Tag: ಹಾವು

  • ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದ ಯುವಕ- ಸಾರ್ವಜನಿಕರು ಕಕ್ಕಾಬಿಕ್ಕಿ!

    ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದ ಯುವಕ- ಸಾರ್ವಜನಿಕರು ಕಕ್ಕಾಬಿಕ್ಕಿ!

    ವಿಜಯಪುರ: ಯುವಕನೊಬ್ಬ ಜೀವಂತ ಹಾವಿನೊಂದಿಗೆ ಟೀ ಕುಡಿಯಲು ಬಂದಿದ್ದು, ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ವಿಜಯಪುರ ನಗರದ ರಜಪೂತ ಗಲ್ಲಿ ಬಲಕಿಯಲ್ಲಿ ಶೇಖರ್ ಎಂಬ ಯುವಕ ಜೀವಂತ ಹಾವನ್ನು ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾರೆ. ಶೇಖರ್ ಕೈಯಲ್ಲಿ ಹಾವು ಕಂಡ ಟೀ ಅಂಗಡಿಯಲ್ಲಿ ನೆರೆದಿದ್ದ ಸ್ಥಳೀಯರು ಗಾಬರಿಗೊಂಡಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಹಾವು ಹಿಡಿಯುತ್ತಿರುವ ಶೇಖರ್, ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕಾಣಿಸಿಕೊಂಡ ಕೇರೆ ಹಾವನ್ನು ಹಿಡಿದಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಹಾವನ್ನು ಹಿಡಿದುಕೊಂಡೇ ಟೀ ಕುಡಿಯಲು ಅಂಗಡಿಗೆ ಬಂದಿದ್ದಾರೆ. ಈ ಮೂಲಕ ನೆರೆದವರಲ್ಲಿ ಗಾಬರಿ ಮೂಡಿಸಿದ್ದಾರೆ.

    https://www.youtube.com/watch?v=5I_erPowe4I

  • ಕೋಳಿ ಸಾಯ್ಸಿ, 4 ಮೊಟ್ಟೆ ನುಂಗಿ ನರಳಾಡುತ್ತಿದ್ದ ನಾಗರ ಹಾವಿನ ರಕ್ಷಣೆ – ವಿಡಿಯೋ ನೋಡಿ

    ಕೋಳಿ ಸಾಯ್ಸಿ, 4 ಮೊಟ್ಟೆ ನುಂಗಿ ನರಳಾಡುತ್ತಿದ್ದ ನಾಗರ ಹಾವಿನ ರಕ್ಷಣೆ – ವಿಡಿಯೋ ನೋಡಿ

    ಚಿಕ್ಕಮಗಳೂರು: ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ನಾಗರ ಹಾವೊಂದು ಮನೆಯೊಳಗೆ ನುಗ್ಗಿ ಕೋಳಿಯೊಂದನ್ನು ಸಾಯಿಸಿ, ನಾಲ್ಕು ಮೊಟ್ಟೆಯನ್ನ ನುಂಗಿ ಸಾವು ಬದುಕಿನ ಮಧ್ಯೆ ನರಳಾಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚೇಗು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹರೀಶ್ ಎಂಬವರ ಮನೆಗೆ ಹಾವು ಬಂದಿದೆ. ನಂತರ ಒಂದು ಕೋಳಿಯನ್ನು ಸಾಯಿಸಿ ನಾಲ್ಕು ಮೊಟ್ಟೆಯನ್ನ ನುಂಗಿದೆ. ಆದ್ರೆ ನಾಲ್ಕು ಮೊಟ್ಟೆಗಳು ಗಂಟಲಿನಲ್ಲಿ ಸಿಲುಕಿ ಅಡುಗೆ ಮನೆಯಲ್ಲಿ ಬಿದ್ದು ಹೊರಳಾಡುತ್ತಿತ್ತು. ಇದನ್ನೂ ಓದಿ15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಉರಗತಜ್ಞ

    ಹಾವಿನ ನರಳಾಟ ಕಂಡು ಹರೀಶ್ ಮನೆಯವರು ಭಯಗೊಂಡಿದ್ದು, ಕೂಡಲೇ ಉರುಗ ತಜ್ಞ ಆರೀಫ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ನಾಗರಹಾವನ್ನ ಹಿಡಿದು ಚಿಕಿತ್ಸೆ ನೀಡಿದ್ದಾರೆ. ನಾಗರ ಹಾವಿನ ಹೊಟ್ಟೆಯಲ್ಲಿದ್ದ ನಾಲ್ಕು ಮೊಟ್ಟೆಯನ್ನೂ ಹೊರಹಾಕಿಸಿದ್ದಾರೆ. ಇದನ್ನ ಕಂಡ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ.

    ಆರೀಫ್ ನಾಗರ ಹಾವನ್ನ ರಕ್ಷಣೆ ಮಾಡಿ ಚಾರ್ಮಾಡಿ ಘಾಟ್ ಗೆ ಬಿಟ್ಟಿದ್ದಾರೆ.

    https://youtu.be/46aIxYtXo04

     

  • ಟಾಟಾ ಮ್ಯಾಜಿಕ್ ವಾಹನದಲ್ಲಿ ಅವಿತಿದ್ದ ನಾಗರಹಾವನ್ನ ರಕ್ಷಿಸಿದ ಪೇದೆ

    ಟಾಟಾ ಮ್ಯಾಜಿಕ್ ವಾಹನದಲ್ಲಿ ಅವಿತಿದ್ದ ನಾಗರಹಾವನ್ನ ರಕ್ಷಿಸಿದ ಪೇದೆ

    ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ ಟಾಟಾ ಮ್ಯಾಜಿಕ್ ವಾಹನದಲ್ಲಿ ಅವಿತಿದ್ದ ನಾಗರಹಾವೊಂದು ಕೆಲಕಾಲ ವಾಹನದ ಮಾಲೀಕರು ಮತ್ತು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿದ್ದ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಾಗಪ್ಪ ಮಣ್ಣೂರ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ ವಾಹನದಲ್ಲಿ ನಾಲ್ಕು ಅಡಿ ಉದ್ದದ ನಾಗರಹಾವು ಅವಿತು ಕುಳಿತಿತ್ತು. ವಾಹನದಲ್ಲಿ ಕುಳಿತಿದ್ದ ಹಾವನ್ನ ಗಮನಿಸಿದ ಮಾಲೀಕರು ಮತ್ತು ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ರು. ನಂತರ ವಾಹನದಿಂದ ಹಾವನ್ನ ಹೊರಗೆಳೆದು ಹೊಡೆದು ಸಾಯಿಸಲು ನಿರ್ಧರಿಸಿದ್ರು. ಆದ್ರೆ ಗ್ರಾಮದ ಕೆಲವರು ಹಾವು ಹಿಡಿಯೋದ್ರಲ್ಲಿ ಪಳಗಿರೋ ಹಾವೇರಿ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕಾನ್ಸ್ ಸ್ಟೇಬಲ್ ರಮೇಶ್ ಹರಿಜನಗೆ ಮಾಹಿತಿ ಮುಟ್ಟಿಸಿದ್ರು.

    ಕೂಡಲೇ ಸ್ಥಳಕ್ಕೆ ಧಾವಿಸಿದ ಕಾನ್ಸ್ ಸ್ಟೇಬಲ್ ರಮೇಶ್, ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ವಾಹನದಲ್ಲಿ ಅವಿತು ಕುಳಿತಿದ್ದ ಹಾವನ್ನ ಹಿಡಿದುಕೊಂಡು ನಂತರ ಕಾಡಿಗೆ ಬಿಡೋದಾಗಿ ಹೋದ್ರು.

    ರಮೇಶ್ ಕೈಗೆ ಸಿಕ್ಕ ನಗರಹಾವು ಬದುಕಿದೆಯಾ ಬಡಜೀವವೆ ಅಂತಾ ನಿಟ್ಟಿಸಿರು ಬಿಟ್ಟಿತು. ಗ್ರಾಮಸ್ಥರಂತೂ ಹಾವು ಸೆರೆಹಿಡಿದಿದ್ದು ಕಂಡು ಆತಂಕವನ್ನ ದೂರ ಮಾಡಿಕೊಂಡ್ರು.

