Tag: ಹಿಟ್‌ ಆಂಡ್‌ ರನ್‌ ಕೇಸ್‌

  • ಮುಂಬೈನಲ್ಲಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಮರ್ಸಿಡಿಸ್; ಬೈಕ್ ಸವಾರ ಸಾವು

    ಮುಂಬೈನಲ್ಲಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಮರ್ಸಿಡಿಸ್; ಬೈಕ್ ಸವಾರ ಸಾವು

    ಮುಂಬೈ: ವೇಗವಾಗಿ ಬಂದು ಮರ್ಸಿಡಿಸ್ ಬೆಂಜ್ (Mercedes Benz) ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮುಂಬೈನ (Mumbai) ಥಾಣೆ (Thane) ಬಳಿ ನಡೆದಿದೆ.

    ಮೃತ ಯುವಕನನ್ನು 21 ವರ್ಷದ ದರ್ಶನ್ ಹೆಗ್ಡೆ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ದಾವಣಗೆರೆ | ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಯುವತಿಯರು

    ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಸಾಲ್ವಿ ಮಾತನಾಡಿ, ರಾತ್ರಿ 1:50ರ ಸುಮಾರಿಗೆ ದರ್ಶನ್ ಹೆಗ್ಡೆ ನಿತಿನ್ ಕಂಪನಿ ಜಂಕ್ಷನ್ ಪ್ರದೇಶವನ್ನು ದಾಟುತ್ತಿದ್ದಾಗ ಮರ್ಸಿಡಿಸ್ ಬೆಂಜ್ ಕಾರೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಬಳಿಕ ಅಲ್ಲಿಂದ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರ ಪರಿಶೀಲನೆಯ ನಂತರ ಕಾರು ಪಾರ್ಕಿಂಗ್ ಸ್ಥಳವೊಂದರಲ್ಲಿ ಸಿಕ್ಕಿದೆ. ಸದ್ಯ ನೌಪಾಡಾ (Naupada) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

    ಅಪಘಾತ ಸಂಭವಿಸಿದ ಪ್ರದೇಶದಲ್ಲಿನ ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಯ ಗುರುತು ಪತ್ತೆಗಾಗಿ ಆರ್‌ಟಿಒ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

    ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ರಾತ್ರಿ 2 ಗಂಟೆ ಸುಮಾರಿಗೆ ಅಪಘಾತದ ಸದ್ದು ಕೇಳಿಸಿದ್ದು, ಬೈಕ್‌ಗೆ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದಿದೆ. ತಕ್ಷಣ ನಾನು ಬೈಕ್ ಸವಾರನನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ದಾಖಲಿಸಿದ 15 ನಿಮಿಷಗಳ ಬಳಿಕ ಆತ ಸಾವನ್ನಪ್ಪಿದ. ಇನ್ನೂ ಡಿಕ್ಕಿ ಹೊಡೆದ ಮರ್ಸಿಡಿಸ್ ಕಾರು ಒಂದು ಕ್ಷಣವೂ ನಿಲ್ಲಿಸದೇ ಅಲ್ಲಿಂದ ವೇಗವಾಗಿ ಹೊರಟಿತು.

    ಮರ್ಸಿಡಿಸ್ ಕಾರನ್ನು ಥಾರ್ ಎಸ್‌ಯುವಿ ಕಾರೊಂದು ಹಿಂಬಾಲಿಸಿಕೊಂಡು ಬರುತ್ತಿತ್ತು. ಅಪಘಾತ ನಡೆದ ಬಳಿಕ ಎರಡು ವಾಹನಗಳು ಮುಂಬೈ ಕಡೆಗೆ ತೆರಳಿದವು ಎಂದು ತಿಳಿಸಿದರು.ಇದನ್ನೂ ಓದಿ: ಮೊದಲ ಹಂತದ ಶೂಟಿಂಗ್ ಮುಗಿಸಿದ ಮಂಸೋರೆ

  • ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನ

    ಬೆಂಗಳೂರು ಹಿಟ್‌ ಆಂಡ್‌ ರನ್‌ ಕೇಸ್‌ – ಪರಾರಿಯಾಗಿದ್ದ ಟೆಕ್ಕಿ ಬಂಧನ

    ಬೆಂಗಳೂರು: ಮೇಡಹಳ್ಳಿ ಫ್ಲೈ ಓವರ್ ಬಳಿ ಹಿಟ್ ಅಂಡ್ ರನ್ (Hit and Run) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಟೆಕ್ಕಿಯನ್ನು (Techie) ಬಂಧಿಸಲಾಗಿದೆ.

    ಹೊಸಕೋಟೆಯ ಸಂತೋಷ್ ಬಂಧಿತ ಆರೋಪಿ. ಆರೋಪಿ ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಮೊಬೈಲ್‌ ನಂಬರ್‌ ಆಧಾರದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಸಂಚಾರಿ ಪೊಲೀಸರು (KR Puram Traffic Police)  ಬಂಧಿಸಿದ್ದಾರೆ. ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

    ಏನಿದು ಪ್ರಕರಣ?
    ಶುಕ್ರವಾರ ರಾತ್ರಿ ವೇಗವಾಗಿ ಬಂದ ಕಾರೊಂದು ಎದುರು ಬಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಪಘಾತದ ಭೀಕರತೆ ಎಷ್ಟಿತ್ತು ಅಂದರೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಜಖಂ ಆಗಿದ್ದು ಆಟೋ ರಿಕ್ಷಾದಲ್ಲಿದ್ದ ಹಸೀನಾ ಹಾಗೂ ಸುಮಯ್ಯ ಸ್ಥಳದಲ್ಲಿ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

    ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರಂ ಸಂಚಾರಿ ಪೊಲೀಸರು ಮೃತರನ್ನು ಹಾಗೂ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಹಿಟ್ ಮಾಡಿ ಇಬ್ಬರನ್ನ ಬಲಿ ಪಡೆದು ಪರಾರಿಯಾಗಿದ್ದ ಕಾರನ್ನು ಪತ್ತೆ ಮಾಡಲು ಆರಂಭಿಸಿದ್ದರು.

    ಕಾರು ಹೊಸಕೋಟೆ ಮಾರ್ಗವಾಗಿ ತೆರಳಿದ್ದು, ಟೋಲ್ ಬಳಿ‌ ಸಿಸಿಟಿವಿ ಚೆಕ್ ಮಾಡಿದ್ದರು. ಆ ವೇಳೆ ಮುಂದುಗಡೆ ಹೆಡ್‌ಲೈಟ್‌ ಜಾಗದಲ್ಲಿ ಸ್ವಲ್ಪ ಜಖಂಗೊಂಡಿದ್ದ ಆಲ್ಟೋ ಕಾರು ಪಾಸ್‌ ಆಗಿತ್ತು. ಈ ಕಾರಿನ ಚಾಲಕನೇ ಕೃತ್ಯ ಎಸಗಿದ್ದು ಎನ್ನುವುದು ದೃಢಪಟ್ಟಿತ್ತು.

    ಟೋಲ್ ಫೀಸ್ ಕಟ್ಟಿದ್ದ ವೇಳೆ ಚಾಲಕನ ಮೊಬೈಲ್ ನಂಬರ್ ಸಿಕ್ಕಿದೆ. ನಂಬರ್ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು ಹೊಸಕೋಟೆಯ ಮನೆಯಲ್ಲೇ ಇದ್ದ ಕಾರು ಚಾಲಕನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k