Tag: ಹುಡುಗಿ

  • ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

    ರಾಜ್ಯ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲರ ಬಗ್ಗೆ ಮಾತನಾಡ್ತಿಲ್ಲ. ನಾನು ಇಲ್ಲಿ ಕುಳಿತಿರುವ ಜನರ ಬಗ್ಗೆ ಮಾತನಾಡ್ತಿಲ್ಲ ಅಂದ್ರು.

    ಇದಕ್ಕೂ ಮುನ್ನ ಗೋವಾದಲ್ಲಿ ಮಾದಕದ್ರವ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕದ್ರವ್ಯ ಜಾಲದ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲಾಗ್ತಿದೆ. ಡ್ರಗ್ಸ್ ಕಣ್ಣಿಗೆ ಕಾಣದಂತೆ ಮರೆಯಾಗುವವರೆಗೆ ಇದು ಮುಂದುವರೆಯಲಿದೆ ಎಂದರು. ಇದು ಸಂಪೂರ್ಣವಾಗಿ ನಿಲ್ಲುತ್ತದೆ ಎಂಬ ನಂಬಿಕೆಯಿಲ್ಲ. ಆದ್ರೂ ಕಾಲೇಜುಗಳಲ್ಲಿ ತೀವ್ರವಾದ ಮಾದಕದ್ರವ್ಯ ಪ್ರಸರಣ ಇಲ್ಲ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಮಾದಕದ್ರವ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ 170 ಮಂದಿಯನ್ನ ಡ್ರಗ್ಸ್ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಿದ್ರು.

    ಕಾನೂನಿನ ಪ್ರಕಾರ ಸಣ್ಣ ಪ್ರಮಾಣದ ಡ್ರಗ್ಸ್ ಇದ್ದರೆ ವ್ಯಕ್ತಿಗೆ 8 ರಿಂದ 15 ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಜಾಮೀನು ಸಿಗುತ್ತದೆ. ಕೋರ್ಟ್ ಗಳೂ ಕೂಡ ಸಹಾನುಭೂತಿ ತೋರುತ್ತಿವೆ. ಆದ್ರೂ ತಪ್ಪಿತಸ್ಥರು ಸಿಕ್ಕಿಬೀಳುತ್ತಿದ್ದಾರೆ ಎಂದು ಹೇಳಿದ್ರು.

    ನಿರುದ್ಯೋಗದ ಬಗ್ಗೆ ಮಾತನಾಡಿದ ಪರಿಕ್ಕರ್, ಗೋವಾದ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಲು ಇಚ್ಛಿಸದ ಕಾರಣ ಸರ್ಕಾರಿ ಇಲಾಖೆಯೊಂದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸಕ್ಕೆ ಉದ್ದ ಕ್ಯೂ ಇದ್ದಿದ್ದು ಕಂಡಿತು. ಸರ್ಕಾರಿ ಕೆಲಸ ಅಂದ್ರೆ ಅಷ್ಟೇನು ಕಷ್ಟದ ಕೆಲಸವಲ್ಲ ಅಂತ ಜನ ಅಂದುಕೊಂಡಿದ್ದಾರೆ ಎಂದು ಹೇಳಿದ್ರು.

  • ಕ್ಲಾಸ್‍ನಲ್ಲಿ ಹುಡುಗಿಯನ್ನ ಗುರಾಯಿಸಿದನೆಂದು ಸಹಪಾಠಿಗಳಿಂದಲೇ 10ನೇ ತರಗತಿ ಬಾಲಕನ ಕೊಲೆ!

    ಕ್ಲಾಸ್‍ನಲ್ಲಿ ಹುಡುಗಿಯನ್ನ ಗುರಾಯಿಸಿದನೆಂದು ಸಹಪಾಠಿಗಳಿಂದಲೇ 10ನೇ ತರಗತಿ ಬಾಲಕನ ಕೊಲೆ!

    ಮುಂಬೈ: 10ನೇ ತರಗತಿ ಬಾಲಕನನ್ನು ಸಹಪಾಠಿಗಳೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

