Tag: ಹಾವು

  • ಶಿವಲಿಂಗದ ಮೇಲೆ ಹೆಡೆ ಬಿಚ್ಚಿ ದರ್ಶನ ನೀಡ್ತಿದ್ದ ದೇವರ ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ!

    ಶಿವಲಿಂಗದ ಮೇಲೆ ಹೆಡೆ ಬಿಚ್ಚಿ ದರ್ಶನ ನೀಡ್ತಿದ್ದ ದೇವರ ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ!

    ಹಾಸನ: ಸಾಮಾನ್ಯವಾಗಿ ಹಾವು ಮೃತಪಟ್ಟರೆ ಎಲ್ಲೋ ಕೊಳೆತು ಹೊಗುತ್ತೆ ಅದರ ಕುರಿತು ಮಾನವ ಗಮನವನ್ನೂ ಹರಿಸುವುದಿಲ್ಲ. ಕೊಳೆತ ವಾಸನೆ ಎಂದು ಮೂಗು ಮುಚ್ಚಿಕೊಂಡು ಹೋಗಿ ಬಿಡುತ್ತಾರೆ. ಆದರೆ ಇಲ್ಲೊಂದು ನಾಗರ ಹಾವು ಮೃತಪಟ್ಟು ಅದಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿ ನಂತರ ಆರಾಧನೆ ಕೂಡ ಮಾಡಲಾಗಿದೆ.

    ಹಾಸನ ಜಿಲ್ಲೆಯ ಹೊಳೇನರಸೀಪುರದ ರಿವರ್ ಬ್ಯಾಂಕ್ ರಸ್ತೆಯಲ್ಲಿ ಪುರಾತನ ಆಶ್ರಮವಿದೆ. ಮಡಿವಾಳೇಶ್ವರ ದೇಶೀ ಕೇಂದ್ರ ಶಿವಾಚಾರ್ಯ ಆಶ್ರಮವಿದು. ಇಲ್ಲಿ ಈಶ್ವರನ ಲಿಂಗವಿರುವ ಗದ್ದುಗೆ ಇದ್ದು, ವಿಶೇಷ ಏನು ಅಂದರೆ ಕಳೆದ 15 ವರ್ಷಗಳಿಂದ ಅಲ್ಲಿಯೇ ವಾಸವಿದ್ದು ಭಕ್ತರಿಗೂ ದರ್ಶನ ನೀಡುತ್ತಿದ್ದ ನಾಗರ ಹಾವು ಎಲ್ಲರ ಪ್ರೀತಿ ಮತ್ತು ಶೃದ್ಧೆಗೆ ಕಾರಣವಾಗಿತ್ತು.

    ದೇವಸ್ಥಾನಕ್ಕೆ ಸಾಕಷ್ಟು ಮಂದಿ ಭಕ್ತರು, ಮಕ್ಕಳು, ಸಾರ್ವಜನಿಕರು ಬಂದರೂ ಸಹ ಯಾರಿಗೂ ಅದು ತೊಂದರೆ ನೀಡುತ್ತಿರಲಿಲ್ಲ. ಆಶ್ರಮದ ಒಳಭಾಗದಲ್ಲಿರುವ ಗದ್ದುಗೆ ಮೇಲೆ ಕೆಲವೊಮ್ಮೆ ಶಿವಲಿಂಗದ ಮೇಲೆ ಕೂತು ಹೆಡೆ ಬಿಚ್ಚಿ ದರ್ಶನ ನೀಡುತಿತ್ತು.

    ಈ ನಾಗನನ್ನು ದೇವರ ಹಾವು ಎಂದೇ ಭಕ್ತರು ನಂಬಿದ್ದರು. ಈ ನಾಗರಹಾವು ಕಳೆದ ಗುರುವಾರ ಮೃತಪಟ್ಟಿತ್ತು. ಹೀಗಾಗಿ ಭಕ್ತರು ಮೃತಪಟ್ಟ ದೇವರ ಹಾವನ್ನು ಅದೇ ಆಶ್ರಮದ ಬಳಿ ಇರುವ ಅರಳೀಕಟ್ಟೆ ಮೇಲೆಯೇ ಅಂತ್ಯ ಸಂಸ್ಕಾರ ಮಾಡಿ ಭಕ್ತಿಯನ್ನು ಮೆರೆದಿದ್ದಾರೆ.

