Tag: ಹಿಂದೂ ಮಹಾಸಾಗರ

  • ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಸಮುದ್ರದಲ್ಲಿ 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸಾಧನೆ

    ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಸಮುದ್ರದಲ್ಲಿ 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸಾಧನೆ

    ಹುಬ್ಬಳ್ಳಿ: ಹಿಂದೂ ಮಹಾಸಾಗರ (Indian Ocean) ಹಾಗೂ ಬಂಗಾಳಕೊಲ್ಲಿಯಲ್ಲಿ (Bay of Bengal) 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ (Hubballi) ಗ್ರಾಮೀಣ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರು ಶ್ರೀಲಂಕಾದ ರಾಮಸೇತುಯಿಂದ ಭಾರತದ ಧನುಷ್ ಕೋಡಿವರೆಗೆ ಸ್ವಿಮ್ಮಿಂಗ್ ರಿಲೇ ಮಾಡಿದ್ದಾರೆ.

    ಭೀಕರ ಸಮುದ್ರದಲೆಗಳನ್ನು ಲೆಕ್ಕಿಸಿದೇ ಕೇವಲ 8 ಗಂಟೆ 30 ನಿಮಿಷದಲ್ಲಿ 28 ಕಿ.ಮೀ ಈಜಿದ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣ ಮತ್ತು ಅವರ 8 ಜನರ ತಂಡ ಈ ಸಾಧನೆ ಮಾಡಿದೆ. ಉತ್ತರಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಳ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು, ಹುಬ್ಬಳ್ಳಿ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿನಿ ಅಮನ ಶಾನ್‌ಭಾಗ್ ಈ ಸಾಧನೆ ಮಾಡಿದ್ದಾರೆ. ಫಿಟ್ ಇಂಡಿಯಾ ಮತ್ತು ಭಾರತ ಸ್ವಿಮ್ಮಿಂಗ್ ಫೆಡರೇಷನ್ ನೇತೃತ್ವದಲ್ಲಿ ಸ್ವಿಮ್ಮಿಂಗ್ ರಿಲೇ ನಡೆದಿತ್ತು. ಇದನ್ನೂ ಓದಿ: ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಇನ್ನೂ ಜೂನ್ ತಿಂಗಳಲ್ಲಿ ಈ ತಂಡವು ಅತ್ಯಂತ ಅಪಾಯಕಾರಿಯಾಗಿರುವ ಇಂಗ್ಲಿಷ್ ಕಾಲುವೆಯಲ್ಲಿ ಈಜಲು ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದಲ್ಲಿರುವ 36 ಕಿ.ಮೀ ಇಂಗ್ಲಿಷ್ ಕಾಲುವೆಯಲ್ಲಿ ಈಜಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿರುವ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರ ಸಾಧನೆಯು ಎಲ್ಲರ ಮೆಚ್ಚುಗೆಗಳಿಸಿದೆ.

  • ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ

    ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ

    ಕಾರವಾರ: ಹಿಂದೂ ಮಹಾಸಾಗರದಲ್ಲಿ ಚೀನಾ ದೇಶವು ತನ್ನ ಪ್ರಾಭಲ್ಯ ಮೆರೆಯಲು ಸಜ್ಜಾಗಿರುವ ಬೆನ್ನಲ್ಲೇ ಭಾರತ (India) ಹೊಸ ಹೆಜ್ಜೆಯನ್ನಿಟ್ಟಿದೆ. 9 ಮಿತ್ರ ರಾಷ್ಟ್ರಗಳನ್ನು ಸೇರಿಸಿಕೊಂಡು ತನ್ನ ನಾಯಕತ್ವದಲ್ಲಿ ʻಭದ್ರತೆ ಮತ್ತು ಅಭಿವೃದ್ಧಿ ಎಲ್ಲಾ ವಲಯಕ್ಕೆʼ ಎಂಬ ಧ್ಯೇಯ ವಾಕ್ಯದಲ್ಲಿ ʻಒಂದು ಓಷನ್‌ ಒಂದು ಮಿಷನ್ʼ (One Ocean One Mission) ನಡಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಇಂದಿನಿಂದ ಕಾರ್ಯಾಚರಣೆಗಿಳಿದಿದೆ.

    ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಹಿಂದೂ ಮಹಾಸಾಗರ ವಲಯ ರಕ್ಷಣಾ ಕಾರ್ಯಾಚರಣೆ ನಡೆಸುವ ಭಾರತದ ಮಹತ್ವದ ಹೊಸ ಹೆಜ್ಜೆಗೆ ರಾಷ್ಟ್ರೀಯ ಸಾಗರ ದಿನವಾದ ಇಂದು ಚಾಲನೆ ದೊರೆತಿದೆ. ಹಿಂದೂ ಮಹಾಸಾಗರ (Indian Ocean) ವ್ಯಾಪ್ತಿಯಲ್ಲಿ ಚೀನಾ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಬೆನ್ನಲ್ಲೇ ಭಾರತ ತನ್ನ 9 ಮಿತ್ರ ರಾಷ್ಟ್ರಗಳ ಒಡಗೂಡಿ ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    ರಾಷ್ಟ್ರೀಯ ಸಾಗರ ದಿನವಾದ ಇಂದು ಭಾರತೀಯ ನೌಕಾಪಡೆಯ ಈ ಪ್ರಯತ್ನಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕಾರವಾರದಲ್ಲಿ ಮಧ್ಯಾಹ್ನ ಚಾಲನೆ ನೀಡಿದರು. ಹಿಂದೂ ಮಹಾಸಾಗರ ವಲಯ (IOS) ವ್ಯಾಪ್ತಿಗೆ ಐಒಎಸ್‌ ಸಾಗರ ಹೆಸರಿನ ಹಡಗೊಂದನ್ನು ನಿಯೋಜನೆ ಮಾಡಿದ್ದು, ಹಡಗು ಕೊಚ್ಚಿಯಲ್ಲಿ ತನ್ನ ಸಮುದ್ರ ಪರಿಕ್ರಮ ಹಾಗೂ ಬಂದರು ಪರಿಶೀಲನೆ ನಡೆಸಿಕೊಂಡು ಕಾರವಾರಕ್ಕೆ ಆಗಮಿಸಿದೆ. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ

    ಕಾರವಾರದಿಂದ ಈ ಹಡಗು ಹಿಂದೂ ಮಹಾಸಾಗರ ವಲಯದಲ್ಲಿ ಮೇ ಮೊದಲ ವಾರದವರೆಗೂ ನಿಯೋಜನೆಗೊಳ್ಳಲಿದೆ. ನೌಕೆಯು ಭಾರತ ಪಶ್ಚಿಮ ಕರಾವಳಿಯ ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದೆ. ಈ ನೌಕೆಯಲ್ಲಿ ಕೀನ್ಯಾ, ಮಡ್ಗಾಸ್ಕರ್‌, ಮಾಲ್ಡೀವ್ಸ್‌, ಮಾರಿಶಸ್‌, ಮೊಝಾಂಬಿಕ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಕೊಮೊರೋಸ್‌, ಸೇಂಚ್‌ಹೆಲ್ಸ್‌ ಸೇರಿ 9 ದೇಶಗಳ 44 ಸಿಬ್ಬಂದಿ ಇದ್ದು, ಅವರಿಗೆ ಸಾಗರ, ರಕ್ಷಣೆ, ಗಸ್ತು, ಹಡಗುಗಳ ಪರಿಶೀಲನೆ, ಅಕ್ರಮಗಳ ಜಪ್ತು, ಅಗ್ನಿ ಶಮನ, ಸಾಗರ ಸಂವಹನ, ಸೀಮೆನ್‌ಶಿಪ್‌, ಸಾಗರ ಮಧ್ಯದ ಸವಾಲುಗಳನ್ನು ಪರಿಶೀಲಿಸುವುದು ಸೇರಿ ವಿವಿಧ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತಿದೆ.

    ʻಒನ್‌ ಓಶನ್‌ ಒನ್‌ ಮಿಷನ್‌ʼ ಎಂಬ ಉಪಕ್ರಮದಡಿ ಭಾರತ ಈ ಹೆಜ್ಜೆ ಇಟ್ಟಿದ್ದು, ಹಿಂದೂ ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ ಹಿಂದೂ ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ ಹೊರಟಿದೆ. ಇದನ್ನೂ ಓದಿ: ಏ.15 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – 9 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಬಂದ್‌

    ಈಗಾಗಲೇ ಐಎನ್‌ಎಸ್‌ ಸುನೈನಾ ಯುದ್ಧ ಹಡಗಿನಲ್ಲಿ ಭಾರತ ಸೇರಿದಂತೆ ಒಟ್ಟು 10 ರಾಷ್ಟ್ರದ 44 ಸಿಬ್ಬಂದಿಗಳಿದ್ದು ಹಿಂದೂ ಮಹಾಸಾಗರದ ಮೂಲಕ ಆಪ್ರಿಕಾ ದೇಶಕ್ಕೆ ಈ ಹಡಗು ತೆರಳಲಿದೆ.

  • ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋಣ್‌ ದಾಳಿ

    ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋಣ್‌ ದಾಳಿ

    ನವದೆಹಲಿ: ಹಿಂದೂ ಮಹಾಸಾಗರದಲ್ಲಿ (Indian Ocean) ಇಸ್ರೇಲ್-ಸಂಯೋಜಿತ ವ್ಯಾಪಾರಿ ಹಡಗಿನ ಮೇಲೆ ಡ್ರೋಣ್‌ ಬಳಸಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಇದು ಜಲಮೂಲದ ಮೂಲಕ ಹಾದುಹೋಗುವ ಎಲ್ಲಾ ವಾಣಿಜ್ಯ ಹಡಗುಗಳಿಗೆ ಎಚ್ಚರಿಕೆ ನೀಡಲಾಗಿದೆ.

    ಭಾರತದ ವೆರ್ವಾಲ್‌ನ ನೈಋತ್ಯ ದಿಕ್ಕಿನಲ್ಲಿ ಸುಮಾರು 200 ಕಿಮೀ ದೂರದಲ್ಲಿ ಮಾನವರಹಿತ ವೈಮಾನಿಕ ವಾಹನ ಬಳಸಿ ವ್ಯಾಪಾರಿ ಹಡಗನ್ನು ಗುರಿಯಾಗಿರಿಸಿಕೊಂಡಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಆಂಬ್ರೆ ಹೇಳಿದ್ದಾರೆ. ಇದನ್ನೂ ಓದಿ: ಬಜರಂಗ್‌ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್‌

    ದಾಳಿಯಿಂದ ಹಡಗಿಗೆ ಹಾನಿಯಾಗಿದೆ. ಹಡಗು ಇಸ್ರೇಲ್-ಸಂಯೋಜಿತವಾಗಿತ್ತು. ಭಾರತದ ಕರಾವಳಿಯಲ್ಲಿ ಹಕ್ಕು ಪಡೆಯದ ದಾಳಿಯು ಹಡಗಿನಲ್ಲಿ ಬೆಂಕಿಯನ್ನು ಉಂಟುಮಾಡಿತು. ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.

    ದಾಳಿಗೊಳಗಾದ ನೌಕೆಯನ್ನು ಎಂವಿ ಕೆಮ್ ಪ್ಲುಟೊ ಎಂದು ಗುರುತಿಸಲಾಗಿದೆ. ಇದು ಕಚ್ಚಾ ತೈಲವನ್ನು ಹೊತ್ತೊಯ್ದು ಸೌದಿ ಅರೇಬಿಯಾದ ಬಂದರಿನಿಂದ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ – ದೇಹವನ್ನು ಪಾಕ್ ಕಡೆಗೆ ಎಳೆದೊಯ್ದ ಸಹಚರರು

    20 ಭಾರತೀಯರನ್ನು ಒಳಗೊಂಡಂತೆ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ ಸ್ಫೋಟಗೊಂಡ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ ಶಿಪ್ ವಿಕ್ರಮ್ ನೆರವು ನೀಡಲು ಹಡಗಿನ ಕಡೆಗೆ ಹೋಗುತ್ತಿದೆ ಎಂದು ಹೇಳಿದ್ದಾರೆ.

  • ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಇಸ್ಲಾಮಾಬಾದ್‌: ಚೀನಾದ ಯುದ್ಧನೌಕೆಗಳು (Chinese Warships), ಜಲಾಂತರ್ಗಾಮಿಗಳು ಮತ್ತು ಸೇನಾ ಬೆಂಬಲ ವ್ಯವಸ್ಥೆಯು ಪಾಕಿಸ್ತಾನದ ಕರಾಚಿ ಬಂದರಿನಲ್ಲಿ (Karachi Port) ಬೀಡಿಬಿಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

    ಮಿಲಿಟರಿ ತರಬೇತಿ ನೆಪದಲ್ಲಿ ಚೀನಾ ತನ್ನ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳನ್ನು ಪಾಕಿಸ್ತಾನದ ಕರಾಚಿ ಬಂದರಲ್ಲಿ ಬೀಡುಬಿಟ್ಟಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಂಬಂಧಿಸಿದ ಸೆಟಲೈಟ್‌ (ಉಪಗ್ರಹ) ಆಧಾರಿತ ಚಿತ್ರಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ಸದ್ಯ ಭಾರತ-ಚೀನಾ (India-China) ನಡುವೆ ಅರುಣಾಚಲ ಪ್ರದೇಶದ ಗಡಿವಿವಾದದ ನಡುವೆ ಕರಾಚಿಯಲ್ಲಿ ಚೀನಾದ ಯುದ್ಧನೌಕೆಗಳು ಕಂಡುಬಂದಿರುವುದು ಅನುಮಾನ ಮೂಡಿಸಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

    ಸೀ ಗಾರ್ಡಿಯನ್ -3 (Sea Guardian-3) ಸೇನಾ ಎಕ್ಸರ್‌ಸೈಸ್‌, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಡಲ ಅಸ್ತಿತ್ವವನ್ನು ಗಮನಾರ್ಹವಾಗಿ ವಿಸ್ತರಿಸಿದ ಸಮಯದಲ್ಲಿ ಬಂದಿವೆ. ಇದು ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿ ಪ್ರಮುಖ ನೆಲೆಯ ನಿರ್ಮಾಣವನ್ನೂ ಒಳಗೊಂಡಿದೆ. ಜೊತೆಗೆ ಪಾಕಿಸ್ತಾನ ನೌಕಾಪಡೆಗೆ ಇತ್ತೀಚೆಗೆ 4 ಟೈಪ್-054 A/P ಫ್ರಿಗೇಟ್‌ಗಳನ್ನು ಪ್ರಾದೇಶಿಕ ನೌಕಾಪಡೆಗಳಿಗೆ ಮಾರಾಟ ಮಾಡಿದ್ದೂ ಸಹ ಇದರಲ್ಲೇ ಸೇರಿದೆ.

    ಕಳೆದ ವರ್ಷದ ಹಿಂದೂ ಮಹಾಸಾಗರದಲ್ಲಿ ಹಲವಾರು ಚೀನಿ ಕಣ್ಗಾವಲು ಮತ್ತು ಸಾಗರ ಸಮೀಕ್ಷೆ ಹಡಗುಗಳು ಪತ್ತೆಯಾಗಿದ್ದವು. ಈ ತಿಂಗಳ ಆರಂಭದಲ್ಲಿ, ಚೀನಾದ ಸಾಗರ ಸಂಶೋಧನಾ ಹಡಗು, ಶಿಯಾನ್ 6 ಕೊಲಂಬೊದಲ್ಲಿ ಬಂದಿಳಿದಿತ್ತು. ಆದರೀಗ ವ್ಯಾಪಕವಾದ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನ ಸಕ್ರಿಯಗೊಳಿಸಲು ಬಂಗಾಳ ಕೊಲ್ಲಿ ಸೇರಿದಂತೆ ಹಿಂದೂ ಮಹಾಸಾಗರವನ್ನೂ ಚೀನಾ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸೇನೆ ಗಡಿಯಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಮೋದಿ

    ಕರಾಚಿಯಲ್ಲಿ ಬೀಡು ಬಿಟ್ಟಿರುವ ಯುದ್ಧ ಸಾಧನಗಳ ಪೈಕಿ ಚೀನಾದ ಟೈಪ್-039 ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಕೂಡ ಇದೆ. ಈ ಜಲಾಂತರ್ಗಾಮಿ ನೌಕೆಯು ನೌಕಾ ರಹಸ್ಯಗಳನ್ನು ನಿಕಟವಾಗಿ ಊಹಿಸಬಲ್ಲದು. ಅರಬ್ಬಿ ಸಮುದ್ರದಲ್ಲಿ ಹಡಗುಗಳ ಉಪಸ್ಥಿತಿಯು, ತಮ್ಮ ಹೋಮ್‌ಪೋರ್ಟ್‌ಗಳಿಂದ ಹಲವಾರು ಸಾವಿರ ಕಿಮೀ ದೂರದಲ್ಲಿರುವ ನೌಕಾ ಆಸ್ತಿಗಳನ್ನು ನಿಯಂತ್ರಿಸಲು, ಬೀಜಿಂಗ್‌ನ ವಿಶ್ವಾಸ ವೃದ್ಧಿಸಲು ಈ ಜಲಾಂತರ್ಗಾಮಿ ಕಾರಣವಾಗಿದೆ. 2013ರಿಂದೀಚೆಗೆ ಚೀನಾ ಸೇನೆಯು 8 ಬಾರಿ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

    2015ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ಸರ್ಕಾರವು 5 ಶತಕೋಟಿ ಡಾಲರ್‌ ಮೌಲ್ಯದ ಒಪ್ಪಂದಕ್ಕೆ ಟೈಪ್‌-039 ಜಲಾಂತರ್ಗಾಮಿ ನೌಕೆಗಳ 8 ರೂಪಾಂತರಗಳನ್ನು ಖರೀದಿಸಲು ಒಪ್ಪಿಕೊಂಡಿತ್ತು. ಸದ್ಯ 4 ಜಲಾಂತರ್ಗಾಮಿ ನೌಕೆಗಳನ್ನು ಕರಾಚಿ ಶಿಪ್‌ಯಾರ್ಡ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ನಿರ್ಮಿಸುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಹೋಟೆಲಿನಲ್ಲಿ‌ ನಾಲ್ವರು ಕಾಮುಕರಿಂದ ಗ್ಯಾಂಗ್‌ರೇಪ್‌ – ಸಹಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ, ಐವರು ಅರೆಸ್ಟ್

  • P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಭಾರತ ರಕ್ಷಣಾ ವಲಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅದರಂತೆ ಶತ್ರು ಸೇನೆಗಳ ವಿರುದ್ಧ ಸಮರ ಸಾರಲು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಕ್ತಿಶಾಲಿ ಅಸ್ತ್ರವೊಂದನ್ನ ಭಾರತೀಯ ನೌಕಾಪಡೆ ನಿಯೋಜಿದೆ. ಇದು ಶತ್ರು ಸೇನೆ ಜಲಾಂತರ್ಗಾಮಿಯಿಂದ ನುಸುಳಿದರೂ ಅಥವಾ ಆಗಸದಲ್ಲಿ ದಾಳಿ ನಡೆಸಿದರೂ ಸಮರ್ಥವಾಗಿ ಎದುರಿಸಿ ದೇಶವನ್ನು ರಕ್ಷಣೆ ಮಾಡಲಿದೆ. ಅದೇ ಹಿಂದೂ ಮಹಾಸಾಗರದ ಕಾವಲುಗಾರ ಬೋಯಿಂಗ್ P-8I ಪೋಸೈಡನ್ (P-8I Poseidon) ವಿಮಾನ. 

    ಹೌದು. ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ (IOR) ಕಣ್ಗಾವಲು ಚಟುವಟಿಕೆಗಳಿಗೆ ನಿಯೋಜನೆ ಮಾಡಿರುವ ಬೋಯಿಂಗ್ P-8I ಪೋಸೈಡನ್ ವಿಮಾನ ಅತ್ಯಂತ ಮಹತ್ವದ್ದಾಗಿದೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾವಲು ಕಾಯುವ ಈ P-8I ತನಗೆ ಸರಿಸಾಟಿಯೇ ಇಲ್ಲವೆಂಬುದನ್ನು ಸಾಬೀತು ಮಾಡಿದೆ. ಆದ್ದರಿಂದಲೇ ಭಾರತೀಯ ನೌಕಾಪಡೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.  ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

    ಇನ್ನೂ ಸ್ಕ್ವಾಡ್ರನ್ 312 ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನ ಕಾಪಾಡುವ ಉದ್ದೇಶ ಹೊಂದಿದೆ. ಭಾರತೀಯ ನೌಕಾ ಶಸ್ತ್ರಾಸ್ತ್ರ ಸೇವೆಯ (INAS) 312 ಕಡಲ ವಿಚಕ್ಷಣಾ ಸ್ಕ್ವಾಡ್ರನ್ ಪ್ರಸ್ತುತ 12 P-8I ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. 

    ಬೋಯಿಂಗ್ P-8 ವಿಮಾನದ ಭಾರತೀಯ ಆವೃತ್ತಿಯನ್ನು P-8I ಎಂದು ಕರೆಯಲಾಗುತ್ತದೆ. ಅಮೆರಿಕದ ನೌಕಾಪಡೆ ಮತ್ತು ಇತರ ಸೇನಾಪಡೆಗಳು ಬಳಸುವ ಆವೃತ್ತಿಯನ್ನು P-8A ಎಂದು ಕರೆಯಲಾಗುತ್ತದೆ. ಭಾರತ ಸೇನೆ ಒಳಗೊಂಡಿರುವ ಈ 12 ವಿಮಾನಗಳಲ್ಲಿ, 8 ವಿಮಾನಗಳು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 312 ಎಂದು ಕರೆಯಲಾಗುವ INS ರಾಜಾಲಿಯಲ್ಲಿರುತ್ತವೆ. ರಾಜಾಲಿ ಏರ್‌ಸ್ಟೇಷನ್‌ ಭಾರತದ ಪೂರ್ವ ಕರಾವಳಿಯಲ್ಲಿ, ತಮಿಳುನಾಡಿನ ಅರಕ್ಕೋಣಮ್‌ನಲ್ಲಿದೆ. ಇನ್ನುಳಿದ 4 ವಿಮಾನಗಳು ಗೋವಾದಲ್ಲಿ ನಿಲುಗಡೆಯಾಗಿರುವ INS (ಭಾರತೀಯ ನೌಕಾಪಡೆಯ ಹಡಗು) ಹನ್ಸಾ ಮೇಲಿದ್ದು, ಇದನ್ನು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 316 ಎನ್ನಲಾಗುತ್ತದೆ. ಈ ವಿಮಾನವನ್ನು ಕಾಂಡಾರ್‌ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 

    ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್‌ ಲೀಡರ್ ಕಣ್ಣಿಗೆ ಬೀಳದಂತೆ ಯಾವುದೇ ಹಡಗಾಗಲಿ, ಸಬ್‌ಮರೀನ್ (ಜಲಾಂತರ್ಗಾಮಿ) ಆಗಲಿ ಹಿಂದೂ ಮಹಾಸಾಗರ ಪ್ರಾಂತ್ಯವನ್ನು ದಾಟಿ ಹೋಗಲು ಸಾಧ್ಯವಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ, P-8I ವಿಮಾನ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸಕ್ರೀಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಗಮನಾರ್ಹವಾದ 44,000 ಹಾರಾಟ ಗಂಟೆಗಳನ್ನು ದಾಖಲಿಸಿದೆ. ಆ ಮೂಲಕ ಇದು ‘ಹಿಂದೂ ಮಹಾಸಾಗರದ ಕಾವಲುಗಾರ’ ಎಂದೇ ಖ್ಯಾತಿ ಗಳಿಸಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ

    P-8I ವಿಮಾನದ ವಿಶೇಷತೆಗಳೇನು?
    ಪಿ-8ಐ ಒಂದು ಸಮರ್ಥ ವಿಮಾನವಾಗಿದ್ದು, ಕಡಿಮೆ ಎತ್ತರದಲ್ಲೂ ಹಾರಾಟ ನಡೆಸಿ ರಕ್ಷಣಾ ಕಾರ್ಯಾಚರಣೆಗಳನ್ನ ನಡೆಸಲಿದೆ. ಇದು 41,000 ಅಡಿಗಳಷ್ಟು ಎತ್ತರದಲ್ಲಿಯೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಕ್ವಿಕ್ ಟ್ರಾನ್ಸಿಟ್ ಕೈಗೊಳ್ಳಲಿದೆ. ಕ್ವಿಕ್ ಟ್ರಾನ್ಸಿಟ್ ಎಂದರೆ, ಪಿ-8ಐ ವಿಮಾನ ಸಾಕಷ್ಟು ದೂರದ ಪ್ರದೇಶಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇದರೊಂದಿಗೆ ಸಬ್‌ಮರೀನ್‌ಗಳು (ಜಲಾಂತರ್ಗಾಮಿ) (Submarine), ನೀರಿನ ಮೇಲೆ ಚಲಿಸುವ ನೌಕೆಗಳನ್ನು ಹುಡುಕುವ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ? 

     

    ಪಿ-8I ವಿಮಾನ ಎರಡು ಇಂಜಿನ್‌ಗಳನ್ನು ಹೊಂದಿದೆ. ಅಂದಾಜು 40 ಮೀಟರ್‌ಗಳಷ್ಟು ಉದ್ದವಿದೆ. ಇದರ ವಿಂಗ್‌ಸ್ಪ್ಯಾನ್‌ (ರೆಕ್ಕೆಗಳು) ಉದ್ದ 37.64 ಮೀಟರ್‌ಗಳಾಗಿದೆ. ಪ್ರತಿಯೊಂದು ಪಿ-8ಐ ವಿಮಾನವೂ 85,000 ಕೆಜಿ ತೂಕ ಹೊಂದಿದ್ದು, 490 ನಾಟ್ (ಪ್ರತಿ ಗಂಟೆಗೆ 789 ಕಿಲೋಮೀಟರ್) ಗರಿಷ್ಠ ವೇಗದಲ್ಲಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. ಇದು 9 ಸಿಬ್ಬಂದಿ  ವಿಮಾನದಲ್ಲಿ ಪ್ರಯಾಣಿಸಬಹುದು.  1,200 ನಾಟಿಕಲ್ ಮೈಲಿ (2,222 ಕಿ.ಮೀ.) ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಿ ಶತ್ರುಗಳನ್ನು ಹಿಮ್ಮೆಟಿಸಲಿದೆ.  ಆ ಮ‌ೂಲಕ ಇದು ಗರಿಷ್ಠ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬಲ್ಲದು. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?

    ಪಿ-8ಐ ವಿಮಾನ ಜಗತ್ತಿನ ಅತ್ಯಾಧುನಿಕ ಆಯುಧಗಳ ವ್ಯವಸ್ಥೆ ಹೊಂದಿದೆ. ಅಂದಾಜು 25 ವರ್ಷಗಳ ಕಾರ್ಯಾಚರಣೆ ಆಯಸ್ಸು ಹೊಂದಿದೆ. ಅಂದ್ರೆ ಇದು ಕಡಲತೀರ ಪ್ರದೇಶದ ಸವಾಲಿನ ವಾತಾವರಣದಲ್ಲೂ 25,000 ಗಂಟೆಗಳ ಹಾರಾಟ ನಡೆಸಲಿದೆ. ಮಂಜುಗಡ್ಡೆಯ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಲಿದ್ದು, ಶೋಧ, ರಕ್ಷಣೆ, ಕಳ್ಳ ಸಾಗಾಣಿಕಾ ವಿರೋಧಿ ಕಾರ್ಯಾಚರಣೆ ಮತ್ತು ಸೇನೆಯ ಇತರ ವಿಭಾಗಗಳಿಗೆ ಬೆಂಬಲ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. 

    ಭಾರತದ ಸಾಗರ ಶಕ್ತಿಯ ಹಿಂದಿನ ತಂತ್ರಜ್ಞಾನ:

    ನೌಕಾಪಡೆಯ ವ್ಯವಹಾರಗಳಲ್ಲಿ ಕ್ರಾಂತಿ ನಡೆಯುತ್ತಿರುವ (ರೆವಲ್ಯೂಷನ್ ಇನ್ ನೇವಲ್ ಅಫೇರ್ಸ್ – RNA) ಈ ಕಾಲದಲ್ಲಿ, ತಂತ್ರಜ್ಞಾನ ಯುದ್ಧ ಸಂಬಂಧಿ ಆಯುಧಗಳ ಹಿಂದಿನ ಚಾಲಕಶಕ್ತಿಯಾಗಿದೆ. ಈ ಆಯಾಮದಲ್ಲಿ, ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಭಾರತದ ಮಹತ್ತರ ಪಾತ್ರ ಮತ್ತು ಹಿಂದೂ ಮಹಾಸಾಗರದ ಪ್ರಾಮುಖ್ಯತೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮುದ್ರದ ಮೂಲಕ ಬರುವ ಅಪಾಯಗಳನ್ನು ಎದುರಿಸುವ ಸಲುವಾಗಿ, ಭಾರತ ಸರ್ಕಾರ ಆಧುನಿಕ ವಿಚಕ್ಷಣೆ ಮತ್ತು ಸೆನ್ಸರ್‌ ವ್ಯವಸ್ಥೆಗಳಿಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಈ ಎಲ್ಲ ಪ್ರಯತ್ನಗಳೂ ಕರಾವಳಿ ವಿಚಕ್ಷಣೆ ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ. 

    P-8I ಹೇಗೆ ಕಾರ್ಯಾಚರಣೆಗೆ ಸನ್ನದ್ಧವಾಗಿದೆ? 

    ಜನವರಿ 2009ರಲ್ಲಿ, ಭಾರತವು ಬೋಯಿಂಗ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಪಿ-8ಐ ಖರೀದಿಸಿತು. ನಂತರ ಇದನ್ನು ಕಡಲ ಗಸ್ತು ವಿಮಾನವಾಗಿ ನಿಯೋಜನೆ ಮಾಡಲಾಯಿತು. ಪಿ-8ಐ ವಿಮಾನ ಹಲವು ರೀತಿಯ ಕಾರ್ಯಾಚರಣೆಗಳಿಗೆ ಪೂರಕವಾಗಿದ್ದು, ಆ್ಯಂಟಿ ಸಬ್‌ಮರೀನ್ ಮತ್ತು ಆ್ಯಂಟಿ ಸರ್ಫೇಸ್ ಯುದ್ಧ ಸಾಮರ್ಥ್ಯ ಹೊಂದಿದೆ. ಅದರೊಡನೆ, ಗುಪ್ತಚರ ಮತ್ತು ಕಣ್ಗಾವಲು (ISR) ಕಾರ್ಯಾಚರಣೆಗಳನ್ನ ನಡೆಸಲಿದೆ. ಭಾರತದ ವಿಶಾಲ ಸಾಗರ ಪ್ರದೇಶಗಳಲ್ಲಿ ಗಸ್ತು ತಿರುಗುತ್ತದೆ. ವಿಮಾನದ ವೇಗ, ನಂಬಿಕಾರ್ಹತೆ, ದೀರ್ಘ ಬಾಳಿಕೆ ಮತ್ತು ಹೊಂದಿಕೊಳ್ಳುವಿಕೆಯ ಕಾರಣದಿಂದ ಇದು ಭಾರತೀಯ ನೌಕಾಪಡೆಯು ಭವಿಷ್ಯದ ಅವಶ್ಯಕತೆಗಳನ್ನೂ ಪೂರೈಸುವ ವಿಶ್ವಾಸ ಗಳಿಸಿದೆ. 

    ವಿಮಾನ ಜಗತ್ತಿನಾದ್ಯಂತ ಬಿಡಿಭಾಗಗಳು ಮತ್ತು ಸೇವಾ ಜಾಲದ ವ್ಯವಸ್ಥೆಯನ್ನ ಹೊಂದಿದೆ. ಅತ್ಯಾಧುನಿಕ ಸೆನ್ಸಾರ್‌ಗಳು ಮತ್ತು ಡಿಸ್‌ಪ್ಲೇ ತಂತ್ರಜ್ಞಾನವನ್ನ ಒಳಗೊಂಡಿರುವ ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ಗಳನ್ನು ಒಳಗೊಂಡಿದೆ. ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ ಎಂದರೆ, ವಿಮಾನವನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳುವ ತಂತ್ರಜ್ಞಾನಗಳು ಮತ್ತು ಬಿಡಿಭಾಗಗಳೊಡನೆ ಸುಲಭವಾಗಿ ಕಾರ್ಯಾಚರಿಸುವಂತೆ ನಿರ್ಮಿಸುವುದಾಗಿದೆ. ಆ ಮೂಲಕ ವಿಮಾನವನ್ನು ಭವಿಷ್ಯದಲ್ಲಿ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತದೆ. 

    ಭಾರತೀಯ ನೌಕಾಪಡೆಯು ಪಿ-8I ವಿಮಾನವನ್ನು ಸಾಗರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. 2020 ಮತ್ತು 2021ರಲ್ಲಿ ಚೀನಾದೊಡನೆ ಗಡಿ ಉದ್ವಿಗ್ನತೆ ತಲೆದೋರಿದ್ದಾಗ ಇದನ್ನು ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಚೀನೀ ಪಡೆಗಳ ಚಲನವಲನಗಳನ್ನು ಗಮನಿಸಲು ಬಳಸಲಾಗಿತ್ತು.

    ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಳುಗಿದ ಚೀನಾ ಹಡಗು – ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

    ಮುಳುಗಿದ ಚೀನಾ ಹಡಗು – ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

    ನವದೆಹಲಿ: ಹಿಂದೂ ಮಹಾಸಾಗರದ (Indian Ocean) ಮಧ್ಯ ಪ್ರದೇಶದಲ್ಲಿ ಮುಳುಗಿದ ಚೀನಾದ (China) ಮೀನುಗಾರಿಕಾ ಹಡಗಿನ ಶೋಧ ಕಾರ್ಯಕ್ಕೆ ಭಾರತೀಯ ನೌಕಾಪಡೆ (Indian Navy) ನೆರವು ನೀಡಿದೆ.

    ಹಡಗಿನಲ್ಲಿ 17 ಚೀನೀ ಸಿಬ್ಬಂದಿ, 17 ಇಂಡೋನೇಷಿಯನ್ನರು ಮತ್ತು ಐದು ಫಿಲಿಪೈನ್ಸ್ ನಾಗರಿಕರು ಸೇರಿದಂತೆ 39 ಜನರು ಇದ್ದರು ಎಂದು ವರದಿಯಾಗಿದೆ. ಮಂಗಳವಾರದಿಂದ ಹಡಗಿನ ರಕ್ಷಣಾ ಕಾರ್ಯಾಚರಣೆಗಾಗಿ ಚೀನಾ-ಭಾರತ ಸೇರಿದಂತೆ ಹಲವಾರು ದೇಶಗಳ ಸಹಾಯವನ್ನು ಕೋರಿತ್ತು. ಚೀನಾದ ನೌಕಾಪಡೆಯ ಮನವಿಗೆ ಭಾರತೀಯ ನೌಕಾಪಡೆ ಸ್ಪಂದಿಸಿದ್ದು, ಬುಧವಾರದಿಂದ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದನ್ನೂ ಓದಿ: ಕೇರಳ ಸ್ಟೋರಿ ನಿಷೇಧ – ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ತಡೆ

    ಸೇನೆಯ ವಿಮಾನವು ಪ್ರತಿಕೂಲ ಹವಾಮಾನದ ಹೊರತಾಗಿಯೂ ವ್ಯಾಪಕ ಹುಡುಕಾಟದಲ್ಲಿ ತೊಡಗಿದೆ. ಮುಳುಗಿದ ಹಡಗಿಗೆ ಸೇರಿದ ಬಹು ವಸ್ತುಗಳನ್ನು ಪತ್ತೆ ಮಾಡಿದೆ. ಅಲ್ಲದೆ ಹಡಗಿನಲ್ಲಿ ಎರಡು ಶವಗಳು ಪತ್ತೆಯಾಗಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅವರು ಯಾವ ದೇಶದ ಪ್ರಜೆಗಳು ಎಂದು ತಿಳಿಸಲಾಗಿಲ್ಲ. ಇನ್ನುಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

  • ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    – ರಕ್ಷಣೆಗೆ ಕ್ಸಿ ಜಿನ್‌ಪಿಂಗ್ ಆದೇಶ

    ಬೀಜಿಂಗ್: ಮೀನುಗಾರಿಕೆಗೆ ತೆರಳಿದ್ದ ಚೀನಾದ (China) ದೋಣಿಯೊಂದು (Fishing Boat) ಹಿಂದೂ ಮಹಾಸಾಗರದಲ್ಲಿ (Indian Ocean) ಮುಳುಗಡೆಯಾಗಿದ್ದು, ಅದರಲ್ಲಿದ್ದ 39 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಚೀನಾದ 17 ಪ್ರಜೆಗಳು, ಇಂಡೋನೇಷ್ಯಾದ 17 ಜನ ಹಾಗೂ ಫಿಲಿಪೈನ್ಸ್‌ನ ಐವರು ಇದ್ದರು ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ತಿಳಿಸಿದೆ.

    ಇದೀಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಹಾಗೂ ಪ್ರಧಾನಿ ಲಿ ಕಿಯಾಂಗ್ (Li Qiang)ವಿದೇಶಗಳಲ್ಲಿರುವ ಚೀನಾದ ರಾಜತಾಂತ್ರಿಕರಿಗೆ ಹಾಗೂ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರನ್ನು ಹುಡುಕಲು ಹಾಗೂ ರಕ್ಷಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಡಾನ್‌ನಿಂದ ಉದ್ಯಮಿ ಮೇಲೆ ಹಲ್ಲೆ

    ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಿಂದ ರಕ್ಷಣಾ ತಂಡಗಳು ಹುಡುಕಾಟಕ್ಕಾಗಿ ಘಟನಾ ಸ್ಥಳಕ್ಕೆ ತೆರಳಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಚೀನಾ 2 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

  • ಹಿಂದೂ ಮಹಾಸಾಗರದಲ್ಲಿ ಮುಳುಗಿದ ವಲಸಿಗರ ದೋಣಿ – 34 ಮಂದಿ ಸಾವು

    ಹಿಂದೂ ಮಹಾಸಾಗರದಲ್ಲಿ ಮುಳುಗಿದ ವಲಸಿಗರ ದೋಣಿ – 34 ಮಂದಿ ಸಾವು

    ಮಡಗಾಸ್ಕರ್: ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಹಿಂದೂ ಮಹಾಸಾಗರದಲ್ಲಿ ಮುಳುಗಿ 34 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಈ ದೋಣಿ ಮಯೊಟ್ಟೆ ದ್ವೀಪದ ಕಡೆಗೆ ಸಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೋಣಿಯಲ್ಲಿ ಒಟ್ಟು 58 ಮಂದಿ ವಲಸಿಗರು ಪ್ರಯಾಣಿಸುತ್ತಿದ್ದರು. ದೋಣಿ ರಹಸ್ಯವಾಗಿ ತೆರಳುತ್ತಿತ್ತು. ಮಡಗಾಸ್ಕರ್‌ನ ವಾಯುವ್ಯ ಕರಾವಳಿಯಲ್ಲಿ ಶನಿವಾರ ರಾತ್ರಿ ದೋಣಿ ಮುಳುಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅವಘಡಕ್ಕೆ ಸಿಲುಕಿ ಮುಳುಗುತ್ತಿದ್ದ 24 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಮಕ್ಕಳು ಸೇರಿ 34 ಮೃತದೇಹಗಳನ್ನು ಹೊರತೆಗೆಯಲಾಗಿದೆ.

    ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಗರ್ಭಿಣಿ ಹೊರತು ಉಳಿದವರು ದಡಕ್ಕೆ ಬಂದೊಡನೆ ಎಸ್ಕೇಪ್‌ ಆಗಿದ್ದಾರೆ. ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿರುವ ಇಬ್ಬರು ಶಂಕಿತ ಕಳ್ಳಸಾಗಣೆದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಆಕಾಶದಲ್ಲಿ ಮಿಂಚಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಚೀನಾ ರಾಕೆಟ್

    ಆಕಾಶದಲ್ಲಿ ಮಿಂಚಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಚೀನಾ ರಾಕೆಟ್

    ಕೌಲಾಲಂಪುರ್: ಜುಲೈ 24ರಂದು ಉಡಾವಣೆ ಮಾಡಲಾಗಿದ್ದ ಚೀನಾದ ರಾಕೆಟ್ ಶನಿವಾರ ಶಿಥಿಲಗೊಂಡು ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ. ರಾಕೆಟ್ ಹಿಂದೂ ಮಹಾಸಾಗರಕ್ಕೆ ಬೀಳುವುದಕ್ಕೂ ಮೊದಲು ಆಕಾಶದಲ್ಲಿ ಬೆಳಗಿರುವ ವೀಡಿಯೋ ವೈರಲ್ ಆಗುತ್ತಿದೆ.

    ಲಾಂಗ್ ಮಾರ್ಚ್-5ಬಿ ವೈ3 ರಾಕೆಟ್ ಅನ್ನು ಚೀನಾ ಜುಲೈ 24ರಂದು ಉಡಾವಣೆ ಮಾಡಿತ್ತು. ಆದರೆ ಅದು ಶನಿವಾರ ಶಿಥಿಲಗೊಂಡು ಮತ್ತೆ ಭೂಮಿಗೆ ಹಿಂತಿರುಗಿದೆ. ಮಲೇಷ್ಯಾದ ಕುಚಿಂಗ್ ನಗರದ ಆಕಾಶದಲ್ಲಿ ರಾಕೆಟ್ ಹೊತ್ತಿ ಉರಿಯುವುದು ಕಂಡುಬಂದಿದೆ. ಇದನ್ನೂ ಓದಿ: ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

    ಲಾಂಗ್ ಮಾರ್ಚ್-5 ರಾಕೆಟ್ ಶಿಥಿಲಗೊಂಡು ಶನಿವಾರ ಮಧ್ಯಾಹ್ನ 12:45ರ ವೇಳೆ ಹಿಂದೂ ಮಹಾಸಾಗರದಲ್ಲಿ ಬಿದ್ದಿರುವ ಬಗ್ಗೆ ಅಮೆರಿಕ ಬಾಹ್ಯಾಕಾಶ ಕಮಾಂಡ್ ದೃಢಪಡಿಸಿದೆ. ಇದನ್ನೂ ಓದಿ: Commonwealth Games: ಭಾರತಕ್ಕೆ ಮತ್ತೊಂದು ಚಿನ್ನ ತಂದ ಜೆರೆಮಿ ಚಮತ್ಕಾರ

    ಇದಕ್ಕೂ ಮೊದಲು ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ರಾಕೆಟ್‌ನ ಅವಶೇಷಗಳು ಎಲ್ಲಿ ಬಿದ್ದಿದೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಚೀನಾ ನೀಡಿಲ್ಲ ಎಂದು ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

  • ಮಾಲ್ಡೀವ್ಸ್ ಬಳಿ ಸಮುದ್ರಕ್ಕೆ ಬಿತ್ತು ಚೀನಾ ರಾಕೆಟ್

    ಮಾಲ್ಡೀವ್ಸ್ ಬಳಿ ಸಮುದ್ರಕ್ಕೆ ಬಿತ್ತು ಚೀನಾ ರಾಕೆಟ್

    ಬೀಜಿಂಗ್: ನಿಯಂತ್ರಣ ಕಳೆದುಕೊಂಡಿದ್ದ ಚೀನಾ ರಾಕೆಟ್ ಭಗ್ನಾವಶೇಷ ಇಂದು ಬೆಳಗ್ಗೆ ಭಾರತೀಯ ಕಾಲಮಾನ 7:54ಕ್ಕೆ ಮಾಲ್ಡೀವ್ಸ್ ಬಳಿಯ ಸಮುದ್ರಕ್ಕೆ ಬಿದ್ದಿದೆ.

    22 ಟನ್ ಭಾರ ಹಾಗೂ 100 ಅಡಿ ಎತ್ತರದ ಚೀನಾದ ಲಾಂಗ್ ಮರ್ಚ್-5ಬಿ ರಾಕೆಟ್‍ನ ಭಗ್ನಾವಶೇಷ ವಾರಾಂತ್ಯದಲ್ಲಿ ಭೂಮಿಗೆ ಪತನವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದರು.

    ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ನಂತರ, ಲಾಂಗ್ ಮಾರ್ಚ್ 5 ಬಿ ರಾಕೆಟ್‍ನ ಕೊನೆಯ ಹಂತದ ಭಗ್ನಾವಶೇಷವು ವಾತಾವರಣವನ್ನು ಪುನಃ ಪ್ರವೇಶಿಸಿ ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರಕ್ಕೆ ಬಿದ್ದಿದೆ ಎಂದು ಚೀನಾ ಮ್ಯಾನ್ಡ್ ಸ್ಪೇಸ್ ಎಂಜಿನಿಯರಿಂಗ್ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಚೀನಾದ ಮಹತ್ವಕಾಂಕ್ಷೆಯ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಯೋಜನೆಯ ಭಾಗವಾಗಿ ಏಪ್ರಿಲ್ 29ರಂದು 5ಬಿ ರಾಕೆಟ್ ಅನ್ನು ಕಕ್ಷೆಗೆ ಉಡಾಯಿಸಿತ್ತು.

    ನಿಯಂತ್ರಣ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ರಾಕೆಟ್ ಕಕ್ಷೆಯನ್ನು ಪತ್ತೆ ಹಚ್ಚಿ ಎಲ್ಲಿ ಭಗ್ನಾವಶೇಷ ಬೀಳಬಹುದು ಎಂಬುದನ್ನು ಪ್ರಯತ್ನಿಸುತ್ತಿದ್ದರು.

    ಕಳೆದ ವರ್ಷ ಲಾಂಗ್ ಮಾರ್ಚ್ ರಾಕೆಟ್ ಭಗ್ನಾವಶೇಷ ಐವರಿಕೋಸ್ಟ್  ಗ್ರಾಮದಲ್ಲಿ ಬಿದ್ದಿತ್ತು. ಈ ವೇಳೆ ಯಾವುದೇ ಪ್ರಾಣಹಾನಿ ಆಗಿರಲಿಲ್ಲ.