ಬೆಂಗಳೂರು: ನಾಡಿನಾದ್ಯಂತ ದೀಪಗಳ ಹಬ್ಬ ದೀಪಾವಳಿ (Diwali) ಸಂಭ್ರಮ ಜೋರಾಗಿದೆ. ದೀಪಾವಳಿ ಹಿನ್ನೆಲೆ ಬೆಂಗಳೂರಿನ (Bengaluru) ಕೆಆರ್ ಮಾರ್ಕೆಟ್ನಲ್ಲಿ (KR Market) ಬೆಳ್ಳಂಬೆಳಗ್ಗೆ ಹೂ, ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಕೆಆರ್ ಮಾರ್ಕೆಟ್ನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದು, ವಿವಿಧ ಬಗೆಯ ಹೂ, ಹಣ್ಣುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಅವೆನ್ಯೂ ರಸ್ತೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜನಮಯವಾಗಿದೆ. ಭಾರೀ ಜನಸಂಖ್ಯೆ ಹಿನ್ನೆಲೆ ಕೆಆರ್ ಮಾರ್ಕೆಟ್, ಹೂವಿನ ಮಾರ್ಕೆಟ್, ಅವೆನ್ಯೂ ರಸ್ತೆ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೂ ಕಿ.ಮೀ.ಗಟ್ಟಲೇ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್ ಎಚ್ಚರಿಕೆ
ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ (Vijaya Dashami) ಸಂಭ್ರಮ ಮನೆ ಮಾಡಿದೆ. ಇಂದು ಆಯುಧ ಪೂಜೆ (Ayudha Pooje) ಹಿನ್ನೆಲೆ ಹೂವು-ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಮಡಿವಾಳ ಮಾರ್ಕೆಟ್ಗಳಲ್ಲಿ ಜನಸ್ತೋಮವೇ ತುಂಬಿ ತುಳುಕುತ್ತಿದೆ.
ಹೌದು, ಬೆಲೆ ಏರಿಕೆ ನಡುವೆಯೂ ಕೆ.ಆರ್ ಮಾರ್ಕೆಟ್ನಲ್ಲಿ (KR Market) ಹೂ, ಹಣ್ಣು, ತರಕಾರಿ ಖರೀದಿಗೆ ಜನಸಾಗರವೇ ಹರಿದುಬಂದಿದೆ. ಆಯುಧ ಪೂಜೆಗೆ ಬೂದುಕುಂಬಳಕಾಯಿ ಹಾಗೂ ಬಾಳೆ ಕಂಬಕ್ಕೆ ಫುಲ್ ಡಿಮ್ಯಾಂಡ್ ಇದ್ದು, ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೂ ಹಣ್ಣುಗಳ ದರ ಡಬಲ್ ಏರಿಕೆಯಾಗಿದೆ. ಇದನ್ನೂ ಓದಿ: ನವರಾತ್ರಿ ಹಬ್ಬ – ಆಯುಧ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು?
ಒಟ್ಟಿನಲ್ಲಿ ಈ ಬಾರಿ ದಸರ ಹಬ್ಬಕ್ಕೆ ಕೊಂಚ ಬೆಲೆ ಏರಿಕೆಯಾಗಿದ್ದರೂ ಸಹ ಜನರೆಲ್ಲರೂ ನಾಡಿನ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದಾರೆ. ಕೊಂಚ ಬೆಲೆ ಏರಿಕೆಗೆ ರೈತ ನಗು ಬಿರಿದ್ರೆ ಗ್ರಾಹಕರು ಉಸಿರು ಬಿಟ್ಟಿದ್ದಾರೆ.
– ಮಳೆ ಕೊರತೆಯಿಂದ ಹೂಗಳ ಕೊರತೆ, ಬೆಲೆ ದುಬಾರಿ
– ಹೂ ಖರೀದಿಗೆ ಹೋದ್ರೆ ಚುಚ್ಚುತ್ತೆ ದುಬಾರಿ ಮುಳ್ಳು
ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆ, ಬೇಳೆಕಾಳಿನ ಬೆಲೆ ನಂತರ ಇದೀಗ ಹೂವುಗಳ (Flower) ಸರದಿ ಶುರುವಾಗಿದೆ. ಹೂಗಳ ಬೆಲೆ ದುಬಾರಿಯಾಗಿದ್ದು (Flower Price Hike), ಹೂಗಳನ್ನು ಕೊಳ್ಳಂಗಿಲ್ಲ.. ಮುಡಿಯೋ ಹಾಗಿಲ್ಲ.. ಅನ್ನುವಂತಾಗಿದೆ.
