Tag: ಹುಡುಕಾಟ

  • ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ

    ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ

    ಹುಬ್ಬಳ್ಳಿ: ಸ್ಯಾನಿಟೈಜರ್ ಕುಡಿದು ಅಕ್ಕ-ತಮ್ಮ ಸಾವನ್ನಪ್ಪಿದ ಘಟನೆಯಿಂದ ಹುಬ್ಬಳ್ಳಿಯ ಕಲಘಟಗಿ ಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಕಲಘಟಗಿಯ ಗಂಬ್ಯಾಪುರದಲ್ಲಿ 15 ಜನ ಮದ್ಯವ್ಯಸನಿಗಳು ಸ್ಯಾನಿಟೈಜರ್ ಸೇವಿಸಿದ್ದರು. ಇದೇ ಸ್ಯಾನಿಟೈಜರ್ ಕುಡಿದು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಅಕ್ಕ ಹಾಗೂ ತಮ್ಮ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

    ಇವರ ಜೊತೆ ಇನ್ನು 13 ಜನರು ಸ್ಯಾನಿಟೈಸರ್ ಸೇವನೆ ಮಾಡಿದ್ದರು ಎನ್ನಲಾಗಿದೆ. ಅದರಲ್ಲಿ ನಾಲ್ವರನ್ನು ಕಲಘಟಗಿ ಇನ್ಸ್ ಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ವಶಕ್ಕೆ ಪಡೆದು ಚಿಕಿತ್ಸೆಗಾಗಿ ಕಿಮ್ಸ್ ಗೆ ಕಳುಹಿಸಿಕೊಡಲಾಗಿದೆ. ತಲೆಮರೆಸಿಕೊಂಡಿದ್ದ 9 ಜನರಿಗೆ ಹುಡುಕಾಟ ನಡೆಸುತ್ತಿದ್ದಾರೆ.

    ಗ್ರಾಮಕ್ಕೆ ಕಲಬೆರಕೆ ಸ್ಯಾನಿಟೈಸರ್ ತಂದವರನ್ನು ಹುಡುಕಲು ತಂಡ ರಚಿಸಲಾಗಿದ್ದು, ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪೊಲೀಸರು ಜನತೆಗೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯ ವಾಹನದ ಮುಖಾಂತರ ಗ್ರಾಮಸ್ಥರು ಯಾರು ಭಯಪಡದೇ ಬಂದು ನಿಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಯಾರೂ ಸ್ಯಾನಿಟೈಜರ್ ಸೇವಿಸವೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

  • ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

    ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

    ಮೈಸೂರು: ಅಪ್ಪ-ಮಗ ಕದ್ದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲನ್ನು ಕೆರೆಯಲ್ಲಿ ಅಡಗಿಸಿಟ್ಟಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರಿನಲ್ಲಿ ಮುಳುಗೇಳುವ ಮೂಲಕ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯಲ್ಲಿ ಈ ಹುಡುಕಾಟ ನಡೆದಿದೆ. ಕೊಳಚೆ ನೀರು ತುಂಬಿದ್ದ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕೆರೆಯ ಬಳಿ ಜಮಾವಣೆಯಾದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

    ಪೊಲೀಸರು ಬರುತ್ತಿದ್ದಂತೆ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಕಳ್ಳ ಮಾಲಿನ ಹುಡುಕಾಟದ ವಿಚಾರ ತಿಳಿದು ಬೇಸ್ತು ಬಿದ್ದ ಪೊಲೀಸರು, ಕೆರೆಯಲ್ಲಿ ಯಾರೂ ಕೂಡ ಕದ್ದ ಮಾಲನ್ನು ಅಡಗಿಸಿಟ್ಟಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

  • ಎದುರುಮನೆ ಮಹಿಳೆ ಜೊತೆ ಗಂಡ ನಾಪತ್ತೆ- ಗಂಡ ಎಲ್ಲಿದ್ದಾನೆ ಎಂದು ಹೆಂಡ್ತಿ, ಪತ್ನಿ ಎಲ್ಲಿದ್ದಾಳೆ ಅಂತಾ ಗಂಡ ಹುಡುಕಾಟ

    ಎದುರುಮನೆ ಮಹಿಳೆ ಜೊತೆ ಗಂಡ ನಾಪತ್ತೆ- ಗಂಡ ಎಲ್ಲಿದ್ದಾನೆ ಎಂದು ಹೆಂಡ್ತಿ, ಪತ್ನಿ ಎಲ್ಲಿದ್ದಾಳೆ ಅಂತಾ ಗಂಡ ಹುಡುಕಾಟ

    ಮಡಿಕೇರಿ: ಎದುರು ಮನೆಯ ಮಹಿಳೆಯೊಂದಿಗೆ ಪ್ರೀತಿಯಾಗಿ ಪತ್ನಿಯನ್ನೇ ಬಿಟ್ಟು ಪತಿ ಪರಾರಿಯಾಗಿರೋ ಘಟನೆ ಜಿಲ್ಲೆಯ ಗೋಣಿಕೊಪ್ಪದ ಕುಂದಾ ಎಂಬ ಗ್ರಾಮದಲ್ಲಿ ನಡೆದಿದೆ. ಇತ್ತ ಪತಿಗೋಸ್ಕರ ಹೆಂಡತಿ ಬೀದಿ ಬೀದಿ ಸುತ್ತುತ್ತಿದ್ರೆ, ಮತ್ತೊಂದೆಡೆ ಎದುರು ಮನೆಯ ಮಹಿಳೆಯ ಗಂಡ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಹುಡುಕಾಟ ನಡೆಸುತ್ತಿದ್ದಾರೆ.

    ಪವನಾ ಭಟ್ ಮತ್ತು ಶಶಿಧರ್ ಭಟ್ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿವೆ. ಆದರೂ ಎದುರು ಮನೆಯ ಇನ್ನೊಬ್ಬರ ಪತ್ನಿಯ ಜೊತೆ ಪ್ರೀತಿಯಾಗಿ ಆಕೆಯ ಜೊತೆ ಶಶಿಧರ್ ಭಟ್ ಪರಾರಿಯಾಗಿದ್ದಾನೆ. ಪತಿಯ ಹುಡುಕಟದಲ್ಲಿ ಪತ್ನಿ ಪವನಾ ಭಟ್ ಬೀದಿ ಬೀದಿ ಸುತ್ತಾಡುತ್ತಿದ್ದಾರೆ.

    ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗುವಿದೆ. ಈ ಕುಟುಂಬ ಕುಂದಾ ಗ್ರಾಮದಲ್ಲಿ ಪುರೋಹಿತಿಕೆ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಇನ್ನೊಂದು ಜೋಡಿ ಲಸಿಕಾ ಮತ್ತು ನವೀನ್ ನಾಚಪ್ಪ ಬಿಸಿನೆಸ್ ಮಾಡಿಕೊಂಡು ಇದ್ದರು. ಇವರಿಗೆ ಒಂದು ಗಂಡು ಮಗು ಇದೆ. ಈ ಎರಡು ದಂಪತಿ ಎದುರು ಬದರು ಮನೆಯಲ್ಲೇ ವಾಸವಾಗಿದ್ದರಿಂದ ಪರಿಚಯವಾಗಿತ್ತು.

    ಶಿಶಿಧರ್ ಭಟ್ ಹಾಗೂ ಲಸಿಕಾ ಅವರ ಮಧ್ಯ ಪರಿಚಯದಿಂದ ಲವ್ವಿಡವ್ವಿ ಶುರುವಾಗುತ್ತು. ಇದನ್ನು ತಿಳಿದ ಪವನಾ ಗಂಡನೊಂದಿಗೆ ಜಗಳವಾಡಿದ್ದರು. ಇತ್ತ ಲಸಿಕಾಳ ಗಂಡನಿಗೂ ಇವರ ರಹಸ್ಯ ಪ್ರೇಮದ ಬಗ್ಗೆ ತಿಳಿಸಿದ್ದರು. ಆದರೆ ನವೀನ್ ನನ್ನ ಹೆಂಡತಿ ಹಾಗಲ್ಲ ಅಂತಾ ಪವನಾ ಅವರನ್ನೇ ಬೈದು ಕಳುಹಿಸಿದ್ದರು. ಕೊನೆಗೆ ಪತಿಯ ಪರಸ್ತ್ರೀ ಸಂಗಕ್ಕೆ ಬೇಸತ್ತು ಪವನಾ ತವರುಮನೆ ಸೇರಿದ್ದಾರೆ.