  • ಲಕ್ಷ ಲಕ್ಷ ಖರ್ಚು ಮಾಡಿ ಮನೆ ನಿರ್ಮಾಣ- ಗೃಹಪ್ರವೇಶಕ್ಕೂ ಮುನ್ನ ಬಂದು ಕುಳಿತ ನಾಗಪ್ಪ

    ಲಕ್ಷ ಲಕ್ಷ ಖರ್ಚು ಮಾಡಿ ಮನೆ ನಿರ್ಮಾಣ- ಗೃಹಪ್ರವೇಶಕ್ಕೂ ಮುನ್ನ ಬಂದು ಕುಳಿತ ನಾಗಪ್ಪ

    ಮಂಡ್ಯ: ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಮನೆಯ ಗೃಹಪ್ರವೇಶಕ್ಕೂ ಮುನ್ನ ನಾಗಪ್ಪ ಬಂದು ಮನೆಯಲ್ಲಿ ನೆಲೆಸಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಿದರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಹೇಶ್ ಎಂಬವರು ತಮ್ಮ ಜಮೀನಿನಲ್ಲಿ 8 ವರ್ಷಗಳ ಹಿಂದೆ ಮನೆ ಕಟ್ಟಲು ಆರಂಭಿಸಿದ್ದರು. ಆದರೆ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಹುತ್ತ ಬೆಳೆಯಲಾರಂಭಿಸಿತ್ತು. ಮೊದಲಿಗೆ ಮಹೇಶ್ ಹುತ್ತವನ್ನು ಕಿತ್ತು ಹಾಕಿ ಮನೆ ನಿರ್ಮಾಣದ ಕಡೆ ಗಮನಕೊಟ್ಟರು. ಆದರೆ ನಂತರ ಮಹೇಶ್ ಅವರ ಆರ್ಥಿಕ ಸಂಕಷ್ಟ ಹೆಚ್ಚಿ, ಮಕ್ಕಳಿಗೆ ಆರೋಗ್ಯದ ಸಮಸ್ಯೆ ಶುರುವಾಗಿತ್ತು.

    ಇದರಿಂದ ಹೆದರಿರೋ ಮಹೇಶ್ ಮನೆಯೊಳಗೆ ಬೆಳೆದ ಹುತ್ತವನ್ನು ಹಾಗೇ ಬಿಟ್ಟಿದ್ದಾರೆ. ಒಂದು ಬಾರಿ ಹಾವು ಕಾಣಿಸಿಕೊಂಡಿದ್ದು, ಹುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅರ್ಧದಷ್ಟು ಪೂರ್ಣಗೊಂಡಿರುವ ಮನೆಯಲ್ಲಿ ಕಳೆದೊಂದು ವರ್ಷದಿಂದ ವಾಸಿಸುತ್ತಿದ್ದು, ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

