದೆ ಕಿಲ್ಲರ್ ಕೆಮಿಕಲ್..!

    ಬೆಂಗಳೂರು: ಇಂದು ಮಧ್ಯರಾತ್ರಿ ಹೊಸ ವರ್ಷದ ಆಚರಣೆ ಕೇಕ್ ಕತ್ತರಿಸುವ ಮೂಲಕ ಆರಂಭವಾಗುತ್ತದೆ. ಹೊಸ ವರ್ಷಕ್ಕೆ ಸ್ಪೆಷಲ್ ಕೇಕ್ ಹುಡ್ಕೊಂಡು ಹೊರಡುವ ಮಂದಿಯೇ ಎಚ್ಚರವಾಗಿರಿ. ಯಾಕಂದ್ರೆ ಹೊಸ ವರ್ಷದ ಮೂಡ್ ಕೆಡಿಸಲು ಸಪ್ಲೈ ಆಗುತ್ತಿದೆ ಕಿಲ್ಲರ್ ಕೇಕ್.

    ಹೌದು. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾ ಕಣ್ಣಿನಲ್ಲಿ ಹಾಗೂ ರಿಯಾಲಿಟಿ ಚೆಕ್‍ನಲ್ಲಿ ಕಲರ್ ಕೇಕ್‍ನ ಅಸಲಿ ಬಣ್ಣಗಳು ಬಯಲಾಗಿದೆ. ಜೀವನದಲ್ಲಿ ಮತ್ತೆಂದೂ ಕೇಕ್ ತಿನ್ನಬಾರದು ಅಂತಾ ಅನ್ನಿಸುವಷ್ಟು ಕೆಟ್ಟದಾಗಿ ಕೇಕ್ ತಯಾರಾಗುತ್ತದೆ. ಬೆಂಗಳೂರು ಮಾತ್ರವಲ್ಲದೇ ಗದಗ್ ಹಾಗೂ ಹುಬ್ಬಳ್ಳಿಯಲ್ಲೂ ಇದೇ ರೀತಿಯಲ್ಲಿ ಕೇಕ್ ಗಳು ತಯಾರಾಗುತ್ತವೆ.

    ಅದೇನ್ ಕಲರ್ರು. ಅದೇನು ಸಾಫ್ಟು. ವೆರೈಟಿ ಡಿಸೈನು. ಬೆಣ್ಣೆಯಂತಹ ಕ್ರೀಂನಲ್ಲಿ ಸ್ಟ್ರಾಬರಿ, ಚೆರ್ರಿ, ಹಿಂಗೆ ಕಣ್ಣು ಕುಕ್ಕುವಂತಹ ಡಿಸೈನ್ಸ್ ಗಳು. ಇದು ಹೊಸ ವರ್ಷಕ್ಕೆ ರೆಡಿಯಾಗಿರೋ ವೆರೈಟಿ ವೆರೈಟಿ ಕೇಕುಗಳು. ನ್ಯೂ ಇಯರ್ ಸೆಲಬ್ರೇಷನ್‍ಗೆ ಎಣ್ಣೆ ಹೊಡೆಯೋ ಮುಂಚೆ ಕೇಕ್ ಕಟ್ಟಿಂಗ್ ಮಾಡೋದು ಕಾಮನ್. ಆದ್ರೆ ಈ ಕಲರ್‍ಫುಲ್ ಕೇಕ್‍ನ ಅಸಲಿ ಕಥೆ ಇಲ್ಲಿದೆ. ಇದನ್ನೂ ಓದಿ: ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

    ನಾಗಾವರ ಬೇಕರಿ:
    ಬೇಕರಿಯ ಗ್ಲಾಸ್‍ನಲ್ಲಿ ಅತ್ಯಾಕರ್ಷಕವಾಗಿ ಕಾಣೋ ಕೇಕ್ ಗಳು ಹೇಗೆ ತಯಾರಾಗ್ತವೆ ಅನ್ನೋದನ್ನು ನೋಡಲು ಕೇಕ್ ರೆಡಿಮಾಡ್ತೀರೋ ನಾಗವಾರದ ಒಂದು ಬೇಕರಿ ಬಳಿ ಹೋಗಿದ್ವಿ. ಆದ್ರೆ ಅಲ್ಲಿ ಹೋಗಿ ಕಿಚನ್ ಕಡೆ ದೃಷ್ಟಿ ಹಾಯಿಸಿದ್ರೆ ವಾಕರಿಕೆ ಬರೋದೊಂದು ಬಾಕಿಯಿತ್ತು. ಕೋಳಿಫಾರಂಗೆ ಹೊಂದಿಕೊಂಡಂತೆ ಇರುವ ಈ ಬೇಕರಿಯವನದ್ದು ಬೆಂಗಳೂರಿನಲ್ಲಿ ಮೂರು ಬ್ರ್ಯಾಂಚ್ ಇದ್ಯಂತೆ. ಜಗತ್ತಿನ ಅಷ್ಟು ಗಲೀಜುಗಳನ್ನು ಈತನ ಬೇಕರಿಯ ಕಿಚನ್‍ನಲ್ಲಿಯೇ ಇದ್ಯೋ ಅನ್ನೋ ಹಾಗಿತ್ತು ಆ ಬೇಕರಿಯ ಸ್ಥಿತಿ. ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?

