Tag: ಹಿರಿಯ ಅಧಿಕಾರಿಗಳು

  • ಬೇಕಾದ್ರೆ ತೊಗೊಳ್ಳಿ ಬೇಡವಾದ್ರೆ ಬಿಡಿ: ಟಾರ್ಪಲ್ ವಿತರಣೆ ವೇಳೆ ರೇವಣ್ಣ ಸಿಟ್ಟು

    ಬೇಕಾದ್ರೆ ತೊಗೊಳ್ಳಿ ಬೇಡವಾದ್ರೆ ಬಿಡಿ: ಟಾರ್ಪಲ್ ವಿತರಣೆ ವೇಳೆ ರೇವಣ್ಣ ಸಿಟ್ಟು

    ಹಾಸನ: ಅಲ್ಲಿ ಆ ನನ್ ಮಕ್ಳು ದುಡ್ಡು ಹೊಡ್ಕೊಂಡಿರ್ತಾರೆ ಎಂದು ಮಾಜಿ ಸಚಿವ ರೇವಣ್ಣ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೆಕೋಟೆಯಲ್ಲಿ ರೇವಣ್ಣ ಅವರು ಸಹಾಯಧನದಲ್ಲಿ ರೈತರಿಗೆ ಟಾರ್ಪಲ್ ವಿತರಣೆ ಮಾಡುತ್ತಿದ್ದರು. ಈ ವೇಳೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ರೇವಣ್ಣ ಅವರು ಹಿರಿಯ ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದಿದ್ದಾರೆ.

    ರೇವಣ್ಣ ಅವರು ಟಾರ್ಪಲ್ ವಿತರಿಸುತ್ತಿದ್ದ ವೇಳೆ ರೈತರೊಬ್ಬರು, ಸರ್ ಹೊರಗಡೆ 1,050 ರೂ. ಸಿಗುತ್ತೆ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೇವಣ್ಣ ಅವರು ಏಯ್ ಬೇಕಾದ್ರೆ ತಗೊಳ್ಳಿ ಬೇಡವಾದ್ರೆ ಬಿಡಿ ಎಂದು ಗರಂ ಆಗಿದ್ದಾರೆ.

    ಬಳಿಕ ಅಲ್ಲಿ ಆ ನನ್ ಮಕ್ಕಳು ದುಡ್ಡನ್ನು ಹೊಡೆದುಕೊಂಡಿರುತ್ತಾರೆ. ಹಿರಿಯ ಅಧಿಕಾರಿಗಳು ಅವರಲ್ಲ, ಅವರು ಹೊಡ್ಕೊಂದು ನಿಮ್ಮ ಮೇಲೆ ಹಾಕ್ತಾರೆ ಅಷ್ಟೇ. ಇದೇನು ನನಗೆ ಗೊತ್ತಿಲ್ಲದಿರೋ ಬೇಳೆ ಕಾಳಲ್ಲ. ಕೆಳ ಹಂತದ ಅಧಿಕಾರಿಗಳು ಏನೂ ಮಾಡಲ್ಲ ಎಲ್ಲಾ ಮೇಲಾಧಿಕಾರಿಗಳ ಕೆಲಸ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ಹಂಗಾಮಿ ಸಿಎಂ ಹೆಚ್‍ಡಿಕೆಯಿಂದ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಚಹಾಕೂಟ

    ಹಂಗಾಮಿ ಸಿಎಂ ಹೆಚ್‍ಡಿಕೆಯಿಂದ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಚಹಾಕೂಟ

    ಬೆಂಗಳೂರು: ಹಂಗಾಮಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಚಹಾಕೂಟ ಏರ್ಪಡಿಸಿ ಕಳೆದ 14 ತಿಂಗಳ ಆಡಳಿತಾವಧಿಯಲ್ಲಿ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

    ತಮ್ಮ ಅಧಿಕಾರಾವಧಿಯಲ್ಲಿ ಎರಡು ಅಯವ್ಯಯಗಳ ಮೂಲಕ ರೂಪಿಸಿದ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಅಧಿಕಾರಿಗಳು ಬಹಳ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಏನೇ ಇದ್ದರೂ ನಿರ್ಲಿಪ್ತರಾಗಿ ಜನಹಿತಕ್ಕಾಗಿ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಅಧಿಕಾರಿಗಳ ಪರವಾಗಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಅವರು, ಕಳೆದ 14 ತಿಂಗಳ ಕಾರ್ಯ ನಿರ್ವಹಣೆಯ ಅವಧಿಯಲ್ಲಿ ಮುಖ್ಯಮಂತ್ರಿಯವರು ಅಧಿಕಾರಿಗಳನ್ನು ಸಹೋದರ ಭಾವದಿಂದ ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದರು. ಈ ಚಹಾಕೂಟದಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಹಾಗೂ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.