  • ಮೃತ ಪತ್ನಿಯನ್ನ ಬದುಕಿಸ್ತೀನೆಂದು ನಾಯಿಮರಿ, ಹಾವುಗಳನ್ನ ತಿನ್ನುತ್ತಿದ್ದ ವೃದ್ಧ

    ಮೃತ ಪತ್ನಿಯನ್ನ ಬದುಕಿಸ್ತೀನೆಂದು ನಾಯಿಮರಿ, ಹಾವುಗಳನ್ನ ತಿನ್ನುತ್ತಿದ್ದ ವೃದ್ಧ

    ಲಕ್ನೋ: ವೃದ್ಧ ವ್ಯಕ್ತಿಯೊಬ್ಬ ತನ್ನ ಮೃತ ಹೆಂಡತಿಯನ್ನ ಬುದುಕಿಸುತ್ತೀನಿ ಅಂತ ನಾಯಿಮರಿ ಹಾಗೂ ಹಾವುಗಳನ್ನ ತಿನ್ನುತ್ತಿದ್ದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ನಾಯಿ ಮತ್ತು ಹಾವನ್ನು ತಿನ್ನುತ್ತೇನೆಂದು ಹೇಳಿದ ವೃದ್ಧನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಉತ್ತರಪ್ರದೇಶದ ಜಗದೀಶ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕಾಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನೌರಂಗಿ ಲಾಲ್ ಎಂಬ ಹೆಸರಿನ ಬಾಬಾ ಕೆಲ ಸಮಯದಿಂದ ಇಲ್ಲಿನ ಬೀದಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ. ನಾಯಿಗಳನ್ನ ಬಲಿ ಕೊಟ್ಟು ಅದರ ಮಾಂಸವನ್ನ ತಿನ್ನುತ್ತಿದ್ದ. ಈ ರೀತಿ ಮಾಡೋದ್ರಿಂದ ನನಗೆ ಶಕ್ತಿ ಬರುತ್ತದೆ. ನಾನು ಹಾವುಗಳನ್ನೂ ಕೂಡ ತಿಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಈವರೆಗೆ ಈತ ನಾಲ್ಕು ನಾಯಿಮರಿಗಳನ್ನ ತಿಂದಿದ್ದಾನೆ. ಗುಡಿಸಲಿನಲ್ಲಿ ನಾಯಿಮರಿಗಳನ್ನ ಸುಟ್ಟಿರುವುದು ಪತ್ತೆಯಾಗಿದೆ.

    ವ್ಯಕ್ತಿಯ ಬಾಯಿಯಿಂದ ಈ ಮಾತುಗಳು ಹೊರಬರುತ್ತಿದ್ದಂತೆ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾರ್ವಜನಿಕರು ಬಾಬಾ ನ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ.

    ಈ ಬಗ್ಗೆ ಮನೋವೈದ್ಯರೊಬ್ಬರು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಮ್ಮೆ ಒಂಟಿಯಾಗಿರುವವರು ತಮ್ಮ ಕಲ್ಪನಾ ಲೋಕದಲ್ಲಿ ಜೀವಿಸುತ್ತಿರುತ್ತಾರೆ. ನೈಜ ಜಗತ್ತಿಗೂ ತಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡಿರುವ ಕಲ್ಪನಾ ಜಗತ್ತಿಗೂ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಾರೆ. ಇಂತಹವರಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.

    ಆರೋಪಿ ವ್ಯಕ್ತಿಯ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಸದ್ಯ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಪ್ರಕರಣದ ಸಂಬಂಧ ತಜ್ಞ ವೈದ್ಯರನ್ನ ಸಂಪರ್ಕಿಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

  • 2 ರಿಂದ 3 ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟಿದ್ದ ಹಾವು!

    2 ರಿಂದ 3 ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟಿದ್ದ ಹಾವು!

    ಚಾಮರಾಜನಗರ: ಚಕ್ಕರ್ ಕಿಲ್ ಬ್ಯಾಕ್ ಜಾತಿಗೆ ಸೇರಿದ ಹಾವೊಂದು ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ 2 ರಿಂದ ಮೂರು ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟು ಅಚ್ಚರಿ ಮೂಡಿಸಿದೆ.

    ಗ್ರಾಮದ ಮಹದೇವಪ್ಪ ಎಂಬುವವರ ಮನೆಯಲ್ಲಿ ಹಾವೊಂದು ಬಂದಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹಾವನ್ನು ರಕ್ಷಿಸಿ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಮನೆಗೆ ಕೊಂಡೊಯ್ದ ವೇಳೆ ಮನೆಯಲ್ಲಿ 3 ನಿಮಿಷಗಳ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟಿದೆ. ಇದನ್ನು ಕಂಡ ಸ್ನೇಕ್ ಮಹೇಶ್ ಆಶ್ಚರ್ಯ ಚಕಿತರಾಗಿದ್ದಾರೆ.

    ಈ ಜಾತಿಯ ಹಾವು ಸುಮಾರು 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುವ ಸಾಮರ್ಥ್ಯವಿದೆ. ಇಷ್ಟು ಮೊಟ್ಟೆಯನ್ನು ಇಡಲು 2 ರಿಂದ 3 ಗಂಟೆ ಅವಧಿ ತೆಗೆದುಕೊಳ್ಳುತ್ತವೆ. ಆದರೆ ಈ ಹಾವು 3 ನಿಮಿಷದ ಅವಧಿಯಲ್ಲಿ ಇಷ್ಟು ಮೊಟ್ಟೆ ಇಟ್ಟಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

    ಸದ್ಯ ಹಾವನ್ನು ಹಾಗೂ ಮೊಟ್ಟೆಗಳನ್ನು ಕಾಡಿಗೆ ಬಿಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಮಹೇಶ್ ಬಂದಿದ್ದು, ಮನೆಯಲ್ಲೇ ರಕ್ಷಣೆ ಮಾಡುತ್ತಿದ್ದಾರೆ. 60 ರಿಂದ 70 ದಿನಗಳ ನಂತರ ಮೊಟ್ಟೆಯಿಂದ ಹಾವಿನ ಮರಿಗಳು ಬರಲಿದ್ದು, ತದನಂತರ ಹಾವನ್ನು ಹಾಗೂ ಮರಿಗಳನ್ನು ಕಾಡಿಗೆ ಬಿಡಲಾಗುವುದು ಎಂದು ಸ್ನೇಕ್ ಮಹೇಶ್ ಹೇಳಿದ್ದಾರೆ.

  • ಕಪ್ಪೆಯನ್ನು ನುಂಗಲು ಹೋಗಿ ಗಾಳದಲ್ಲಿ ಸಿಲುಕಿ ಒದ್ದಾಡಿದ ನಾಗರಾಜ!

    ಕಪ್ಪೆಯನ್ನು ನುಂಗಲು ಹೋಗಿ ಗಾಳದಲ್ಲಿ ಸಿಲುಕಿ ಒದ್ದಾಡಿದ ನಾಗರಾಜ!

    ಹಾವೇರಿ: ಮೀನಿನ ಗಾಳಕ್ಕೆ ಸಿಕ್ಕಿ ನಾಗರಹಾವು ವಿಲವಿಲ ಒದ್ದಾಡಿದ ಘಟನೆ ಜಿಲ್ಲೆಯ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮೇವಿನ ಬಣವೆ ಬಳಿ ಮೀನಿನ ಗಾಳವೊಂದನ್ನು ಯಾರೋ ಎಸೆದು ಹೋಗಿದ್ದರು. ಈ ಮೀನಿನ ಗಾಳದಲ್ಲಿ ಕಪ್ಪೆಯೊಂದು ಸಿಲುಕಿ ಒದ್ದಾಡುತ್ತಿತ್ತು. ಕಪ್ಪೆಯನ್ನು ನೋಡಿದ ಹಾವು ಕಪ್ಪೆಯನ್ನು ನುಂಗಲು ಬಂದು ಗಾಳಕ್ಕೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು.

    ಹಾವು ಮೀನಿನ ಗಾಳದಲ್ಲಿ ಸಿಲುಕಿದ್ದನ್ನು ಕಂಡ ಸ್ಥಳೀಯರು ಉರಗ ತಜ್ಞ ಮಣಿ ಎಂಬವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಣಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಾಳದಿಂದ ನಾಗರಹಾವನ್ನು ರಕ್ಷಿಸಿದ್ದಾರೆ.

    https://youtu.be/usl_5aKr5sI

  • ಬೈಕ್‍ ನೊಳಗೆ ಪ್ರತ್ಯಕ್ಷವಾದ ಹಾವಿಗೆ ಸಿಕ್ತು ಜೀವದಾನ!

    ಬೈಕ್‍ ನೊಳಗೆ ಪ್ರತ್ಯಕ್ಷವಾದ ಹಾವಿಗೆ ಸಿಕ್ತು ಜೀವದಾನ!

    ಮಂಡ್ಯ: ಬೈಕಿನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

    ಸಂತೋಷ್ ಎಂಬುವವರ ಟೀ ಶಾಪ್ ಮುಂಭಾಗ ಕೋದಂಡರಾಮು ಎಂಬುವವರು ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ವಾಪಸ್ ಹೋಗುವಾಗ ಬೈಕ್‍ನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಇರುವುದು ಕಂಡಿದೆ.

    ಇದರಿಂದ ಬೈಕ್ ಓಡಿಸಲು ಹೆದರಿದ ಕೋದಂಡರಾಮು, ಗೆಳೆಯರ ಸಹಾಯದಿಂದ ಹಾವನ್ನು ಬೈಕ್ ನಿಂದ ಹೊರ ತೆಗೆದಿದ್ದಾರೆ. ಬೈಕ್‍ನಿಂದ ಹೊರ ಬಂದ ಹಾವು ಯಾವ ಕಡೆ ಹೋಗಬೇಕೆಂದು ತಿಳಿಯದೇ ಮನಸ್ಸೋ ಇಚ್ಚೆ ಓಡಾಡಿದೆ.

    ಈ ವೇಳೆ ಮಾನವೀಯತೆ ಮೆರೆದ ಸಾರ್ವಜನಿಕರು ಅದನ್ನು ಕೊಲ್ಲದೇ ತನ್ನ ಪಾಡಿಗೆ ತಾನು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.

  • ವಿಡಿಯೋ: ಹೆಲ್ಮೆಟ್‍ನೊಳಗೆ ಅಡಗಿ ಕುಳಿತಿತ್ತು ವಿಷಕಾರಿ ಹಾವು!

    ವಿಡಿಯೋ: ಹೆಲ್ಮೆಟ್‍ನೊಳಗೆ ಅಡಗಿ ಕುಳಿತಿತ್ತು ವಿಷಕಾರಿ ಹಾವು!

    ಸಿಡ್ನಿ: ಕಾರಿನ ಎಂಜಿನ್‍ನಲ್ಲಿ, ಬೈಕ್‍ನಲ್ಲಿ, ಟಾಯ್ಲೆಟ್ ಕಮೋಡ್‍ನಲ್ಲಿ ಹಾವುಗಳು ಕಾಣಿಸಿಕೊಂಡ ಬಗ್ಗೆ ಈ ಹಿಂದೆ ಸುದ್ದಿಯಾಗಿದೆ. ಆದ್ರೆ ಇದೀಗ ಹಾವೊಂದು ಹೆಲ್ಮೆಟ್‍ನೊಳಗೆ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯನ್ನೇ ಬೆರಗಾಗಿಸಿದೆ.

    ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‍ನ ರುಧರ್‍ಫೋರ್ಡ್ ಫೈರ್ ಸ್ಟೆಷನ್‍ನ ಸಿಬ್ಬಂದಿಯೊಬ್ಬರು ತನ್ನ ಹೆಲ್ಮೆಟ್‍ನಲ್ಲಿ ವಿಷಕಾರಿ ಹಾವು ಇದ್ದಿದ್ದು ನೋಡಿದ್ದಾರೆ. ಹಾವನ್ನ ನೋಡಿದ ನಂತರ ಉರಗ ತಜ್ಞರನ್ನ ಕರೆಸಿ ತನ್ನ ಹೆಲ್ಮೆಟ್‍ನಿಂದ ಸುರಕ್ಷಿವಾಗಿ ಹಾವನ್ನ ಹೊರತೆಗೆಸಿದ್ದಾರೆ.

    ‘ಫೈರ್ ಅಂಡ್ ರೆಸ್ಕ್ಯೂNSW’ ಫೇಸ್‍ಬುಕ್ ಪೇಜಿನಲ್ಲಿ ಇದರ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಹೆಲ್ಮೆಟ್ ಸ್ಟ್ರಾಪ್ ಸುತ್ತ ಸುತ್ತಿಕೊಂಡಿದ್ದ ಹಾವನ್ನ ಉರಗ ರಕ್ಷಕರು ಹೊರತೆಗೆಯಲು ಪ್ರಯತ್ನಿಸುತ್ತಿರೋದನ್ನ ಕಾಣಬಹುದು.