ಈ ಬಾರಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಮುಂಗಾರು ಕೈಕೊಟ್ಟಿದ್ದು, ಮಳೆಯಿಂದಾಗಿ ತರಕಾರಿಗಳ ಬೆಲೆಗಳು ದುಬಾರಿಯಾಗಿವೆ. ಈ ಬೆನ್ನಲ್ಲೇ ಹೂಗಳ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆ (Rain) ಕೊರತೆಯಿಂದ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ಹೂಗಳ ದರವೂ ಏರಿಕೆಯಾಗಿದ್ದು. ಮಾರ್ಕೆಟ್ನಲ್ಲಿಯೂ ಹೂವುಗಳು ಸಿಗುತ್ತಿಲ್ಲ. ಸಾಮಾನ್ಯವಾಗಿ ಆಷಾಢದಲ್ಲಿ ಶುಭ ಸಮಾರಂಭಗಳು ಕಡಿಮೆ ಇರೋದ್ರಿಂದ ಹೂಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು. ಆದ್ರೆ ಈ ಬಾರಿ ಮಳೆಯಿಂದಾಗಿ ಹೂಗಳ ಬೆಲೆ ಡಬಲ್ ಆಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಮಂಗಳೂರಿನ ಪಂಪ್ವೆಲ್ ಫ್ಲೈಓವರ್ ಕೆಳಭಾಗ ಜಲಾವೃತ!
ಯಾವ ಹೂವಿನ ದರ ಎಷ್ಟು..? (ಪ್ರತಿ ಕೆಜಿಗಳಿಗೆ)
ಸದ್ಯ ಮಾರುಕಟ್ಟೆಯಲ್ಲಿ ಮಲ್ಲಿಗೆ ಕೆ.ಜಿ 1,200 ರೂ., ಕನಕಾಂಬರಿ 2,000 ರೂ., ಸೇವಂತಿಗೆ 400 ರೂ., ಚೆಂಡು ಹೂವು, 200 ರೂ., ಸುಗಂಧರಾಜ 200 ರೂ., ಮಲ್ಲಿಗೆ ಹಾರ (ಒಂದು ಜೊತೆ) 800 ರೂ. ನಿಂದ 1,000 ರೂ.ಗಳಿಗೆ ಮಾರಾಟವಾಗ್ತಿದೆ. ಇದನ್ನೂ ಓದಿ: ಯಶವಂತಪುರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ನೂತನ ವಕ್ಫ್ ಭವನ – ಜಮೀರ್ ಅಹಮದ್
ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ಬಿಸಿಲ ತಾಪದಿಂದ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ದಿನನಿತ್ಯದ ಪೂಜೆಗೂ ಹೂ ಕೊಳ್ಳಲು ಜನ ಹಿಂಜರಿಯುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಸಾಲು ಹಬ್ಬಗಳು ಬರುವುದರಿಂದ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ ಗ್ರಾಹಕರು.
ಅಲ್ಲು ಇಲ್ಲು ಎಲ್ಲೆಲ್ಲೂ ರಮ್ಯಾ (Ramya ) ಮಿಂಚ್ತಿದ್ದಾರೆ. ಅಂದವಾದ ಹೂವಿನ (Flower) ಜೊತೆ ಚಂದವಾದ ಹೀರೋಯಿನ್ನ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹೂವು ಅರಳಿದೆ ರಮ್ಯಾ ಮೊಗದಲ್ಲಿ ಮಂದಹಾಸ ಮೂಡಿದೆ ಜೊತೆಗೆ ಈ ಚೆಲುವೆ ಪೋಣಿಸಿದ ಸಾಲುಗಳು (Poem) ಸಖತ್ ಸೌಂಡ್ ಮಾಡ್ತಿದೆ.
ಮೋಹಕತಾರೆಯ ಹೊಸ ಅಪ್ಡೇಟ್ ನೊಡಿಕೊಂಡು ರಮ್ಯಾ ಬರೆದಿರುವ ಕವಿತೆಯ ಸಾರವನ್ನ ತಿಳಿದುಕೊಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸುರಲೋಕದ ಸುಂದರಿಯನ್ನ ಯಾರೂ ನೋಡಿಲ್ಲ ಅವರು ಕಾಣಿಸ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಸ್ಯಾಂಡಲ್ವುಡ್ ಸಿನಿಮಾ ಅಭಿಮಾನಿಗಳಿಗೆ ಮೋಹಕತಾರೆ ರಮ್ಯಾ ದೇವಲೋಕದ ಸುಂದರಿಯಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ ಕೊಡ್ತಿರ್ತಾರೆ.
ಸದ್ಯ ರಮ್ಯಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಈ ಕ್ಯೂಟ್ ಫೋಟೋಸ್ ನೋಡಿ ರಮ್ಯಾ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಗಳ ಸುರಿಮಳೆ ಸುರಿಸ್ತಿದ್ದಾರೆ. ಫೋಟೋದಲ್ಲಿ ನಗ್ತಿರುವ ರಮ್ಯಾ ಮಂದಹಾಸವನ್ನ ಮನದಲ್ಲಿ ತುಂಬಿಕೊಳ್ತಿದ್ದಾರೆ ಈಕೆಯ ಅಭಿಮಾನಿಗಳು.
ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಗುಲಾಬಿ ಹೂವುಗಳ ಮುಂದೆ ನಿಂತು ಮುಗುಳು ನಗೆ ಕೊಟ್ಟಿದ್ದಾರೆ. ಈ ಸುಂದರಿಯ ಸ್ಮೈಲ್ ನೋಡಿ ಹೂವುಗಳು ಕೂಡ ಖುಷಿ ಪಟ್ಟಿದೆ ಅನ್ನೊದು ದೂರದಿಂದ ಬಂದ ಸಮಾಚಾರ. ಅಂದವಾದ ಫೋಟೋಗಳ ಜೊತೆ ಚಂದವಾದ ಸಾಲುಗಳನ್ನ ಕೂಡ ಪೋಣಿಸಿದ್ದಾರೆ ಮೋಹಕತಾರೆ.
ನಿರ್ಮಾಪಕಿಯಾಗಿ ಹೊಸ ಅಧ್ಯಾಯ ಶುರು ಮಾಡಿರುವ ರಮ್ಯಾ ನಟಿಯಾಗಿ ಕೂಡ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಶೂಟಿಂಗ್ ಶುರು ಮಾಡುವ ಮೊದಲು ಒಂದು ವೆಕೇಷನ್ಗೆ ಹೋಗಿದ್ದಾರೆ ಅನ್ನೊದು ಮೂಲಗಳ ಮಾಹಿತಿ. ಹೂವು ಅಂದ… ರಮ್ಯಾ ನಗು ಚೆಂದ… ನಮ್ಗು ನಿಮ್ಗು ಇರಲಿ ಜನುಮ ಜನುಮಕ್ಕು ಅನುಬಂಧ ಅಂತಿದ್ದಾರೆ ಅಭಿಮಾನಿಗಳು.
ಬೆಂಗಳೂರು: ನಾಡಿನಾದ್ಯಂತ ಯುಗಾದಿ (Ugadi) ಸಂಭ್ರಮ ಮನೆ ಮಾಡಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಕಾತುರದಲ್ಲಿದ್ದ ಸಿಟಿಜನ ಹೂವು (Flowers), ಹಣ್ಣು (Fruits) ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಜೋಶ್ನಲ್ಲಿ ಮಾರುಕಟ್ಟೆಗೆ ಹೋದ ಜನರಿಗೆ ಬೆಲೆ ಏರಿಕೆ ಶಾಕ್ ತಟ್ಟುತ್ತಿದೆ.
ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಹೊಸವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಯುಗಾದಿ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದರು. ಹೊಸ ದಿರಿಸು ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಇತ್ಯಾದಿಗಳ ಖರೀದಿಯು ನಗರದ ಮಾರುಕಟ್ಟೆಗಳಲ್ಲಿ ಅಬ್ಬರದಿಂದ ನಡೆದಿದೆ. ನಗರದ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಗಾಂಧಿ ಬಜಾರ್, ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿ ನಡೆದಿದೆ. ಹಬ್ಬದ ಜೋಶ್ನಲ್ಲಿದ್ದ ಜನಕ್ಕೆ ಬೆಲೆ ಏರಿಕೆಯ ಶಾಕ್ ತಟ್ಟಿದೆ.
ಯುಗಾದಿ ಹಬ್ಬಕ್ಕೆ ಹೂವು, ಹಣ್ಣು, ಮಾವಿನಸೊಪ್ಪು, ಬೇವಿನಸೊಪ್ಪು ಬೇಕೇ ಬೇಕಾಗುತ್ತದೆ. ಹಾಗಾದರೆ ಯಾವುದೆಲ್ಲ ಎಷ್ಟು ದರ ಹೆಚ್ಚಾಗಿದೆ ಎನ್ನುವುದು ಈ ರೀತಿಯಿದೆ.
ಬೇವಿನಸೊಪ್ಪು 1 ಕಟ್ಟಿಗೆ 20 ರೂ.ಯಿದ್ದು, ಮಾವಿನಸೊಪ್ಪು 1 ಕಟ್ಟಿಗೆ 30 ರೂ., ಚಂಡೆ ಹೂವು 1 ಮಾರಿಗೆ 80 ರೂ. ಇದೆ. ಇನ್ನೂಳಿದಂತೆ ಹೂವಿನಲ್ಲಿ ಸೇವಂತಿಗೆ 1 ಮಾರಿಗೆ 120 ರೂ., ಗುಲಾಬಿ ಒಂದು ಕೆಜಿಗೆ 300 ರೂ., ಸೇವಂತಿಗೆ ಒಂದು ಕೆಜಿಗೆ 250 -300 ರೂ., ಮಲ್ಲಿಗೆ 1 ಕೆಜಿಗೆ 700 ರೂ., ಕನಕಾಂಬರ 1 ಕೆಜಿಗೆ 800 ರೂ., ಸುಗಂಧರಾಜ 1 ಕೆಜಿಗೆ 160 ರೂ., ಚೆಂಡು ಹೂ 1ಕೆಜಿಗೆ 80 ರೂ., ತುಳಸಿ ಹಾರಗೆ 1 ಕೆಜಿ 70 ರೂ. ದರವಿದೆ. ಹಣ್ಣುಗಳಾದ ದಾಳಿಂಬೆಗೆ 1 ಕೆಜಿಗೆ 120 ರೂ., ಆಪಲ್ 1 ಕೆಜಿಗೆ 180 ರೂ., ಮೊಸಂಬಿ 1 ಕೆಜಿಗೆ 120 ರೂ., ಕಿತ್ತಳೆ 1 ಕೆಜಿಗೆ 150 ರೂ., ಮರಸೇಬು 1 ಕೆಜಿಗೆ 250 ರೂ., ಬಟರ್ ಫ್ರೂಟ್ 1 ಕೆಜಿಗೆ 350 ರೂ.ನಷ್ಟು ದರ ಏರಿಕೆ ಆಗಿದೆ. ಇದನ್ನೂ ಓದಿ: ವರುಣಾದಲ್ಲಿ ಸ್ಪರ್ಧಿಸಿದ್ರೂ ಸಿದ್ದರಾಮಯ್ಯ ವಿರುದ್ಧ ಪದ್ಮವ್ಯೂಹ- ಬೆಂಗ್ಳೂರಲ್ಲಿ ಕೋಲಾರ ಕೈಪಡೆ ಹೈಡ್ರಾಮಾ