    ಅಲಲ್ಲಿ ಕಸ, ಗಲೀಜು ಬಟ್ಟೆ ಧರಿಸಿ ಕೇಕ್ ಲಟ್ಟಿಸೋ ಈತ ಕಪ್ಪು ಕಪ್ಪಾಗಿ ಅಲ್ಲಲ್ಲಿ ತುಕ್ಕು ಹಿಡಿದಿರುವ ಕಬ್ಬಿಣದ ಟ್ರೇನಲ್ಲಿ ಬ್ರೆಡ್‍ಗಳನ್ನು ಇಟ್ಟಿದ್ದಾನೆ. ಜೊತೆಗೆ ನೊಣಗಳ ಹಾರಾಟ, ಬ್ರೆಡ್‍ಗಳಿಗೆ ಮಾಸಿದ ಬಣ್ಣದ ಪೇಪರ್‍ಗಳನ್ನೂ ಇಟ್ಟಿದ್ದಾರೆ. ಜನರಿಗೆ ವಿಷವನ್ನು ಉಣಿಸೋ ರಾಕ್ಷಸನಂತಿರುವ ಈ ಮನುಷ್ಯನತ್ರ ಹೊಸ ವರ್ಷಕ್ಕೆ ಕೇಕ್ ಸಿಗುತ್ತಾ ಅಂತಾ ಮಾತಾನಾಡಿಸಿದಾಗ, ನಮ್ಮಲ್ಲಿ ಫುಲ್ ಫ್ರೆಶ್ ಕೇಕ್ ಸಿಗೋದು, ಇಡೀ ಹೊಸ ವರ್ಷದ ಅಷ್ಟು ಆರ್ಡರ್ ತನಗೆ ಸಿಗುತ್ತೆ ಅನ್ನೋ ರೇಂಜಿಗೆ ಮಾತನಾಡಿದ್ದಾನೆ.

    ಪ್ರತಿನಿಧಿ: ಇಲ್ಲೇ ರೆಡಿ ಮಾಡೋದಾ ಕೇಕ್?
    ಬೇಕರಿ ಮಾಲೀಕ:  ನಮ್ಮದು ಮೂರು ಅಂಗಡಿ ಇದೆ. ಕಂಟ್ಮೋನ್ಮೆಂಟ್‍ನಲ್ಲಿ ಇದೆ. ಇಲ್ಲೆ ಎರಡು ಇದೆ.
    ಪ್ರತಿನಿಧಿ: ಇಲ್ಲೆ ರೆಡಿ ಮಾಡ್ತೀರಾ, ಈ ಸ್ಪಾಟ್‍ನಲ್ಲೇ?

    ಬೇಕರಿ ಮಾಲೀಕ: ಹೌದು
    ಪ್ರತಿನಿಧಿ: ಪ್ರೆಶ್ ಸಿಗುತ್ತಾ?
    ಬೇಕರಿ ಮಾಲೀಕ: ಫ್ರೆಶ್ಶೆ ಸಿಗುತ್ತೆ. ನಮ್ಮಲ್ಲಿ ನ್ಯೂ ಇಯರ್‍ಗೆ , ಪ್ಲೇನ್ ಕೇಕ್ ಇದೆ. ಕ್ರೀಂ ಹಾಕ್ತೀವಿ.
    ಪ್ರತಿನಿಧಿ: ಕೆಮಿಕಲ್ ಹಾಕ್ತೀರಾ ಲೈಟ್ ಆಗಿ?