    ಉರಗ ತಜ್ಞ ಹಾವನ್ನ ಹಿಡಿದುಕೊಳ್ಳಲು ಯತ್ನಿಸಿದಾಗ ಅದು ನುಸುಳಿಕೊಂಡು ಹೋಗುತ್ತದೆ. ಆದ್ರೆ ಅವರು ತನ್ನ ಸಾಧನದ ಸಹಾಯದಿಂದ ಹಾವನ್ನ ಹಿಡಿದು ಬ್ಯಾಗ್‍ನೊಳಗೆ ಹಾಕಿಕೊಳ್ತಾರೆ.

    ಈ ಹಾವು ವಿಷಕಾರಿಯಾದ ರೆಡ್ ಬೆಲ್ಲೀಡ್ ಹಾವು ಎಂದು ಗುರುತಿಸಲಾಗಿದೆ.

    https://www.facebook.com/frnsw/videos/1820913657943203/

  • ಹಸಿವಿನಿಂದ ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು!

    ಹಸಿವಿನಿಂದ ನಾಯಿಮರಿ ನುಂಗಲು ಯತ್ನಿಸಿದ ನಾಗರಹಾವು!

    ಧಾರವಾಡ: ಹೊಟ್ಟೆ ಹಸಿವಿನಿಂದಾಗಿ ನಾಗರಹಾವೊಂದು ನಾಯಿ ಮರಿಯನ್ನು ನುಂಗಲು ಯತ್ನಿಸಿರುವ ಘಟನೆ ಜಿಲ್ಲೆಯ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ.

    ನಗರದ ಶೇಖರ ಬಿಜಲಿ ಎಂಬುವರ ಮನೆ ಬಳಿ ನಾಗರಹಾವು ನಾಯಿ ಮರಿಯನ್ನ ನುಂಗಲು ಯತ್ನ ನಡೆಸಿದೆ. ಮರದ ಸೌದೆ ಕೆಳಗೆ ನಾಯಿ ಮರಿಗಳ ಗುಂಪು ವಾಸವಿತ್ತು. ಅಲ್ಲೇ ಪಕ್ಕದಲ್ಲಿದ್ದ ನಾಗರಹಾವೊಂದು ಅವುಗಳ ಬಳಿ ಹೋಗಿ ಹಸಿವಿನಿಂದ ನಾಯಿ ಮರಿಯನ್ನು ತಿನ್ನಲು ಯತ್ನಿಸಿದ್ದು, ಒಂದು ನಾಯಿಮರಿಯನ್ನು ಹಿಡಿದುಕೊಂಡಿದೆ. ಇದನ್ನ ನೋಡಿದ ಶೇಖರ ಎಂಬವರು ತಕ್ಷಣ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಎಲ್ಲಪ್ಪ ಬರುವಷ್ಟರಲ್ಲಿ ನಾಗರಹಾವು ನಾಯಿಮರಿಯನ್ನ ಅರ್ಧದಷ್ಟು ನುಂಗಿತ್ತು. ಎರಡು ದಿನಗಳ ಹಿಂದೆಯಷ್ಟೆ ನಾಯಿ 4 ಮರಿಗಳನ್ನ ಹಾಕಿತ್ತು. ಸ್ಥಳಕ್ಕೆ ಬಂದ ಎಲ್ಲಪ್ಪ ನಾಯಿ ಮರಿ ನುಂಗಿದ್ದ ನಾಗರ ಹಾವನ್ನ ಹಿಡಿದು, ಆ ನಾರಿಮರಿಯನ್ನ ನಾಗರ ಹಾವಿನ ಬಾಯಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಯಿ ಮರಿ ಅಷ್ಟೊತ್ತಿಗೆ ಸಾವನ್ನಪ್ಪಿದೆ.

    ಉರಗತಜ್ಞ ಎಲ್ಲಪ್ಪ ರಕ್ಷಣೆ ಮಾಡಿದ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದಾರೆ.

  • ಹಾವು ಹಿಡಿಯೋ ದಿನನಿತ್ಯದ ವೃತ್ತಿ ಜೊತೆಗೆ ಅನಾಥ ಜೀವಗಳನ್ನು ಪೋಷಿಸ್ತಿದ್ದಾರೆ ಶಿವಮೊಗ್ಗದ ಜೇನಿ ಪ್ರಭಾಕರ್

    ಹಾವು ಹಿಡಿಯೋ ದಿನನಿತ್ಯದ ವೃತ್ತಿ ಜೊತೆಗೆ ಅನಾಥ ಜೀವಗಳನ್ನು ಪೋಷಿಸ್ತಿದ್ದಾರೆ ಶಿವಮೊಗ್ಗದ ಜೇನಿ ಪ್ರಭಾಕರ್

    ಶಿವಮೊಗ್ಗ: ಸರ್ಕಾರಿ ಅನುದಾನ ಪಡೆದು, ಅವರಿವರಿಂದ ಕೊಡುಗೆ ಪಡೆದು ಆಶ್ರಮ ನಡೆಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಸರ್ಪಗಳ ಸಹವಾಸ ಮಾಡಿ ಅನಾಥರನ್ನು ಸಾಕುತ್ತಿದ್ದಾರೆ. ಶಿವಮೊಗ್ಗದ ಜೇನಿ ಪ್ರಭಾಕರ್ ಅವರೇ ನಮ್ಮ ಪಬ್ಲಿಕ್ ಹೀರೋ.

    ನೂರಾರು ಮಂದಿಗೆ ಆಸರೆ ನೀಡಿದ್ದ ಈ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯ ಚಿಕ್ಕಜೇನಿಯಲ್ಲಿರೋ ಪದ್ಮಶ್ರೀ ಅನಾಥಾಶ್ರಮ, ವಯೋವೃದ್ಧರಿಗೆ, ಮಾನಸಿಕ ಅಸ್ವಸ್ಥರಿಗೆ ಆಶ್ರಯತಾಣವಾಗಿದೆ. ಈ ಆಶ್ರಮದಲ್ಲಿ ಸುಮಾರು 20 ಮಂದಿ ಆಸರೆ ಪಡೆದಿದ್ದಾರೆ.

    ಪದ್ಮಶ್ರೀ ಅನಾಥಾಶ್ರಮದ ರೂವಾರಿ ಜೇನಿ ಪ್ರಭಾಕರ್. ಕೇವಲ ಹಾವು ಹಿಡಿಯೋ ಮೂಲಕವೇ ಈ ಆಶ್ರಮವನ್ನ ನಡೆಸುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲೇ ಹಾವು ಕಂಡು ಬಂದ್ರೂ ಕರೆ ಮೊದಲು ಬರೋದು ಜೇನಿ ಪ್ರಭಾಕರ್ ಅವರಿಗೆ. ಹಾವು ಹಿಡಿದಿದ್ದಕ್ಕೆ ಪ್ರತಿಯಾಗಿ ಧವಸ ಧಾನ್ಯ, ತರಕಾರಿ ಪಡೆದು ಅನಾಥರನ್ನು ಪೋಷಿಸುತ್ತಿದ್ದಾರೆ.

    ಜೇನಿ ಪ್ರಭಾಕರ್ ಆಶ್ರಮ ಸ್ಥಾಪಿಸಲು ಕಾರಣ ಬಾಲ್ಯದಲ್ಲಿ ನಡೆದ ಕಹಿ ಘಟನೆ. ಕೆಲಸ ಅರಸಿ ಮುಂಬೈಗೆ ಹೋಗಿದ್ದ ಪ್ರಭಾಕರ್ ಪರ್ಸ್ ಕಳೆದುಕೊಂಡು ಭಿಕ್ಷೆ ಬೇಡಿದ್ರಂತೆ. ಆಗ ಮಾನಸಿಕ ಅಸ್ವಸ್ಥರು, ವಯೋವೃದ್ಧರ ಕಷ್ಟ ಜೇನಿ ಮನಸ್ಸಿಗೆ ತಟ್ಟಿತ್ತಂತೆ. ಅಲ್ಲಿಂದ ವಾಪಸ್ ಆಗಿ ಹಾವು ಹಿಡಿಯೋ ವೃತ್ತಿ ಕರಗತ ಮಾಡಿಕೊಂಡ ಜೇನಿ, 2012ರಲ್ಲಿ ಪದ್ಮಶ್ರೀ ಅನಾಥಾಶ್ರಮ ಸ್ಥಾಪಿಸಿದ್ದಾರೆ.

