Tag: ಹುಟ್ಟಹಬ್ಬ

  • 30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    30ನೇ ವಸಂತಕ್ಕೆ ಕಾಲಿಟ್ಟ ಚಂದನ್ ಶೆಟ್ಟಿ- ಬರ್ತ್ ಡೇಯಲ್ಲಿ ಬಾರ್ಬಿ ಡಾಲ್

    ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳೊಂದಿಗೆ ತಮ್ಮ ನಿವಾಸದ ಬಳಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚಂದನ್ ಶೆಟ್ಟಿ, ಹುಟ್ಟು ಹಬ್ಬದ ವಿಶೇಷವಾಗಿ ‘ಬ್ಯಾಡ್ ಬಾಯ್’ ಹಾಡಿನ ಟೀಸರ್ ಇಂದು ಸಂಜೆ ಲಹರಿ ಸಂಸ್ಥೆಯ ಅಡಿ ಬಿಡುಗಡೆ ಮಾಡಲಿದ್ದೇವೆ. ‘ರೋಡ್ ಕಿಂಗ್’ ಸಿನಿಮಾಗೆ ಈ ಹಾಡನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ನಾನು ಹಾಡಿರುವ ಹಾಡು ಬಿಡುಗಡೆಯಾಗಲಿದೆ. ಇದು ನನ್ನ ಕಡೆಯಿಂದ ಅಭಿಮಾನಿಗಳಿಗೆ ನೀಡುತ್ತಿರುವ ಉಡುಗೊರೆಯಾಗಿದ್ದು, ನಿಮ್ಮ ಬೆಂಬಲ ಸದಾ ಮುಂದುವರಿಯಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದನ್ನು ಓದಿ: 5 ಹಾಡಿಗೆ ಚಂದನ್ ಶೆಟ್ಟಿಗೆ ಸಿಕ್ತು ಊಹಿಸಲಾಗದಷ್ಟು ಸಂಭಾವನೆ

    ಅಭಿಮಾನಿಗಳೊಂದಿಗೆ ನಟಿ ನಿವೇದಿತಾ ಗೌಡ ಅವರು ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಂದನ್ ಶೆಟ್ಟಿ ಅವರಿಗೆ ಹುಟ್ಟ ಹಬ್ಬದ ಶುಭಾಶಯ ಕೋರಿದರು.

    ಮೂಲತಃ ಹಾಸನದವರಾದ ಚಂದನ್ ಶೆಟ್ಟಿ ಹುಟ್ಟಿದ್ದು, 1989 ರಲ್ಲಿ, 2012 ರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಅಲೆಮಾರಿ ಸಿನಿಮಾಗೆ ಗೀತ ರಚನೆ ಮಾಡಿದ್ದರು. ಕನ್ನಡ ಬಿಗ್ ಬಾಸ್ ನ ಸೀಸನ್ 5ರ ರಿಯಾಲಿಟಿ ಶೋದಲ್ಲಿ ವಿಜೇತರಾಗಿದ್ದರು. ಇವರಿಗೆ ‘ಹಾಳಾಗೋದೆ’ ಆಲ್ಬಂ ಬಹುದೊಡ್ಡ ಬ್ರೇಕ್ ನೀಡಿತ್ತು. ಇದರೊಂದಿಗೆ 2 ಪೇಗ್, ಚಾಕೋಲೇಟ್ ಗರ್ಲ್, ಟಕಿಲಾ, ಫೈಯರ್ ಆಲ್ಬಂ ಗಳನ್ನು ಮಾಡಿದ್ದಾರೆ. ಸದ್ಯ ಸಿನಿಮಾ ಸಂಗೀತ ನಿರ್ದೇಶನದೊಂದಿಗೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ.

  • ಅಂಬಿ ಹುಟ್ಟುಹಬ್ಬಕ್ಕೆ ಉದ್ಯಮಿಯಿಂದ 5 ಕ್ವಿಂಟಾಲ್ ಧಾರವಾಡ ಪೇಡಾ!