    ಬೇಕರಿಮಾಲೀಕ: ಕೆಮಿಕಲ್ ಯೂಸ್ ಮಾಡೇ ಮಾಡ್ತೀವಿ..
    ಪ್ರತಿನಿಧಿ: ಕೆಮಿಕಲ್ ಬಳಸಿದ್ರೆ ಮಕ್ಕಳಿಗೆ ಕೊಟ್ರೆ ಪ್ರಾಬ್ಲಂ ಆಗಲ್ವಾ?
    ಬೇಕರಿ ಮಾಲೀಕ: ಏನಿಲ್ಲ ಮಕ್ಕಳಿಗೆ ಏನು ಆಗಲ್ಲ. ಈ ಕ್ರೀಂ ಯ್ಯೂಸ್ ಮಾಡ್ತೀವಿ…ಸ್ವಲ್ಪ ತಿನ್ನಿ ಬೇಕಾದ್ರೆ.. ಹೀಗಂತ ಹೇಳಿ ಕಿತ್ತೋಗಿರೋ ಗಲೀಜು ಗ್ರೈಂಡರ್‍ಗೆ ತನ್ನ ಕೊಳಕು ಕೈ ಹಾಕಿ ಕ್ರೀಂ ತಂದು ತಿಂದು ನೋಡಿ ಅಂತಾ ಬೇರೆ ಹೇಳಿದ್ದಾನೆ. ಜೊತೆಗೆ ನಮ್ಮಲ್ಲಿ ಐಸ್ ಕ್ರೀಂ ಕೇಕ್ ಅಂತೆಲ್ಲ ವೆರೈಟಿ ಸಿಗುತ್ತೆ. ಕಲರ್‍ಗೆ ಯಾವ ಕೆಮಿಕಲ್ ಯೂಸ್ ಮಾಡ್ತೀರಾ ಅಂತಾ ಕೇಳಿದಾಗ ಆ ಡಬ್ಬನೂ ತೋರಿಸಿದ. ಅದ್ನ ನೋಡಿ ನಾವು ಫುಲ್ ಶಾಕ್ ಆದೆವು. ಆತ ಈ ಕೇಕ್‍ಗೆ ಹಾಕುವ ಲಿಕ್ವಿಡ್ ಕಲರ್ ಕೆಮಿಕಲ್ ಬಾಟಲ್ ಕೂಡ ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿಂಪಲ್ ಕೇಕ್ ರೆಸಿಪಿ

    ಬಾಣಸವಾಡಿ ಬೇಕರಿ:
    ಇದು ತೀರಾ ಸ್ಲಂ ಏರಿಯಾ ಅಲ್ವೇ ಅಲ್ಲ. ಹೈ-ಫೈ ಏರಿಯಾ, ಬೇಕರಿ ಕೂಡ ಹೊಚ್ಚ ಹೊಸದು. ಈ ಬೇಕರಿಯ ಹೊರಗಡೆ ಅದೇನು ನೀಟ್ ನೆಸ್. ಫಳ ಫಳ ಅಂತ ಹೊಳೆಯುವ ಗ್ಲಾಸ್. ಥಳ ಥಳ ಅಂತಾ ಕಣ್ಣಿಗೆ ರಾಚುವಂತೆ ಸ್ವಚ್ವವಿರುವ ಟೈಲ್ಸ್. ಹೊಚ್ಚ ಹೊಸ ಈ ಬೇಕರಿನಲ್ಲಿ ಕೇಕ್‍ನ್ನು ಹಾಯಾಗಿ ತಿನ್ನಬಹುದು ಬಿಡಿ ಅಂತಾ ಕಾನ್ಫಿಡೆನ್ಸ್ ಮೇಲೆನೇ ನಾವು ಹೆಂಗೋ ಕಿಚನ್‍ಗೆ ಎಂಟ್ರಿ ಪಡ್ಕೊಂಡ್ವಿ.

    ಆದ್ರೆ ಹೊರಗಡೆ ನೋಡಿದ ಬ್ಯೂಟಿಫುಲ್ ಬೇಕರಿಯ ಕಲರ್ ಫುಲ್ ಡಿಸೈನ್ ಕೇಕ್ ತಯಾರೋಗೋದು ಕೊಳಕು ಸ್ಥಳದಲ್ಲಿ. ಹೊರಗಡೆ ಥಳಕು ಒಳಗಡೆ ಹುಳುಕು. ಕಸದ ರಾಶಿ, ಅಲ್ಲಲ್ಲಿ ಬಿದ್ದಿರೋ ಮೊಟ್ಟೆ ಸಿಪ್ಪೆ. ಕಪ್ಪು ಕಪ್ಪು ಹಿಟ್ಟು ನೆಲದ ಮೇಲೆ ಕಸದ ಜೊತೆ ಅಂಟಿ ಹೋಗಿದ್ರೂ ಅದರ ಮೇಲೆಯೇ ಕೇಕ್ ತಯಾರಿಸುವ ಬ್ರೆಡ್ ಹಾಕಲಾಗಿತ್ತು. ಇದನ್ನೂ ಓದಿ: ಸಿಂಪಲ್ ಚಾಕ್ಲೇಟ್ ಕೇಕ್

    ಹನುಮಂತ ನಗರ:
    ಬಳಿಕ ಹನುಮಂತ ನಗರದ ಬಳಿ ಇರುವ ಶ್ರೀ ಕೃಷ್ಣ ಬೇಕರಿಯತ್ತ ರಿಯಾಲಿಟಿ ಚೆಕ್‍ಗೆ ಇಳಿದ್ವಿ. ಈ ಏರಿಯಾದ ತೀರಾ ಡಿಮ್ಯಾಂಡ್‍ನಲ್ಲಿರುವ ಬೇಕರಿಯಿದು. ಇಲ್ಲಿನ ಸ್ವೀಟ್ಸ್, ಕೇಕ್ ಅಂದ್ರೆ ಜನ ಕಣ್ಣುಮುಚ್ಚಿ ದೇವ್ರ ಪ್ರಸಾದಂತೆ ತಿನ್ನುತ್ತಾರೆ. ಆದ್ರೆ ಈ ಬೇಕರಿಗೂ ಈ ಹಿಂದೆ ತೋರಿಸಿದ ಬೇಕರಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ.

    ಗೋರಿಪಾಳ್ಯ:
    ಇದೊಂಥರ ತಿಪ್ಪೆಗುಂಡಿನೇ ಬಿಡಿ. ವರ್ಣನೆ ಬೇರೆ ಇಲ್ಲ. ಈ ಬೇಕರಿಯಲ್ಲಿ ಕೇಕ್‍ಗಿಂತ ಹೆಚ್ಚಾಗಿ ಕಣ್ಣಿಗೆ ರಾಚುವಂತೆ ಇದ್ದಿದ್ದು ಡೇಂಜರಸ್ ಕೆಮಿಕಲ್ ಬಾಟಲ್ಸ್. ಜೆಲ್, ಕ್ರೀಂ, ಚಾಕ್ಲೇಟ್ ಅಂತಾ ಇರೋ ಬರೋ ಕೆಮಿಕಲ್ ದ್ರಾವಣನಾ ಕೇಕ್ ಮೇಲೆ ಸಿಂಪರಣೆ ಮಾಡ್ತಾರೆ.

    ಕೇಕ್‍ಗೆ ನಾನಾ ಪ್ಲೇವರ್ ಹಾಗೂ ಬಣ್ಣಗಳು ಬರೋದಕ್ಕೆ ಡೇಂಜರಸ್ ಕೆಮಿಕಲ್ ದ್ರಾವಣ ಬಳಸಲಾಗುತ್ತೆ. ಅದ್ರಲ್ಲೂ ಎಕ್ಸ್‍ಪೈರಿ ಡೇಟ್ ಮೀರಿದ ವಿಷಕಾರಿ ಕೆಮಿಕಲ್‍ಗಳ ಬಳಕೆಯನ್ನು ಕೂಡ ಮಾಡಲಾಗುತ್ತದೆ. ಅಶುಚಿತ್ವದ ಕೇಕ್ ವಿಷವಾಗೋದ್ರ ಜೊತೆಗೆ ಇಲ್ಲಿ ಬಳಸಲಾಗುವ ವಿಷಯುಕ್ತ ಕೆಮಿಕಲ್‍ನಿಂದ ಕ್ಯಾನ್ಸರ್, ಹೊಟ್ಟೆ ಹುಣ್ಣು, ಕರುಳಿನ ಬೇನೆ, ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರುವ ಸಾಧ್ಯತೆಗಳಿವೆ.

    ಒಟ್ಟಿನಲ್ಲಿ ಹೊಸ ವರ್ಷದ ಆಚರಣೆ ಸಿಹಿಯಾಗಿರಲಿ, ಸವಿಯಾಗಿರಲಿ ಅಂತಾ ನಾವು ಕೇಕ್ ಕಟ್ ಮಾಡಿ ಅಚರಣೆ ಮಾಡೋಕೆ ರೆಡಿಯಾದ್ರೇ ಅದ್ರೊಳಗೆ ವಿಷದ ಬಾಂಬ್ ಅನ್ನೇ ಇಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು. ಹೀಗಾಗಿ ಸಿಕ್ಕ ಸಿಕ್ಕಲ್ಲಿ ಕೇಕ್ ಖರೀದಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೊದಲು ಎಚ್ಚರವಾಗಿರಿ.