ಯುಗಾದಿ ಹಬ್ಬದ ಪ್ರಯುಕ್ತ ಸಾಮಾಗ್ರಿಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರೀ ಹೊಡೆತ ಬಿದ್ದಿದೆ. ಆದರೂ ಹಬ್ಬವನ್ನು ಆಚರಣೆ ಮಾಡ್ಲೇಬೇಕಲ್ವಾ ಅಂತಾ ಅಗತ್ಯ ವಸ್ತುಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಖರೀದಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವ್ಯಾಪಾರ ಡಲ್ ಅಂತಾ ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ:ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿ ಮನೆಯಿಂದಾಚೆ ಓಡಿಬಂದ ಜನ
ಬೆಂಗಳೂರು: ಹಬ್ಬ ಅಂದ್ರೆ ಸಾಕು, ಎಲ್ಲಾ ಕಡೆ ಸಂಭ್ರಮವೋ ಸಂಭ್ರಮ. ಅದರಲ್ಲೂ ವರಲಕ್ಷ್ಮಿ ಹಬ್ಬ ಅಂದರೆ ಮಹಿಳೆಯರಿಗೆ ಖುಷಿ ಇಮ್ಮುಡಿಯಾಗುತ್ತೆ. ಅದನ್ನ ಇನ್ನಷ್ಟು ಹೆಚ್ಚಿಸಲು ಈ ಬಾರಿ ಮಹಿಳೆಯರಿಗೆ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಉಡುಗೊರೆ ಕೊಡಲು ಮುಜರಾಯಿ ಇಲಾಖೆ ನಿರ್ಧಾರ ಮಾಡಿದೆ.
ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ ಮನೆ ಮಾಡಿದೆ. ಹಬ್ಬದ ದಿನ ಬೆಂಗಳೂರಿನ ಮುಜರಾಯಿ ದೇಗುಲಗಳಿಗೆ ಬರುವ ಮಹಿಳೆಯರಿಗೆ ಮುಜರಾಯಿ ಇಲಾಖೆ ಗಿಫ್ಟ್ ನೀಡುತ್ತಿದೆ. ಬೆಂಗಳೂರಿನ ಎಲ್ಲಾ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವಂತೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಮುಜರಾಯಿ ದೇವಸ್ಥಾನಗಳ ವತಿಯಿಂದ ಮಹಿಳೆಯರಿಗೆ ವಿಶೇಷವಾಗಿ ಮಂಗಳದ್ರವ್ಯಗಳನ್ನು ಹಾಗೂ ಹಸಿರು ಬಳೆಗಳನ್ನು ನೀಡುವುದರ ಮೂಲಕ ಗೌರವಿಸಬೇಕು ಎನ್ನುವ ಉದ್ದೇಶದಿಂದ ಇತ್ತೀಚಿಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಲಾಗಿತ್ತು. ಇದರಂತೆ ಹಸಿರು ಬಳೆಗಳು ಹಾಗೂ ಕಸ್ತೂರಿ ಅರಿಶಿಣ-ಕುಂಕುಮವನ್ನು ವಿತರಿಸಲಾಗುತ್ತೆ.
ಗಗನಕ್ಕೇರಿದ ಹೂವು-ಹಣ್ಣಿನ ದರ: ವರಮಹಾಲಕ್ಷ್ಮಿ ಹಬ್ಬದಿಂದಾಗಿ ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ. ದರೂ ಕೆ.ಆರ್. ಮಾರ್ಕೆಟ್, ಬನಶಂಕರಿ ದೇಗುಲ ಸೇರಿದಂತೆ, ಅಣ್ಣಮ್ಮ, ಮಹಾಲಕ್ಷ್ಮಿ ದೇವಾಲಯಗಳ ಬಳಿ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿತ್ತು. ಶ್ರಾವಣ ಮಾಸ ಶುರುವಾದ್ರೆ ಸಾಕು ಸಾಲು ಸಾಲು ಹಬ್ಬಗಳು ಎಂಟ್ರಿ ಕೊಡುತ್ತವೆ. ಅದರಲ್ಲೂ ವರಲಕ್ಷ್ಮಿ ಹಬ್ಬ ಅಂದ್ರೆ ಮಹಿಳೆಯ ಪ್ರಿಯವಾದ ಹಬ್ಬ. ಈ ಹಬ್ಬಕ್ಕೆ ಹೂವು ಪ್ರದಾನ ವಸ್ತುವಾದ್ರೆ, ನಂತರದ ಆದ್ಯತೆ ಹಣ್ಣುಗಳಿಗೆ. ಹೀಗಾಗಿ ಹೂವಿನ ದರದ ಏರಿಕೆಯ ಜೊತೆಗೆ ಹಣ್ಣಿನ ದರವೂ ಏರಿಕೆಯಾಗಿದೆ. ಹಾಗಾದ್ರೆ ಏನೆಲ್ಲಾ ಬೆಲೆ ಏರಿಕೆಯಾಗಿದೆ ಅಂತ ನೋಡೋದಾದ್ರೆ.