    ಮೃತ ಬಾಲಕನ ಸಹಪಾಠಿಗಳಾದ ಇಬ್ಬರು ವಿದ್ಯಾರ್ಥಿಗಳು ಕೃತ್ಯ ನಡೆದ ನಂತರ ಶಾಲೆಗೆ ಗೈರಾಗಿದ್ದರು. ಅವರಿಬ್ಬರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕ ತನ್ನ ತರಗತಿಯಲ್ಲಿ ಹುಡುಗಿಯೊಬ್ಬಳನ್ನ ಗುರಾಯಿಸಿದ್ದಕ್ಕೆ ಆರೋಪಿ ವಿದ್ಯಾಥಿಗಳು ವಿರೋಧಿಸಿದ್ದು, ಕುಡುಗೋಲಿನಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿಗಳಲ್ಲಿ ಒಬ್ಬ ಅಪ್ತಾಪ್ತನಾಗಿದ್ದು, ಮತ್ತೊಬ್ಬನಿಗೆ 20 ವರ್ಷ ವಯಸ್ಸು. ಶಾಲೆಯಲ್ಲಿ ಅಂದು 10ನೇ ತರಗತಿಯವರಿಗೆ ಪ್ರಾಕ್ಟಿಕಲ್ ಟೆಸ್ಟ್ ನಿಗದಿಯಾಗಿತ್ತು. ಆದ್ರೆ ಅದಕ್ಕೂ ಮುಂಚೆ ಶಾಲೆಯ ಕಂಪ್ಯೂಟರ್ ರೂಮಿನ ಬಳಿ ಆರೋಪಿಗಳಿಬ್ಬರೂ ಕುಡುಗೋಲಿನಿಂದ 16 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದಾರೆ. ಬಾಲಕನನ್ನು ಶಾಲೆಯವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ ಎಂದು ಅವರು ಹೇಳಿದ್ದಾರೆ.

    ಘಟನೆ ನಡೆದ ದಿನದಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದರಿಂದ ಈ ಕೃತ್ಯದಲ್ಲಿ ಅವರ ಪಾತ್ರವಿರಬಹುದೆಂದು ಶಂಕಿಸಲಾಗಿತ್ತು. ಅವರಿಬ್ಬರೂ ಪ್ರಾಕ್ಟಿಕಲ್ ಪರೀಕ್ಷೆಗೂ ಹಾಜರಾಗಿರಲಿಲ್ಲ ಎಂದು ನಾಟೆಪುಟೆ ಪೊಲೀಸ್ ಠಾಣೆಯ ಇನ್ ಚಾರ್ಜ್ ರಾಜ್‍ಕುಮಾರ್ ಭುಜ್ಪಾಲ್ ಹೇಳಿದ್ದಾರೆ.

    ಹುಡುಗಿಯೊಬ್ಬಳನ್ನು ಗುರಾಯಿಸುತ್ತಿದ್ದ ಎಂದು ಆರೋಪಿಸಿದ ನಂತರ ಇಬ್ಬರು ಆರೋಪಿಗಳು ಹಾಗೂ 16ರ ಬಾಲಕನ ನಡುವೆ ಜಗಳ ನಡೆದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

  • ಹುಡುಗಿ ವಿಚಾರಕ್ಕೆ ಗಲಾಟೆ – ಬೆಂಗಳೂರಲ್ಲಿ ಗೆಳೆಯನಿಂದ್ಲೇ ಯುವಕನ ಕೊಲೆ

    ಹುಡುಗಿ ವಿಚಾರಕ್ಕೆ ಗಲಾಟೆ – ಬೆಂಗಳೂರಲ್ಲಿ ಗೆಳೆಯನಿಂದ್ಲೇ ಯುವಕನ ಕೊಲೆ

    ಬೆಂಗಳೂರು: ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರೋ ಘಟನೆ ನಗರದ ರಾಜಗೋಪಾಲನಗರದಲ್ಲಿ ನಡೆದಿದೆ.

    ಹೇಮಂತ ಕೊಲೆಯಾದ ಯುವಕ. ಸೋಮವಾರ ರಾತ್ರಿ ಸುಮಾರು 8.30ರ ವೇಳೆಯಲ್ಲಿ ಹೇಮಂತ್ ತನ್ನ ಗೆಳೆಯನ ಜೊತೆ ಒಂದು ರೌಂಡ್ ಎಣ್ಣೆ ಪಾರ್ಟಿ ಮುಗಿಸಿ ಇನ್ನೇನು ವಾಪಸ್ಸು ಮನೆ ಕಡೆ ಮುಖಮಾಡಿದ್ದ. ಅಷ್ಟರಲ್ಲೆ ತನ್ನ ಹಳೆ ದೋಸ್ತಿ ಮಧು ಯಮನಂತೆ ಎದುರುಗಡೆ ಸಿಕ್ಕಿದ್ದಾನೆ. ಈ ಹಿಂದೆ ಹೇಮಂತ ಹುಡುಗಿ ವಿಚಾರವಾಗಿ ಮಧುಗೆ ಹೊಡೆದಿದ್ದ ಎನ್ನಲಾಗಿದೆ.