    https://www.youtube.com/watch?v=Re5e1teDMiQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸವರ್ಷದಂದು ರೌಡಿಶೀಟರ್‍ಗಳಿಗೆ ಪೊಲೀಸರಿಂದ ಬುಲಾವ್- ಅಳುಕಿನಿಂದ್ಲೇ ಠಾಣೆಗೆ ಬಂದವ್ರಿಗೆ ಆಶ್ಚರ್ಯ

    ಹೊಸವರ್ಷದಂದು ರೌಡಿಶೀಟರ್‍ಗಳಿಗೆ ಪೊಲೀಸರಿಂದ ಬುಲಾವ್- ಅಳುಕಿನಿಂದ್ಲೇ ಠಾಣೆಗೆ ಬಂದವ್ರಿಗೆ ಆಶ್ಚರ್ಯ

    ಬೆಂಗಳೂರು: ಇಂದು ಬೆಳಗ್ಗೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳಿಗೆ ಠಾಣೆಗೆ ಬರಲು ಪೊಲೀಸರು ಸೂಚಿಸಿದ್ದರು. ಹೊಸ ವರ್ಷದ ದಿನದಂದೇ ಬುಲಾವ್ ಬಂದಿದ್ದಕ್ಕೆ ಅಳುಕಿನಿಂದಲೇ ಠಾಣೆಗೆ ಬಂದವರಿಗೆ ಆಶ್ಚರ್ಯ ಕಾದಿತ್ತು.

    ಠಾಣೆಗೆ ಬಂದವರಿಗೆ ಅತ್ತಿಬೆಲೆ ಠಾಣೆಯ ಪೊಲೀಸರು ಒಂದೊಂದು ಪುಸ್ತಕ ಹಾಗು ಗಿಡಗಳನ್ನು ಕೊಟ್ಟು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅತ್ತಿಬೆಲೆ ವೃತ್ತ ನಿರೀಕ್ಷಕರಾದ ಎಲ್.ವೈ.ರಾಜೇಶ್, ಪಿಎಸ್‍ಐ ನವೀನ್ ಗಜೇಂದ್ರ ಹಾಗು ಠಾಣಾ ಸಿಬ್ಬಂದಿ ಇಂದು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ರೌಡಿಶೀಟರ್ ಪಟ್ಟ ಕಟ್ಟಿಕೊಂಡವರನ್ನು ಹೊಸ ವರ್ಷದ ಮೊದಲ ದಿನ ಠಾಣೆಗೆ ಕರೆಯಿಸಿ ಶುಭಾಶಯ ಕೋರಿ ಎಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿ ಒಬ್ಬಒಬ್ಬರಿಗೂ ‘ಕರುಣಾಳು ಬಾ ಬೆಳಕೇ’ ಎಂಬ ಪುಸ್ತಕ ಹಾಗು ಗಿಡಗಳನ್ನು ನೀಡಿದ್ರು.

    ಈ ಸಂದರ್ಭದಲ್ಲಿ ಸಿಪಿಐ ರಾಜೇಶ್ ಮಾತನಾಡಿ, ಈ ಹಿಂದೆ ಕಾನೂನು ಭಂಗ ಹಾಗು ಕೆಲವು ಅಪಾರಾಧ ಕೃತ್ಯಗಳಿಂದ ರೌಡಿಶೀಟರ್ ಗಳಾಗಿದ್ದು ಇವರ ಬಾಳಲ್ಲಿ ಪರಿವರ್ತನೆಯಾಗಲಿ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮರಾಗಿ ಬಾಳಲಿ ಎಂಬ ಉದ್ದೇಶದಿಂದ ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಲಾಗಿದೆ. ಅವರಿಗೆ ಕೊಟ್ಟಿರುವ ಪ್ರತಿಯೊಂದು ಗಿಡವನ್ನು ನೋಡಿದಾಗ ಅವರು ಪರಿವರ್ತನೆಯಾಗುವುದರ ಜೊತೆಗೆ ಕೊಟ್ಟಿರುವ ಪುಸ್ತಕ ಓದಿ ಅವರ ಬಾಳಲ್ಲಿ ಬಡಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಉತ್ತಮವಾಗಿ ಜೀವನ ನಡೆಸಲು ಇನ್ನೂ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿ ಅವರಿಗೆ ಹೊಸ ವರ್ಷದ ಶುಭಾಶಯ ತಿಳಿಸಲಾಯಿತು ಎಂದರು.

  • ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

    ಹೊಸವರ್ಷದಂದು 12.05 ಕ್ಕೆ ಹೆಣ್ಣುಮಗು ಜನನ- ಬಿಬಿಎಂಪಿಯಿಂದ ದಂಪತಿಗೆ ಸಿಕ್ತು ಭರ್ಜರಿ ಗಿಫ್ಟ್!

    ಬೆಂಗಳೂರು: ಹೊಸವರ್ಷದಂದು ರಾತ್ರಿ 12 ಗಂಟೆಗೆ ಹುಟ್ಟಿದ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡೋ ಮೂಲಕ ಬಿಬಿಎಂಪಿ ಭರ್ಜರಿ ಗಿಫ್ಟ್ ನೀಡಿದೆ.

    ಹೊಸವರ್ಷದ ಮೊದಲ ದಿನವೇ ಗೋಪಿ-ಪುಷ್ಪಾ ದಂಪತಿಗೆ ಹುಟ್ಟಿದ ಹೆಣ್ಣು ಮಗುವಿಗೆ ಬಿಬಿಎಂಪಿ ಈ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ. ರಾಜಾಜಿನಗರದ ಡಾ.ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ 12.05 ಕ್ಕೆ ಹೆಣ್ಣು ಮಗು ಜನಿಸಿದೆ. ಕೂಡಲೇ ಸ್ಥಳಕ್ಕೆ ಮೇಯರ್ ಸಂಪತ್ ರಾಜ್ ತೆರಳಿ ಬಹುಮಾನ ಘೋಷಿಸಿದ್ದಾರೆ.

    ತಮ್ಮ ಮಗುವಿಗೆ ಒಲಿದ ಈ ಅದೃಷ್ಟದಿಂದ ದಂಪತಿ ಖುಷಿಯಾಗಿದ್ದಾರೆ. ಮೇಯರ್ ಇದೇ ಮೊದಲ ಬಾರಿ ಈ ಬಗೆಯ ಬಹುಮಾನ ಘೋಷಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಹಾಗೂ ಮಗುವಿನ ಹೆಸರಿನಲ್ಲಿ ಐದು ಲಕ್ಷ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಈ ಹಣವನ್ನು 18 ವರ್ಷದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಬಳಕೆ ಮಾಡಬಹುದು. ಐದು ಲಕ್ಷದ ಠೇವಣಿಯ ಬಡ್ಡಿ ಹಣವನ್ನು ಪ್ರತಿ ವರ್ಷ ಶಿಕ್ಷಣಕ್ಕೆ ಉಪಯೋಗಿಸಬಹುದು. ಹಣವನ್ನು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ಬಳಸಲು ದಂಪತಿ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ ಬಂಪರ್ ಆಫರ್!

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬಡವರ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದ್ರೆ ಕಷ್ಟ ಅಂದುಕೊಳ್ಳುವ ಜನ ತುಂಬಾ ಇದ್ದಾರೆ. ಆದ್ರೇ ಇದೀಗ ಪರಿಸ್ಥಿತಿ ಬದಲಾಗಿದೆ. ಬಿಬಿಎಂಪಿಯಲ್ಲಿಯೇ 102 ಜನ ಮಹಿಳೆಯರು ಜನಪ್ರತಿನಿಧಿಗಳಿದ್ದಾರೆ. ಮಗು ಹಾಗೂ ಬಿಬಿಎಂಪಿ ಕಮಿಷನರ್ ಹೆಸರಿನಲ್ಲಿ ಐದು ಲಕ್ಷ ರೂ. ಹಣ ಠೇವಣಿ ಇಡಲಾಗಿದೆ. ಮಗುವಿನ ಶಿಕ್ಷಣಕ್ಕೆ ಮಾತ್ರ ಈ ಹಣ ಬಳಕೆಯಾಗಲಿದೆ. ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸೋ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ರು.

    ಮಗುವಿನ ತಾಯಿ ಪುಷ್ಪಾ ಸಿಎಂ ಸಿದ್ದರಾಮಯ್ಯನವರ ತವರು ಸಿದ್ದರಾಮನಹುಂಡಿಯವರು ಎಂದು ತಿಳಿದುಬಂದಿದೆ.

