Tag: ಹೃದಯಾಘಾತ

  • ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

    ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

    ವಿಜಯವಾಡ: ಆಂಧ್ರದ ವಿಜಯವಾಡ ಜಿಲ್ಲೆಯಲ್ಲಿ ನಡೆದ ಕೃಷ್ಣಾ ನದಿ ದುರಂತದಲ್ಲಿ ಮೃತಪಟ್ಟ ತನ್ನ ಮಗಳ ಶವವನ್ನು ನೋಡಿ ತಾಯಿ ಆಘಾತಗೊಂಡು ಮೃತಪಟ್ಟ ದಾರುಣ ಘಟನೆ ನಡೆದಿದೆ.

    ಮೃತ ದುರ್ದೈವಿಯನ್ನು ಲಕ್ಷ್ಮೀಕಾಂತಂ ಎಂದು ಗುರುತಿಸಲಾಗಿದೆ. ವಿಧವೆಯಾಗಿರೋ ಲಕ್ಷ್ಮೀಕಾತಂ ತನ್ನ ಮಗಳು ಲೀಲಾವತಿ ಹಾಗೂ ಆಕೆಯ ಮಗಳೊಂದಿಗೆ ವಾಸವಿದ್ದರು. ಆದ್ರೆ ನಿನ್ನೆ ಇಲ್ಲಿನ ಕೃಷ್ಣಾ ನದಿಯಲ್ಲಿ ನಡೆದ ಘೋರ ದುರಂತದಿಂದಾಗಿ ಮಗಳು ಲೀಲಾವತಿ ಮೃತಪಟ್ಟಿದ್ದರು. ಮಗಳ ಸಾವಿನ ಸುದ್ದಿ ಕೇಳುತ್ತಿದ್ದಮತೆಯೇ ಮಾನಸಿಕವಾಗಿ ನೊಂದಿದ್ದ ತಾಯಿ, ಮಗಳ ಶವ ಮನೆಗೆ ಬಂದ ಬಳಿಕ ನೋಡಿದ ಕೂಡಲೇ ಆಘಾತಗೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಅದಾಗಲೇ ಹೃಯಯಾಘಾತವಾಗಿ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ನದಿ ದುರಂತಕ್ಕೆ ಬಲಿಯಾದ ಲೀಲಾವತಿ ಮಗಳು ವಿಜಯವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ತಾಯಿ ಹಾಗೂ ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

    ಇದನ್ನೂ ಓದಿ: ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ಜಿಲ್ಲೆಯ ಪವಿತ್ರ ಸಂಗಮ್ ಘಾಟ್ ಬಳಿಯ ಕೃಷ್ಣಾ ನದಿಯಲ್ಲಿ ಭಾನುವಾರ 38 ಜನ ಪ್ರಯಾಣಿಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, 11 ಮಂದಿ ಕಣ್ಮರೆಯಾಗಿದ್ದರು. ಇಲ್ಲಿಯವರೆಗೆ 16 ಮೃತದೇಹಗಳು ಪತ್ತೆಯಾಗಿದ್ದು, ಶವವನನ್ನು ಮರಣೋತ್ತರ ಪರೀಕ್ಷೆಗಾಗಿ ಒಂಗೋಲ್ ಪಟ್ಟಣಕ್ಕೆ ಕಳುಹಿಸಲಾಗಿದೆ.

    ಮೃತಪಟ್ಟವರೆಲ್ಲರೂ ಒಂಗೋಲ್ ವಾಲ್ಕರ್ಸ್ ಕ್ಲಬ್ ನವರಾಗಿದ್ದು, ಭಾನುವಾರ ರಜಾದಿನವಾಗಿದ್ದರಿಂದ ಎಲ್ಲರೂ ಭವಾನಿ ಐಲ್ಯಾಂಡ್ ಹಾಗೂ ಪವಿತ್ರ ಸಂಗಮ್ ಗೆ ಪಿಕ್ ನಿಕ್ ಗೆಂದು ತೆರಳಿದ್ದರು. ಈ ವೇಳೆ ದೋಣಿ ಮಗುಚಿ 17 ಮಂದಿ ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು.