  • ನುಂಗಿದ್ದ ಮೂರು ಮೊಟ್ಟೆಗಳನ್ನು ನಾಗರಹಾವು ಬಾಯಿಂದ ಹೊರ ಹಾಕೋದನ್ನು ನೋಡಿ

    ನುಂಗಿದ್ದ ಮೂರು ಮೊಟ್ಟೆಗಳನ್ನು ನಾಗರಹಾವು ಬಾಯಿಂದ ಹೊರ ಹಾಕೋದನ್ನು ನೋಡಿ

    ಚಿಕ್ಕಮಗಳೂರು: ಮೂರು ಮೊಟ್ಟೆಗಳನ್ನು ತಿಂದ ಮೇಲೆ ಮುಂದಕ್ಕೆ ಹೋಗದೇ ಒದ್ದಾಡುತ್ತಿದ್ದ ನಾಗರ ಹಾವನ್ನು ಉರಗತಜ್ಞರು ಯಶಸ್ವಿಯಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿರುವ ಚಂದ್ರು ಎಂಬವರ ಮನೆಗೆ ಆಹಾರ ಅರಸಿ ನಾಗರಹಾವೊಂದು ಬಂದಿತ್ತು. ಬಂದಿದ್ದ ಹಾವು ಅಡುಗೆಗೆ ತಂದಿಟ್ಟಿದ್ದ ಮೂರು ಕೋಳಿ ಮೊಟ್ಟೆಗಳನ್ನು ಸೇವಿಸಿ ಮುಂದಕ್ಕೆ ಚಲಿಸಲು ಆಗದೇ ಮನೆಯಲ್ಲೇ ಬೀಡುಬಿಟ್ಟಿತ್ತು.

    ಇದರಿಂದ ಭಯಗೊಂಡ ಮನೆಯವರು ಕೂಡಲೇ ಸ್ನೇಕ್ ಆರಿಫ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಆರಿಫ್ ಮನೆಯಿಂದ ಹೊರ ತಂದು ಅಂಗಳದಲ್ಲಿ ಆಟವಾಡಿಸುವ ವೇಳೆ ಹಾವು ತಾನು ನುಂಗಿದ್ದ ಮೂರು ಕೋಳಿ ಮೊಟ್ಟೆಗಳನ್ನು ಹೊರ ಹಾಕಿದೆ.

    ಈ ದೃಶ್ಯ ನೋಡಿ ಅಲ್ಲೇ ಇದ್ದ ಸ್ಥಳೀಯರು ಅಪರೂಪದ ಘಟನೆ ಕಂಡು ಆಶ್ಚರ್ಯ ಪಟ್ಟಿರುವುದಲ್ಲದೆ, ತಮ್ಮ ಮೊಬೈಲ್ ನಲ್ಲಿ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ. ಹಾವನ್ನು ಸೆರೆ ಹಿಡಿದ ಸ್ನೇಕ್ ಆರಿಫ್ ಸುರಕ್ಷಿತವಾಗಿ ಚಾರ್ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    https://www.youtube.com/watch?v=xeNn7czYHvA

     

  • ನಾಲ್ಕು ದಿನಗಳಿಂದ ಒಂದೇ ಜಾಗದಲ್ಲಿ ಬೀಡುಬಿಟ್ಟಿದ್ದ ಹಾವುಗಳ ರಕ್ಷಣೆ

    ನಾಲ್ಕು ದಿನಗಳಿಂದ ಒಂದೇ ಜಾಗದಲ್ಲಿ ಬೀಡುಬಿಟ್ಟಿದ್ದ ಹಾವುಗಳ ರಕ್ಷಣೆ

    ಬೆಳಗಾವಿ: ನಾಲ್ಕು ದಿನಗಳಿಂದ ಒಂದೇ ಜಾಗದಲ್ಲಿ ಬೀಡು ಬಿಟ್ಟಿದ್ದ ಎರಡು ಹಾವುಗಳನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ನಡೆದಿದೆ.

    ನಾಲ್ಕು ದಿನಗಳ ಹಿಂದೆ ಸಾತಪ್ಪ ಅಂಬಿ ಎಂಬವರಿಗೆ ಸೇರಿದ ಮನೆಯ ಜಾನುವಾರು ಕೊಟ್ಟಿಗೆಯಲ್ಲಿ ಹಾವುಗಳು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಗ್ರಾಮಸ್ಥರು ಹಾವುಗಳನ್ನು ಸ್ಥಳದಿಂದ ಓಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಹಾವುಗಳು ಮಾತ್ರ ಸ್ಥಳದಿಂದ ಹೋಗಿರಲಿಲ್ಲ.

    ಕೊನೆಗೆ ಗ್ರಾಮಸ್ಥರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉರಗ ತಜ್ಞರು ಎರಡು ಹಾವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿದ್ದರಿಂದ ಹಾವುಗಳು ಒಂದೇ ಸ್ಥಳದಲ್ಲಿದ್ದವು ಅಂತಾ ಉರಗ ತಜ್ಞರು ಹೇಳಿದ್ದಾರೆ.

  • ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

    ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಮನುಷ್ಯ ಮನುಷ್ಯರಿಗೆ ಸಹಾಯ ಮಾಡುವುದು ಕಷ್ಟ. ಆದರೆ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಗರಹಾವನ್ನು ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ಆತ್ರಾಡಿಯ ಶ್ರೀನಿವಾಸ ಆಚಾರ್ಯ ಎಂಬವರ ಮನೆಯ ಬಳಿ ಇರುವ 40 ಅಡಿ ಬಾವಿಗೆ ತಿಂಗಳ ಹಿಂದೆ ನಾಗರಹಾವೊಂದು ಬಿದ್ದಿತ್ತು. ಬೆಳಗ್ಗೆ ನೀರು ಸೇದುವಾಗ ಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಬಾವಿಯಿಂದ ಹೊರ ಹೋಗಬಹುದು ಎಂದು ಕಾದು ಕಾದು ಸುಸ್ತಾದ ಮನೆಯವರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿ ಕರೆಸಿದ್ದಾರೆ.

    ಮಾಹಿತಿ ತಿಳಿದು ಇಂದು ಸ್ಥಳಕ್ಕೆ ಬಂದು ಸನಿಲ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು, ಒಂದು ಕೈಯ್ಯಲ್ಲಿ ಹಗ್ಗ, ಮತ್ತೊಂದು ಕೈಯ್ಯಲ್ಲಿ ಕಬ್ಬಿಣದ ಸ್ಟಿಕ್ ಹಿಡಿದು ಬಾವಿಗೆ ಇಳಿದ್ದಾರೆ. ಈ ವೇಳೆ ನೀರಿನಲ್ಲಿ ಈಜಾಡುತ್ತಾ ಹೆಡೆಯೆತ್ತಿ ಬುಸುಗುಡುತ್ತಿದ್ದ ಹಾವನ್ನು ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಈ ವೇಳೆ ಹಾವು ಮೂರು ನಾಲ್ಕು ಬಾರಿ ಗುರುರಾಜ್ ಸನಿಲ್ ಅವರಿಗೆ ಕಚ್ಚಲು ಮುಂದಾಗಿದೆ. ಯಾವುದನ್ನು ಲೆಕ್ಕಿಸದ ಗುರುರಾಜ್ ಕೊನೆಗೂ ಹಾವನ್ನು ಬಾವಿಯಿಂದ ರಕ್ಷಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಗುರುರಾಜ್ ಸನಿಲ್ ಅವರು ಇದುವರೆಗೂ ಮೂವತ್ತು ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆ ನಂತರ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಇದುವರೆಗೂ ನಡೆಸಿದ ಕಾರ್ಯಾಚರಣೆಗಿಂತ ಈ ಕಾರ್ಯಾಚರಣೆ ಬಹಳ ಅಪಾಯಕಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ.