  • ಮೈಸೂರಿನ ವಿವಿಧ ದೇವಾಲಯಗಳಲ್ಲಿಂದು ವಿಶೇಷ ಪೂಜೆ- ಭಕ್ತಾದಿಗಳಿಗೆ 2 ಲಕ್ಷ ಲಾಡು ವಿತರಣೆ

    ಮೈಸೂರಿನ ವಿವಿಧ ದೇವಾಲಯಗಳಲ್ಲಿಂದು ವಿಶೇಷ ಪೂಜೆ- ಭಕ್ತಾದಿಗಳಿಗೆ 2 ಲಕ್ಷ ಲಾಡು ವಿತರಣೆ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೊಸ ವರ್ಷಕ್ಕೆ ವಿಭಿನ್ನ ರೀತಿಯ ಸ್ವಾಗತ ಕೋರಿದ್ದು, ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

    ಚಾಮುಂಡಿ ಬೆಟ್ಟ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುತ್ತಿದ್ದು, ಮೈಸೂರಿನ ಯೋಗ ನರಸಿಂಹ ಸ್ವಾಮಿ ದೇವಾಲಯದಿಂದ ಭಕ್ತರಿಗೆ ಲಾಡು ವಿತರಣೆ ಮಾಡುತ್ತಿದ್ದಾರೆ. ದೇವಾಲಯ ಭಕ್ತಾದಿಗಳಿಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸುಮಾರು ಎರಡು ಲಕ್ಷ ಲಾಡು ವಿತರಿಸುತ್ತಿದೆ.

    ಮೈಸೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ದೇವಾಲಯಗಳಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅರಮನೆಯಂತೂ ಬೆಳಕಿನ ಚಿತ್ತಾರದಿಂದ ಕಂಗೊಳಿಸುತ್ತಿದ್ದು, ವಿವಿಧ ಬಣ್ಣದ ಬೆಳಕಿನ ಚಿತ್ತಾರ ನಯನ ಮನೋಹರವಾಗಿತ್ತು. ಪ್ಯಾಲೇಸ್ ಮೇಲಿಂದ ಸಿಡಿದ ಸಿಡಿಮದ್ದು ನೋಡುಗರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯಿತು.

    ಹೊಸ ವರ್ಷದ ಪ್ರಯುಕ್ತ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭಾಶಯ ಕೋರಿದ್ದು, ಎಲ್ಲರಿಗೂ ಆಂಗ್ಲ ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

  • ಕಳ್ಳತನವಾಗಿದ್ದ ಮನೆಯವರಿಗೆ ಹೊಸ ವರ್ಷದಂದು ಸರ್ಪ್ರೈಸ್ ಗಿಫ್ಟ್ ಕೊಟ್ಟ ಪೊಲೀಸರು

    ಕಳ್ಳತನವಾಗಿದ್ದ ಮನೆಯವರಿಗೆ ಹೊಸ ವರ್ಷದಂದು ಸರ್ಪ್ರೈಸ್ ಗಿಫ್ಟ್ ಕೊಟ್ಟ ಪೊಲೀಸರು

    ಬೆಂಗಳೂರು: ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಯಿಂದ ಕೆಲವರಿಗೆ ಸರ್ಪ್ರೈಸ್ ಉಡುಗೊರೆ ದೊರೆತಿದೆ.

    ಹೊಸ ವರ್ಷಕ್ಕೆ ಪೊಲೀಸ್ ಇಲಾಖೆ ವಿನೂತನ ಕೊಡುಗೆ ನೀಡಿದ್ದು, ಕಳ್ಳತನವಾದ ಚಿನ್ನಾಭರಣವನ್ನು ಅವರವರ ಮನೆಗೆ ತಲುಪಿಸಿದ್ದಾರೆ. ಹೊಸ ವರ್ಷ ರಾತ್ರಿ 12 ಗಂಟೆಗೆ ಇನ್ಸ್ ಪೆಕ್ಟರ್ ಮುಖಾಂತರ ರಿಕವರಿಯಾಗಿದ್ದ ವಸ್ತುಗಳನ್ನು ವಾಪಸ್ ನೀಡಿದ್ದಾರೆ.

    ಕೋರ್ಟ್ ಅನುಮತಿ ಪಡೆದು ನಂತರ ಕಳ್ಳರಿಂದ ರಿಕವರಿ ಮಾಡಿಕೊಂಡಿದ್ದ ವಸ್ತುಗಳನ್ನು ಹೊಸ ವರ್ಷದ ಪ್ರಯುಕ್ತ ಸರ್ಪ್ರೈಸ್ ಆಗಿ ವಾಪಾಸ್ ನೀಡಿದ್ದಾರೆ. ಯಲಹಂಕ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜೇಗೌಡ, ವೆಂಕಟೇಶ್ವರಲು ದಂಪತಿಗೆ ತಾವು ಕಳೆದುಕೊಂಡಿದ್ದ 40 ಗ್ರಾಂ ಚಿನ್ನಾಭರಣವನ್ನು ಹಿಂತಿರುಗಿಸಿದ್ದಾರೆ. ಪೊಲೀಸರು ಹುಣಸಮಾರನಹಳ್ಳಿ ಮನೆಗೆ ದಿಢೀರ್ ಭೇಟಿ ಕೊಟ್ಟು ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದಾರೆ.

