Tag: ಹೇಮಲತಾ ಗೋಪಾಲಯ್ಯ

  • ಬಿಜೆಪಿ ಮುಂದೆ ದುಬಾರಿ ಬೇಡಿಕೆ ಇಟ್ಟ ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯ!

    ಬಿಜೆಪಿ ಮುಂದೆ ದುಬಾರಿ ಬೇಡಿಕೆ ಇಟ್ಟ ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯ!

    -ಬಿಜೆಪಿಗೆ ಹೊಸ ತಲೆನೋವು ಆರಂಭ

    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಗೋಪಾಲಯ್ಯ ವಿಪ್ ಉಲ್ಲಂಘಿಸಿ ಮತ ಹಾಕದೇ ಉಳಿದಿದಕ್ಕೆ ಬಿಜೆಪಿ ಬಳಿ ದುಬಾರಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನನ್ನ ಪತ್ನಿಯನ್ನ ಮುಂದಿನ ಮೇಯರ್ ಮಾಡಿ ಎಂದು ಬಾರಿ ಬೇಡಿಕೆಯನ್ನ ಗೋಪಾಲಯ್ಯ ಇಟ್ಟಿದ್ದಾರೆ. ಸದ್ಯ ಬಿಬಿಎಂಪಿಯಲ್ಲಿ ಹೇಮಲತಾ ಗೋಪಾಲಯ್ಯರಿಗೆ ಮೇಯರ್ ಪಟ್ಟ ಎಂಬ ವಿಚಾರ ಬಾರಿ ಸದ್ದು ಮಾಡುತ್ತಿದೆ. ಅನರ್ಹ ಶಾಸಕ ಗೋಪಾಲಯ್ಯ ಪತ್ನಿಗಾಗಿ ಕಾದಾಟ ಶುರು ಮಾಡಿದ್ದಾರೆ. ಬಿಜೆಪಿ ಲೀಡರ್‍ಗಳಿಗೆ ಈ ಮಹಾ ಬೇಡಿಕೆ ಕೇಳಿ ತಲೆಬಿಸಿಯಾಗಿದೆ ಎಂಬ ಮಾಹಿತಿಯೂ ಇದೆ.

    ಜೆಡಿಎಸ್ ಕಾರ್ಪೋರೇಟರ್ ಹೇಮಲತಾ ಗೋಪಾಲಯ್ಯ ಮೇಯರ್ ಆಗ್ತಾರೆ ಎಂಬ ವಿಚಾರ ಬಿಜೆಪಿಗೆ ತಲೆಕೆಡಿಸಿದೆ. ಇತ್ತ ಬಿಜೆಪಿಗೆ ಸದ್ಯ ಪಾಲಿಕೆಯಲ್ಲಿ ಹೆಚ್ಚು ಸಂಖ್ಯಾಬಲವಿದ್ರು ಅಧಿಕಾರ ಸಿಗದೇ ದೂರ ಉಳಿಯಬೇಕಾಗುತ್ತದೆ. ಇತ್ತ ಬಿಜೆಪಿ ಅವಧಿಯಲ್ಲಿ ಹೇಮಲತಾರಿಗೆ ಮೇಯರ್ ಪಟ್ಟ ಎಂಬ ಗೋಪಾಲಯ್ಯರ ದುಬಾರಿ ಡಿಮ್ಯಾಂಡ್‍ಗೆ ಬಿಜೆಪಿ ಕಾರ್ಪೋರೇಟರ್ಸ್, ಶಾಸಕರು ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ಈಗಾಗಲೇ ಬಿಜೆಪಿ ನಾಯಕರ ಜೊತೆ ಮಾತನಾಡಿರುವ ಗೋಪಾಲಯ್ಯ, ನನಗೆ ಸಚಿವ ಸ್ಥಾನ ಬೇಡ. ನನ್ನ ಪತ್ನಿ ಮೇಯರ್ ಮಾಡಿ ಎಂಬ ಡಿಮ್ಯಾಂಡ್ ಇಟ್ಟಿದ್ದಾರೆ. ಗೋಪಾಲಯ್ಯ ರಾಜೀನಾಮೆ ನೀಡಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿರುವ ಪ್ರತಿಯಾಗಿ ದುಬಾರಿ ಉಡುಗೊರೆಯನ್ನೇ ನಿರೀಕ್ಷೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸದ್ಯ 4 ವರ್ಷದಲ್ಲಿ ಗೋಪಾಲಯ್ಯ ಪತ್ನಿಗೆ ಒಲಿದಿರೊ ಅಧಿಕಾರಗಳು ಹೀಗಿದೆ. ಉಪಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೀಗೆ ಅನುದಾನ ಎಲ್ಲವೂ ಹೇಮಲತಾ ಗೋಪಾಲಯ್ಯರಿಗೆ ಸಿಕ್ಕಿದೆ. ಹಲವು ಅಧಿಕಾರ ಅನುಭವಿಸಿರೊ ಹೇಮಲತಾ ಗೋಪಾಲಯ್ಯ, ಮೇಯರ್ ಗದ್ದುಗೆ ಏರಲು ನಿಂತಿದ್ದು ಬಿಜೆಪಿ ಕಾರ್ಪೋರೇಟರ್ ಗಳನ್ನು ತಬ್ಬಿಬ್ಬು ಮಾಡಿದೆ. ಸಂಖ್ಯಾಬಲವಿದ್ರು, ಅಧಿಕಾರ ಮಾತ್ರ ಇಲ್ಲ. ಬಿಜೆಪಿ ಕಾರ್ಪೋರೇಟರ್ಸ್ ಗೆ ಅನರ್ಹ ಶಾಸಕ ಗೋಪಾಲಯ್ಯ ಡಿಮ್ಯಾಂಡ್‍ದೇ ಚಿಂತೆಯಾಗಿದೆ. ಇತ್ತ ಸೆಪ್ಟೆಂಬರ್ 28ಕ್ಕೆ ಗಂಗಾಬಿಕೆ ಅವರ ಮೇಯರ್ ಅವಧಿ ಮುಕ್ತಾಯ ಆಗಲಿದೆ.