  • ಹಂಪಿ ಉತ್ಸವದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿ ಸಾವು

    ಹಂಪಿ ಉತ್ಸವದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿ ಸಾವು

    ಬಳ್ಳಾರಿ: ಹಂಪಿ ಉತ್ಸವದಲ್ಲಿ ಎರಡನೇ ದಿನವೂ ಮತ್ತೊಂದು ಅವಘಡ ಸಂಭವಿಸಿದೆ. ಹೃದಯಾಘಾತದಿಂದ ವಾರ್ತಾ ಇಲಾಖೆ ಚಾಲಕರೊಬ್ಬರು ಸಾವನಪ್ಪಿದ ದುರ್ಘಟನೆ ನಡೆದಿದೆ.

    ಕೊಪ್ಪಳದ ವಾರ್ತಾ ಇಲಾಖೆಯ ಚಾಲಕ 50 ವರ್ಷದ ವೆಂಕಟೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಿಯದರ್ಶನಿ ಹೋಟೆಲ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಹೃದಯಾಘಾತಗೊಂಡು ಹೋಟೆಲ್‍ನಲ್ಲಿಯೇ ಸಾವಿಗೆ ಶರಣಾಗಿದ್ದಾರೆ.

    ಶನಿವಾರ ತಡರಾತ್ರಿ ಹಂಪಿ ಉತ್ಸವ ಮುಕ್ತಾಯಗೊಳಿಸಿ ವಾಹನದಲ್ಲಿದ್ದ ಪತ್ರಕರ್ತರು ನಿಗದಿತ ಸ್ಥಳಕ್ಕೆ ತಲುಪಿದ್ದಾರೆ. ಆದರೆ ಮರುಕ್ಷಣವೇ ವೆಂಕಟೇಶ್‍ಗೆ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತಕ್ಕೆ ಒಳಗಾಗಿದ್ದು, ಮೃತಪಟ್ಟಿದ್ದಾರೆ. ಆದರೂ ಪರೀಕ್ಷೆ ಮಾಡಿಸಲು ಪತ್ರಕರ್ತರು ಅವರನ್ನು ಹೊಸಪೇಟೆಯ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ.

    ವೆಂಕಟೇಶ್ ಅಕಾಲಿಕ ಮರಣಕ್ಕೆ ಎರಡೂ ಜಿಲ್ಲೆಗಳ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ. ವೆಂಕಟೇಶರನ್ನು ಹಂಪಿ ಉತ್ಸವದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

     

  • ಹುಲಿಯ ಘರ್ಜನೆಯಿಂದ ಹೃದಯಾಘಾತವಾಗಿ 12 ಕೋತಿಗಳು ಒಮ್ಮೆಲೆ ಸಾವು

    ಹುಲಿಯ ಘರ್ಜನೆಯಿಂದ ಹೃದಯಾಘಾತವಾಗಿ 12 ಕೋತಿಗಳು ಒಮ್ಮೆಲೆ ಸಾವು

    ಲಕ್ನೋ: ಹುಲಿಯ ಘರ್ಜನೆ ಕೇಳಿ ಹೃದಯಾಘಾತಕ್ಕೊಳಗಾಗಿ 12 ಕೋತಿಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    12 ಕೋತಿಗಳು ಸತ್ತು ಬಿದ್ದಿರುವುದನ್ನ ಸ್ಥಳೀಯರು ನೋಡಿದ್ದರು. ಕೋತಿಗಳ ಸಾಮೂಹಿಕ ಸಾವು ನೋಡಿ ಗಾಬರಿಯಾಗಿದ್ರು. ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವನ್ನಪ್ಪಿರುವ ಎಲ್ಲಾ ಕೋತಿಗಳಿಗೂ ಒಂದೇ ಸಲಕ್ಕೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

    ಕೋಟ್ವಾಲಿ ಮೊಹಮ್ಮದ್ ಪ್ರದೇಶದ ಪಶುವೈದ್ಯರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಹೃದಯಾಘಾತದಿಂದ ಕೋತಿಗಳು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಸಂಚರಿಸುವುದರಿಂದ ಹುಲಿಯ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತವಾಗಿರಬಹುದು ಎಂದು ಪಶುವೈದ್ಯರಾದ ಡಾ. ಸಂಜೀವ್ ಕುಮಾರ್ ಹೇಳಿದ್ದಾರೆ.

    ಮೃತ ಕೋತಿಗಳು ಸೋಮವಾರದಂದು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಅವುಗಳನ್ನ ಪ್ಲಾಸ್ಟಿಕ್ ಕವರ್‍ನಲ್ಲಿ ತುಂಬಿದ್ದಾರೆ.

    ಈ ಪ್ರದೇಶದಲ್ಲಿ ಆಗಾಗ ಹುಲಿಗಳು ಸಂಚರಿಸುತ್ತವೆ. ಕೋತಿಗಳು ಸಾವನ್ನಪ್ಪಿದ ಸಂದರ್ಭದಲ್ಲೂ ಹುಲಿಗಳ ಘರ್ಜನೆ ಕೇಳುತ್ತಿತ್ತು ಎಂದು ಇಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.

    ಆದರೆ ಕೋತಿಗಳಿಗೆ ಒಂದೇ ಬಾರಿಗೆ ಹೃದಯಾಘಾತವಾಗಿದೆ ಎಂಬ ಅಂಶವನ್ನು ವನ್ಯಜೀವಿ ತಜ್ಞರು ತಳ್ಳಿ ಹಾಕಿದ್ದಾರೆ. ಇನ್ಫೆಕ್ಷನ್‍ನಿಂದಾಗಿ ಕೋತಿಗಳು ಸಾವನ್ನಪಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

    ಕೋತಿಗಳು ಕಾಡು ಪ್ರಾಣಿಗಳು. ಅವು ಈ ರೀತಿ ಸಾವನ್ನಪ್ಪಲು ಸಾಧ್ಯವಿಲ್ಲ. ಎಲ್ಲಾ ಕೋತಿಗಳೂ ಯಾವುದೋ ಒಂದು ಇನ್ಫೆಕ್ಷನ್‍ನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರಾದ ಡಾ. ಬ್ರಿಜೆಂದ್ರ ಸಿಂಗ್ ಹೇಳಿದ್ದಾರೆ.

    https://www.youtube.com/watch?v=VKTDsc67U04

     

  • ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

    ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

    ನೆಲಮಂಗಲ: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕುಂಟು ನೆಪ ಹೇಳಿ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

    ನೆಲಮಂಗಲ ತಾಲೂಕಿನ ಅರಳೇದಿಬ್ಬದ ನಿವಾಸಿ ಹನುಮಯ್ಯ ಎಂಬುವವರು ಸಹಕಾರಿ ಬ್ಯಾಂಕ್‍ನಲ್ಲಿ ಕೃಷಿಗಾಗಿ 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ಹನುಮಯ್ಯ 2016ರ ಮೇ 29ನೇ ತಾರೀಕಿನಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡನ ಆತ್ಮಹತ್ಯೆ ವಿಚಾರ ತಿಳಿದ ರೈತನ ಹೆಂಡತಿ ತಿಮ್ಮವ್ವ ಹೃದಯಾಘಾತದಿಂದ ಮೃತಪಟ್ಟಿದ್ದರು.

    ನೆಲಮಂಗಲ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವಿಷ ಸೇವಿಸಿರುವುದಾಗಿ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತನ ಕುಟುಂಬದವರು ಕೃಷಿ ಇಲಾಖೆಯಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ನೆಲಮಂಗಲದ ಕೃಷಿ ಇಲಾಖೆಯ ಅಧಿಕಾರಿಗಳು ರೈತ ವಿಷ ಸೇವನೆಯಿಂದ ಮೃತಪಟ್ಟಿಲ್ಲ ಅವರಿಗೆ 75 ವರ್ಷ ವಯಸ್ಸಾಗಿ ಮೃತ ಪಟ್ಟಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ಸರ್ಕಾರ ಮೃತ ರೈತರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡ ರೈತನ ಕುಟುಂಬಗಳಿಗೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಈ ರೈತನ ಕುಟುಂಬಸ್ಥರ ಪರಿಸ್ಥಿತಿ.

  • ಆಂಬುಲೆನ್ಸ್ ಗೆ ಕಾದು ಸುಸ್ತಾಗಿ ಆಟೋದಲ್ಲೇ ಚಾಲಕನ ಶವ ಸಾಗಿಸಿದ್ರು- ತುಮಕೂರಲ್ಲಿ ಮನಕಲಕುವ ಘಟನೆ

    ಆಂಬುಲೆನ್ಸ್ ಗೆ ಕಾದು ಸುಸ್ತಾಗಿ ಆಟೋದಲ್ಲೇ ಚಾಲಕನ ಶವ ಸಾಗಿಸಿದ್ರು- ತುಮಕೂರಲ್ಲಿ ಮನಕಲಕುವ ಘಟನೆ

    ತುಮಕೂರು: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಸಾಗಾಟ ಮಾಡಲು ವಾಹನ ಇಲ್ಲದ ಪರಿಣಾಮ ಆಟೋ ಚಾಲಕನ ಮೃತ ದೇಹವನ್ನು ಆಟೋದಲ್ಲೇ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

    ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಶಿವಕುಮಾರ್ ಎಂಬವರು ಹೃದಯಾಘಾತದಿಂದ ತನ್ನ ಆಟೋದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ ಮೃತಪಟ್ಟಿದ್ದನ್ನು ಖಾತ್ರಿ ಪಡಿಸಿಕೊಂಡ ಇತರ ಆಟೋ ಚಾಲಕರು ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ವಾಹನ ಹಳುಹಿಸುವಂತೆ 108 ವಾಹನಕ್ಕೆ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತಿಳಿಸಿದ್ದಾರೆ.

    ಸುಮಾರು 3 ಗಂಟೆ ಕಾದರೂ ಕೂಡಾ ಯಾವುದೇ ವಾಹನ ಬಂದಿಲ್ಲ. ಪರಿಣಾಮ ವಿಧಿಯಿಲ್ಲದೆ ಕುಳಿತ ಸ್ಥಿತಿಯಲ್ಲೆ ಆಟೋದಲ್ಲಿ ಮೃತ ದೇಹವನ್ನು ಇರಿಸಿಕೊಂಡು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಆದ್ರೆ ಈ ಆರೋಪವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ತಳ್ಳಿ ಹಾಕಿದ್ದಾರೆ. ಶವ ಸಾಗಿಸಲು ವಾಹನ ಕಳುಹಿಸಲಾಗಿತ್ತು. ಆದರೆ ಮೃತರ ಸಂಬಂಧಿಗಳು ಆತುರದಿಂದ ಆಟೋದಲ್ಲೆ ಶವ ಸಾಗಿಸಿದ್ದಾರೆ ಎಂದು ಹೇಳಿದ್ದಾರೆ.

     

  • ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆಯುತ್ತಿದ್ದಂತೆ ಹೃದಯಾಘಾತವಾಗಿ ರೈತ ಸಾವು

    ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆಯುತ್ತಿದ್ದಂತೆ ಹೃದಯಾಘಾತವಾಗಿ ರೈತ ಸಾವು

    ಮೈಸೂರು: ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆದ ರೈತ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

    30 ವರ್ಷದ ಪುಟ್ಟೇಗೌಡ ಮೃತ ರೈತ. ನಂಜನಗೂಡು ತಾಲೂಕು ಕಂದೇಗಾಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆ ಮಹೇಂದ್ರ ಫೈನಾನ್ಸ್ ಸಂಸ್ಥೆಯಿಂದ ಪುಟ್ಟೇಗೌಡ ಅವರು ಟ್ರ್ಯಾಕ್ಟರ್ ಖರೀದಿಗಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ಆದ್ರೆ ಸಾಲದ ಹಣ ಹಿಂದಿರುಗಿಸಲು ವಿಳಂಬವಾದ ಹಿನ್ನಲೆಯಲ್ಲಿ ಇಂದು ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ನೊಟೀಸ್ ನೀಡಿದ್ದಾರೆ.

    ನೋಟಿಸ್ ಪಡೆಯುತ್ತಿದ್ದಂತೆಯೇ ಪುಟ್ಟೇಗೌಡ ಅವರು ಕುಸಿದು ಬಿದ್ದಿದ್ದು, ಕೆಲ ಕ್ಷಣಗಳಲ್ಲೇ ಸಾವನ್ನಪ್ಪಿದ್ದಾರೆ. ನೋಟಿಸ್ ನಿಂದ ಪುಟ್ಟೇಗೌಡ ಅವರಿಗೆ ಅಘಾತವಾಗಿ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ.

  • ತಂಡ ಗೆಲ್ಲಿಸಿದ ಖುಷಿಗೆ ಹಾರ್ಟ್ ಆಟ್ಯಾಕ್: ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ

    ತಂಡ ಗೆಲ್ಲಿಸಿದ ಖುಷಿಗೆ ಹಾರ್ಟ್ ಆಟ್ಯಾಕ್: ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ

    ವಿಜಯಪುರ: ಕ್ರಿಕೆಟ್ ಮ್ಯಾಚ್ ಗೆದ್ದ ಖುಷಿಯಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಧಾರುಣ ಘಟನೆ ನಗರದ ಹರಣಶಿಕಾರಿ ಕಾಲೋನಿಯಲ್ಲಿ ನಡೆದಿದೆ.

     

     

    25 ವರ್ಷದ ರಾಹುಲ್ ಚವ್ಹಾಣ್ ಮೃತ ಯುವಕ. ನಗರದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿತ್ತು. ಟೂರ್ನಿಯಲ್ಲಿ ಭಾಗವಹಿಸಿದ್ದ ರಾಹುಲ್ ಹ್ಯಾಟ್ರಿಕ್ ಮೂರು ವಿಕೆಟ್ ಪಡೆದುಕೊಂಡಿದ್ದರು. ಆಟದ ಕೊನೆಗೆ ರನ್ ಔಟ್ ಮಾಡುವ ಮೂಲಕ ರಾಹುಲ್ ಪಂದ್ಯವನ್ನು ಗೆಲ್ಲಿಸಿದ್ದರು.

     

    ಇದೇ ಖುಷಿಯಲ್ಲಿದ್ದ ರಾಹುಲ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಹುಲ್ ಗೆ ಕ್ರಿಕೆಟ್ ಆಡಲು ತೆರಳದಂತೆ ಪೋಷಕರು ಹೇಳಿದ್ದರು. ಆದರೆ ಪೋಷಕರ ಮಾತು ಕೇಳದ ರಾಹುಲ್ ತಂಡವನ್ನು ಗೆಲ್ಲಿಸಿ ಅಂಗಳದಲ್ಲೇ ಮೃತಪಟ್ಟಿದ್ದಾರೆ.

     

  • ಆಹಾರವಿಲ್ಲದೆ, ಭಯದಿಂದ ಹೃದಯಘಾತವಾಗಿ ಸಾವನ್ನಪ್ಪಿದ ಚಿರತೆ

    ಆಹಾರವಿಲ್ಲದೆ, ಭಯದಿಂದ ಹೃದಯಘಾತವಾಗಿ ಸಾವನ್ನಪ್ಪಿದ ಚಿರತೆ

    ಉಡುಪಿ: ಹಲವು ದಿನಗಳಿಂದ ಉಡುಪಿಯ ಕಾರ್ಕಳದಲ್ಲಿ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಹೃದಯಾಘಾತದಿಂದ. ಹಸಿದು, ಹೊಟ್ಟೆ ಖಾಲಿಯಾಗಿದ್ದ ಚಿರತೆ ಜೀವಭಯದಿಂದ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಮಾಹಿತಿ ನೀಡಿದ್ದಾರೆ.

    ಉಡುಪಿಯ ಕಾರ್ಕಳ ತಾಲೂಕಿನ ನಿಂಜೂರು ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಅಪ್ಪಿ ಪೂಜಾರಿ ಎಂಬವರ ಹಟ್ಟಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಅಲ್ಲಿ ಬಂದು ಸೇರಿದಾಗ, ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ನಂತರ ಚಿರತೆ ಅಲ್ಲಿಂದ ಕಾಡಿಗೆ ಓಡಿ ಹೋಗಿತ್ತು. ಬೆಳಗ್ಗೆ ಮತ್ತೆ ಚಿರತೆ ಹಸುವಿನ ಮೇಲೆ ದಾಳಿ ನಡೆಸಲು ಬಂದಿದೆ. ಸ್ಥಳೀಯರು ಚಿರತೆಯನ್ನು ಓಡಿಸಲು ಹೋಗಿದ್ದಾರೆ. ಕೋಲುಗಳಿಂದ ಚಿರತೆಗೆ ಬಡಿದಿದ್ದಾರೆ, ಕಲ್ಲೆಸೆದಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಓಡಲು ಹೋದ ಚಿರತೆ ಗೋಡೆಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂರ್ಛೆ ತಪ್ಪಿ ಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ.

    ಅರಣ್ಯ ಇಲಾಖೆಯ ಇಲಾಖೆಯ ಸಿಬ್ಬಂದಿ ಬಂದು ಚಿರತೆಗೆ ಅರವಳಿಕೆ ನೀಡಿ ಚಿಕಿತ್ಸೆಗೆ ಕೊಂಡೊಯ್ದಿದ್ದಾರೆ. ಅದ್ರೆ ಚಿರತೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಿರತೆಯ ಹೊಟ್ಟೆಯಲ್ಲಿ ಏನೂ ಇರಲಿಲ್ಲ, ಸಿಕ್ಕಾಪಟ್ಟೆ ಹಸಿದಿತ್ತು. ಭಯದಿಂದ ಹೃದಯಾಘಾತದಿಂದ ಚಿರತೆ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.

    ನಿಂಜೂರು ವ್ಯಾಪ್ತಿಯಲ್ಲಿ ಹಲವಾರು ದಿನದಿಂದ ಚಿರತೆ ಉಪಟಳ ನೀಡುತ್ತಿತ್ತು. ಅರಣ್ಯಾಧಿಕಾರಿಗಳಿಗೂ ಗ್ರಾಮಸ್ಥರು ದೂರು ನೀಡಿದ್ದರು ಎಂದು ತಿಳಿದುಬಂದಿದೆ.

     

  • ರಜೆ ಮೇಲೆ ಸ್ವಗ್ರಾಮಕ್ಕೆ ಅಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

    ರಜೆ ಮೇಲೆ ಸ್ವಗ್ರಾಮಕ್ಕೆ ಅಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

    ಬಳ್ಳಾರಿ: ರಜೆ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ಯೋಧರೊಬ್ಬರು ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ.

    ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ನಿವಾಸಿ ಹಾಲಪ್ಪ ಮೃತ ಯೋಧ ರಜೆ ತೆಗೆದುಕೊಂಡು ಸೋಮವಾರ ಗ್ರಾಮಕ್ಕೆ ಆಗಮಿಸಿದ್ದ ಹಾಲಪ್ಪ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಯೋಧ ಹಾಲಪ್ಪ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಅಂತ್ಯಕ್ರಿಯೆಗೂ ಮುನ್ನ ಮೃತ ಯೋಧನ ಶರೀರವನ್ನು ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ಯೋಧನ ಅಂತ್ಯಕ್ರಿಯೆಗೆ ಸಾವಿರಾರು ಜನ ಆಗಮಿಸಿ ನಮನ ಸಲ್ಲಿಸುವ ಮೂಲಕ ಯೋಧ ಹಾಲಪ್ಪ ಅವರಿಗೆ ಗೌರವ ಸಲ್ಲಿಸಿದರು.

     

  • ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಕೋಲಾರ: ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ಮುತ್ಯಾಲಪೇಟೆಯಲ್ಲಿ ನಡೆದಿದೆ.

    ಮೇ 20 ರಂದು ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ವೇಳೆ ಬೆಂಕಿ ತಗುಲಿ ತಂದೆ ಶ್ರೀಕಂಠ (45) ಹಾಗೂ ಅವರ ಮಕ್ಕಳಾದ 18 ವರ್ಷದ ಮಧುಮತಿ , 10 ವರ್ಷದ ರಕ್ಷಿತ ಗಾಯಗೊಂಡಿದ್ದರು. ಅವರಲ್ಲಿ ರಕ್ಷಿತ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾಳೆ.

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಶ್ರೀಕಂಠ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.