ಅಗತ್ಯ ವಸ್ತುಗಳ ಬೆಲೆ: ಮಾವಿನ ಎಲೆ 1 ಕಟ್ಟು – 20 ರೂ., ಬಾಳೆ ಕಂಬ – 50 ರೂ., ಬೇವಿನ ಸೊಪ್ಪು 1 ಕಟ್ಟು – 20 ರೂ., ತುಳಸಿ ತೋರಣ 1 ಮಾರು – 50 ರೂ. ಕಳೆದ ಎರಡು ವರ್ಷ ಕೊರೊನಾದಿಂದ ಹಬ್ಬಗಳಿಗೆ ಬ್ರೇಕ್ ಬಿದ್ದಿತ್ತು. ಆದ್ರೆ ಈ ವರ್ಷ ಕೊರೊನಾ ಕಂಟ್ರೋಲ್ ಗೆ ಬಂದಿದ್ದು, ಸಿಲಿಕಾನ್ ಸಿಟಿ ಜನರು ವರಮಹಾಲಕ್ಷ್ಮಿ ಹಬ್ಬಕ್ಕೆ ಜೇಬಿಗೆ ಕತ್ತರಿ ಬಿದ್ರು ಸಹ ಮಾರ್ಕೆಟ್ ನಲ್ಲಿ ಹೂ, ಹಣ್ಣು ಖರೀದಿ ಮಾಡಿ ಹಬ್ಬವನ್ನ ಗ್ರ್ಯಾಂಡ್ ಆಗಿ ಮಾಡ್ತಿದ್ದಾರೆ. ಇದರ ಜೊತೆಗೆ ಮಹಿಳೆಯರಿಗೆ ದೇವಾಲಯಗಳಲ್ಲಿ ಕುಂಕುಮ, ಬಳೆ ನೀಡ್ತೀರೋದು ಸಂತಸದ ವಿಷಯ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್ ನಲ್ಲಿ ಬೆಂಗಳುರು ಮಂದಿ ಹೂವು, ಹಣ್ಣು ಖರೀದಿಯಲ್ಲಿ ನಿರತರಾಗಿದ್ದಾರೆ.
ಇಂದು ಬೆಳ್ಳಂಬೆಳಗ್ಗೆನೆ ಜನ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೂವು, ಹಣ್ಣು, ತರಕಾರಿ, ಹಬ್ಬದ ಸಾಮಾಗ್ರಿಗಳ ಖರೀದಿಯಲ್ಲಿ ಬ್ಯುಸಿಯಾಗಿರುವುದು ಕಂಡುಬಂತು. ಕೆಆರ್ ಮಾರ್ಕೆಟ್ ಮುಖ್ಯರಸ್ತೆಯ ಎರಡು ಬದಿಗಳಲ್ಲೂ ಹಬ್ಬದ ವ್ಯಾಪಾರ ಜೋರಾಗಿತ್ತು. ಮುಖ್ಯ ರಸ್ತೆಯಲ್ಲೇ ವ್ಯಾಪಾರ ನಡೀತಿರುವ ಕಾರಣ ಕೆಆರ್ ಮಾರ್ಕೆಟ್ ಮುಖ್ಯ ರಸ್ತೆ ಬ್ಲಾಕ್ ಆಗಿತ್ತು.
ವರಮಹಾಲಕ್ಷ್ಮಿ ಹಬ್ಬಕ್ಕೆ ಹಿನ್ನೆಲೆಯಲ್ಲಿ 30 ರಿಂದ 40% ನಷ್ಟು ಹೂವು ಹಣ್ಣುಗಳ ಬೆಲೆ ಏರಿಕೆಯಾಗಿದೆ. ಸೇವಂತಿಗೆ ಹೂವು ಕೆ.ಜಿಗೆ 320 ರೂ. (ಒಂದು ಮೊಳ – 80), ಮಲ್ಲಿಗೆ ಒಂದು ಕೆ.ಜಿಗೆ 2350 ರಿಂದ 2450 ರೂ., ಕನಕಾಂಬರ- ಒಂದು ಕೆಜಿ 4000 ರೂ., ಗುಲಾಬಿ ಹೂವು ಕೆ.ಜಿ 320-350 ರೂ., ಮಲ್ಲಿಗೆ ಕೆ.ಜಿಗೆ 350 ರೂ. (ಒಂದು ಮೊಳ 100 ರೂ.), ಕಮಲ ಹೂ ಜೋಡಿ 80-100 ರೂ., ಬಟನ್ಸ್ ಹೂವು ಕೆ.ಜಿ 300 ರೂ. ಮಲ್ಲೆ ಹೂವು ಕೆ.ಜಿ 320 ರೂ. (ಒಂದು ಮೊಳ – 60 ರೂ.) ಆಗಿದೆ.
ಒಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಕೆ ಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಬಲು ಜೋರಾಗಿದೆ. ಹೂವು, ಹಣ್ಣುಗಳ ಬೆಲೆಯೇರಿಕೆಯಾಗಿದ್ದರೂ ಖರೀದಿ ಮಾತ್ರ ಹಿಂದೆ ಬಿದ್ದಿಲ್ಲ. ಖರೀದಿ ಬಂದಿರುವ ಜನಸಾಗರದಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪಿತೃಪಕ್ಷದ ಹಿನ್ನೆಲೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಜನ ಹೂ ಖರೀದಿಗಾಗಿ ಮುಗಿ ಬೀಳುತ್ತಿದ್ದಾರೆ.
ಪಿತೃಪಕ್ಷ ಹಬ್ಬದ ಹಿನ್ನಲೆ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿಲು ಜನ ಮುಗಿಬೀಳುತ್ತಿದ್ದು, ವೀಕೆಂಡ್ನಲ್ಲಿ ವ್ಯಾಪಾರಿಗಳಿಗೆ ಭರ್ಜರಿಯಾಗಿ ವ್ಯಾಪಾರ ನಡೆಯುತ್ತಿದೆ. ಕಳೆದ ಎರಡು – ಮೂರು ದಿನಗಳಿಂದ ಹೂವಿನ ದರದಲ್ಲಿ ಏರಿಕೆಯಾಗಿದ್ದು, ದಸರಾ ಮುಗಿಯುವವರೆಗೂ ಬೆಲೆ ಹೆಚ್ಚಾಗಿಯೇ ಇರುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಬಿಲ್ಡಪ್ಗಾಗಿ ಪೊಲೀಸರಿಗೆ ಅವಾಜ್ ಹಾಕಿದ್ದ ಮೆಂಟಲ್ ಮಂಜ ಅರೆಸ್ಟ್
ಪಿತೃ ಪಕ್ಷ, ಮಹಾಲಯ ಅಮಾವಾಸ್ಯೆ, ನವರಾತ್ರಿ ಹಾಗೂ ಕಾರ್ತಿಕ ಸೋಮವಾರ ದೀಪಾವಳಿ ಹೀಗೆ ಸಾಲು, ಸಾಲು ಹಬ್ಬಗಳು ಈ ತಿಂಗಳಿನಲ್ಲಿದ್ದು, ಜನರು ಹಬ್ಬದ ಸಂಭ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೂವು, ಹಣ್ಣ ಖರೀದಿಸುತ್ತಾ ಕೊರೊನಾ ನಿಯಮ ಉಲಂಘಿಸುತ್ತಿದ್ದಾರೆ. ಈ ಮಧ್ಯೆ ಮಾರ್ಷಲ್ಸ್ಗಳು ಜನರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ಧಿ ಹೇಳಿ ದಂಡ ವಿಧಿಸುತ್ತಿದ್ದರೆ, ಜನ ಅದಕ್ಕೆ ಕ್ಯಾರೆ ಮಾಡದೇ ಮಾರ್ಷಲ್ಗಳ ಜೊತೆಯಲ್ಲಿಯೇ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್ಸಿಬಿ ರೋಚಕ ಕಾರ್ಯಾಚರಣೆ
ಚಿಕ್ಕಬಳ್ಳಾಪುರ: ಒಂದು ಕಡೆ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ಗೆ ಸಕಲ ತಯಾರಿಯಲ್ಲಿದ್ದರೇ ಇತ್ತ ಹೂವಿನ ಬೆಲೆ ಪಾತಾಳಕ್ಕೆ ಕುಸಿದ ಹಿನ್ನಲೆ ರೈತರೊಬ್ಬರು ತನ್ನ ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತಾಲೂಕಿನ ಡಿ. ಹೊಸೂರು ಗ್ರಾಮದ ರೈತ ಪಿಳ್ಳೇಗೌಡ ಅವರು ತಮ್ಮ ಒಂದು ಎಕೆರೆಯಲ್ಲಿ ಬೆಳೆದಿದ್ದ 1300 ಗುಲಾಬಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದಾರೆ. ಸದ್ಯ ಪಿತೃ ಪಕ್ಷದ ಎಫೆಕ್ಟ್ ನಿಂದ ಮಾರುಕಟ್ಟೆಯಲ್ಲಿ ಹೂ ಕೇಳೋರೇ ಇಲ್ಲ. ಕೆಜಿ 5 ರೂಪಾಯಿಗೂ ಖರೀದಿ ಮಾಡೋರಿಲ್ಲದಂತಾಗಿದ್ದು, ನೊಂದ ರೈತ ಪಿಳ್ಳೇಗೌಡ ಅವರು ಇಡೀ ಗುಲಾಬಿ ತೋಟವನ್ನ ಬುಡದವರೆಗೂ ಕಟಾವು ಮಾಡಿ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: DNA ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಮೋದಿ
ಮಾರ್ಕೆಟ್ನಲ್ಲಿ ರೇಟ್ ಇಲ್ಲ, ಗಿಡದಲ್ಲಿ ಹೂವು ಹಾಗೆ ಬಿಟ್ಟರೆ ಗಿಡ ಹಾಳಾಗುತ್ತದೆ. ಹೂವು ಕಟಾವು ಮಾಡೋಣ ಎಂದರೆ ಕೂಲಿ ಹಣನೂ ಸಿಗಲ್ಲ. ಇದರ ಜೊತೆಗೆ ಗಿಡಗಳನ್ನ ಕಾಪಾಡಿಕೊಳ್ಳೋಕೆ ಫರ್ಟಿಲೈಸರ್ಸ್ ಖರೀದಿ ಮಾಡಬೇಕು. ಅವು ಸಹ ದುಬಾರಿ ಬೆಲೆ, ಏನ್ ಮಾಡೋದು ಸರ್ ಲಾಭ ಇಲ್ಲ ಎಲ್ಲವೂ ನಷ್ಟವಾಗಿದೆ. ಹೀಗಾಗಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದೇವೆ ಎಂದು ರೈತ ಪಿಳ್ಳೇಗೌಡ ಅವರು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್
ಕೆಜಿ 5 ರೂಪಾಯಿಗೂ ಕೇಳೋರಿಲ್ಲ:
ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದಲ್ಲಿ ಪುಷ್ಪೋದ್ಯಮ ಮಾಡಲಾಗುತ್ತದೆ. ಗುಲಾಬಿ, ಚೆಂಡು ಹೂವು, ಸೇವಂತಿಗೆ ಸೇರಿದಂತೆ ತರಹೇವಾರಿ ಹೂವುಗಳನ್ನ ಬೆಳೆಯಲಾಗುತ್ತದೆ. ಇನ್ನೂ ಕೊರೊನಾ ಹೊಡೆತಕ್ಕೆ ಪುಷ್ಪೋದ್ಯಮ ನಲುಗಿ ಹೋಗಿದೆ. ಇತ್ತೀಚೆಗೆ ಶ್ರಾವಣ ಮಾಸ ಸಾಲು ಸಾಲು ಹಬ್ಬಗಳಿಂದ ಚೇತರಿಸಿಕೊಂಡಿತ್ತು. ಆದರೆ ಪಕ್ಷದ ಕಾರಣ ಹೂಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂವು ಕೆಜಿ 5 ರೂಪಾಯಿಗೂ ಕೇಳೋರಿಲ್ಲ. ಬಲವಂತ ಮಾಡಿ ನಾವೇ ಕೊಟ್ಟು ಬರಬೇಕಾಗಿದೆ ಅಂತಾರೆ ರೈತ ಸುನೀಲ್. ಮತ್ತೊಂದೆಡೆ ಚೆಂಡು ಹೂ ಸಹ ಕೇಳೋರು ಇಲ್ಲ, ಹೀಗಾಗಿ ಚಿಕ್ಕಬಳ್ಳಾಪುರ ನಗರದ ಹೂವು ಮಾರುಕಟ್ಟೆಯಲ್ಲಿ ರಾಶಿ ರಾಶಿ ಚೆಂಡು ಹೂವು ಎಲ್ಲಂದರಲ್ಲಿ ಬಿಸಾಡಲಾಗಿದೆ. ರೈತರೊಬ್ಬರು ಟ್ರ್ಯಾಕ್ಟರ್ ತುಂಬಾ ಗುಲಾಬಿ ಹೂವನ್ನ ರಸ್ತೆ ಬದಿ ಸುರಿದು ಹೋಗಿದ್ದ. ಮಾರುಕಟ್ಟೆಯಲ್ಲಿ ಎತ್ತ ನೋಡಿದರು ಈಗ ರಾಶಿ ರಾಶಿ ಹೂವುಗಳು ಕಣ್ಣಿಗೆ ಕಾಣುತ್ತಿವೆ.
ಕೊಪ್ಪಳ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿವೆ. ಕುಟುಂಬಗಳನ್ನು ನಡೆಸಲು ಆಗದಂತ ಪರಿಸ್ಥಿತಿಯಲ್ಲಿ ಪಾಲಕರಿದ್ದಾರೆ. ಆದರೆ ಇಲ್ಲಿನ ಕೆಲ ಮಕ್ಕಳ ಗುಂಪು ಪ್ರತಿ ದಿನವೂ ರಾಜ್ಯ ಹೆದ್ದಾರಿಯಲ್ಲಿ ಮಲ್ಲಿಗೆ ಹೂ ಮಾರಿಕೊಂಡು ಬರುವ ಲಾಭದಲ್ಲಿಯೇ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳು ಹೂ ಮಾರುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದ ಈ ಮಕ್ಕಳು ಸದ್ಯ ಶಾಲೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಲಾಕ್ಡೌನ್ ಇರುವ ಕಾರಣ ಕುಟುಂಬದ ಹೊಣೆ ಹೊರಲು ಮುಂದಾಗಿದ್ದಾರೆ. ಪ್ರತಿ ದಿನ ಗ್ರಾಮದಿಂದ 20ಕ್ಕೂ ಅಧಿಕ ಮಕ್ಕಳು ಮಲ್ಲಿಗೆ ಹೂ ಮಾರಲು ಗ್ರಾಮದಿಂದ 15 ಕಿ.ಮೀ ದೂರವಿರುವ ದಾಸನಾಳ ಗ್ರಾಮ ಸಮೀಪದ ರಾಜ್ಯ ಹೆದ್ದಾರಿಗೆ ಆಗಮಿಸುತ್ತಾರೆ.
