Tag: ಹುಲಿರಾಯ

  • ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಅಡಿಗಡಿಗೆ ಪ್ರೇಕ್ಷಕರ ಮನ ಗೆಲ್ಲುವಂಥಾ ಸಿನಿಮಾಗಳನ್ನು ಸೃಷ್ಟಿಸುತ್ತಿವೆ. ಆ ಸಾಲಿನಲ್ಲಿ ಕ್ರಿಶ್ ನಿರ್ದೇಶನದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವೂ ಸೇರಿಕೊಂಡಿದೆ. ಈ ಹಿಂದೆ ‘ಹುಲಿರಾಯ’ ಎಂಬ ಚಿತ್ರದ ಮೂಲಕ ನಾಯಕನಾಗಿ ಆರ್ಭಟಿಸಿದ್ದ ಬಾಲು ನಾಗೇಂದ್ರ ಅವರ ಅದ್ಭುತ ನಟನೆ, ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಬೇರೆಯದ್ದೇ ಅನುಭೂತಿಯನ್ನು ಪ್ರತಿ ಪ್ರೇಕ್ಷಕರಲ್ಲಿಯೂ ತುಂಬಿಸುವ ಅಮೋಘವಾದ ಕಥೆಯೊಂದಿಗೆ ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಹೀಗೆಂದರೆ ನಂಬಲು ತುಸು ಕಷ್ಟವಾಗುವಂಥಾ ಅಚ್ಚುಕಟ್ಟುತನದೊಂದಿಗೆ ಅವರು ಕಪಟ ನಾಟಕ ಪಾತ್ರಧಾರಿಯನ್ನು ರೂಪಿಸಿದ್ದಾರೆ. ಇಲ್ಲಿನ ಕಥೆ ಒಂದು ರೀತಿಯಲ್ಲಿ ವಿಶೇಷವಾಗಿದ್ದರೆ, ನಿರ್ದೇಶಕರು ಅದನ್ನು ನಿರೂಪಣೆ ಮಾಡಿರೋ ರೀತಿ ಮತ್ತೊಂದು ಥರದಲ್ಲಿ ವಿಶಿಷ್ಟವಾಗಿದೆ. ಇದರಲ್ಲಿನ ಪಾತ್ರಗಳಿಗೆ ಬಾಲು ನಾಗೇಂದ್ರ, ಸಂಗೀತಾ ಭಟ್ ಮತ್ತು ಇತರೇ ತಾರಾಗಣ ಜೀವ ತುಂಬಿರೋ ರೀತಿಯಂತೂ ಇಡೀ ಸಿನಿಮಾದ ಪ್ರಮುಖ ಶಕ್ತಿಯೆಂದರೂ ಅತಿಶಯವಲ್ಲ. ಒಟ್ಟಾರೆಯಾಗಿ ಒಂದಕ್ಕೊಂದು ಪೂರಕವಾದ ಎಲ್ಲ ಅಂಶಗಳು ಒಗ್ಗೂಡಿಕೊಂಡು ಕಪಟ ನಾಟಕ ಪಾತ್ರಧಾರಿಯನ್ನು ಪುಷ್ಕಳ ಗೆಲುವಿನತ್ತ ಸರಾಗವಾಗಿಯೇ ಕರೆದೊಯ್ಯುತ್ತಿವೆ.

    ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಒಂದಂಶವನ್ನು ಪ್ರಧಾನವಾಗಿ ಪರಿಗಣಿಸಿದರೆ ಸಾಕಾಗುತ್ತದೆ. ಆದರೆ ನಿರ್ದೇಶಕ ಕ್ರಿಶ್ ಕಪಟ ನಾಟಕ ಪಾತ್ರಧಾರಿ ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಮೆಚ್ಚುಗೆಯಾಗಬೇಕೆಂಬ ಉದ್ದೇಶದಿಂದಲೇ ಈ ಕಥೆಯನ್ನು ರೂಪಿಸಿದ್ದಾರೆ. ಅದರಲ್ಲಿ ಯಶವನ್ನೂ ಕಂಡಿದ್ದಾರೆ. ಇಲ್ಲಿ ರೋಚಕ ತಿರುವುಗಳಿವೆ, ಹಾರರ್ ಅಂಶಗಳಿವೆ, ಮಾಸ್, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲವೂ ಇವೆ. ಆದರೆ ಕಥೆ ಎತ್ತ ಹೊರಳಿಕೊಂಡರೂ ಮನೋರಂಜನೆಗೆ ಮಾತ್ರ ಯಾವ ಕಾರಣದಿಂದಲೂ ಕೊರತೆಯಾಗದಂತೆ ಕ್ರಿಶ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆದ ಕಾರಣದಿಂದಲೇ ಇದು ಎಲ್ಲ ವರ್ಗದ ಪ್ರೇಕ್ಷಕರೂ ತಲೆದೂಗಿ ಮೆಚ್ಚಿಕೊಳ್ಳುವಂತೆ ಮೂಡಿ ಬಂದಿದೆ.

  • ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

    ಮತ್ತೆ ವೀಡಿಯೋ ಸಾಂಗ್‍ನೊಂದಿಗೆ ಬಂದ ಕಪಟ ನಾಟಕ ಪಾತ್ರಧಾರಿ!

    ಬೆಂಗಳೂರು:ಕಪಟ ನಾಟಕ ಪಾತ್ರಧಾರಿಯ ದರ್ಶನವಾಗಲು ಕೆಲವೇ ಕೆಲ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಈ ಕ್ಷಣಗಳನ್ನು ಮತ್ತಷ್ಟು ಕಳೆಗಟ್ಟಿಸುವ ಸಲುವಾಗಿಯೇ ಚಿತ್ರತಂಡ ಮತ್ತೊಂದು ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ. ಇದು ಈ ಹಿಂದೆಯೇ ಬಿಡುಗಡೆಯಾಗಿ ಭಾರೀ ಕ್ರೇಜ್ ಸೃಷ್ಟಿಸಿದ್ದ ‘ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಲು ಸುಂದ್ರಿ’ ಎಂಬ ಹಾಡಿನ ವೀಡಿಯೋ. ಈ ಹಾಡು ಆರಂಭದಲ್ಲಿ ಬಿಡುಗಡೆಯಾದಾಗಲೇ ತಾಜಾ ಸಾಹಿತ್ಯ ಮತ್ತು ವಿಶಿಷ್ಟ ಸೌಂಡಿಂಗ್‍ನ ಸಂಗೀತ ಸಂಯೋಜನೆಯ ಮೂಲಕ ಹಿಟ್ ಆಗಿತ್ತು. ಇದೀಗ ಹೊರ ಬಂದಿರೋ ವೀಡಿಯೋ ಸಾಂಗ್ ಕೂಡಾ ಮತ್ತೊಂದು ಸಲ ಪ್ರೇಕ್ಷಕರನ್ನು ತಾಕಿದೆ. ಈ ಮೂಲಕವೇ ಬಿಡುಗಡೆಯ ಕ್ಷಣಗಳನ್ನು ಮತ್ತಷ್ಟು ನಿರೀಕ್ಷೆಗಳಿಂದ ಶೃಂಗರಿಸುವಲ್ಲಿ ಚಿತ್ರ ತಂಡ ಗೆದ್ದಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದೇ ಚೆಂದದ ಹಾಡುಗಳ ಮೂಲಕ. ಒಂದಕ್ಕಿಂತ ಒಂದು ಚೆಂದ ಎಂಬಂಥಾ ಹಾಡುಗಳು ವಿಶಿಷ್ಟ ಸಾಹಿತ್ಯದ ಮೂಲಕವೂ ಗಮನ ಸೆಳೆದಿದ್ದವು. ಆ ಸಾಲಿನಲ್ಲಿ ಹಸಿದಾ ಶಿಖನು ಎಂಬ ಹಾಡೂ ಕೂಡಾ ಸೇರಿಕೊಂಡಿದೆ. ಇದೀಗ ಬಂದಿರೋ ಈ ಲಿರಿಕಲ್ ವಿಡಿಯೋ ದ್ಯಷ್ಯಗಳಂತೂ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಇದರಲ್ಲಿ ನಾಯಕ ಬಾಲು ನಾಗೇಂದ್ರ ಮತ್ತು ನಾಯಕಿ ಸಂಗೀತಾ ಭಟ್ ಚೆಂದದ ಲುಕ್ಕುಗಳಲ್ಲಿ ಕಂಗೊಳಿಸಿದ್ದಾರೆ. ಈ ಮೂಲಕ ಕಪಟ ನಾಟಕ ಪಾತ್ರಧಾರಿಯ ಹಾಡುಗಳ ಹವಾ ಅಡೆತಡೆಯಿಲ್ಲದೆ ಮುಂದುವರೆದಿದೆ.

    ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಇದರ ಹಿಂದೆ ಶಶಕ್ತವಾದ ಪ್ರತಿಭಾವಂತರ ತಂಡವಿದೆ. ಈ ಹಿಂದೆ ‘ಕಡ್ಡಿಪುಡಿ’ ಮುಂತಾದ ಚಿತ್ರಗಳಲ್ಲಿ ವಿಲನ್ ರೋಲ್ ಮಾಡುತ್ತಲೇ ‘ಹುಲಿರಾಯ’ ಚಿತ್ರದ ಮೂಲಕ ನಾಯಕನಾಗಿ ಅಬ್ಬರಿಸಿದ್ದ ಬಾಲು ನಾಗೇಂದ್ರ ಈ ಸಿನಿಮಾ ನಾಯಕ. ಆಟೋ ಚಾಲಕನೊಬ್ಬನ ಬದುಕಿನ ಹಿನ್ನೆಲೆಯಲ್ಲಿ ಹಾಡುಗಳಷ್ಟೇ ಡಿಫರೆಂಟಾದ ಕಥೆಯನ್ನು ಕಪಟನಾಟಕ ಪಾತ್ರಧಾರಿಯ ಮೂಲಕ ನಿರ್ದೇಶಕ ಕ್ರಿಶ್ ಹೇಳಲಣಿಯಾಗಿದ್ದಾರೆ. ಸಂಗೀತಾ ಭಟ್ ಬಹುಕಾಲದ ನಂತರ ಕಪಟನಾಟಕ ಪಾತ್ರಧಾರಿಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಚಾಣಕ್ಯ, ಅನಿರುದ್ಧ್ ಶಾಸ್ತ್ರಿ ಮತ್ತು ವೇಣು ಹಸ್ರಾಳಿ ಇದರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರೆ, ಪರಮೇಶ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರೋ ಈ ಚಿತ್ರ ನವೆಂಬರ್ 8ರಂದು ತೆರೆಗಾಣುತ್ತಿದೆ.

  • ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ಕಪಟನಾಟಕ ಪಾತ್ರಧಾರಿ!

    ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ಕಪಟನಾಟಕ ಪಾತ್ರಧಾರಿ!

