Tag: ಹೂಗುಚ್ಛ

  • ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ಬೀಜಿಂಗ್: ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ ವಧು ಮೇಲೆ ಹೂಗುಚ್ಛ ಎಸೆಯುವುದು ಒಂದು ಸಂಪ್ರದಾಯ. ಆದ್ರೆ ಚೀನಾದಲ್ಲಿ ನಡೆದ ಮದುವೆಯಲ್ಲಿ ವಧು ಮೇಲೆಸೆದ ಹೂ ಗುಚ್ಛ ಮೇಲ್ಚಾವಣಿಗೆ ತಾಗಿದೆ. ಮೇಲ್ಚಾವಣಿಗೆ ಅಲಂಕಾರಿಕವಾಗಿ ಜೋಡಿಸಲಾಗಿದ್ದ ಟೈಲ್ಸ್ ಗಳು ಕುಸಿದು ಬಿದ್ದಿದೆ.

    ವಧು ಹೂಗುಚ್ಛ ಎಸೆದ ಮೇಲ್ಚಾವಣಿ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸಾಂದರ್ಭಿಕ ಚಿತ್ರ

    ಟೈಲ್ಸ್ ಗಳು ಕುಸಿದು ಬೀಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಟೈಲ್ಸ್ ಗಳು ಬಿದ್ದಿದರಿಂದ ಕೆಲವು ಅತಿಥಿಗಳು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.

    ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ, ವಧು ಕೈಯಲ್ಲಿ ಸುಂದರವಾದ ಹೂವಿನ ಗುಚ್ಛವೊಂದು ಇರುತ್ತದೆ. ವಧು ತನ್ನ ಮದುವೆ ಬಳಿಕ ಕೈಯಲ್ಲಿರುವ ಹೂಗುಚ್ಛವನ್ನು ಮೇಲೆಸೆಯುತ್ತಾರೆ. ಮೇಲೆಸೆದ ಹೂಗುಚ್ಛವನ್ನು ಹಿಡಿದವರ ಮದುವೆ ಅದೇ ವರ್ಷದಲ್ಲಿ ಆಗುತ್ತೆ ಎಂಬ ನಂಬಿಕೆ ಇದೆ.

    https://www.facebook.com/shanghaiist/videos/10156905046776030/

  • ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

    ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

     

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ರಾಜ್ಯಗಳ ಪ್ರವಾಸದಲ್ಲಿ ತೊಡಗಿದಾಗ ಅವರನ್ನ ಸ್ವಾಗತಿಸಲು ಹೂಗುಚ್ಛ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

    ಹೂಗುಚ್ಛದ ಬದಲು ಪ್ರಧಾನಿ ಮೋದಿಗೆ ಒಂದು ಹೂ ಜೊತೆಗೆ ಖಾದಿ ಕರವಸ್ತ್ರ ಅಥವಾ ಪುಸ್ತಕ ನೀಡಿ ಅವರನ್ನು ಸ್ವಾಗತಿಸಬಹುದು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.

    ಜೂನ್ 17ರಂದು ಕೇರಳದಲ್ಲಿ ಪಿಎನ್ ಪಣಿಕ್ಕರ್ ನ್ಯಾಷನಲ್ ರೀಡಿಂಗ್ ಡೇ ಗೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ಮೋದಿ, ಜನರು ಸ್ವಾಗತ ಕೋರಲು ಹೂಗುಚ್ಛದ ಬದಲು ಪುಸ್ತಕ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಇದರಿಂದ ದೊಡ್ಡ ಬದಲಾವಣೆಯಾಗಬಹುದು ಎಂದು ಹೇಳಿದ್ದರು. ಅಲ್ಲದೆ ಸಾಕ್ಷರತೆಯ ವಿಷಯದಲ್ಲಿ ಕೇರಳ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಓದುವುದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಹಾಗೂ ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ ಎಂದು ಹೇಳಿದ್ದರು.

    ಜೂನ್ 25ರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಕೂಡ ಮೋದಿ ಹೂಗುಚ್ಛಗಳ ಕೊಡುಕೊಳುಗೆಯನ್ನು ನಿಲ್ಲಿಸಿ ಖಾದಿ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವಂತೆ ಹೇಳಿದ್ದರು. ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಅವರು ಹೂಗುಚ್ಛಗಳ ಬದಲಾಗಿ ಪುಸ್ತಕವನ್ನ ಉಡುಗೊರೆಯಾಗಿ ನೀಡ್ತೀವಿ ಅಂದ್ರು. ನನಗದು ಇಷ್ಟವಾಯಿತು ಎಂದು ಮೋದಿ ಹೇಳಿದ್ದರು.