ಆಗೋಲಿ ಗ್ರಾಮದಲ್ಲಿಯೇ ಇರುವ ಮಲ್ಲಿಗೆ ಹೂ ತೋಟದಲ್ಲಿ ಮಾಲೀಕರಿಂದ ಕೆ.ಜಿಗಳ ಆಧಾರದ ಬಿಡಿಯಾಗಿರುವ ಮಲ್ಲಿಗೆ ಹೂವನ್ನು ಖರೀದಿಸಿ ನಂತರ ಬಿಡಿಯಾಗಿರುವ ಹೂವನ್ನು ಕಟ್ಟಿಕೊಂಡು ಬೆಳಗ್ಗಿನ ಜಾವದಲ್ಲಿಯೇ ಆಗೋಲಿ ಗ್ರಾಮವನ್ನು ಬಿಟ್ಟು, ಬೆಳಗ್ಗೆ 9 ಗಂಟೆಗಾಗಲೇ ದಾಸನಾಳ ಗ್ರಾಮದ ರಸ್ತೆಗಳಲ್ಲಿ ಹೂ ಮಾರಲು ಮುಂದಾಗುತ್ತಾರೆ. ರಸ್ತೆಯಲ್ಲಿ ಹಾದು ಹೋಗುವ ಕಾರು, ಲಾರಿ, ಬೈಕ್ಗಳನ್ನು ತಡೆದು ಹೂ ಮಾರುವ ಕಾಯಕವನ್ನು ಮಕ್ಕಳು ಮಾಡುತ್ತಿದ್ದಾರೆ. ಈಗಾಗಲೇ ಕಳೆದ 40 ದಿನಗಳಿಂದ ಹೂ ಮಾರಾಟ ಮಾಡುತ್ತಿದ್ದು, ಪ್ರತಿ ದಿನ ದೊರೆಯುವ ಕೊಂಚ ಲಾಭದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
150 ರೂಗಳಿಗೆ ಕೆ.ಜಿ. ಹೂ: ನೇರವಾಗಿ ಹೂ ತೋಟಗಳಿಗೆ ಭೇಟಿ ನೀಡುವ ಈ ಮಕ್ಕಳು ಪ್ರತಿ ಕೆ.ಜಿ. ಹೂವಿಗೆ 150 ರೂಗಳನ್ನು ನೀಡಿ, ಖರೀದಿ ಮಾಡಿಕೊಂಡು ಆಗಮಿಸುತ್ತಾರೆ. ಅವುಗಳನ್ನು ಮನೆಯಲ್ಲಿ ಕಟ್ಟಿಕೊಂಡು, ಮಲ್ಲಿಗೆ ಹೂವಿಗೆ ಅಲಂಕಾರಕ್ಕಾಗಿ ಬಣ್ಣವನ್ನು ಹಾಕಿಕೊಂಡು ಬುಟ್ಟಿಯಲ್ಲಿ ಮಾರಲು ಆಗಮಿಸುತ್ತಾರೆ. ಪ್ರತಿ ಕೆ.ಜಿ. ಮಲ್ಲಿಗೆ 40 ರಿಂದ 45 ಮೊಳ ಹೂ ದೊರೆಯುತ್ತಿದ್ದು, ಪ್ರತಿ ಮೊಳಕ್ಕೆ 5 ರೂ.ಗಳಂತೆ ಮಾರಾಟ ಮಾಡುತ್ತಾರೆ. 1 ಕೆ.ಜಿ. ಮಲ್ಲಿಗೆ ಹೂ ಮಾರಾಟ ಮಾಡಿದರೆ ಮಕ್ಕಳಿಗೆ ಖರ್ಚು ತೆಗೆದು 80 ರಿಂದ 100 ರೂ.ಗಳ ಲಾಭ ಗಳಿಸುತ್ತಾರೆ. ಹೀಗೆ ಪ್ರತಿ ದಿನ ಮಕ್ಕಳು ಮಲ್ಲಿಗೆ ಹೂ ಮಾರಾಟ ಮಾಡುವ ಮೂಲಕ ಕುಟುಂಬ ಕಷ್ಟಗಳ ನಿವಾರಣೆಗೆ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಬಾಗಿನ, ಚಿನ್ನದ ಮೂಗುತಿ ಗಿಫ್ಟ್ ಕೊಟ್ಟ ಯುವಕ