    ಪವನಾ ಮನೆ ಬಿಟ್ಟು ಹೋದ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಲಸಿಕಾ ತನ್ನ ಪತಿ, ಮಕ್ಕಳನ್ನು ಬಿಟ್ಟು ಶಶಿಧರ್ ಭಟ್‍ನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪತಿ ನವೀನ್ ನಾಚಪ್ಪ ಗೋಣಿಕೋಪ್ಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮಡಕೇರಿಯಲ್ಲಿ ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ.

    ಪತಿ ಶಶಿಧರ್ ಭಟ್ ಲಸಿಕಾ ಜೊತೆ ಪರಾರಿಯಾಗಿರುವ ವಿಚಾರ ತಿಳಿದ ಪವನಾ ಕೂಡ ಬೆಂಗಳೂರಿಗೆ ಬಂದಿರಬಹುದು ಎಂಬ ಅನುಮಾನದಿಂದ ಪತಿ ಮುಂಚೆ ಯಾವೆಲ್ಲ ದೇವಾಲಯಗಳಲ್ಲಿ ಪೂಜೆ ಮಾಡುತ್ತಿದ್ದ ಅಲ್ಲೆಲ್ಲಾ ಹೋಗಿ ಬೀದಿಬೀದಿ ಸುತ್ತುತ್ತಾ ಹುಡುಕಾಡುತ್ತಿದ್ದಾರೆ.

  • ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

    ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.

  • ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ

    ಬೆಂಗಳೂರು: ಯುವಕನಿಂದ ಕಳೆದುಹೋದ ಜಾನಿಗಾಗಿ ಹಗಲು ರಾತ್ರಿ ಹುಡುಕಾಟ

    ಬೆಂಗಳೂರು: ಯಾರಾದರು ಕಾಣೆಯಾದ್ರೆ ಅವರ ಕುಟುಂಬಸ್ಥರು ಆ ವ್ಯಕ್ತಿಯನ್ನು ರಾತ್ರಿ ಹಗಲು ಎನ್ನದೇ ಹುಡುಕೋದನ್ನು ನೋಡಿದ್ದೀರಿ. ಆದ್ರೆ ಇಲ್ಲೊಬ್ಬ ಯುವಕ ಕಳೆದು ಹೋದ ತನ್ನ ನಾಯಿಗೊಸ್ಕರ ಇಡೀ ರಾತ್ರಿ ಹುಡುಕಾಟ ನಡೆಸ್ತಿದ್ದಾರೆ.

    ಹೌದು. ನಗರದ ನಂದಿನಿಲೇಔಟ್ ನಿವಾಸಿ ಮಹೇಶ್ ಅನ್ನೋರು ನಾಲ್ಕು ವರ್ಷಗಳ ಹಿಂದೆ ಎರಡು ನಾಯಿಗಳನ್ನು ತೆಗೆದುಕೊಂಡು ಬಂದು ಅದಕ್ಕೆ ಜಾನಿ, ಮತ್ತು ಶಾಲು ಅಂತಾ ಹೆಸರಿಟ್ಟಿದ್ರು. ಆದ್ರೆ ಇದೀಗ ಜಾನಿ ಕಳೆದ ನಾಲ್ಕು ದಿನಗಳ ಹಿಂದೆ ಕಳೆದು ಹೋಗಿದೆ. ಇದರಿಂದ ಬೇಸತ್ತ ಕುಟುಂಬ ಚಿಂತೆಯಲ್ಲಿ ಮುಳುಗಿದ್ದು, ಮಹೇಶ್ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡೋಕೆ ಹೋಗಿದ್ದಾರೆ.

    ಆದ್ರೆ ಪೊಲೀಸರು ನಾಯಿ ಇದ್ದಕ್ಕೆ ಲೈಸನ್ಸ್ ಬೇಕು ಇಲ್ಲವಾದ್ರೆ ಕೇಸ್ ತೆಗೆದುಕೊಳ್ಳೋಕೆ ಆಗಲ್ಲ ಅಂತೀದ್ದಾರೆ. ಪರಿಣಾಮ ಮಹೇಶ್ ನಾಯಿ ಫೋಟೋ ಹಿಡಿದು, ಇಡೀ ರಾತ್ರಿ ಜಾನಿ ಜಾನಿ ಅಂತಾ ಹುಡುಕಾಟ ನಡೆಸುತ್ತಿದ್ದಾರೆ.