  • ಒಂದೇ ಜಾಗದಲ್ಲಿ ಎರಡು ಹಾವು, 300ಕ್ಕೂ ಹೆಚ್ಚು ಮೊಟ್ಟೆ – ಅಚ್ಚರಿಗೊಳಗಾದ ಸ್ಥಳೀಯರು!

    ಒಂದೇ ಜಾಗದಲ್ಲಿ ಎರಡು ಹಾವು, 300ಕ್ಕೂ ಹೆಚ್ಚು ಮೊಟ್ಟೆ – ಅಚ್ಚರಿಗೊಳಗಾದ ಸ್ಥಳೀಯರು!

    ಚಿಕ್ಕಮಗಳೂರು: ಒಂದು ಹಾವು ನೋಡುದ್ರೇನೆ ಜೀವ ಝಲ್ ಅನ್ನುತ್ತೆ. ಅಂತದ್ರಲ್ಲಿ ಒಂದೇ ಜಾಗದಲ್ಲಿ, ಒಂದೇ ಸಮಯದಲ್ಲಿ ಎರಡು ಹಾವುಗಳ ಜೊತೆ 300ಕ್ಕೂ ಅಧಿಕ ಮೊಟ್ಟೆ ಕಂಡು ಬಂದಿರುವ ಘಟನೆ ಕಾಫಿ ನಾಡಿನಲ್ಲಿ ನಡೆದಿದೆ.

    ಕಾಫಿನಾಡಿನ ಕಲ್ಯಾಣ ನಗರದ ನಿವಾಸಿ ನವೀನ್ ಎಂಬುವರು ಮನೆ ಕಟ್ಟಲೆಂದು ತಿಂಗಳ ಹಿಂದೆ ಮರಳನ್ನ ಹಾಕಿಸಿದ್ದರು. ಆದರೆ ಈಗ ಕೆಲಸಕ್ಕೆಂದು ಮರಳು ತೆಗೆಯುವಾಗ ಮರಳಿನೊಳಗೆ ಒಂದೇ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಸುಮಾರು 300ಕ್ಕೂ ಅಧಿಕ ಮೊಟ್ಟೆಗಳು ಸಿಕ್ಕಿವೆ. ಜೊತೆಗೆ ಎರಡೂ ಹಾವುಗಳು ಕೂಡ ಕಂಡು ಬಂದಿವೆ.

    ಹಾವು ಮತ್ತು ಮೊಟ್ಟೆಗಳನ್ನು ಕೆಲಸಗಾರರು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕೂಡಲೇ ಅವರು ಸ್ನೇಕ್ ನರೇಶ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ನೇಕ್ ನರೇಶ್ ಸ್ಥಳಕ್ಕೆ ಬಂದು ಎರಡೂ ಹಾವುಗಳ ಜೊತೆ 300 ಕ್ಕೂ ಅಧಿಕ ಮೊಟ್ಟೆಗಳನ್ನ ರಕ್ಷಿಸಿದ್ದಾರೆ. ಆದರೆ ಒಂದೇ ಜಾಗದಲ್ಲಿ ಹಾವುಗಳ ಜೊತೆ ಅಷ್ಟೊಂದು ಮೊಟ್ಟೆ ನೋಡಿದ ಸ್ಥಳೀಯರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ನೀರಾವುಗಳ ಸಂತತಿಯೂ ತೀರಾ ಕಡಿಮೆಯಾಗಿದೆ. ಆದರೆ ನಾಗರಹಾವು ಏಕಕಾಲದಲ್ಲಿ 5, 10, 15 ಮೊಟ್ಟೆ ಇಡುತ್ತವೆ. ನೀರಾವು 40, 50 ಮೊಟ್ಟೆ ಇಡುತ್ತವೆ. ಆದ್ರೆ ಹೀಗೆ 100, 200 ಮೊಟ್ಟೆಯನ್ನೂ ಇಡುತ್ತವೆ ಅಂದ್ರೆ ಇದು ತೀರಾ ವಿರಳ ಎಂದು ನರೇಶ್ ಹೇಳಿದ್ದಾರೆ.