  • ದೇವೇಗೌಡರ ಸೊಸೆಯಿಂದ ತಡರಾತ್ರಿ ಆಪರೇಷನ್ ಪ್ರಯತ್ನ

    ದೇವೇಗೌಡರ ಸೊಸೆಯಿಂದ ತಡರಾತ್ರಿ ಆಪರೇಷನ್ ಪ್ರಯತ್ನ

    ಬೆಂಗಳೂರು: ಪತನದ ಅಂಚಿಗೆ ತಲುಪಿರುವ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಲು ಲೋಕೋಪಯೋಗಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮುಂದಾಗಿದ್ದಾರೆ.

    ಶನಿವಾರ ತಡರಾತ್ರಿ ಗೋಪಾಲಯ್ಯ ಅವರ ನಿವಾಸಕ್ಕೆ ಆಗಮಿಸಿದ ಭವಾನಿ ರೇವಣ್ಣ ಮಾತುಕತೆ ನಡೆಸಿದ್ದಾರೆ. ಹೇಮಲತಾ ಗೋಪಾಲಯ್ಯ ಮತ್ತು ಪುತ್ರನ ಜೊತೆ ಮಾತುಕತೆ ನಡೆಸಿ ರಾಜೀನಾಮೆಯನ್ನು ವಾಪಸ್ ಪಡೆಯಲು ಮನವಿ ಮಾಡಿದ್ದಾರೆ.

    ರಾಜಕೀಯ ಕ್ರಾಂತಿಯಲ್ಲಿ ತಮ್ಮ ಕೈ ಚಳಕ ತೋರಿಸಲು ಏಕಾಏಕಿ ಫೀಲ್ಡಿಗಿಳಿದು ಭವಾನಿ ರೇವಣ್ಣ ಸರ್ಕಾರ ಉಳಿಸುವ ಪ್ರಯತ್ನ ನಡೆಸಿದ್ದಾರೆ. ಪತಿ ಬಿಜೆಪಿಗೆ ಹೋದರೂ ನಾನು ಜೆಡಿಎಸ್‍ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ಹೇಮಲತಾ ಗೋಪಾಲಯ್ಯ ಹೇಳಿದ್ದಾರೆ.

    ನಿಷ್ಠಾವಂತ ಶಾಸಕ ಗೋಪಾಲಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕೇಳಿ ಜೆಡಿಎಸ್ ನಾಯಕರೇ ಶಾಕ್ ಆಗಿದ್ದಾರೆ. 2013 ಮತ್ತು 2018ರಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ನಿಂದ ಸ್ಪರ್ಧಿಸಿ ಗೋಪಾಲಯ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರು ಬಿಬಿಎಂಪಿಯ ಜೆಡಿಎಸ್ ಸದಸ್ಯರಾಗಿದ್ದು, ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ.