Tag: ಹುಲಿ ವೇಷ

  • ಹರಕೆ ತೀರಿದ್ದಕ್ಕೆ ಮೊಹರಂ ಹಬ್ಬದಂದು ಹುಲಿ ವೇಷ ಧರಿಸಿ ಕುಣಿತ!

    ಹರಕೆ ತೀರಿದ್ದಕ್ಕೆ ಮೊಹರಂ ಹಬ್ಬದಂದು ಹುಲಿ ವೇಷ ಧರಿಸಿ ಕುಣಿತ!

    ಗದಗ: ಮೊಹರಂ ಹಬ್ಬದಂದು (Muharram Festival) ಹುಲಿ ವೇಷ ತೊಟ್ಟು (Tiger’s Attire Enthralls) ಕುಣಿದು ಹರಕೆ ತೀರಿಸುವ ವಿಶಿಷ್ಠವಾದ ಸಂಪ್ರದಾಯ ಜಿಲ್ಲೆಯ ಗಜೇಂದ್ರಗಡದಲ್ಲಿದೆ.

    ಜಿಲ್ಲೆಯ ಅನೇಕ ಕಡೆಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದೇ ರೀತಿ ಗಜೇಂದ್ರಗಡ (Gajendragarh) ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿ ವೇಷ ತೊಟ್ಟು ಮುಸ್ಲಿಂ (Muslims) ಬಾಂಧವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ

    ಮೊಹರಂ ಹಬ್ಬದ ಕತ್ತಲು ರಾತ್ರಿ ದಿನದಂದು ಪಟ್ಟಣದ ತೆಕ್ಕದ ಮೊಲಾಲಿ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋರ್ಪಡೆ ವಾಡೆಯಲ್ಲಿ ಮುಕ್ತಾಯವಾಯಿತು. ಈ ವೇಳೆ ಹರಕೆ ಹೊತ್ತು ನೂರಾರು ಮಕ್ಕಳು, ಯುವಕರು ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸಿದರು. ಹುಲಿ ವೇಷ ಕುಣಿತ ನೋಡಲು ಜನ ಸಾಗರವೇ ಸೇರಿತ್ತು. ಹರಕೆ ಹೊತ್ತ ನೂರಾರು ಹುಲಿ ವೇಷಧಾರಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಿದರು.

    ನಮಗೆ ಕಷ್ಟಗಳು ಬಂದಾಗ ಬೇಡಿಕೊಂಡು ಹರಕೆ ಹೇಳಿದ್ದೆವು. ಕಷ್ಟಗಳು ದೂರವಾಗಿ ನಮ್ಮ ಬೇಡಿಕೆ, ಇಷ್ಟಾರ್ಥಗಳು ಈಡೇರಿದ್ದರಿಂದ ಪ್ರತಿ ವರ್ಷ ಹುಲಿ ವೇಷ ಹಾಕಿ ಕುಣಿದು ನಮ್ಮ ಹರಕೆ ತೀರಿಸುತ್ತೇವೆ ಎನ್ನುತ್ತಾರೆ ಹುಲಿ ವೇಷಧಾರಿಗಳು. ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಈ ಭಾಗದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.

     
    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೀನು ಹಿಡಿಯಲು ತೆರಳಿದ್ದ ಉಡುಪಿಯ ಖ್ಯಾತ ಕಲಾವಿದ ಸಾವು

    ಮೀನು ಹಿಡಿಯಲು ತೆರಳಿದ್ದ ಉಡುಪಿಯ ಖ್ಯಾತ ಕಲಾವಿದ ಸಾವು

    ಉಡುಪಿ: ಮೀನು ಹಿಡಿಯಲು ತೆರಳಿದ್ದ ಕಲಾವಿದರೊಬ್ಬರು ನೀರು ಪಾಲಾಗಿರುವ ಘಟನೆ ಉದ್ಯಾವರ ಸಂಪಿಗೆನಗರದ ಬಬ್ಬರ್ಯಗುಡ್ಡದ ನದಿಯಲ್ಲಿ ನಡೆದಿದೆ.

    ನೀರು ಪಾಲಾಗಿರುವ ವ್ಯಕ್ತಿಯನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ಆಸ್ಟಿನ್ ಮಚಾದೋ ಎಂದು ಗುರುತಿಸಲಾಗಿದೆ. ಮರುವಾಯಿ ಎಂಬ ಚಿಪ್ಪು ಮೀನು ಹೆಕ್ಕಲು ತೆರಳಿದ್ದ ಆಸ್ಟಿನ್ ನೀರಿನ ಸೆಳೆತಕ್ಕೆ ಮುಳುಗಿ ಸಾವನ್ನಪ್ಪಿದ್ದಾರೆ.

    ಮಚಾದೋ ಓರ್ವ ಉತ್ತಮ ನಾಟಕ ಹಾಗೂ ಚಿತ್ರ ಕಲಾವಿದರಾಗಿದ್ದರು. ಫ್ರೆಂಡ್ಸ್ ಗಾರ್ಡನ್ ಅರೂರುತೋಟ, ಸಿವೈಎ ತುಳುವರ ಬಳಗ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಆಸ್ಟಿನ್ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

    ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಹುಲಿ ವೇಷ ಸೇರಿದಂತೆ ಇತರ ಹಲವಾರು ವೇಷಧಾರಿಗಳಿಗೆ ಬಣ್ಣವನ್ನು ನೀಡುತ್ತಿದ್ದರು. ಹಾಗೆ ಉತ್ತಮ ಕ್ರಿಕೆಟ್ ಪಟುವಾಗಿ, ನೃತ್ಯಗಾರರಾಗಿ ಹೆಸರುವಾಸಿಯಾಗಿದ್ದ ಆಸ್ಟಿನ್ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಆಸ್ಟಿನ್ ಸಾವಿರಾರು ಜನ ಬಂಧು ಮಿತ್ರರನ್ನು ಅಗಲಿದ್ದಾರೆ.