    ಸದ್ಯ ನರೇಶ್ ಅವರು ಎರಡೂ ಹಾವುಗಳನ್ನ ರಕ್ಷಿಸಿ ಅವುಗಳನ್ನ ಕಾಡಿಗೆ ಬಿಟ್ಟಿದ್ದಾರೆ. ಆದರೆ ಮೊಟ್ಟೆಗಳನ್ನ ಮನೆಗೆ ತಂದಿದ್ದಾರೆ. ಅವುಗಳನ್ನು ತಾಪದ ಜಾಗದಲ್ಲಿಟ್ಟು, ಕಾವು ನೀಡಿ ಮರಿಯಾದ ಮೇಲೆ ಅವುಗಳನ್ನ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.

     

  • ವಿಡಿಯೋ: ಅನಕೊಂಡಾಗೆ ಬಲಿಯಾಗ್ತಿದ್ದ ನಾಯಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು

    ವಿಡಿಯೋ: ಅನಕೊಂಡಾಗೆ ಬಲಿಯಾಗ್ತಿದ್ದ ನಾಯಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು

    ಬ್ರೆಜಿಲಿಯಾ: ಅನಕೊಂಡಾ ಹಾವಿಗೆ ಆಹಾರವಾಗಿಬಿಡುತ್ತಿದ್ದ ನಾಯಿಯನ್ನ ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದ್ದು, ಇದರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದ ಆರಂಭದಲ್ಲಿ ನದಿ ತೀರದಲ್ಲಿ ನಾಯಿಯನ್ನ ಸುತ್ತುವರಿದಿದ್ದ ದೈತ್ಯ ಅನಕೊಂಡಾವನ್ನ ಕಾಣಬಹುದು. ನಂತರ ಇಬ್ಬರು ಅಲ್ಲಿಗೆ ಬಂದು ಹಾವಿನ ಬಾಲ ಹಿಡಿದು ನೀರಿನಿಂದ ಹೊರಗೆಳೆದು ಹುಲ್ಲಿಗೆ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ವ್ಯಕ್ತಿ ಸೇರ್ಪಡೆಗೊಂಡು ಎಲ್ಲರೂ ಸೇರಿ ನಾಯಿಯನ್ನ ಹಾವಿನ ಹಿಡಿತದಿಂದ ಬಿಡಿಸಲು ಯತ್ನಿಸಿದ್ದಾರೆ.

    ಅವರಲ್ಲೊಬ್ಬ ವ್ಯಕ್ತಿ ಕೋಲಿನಿಂದ ಹಾವಿಗೆ ಹೊಡೆದಿದ್ದು, ಎರಡು ಮೂರು ಏಟು ತಿಂದ ಬಳಿಕ ಹಾವಿನ ಹಿಡಿತ ಸಡಿಲವಾಗಿ, ನಾಯಿ ಅದರಿಂದ ಬಿಡಿಸಿಕೊಂಡು ಬಂದು ಹಾವಿನ ಕಡೆ ಬೊಗಳಲು ಶುರು ಮಾಡಿದೆ.

    ಆಂಡ್ರೀವ್ ಬರೋ ಎಂಬವರು ಇದರ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ನಾಯಿ ಜಮೀನಿನಿಂದ ಕಾಣೆಯಾಗಿತ್ತು. ಅದಕ್ಕಾಗಿ ಹುಡುಕಾಟ ನಡೆಸಿದಾಗ ಅನಕೊಂಡಾಗೆ ಆಹಾರವಾಗಿಬಿಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.