    ಬೆಂಗಳೂರು: ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ‘ಕಪಟನಾಟಕ’ ಪಾತ್ರಧಾರಿ ಚಿತ್ರ ಒಂದರ ಹಿಂದೊಂದರಂತೆ ಬಿಡುಗಡೆಯಾಗಿದ್ದ ಹಾಡುಗಳೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಸುತ್ತ ಒಂದಷ್ಟು ಕೌತುಕಗಳಿಗೂ ಜೀವ ಬಂದಂತಾಗಿತ್ತು. ಇದೀಗ ಕ್ರಿಶ್ ನಿರ್ದೇಶನದ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಬಿಡುಗಡೆಯಾಗಿದೆ. ಇದರಲ್ಲಿಯೇ ಪ್ರೇಕ್ಷಕರ ಎಣಿಕೆಯೂ ಮಿಗಿಲಾದ ಕಥೆಯ ಸುಳಿವುಗಳು ಅನಾವರಣಗೊಂಡಿದೆ. ಇದನ್ನೂ ಓದಿ:  ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಬಾಲು ನಾಗೇಂದ್ರ ‘ಹುಲಿರಾಯ’ ಚಿತ್ರದ ನಂತರದಲ್ಲಿ ತಮಗೊಪ್ಪುವ ಕಥೆಗಾಗಿ ತೀವ್ರ ಹುಡುಕಾಟ ನಡೆಸಿ, ಬಂದ ಹಲವಾರು ಅವಕಾಶಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯನ್ನು ಮಾತ್ರವೇ ಒಪ್ಪಿಕೊಂಡಿದ್ದಾರೆ. ಅಷ್ಟೆಲ್ಲ ಅಳೆದೂ ತೂಗಿ ಅವರು ಈ ಕಥೆಯನ್ನೇ ಏಕೆ ಒಪ್ಪಿಕೊಂಡಿದ್ದಾರೆಂಬುದಕ್ಕೆ ಈ ಟ್ರೇಲರ್‍ನಲ್ಲಿ ಸಾಕ್ಷಿಗಳು ಸಿಕ್ಕಿವೆ. ಸಿಕ್ಕ ಕೆಲಸಗಳನ್ನೆಲ್ಲ ಬಿಡುತ್ತಾ, ಆಟೋ ಡ್ರೈವರ್ ಆಗಿ ಸೇರಿಕೊಳ್ಳೋ ನಾಯಕನಿಗೆ ಹಬ್ಬಿಕೊಳ್ಳುವ ಪ್ರೀತಿ, ಆತನಿಗೆ ಸುತ್ತಿಕೊಳ್ಳುವ ಒಂದು ಭೀಕರ ಕ್ರೈಂ ಮತ್ತು ಅದರ ಸುತ್ತಾ ಹರಡಿಕೊಳ್ಳುವ ಹಾರರ್ ವೃತ್ತಾಂತದ ಸುತ್ತಾ ಮಜವಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎಂಬುದು ಈ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಇದನ್ನೂ ಓದಿ: ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಈ ಚಿತ್ರದ ಶೀರ್ಷಿಕೆ, ಹಾಡುಗಳನ್ನು ಕೇಳಿದ ಪ್ರೇಕ್ಷಕರಿಗೆ ಇದರಲ್ಲೇನೋ ಇದೆ ಎಂಬಂಥಾ ಭರವಸೆ ಮೂಡಿಕೊಂಡಿತ್ತು. ಆದರೀಗ ಈ ಟ್ರೇಲರ್ ನೋಡಿದವರೆಲ್ಲ ತಾವು ಎಣಿಸಿದ್ದಕ್ಕಿಂತಲೂ ಮಜವಾದ ಕಥೆ ಈ ಸಿನಿಮಾದಲ್ಲಿರೋದು ಖಾತರಿಯಾಗಿದೆ. ಬಾಲು ನಾಗೇಂದ್ರ ಈ ಹಿಂದೆ ‘ಹುಲಿರಾಯ’ ಚಿತ್ರದಲ್ಲಿ ವಿಶಿಷ್ಟವಾದ ಪಾತ್ರದ ಮೂಲಕ ನಾಯಕನಾಗಿ ಮನಗೆದ್ದಿದ್ದವರು. ಅವರು ‘ಕಪಟನಾಟಕ’ ಪಾತ್ರಧಾರಿಯಾಗಿ ಅದಕ್ಕಿಂತಲೂ ಮಜವಾದ ಪಾತ್ರ ಮಾಡಿರೋದಕ್ಕೂ ಈ ಟ್ರೇಲರ್ ಸಾಕ್ಷಿಯಂತೆ ಮೂಡಿ ಬಂದಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಬಂದಿರೋ ಭರವಸೆಯ ಟ್ರೇಲರುಗಳಲ್ಲಿ ‘ಕಪಟನಾಟಕ’ ಪಾತ್ರಧಾರಿಯ ಟ್ರೇಲರ್ ಕೂಡಾ ಒಂದೆಂದು ಪ್ರೇಕ್ಷಕರು ಪರಿಗಣಿಸಿದ್ದಾರೆ.

  • ಕಪಟ ನಾಟಕ ಪಾತ್ರಧಾರಿ: ಲಿರಿಕಲ್ ವಿಡಿಯೋದ ಫೇಸ್‍ಬುಕ್ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಲಿರಿಕಲ್ ವಿಡಿಯೋದ ಫೇಸ್‍ಬುಕ್ ಸವಾರಿ!

    ಬೆಂಗಳೂರು: ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟನಾಟಕ ಪಾತ್ರಧಾರಿ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಹೆಚ್ಚೇನೂ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರೋ ಈ ಸಿನಿಮಾವೀಗ ಭಾರೀ ಸದ್ದು ಮಾಡುತ್ತಿರೋದು ಲಿರಿಕಲ್ ವಿಡಿಯೋ ಒಂದರ ಮೂಲಕ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಲಿರಿಕಲ್ ವೀಡಿಯೋ ಭರಾಟೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಈ ಹಾಡು ಹೀಗೆ ಅಬ್ಬರದಿಂದ ಹರಿದಾಡುತ್ತಿರೋದಕ್ಕೆ ಮೂಲ ಕಾಲರಣ ಅದನ್ನು ರೂಪಿಸಿರುವ ಕ್ರಿಯಾಶೀಲ ರೀತಿ ಮತ್ತು ಅದರ ತುಂಬೆಲ್ಲ ಕಣ್ಣಿಗೆ ಕಟ್ಟಿದಂತೆ ಕಾಣಿಸೋ ಹೊಸತನ.

    ಕ್ರಿಶ್ ನಿರ್ದೇಶನದ ಈ ಚಿತ್ರದ ಯಾಕೆ ಅಂತ ಗೊತ್ತಿಲ್ಲ ಕಣ್ರಿ, ನನ್ನನ್ನು ನೋಡಿ ನಕ್ಬಿಟ್ಳು ಸುಂದ್ರಿ ಅಂತ ಶುರುವಾಗೋ ಈ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾದ ಕ್ಷಣದಿಂದಲೇ ಕ್ರೇಜ್ ಹುಟ್ಟು ಹಾಕಿತ್ತು. ಆದಿಲ್ ನದಾಫ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದ ಈ ಹಾಡನ್ನು ಹರಿಚರಣ್ ಶೇಷಾದ್ರಿ ಹಾಡಿದ್ದರು. ವೇಣು ಹಸ್ರಾಳಿ ಸಾಹಿತ್ಯವಿರೋ ಈ ಹಾಡನ್ನು ಚಿತ್ರ ತಂಡ ರೂಪಿಸಿರೋ ರೀತಿ ಮಾತ್ರ ಎಂಥವರೂ ಮೆಚ್ಚಿಕೊಳ್ಳುವಂತಿದೆ. ಈ ಕಾರಣದಿಂದಲೇ ಇದೀಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಸಖತ್ ಸೌಂಡ್ ಮಾಡುತ್ತಿದೆ.