    ಬೊಮ್ಮನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್, ನಂದಕಿಶೋರ್ ಮನೆಗೆ ತೆರಳಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ್ದಾರೆ. ಹೀಗೆ ಪೊಲೀಸರು ಚಿನ್ನಾಭರಣ ಕಳೆದುಕೊಂಡಿದ್ದ ದಂಪತಿಗಳ ಮನೆಗೆ ಹೋಗಿ ವಸ್ತುಗಳನ್ನ ವಾಪಸ್ ನೀಡಿ ವಿಶಿಷ್ಟತೆ ಮೆರೆದಿದ್ದಾರೆ.

    ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ ಆದೇಶದ ಮೇರೆಗೆ ಪೊಲೀಸರು ಈ ಕರ್ತವ್ಯವನ್ನು ನೆರವೇರಿಸಿದ್ದಾರೆ.

  • ಗದಗದಲ್ಲಿ ಹೊಸ ವರ್ಷಕ್ಕೆ ಪಟಾಕಿ- ಚೆಲ್ಲಾಪಿಲ್ಲಿಯಾಗಿ ಓಡಿದ ಜನ

    ಗದಗದಲ್ಲಿ ಹೊಸ ವರ್ಷಕ್ಕೆ ಪಟಾಕಿ- ಚೆಲ್ಲಾಪಿಲ್ಲಿಯಾಗಿ ಓಡಿದ ಜನ

    ಗದಗ: ಈ ಬಾರಿ ಬಹಳ ಅದ್ಧೂರಿಯಾಗಿ ಹೊಸವರ್ಷವನ್ನು ಆಚರಿಸಲಾಯಿತು. ಆದರೆ 2017 ಕಳೆದು 2018 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಜನರಲ್ಲಿ ಭಯ ಮೂಡಿತ್ತು.

    ನಗರದ ಶಿವರತ್ನ ಪ್ಯಾಲೇಸ್ ಹೋಟೆಲ್ ಒಂದರಲ್ಲಿ ನ್ಯೂ ಇಯರ್ ಆಚರಣೆ ಹಮ್ಮಿಕೊಳ್ಳಲಾಗಿತ್ತು. ವೈಭವದ ಹೊಸ ವರ್ಷ ಗಂಟೆ 12 ಆಗುತ್ತಿದ್ದಂತೆ ಪಟಾಕಿ ಸಿಡಿಸುವ ವೇಳೆ ಆ ಕಲರ್ 120 ರ ಸರದಿ ಪಟಾಕಿಗಳು ಮೇಲೆ ಸಿಡಿಯುವ ಬದಲು ಜನರ ಮಧ್ಯೆ ಸಿಡಿಯಲಾರಂಭಿಸಿದವು. ಇದರಿಂದ ಜನ ಕಂಗಾಲಾಗಿ ಅಲ್ಲಿಂದ ಚೆಲ್ಲಾಪಿಲ್ಲಿಯಾಗಿದ್ದಾರೆ.

    ನೂರಾರು ಜನ ಎದ್ನೋ ಬಿದ್ನೋ ಅಂತ ಒಡಲಾರಂಭಿಸಿದ್ದು, ಹೊಸ ವರ್ಷದ ಆರಂಭದಲ್ಲೇ ಕೆಲವರು ಆತಂಕ, ಭಯಕ್ಕೆ ಒಳಗಾಗಿರುವುದು ಮರೆಯದ ನೆನಪಾಗಿದೆ. ಕೆಲವರಿಗೆ ವರ್ಷದ ಆರಂಭದ ಕ್ಷಣದಲ್ಲೇ ಹೀಗಾದರೆ ವರ್ಷದ ಪೂರ್ತಿ ಹೆಗಪ್ಪ ಎಂಬ ಚಿಂತೆ ಮನೆಮಾಡಿದೆ. ಮ್ಯೂಜಿಕ್ ಗೆ ತಕ್ಕಂತೆ ಸ್ಟೆಪ್ ಹಾಕುವವರ ಹೆಜ್ಜೆ ತಪ್ಪುವಂತೆ ಪಟಾಕಿ ಮಾಡಿರುವುದು ವಿಪರ್ಯಾಸ ಸಂಗತಿಯಾಗಿದೆ.