    ನಂತರ ಗ್ರಮಸ್ಥರು ಕೂಡಲೇ ಕಾರ್ಯಪ್ರವೃತ್ತರಾಗಿ ಅನಕೊಂಡಾದಿಂದ ಇನ್ನೇನು ಕೊಲ್ಲಲ್ಪಡುತ್ತಿದ್ದ ನಾಯಿಯ ರಕ್ಷಣೆಗೆ ಮುಂದಾದರು ಎಂದು ತಿಳಿಸಿದ್ದಾರೆ.

    https://www.youtube.com/watch?v=3x7qvzKIc7g

  • ಹಾವಿನ ತಲೆಯನ್ನ ಕಚ್ಚಿ, ಜಗಿದು ಉಗುಳಿದ ವ್ಯಕ್ತಿ!

    ಹಾವಿನ ತಲೆಯನ್ನ ಕಚ್ಚಿ, ಜಗಿದು ಉಗುಳಿದ ವ್ಯಕ್ತಿ!

    ಲಕ್ನೋ: ತನಗೆ ಹಾವು ಕಚ್ಚಿತೆಂದು ವ್ಯಕ್ತಿಯೊಬ್ಬ ಅದರ ತಲೆಯನ್ನೇ ಕಚ್ಚಿ, ಜಗಿದು ನಂತರ ಉಗುಳಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಹಾರ್‍ದೊಯಿ ಜಿಲ್ಲೆಯಲ್ಲಿ ನಡೆದಿದೆ.

    ಶನಿವಾರದಂದು ಈ ಘಟನೆ ನಡೆದಿದ್ದು, ಸೋನೆಲಾಲ್ ಎಂಬಾತನೇ ಹಾವಿನ ತಲೆಯನ್ನ ಕಚ್ಚಿದ ವ್ಯಕ್ತಿ. ಸೋನೆಲಾಲ್ ತನ್ನ ಹಸುಗಳನ್ನು ಮೇಯಿಸುತ್ತಿರುವಾಗ ಆತನಿಗೆ ಹಾವು ಕಚ್ಚಿತ್ತು. ಇದರಿಂದ ಕೋಪಗೊಂಡ ಸೋನೆಲಾಲ್ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಅದರ ತಲೆಯನ್ನು ಬಾಯಿಂದ ಕಚ್ಚಿ, ಚೆನ್ನಾಗಿ ಜಗಿದು ಉಗುಳಿದ್ದಾನೆ.

    ಹಾವು ಕಚ್ಚಿದ ಬಳಿಕ ಕೆಲವೇ ಕ್ಷಣಗಳಲ್ಲಿ ಸೋನೆಲಾಲ್ ಪ್ರಜ್ಞೆ ಕಳೆದುಕೊಂಡಿದ್ದಾನೆ. ಸ್ಥಳೀಯರು ಆತನನ್ನು ಮೋಘಗಂಜ್ ಸಮುದಾಯದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಸೋನೆಲಾಲ್ ಪ್ರಜ್ಞಾಹೀನನಾಗಿ ಬಿದ್ದ ಸ್ಥಳದಲ್ಲಿ ತಲೆ ಇಲ್ಲದ ಹಾವು ಬಿದ್ದಿದ್ದನ್ನು ಕಂಡು ಸ್ಥಳೀಯರೆಲ್ಲಾ ಆಶ್ಚರ್ಯಚಕಿತರಾಗಿದ್ರು.

    ಸೋನೆಲಾಲ್ ಹಾವು ಕಚ್ಚಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ಹೇಳಿ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಸೋನೆಲಾಲ್ ಹಾವಿನ ವಿಷದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನ ದೇಹದಲ್ಲಿ ಹಾವು ಕಚ್ಚಿದ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂದು ಡಾ.ಮಹೇಂದ್ರ ವರ್ಮಾ ಸ್ಪಷ್ಟಪಡಿಸಿದ್ದಾರೆ.