    ಈ ಲಿರಿಕಲ್ ವಿಡಿಯೋ ಎಲ್ಲರಿಗೂ ಹಾಟ್ ಫೇವರಿಟ್ ಆಗಿರೋ ಫೇಸ್‍ಬುಕ್ ಥೀಮ್‍ನಲ್ಲಿ ತಯಾರಾಗಿದೆ. ಫೇಸ್‍ಬುಕ್ ಗೋಡೆಯಲ್ಲಿನ ಥರ ಥರದ ಚಿತ್ತಾರಗಳೊಂದಿಗೇ ಈ ಹಾಡು ತೆರೆದುಕೊಳ್ಳುತ್ತೆ. ನಾವು ಫೇಸ್‍ಬುಕ್‍ನಲ್ಲಿ ಯಾವುದೇ ಪೋಸ್ಟ್ ಮಾಡುವಾಗ ಅಕ್ಷರ ಟೈಪ್ ಮಾಡುತ್ತೇವಲ್ಲಾ? ಆ ಪ್ಲೇಸಿನಲ್ಲಿ ಈ ಹಾಡಿನ ಸಾಹಿತ್ಯ ಬರುತ್ತದೆ. ಪೋಸ್ಟ್ ಗಳ ಮೂಲಕವೇ ಇದರ ಸ್ಟಿಲ್ಲುಗಳು ಕದಲುತ್ತವೆ. ಈ ಚಿತ್ರದ ತಾಂತ್ರಿಕ ವರ್ಗದ ವಿವರಗಳನ್ನೂ ಕೂಡಾ ಅವರವರ ಫೇಸ್‍ಬುಕ್ ಖಾತೆಯ ಮೂಲಕವೇ ಪ್ರಚುರಪಡಿಸುವಂಥಾ ನವೀನ ಮಾದರಿಯನ್ನೂ ಇಲ್ಲಿ ಅನುಸರಿಸಲಾಗಿದೆ. ಹೀಗೆ ಫೇಸ್‍ಬುಕ್‍ನೊಳಗೇ ಕದಲೋ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ. ಅಂದಹಾಗೆ ಈ ಚಿತ್ರದಲ್ಲಿ ಹುಲಿರಾಯ ಚಿತ್ರದ ನಂತರ ಬಾಲು ನಾಗೇಂದ್ರ ಮತ್ತೊಂದು ಮಜವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತಾ ಭಟ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

  • ಹುಲಿರಾಯ- ಕಾಡಿನಿಂದ ನಾಡಿಗೆ, ಅಕ್ಟೋಬರ್ 6ಕ್ಕೆ ಬರಲಿದ್ದಾನೆ

    ಹುಲಿರಾಯ- ಕಾಡಿನಿಂದ ನಾಡಿಗೆ, ಅಕ್ಟೋಬರ್ 6ಕ್ಕೆ ಬರಲಿದ್ದಾನೆ

    ಬೆಂಗಳೂರ: ಎಸ್.ಎಲ್.ಎನ್ ಕ್ರಿಯೇಷನ್ಸ್ ಅಡಿಯಲ್ಲಿ, ನಾಗೇಶ್ ಕೋಗಿಲು ನಿರ್ಮಾಣದಲ್ಲಿ, ಅರವಿಂದ ಕೌಶಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಹುಲಿರಾಯ ಈಗ ತೆರೆಗೆ ಬರಲು ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ ಆರಕ್ಕೆ ರಾಜ್ಯಾದ್ಯಂತ ಈ ಚಿತ್ರವು ಪರಮ್ವಾಹ್ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಮ್ಸ್ ರವರ ವಿತರಣೆಯ ಮುಖಾಂತರ ಕನ್ನಡ ಪ್ರೇಕ್ಷಕನೆದುರಿಗೆ ಬರಲಿದೆ.

    ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಚಿತ್ರ ಹುಲಿರಾಯ. ತನ್ನ `ಫಸ್ಟ್ ಲುಕ್` ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಸಿನೆಮಾ ಇದು. ತದನಂತರ, `ಮೋಷನ್ ಪೋಸ್ಟರ್’, ಧ್ವನಿ ಸುರುಳಿ ಬಿಡುಗಡೆ, ಮುಂದಕ್ಕೆ ಚಿತ್ರದ `ಅಫಿಶಿಯಲ್ ಟ್ರೈಲರ್’ ಹೀಗೆ ವಿಶಿಶ್ಟವಾದ ಸಂಗತಿಗಳನ್ನು ಚಿತ್ರ ತಂಡ ಪ್ರೇಕ್ಷಕನೆದುರಿಗೆ ತರುತ್ತಾ ಹೋಯಿತು. ಚಿತ್ರದ ಬಗೆಗಿನ ನಿರೀಕ್ಷೆಯೂ ಹೆಚ್ಚಿದೆ. ಈಗಾಗಲೇ ಚಿತ್ರವನ್ನು ನೋಡಿರುವ ಸಿನೆಮಾ ಮಂದಿಯೂ ಸಹ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹುಲಿರಾಯ ಚಿತ್ರದಲ್ಲಿ ಬಾಲು ನಾಗೇಂದ್ರ ನಾಯಕ ನಟನಾಗಿದ್ದು, ಚಿರಶ್ರಿ ಅಂಚನ್ ಹಾಗು ದಿವ್ಯಾ ಉರುಡುಗಾ ನಾಯಕಿಯರಾಗಿದ್ದಾರೆ.