    ಅದೇ ಕಾರಣಕ್ಕೆ ಹೇಮಂತ್‍ಗೆ ಚಟ್ಟ ಕಟ್ಟಲೇಬೇಕೆಂದು ಟೈಂಗಾಗಿ ಮಧು ಕಾದಿದ್ದ. ಹೇಮಂತ ಒಬ್ಬನೇ ಸಿಕ್ಕಿದ್ದರಿಂದ ಮಧು ಡ್ರ್ಯಾಗರ್ ತೆಗೆದು ಆತನಿಗೆ ಚುಚ್ಚಿದ್ದಾನೆ. ಪರಿಣಾಮ ಹೇಮಂತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಘಟನೆ ನಡೆದ ಒಂದು ಗಂಟೆ ಒಳಗಡೆ ಅರೋಪಿ ಮಧುವನ್ನ ರಾಜಗೋಪಾಲನಗರ ಪೋಲಿಸರು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡ್ತಿದ್ದಾರೆ.

  • ಹುಡುಗಿ ವಿಚಾರಕ್ಕೆ ಆರ್‍ಸಿ ಕಾಲೇಜಲ್ಲಿ ವಿದ್ಯಾರ್ಥಿಗಳ ಮಾರಾಮಾರಿ

    ಹುಡುಗಿ ವಿಚಾರಕ್ಕೆ ಆರ್‍ಸಿ ಕಾಲೇಜಲ್ಲಿ ವಿದ್ಯಾರ್ಥಿಗಳ ಮಾರಾಮಾರಿ

    ಬೆಂಗಳೂರು: ಹುಡುಗಿ ವಿಚಾರಕ್ಕೆ ನಗರದ ಚಾಲುಕ್ಯ ಸರ್ಕಲ್‍ನಲ್ಲಿರೋ ಆರ್.ಸಿ ಕಾಲೇಜ್‍ನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಜಗಳ ನಡೆದಿದೆ.

    ನಮ್ಮ ಕಾಲೇಜಿನ ಹುಡುಗಿಯನ್ನ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳು ಆರ್.ಸಿ ಕಾಲೇಜಿಗೆ ಬಂದಿದ್ದಾರೆ. ಈ ವೇಳೆ  ಕಲಾ ಕಾಲೇಜಿನ ವಿದ್ಯಾರ್ಥಿಗಳು ಆರ್‍ಸಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾಗಿದ್ರು. ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ಕಾಲೇಜಿನ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ.

    ಈ ಘಟನೆಯಲ್ಲಿ ಕಲಾ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಎರಡೂ ಕಾಲೇಜಿನ ವಿದ್ಯಾರ್ಥಿಗಳನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

  • ಒಬ್ಬಳಿಗಾಗಿ ಇಬ್ಬರು ಯುವಕರ ಮಧ್ಯೆ ಮಾರಾಮಾರಿ: ಓರ್ವನ ಸ್ಥಿತಿ ಚಿಂತಾಜನಕ

    ಒಬ್ಬಳಿಗಾಗಿ ಇಬ್ಬರು ಯುವಕರ ಮಧ್ಯೆ ಮಾರಾಮಾರಿ: ಓರ್ವನ ಸ್ಥಿತಿ ಚಿಂತಾಜನಕ

    ಬೆಂಗಳೂರು: ಹುಡುಗಿಗಾಗಿ ಇಬ್ಬರು ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆಯೊಂದು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಯಶ್ ಮತ್ತು ರಾಜೇಂದ್ರ ಎಂಬುವರ ನಡುವೆ ಈ ಮಾರಾಮಾರಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ರಾಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಏನಿದು ಘಟನೆ?: ಕವನ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಯಶ್ ಹಾಗೂ ದಿವಾಕರ್ ಇಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಯಶ್ ಹಾಗೂ ದಿವಾಕರ್ ನಡುವೆ ಗಲಾಟೆ ನಡೆದಿದೆ. ಹೀಗಾಗಿ ದಿವಾಕರ್ ಪರವಾಗಿ ಸ್ನೇಹಿತ ರಾಜೇಂದ್ರ ಎಂಬಾತ ರಾಜಿ ಪಂಚಾಯ್ತಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲು ಯಶ್ ಹಾಗೂ ಆತನ ಸ್ನೇಹಿತರು ಮುಂದಾಗಿದ್ದಾರೆ.

    ಸದ್ಯ ದಿವಾಕರ್ ಸ್ನೇಹಿತ ರಾಜೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹಲ್ಲೆಯ ಬಳಿಕ ಯಶ್ ಹಾಗೂ ಆತನ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.