    ಅಂಬಿ ಹುಟ್ಟುಹಬ್ಬಕ್ಕೆ ಉದ್ಯಮಿಯಿಂದ 5 ಕ್ವಿಂಟಾಲ್ ಧಾರವಾಡ ಪೇಡಾ!

    – ಸ್ವಾಭಿಮಾನಿ ಸಮಾವೇಶದಲ್ಲಿ ಹಂಚಿಕೆ

    ಮಂಡ್ಯ: ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಅಂಬರೀಶ್ ಕೊನೆಗೂ ಜಯಭೇರಿ ಬಾರಿಸಿದ್ದಾರೆ. ಇದೇ ಕಾರಣಕ್ಕೆ ಇಂದು ಮಂಡ್ಯದಲ್ಲಿ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ.

    ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಹಿನ್ನೆಲೆಯಲ್ಲಿ ಆಯೋಜನೆಗೊಂಡಿರುವ ಸ್ವಾಭಿಮಾನ ಸಮಾವೇಶ ಹಾಗೂ ಅಂಬರೀಶ್ ಜನ್ಮದಿನದ ಅಂಗವಾಗಿ ಐದು ಕ್ವಿಂಟಾಲ್ ಧಾರವಾಡ ಪೇಡಾವನ್ನು ಉದ್ಯಮಿ ನಾರಾಯಣ ಕಲಾಲ್ ರವಾನಿಸಿದ್ದಾರೆ.

    ಬಾಬುಸಿಂಗ್ ಠಾಕೂರ್ ಪೇಡಾ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಪೇಡಾವನ್ನು ವಿಶೇಷ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿದ್ದು, ಈಗಾಗಲೇ ಮಂಡ್ಯ ತಲುಪಿವೆ. ನಾರಾಯಣ ಕಲಾಲ್ ಅಂಬರೀಶ್ ಜೊತೆ ಅತ್ಯಂತ ಸಮೀಪದ ಗೆಳತನವಿರುವ ಕಾರಣ ಅಂಬಿ ಮೇಲಿನ ಪ್ರೀತಿಗಾಗಿ ಈ ಪೇಡಾ ಮಾಡಿಸಿದ್ದು ವಿಶೇಷವಾಗಿದೆ.

    ಮಧ್ಯಾಹ್ನ ಸಮಾವೇಶದಲ್ಲಿ ಪೇಡಾವನ್ನು ಜನತೆಗೆ ಹಂಚಿಕೆ ಮಾಡಲಾಗುತ್ತದೆ. ಇತ್ತ ಮಂಡ್ಯದ ಹನಕೆರೆ ಶಶಿಕುಮಾರ್ ಎಂಬವರಿಂದ 20 ಸಾವಿರ ಲಡ್ಡು ತಯಾರಾಗಿದ್ದು, ಸಮಾವೇಶದಲ್ಲಿ ಭಾಗವಹಿಸುವವರಿಗೆ ಲಡ್ಡು ಹಾಗೂ ಪೇಡಾ ಹಂಚಲಾಗುತ್ತದೆ.

    ಈ ಹಿಂದೆ ಅಂಬರೀಶ್ ಅವರು ಯಶ್, ರಾಧಿಕಾ ದಂಪತಿಯ ಮಗುವಿಗೆ ಕಲಘಟಗಿ ತೊಟ್ಟಿಲು ನೀಡುವ ಸಂಬಂಧ ನಾರಾಯಣ ಕಲಾಲ್ ಅವರಿಗೆ ಫೋನ್ ಮಾಡಿದ್ದರು. ತನ್ನ ಬೇಡಿಕೆಗೆ ಅನುಗುಣವಾಗಿ ತೊಟ್ಟಿಲು ತಯಾರಿಸಿ ಕೊಡುವಂತೆ ಅಂಬಿ ಕಲಾಲ್ ಅವರಲ್ಲಿ ಕೇಳಿಕೊಂಡಿದ್ದರು. ಬಳಿಕ ನಾರಾಯಣ್ ಕಲಾಲ್ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ ತೊಟ್ಟಿಲಿಗೆ ಆರ್ಡರ್ ಮಾಡಿದ್ದರು.