    ಸೋನೆಲಾಲ್ ನಡವಳಿಕೆ ವಿಚಿತ್ರವಾಗಿದ್ದು, ಹಾವಿನ ತಲೆಯನ್ನು ಕಚ್ಚಿ ಜಗಿಯುವುದು ಎಂದ್ರೆ ಸಾಮನ್ಯ ವಿಷಯವಲ್ಲ. ಸೋನೆಲಾಲ್ ಮಾದಕ ವ್ಯಸನಿಯಂತೆ ಕಾಣುತ್ತಾನೆ. ಡ್ರಗ್ಸ್ ಪ್ರಬಾವದಿಂದಲೇ ಹಾವನ್ನ ಕಚ್ಚಿರಬಹುದು ಎಂದು ಸ್ಟೇಟ್ ಮೆಂಟಲ್ ಹೆಲ್ತ್ ಸೊಸೈಟಿಯ ಕಾರ್ಯದರ್ಶಿ ಡಾ. ಎಸ್.ಸಿ.ತಿವಾರಿ ತಿಳಿಸಿದ್ದಾರೆ.

  • ಆಹಾರ ಸಿಗದೆ ಮಂಡಲದ ಹಾವನ್ನ ಬೇಟೆಯಾಡಿದ ನಾಗರಹಾವು!

    ಆಹಾರ ಸಿಗದೆ ಮಂಡಲದ ಹಾವನ್ನ ಬೇಟೆಯಾಡಿದ ನಾಗರಹಾವು!

    ಬೆಂಗಳೂರು: ಆಹಾರ ಸಿಗದ ಹಾವೊಂದು ಮತ್ತೊಂದು ಹಾವನ್ನ ಬೇಟೆಯಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೋಟದ ಮನೆಯೊಂದರ ಬಳಿ ನಡೆದಿದೆ.

    ನಾಗರ ಹಾವು ಮಂಡಲದ ಹಾವನ್ನು ನುಂಗುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಜನರು ಎಂತಹ ಕಾಲ ಬಂತಪ್ಪ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಹೊಟ್ಟೆ ಹಸಿವಿನಿಂದಾಗಿ ನಾಗರಹಾವೊಂದು ನಾಯಿ ಮರಿಯನ್ನು ನುಂಗಲು ಯತ್ನಿಸಿದ ಘಟನೆ ಧಾರವಾಡದ ವೀರಭದ್ರೇಶ್ವರ ನಗರದಲ್ಲಿ ನಡೆದಿತ್ತು. ನಗರದ ಶೇಖರ ಬಿಜಲಿ ಎಂಬವರ ಮನೆ ಬಳಿ ನಾಗರಹಾವು ನಾಯಿ ಮರಿಯನ್ನ ನುಂಗಲು ಯತ್ನ ನಡೆಸಿತ್ತು. ಮರದ ಸೌದೆ ಕೆಳಗೆ ನಾಯಿ ಮರಿಗಳ ಗುಂಪು ವಾಸವಿತ್ತು. ಅಲ್ಲೇ ಪಕ್ಕದಲ್ಲಿದ್ದ ನಾಗರಹಾವೊಂದು ಅವುಗಳ ಬಳಿ ಹೋಗಿ ಹಸಿವಿನಿಂದ ನಾಯಿ ಮರಿಯನ್ನು ತಿನ್ನಲು ಯತ್ನಿಸಿದ್ದು, ಒಂದು ನಾಯಿಮರಿಯನ್ನು ಹಿಡಿದುಕೊಂಡಿತ್ತು. ಇದನ್ನ ನೋಡಿದ ಶೇಖರ್ ತಕ್ಷಣ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

    ಮಾಹಿತಿ ತಿಳಿದು ಎಲ್ಲಪ್ಪ ಬರುವಷ್ಟರಲ್ಲಿ ನಾಗರಹಾವು ನಾಯಿಮರಿಯನ್ನ ಅರ್ಧದಷ್ಟು ನುಂಗಿತ್ತು. ಸ್ಥಳಕ್ಕೆ ಬಂದ ಎಲ್ಲಪ್ಪ ನಾಯಿ ಮರಿ ನುಂಗಿದ್ದ ನಾಗರ ಹಾವನ್ನ ಹಿಡಿದು, ಆ ನಾರಿಮರಿಯನ್ನ ನಾಗರ ಹಾವಿನ ಬಾಯಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಾಯಿ ಮರಿ ಅಷ್ಟೊತ್ತಿಗೆ ಸಾವನ್ನಪ್ಪಿತ್ತು.