    ಚಿತ್ರಕ್ಕೆ ರವಿ ಅವರ ಛಾಯಾಗ್ರಹಣ, ಅರ್ಜುನ್ ರಾಮು ರವರ್ ಸಂಗೀತ ಸಂಯೋಜನೆಯಿದ್ದು ಚಿತ್ರದ ಹಾಡುಗಳೂ ಸಹ ‘ಹಿಟ್’ ಆಗಿವೆ. ಚಿತ್ರದಲ್ಲಿನ ವಿವಿಧ ಸನ್ನಿವೇಶಗಳನ್ನು ಹಾಡುಗಳ ಮುಖಾಂತರ ಕಥೆಯೊಂದಿಗೆ ಸಾಗುವ ಹಾಗೆ ಚಿತ್ರಿಸಿರುವ ನಿರ್ದೇಶಕ, ಹಾಡುಗಳನ್ನ ಸಾಂದರ್ಭಿಕವಾಗಿ ಬಳಸುವುದರಲ್ಲಿ ಯಶಸ್ವಿಯಾಗಿದ್ದಾರೆ.

    ಚಿತ್ರಕ್ಕೆ ರವಿ ರವರು ಒದಗಿಸಿರುವ ಛಾಯಾಗ್ರಹಣವೇ ಆಗಿರಲಿ, ಅರ್ಜುನ್ ರಾಮು ರವರು ಒದಗಿಸಿರುವ ಸಂಗೀತವೇ ಆಗಿರಲಿ, ಬಾಲು ನಾಗೇಂದ್ರ ರವರ ನಟನೆಯೇ ಆಗಲಿ.. ಎಲ್ಲವೂ `ಸೈ’ ಎನ್ನಿಸಿಕೊಂಡಂತೆಯೇ ಕಾಣುತ್ತಿದೆ. ಹುಲಿರಾಯನ ಕಥೆಯ ಇಂದಿನ ಸಾಮಾಜಿಕ ಆಗುಹೋಗುಗಳನ್ನು ಬಿಂಬಿಸುತ್ತಾ ಮನರಂಜನೆ ನೀಡುತ್ತಾ ಸಾಗುತ್ತದೆ ಎಂದು ಹೇಳುತ್ತಾರೆ ನಿರ್ದೇಶಕರು.

    ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಹುಲಿಯೊಂದು ನಾಡಿಗೆ ಬಂದುಬಿಟ್ಟರೆ? ಆಗಬಹುದಾದ ಅನಾಹುತಗಳೇನು? ಆ ಹುಲಿ ಇಲ್ಲಿ , ನಾಡಿನಲ್ಲಿ ಬದುಕಲು ಸಾಧ್ಯವೇ? ಎನ್ನುವ ಒಂದು ಪ್ರಶ್ನೆಯನ್ನು ಎತ್ತುತ್ತಾ, ಸುರೇಶಾ ಎನ್ನುವ ಯುವಕನೊಬ್ಬನ ಜೀವನದ ರೋಚಕವಾದ ಕಥೆಯನ್ನ ಹೇಳುತ್ತಾ ಸಾಗುತ್ತದೆ.

    ಇದೇ ವಾರ ತೆರೆಗೆ ಬರಲಿರುವ ಹುಲಿರಾಯ ಪ್ರೇಕ್ಷನಿಗೆ ಇಷ್ಟವಾಗುವ, ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ಕೊಡುಗೆಯಾಗುವ ಸಾಧ್ಯತೆಗಳು ಕಾಣುತ್ತಿವೆ.