    ಇನ್ನಷ್ಟು ಮಂದಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ 2 ಎರಡೆಕರೆ ಜಮೀನಿನಲ್ಲಿ ಈಗ ದೊಡ್ಡ ಅನಾಥಾಶ್ರಮ ಕಟ್ಟುತ್ತಿದ್ದಾರೆ. ಇದಕ್ಕಾಗಿ ಧರ್ಮಸ್ಥಳದಿಂದ 2ಲಕ್ಷ ಹಣದ ನೆರವು ದೊರಕಿದೆ. ಉಳಿದ ಹಣಕ್ಕಾಗಿ ದಾನಿಗಳ ನೆರವಿಗೆ ಕಾಯುತ್ತಿದ್ದಾರೆ.

    https://www.youtube.com/watch?v=Ua9wibyA5b4

  • ವಿಡಿಯೋ: ಈ 2 ವರ್ಷದ ಪೋರಿಗೆ ಹಾವೇ ಆಟಿಕೆ, ಹಾವೇ ಫ್ರೆಂಡ್ಸ್!

    ವಿಡಿಯೋ: ಈ 2 ವರ್ಷದ ಪೋರಿಗೆ ಹಾವೇ ಆಟಿಕೆ, ಹಾವೇ ಫ್ರೆಂಡ್ಸ್!

    ಕಾರವಾರ: ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಪ್ರಶಾಂತ್ ಹುಲೇಕಲ್ ಹಾಗೂ ಸ್ವಾತಿ ಎಂಬವರ ಮಗಳಾದ ಆಕರ್ಷ ಹಾವಿಗಳೊಂದಿಗೆ ಸರಸವಾಡುವ ಬಾಲಕಿ. 2 ವರ್ಷ ಏಳು ತಿಂಗಳು ವಯಸ್ಸಿನ ಈ ಪುಟ್ಟ ಪೋರಿಗೆ ಸರಿಯಾಗಿ ನಡೆದಾಡಲೂ ಬರುವುದಿಲ್ಲ.

    ಹಾಲುಗೆನ್ನೆಯ ತೊದಲು ನುಡಿ ಮಾತನಾಡುವ ಈ ಪೋರಿ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಸೇರಿದಂತೆ 60 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ತಂದೆ ಸ್ವತಃ ಉರುಗ ತಜ್ಞರಾಗಿದ್ದು, 20 ವರ್ಷಗಳಿಂದ 12 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಈಕೆ ಚಿಕ್ಕ ಮಗುವಾಗಿದ್ದಾಗಿನಿಂದ ತಂದೆ ಹಾವುಗಳನ್ನ ಹಿಡಿಯುವುದನ್ನು ನೋಡುತ್ತಿದ್ದ ಈಕೆಗೆ ತಂದೆಯೇ ಮೊದಲ ಗುರು. ಮನೆಯಲ್ಲಿ ಪ್ರತಿ ವರ್ಷ ನಾಗರಪಂಚಮಿಯಂದು ನಿಜ ನಾಗರಹಾವಿಗೆ ತಪ್ಪದೇ ಪೂಜೆ ಮಾಡುತ್ತಾರೆ. ಹೀಗಾಗಿ ಇವೆಲ್ಲವೂ ಈ ಪುಟ್ಟ ಬಾಲಕಿಗೆ ಪ್ರಭಾವ ಬೀರಿದ್ದು ಹಾವುಗಳೊಂದಿಗೆ ಸ್ನೇಹ ಬೆಳಸಿಕೊಳ್ಳುವಂತೆ ಮಾಡಿದೆ. ಚಿಕ್ಕ ಪೋರಿಯ ಈ ಸಲುಗೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ.

    https://www.youtube.com/watch?v=rFO2yLSCu2c